tag:blogger.com,1999:blog-51196653253384142762024-03-20T06:24:14.638-07:00ಆಲೋಚನೆಗಳ ತುಂತುರು....ಜಿಟ.. ಜಿಟ..prasadhhttp://www.blogger.com/profile/08103222594500014783noreply@blogger.comBlogger28125tag:blogger.com,1999:blog-5119665325338414276.post-19322575100765924062013-11-19T04:45:00.003-08:002013-11-25T06:46:50.849-08:00ಕನ್ನಡದ ಕಾಫೀ ಮಗ್<div dir="ltr" style="text-align: left;" trbidi="on">
<div class="separator" style="clear: both; text-align: left;">
ಈ ವರ್ಷ ನಾವು ನಮ್ಮ ಕಂಪನಿಯಲ್ಲಿ ಕನ್ನಡ ರಾಜ್ಯೊತ್ಸವ ಆಚರಿಸುತ್ತಿದ್ದೇವೆ, ಹೇಗೆ ಅಂತೀರಾ? ಕನ್ನಡ, ಕರ್ನಾಟಕ, ಕನ್ನಡಿಗರ ಸಂದೇಶ ಹೊತ್ತಿರುವ ಕಾಫೀ ಮಗ್ ಮಾಡಿಸುವುದರ ಮೂಲಕ ನಾವು ನಮ್ಮ ಸಂಸ್ಥೆಯಲ್ಲಿ ಈ ವರ್ಷ ಕನ್ನಡ ರಾಜ್ಯೊತ್ಸವ ಆಚರಿಸುತ್ತಿದ್ದೇವೆ. ಈ ಮಗ್ ಅನ್ನು ನೀವು ನಿಮ್ಮ ಡೆಸ್ಕ್ ಮೇಲಿಡಬಹುದು, ಕಾಫಿ/ಚಹಾ/ಹಾಲು/ನೀರು ಮುಂತಾದ ಪಾನೀಯ ಸೇವಿಸುವಾಗ ಎಲ್ಲಿಯಾದರು ಕೊಂಡೊಯ್ಯಬಹುದು. ಕನ್ನಡ ರಾಜ್ಯದ, ಕನ್ನಡ ಭಾಷೆಯ ಪ್ರೀತಿ ಮೆರೆಯಬಹುದು.</div>
<div class="separator" style="clear: both; text-align: left;">
<br /></div>
<div class="separator" style="clear: both; text-align: left;">
ನಿಮಗೂ ಸಹ ಈ ರೀತಿಯ ಮಗ್ ಬೇಕಿದ್ದರೆ linkedin ಮೂಲಕ ನನ್ನನ್ನು ಸಂಪರ್ಕಿಸಿರಿ. linkedin ಪರಿಚಯವಿಲ್ಲವೆಂದರೆ ಅದು ಏನು, ಹೇಗೆ ಎಂದು ತಿಳಿಯಲು ನನ್ನ ಮತ್ತೊಂದು ಬ್ಲಾಗ್ <a href="http://ellatantragnaana.blogspot.com/">ellatantragnaana.blogspot.com</a> ಭೇಟಿ ನೀಡಿ ಅದರಲ್ಲಿ ನವಂಬರ್ ೨೦೧೩ ಅಲ್ಲಿ ಪೋಸ್ಟ್ ಮಾಡಿದ <a href="http://ellatantragnaana.blogspot.sg/2013/11/blog-post_19.html">http://ellatantragnaana.blogspot.sg/2013/11/blog-post_19.html</a> ಬ್ಲಾಗ್ ಆರ್ಟಿಕಲ್ ಓದಿ. </div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
ಮಗ್ನ ಡಿಸೈನ್ ಫೊಟೊ </div>
<div class="separator" style="clear: both; text-align: center;">
<br /></div>
<div class="separator" style="clear: both; text-align: center;">
</div>
<br />
<div class="separator" style="clear: both; text-align: center;">
</div>
<div class="separator" style="clear: both; text-align: left;">
</div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjbq7GU4x1aoUnKcEKNohRPVW5uUGiF8_Els6CUMCPCKhFpLSKukvxKxK6VMgfnX0Er1Pjtdsk9cxk3GUfxowTqBkK7p5YmT8VXTX9w6qOI75xjWW_6thE7H90pnA5jWPNfO50_NnQew9U/s1600/mug_design.jpg" imageanchor="1" style="margin-left: 1em; margin-right: 1em;"><img border="0" height="107" src="https://blogger.googleusercontent.com/img/b/R29vZ2xl/AVvXsEjbq7GU4x1aoUnKcEKNohRPVW5uUGiF8_Els6CUMCPCKhFpLSKukvxKxK6VMgfnX0Er1Pjtdsk9cxk3GUfxowTqBkK7p5YmT8VXTX9w6qOI75xjWW_6thE7H90pnA5jWPNfO50_NnQew9U/s320/mug_design.jpg" width="320" /></a></div>
<br />
<br />
<div>
<br /></div>
<div>
-ಪ್ರಸಾದ್</div>
</div>
prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-52921732026999367072011-08-11T03:46:00.000-07:002011-08-11T03:46:21.680-07:00ದೇಶದ್ರೋಹಿ ನಾಡದ್ರೋಹಿ - ಒಂದು ಹೋಲಿಕೆಭಾರತದಲ್ಲಿ ಹುಟ್ಟಿ ಬೆಳೆದು ಪರದೇಶಕ್ಕೆ ಅಭಿಮಾನವನ್ನು ತೋರಿಸುವ ವ್ಯಕ್ತಿ ಹೇಗೆ ದೇಶದ್ರೋಹಿ ಎನಿಸಿಕೊಳ್ಳುತ್ತಾನೊ<br />
<br />
ಹಾಗೆಯೆ<br />
<br />
ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದು ಮಾತೃ ಭಾಷೆ ಯಾವುದಿದ್ದರೂ ನಾಡಿನ ಭಾಷೆಯಾದ ಕನ್ನಡದ ಬಗ್ಗೆ ಅಭಿಮಾನವಿಲ್ಲದಿದ್ದರೆ ಆ ವ್ಯಕ್ತಿ ನಾಡದ್ರೋಹಿ ಆಗುವನು. ಹೌದಾ.. ಇಲ್ವಾ??? ಯೋಚಿಸಿ....<br />
<br />
ಗ್ರಾಹಕ ಸೇವೆಯವರ ಜೊತೆ ಕನ್ನಡದಲ್ಲಿ ಮಾತನಾಡದವನು ನಾಡದ್ರೋಹಿ.<br />
<br />
ಕನ್ನಡದ ಒಳ್ಳೆಯ ಹಾಡುಗಳನ್ನು ಕೇಳದವನು ನಾಡದ್ರೋಹಿ(ಹಾಡು ಕೇಳಲು ಇಷ್ಟಪಡದವರನ್ನು ಹೊರತುಪಡಿಸಿ)<br />
<br />
ಕನ್ನಡದ ಒಳ್ಳೆಯ ಚಿತ್ರಗಳನ್ನು ನೋಡದವನು ನಾಡದ್ರೋಹಿ(ಚಿತ್ರ ನೋಡಲು ಇಷ್ಟಪಡದವರನ್ನು ಹೊರತುಪಡಿಸಿ)<br />
<br />
ಕನ್ನಡಿಗರ ಜೊತೆ ಕನ್ನಡದಲಿ ಮಾತನಾಡದವನು ನಾಡದ್ರೋಹಿ.(ಮಾತು ಆಡಲು ಇಷ್ಟಪಡದವರನ್ನು ಹೊರತುಪಡಿಸಿ)<br />
<br />
ಕನ್ನಡದ ಸಾಹಿತ್ಯವನ್ನು ಓದದವನು ನಾಡದ್ರೋಹಿ.(ಯಾವುದೆ ಭಾಷೆಯ ಸಾಹಿತ್ಯ ಇಷ್ಟಪಡದವರನ್ನು ಹೊರತುಪಡಿಸಿ)<br />
<br />
ತನ್ನ ಸುತ್ತ ಕನ್ನಡದ ವಾತಾವರಣ ಸೃಷ್ಟಿಸದವನು ನಾಡದ್ರೋಹಿ. (ಯಾವುದೆ ಭಾಷೆಯ ವಾತಾವರಣ ಇಷ್ಟಪಡದವರನ್ನು ಹೊರತುಪಡಿಸಿ)<br />
<br />
ಎಲ್ಲಕಿಂತಲೂ ಮಿಗಿಲಾಗಿ ಕನ್ನಡಕ್ಕೆ ಆದ್ಯತೆ ಕೊಡದವನು ನಾಡದ್ರೋಹಿ.prasadhhttp://www.blogger.com/profile/08103222594500014783noreply@blogger.com1tag:blogger.com,1999:blog-5119665325338414276.post-43460852802393625592010-06-29T23:22:00.001-07:002010-06-29T23:22:55.519-07:00ಮನೊವೈದ್ಯರ ಮನೊವೇದನೆ!!!!on May 21, 2010 <br />
<br />
ಕಾರಣ - ದಾರಿ ತಪ್ಪಿದ ಹಿರಿಯರು/ಮಾರ್ಗದರಶಕರು/ತಂದೆ ತಾಯಿಂದರು..<br />
<br />
ಹೇಗೆ - ಸವಿವರವಾಗಿ ಮನೋವೈದ್ಯರ ಮಾತಿನಲ್ಲೆ ತಿಳಿಯಲು ಕೆಳಗಿರುವ ಕೊಂಡಿಯನ್ನು ಹೊಸ ವಿಂಡೋ ಅಲ್ಲಿ ತೆರೆದು ಓದಿ....,<br />
<br />
http://tinyurl.com/29vnfj5prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-27044701962051192772010-06-29T23:19:00.000-07:002010-06-29T23:19:07.206-07:00ಅತ್ತ.. ಇತ್ತ...on April 16, 2010 <br />
<br />
ಅತ್ತ ಅಂದ್ರೆ ಏನ್ಗುರು ಬ್ಲಾಗ್ ಅಲ್ಲಿ ಅಂದ್ರೆ <a href="http://enguru.blogspot.com/2007/08/blog-post_22.html%20">ಇಲ್ಲಿ</a> ನೆಸ್ಲೆ ಸಂಸ್ಥೆಯವರು ಕನ್ನಡಿಗರ ಮೇಲೆ "ದಹಿ" ಸುರಿತಿದಾರೆ ಅಂತ ಸುದ್ದಿ ಪ್ರಕಟ ಆಗಿ.. ವಿಚಾರದ ಪರ ವಾದಿಗಳು ವಿರೋಧಿಗಳ ಚರ್ಚೆ, ಉರಿಯುತ್ತಿರುವ ಯಜ್ಞಕುಂಡಕ್ಕೆ ತುಪ್ಪ ಸುರಿದ ಹಾಗೆ ಮಾತುಗಳು ಬರ್ತಿದೆ.. ಬೇರೆ ಯಾರ ಮಧ್ಯೆನು ಅಲ್ಲ ಕನ್ನಡಿಗರ ಮಧ್ಯೇನೆ :) ಎಂತಹ ವಿಪರ್ಯಾಸ. ಕನ್ನಡಕ್ಕೆ ಕುತ್ತು ಬರೋದು,ಇರೋದು ಕನ್ನಡಿಗರಿಂದಲೆ ಪರಭಾಷಿಕರು ಬೇಕಾಗೆ ಇಲ್ಲ..<br />
ಇತ್ತ ಸಂಪದ ಅಲ್ಲಿ, ಕನ್ನಡ ಸಾಹಿತ್ಯ ಅಭಿರುಚಿ ಇರುವರವರ ಕನ್ನಡ ವಿಚಾರವಂತರ ತಾಣದಲ್ಲಿ ಮೊಸರಿನ ರುಚಿ ಕಂಡು ಬರುತ್ತಿಲ್ಲ.. ಅವ್ರ್ ಕಾಲೆಳಿ ಇವ್ರ್ ಕಾಲೆಳಿ ಅಂತ ವಿನೋದವಾಗಿ ಮಾತು ಕತೆ ಸಾಗ್ತಿದೆ!! ಇರ್ಲಿ ಸಂತೋಷ ಹಾಗೆಯೆ ಮೊಸರು "ಒಡೆದು" ದಹಿಯಾಗುತ್ತಿರುವ ಸಂಸ್ಕೃತಿಯ ಬಗ್ಗೆಯು ಚರ್ಚೆಯಾದರೆ ಉತ್ತಮ ಅಲ್ಲವೆ?? ಮಾವೋವಾದಿಗಳು ಇನ್ನು ೧೦೦ ಜನ ಪೋಲೀಸರನ್ನು ಸಾಯಿಸಿದರೂ ಸಹ ಸದ್ಯದ ಪರಿಸ್ಥಿತಿಯಲ್ಲಿ ಚರ್ಚೆ ಒಂದು ಬಿಟ್ಟರೆ ಬೇರೇನು ಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ಈಗ ನೆಸ್ಲೆಯ ಆಕ್ರಮಣ ಕೋಟಿ ಕನ್ನಡಿಗರ ಮೇಲೆ ಆಗ್ತಿದೆ.. localization ಬಗ್ಗೆ ಎಚ್ಚರ ವಹಿಸುವ ಬಹುರಾಷ್ಟ್ರೀಯಕಂಪನಿಗಳು ಬೆಂಗಳೂರಿನಲ್ಲಿ ಎಡವಿ ಬೀಳುವಂತೆ ಸಾಗುತ್ತಿರುವುದಕ್ಕೆ ಕಾರಣವೇನು? ಈ ರೀತಿಯ ಬೆಳವಣಿಗೆ ವಿರುದ್ದ ಆ ಕಂಪನಿಯ ವಸ್ತುಗಳನ್ನು ಉಪಯೋಗಿಸುವ ಕನ್ನಡಿಗರು ನಾವು ಹೇಗೆ ಅವರಿಗೆ ತಿಳಿ ಹೇಳುವುದು? ಸರ್ಕಾರ ಅಂತು ತಣ್ಣಗೆ ಮಲಗಿದೆ ಕನ್ನಡಿಗರಿಗೆ ಜೋಗುಳ ಹಾಡುತ್ತ!! ಕನ್ನಡಿಗರು ಎಚ್ಚರ ಆದ್ರೆ ಹಿಂದಿ ಹೇರಿಕೆಗೆ ಕುತ್ತು!!<br />
ಪಕ್ಕದ ನಾಡಿನಲ್ಲೆ World Tamil Conference ದಿನಗಳು ಹತ್ತಿರ ಬರುತ್ತಿರುವುದರ ಮುನ್ಸೂಚನೆಯಾಗಿ ಆಗತ್ಯ ಕ್ರಮಗಳನ್ನ ತೊಗೊತಿದಾರೆ ಅದು ಅತ್ಯಂತ ವೇಗದಲ್ಲಿ!! ಇವೆಲ್ಲ ಕಾರ್ಯರೂಪಕ್ಕೆ ತರ್ತಾರೆ.. ಹೇಗ್ ಗೊತ್ತಾ?? ಮೂಲ ಆಂಗ್ಲ ಪದಗಳಿಗೆ ತಮಿಳಿನ ಪರ್ಯಾಯ ಪದ "ಕಂಡು ಹಿಡಿದು" ಅದನ್ನು ಕಡ್ಡಾಯವಾಗಿ ಫಲಕಗಳಲ್ಲಿ/ಜಾಹಿರಾತಿನಲ್ಲಿ ಹಾಕಬೇಕು <a href="http://sampada.net/blog/rennie606/16/04/2010/%20http://www.deccanchronicle.com/chennai/tamil-soup-chennai-soul-576">ಇಲ್ಲಿ ಓದಿ</a> !!! ಚಂಡಿ ಹಿಡಿದ ಮಗೂಗೆ ಊಟ ಮಾಡಿಸಿದ ಹಾಗೆ ಕನ್ನಡದವರಿಗೆ ತಮಿಳಿನವರನ್ನೆ ತೋರಿಸಿ ಅವ್ರನ್ ನೋಡಿ ಕಲೀರಿ ಅಂತಾನೆ ಆಗ್ಬೇಕಾ ಯಾವಾಗ್ಲು? ನಮ್ಮಲ್ಲಿ ಈ ರೀತಿ ಆಗ್ಬಿಟ್ರೆ ಎದ್ದು ನಿಂತ್ಬಿಡ್ತಾರೆ ಕೆಲವರು ಬೇಳೆ ಬೇಯಿಸಿಕೊಳ್ಳುವುದಕ್ಕೆ.. ಅಯ್ಯೊ ಕನ್ನಡ ಬರದೆ ಇರುವವರಿಗೆ ಅನ್ಯಾಯ ಅಲ್ವ ಅಂತ..ಹೀಗೆ ತಮ್ಮ ಸ್ವಾರ್ಥಕ್ಕೆ ಮಣೆ ಹಾಕ್ತಿರ್ತಾರೆ. ಅವರಲ್ಲಿ(ವರದಿ ಓದಿ) ಹೇಳಿಕೊಂಡಿದ್ದಾರೆ ಇಂಥ ನಿರ್ಧಾರ ಕೈಗೊಂಡಾಗ ಒಬ್ಬರು ಕೂಡ ಇದರ ವಿರುದ್ಧ ಸೊಲ್ಲೆತ್ತದೆ ಒಪ್ಪಿದ್ದಾರೆ.<br />
ನಮ್ಮವರಿಗೆ, ದಹಿ ಹೇರ್ತಿರೊದನ್ನ ವಿರೋಧಿಸಿ ಸಂಸ್ಥೆಯವರಿಗೆ ತಿಳಿಸಿ ಮಿಂಚೆ ಬರೆದು ದಬ್ಬಾಳಿಕೆ ತಡೆಯೋಣ ಅಂದ್ರೆ ಕೆಲವರು ಅಯ್ಯೂ ಅದ್ರಲ್ಲೇನಿದೆ ಬಿಡಿ.. ದಹಿ ಅಂದ್ರು ಅದೆ ಮೊಸರು ಅಂದ್ರು ಒಂದೆ.. ನಾವೇನು ಉಪಯೊಗಿಸೋದು ನಿಲ್ಲಿಸುವುದಿಲ್ಲವಲ್ಲ ಅಂತ!!! ಏನ್ ವಿಚಾರ ಅಂತೀನಿ.. ಹ್ಮ್ಮ್ ಇವರು ಸಹ ನಮ್ಮ್ ಕನ್ನಡ ಬಾಂಧವರು. ಮತ್ತೊಬ್ರು ಅಂತಾರೆ ಇಷ್ಟೆಲ್ಲ ಮಾತಾಡ್ತಿರೋರು ನೀವೇನು ಮಾಡ್ತಿದೀರಾ ಅಂತ!! ಅವನು ಅವನನ್ನು ಪ್ರಶ್ನಿಸಿಕೊಳ್ಳಲಿಲ್ಲ ನಾನು ಏನು ಮಾಡಬಹುದು ಅಂತ ಪ್ರಶ್ನಿಸೊ ಹಾಗಿದ್ರೆ ಅಥವಾ ಸಲಹೆ ನೀಡೊ ಹಾಗಿದ್ರೆ <a href="http://www.nestle.in/contact_us.aspx">ಕೊಂಡಿ ಇಲ್ಲಿದೆ</a> .. ಜೊತೆಗೆ ಸ್ವಿಟ್ಝರ್ ಲ್ಯಾಂಡ್ ಅಲ್ಲಿರೊ ಮುಖ್ಯ ಸಂಸ್ಥೆಗು ಸಹ ಕರ್ನಾಟಕದ ಬೆಂಗಳೂರಿನ ಸಂಸ್ಥೆಯವರು ಈ ರೀತಿ ಮಾರುಕಟ್ಟೆ ಮಾಡ್ತಿದಾರೆ.. ಈ ರೀತಿ ಮಾಡುವುದು ಲಾಭಕ್ಕೆ ಕುತ್ತು!! ಗ್ರಾಹಕರನ್ನು ತಲುಪಲಾಗುವುದಿಲ್ಲ ಅಂತ ತಿಳಿಹೇಳಿದರೆ ಹಿಂದಿ ಹೇರುತ್ತಿರುವವರಿಗೆ ಝಾಡಿಸುತ್ತಾರೆ..ಅವ್ರಿಗೆ ಸಹ ಬರೆದಿದ್ದು ಕಾಪಿ ಪೇಸ್ಟ್ ಮಾಡೊಕ್ಕೆ ಮತ್ತೆ ಬರೆಯುವ ಕೆಲಸ ಇಲ್ಲ, <a href="http://www.nestle.com/Common/Header/ContactUs.htm">ಇಲ್ಲಿ ತಿಳಿಸಿರಿ</a> <br />
ಮತ್ತೊಂದು ಸಮಾಚಾರ ಅವ್ರ್ಯಾಕೆ ಹಂಗೆ ದಹಿ ಸುರಿತಿದಾರೆ ಅಂದ್ರೆ ಅವರ ಪ್ರಕಾರ ಮೊಸರು ಅಸ್ತಿತ್ವದಲ್ಲಿ ಇಲ್ಲ!!! ಎಲ್ನೋಡಿದ್ರು ದಹಿ ವಡಾ, ದಹಿ ಪುರಿ, ಕರ್ಡ್ ರೈಸ್!! ಅದಕ್ಕೆ ಈ ಬೆಳವಣಿಗೆ, ಮೊಸರು ಎಂಬ ಪರಿಚಯದ ನೆರಳು ಸಹ ಅವರ ಮೇಲೆ ಬೀಳ ಹಾಗೆ ಕನ್ನಡಿಗರು ಎಚ್ಚರ ವಹಿಸಿದ್ದಾರೆ. ಸಂಸ್ಥೆಯವರಿಗೆ ತಿಳಿ ಹೇಳಬೇಕಾಗಿದೆ ದಹಿಗೆ ಪರ್ಯಾಯವಾಗಿ ಕನ್ನಡದ್ದೆ ಆದ ಮೊಸರು ಇದೆ, ನಮ್ಗೆ ದಹಿ ಆಗ್ಬರಲ್ಲ ಮೊಸರು ಕೊಡಿ ಅನ್ಬೇಕು. <br />
ಏನಂತೀರಾ ದಹಿನಾ ಮೊಸ್ರಾ?<br />
<br />
ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-39180838125482963342010-06-29T23:13:00.000-07:002010-06-29T23:13:15.869-07:00ತೀರ್ಮಾನವಾಗದಿರುವ ಸರಿ ತಪ್ಪಿನ ಸರಣಿon March 12, 2010 <br />
<br />
ಸಂಪದದಲ್ಲಿ "ಇಲ್ಲಿ ಯಾರು ಸರಿ"(http://sampada.net/blog/manjunath-s-reddy/09/03/2010/24339) ಎನ್ನುವ ಬರಹ ಉದ್ದೇಶಿಸಿ ಚರ್ಚೆಯ ಹೆಸರಿನಲ್ಲಿ ಮಾತಿನ ಕಚ್ಚಾಟ ಹಿಂಬಾಲಿಸುತ್ತಿರುವಾಗಲೆ ಆ ಕಡೆ ನಂಗೊಂದು ಮಿಂಚೆ ಬಂತು. ಅದನ್ನ ಹಾಗೆಯೆ ನಕಲಿಸಿ ಅಂಟಿಸುತ್ತಿದ್ದೇನೆ, ಚರ್ಚೆ(!!!) ಮಾಡುವವರಿಗೆ ಸಹಾಯ ಆಗಬಹುದು :) <br />
<br />
ಏನೆ ಹೇಳಿಪ್ಪ, ಆ ಬರಹದ ಹಿಂಬಾಲಿಸಿದಾಗ ತಿಳಿದಿದ್ದು, ದೇವ್ರು ದಿಂಡ್ರನ್ನ ಚಿತ್ರಿಸಕ್ಕೆ ಅಭಿವ್ಯಕ್ತ ಸ್ವಾತಂತ್ರ್ಯ್ ಇದೆ ಆದ್ರೆ ನಮ್ಗೆ ಸಂಬಂಧಪಟ್ಟವರನಲ್ಲ/ಇಷ್ಟಪಟ್ಟವರನಲ್ಲ.<br />
<br />
ಖಜುರಾಹೊ ಅಲ್ಲಿ ನಗ್ನವಾಗಿರುವ ಶಿಲ್ಪಗಳು ಅಭಿಸಾರಿಕೆಯರದ್ದು ದೇವರದ್ದಲ್ಲ ಅಂದ್ರೆ ಈ ಮಾತನ್ನು ಜಾಣ ನಿರ್ಲಕ್ಶ್ಯ ಮಾಡಿ , ದೇವ್ರಿಗೆ ಬಟ್ಟೆ ಹೊಲೆದ ಟೈಲರ್ ಮಾಹಿತಿ ಕೊಡಿ ಅಂತ ವಿತಂಡವಾದ ಮಾಡೊರು. <br />
<br />
ನಾಳೆ ದಿನ ನಾನು(ಬೇರಯವರನ್ನ ನಿಲ್ಲಿಸಿದ್ರೆ ನಂಗೆ ಹೊಡಿತಾರೆ ಅನ್ನೊ ಭಯಕ್ಕೆ:) ) ಸರ್ಕಲ್ ಅಲ್ಲಿ ನಗ್ನವಾಗಿ ನಿಂತ್ರೆ (ಇದಕ್ಕು ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಟ್ ಅಂತಾರೆ ಅಲ್ವಾ?) ಜನಕ್ಕೆ ಓಡಾಡಲು ಮುಜುಗರ ಮಾಡ್ತಿದೀನಿ ಅಂತ ಪೋಲಿಸರು ನನ್ನನ್ನು ಹಿಡ್ಕೊಂಡು ಬಡಿಯದೆ ಇರ್ತಾರಾ? ಹುಚ್ಚಾಸ್ಪತ್ರೆಯವರು ನನ್ನನ್ನು ಎಳೆದೊಯ್ಯುದೆ ಇರ್ತಾರಾ? ನನ್ನ ಆರ್ಟ್!! ಅರ್ಥ ಮಾಡ್ಕೊಬೇಕು ತಾನೆ.. ಸಹಿಸಿಕೊಬೇಕು ತಾನೆ.. ಇದಕ್ಕೆ ನೀವು ಒಪ್ಪ್ಪಿದರೆ ನಾನು ಎಲ್ಲೊ ನಿಂತ್ರೆ ಬೇಜಾರಗಲ್ಲ ಆದರೆ ನಿಮ್ ಮನೆ ಮುಂದೆ ಬಂದು ನಿಂತ್ರೆ ಕಲ್ಲು ತೊಗೊಂಡು ಹೊಡಿತೀರಾ ಯಾಕಂದ್ರೆ ಅದು ಸಂಪದ ಲೇಖನ ಅಲ್ವಲ್ಲ ಫ್ಲಾಗ್ ಮಾಡಕ್ಕೆ, ಇದುವೆ ನಿಜ ಜೀವನ!! <br />
<br />
ಅಲ್ಲಿ ಪಂಡಿತರು ಚರ್ಚೆ ಮಾಡಿದ್ದಕಿಂತ ಮೀರಿ ನನ್ನ ಬಳಿ ಏನು ಇಲ್ಲ.. ಒಪ್ಪ್ಪುವವರಿಗೆ ಅಲ್ಲಿ ಉತ್ತರ ಸಿಗುತ್ತದೆ ವಿತಂಡದವರಿಗೆ ಇಲ್ಲೊಬ್ಬ ಬಕರಾ ಸಿಗುತ್ತಾನೆ :)<br />
<br />
--- ಪ್ರಸಾದ್<br />
<br />
ಮಿಂಚೆ ಓದಿ<br />
<br />
This is a Letter to the Editor of The Hindu, from a practicing Christian lady who was Professor in Stella Maris<br />
College, Chennai till recently; now settled at Baroda, regarding an Edit in The Hindu in favour of bringing back MF Hussain to India.<br />
==============<br />
Dear Ram,<br />
I have taken time to write this to you Ram,- for the simple reason that we have known you for so many years- you and The Hindu bring back happy memories. Please take what I am putting down as those that come from an agonized soul. You know that I do not mince words and what I have to say I will-I call a spade a spade-now it is too late for me to learn the tricks of being called a ‘secularist’ if that means a bias for, one, and a bias against, another.<br />
<br />
Hussain is now a citizen of Qatar-this has generated enough of heat and less of light. Qatar you know better than me is not a country which respects democracy or freedom of expression. Hussain says he has complete freedom-I challenge him to paint a picture of Mohammed fully clad.<br />
<br />
There is no second opinion that artists have the Right of Freedom of expression. Is such a right restricted only to Hussain? Will that right not flow to Dan Brown-why was his film-Da Vinci Code not screened? Why was Satanic Verses banned-does Salman Rushdie not have that freedom of expression? Similarly why is Taslima hunted and hounded and why fatwas have been issued on both these writers? Why has Qatar not offered citizenship to Taslima? In the present rioting in Shimoga in Karnataka against the article Taslima wrote against the tradition of burqua which appeared in the Out Look in Jan 2007. Nobody protested then either in Delhi or in any other part of the country; now when it reappears in a Karnataka paper there is rioting. Is there a political agenda to create a problem in Karnataka by the intolerant goons? Why has the media not condemned this insensitivity and intolerance of the Muslims against Taslima’s views? When it comes to the Sangh Parivar it is quick to call them goons and intolerant etc. Now who are the goons and where is this tolerance and sensitivity?<br />
<br />
Regarding Hussain’s artistic freedom it seems to run unfettered in an expression of sexual perversion only when he envisages the Hindu Gods and Goddesses. There is no quarrel had he painted a nude woman sitting on the tail of a monkey. The point is he captioned it as Sita. Nobody would have protested against the sexual perversion and his orientatation to sexual signs and symbols. But would he dare to caption it as ‘Fatima enjoying in Jannat with animals’? Next example-is the painting of Saraswati copulating with a lion. Here again his perversion is evident and so is his intent. Even that lets concede cannot be faulted-each one’s sexual orientation is each one’s business. I suppose. But he captioned it as Saraswati. This is the problem. It is Hussain’s business to enjoy in painting his sexual perversion. But why use Saraswati and Sita for his perverted expressions? Use<br />
Fatima and watch the consequence. Let the media people come to his rescue then.<br />
<br />
Now that he is in a country that gives him complete freedom let him go ahead and paint Fatima copulating with a lion or any other animal of his choice. And then turn around and prove to India-the Freedom of expression he enjoys in Qatar.<br />
<br />
Talking about Freedom of Expression-this is the Hussain who supported Emergency-painted Indira Gandhi as Durga slaying Jayaprakash Narayan. He supported the jailing of artists and writers. Where did this Freedom of Expression go? And you call him secularist? Would you support the jailing of artists and writers Ram –would you support the abeyance of the Constitution and all that we held sacred in democracy and the excessiveness of Indira Gandhi to gag the media-writers- political opponents? Tell me honesty why does Hussain expect this Freedom when he himself did not support others with the same freedom he wants? And the media has rushed to his rescue. Had it been a Ram who painted such obnoxious, degrading painting-the reactions of the media and the elite ‘secularists’ would have been different; because there is a different perception/and index of secularism when it comes to Ram-and a different perception/and index of secularism when it comes to Rahim/Hussain.<br />
<br />
It brings back to my mind an episode that happened to The Hindu some years ago.[1991]. You had a separate weekly page for children with cartoons, quizzes, and with poems and articles of school children. In one such weekly page The Hindu printed a venerable bearded man-fully robed with head dress, mouthing some passages of the Koran-trying to teach children. It was done not only in good faith but as a part of inculcating values to children from the Koran. All hell broke loose. Your office witnessed goons who rushed in-demanded an apology-held out threats. In Ambur,Vaniambadi and Vellore the papers stands were burned-the copies of The Hindu were consigned to the fire. A threat to raise the issue in Parliament through a Private Members Bill was held out-Hectic activities went on-I am not sure of the nature and the machinations behind the scene. But The Hindu next day brought out a public apology in its front page. Where were you Ram? How secular and tolerant were the Muslims?<br />
<br />
Well this is of the past-today it is worse because the communal temperature in this country is at an all high-even a small friction can ignite and demolition the country’s peace and harmony. It is against this background that one should view Hussain who is bent on abusing and insulting the Hindu Gods and Goddesses. Respect for religious sentiments, need to maintain peace and harmony should also be part of the agenda of an artist-if he is great. If it is absent then he cannot say that he respects India and express his<br />
longing for India.<br />
<br />
Let’s face it - he is a fugitive of law. Age and religion are immaterial.What does the media want - that he be absolved by the courts?<br />
Even for that he has to appear in the courts-he cannot run away-After all this is the country where he lived and gave expression to his pervert sadist, erotic artistic mind under Freedom of Expression. I simply cannot jump into the bandwagon of the elite ‘secularist’ and uphold what he had done. With his brush he had committed jihad-bloodletting.The issue is just not nudity-Yes the temples-the frescos in Konarak and Kajhuraho have nude figures-But does it say that they are Sita, Sarswati or any goddesses? We have the Yoni and the Phallus as sacred signs of Life-of Siva and Shakthi-take these icons to the streets, paint them -give it a caption it becomes vulgar. Times have changed. Even granted that our ancients sculptured and painted naked forms and figures, with a pervert mind to demean religion is no license to repeat that in today’s changed political and social scenario and is not a sign of secularism and tolerance. I repeat there is no quarrel with nudity-painters have time and again found in it the perfection of God’s hand craft.<br />
Let me wish Hussain peace in Qatar-the totalitarian regime with zero tolerance May be he will convince the regime there to permit freedom of expression in word, writing and painting. For this he could start experimenting painting forms and figure of Mohamed the Prophet-and his family And may I fervently wish that the media-especially The Hindu does not discriminate goons-let it not substitute tolerance for intolerance when it comes to Rahim and Antony and another index for Ram.<br />
<br />
I hope you will read this in the same spirit that I have written. All the best to you Ram.<br />
<br />
Dr Mrs Hilda Raja,<br />
Vadodara<br />
__._,_.___prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-43824339247780410652010-06-29T23:07:00.000-07:002010-06-29T23:07:41.957-07:00ಪ್ಲಾಸ್ಟಿಕ್on June 3, 2009<br />
<br />
ಇನ್ನೇನು ಕೆಲವೆ ದಿನಗಳಲ್ಲಿ,ಮಕ್ಕಳಿಗೆ ಗಣಿತ ಕಲಿಯಲು ಸುಲಭವಾಗುವ ಉದ್ದೇಶವನ್ನಿಟ್ಟುಕೊಂಡು DVDಯೊಂದನ್ನು ಬಿಡುಗಡೆ ಮಾಡಲಾಗುತಿದೆ.ಈ DVDಯಲ್ಲಿರುವ ವಿಷಯ ಕೇವಲ ಗಣಿತಕ್ಕೆ ಸೀಮಿತವಾಗಿರದೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಕಾಳಜಿಯನ್ನು ಮೂಡಿಸುವ ಹಂಬಲವೂ ಇದೆ. http://www.freeganita.com/ ಎಂಬ ಅಂತರಜಾಲದ ತಾಣದ ಸಮಗ್ರ ವಿಷಯವನ್ನು ಈ DVDಆವೃತ್ತಿಯಲ್ಲಿ ಬಿಡುಗಡೆ ಮಾಡಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಚಿಣ್ಣರಿಗೆ ಗಣಿತ ಅಂದ್ರೆ ಕಬ್ಬಿಣದ ಕಡಲೆಯಲ್ಲ ಎಂದು ತಿಳಿಸುವ ಪ್ರಯತ್ನ ಇದಾಗಿರುತ್ತದೆ. ಇದೆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಎಂಬ ವಸ್ತುವಿನ ನೈಜ್ಯ ಚಿತ್ರಣವನ್ನು ಬಿಂಬಿಸಲು ಈ ಲೇಖನವನ್ನು ಬರೆದಿದ್ದೇನೆ.ಗ್ಲೋಬಲ್ ವಾರ್ಮಿಂಗ್ ಎನ್ನುವುದರ ಬಗ್ಗೆಯು ಸಹ ಬರೆಯಲು ಸಹ ಇಚ್ಚಿಸಿದ್ದೇನೆ. ಹಾಗಾಗಿ ಈ ಲೇಖನದಲ್ಲಿ ಕಂಡು ಬರುವ ದೋಷ ಲೋಪಗಳನ್ನು ತಿಳಿಸಿದಲ್ಲಿ ಅಗತ್ಯ ತಿದ್ದುಪಡಿಮಾಡಿ DVDಯಲ್ಲಿ ಪ್ರಕಟಿಸಲು ಸಹಾಯವಾಗುತ್ತದೆ. ಇದೆ ರೀತಿಯಾಗಿ ಮಕ್ಕಳಿಗೆ ತಿಳಿಸಬಹುದಾದಂತಹ ಹಾಗು ಅವರಿಗೆ ಸಹಾಯವಾಗಬಲ್ಲಂತಹ ಲೇಖನ,ವಿಚಾರಗಳು ನಿಮಗೆ ತಿಳಿದಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ ಅದನ್ನೂ ಸಹ DVDಯಲ್ಲಿ ಪ್ರಕಟಿಸಲು ವಿಚಾರಮಾಡಬಹುದು.ನಿಮ್ಮ ಹತ್ತಿರ ಈಗಾಗಲೆ ಸಿದ್ಧಪಡಿಸಿದ ಲೇಖನವಿದ್ದರೆ ದಯವಿಟ್ಟು ಅದನ್ನು ನನ್ನ ಮಿಂಚೆಗೆ ಕಳಿಸಿ prasad[dot]preeti[at]gmail[dot]com ಅಥವಾ ನಿಮ್ಮ ಮಿಂಚೆ ತಿಳಿಸಿದಲ್ಲಿ ಮುಂದಿನ ವಿಚಾರಗಳನ್ನು ಚರ್ಚಿಸಬಹುದು. ಕಾಪಿರೈಟೆಡ್ ಲೇಖನವಾಗಿದ್ದರೆ ಅದನ್ನು ಪ್ರಕಟಿಸಲು ತಕ್ಕ ಅನುಮತಿಯಿದ್ದರೂ ನಡೆಯುತ್ತದೆ.ಸ್ವಂತ ಲೇಖನಗಳು ಇದ್ದಲ್ಲಿ ತಲೆ ನೋವ್ವು ಇರೋದಿಲ್ಲ.ಪ್ರಭಂಧ,ಸಣ್ಣ ಕತೆಗಳು,ನೀತಿ ಕತೆಗಳು,ನಾಟಕ,ಪದ್ಯ ಮುಂತಾದ ಯಾವ ವಿಚಾರವಾಗಿದ್ದರು ಸಹ ಹಂಚಿಕೊಳ್ಳಿ. <br />
<br />
ಲೇಖನ ಪ್ಲಾಸ್ಟಿಕ್ ಬಗ್ಗೆ... <br />
<br />
ಪ್ಲಾಸ್ಟಿಕ್ ಎಂದಾಕ್ಷಣ ನಮಗೆ ತಕ್ಷಣ ತಲೆಗೆ ಹೊಳೆಯೋದು ಕೈಚೀಲಗಳು,ಖುರ್ಚಿ,ಮೇಜು.. ಇತ್ಯಾದಿ. ಆ ಲೆಕ್ಕಕ್ಕೆ ನಮ್ಮ ನಿತ್ಯ ಉಪಯೋಗಿ ವಸ್ತುಗಳಲ್ಲಿ ಹೆಚ್ಚಿನದಾಗಿ ಪ್ಲಾಸ್ಟಿಕ್ ಉಪಕರಣ, ಸಾಧನಗಳನ್ನು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ಉಪಯೋಗಿಸುತ್ತೇವೆ. ಇಷ್ಟೆಲ್ಲಾ ಬಹುಪಯೋಗಿ ವಸ್ತು ಆಗಿದ್ರು ಸಹ ಒಂದೆಡೆ ಪರಿಸರ ಪ್ರೇಮಿಗಳ ಕೂಗು ಇದ್ದೆ ಇದೆ.ಪ್ಲಾಸ್ಟಿಕ್ ನ ಬಳಕೆ ಹಾನಿಕಾರಕ ಅಂತ.ಹೀಗೆ ಪ್ಲಾಸ್ಟಿಕ್ ನ ಪರ ಹಾಗು ವಿರೋಧಿ ಅಂಶಗಳ ಚರ್ಚೆ ಮಾಡುವ ಮುನ್ನ ನಾವು ಪ್ಲಾಸ್ಟಿಕ್ ನ ಇತಿಹಾಸ ಸ್ವಲ್ಪ ತಿಳಿದುಕೊಂಡು ತದನಂತರ ಪೂರ್ವಾಪರಗಳ ಬಗ್ಗೆ ಆಲೋಚಿಸಿದರೆ ಒಳಿತು.<br />
<br />
ಪ್ಲಾಸ್ಟಿಕ್ ಬೆಳೆದು ಬಂದ ರೀತಿ<br />
೧೮೬೨ರಲ್ಲಿ ಲಂಡನ್ನಲ್ಲಿ ನಡೆದ ಒಂದು ಪ್ರದರ್ಶನದಲ್ಲಿ ಮೊದಲ ಬಾರಿಗೆ "ಇಂದಿನ ಪ್ಲಾಸ್ಟಿಕ್ ಅನ್ನು ಹೋಲುವಂತಹ" ವಸ್ತುವೊಂದನ್ನು ಅಲೆಕ್ಸಾಂಡರ್ ಪರ್ಕೆಸ್ ಎನ್ನುವವರು ಜಗತ್ತಿಗೆ ಪರಿಚಯಿಸಿದರು. ಆದ್ರೆ ಈ ಬಗೆಯ ಪ್ಲಾಸ್ಟಿಕ್ ತಯಾರಿಸಲು ಕಚ್ಚಾ ವಸ್ತುಗಳು ತುಂಬ ದುಬಾರಿಯಾಗಿದ್ದ ಕಾರಣ ಈ ಪದಾರ್ಥವನ್ನು ಕೈ ಬಿಡಲಾಯಿತು. ಈ ಘಟನೆ ನಡೆದು ಕೇವಲ ೭ ವರ್ಷಗಳ ನಂತರ ಅಂದ್ರೆ ೧೮೬೯ ರಲ್ಲಿ ಜಾನ್ ವೆಸ್ಲಿ ಹ್ಯಾತ್ತ್ ಎಂಬುವವರು ಪ್ಲಾಸ್ಟಿಕ್ ಅನ್ನು ಉತ್ಪಾದಿಸಲು ಮೊದಲ ಪ್ರಯೋಗ ಮಾಡಿದ್ರು. ಈ ಪ್ರಯೋಗಕ್ಕೆ ಬಳಸಿದ ವಸ್ತುಗಳು ತುಂಬ ತಿಳಿಯಾದ ನೈಟ್ರಿಕ್ ಹಾಗು ಸಲ್ಫ್ಯೂರಿಕ್ ಆಸಿಡ್ ಗಳ ಮಿಶ್ರಿತ ಪೇಪರ್, ಅದೇ celluloid . ಈ ಮಿಶ್ರಣ "flammable" ಪದಾರ್ಥಗಳಿದ್ದ ಕಾರಣ ಸಫಲವಾಗಲಿಲ್ಲ. ಆದರೆ ಸೆಲ್ಲ್ಯುಲಾಯ್ಡ್ಅನ್ನು film reels ಮಾಡಲು ಯೋಗ್ಯವಾಯಿತು. ತರುವಾಯ ೧೮೭೨ರಲ್ಲಿ ಯುಗೆನ್ ಬೌಮನ್ನ್ ಎನ್ನುವವರು PVCಯನ್ನು ಕಂಡು ಹಿಡಿದರು. ನಂತರ ೧೯೦೭ರಲ್ಲಿ, ಲಿಯೋ ಬೇಕಲ್ಯಾಂಡ್ ಅನ್ನುವವರು, ನಾವು ಇಂದು ಮಾರುಕಟ್ಟೆಯಲ್ಲಿ ಕಾಣುವ "ಪ್ಲಾಸ್ಟಿಕ್" ಕಂಡು ಹಿಡಿದರು. ಶಾಖ ಕೊಟ್ಟಾಗ ಮೆತ್ತಗೆ, ಹಾಗು ತಣ್ಣಗೆ ಮಾಡಿದಾಗ ಗಟ್ಟಿ ಆಗುವ ಈ ಪದಾರ್ಥ ಎಲ್ಲರ ಗಮನ ಸೆಳೆಯಿತು,ವ್ಯಾಪಾರ ದೃಷ್ಟಿಯಿಂದ ಎಲ್ಲರ ಕಣ್ಣು ಕುಕ್ಕಿತು.ಪ್ಲಾಸ್ಟಿಕ್ ನ ಮೊದಲು ಎಲ್ಲರು ಪೇಪರ್,ಕಬ್ಬಿಣ,ತಾಮ್ರ, ಗಾಜು ಇಂಥಾದವುಗಳ ಮೇಲೆ ಅವಲಂಬಿತರಿದ್ದರು.<br />
ಆದ್ರೆ ಪ್ಲಾಸ್ಟಿಕ್ ಅನ್ನೋದು ಮನುಷ್ಯನಿಂದ ಮನುಷ್ಯನಿಗಾಗಿ,ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗದೆ ತಯಾರಿಸಬಹುದಾದಂತಹ ಮೊದಲ ವಸ್ತುವಾಯಿತು.ಹಾಗಾಗಿ ಯಾವ ಯಾವ ವಸ್ತುಗಳನ್ನು ತಯಾರಿಸಲು ಆಗುತ್ತಿತ್ತೋ ಅವನ್ನೆಲ್ಲ ಪ್ಲಾಸ್ಟಿಕ್ ನಿಂದ ತಯಾರಿಸಲು ಶುರು ಮಾಡಿದರು.ತದನಂತರ ಈ ಪ್ಲಾಸ್ಟಿಕ್ ನಿಂದ ಹಲವಾರು ಕುಡಿಗಳು ಚಿಗುರೊಡೆದವು vinyl,acryllic,ethylene ಅಂತ ಹುಟ್ಟಿಕೊಂಡವು.ಇಂದಿಗೂ ಸಹ ಪ್ಲಾಸ್ಟಿಕ್ ನ ಗುಣಧರ್ಮಗಳನ್ನು ಬದಲಾಯಿಸಿ ಸಂಶೋಧನೆ ನಡಿಯುತ್ತಲೇ ಇದೆ ಹಾಗಾಗಿ ನಾವು ಇಂದು PVC ಪೈಪ್ಗಳನ್ನು ನೋಡಲು ಸಾಧ್ಯವಾದವು,ಹಗುರ,ಗಟ್ಟಿ ಹಾಗು ಧೀರ್ಘ ಬಾಳಿಕೆ ಬರುವಂಥಾದ್ದು.ಹೀಗೆ ವ್ಯಾವಹಾರಿಕವಾಗಿ ತುಂಬಾ ಲಾಭದಾಯಕವಾಗಿರುವುದನ್ನ ಮನೆ ಮನೆಗೂ ತಲುಪುವಂತೆ ಮಾಡಿದರು.<br />
<br />
ಇದಕ್ಕಾಗಿಯೇ ೧೯೩೭ರಲ್ಲಿ SPI (ಪ್ಲಾಸ್ಟಿಕ್ ಕೈಗಾರಿಕೆಗಳ ಸಮುದಾಯ) ಸಂಸ್ಥೆ ಕೂಡ ಸ್ಥಾಪಿಸಲಾಯಿತು. ನಾವು ಇಂದು ನೀರು ಕುಡಿಯಲು ಬಳಸುವ PET(PolyEthylene Terephthalate) ಬಾಟಲ್ ಗಳನ್ನು ೧೯೭೫ರಲ್ಲಿ ಕಂಡು ಹಿಡಿಯಲಾಯಿತು. ಪ್ರತಿ PET ಬಾಟಲ್ ನ ಗುಣಮಟ್ಟದ ಆಧಾರದ ಮೇರೆಗೆ ಒಂದು ದರ್ಜೆಯನ್ನು ಗುರುತಿಸಿ ಅದನ್ನು ಬಾಟಲ್ ನ ತಳ ಭಾಗದಲ್ಲಿ ಮುದ್ರಿಸಿರುತ್ತಾರೆ, ಈ ದರ್ಜೆ ೧-೭ ಆಗಿರುತ್ತದೆ.<br />
<br />
ಸಾಮಾನ್ಯವಾಗಿ ತಂಪಾದ ಪಾನೀಯಗಳನ್ನು ಇಂಥಹ ಬಾಟಲ್ ನಲ್ಲಿ ಶೇಖರಿಸುತ್ತಾರೆ. ಹಾಗಾಗಿ ಇಂಥಹ ಬಾಟಲ್ ಗಳಲ್ಲಿ ಕುಡಿಯುವ ನೀರು ಶೇಖರಿಸಿ ಪುನರ್ಬಳಕೆ ಮಾಡುವುದರಿಂದ ಕಾಲಾಂತರದಲ್ಲಿ ನಮಗೆ ಹಾನಿಕರ.<br />
<br />
ಪರ ವಿಚಾರಗಳು: <br />
ಪ್ಲಾಸ್ಟಿಕ್ ಕಂಡು ಹಿಡಿಯುವ ಮುನ್ನ ದಿನ ನಿತ್ಯ ವಸ್ತುಗಳ ತಯಾರಿಕೆಗೆ ಮುಖ್ಯವಾದ ಕಚ್ಚಾ ವಸ್ತುವಾಗಿದ್ದುದು ಕಬ್ಬಿಣ,ಗಾಜು ಹಾಗು ಮರ, ಇತರೆ ಕಚ್ಚಾ ವಸ್ತುವೇನಿದ್ದರು ಪಟ್ಟಿಯಲ್ಲಿ ಅಮೇಲಿನದಾಗಿರುತ್ತಿತ್ತು.ಒಮ್ಮೆ ಯೋಚಿಸಿ, ನಮ್ಮ ದಿನೋಪಯೋಗಿ ವಸ್ತುಗಳಾದ ಟೂತ್ ಬ್ರಷ್ ಮರದ್ದಾಗಿದ್ದರೆ ಹೇಗಿರುತ್ತಿತ್ತು, ನೀರು ಹಾಯಿಸಲು ಪಿ.ವಿ.ಸಿ ಪೈಪ್ ಬದಲು ಕಬ್ಬಿಣ ಪೈಪ್ ಬಳಸಿದರೆ ಖರ್ಚು ಎಷ್ಟು? ಭಾರವೆಷ್ಟು,ಎಷ್ಟು ಬೇಗ ತುಕ್ಕು ಹಿಡಿಯುತ್ತಿತ್ತು.. ಹೀಗೆಯೆ ನಮ್ಮ ಗಾಡಿಯ ಬಿಡಿ ಭಾಗಗಳು ಸಹ ಕಬ್ಬಿಣದ್ದಾಗಿದ್ದರೆ ಗಾಡಿಯ ಭಾರ ಹೆಚ್ಚಿ, ಪ್ರತಿ ಲೀಟರ್ಗೆ ಸರಾಸರಿ ೫೦ ಕಿ.ಮಿ ಮೈಲೇಜ್ ಕೊಡುವ ವಾಹನ ಏಕಾಏಕಿ ೩೫-೪೦ ಕಿ.ಮಿ ಕೊಡುವ ಹಾಗಾದರೆ ಹೇಗಿರುತ್ತಿತ್ತು?ಪರಿಸರ ಮಾಲೀನ್ಯ ಹಾಗು ಜೇಬಿಗೂ ಭಾರ ಅಲ್ಲವೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಅಥವಾ ಪರ್ಯಾಯ ಸಾಧನವಾಗಿ ಜನ-ಜೀವನದಲ್ಲಿ ತನ್ನ ಛಾಪು ಮೂಡಿಸಿದ ವಸ್ತು ಪ್ಲಾಸ್ಟಿಕ್.<br />
ಋಷಿ ಮುನಿಗಳು ಕಮಂಡಲ ಬಳಸುತ್ತಿದ್ದರು, ನಂತರ ಪುಣ್ಯ ಕ್ಷೇತ್ರಗಳಿಗೆ ಹೋಗುವಾಗ ಸಹಾಯವಾಗಲೆಂದು ಹಿಡಿಕೆ ಹಾಗು ಮುಚ್ಚಳವಿರುವ ತಾಮ್ರದ ಚಂಬುಗಳು ಹುಟ್ಟಿಕೊಂಡವು ಆದರೆ ಪ್ಲಾಸ್ಟಿಕ್ನ ಪರಿಚಯದ ನಂತರ ಎಲ್ಲೆಡೆಯು ಪ್ಲಾಸ್ಟಿಕ್ ಬಾಟಲ್ಮಯವಾಯಿತು ಇಲ್ಲವಾದಲ್ಲಿ ಮಕ್ಕಳು ಶಾಲೆಗೆ ಮಧ್ಯಾನ್ಹ ಊಟ ಮಾಡಲು ಚಂಬನ್ನು ಸಹ ತೆಗೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತಿತ್ತು. ಆದ್ದರಿಂದ ಪ್ಲಾಸ್ಟಿಕ್ ಎನ್ನುವುದು ಮನುಷ್ಯನ ಇತಿಹಾಸದಲ್ಲೆ ಅತ್ಯಂತ ಮಹತ್ತರವಾದ ಸಂಶೋಧನೆಯಾಯಿತು.<br />
ಬೆಳಗ್ಗೆ ಎದ್ದು ಹಲ್ಲುಜಲು ಬಳಸುವ ಟೂತ್ ಬ್ರಷ್ನಿಂದ ಹಿಡಿದು ಬಾಚಣಿಗೆ,ಬಾಗಿಲು,ಬಕೀಟು,ಚಂಬು,ಖುರ್ಚಿ,ಕೈ ಚೀಲ,ಪೊರಕೆಯ ಹಿಡಿಕೆಗಳು,ರೈನ್ ಕೋಟ್,ಚಪ್ಪಲಿ ಕೊನೆಗೆ ಮಲಗುವ ಮುನ್ನ ದೀಪ ಆರಿಸುವ ಸ್ವಿಚ್ ಸಹ ಪ್ಲಾಸ್ಟಿಕ್ ನದ್ದೆ ಆಗಿರುತ್ತದೆ. ಮನುಷ್ಯನ ಆಲೋಚನಾ ಶಕ್ತಿಗೆ ಯಾವುದೆಲ್ಲಾ ನಿಲುಕಿತೋ ಅವನ್ನೆಲ್ಲ ಪ್ಲಾಸ್ಟಿಕ್ ಗೆ ಮಾರ್ಪಡಿಸಲು ಯತ್ನಗಳು ನಡೆಯುತ್ತಿವೆ. ನೈಸರ್ಗಿಕವಲ್ಲದ ಇದನ್ನು ಮನುಷ್ಯರಿಗೆ ಅನ್ಯ ಮಾರ್ಗವಿಲ್ಲದೆ ಪ್ರತಿ ಕೆಲಸಗಳಲ್ಲೂ ಅವಶ್ಯಕವಿರುವ ಪದಾರ್ಥ ಎನ್ನುವಂತೆ ಮಾರುಕಟ್ಟೆ ಮಾಡಿದ ವಸ್ತುವಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳು ಜಗತ್ತಿನಲ್ಲೇ ಅತ್ಯಂತ ದೊಡ್ಡ ಕಾರ್ಖಾನೆಯಾಗಿ ಬೆಳೆದಿದೆ. ಉದ್ಯಮ ಬೆಳೆದಂತೆ ಜನರಿಗೆ ಕೆಲಸ ಸಿಗಲು ಆರಂಭವಾಯಿತು.ಹೊಸ ಅನ್ವೇಶಣೆಗಳಿಗೆ ಆಡಿಗಲ್ಲಾಯಿತು,ಕೆಲಸ ಸಿಕ್ಕ ನಂತರ ಜನರ ಜೀವನ ಶೈಲಿ ಉತ್ತಮಗೊಂಡು ದೇಶ ಪ್ರಗತಿಗೆ ಸಹಕಾರಿಯಾಯಿತು. ಜಗತ್ತಿನೆಲ್ಲೆಡೆ ದೇಶ ವಿದೇಶಗಳ ಮಧ್ಯೆ ವ್ಯವಹಾರವು ಕುದುರಿತು, ದೇಶದ ಆರ್ಥಿಕ ಸ್ಥಿತಿ ಉತ್ತಮವಾಗುವಂತೆ ಮಾಡಿತು. ಧೀರ್ಘ ಬಾಳಿಕೆಯ,ಹಗುರವಾದ,ತುಕ್ಕು ಹಿಡಿಯದ,ಹೆಚ್ಚು ಒತ್ತಡ ಸಹಿಸುವ ಎಲ್ಲಕಿಂತ ಮುಖ್ಯವಾಗಿ ಬೇಗನೆ ಹಾಳಾಗದಿರುವ ಅಗ್ಗದ ಬೆಲೆಗೆ ಸಿಗುವಂತಹ ಪ್ಲಾಸ್ಟಿಕ್ ಉಪಕರಣಗಳು ಜೇಬಿನ ಮೇಲೆ ಹಗುರವಾಗಿ,ಪ್ರಯೋಜನಕಾರಿ ವಸ್ತುವಾಗಿ ಲಭ್ಯವಾಯಿತು. ಕಣ್ಣಿಗೆ ಆಕರ್ಷಕವಾಗಿ ಕಾಣುವ ಬಣ್ಣಗಳಲ್ಲಿ ಪ್ಲಾಸ್ಟಿಕ್ ಉಪಕರಣಗಳು ಬಂದವು. ಅಲಂಕಾರಿಕ ವಸ್ತುವಾಗಿ ಬಳಸುವಂತಾಯಿತು. ಹೇಳಬೇಕೆಂದರೆ ಪ್ಲಾಸ್ಟಿಕ್ ಇಲ್ಲದೆಯೇ ಜಗತ್ತನು ಊಹಿಸಿಕೊಳ್ಳಲು ಸಾಧ್ಯವಿಲ್ಲದ ಮಟ್ಟಿಗೆ ಅದು ನಮ್ಮ ಜೀವನಕ್ಕೆ ಅತ್ಯಂತ ಉಪಯುಕ್ತವಾದಂತಹ ಸಂಶೋಧನೆಯಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ನ ಸ್ಥಾನವನ್ನು ಬೇರೆ ಯಾವುದೇ ವಸ್ತುವು ಆಕ್ರಮಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ನಮ್ಮ ಸಾಧನಗಳಲ್ಲಿ ಬೆಸೆದು ಕೊಂಡಿವೆ. ಹೊರನೋಟಕ್ಕೆ ಬೆಲೆಬಾಳುವ ವಸ್ತುಗಳಂತೆಯೇ ಕಾಣುವ ಪ್ಲಾಸ್ಟಿಕ್ ಉಪಕರಣಗಳು ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಸಿಕ್ಕು ಅವರ ಮನವನ್ನು ಸಂತೋಷಿಸುತ್ತದೆ. <br />
<br />
ವಿರೋಧ ವಿಚಾರಗಳು:<br />
ಪ್ಲಾಸ್ಟಿಕ್ ಒಂದು ಗೋಮುಖ ವ್ಯಾಘ್ರವಿದ್ದಂತೆ. ನಿತ್ಯ ಜೀವನ ಉಪಕರಣಗಳಿಗೆ ಅಗತ್ಯ ವಸ್ತುವೆಂದೆನಿಸಿದರು ಸಹ ಅದರ ತಯಾರಿಕ ಹೆಜ್ಜೆಯಿಂದ ಹಿಡಿದು ಇನ್ನು ಉಪಯೋಗವಿಲ್ಲವೆಂದು ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯ ತದನಂತರ ನೈಸರ್ಗಿಕವಾಗಿ ಕೊಳೆಯದೆ ೧೦ ಲಕ್ಷ ವರ್ಷಗಳ ನಂತರವೂ ಹಾಗೆ ಉಳಿಯುವ ಕರಾಳ ಗುಣಧರ್ಮವನ್ನು ಸಹ ಹೊಂದಿದೆ.ಕೇವಲ ಒಂದು ಕಿಲೊ ಕಚ್ಚಾ ಪ್ಲಾಸ್ಟಿಕ್ ತಯಾರಿಕೆಗೆ ಬೇಕಾಗುವ ಶಕ್ತಿ, ೧೦೦ watt ಬಲ್ಬ್ ಅನ್ನು ೫೬ ವರ್ಷ ಸತತವಾಗಿ ಉರಿಸಬಹುದು.ಇದಕ್ಕೆ ಹೋಲಿಸಿದರೆ ಯೋಚಿಸಿ,ಕೇವಲ ಒಂದು ಕಿಲೊಗೆ ಎಷ್ಟು ಶಕ್ತಿ ಖರ್ಚು ಆಗುತ್ತಿದೆ ಎಂದು.ಖುರ್ಚಿ,ಬಾಗಿಲು,ಟೇಬಲ್ ತಯಾರಿಸಲು ಎಷ್ಟೆಲ್ಲಾ ಕಿಲೊಗಟ್ಟಲೆ ಪ್ಲಾಸ್ಟಿಕ್ ಬೇಕಾಗುತ್ತದೆ!!!ಮೊದಲ ಪ್ರಶ್ನೆ ಎಷ್ಟು ಶಕ್ತಿ ಬೇಕಾಗಿರುವುದು ಅಂತ ಆದರೆ, ಈ ತಯಾರಿಕಾ ಘಟಕಗಳಲ್ಲಿ ಬಿಡುಗಡೆಯಾಗುವ ವಿಷಯುಕ್ತ ಅನಿಲಗಳು ನಾವು ಉಸಿರಾಡುವ ಗಾಳಿಯನ್ನು ಸಹ ಕಲುಷಿತಗೊಳಿಸುತ್ತದೆ. ಪ್ಲಾಸ್ಟಿಕ್ ಅನ್ನು ಸಂಸ್ಕರಿಸುವ ವಿಧಾನದಲ್ಲಿ ಅವಶ್ಯಕವಿರುವ ನೀರು ಕಲುಷಿತಗೊಂಡು ನೆಲ ಹಾಗು ಜಲ ಮೊಲಗಳನ್ನು ಸೇರಿ ಅದನ್ನು ಸಹ ಹಾಳು ಮಾಡುತ್ತದೆ.ನಾವು ನಮ್ಮ ಮನೆಯ ಆವರಣದಲ್ಲಿ ಬೋರ್ ಹಾಕಿಸಿ ಅಂತರ್ ಜಲದ ನೀರು ಮೇಲೆತ್ತಿದಾಗ ಇದೆ ಕಲುಷಿತ ನೀರು ನಮ್ಮ ಅರಿವಿಲ್ಲದಂತೆಯೇ ಅಡುಗೆ ಕೊಣೆಯನ್ನೂ ಸೇರುತ್ತದೆ. ಇಂತಹ ನೀರನ್ನು ಬಳಸಿದಾಗ ಕೆಲವೊಮ್ಮೆ ತಾತ್ಕಾಲಿಕ ರೋಗ ಉಂಟಾದರೂ ಧೀರ್ಘ ಕಾಲದ ರೋಗಗಳು ಬರುವುದರಲ್ಲಿ ಸಂಶಯವಿಲ್ಲ.ಸಿಗರೇಟು,ತಂಬಾಕು ಚಟವಿದ್ದರೆ ಹೇಗೆ ಮೊದಲು ಸುಸ್ಥಿತಿಯಲ್ಲಿರುವವರ ಆರೋಗ್ಯ ನಿಧಾನವಾಗಿ ಹದಗೆಟ್ಟು ಕ್ಯಾನ್ಸರ್ನಂತಹ ರೋಗಕ್ಕೆ ತುತ್ತಾಗಿ ಸಾಯುತ್ತಾರೊ ಹಾಗೆಯೆ ಪ್ಲಾಸ್ಟಿಕ್ನಲ್ಲಿ ಆಹಾರ ಪದಾರ್ಥಗಳನ್ನು ಶೇಖರಿಸಿ ಉಪಯೋಗಿಸಿದರೆ ಧೀರ್ಘ ಕಾಲದ ರೋಗಗಳಿಗೆ ತುತ್ತಾಗಬೇಕಾಗುತ್ತದೆ.ನಾವು ಊಟದ ಡಬ್ಬಕ್ಕೆ ಪ್ಲಾಸ್ಟಿಕ್ ಡಬ್ಬವನ್ನು ಬಳಸಿದರೆ,ಬಿಸಿ ಬಿಸಿಯಾದ ಆಹಾರ ಪ್ಲಾಸ್ಟಿಕ್ ನೊಂದಿಗೆ ಬೆರೆತು ನಗ್ನ ಕಣ್ಣಿಗೆ ಕಾಣದ ರಾಸಾಯನಿಕ ಕ್ರಿಯೆಯುಂಟಾಗಿ ತಿನ್ನುವ ಪದಾರ್ಥವನ್ನು ಹಾಳು ಮಾಡುತ್ತದೆ, ಇಂತಹ ಅಡುಗೆಯನ್ನು ತಿಂದಾಗ ನಿಮಗೆ ಪ್ಲಾಸ್ಟಿಕ್ ತಿಂದ ಅನುಭವವಾದಲ್ಲಿ ಆಶ್ಚರ್ಯವಿಲ್ಲ.ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ತಿನ್ನುವ ಪದಾರ್ಥವನ್ನು ಕಲುಷಿತಗೊಳಿಸುತ್ತದೆ,ಇದರ ಅರಿವಿಲ್ಲದೆ ನಾವು ತಿಂದಾಗ ಅಥವಾ ಬಿಸಿ ಬಿಸಿಯಾದ ಚಹಾ/ಕಾಫಿ/ಹಾಲು ಮುಂತಾದ ಪಾನೀಯಗಳನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ಸೇವಿಸಿದಾಗ ನಮ್ಮ ಆರೋಗ್ಯವು ಹಾಳಾಗುವುದರಲ್ಲಿ ಸಂಶಯವಿಲ್ಲ.ಒಂದು ಥೆಳುವಾದ (ದಪ್ಪನದಲ್ಲ ಎಂಬುದು ಗಮನದಲ್ಲಿರಲಿ!!) ಪ್ಲಾಸ್ಟಿಕ್ ಚೀಲ ನೈಸರ್ಗಿಕವಾಗಿ ಕೊಳೆಯಲು ಹಲವು ಮಿಲಿಯನ್ ವರ್ಷ ಬೇಕಾಗುತ್ತದೆ, ಅಂದಾಜಿಗೆ ಹತ್ತು ಲಕ್ಷ ವರ್ಷ. ಅವು ಕೊಳೆಯುವ ಪ್ರಕ್ರಿಯೆ ಕೂಡ ಭಯಾನಕ ಅನೇಕ ರೀತಿಯ ವಿಷಯುಕ್ತ ಅನಿಲಗಳನ್ನು ಗಾಳಿಗೆ ಬಿಡುಗಡೆ ಮಾಡುತ್ತದೆ ವಿಷಯುಕ್ತ ರಾಸಾಯನಿಕಗಳನ್ನು ಭೂಮಿಗೆ ಬಿಡುಗಡೆ ಮಾಡಿ ಕೊಳೆಯುತ್ತದೆ. ಹೀಗಾಗಿ ಅವು ಉಪಯುಕ್ತವಾಗಿದ್ದಾಗಲು ಆರೋಗ್ಯಕ್ಕೆ ಹಾನಿಕಾರಕ,ಕೊಳೆಯ ಬೇಕಾದರೂ ಆರೋಗ್ಯಕ್ಕೆ/ಪರಿಸರಕ್ಕೆ ಹಾನಿಕಾರಕ.ಪೇಪರ್ ನೈಸರ್ಗಿಕವಾಗಿ ಬೇಗನೆ ಕೊಳೆಯುತ್ತದೆ,ವಿಷಯುಕ್ತ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ ಆದರೆ ಪ್ಲಾಸ್ಟಿಕ್ ಇದಕ್ಕೆ ವ್ಯತಿರಿಕ್ತ .<br />
ಕುಡಿಯುವ ನೀರನ್ನು PET ಬಾಟಲ್ ಗಳಲ್ಲಿ ಶೇಖರಿಸಿಟ್ಟು ಕುಡಿದರೆ ಹಲವಾರು ಕ್ಯಾನ್ಸರ್ ಬರುತ್ತದೆ ತಕ್ಷಣವೇ ಇದರ ಲಕ್ಷಣಗಳು ಕಾಣದೆ ಇದ್ದರು ಹಲವಾರು ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಬಳಸಿ ಬಿಸಾಡುವ ಪ್ರತಿ ಪ್ಲಾಸ್ಟಿಕ್ ಬಾಟಲ್/ಕವರ್/ಇತರೆಗಳು ನಮ್ಮ ಭೂಮಿಯನ್ನು ಮಲಿನಗೊಳಿಸುತ್ತವೆ. ನಮ್ಮ ಪರಿಸರದ ನಿರ್ಮಲತೆಯನ್ನು ಹಾಳುಗೆಡವುತ್ತದೆ. ಮುಂದಿನ ಪೀಳಿಗೆಗಳು ಇಂತಹ ಮಲಿನಗೊಂಡ ಭೂಮಿ, ಉಸಿರಾಡಲು ಕಲುಷಿತ ಗಾಳಿ, ತಿಪ್ಪೆಯಂತಹ ವಾತಾವರಣದ ಮಧ್ಯೆ ಬದುಕ ಬೇಕಾಗುವ ಅನಿವಾರ್ಯತೆ ಉಂಟಾಗುತ್ತದೆ.<br />
<br />
ತಿಳಿದುಕೊಳ್ಳಬೇಕಾದ ವಿಚಾರ<br />
<br />
ಪ್ಲಾಸ್ಟಿಕ್ ಅನ್ನು ಏಕಾ ಏಕಿ ತ್ಯಜಿಸಲು ಸಾಧ್ಯವಿಲ್ಲದೇ ಇದ್ದರು ಸಹ ಅವನ್ನು ಆದಷ್ಟು ನಾಜೂಕಾಗಿ,ಮಿತಿಯಲ್ಲಿ ಬಳಸಬೇಕು. ದುಷ್ಟರಿಂದ ದೂರ ಇರು ಎನ್ನುವ ಹಾಗೆ ಪ್ಲಾಸ್ಟಿಕ್ ವಸ್ತುಗಳಿಂದ ಆದಷ್ಟು ದೂರವಿರಬೇಕು.ನಮ್ಮ ಜೀವನ ಹೇಗೆ ಅಡೆ ತಡೆಗಳಿಲ್ಲದೆ ಸುಗಮವಾಗಿ ಸಾಗಲು ಇಚ್ಚಿಸುತ್ತೆವೆಯೋ ಹಾಗೆ ನಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಎಲ್ಲರೂ ಸ್ವಚ್ಚವಾದ ವಾತಾವರಣದಲ್ಲಿ ಬದುಕುವ ಹಾಗೆ ಮಾಡಬೇಕು. ಪ್ಲಾಸ್ಟಿಕ್ ನ "ನಿಜ" ಗುಣಗಳ ಬಗ್ಗೆ ಅರಿವಿಲ್ಲದವರಿಗೆ ತಿಳಿ ಹೇಳಬೇಕಾದದ್ದು ವಿಷಯ ಅರಿತುಕೊಂಡವರ ಧರ್ಮ ಹಾಗು ಕರ್ತವ್ಯ. ಸುಂದರ, ಸ್ವಚ್ಛ, ಸಮಾಜ ಕಟ್ಟಲು ನಾವು ಮಾಡುವ ಅತಿ ಸಣ್ಣ ಕೆಲಸವಾಗುತ್ತದೆ.<br />
ಪ್ರತಿ ನಿತ್ಯ ಪ್ಲಾಸ್ಟಿಕ್ ಅನ್ನು ಎಲ್ಲಿ ಎಲ್ಲಿ ಬಳಸುತ್ತೇವೆಯೋ ಆಯಾ ಸಂಧರ್ಭಗಳಲ್ಲಿ ಅವುಗಳನ್ನು ಉಪಯೋಗಿಸದೆ ಪರ್ಯಾಯ ಮಾರ್ಗದಿಂದ ಕಾರ್ಯಸಾಧನೆ ಮಾರ್ಗ ಯೋಚಿಸಬೇಕು.<br />
ಗೊತ್ತಾಗದಿದ್ದರೆ ಕೇಳಿ ತಿಳಿದುಕೊಳ್ಳಬೇಕು, ಸಫಲವಾದ ಸ್ವಂತ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.<br />
ಉದಾಹರಣೆಗೆ :<br />
೧. ಅಂಗಡಿಗೆ ಹೋಗುವ ಮುನ್ನ ಮನೆಯಿಂದ ಬಟ್ಟೆಯ ಕೈ ಚೀಲ ಅಥವಾ ಮೊದಲೇ ಉಪಯೋಗಿಸಿದ ಪ್ಲಾಸ್ಟಿಕ್ ಚೀಲವನ್ನು ತೆಗೆಕೊಂಡು ಹೋಗಬೇಕು. ಇದರ ಉದ್ದೇಶ, ಹೊಸ ಪ್ಲಾಸ್ಟಿಕ್ ಚೀಲದ ಬಳಕೆಯಾಗದಂತೆ ತಡೆಯುವುದು.<br />
೨. ಪ್ಲಾಸ್ಟಿಕ್ ವಸ್ತುಗಳನ್ನು ಸಾಧ್ಯವಾದಷ್ಟು ಪುನರ್ಬಳಕೆ ಮಾಡಬೇಕು.<br />
೩. ಊಟದ ಪದಾರ್ಥ ಅಥವಾ ಪಾನೀಯಗಳನ್ನು ಪ್ಲಾಸ್ಟಿಕ್ನ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿ ಇಡಬೇಕು.ಇದು ಬಹು ಮುಖ್ಯ.<br />
೪. ರೆಫಿಲ್ ಪೆನ್ ಬದಲು ಇಂಕ್ ಪೆನ್ ಗಳನ್ನು ಬಳಸಬೇಕು.<br />
೫. ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು.ನಿಮ್ಮ ಊರಿನಲ್ಲಿ ಪ್ಲಾಸ್ಟಿಕ್ ಪುನರ್ಬಳಕೆ ಸಂಸ್ಕರಣ ಘಟಕಗಳಿದ್ದರೆ, ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಪ್ರತ್ಯೇಕವಾಗಿ ಶೇಖರಿಸಿ ಅವರಿಗೆ ವಿಚಾರ ತಿಳಿಸಿದಲ್ಲಿ ಬಂದು ಒಯ್ಯುತ್ತಾರೆ. <br />
೬. ಊಟದ ಚೀಲಗಳನ್ನು ಹಾಗೆಯೇ ತಿಪ್ಪೆಗೆ ಹಾಕುವುದರಿಂದ ಅದ್ರಲ್ಲಿ ಉಳಿದಿರುವ ಆಹಾರ ಪದಾರ್ಥವನ್ನು ತಿನ್ನಲು ಬರುವ ಹಸು,ಕರು ಅರಿವಿಲ್ಲದೆಯೇ ಪ್ಲಾಸ್ಟಿಕ್ ಕವರ್ ಅನ್ನು ಸಹ ತಿನ್ನುತ್ತದೆ. ಈ ಪ್ಲಾಸ್ಟಿಕ್ ಚೀಲ ಪ್ರಾಣಿಗಳ ಹೊಟ್ಟೆ ಸೇರಿ ಅವುಗಳ ಸಾವಿಗೆ ಸಹ ಕಾರಣವಾಗುತ್ತದೆ. ಇಂತಹ ಸಾವಿಗೆ ನಮ್ಮ ಅಜ್ಞಾನವು ಕಾರಣವಾಗಿರಬಾರದು. ಆದ್ದರಿಂದ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ಶೇಖರಿಸಿ ಬಿಸಾಡುವ ಪದ್ದತಿಯನ್ನು ರೂಢಿಸಿಕೊಳ್ಳಬೇಕು.<br />
೭. ಪ್ಲಾಸ್ಟಿಕ್ ಲೇಪಿತವಿರುವ ಯಾವುದೆ ವಸ್ತುವನ್ನು ಸುಡಬಾರದು. ಇಂದಿನ ದಿನಗಳಲ್ಲಿ ನೀರಿನಾಂಶವಿರುವ ಅಥವಾ vaccum pack ಮಾಡಿ ತಿನ್ನುವ ಪದಾರ್ಥಗಳನ್ನು ಶೇಖರಿಸಲು ಪ್ಲಾಸ್ಟಿಕ್ನ ಥೆಳುವಾದ ಲೇಪನವನ್ನು ಕಾಗದದಲ್ಲಿ ತಯಾರಿಸಿದ ಡಬ್ಬಗಳ ಒಳಪದರದಲ್ಲಿ ಬಳಸಿರುತ್ತಾರೆ. ಕಾಗದದ ಡಬ್ಬವೆಂದು ಸುಟ್ಟಾಗ ಒಳಗಿರುವ ಪ್ಲಾಸ್ಟಿಕ್ ಪದರವೂ ಸಹ ಸುಟ್ಟು ಹಾನಿಕಾರಕ ಅನಿಲ ಬಿಡುಗಡೆಯಾಗುತ್ತವೆ. <br />
೮. ಷೇವಿಂಗ್ ಸ್ಟಿಕ್/ರೇಝರ್ನ ಬದಲು ಬ್ಲೇಡ್ ಹಾಕಿ ಬಳಸುವ ಷೇವಿಂಗ್ ಸಾಧನವನ್ನು ಬಳಸಬೇಕು. ಬ್ಲೇಡ್ ಮೂಂಡಾದ ಮೇಲೆ ಕೇವಲ ಬ್ಲೇಡ್ವೊಂದನ್ನೆ ಬದಲಾಯಿಸಿದರೆ ನಮ್ಮ ಕಾರ್ಯವು ಸಾಧಿಸಿದ ಹಾಗೆ ಆಗುತ್ತದೆ ಮತ್ತೆ ಪರಿಸರ ಕಾಪಾಡುವುದರಲ್ಲಿ ನಮ್ಮ ದಿಟ್ಟ,ಪುಟ್ಟ ಹೆಜ್ಜೆ ಸಫಲವೂ ಆಗುತ್ತದೆ. <br />
<br />
ಕೊಸರು:<br />
ನೀವು ನೀರು ಕುಡಿಯುವ ಬಾಟಲ್ ಕೆಳಗೆ ನೋಡಿದಾಗ ಈ ರೀತಿಯಾಗಿ PVC ತ್ರಿಕೊಣದೊಳಗೆ ಯಾವುದಾದರು ಸಂಖ್ಯೆಯನ್ನು ಮುದ್ರಿಸಿದ್ದು ಗಮನಿಸಿದೀರಾ?<br />
ನೋಡಿದ್ದರೆ ಅದು ಏನು ಸೂಚಿಸುತ್ತದೆ ಎಂಬ ಆಲೋಚನೆ ಬಂದಿತ್ತೆ?<br />
ಅಥವಾ ಅದು ಕೇವಲ ಪುನರ್ಸಂಸ್ಕರಿಸಬಹುದೆಂದು ಯೋಚಿಸಿದಿರಾ?ಆ ರೀತಿಯ ಆಲೋಚನೆ ತಪ್ಪು!!!ಆ ಬಾಟಲಿಯ ಪ್ಲಾಸ್ಟಿಕ್ ಯಾವ ರಾಸಾಯನಿಕದಿಂದ ತಯಾರಿಸಲಾಗಿದೆ ಎಂದು ಸೂಚಿಸಲು ನಮೂದಿಸಿರುವ ಸಂಖ್ಯೆ ಇದಾಗಿರುತ್ತದೆ.<br />
೧.Polyethylene terephalate (PET)<br />
೨.High density polyethylene (HDPE)<br />
೩.Unplasticised polyvinyl chloride (UPVC) ಅಥವಾ Plasticised polyvinyl chloride (PPVC)<br />
೪.Low density polyethylene (LDPE)<br />
೫.Polypropylene (PP)<br />
೬.Polystyrene (PS) ಅಥವಾ Expandable polystyrene (EPS)<br />
೭.ಇತರೆ, nylon ಹಾಗು acrylicನಿಂದಲೂ ಸಹ ಮಾಡಿರಲಾಗಿರುತ್ತದೆ.<br />
ನಿಮಗೆ ಈ ಮಾಹಿತಿ ಎಲ್ಲೂ ಕಾಣಸಿಗುವುದಿಲ್ಲ ಯಾಕೆಂದರೆ ಬಹುತೇಕ ಪ್ಲಾಸ್ಟಿಕ್ ಹಾಗು ಬಳಸಲಾಗುವ ರಾಸಾಯನಿಕಗಳು ವಿಷಪೂರಿತವಾದವು ಹಾಗು ಆರೋಗ್ಯಕ್ಕೆ ಹಾನಿಕಾರಕ.ಇವು ಆಯಾ ಪ್ಲಾಸ್ಟಿಕ್ ವಸ್ತುಗಳಿಂದ ಅಹಾರ/ಕುಡಿಯುವ ನೀರು/ಪಾನೆಯಗಳಲ್ಲಿ ಸಲೀಸಾಗಿ ಬೆರೆತು ಆರೋಗ್ಯವನ್ನು ಹಾಳು ಮಾಡುತ್ತದೆ.<br />
ಪ್ಲಾಸ್ಟಿಕ್ ಡಬ್ಬಗಳಲ್ಲಿ ಶೇಖರಿಸಿದ ಊಟಮಾಡಿದ ನಂತರ ನಿಮಗೆ ಖಂಡಿತವಾಗಿಯೂ ಊಟದ ರುಚಿ ಜೊತೆ ಪ್ಲಾಸ್ಟಿಕ್ನ "ರುಚಿ"ಯ ಅನುಭವ ಸಹ ಆಗುತ್ತದೆ. ಇದು ಯಾಕೆಂದರೆ ನೀವು ನಿಜವಾಗಲೂ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ.ಭೂಮಿಯ ಮೇಲೆ ಅಗಾಧವಾದ ಕೆಟ್ಟ ಪರಿಣಾಮ ಬೀರುವ ಪ್ಲಾಸ್ಟಿಕ್ ನಮ್ಮ ದೇಹಾರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದೆಂದು ಊಹಿಸಿ.<br />
ಈ ಪಟ್ಟಿಯಲ್ಲಿ ಅತ್ಯಂತ ಕೆಟ್ಟವಾದುದು ೩,೬ ಹಾಗು ೭ ಸಂಖ್ಯೆಯ ರಾಸಾಯನಿಕದಿಂದ ಮಾಡಿರುವ ಪ್ಲಾಸ್ಟಿಕ್.<br />
ನಾವು ಕುಡಿಯುವ ಅಥವಾ ತಿನ್ನುವ ಪದಾರ್ಥಗಳನ್ನು ಶೇಖರಿಸಲು PETಬಾಟಲ್ನ ಸಂಖ್ಯೆ ಸೂಚಿಸುವ ೧ ಎಂಬ ಸಂಖ್ಯೆಯಿಂದ ಗುರುತು ಮಾಡಿರುವ ಪ್ಲಾಸ್ಟಿಕ್ ವಸ್ಟುಗಳನ್ನೆ ಬಳಸಿದರೆ ಒಂದು ಹಂತಕ್ಕೆ ನಾವು ಸುರಕ್ಷಿತವಾಗಿರಬಹುದು. ಆದ್ದರಿಂದ ಪ್ಲಾಸ್ಟಿಕ್ ಬಳಸುವಾಗ ಎಚ್ಚರವಾಗಿರಬೇಕು.<br />
<br />
ಧನ್ಯವಾದ<br />
ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-27751064367991957002010-06-29T23:05:00.000-07:002010-06-29T23:05:08.979-07:00ಪರಿಸರ ಪ್ರೇಮಿಗಳಿಗೆ ಕಿವಿಮಾತುon May 8, 2009<br />
<br />
೧.ನಿಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿಯಿದೆಯೆ?<br />
೨.ನೀವು ಗ್ಲೋಬಲ್ ವಾರ್ಮಿಂಗ್ ಎನ್ನುವುದರ ಬಗ್ಗೆ ಚಿಂತಿತರಾಗಿದ್ದೀರಾ?<br />
೩.ಗ್ಲೋಬಲ್ ವಾರ್ಮಿಂಗ್ನ ವಿಚಾರದಲ್ಲಿ ನೀವು ನಿಸ್ಸಹಾಯಕರು ಎಂದೆನೆಸುತ್ತಿದೆಯೆ? <br />
೪.ಸ್ವಚ್ಛವಾದ ಸಮಾಜಕ್ಕಾಗಿ, ನಿಮಗೆ ಕೆಲವು ಮಾಹಿತಿ ಬೇಕೆ?<br />
೫.ತ್ಯಾಜ್ಯ ವಸ್ತು ನಿರ್ವಹಣೆ ಬಗ್ಗೆ ನೀವು ಇತರರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕೆ?<br />
ಹಾಗಿದ್ದರೆ ಮುಂದೆ ಓದಿ...<br />
<br />
ಗ್ಲೋಬಲ್ ವಾರ್ಮಿಂಗ್ ಅನ್ನೋದು ಎಲ್ರುಗೂ ತಿಳ್ದಿರೊ ವಿಚಾರ ಅಂತ ಗೊತ್ತು(ಕನಿಷ್ಠ ಈ ಲೇಖನವನ್ನ ಓದೋರಿಗಾದ್ರು ತಿಳ್ದಿರುತ್ತೆ ಅಂದ್ಕೊಂಡಿದೀನಿ) ಅದಕ್ಕೆ ಅದರ ಬಗ್ಗೆ ಕೊರೆತ ಶುರು ಹಚ್ಕೊಂಡಿಲ್ಲ :) ಖುಷಿ ಪಡಿ. ನಿಮಗೆ ಟಾರ್ಚರ್ ಕೊಡೊಕ್ಕೆ ಬಂದಿರೋದು ಬಡಪಾಯಿ ಆಗಿ ಜೀವ್ಸಿತಿರೊ ನಮ್ಮಂತವರು ಸಾಧ್ಯವಾದಷ್ಟು ಏನು ಮಾಡಬಹುದು ಅಂತ ಹಂಚಿಕೊಳ್ಳೊಕ್ಕೆ ಆಷ್ಟೆ.ನಿಮ್ಗು ತಿಳಿದಿರೋ ಆಲೋಚನೆಗಳನ್ನ ಹಂಚಿಕೊಂಡರೆ ಇನ್ನಷ್ಟು ಸಹಾಯ ಆಗೋದ್ರಲ್ಲಿ ಸಂಶಯವಿಲ್ಲ.<br />
ಹೆಚ್ಚಿನಾಂಶದಲ್ಲಿ ಭೂಮಿನ ಹಾಳು ಮಾಡೊದೆಲ್ಲ ಕಾರ್ಖಾನೆಗಳೆ ಆಗಿದ್ರು ಸಹ ಕೊನೆಗೆ ಏನಾದ್ರು ನೈಜ್ಯವಾದ ಬದಲಾವಣೆ ಮಾಡ್ಬೇಕು/ತರಬೇಕು ಅಂದ್ರೆ ಒತ್ತಡ ಬರೊದು ಬಡಪಾಯಿ ಸಾಮಾನ್ಯ ಮನುಷ್ಯರು ಮೇಲೇನೆ. ಏನ್ಮಾಡೊದು?? ನಾಗರೀಕತೆ ಅನ್ನೋದು ಹೆಚ್ಚದಂತೆಲ್ಲಾ ಸೌಕರ್ಯಗಳು (ಬೇಡದೆ ಇರೋವು ಜಾಸ್ತಿ)ಸಹ ಜಾಸ್ತಿ ಆಗ್ತ ಹೋಗುತ್ತೆ, ಕೆಲವೊಮ್ಮೆ ಈ ಸೌಕರ್ಯಗಳು ಅನಿವಾರ್ಯವು ಕೂಡ!!! ಅದೆ ವಿಪರ್ಯಾಸ, ಗೊತ್ತಿದ್ದು ಗೊತ್ತಿದ್ದು ಅಸಹಾಯಕರಾಗಿ ಏನೂ ಮಾಡೊಕ್ಕೆ ಆಗದೆ ಪರಿಸರ ಮಾಲಿನ್ಯದಲ್ಲಿ ನಮ್ಮ contributionಸಹ ಆಗಿ ಹೊಗುತ್ತೆ.ಮಜಾ ಸುದ್ದಿ ಅಂದ್ರೆ ಜಗತ್ತಿನಲ್ಲಿ "ಕಾರ್ಬನ್ ಟ್ರೇಡಿಂಗ್" ಅಂತ ಒಂದು ಸೌಕರ್ಯ ಇದೆ.<br />
<br />
ಮೂಲವಾಗಿ ನಮ್ಮ ಪರಿಸರ ಹಾಳಾಗ್ತಿರೋದಕ್ಕೆ ಹಲವಾರು ಕಾರಣಗಳಿದ್ರು ಸಹ ಕಾರ್ಬನ್ ಬಿಡುಗಡೆಯಾಗುವುದು ಇವೆಲ್ಲಾ ಕಾರಣಗಳಲ್ಲಿ ಅತ್ಯಂತ ಪ್ರಮುಖವಾದುದು.ಹಾಗಾಗಿ ಜಗತ್ತಿನ worstಜನರೆಲ್ಲ ಒಂದು ಕಡೆ ಗುಂಪುಗೂಡಿ ಕಾರ್ಬನ್ ತಡೆಗಟ್ಟುವುದಕ್ಕೆ ಒಂಡು ಮನೆ ಹಾಳು ಯೋಜನೆ ಹಾಕಿಕೊಂಡ್ರು,ಈ ಯೋಜನೆಗೆ "ಕಾರ್ಬನ್ ಟ್ರೇಡಿಂಗ್"ಅಂತ ಕೂಡ ನಾಮಕರಣ ಮಾಡಿದ್ರು ಚಪ್ಪಾಳೆನೂ ಸಹ ಹೊಡೆದ್ರು ಊಟ ಹಾಗು ಪಾನೀಯದ ಜೊತೆ.ಇದು ಯಾಕೆ ಮನೆ ಹಾಳು ಯೋಜನೆ ಅಂತ ನಾನು ಕರೀತೀನಿ ಗೊತ್ತಾ? ಈ ಯೋಜನೆ ಪ್ರಕಾರ ಗುಂಪಿನ ಸದಸ್ಯರಿಗೆ(ಆಯಾ ದೇಶದ ಪ್ರತಿನಿಧಿ) ಪ್ರತಿ ವರ್ಷ ಲೆಖ್ಖ ಕೊಡಬೇಕು,ನಾವು ಮಾಡೊ ಕೆಲಸದಿಂದ ಇಂತಿಷ್ಟು ಕಾರ್ಬನ್ ಬಿಡುಗಡೆಯಾಯ್ತು ಅಂತ.ಬರಿ ಲೆಖ್ಖ ಕೊಟ್ರೆ ಕೆಲಸ ಮುಗಿದುಹೋಗೊಲ್ಲ ದುಡ್ಡು ಕೂಡ ಕೊಡಬೇಕು.ಎಲ್ರು ಸಹ ಕಾರ್ಬನ್ ಬಿಡುಗಡೆ ಮಾಡೊದ್ರಿಂದ ಎಲ್ಲ ದೇಶದವರು ಸಹ ದಂಡ ಕಟ್ಟುತಾರೆ. ಈ ರೀತಿ ಸಂದಾಯ ಆಗೊ ಹಣವನ್ನ ಹಸಿರು ಚಳುಚಳಿಗೆ ಬಳಸಿಕೊತಾರೆ, ಗಿಡ ನೇಡೊ ಕಾರ್ಯಕ್ರಮ ಆಗ್ಲಿ ಅಥ್ವಾ ಬೇರೇನೆ ಆಗಿರ್ಲಿ ಒಟ್ನಲ್ಲಿ ಹಸಿರಿನಲ್ಲಿ ದುಡ್ಡನ್ನ ಹೂಡುತ್ತಾರೆ. ಇಲ್ಲಿ ಯೋಚಿಸ್ಬೇಕಾಗಿರೋದು ಏನಂದ್ರೆ ಇಗರ್ಜಿಗಳಲ್ಲಿ confession box ಅಂತ ಇರೊಲ್ವೆ ಇದು ಸಹ ಒಂಥರಾ ಅದೆ schemeu,ಮತ್ತೆ ಶಾಸ್ತ್ರಿಗಳ ಜೊತೆ ಚರ್ಚೆ ಮಾಡಿ ಈ ರೀತಿ ತಪ್ಪು ನಡೆದು ಹೋಗಿದೆ ಪರಿಹಾರ ಅಂತ ಏನಾದ್ರು ಪೂಜೆ ಗೀಜೆ ಅಂತ ಮಾಡ್ಸಿ ಮತ್ತೆ ಅದೆ ತಪ್ಪು ಪುನರಾವರ್ತನೆ ಮಾಡೊಕ್ಕೆ ಸಿದ್ಧ ಆಗೊಲ್ವೆ. ಅದೆ ರೀತಿ "ಕಾರ್ಬನ್ ಟ್ರೇಡಿಂಗ್"ಸಹ ತಪ್ಪು ತಿದ್ದಿಕೊಳ್ಳೊ ವಿಚಾರ ಇಲ್ಲ ಮಾಡಿದಕ್ಕೆ ಶಾಸ್ತಿ ಅಷ್ಟೆ, ಮತ್ತೆ ಮಾಡಿದ ತಪ್ಪನ್ನ ಮಾಡೊಕ್ಕೆ ಎಲ್ಲಾ ಸ್ವಾತಂತ್ರ್ಯ ಇದೆ !!!<br />
<br />
ಸದಸ್ಯರು ಪ್ರತಿ ವರ್ಷ ದುಡ್ಡು ಕೊಡ್ತಾರೆ ಅವು ಮತ್ತೆ ಹಸಿರಿನಲ್ಲಿ ಹೂಡಿಕೆ ಆಗುತ್ತೆ ಎಲ್ಲ ನಿಜ ಆದ್ರೆ ನಾವು ಹಾಳು ಮಾಡೊದು exponential ವೇಗದಲ್ಲಿ ಇರ್ಬೇಕಾದ್ರೆ ಇವರು ಮಾಡೊ ತ್ಯಾಪೆ ಕಾರ್ಯಕ್ರಮಕ್ಕೆ ಹೊಂದಾಣಿಕೆ ಆಗುತ್ತಾ?? ಹಾಳು ಮಾಡೊದು ಜಾಸ್ತಿ ಆಗಿದ್ದಾಗ ಅದನ್ನ ಸರಿ ಮಾಡೊ ಪ್ರಯತ್ನಗಳು ಏಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ? ಹಾಳು ಮಾಡೊಕ್ಕೆ ನಿಮಿಷ ರಿಪೇರಿ ಮಾಡೊಕ್ಕೆ ವರುಷ!!! ಏನೂ ಮಾಡದೆ ಇರೊದಕ್ಕಿಂತ ಏನೊ ಮಾಡ್ತಿದೀವಿ ಅಂತ ತಮಗೆ ತಾವೆ ಸಮಾಧಾನ ಹೇಳ್ಕೊಳ್ಳೊಕ್ಕೆ ಅಂತ ಇದೆ ಈ ಯೋಜನೆ...<br />
ಹೊಸ ಸುದ್ದಿ ಏನೂ ಅಂದ್ರೆ ವಿಪ್ರೊ/ಫಿಲಿಪ್ಸ್ ಕಾರ್ಖಾನೆಯವರು ೫೫/- ರೂ ಬೆಲೆ ಬಾಳೊ CFLಬಲ್ಬ್ಗಳನ್ನ ೧೫/- ರೂ ಮಾರಾಟ ಮಾಡೊ ಯೋಜನೆ ಇದೆ. ಅಲ್ಲಾ ಈಗಿನ ಕಾಲದಲ್ಲಿ ವ್ಯಾಪರಕ್ಕೆ ಅಂತಾನೆ ನಿಂತಿರೊ ಜನ ೪೦/- ರೂ ಕಳ್ಕೊಂಡು ವ್ಯಾಪಾರ ಮಾಡ್ತಾರೆ ಅಂದ್ರೆ ನಂಬೊ ಅಂಥಾ ವಿಚಾರನಾ ನೀವೆ ಹೇಳಿ... ಆದ್ರೆ ಈ ಕಥೆಯಲ್ಲಿ ತಿರುವು ಬರೊದೆ ಸರ್ಕಾರ ಇವರಿಗೆ ಕೊಡೊ ದುಡ್ಡಿಂದ. ಇದು ಯಾವ್ ಹೊಸ schemeu ಅಂತ ಅಚ್ಚರಿ ಪಡ್ಬೇಡಿ. ನಡೆಯೋದಿಷ್ಟೆ, ಇವರು ೪೦/-ರೂ ನಷ್ಟ ಮಾಡಿಕೊಂಡು ಮಾರುತ್ತಾರೆ, ಸರ್ಕಾರ ಏನ್ಮಾಡುತ್ತೆ ಅಂದ್ರೆ ಲೆಖ್ಖ ಒಪ್ಪಿಸುತ್ತೆ, ಈ ವರ್ಷ ನಾವು ಇಷ್ಟು CFLಬಲ್ಬ್ಗಳನ್ನ ತಯಾರಿಸಿ ಉಪಯೋಗಿಸಿದ್ವಿ ಹಾಗಾಗಿ ಕಾರ್ಬನ್ ಬಿಡುಗಡೆ ಕಮ್ಮಿ ಆಗಿದೆ ಅಂತ, ಇದಕ್ಕೆ ಮೆಚ್ಚಿ ನಮ್ ಸರ್ಕಾರಕ್ಕೆ ಸಂಸ್ಥೆ ದುಡ್ಡು ಕೊಡ್ತಾರೆ. ಈಗ ಸರ್ಕಾರ ಇದೆ ದುಡ್ಡನ್ನ ವಿಪ್ರೊ ಹಾಗು ಫಿಲಿಪ್ಸ್ ಅವರಿಗೆ ಕೊಡುತ್ತೆ ಹಿಂಗೆ ಎಲ್ಲಾರುನು ಖುಷಿಯಿಂದ ಇರೋ ಯೋಜನೆ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ ಅಂತ ನೋಡಬೇಕಷ್ಟೆ... ಅವರು ಮಾಡ್ಕೊಳ್ಳೋದು ಮಾಡಿಕೊಳ್ಳಲಿ ನಾವು ಏನು ಮಾಡಬಹುದು ಅಂತ ವಿಚಾರ ಮಾಡೋಣ ಬನ್ನಿ.<br />
<br />
ಮೊದಲನೆಯದಾಗಿ ತ್ಯಾಜ್ಯ ಅನ್ನೋದನ್ನೆ ಹೇಗೆ ಕಮ್ಮಿ ಮಾಡಬಹುದು ಅನ್ನೋದು ಮುಖ್ಯ ವಿಚಾರ.<br />
೧.ಧೀರ್ಘಬಾಳಿಕೆ ವಸ್ತುಗಳನ್ನ ಕೊಳ್ಳುವುದು--ಕಮ್ಮಿ ಬಾಳಿಕೆಯ ಅಗ್ಗದ ವಸ್ತುವನ್ನು ಕೊಂಡರೆ ಆಗಾಗ ತಿಪ್ಪೆಗೆ ಎಸೆಯೋದು ಜಾಸ್ತಿಯಾಗಿ ತ್ಯಾಜ್ಯವಸ್ತುವಿನ ರಾಶಿ ಹೆಚ್ಚಾಗುತ್ತೆ "ಹನಿ ಹನಿ ಗೂಡಿದ್ರೆ ಹಳ್ಳ" <br />
೨.ಕೆಲಸ ಮಾಡದ ವಸ್ತುಗಳನ್ನು ಸಾಧ್ಯವಾದಷ್ಟು ರಿಪೇರಿ ಮಾಡಿಸಿ ಉಪಯೋಗಿಸುವುದು--ಪೂರ್ಣವಾಗಿ ಬದಲಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ,ಯೋಚಿಸಿ ವಸ್ತುವನ್ನು ಬದಲಾಯಿಸಬೇಕೆ ಅಥವಾ ರಿಪೇರಿ ಮಾಡಿದರೆ ಸಾಕೆ ಅಂತ.<br />
೩.ಆದಷ್ಟು ಪುನರ್ಬಳಕೆಯಾಗುವಂತಹ ವಸ್ತುಗಳನ್ನು ಕೊಳ್ಳುವುದು ಹಾಗು ಇತರರಿಗೂ ಪ್ರೋತ್ಸಾಹಿಸುವುದು.--ವಸ್ತುಗಳನ್ನು ಕೊಳ್ಳಲು ಹೊರಡಬೇಕಾದರೆ ಮನೆಯಿಂದಲೆ ಬಟ್ಟೆಯ ಚೀಲವನ್ನು ಒಯ್ಯಬಹುದು ಇಲ್ಲವಾದಲ್ಲಿ ಅಂಗಡಿಯ ಕೈಗೆ ತುರುಕುವ ಪ್ಲಾಸ್ಟಿಕ್ ಚೀಲವನ್ನು ಉಪಯೋಗಿಸಬೇಕಾಗಿ ಬರುವುದು.ರೆಚಾರ್ಜೆಬಲ್ ಬ್ಯಾಟರಿಯನ್ನು ಉಪಯೊಗಿಸಬಹುದು (ಮೂಮೂಲಿ ಎವೆರೆಡಿ ಬ್ಯಾಟರಿ ಜೋಡಿ ೩೦/- ರೂ ಇರಬಹುದು ಆದರೆ ಪ್ಯಾನಸೋನಿಕ್ ರೆಚಾರ್ಜೆಬಲ್ ಬ್ಯಾಟರಿ ಜೋಡಿ ೧೦೦/- ರೂ,ಆದರೆ ಒಮ್ಮೆ ಯೋಚಿಸಿ ಕ್ಯಾಮೆರಾಗಳಿಗೆ ಉಪಯೋಗಿಸುವಾಗ ಎಷ್ಟು ಬ್ಯಾಟರಿ ಬದಲಿಸ್ತೀವಿ ಅಂತ ಧೀರ್ಘಕಾಲದಲ್ಲಿ ಎವೆರೆಡಿಗಿಂತ ಪ್ಯಾನಸೋನಿಕ್ ರೆಚಾರ್ಜೆಬಲ್ ಬ್ಯಾಟರಿಯೆ ಉತ್ತಮ,ಜೇಬಿಗು ಹಾಗು ಪರಿಸರದ ಮೇಲೂ),ಅಗತ್ಯಕ್ಕಿಂತ ಹೆಚ್ಚಿನ ದಿನಪತ್ರಿಕೆಯಾಗಲಿ,ವೃತ್ತಪತ್ರಿಕೆಯಾಗಲಿ ತರಿಸುವುದನ್ನು ನಿಲ್ಲಿಸಬಹುದು(ಒಂದು ದಿನಪತ್ರಿಕೆ ಹೊರಬರುವುದಕ್ಕೆ ಅದೆಷ್ಟು ಮರಗಳು ಬಲಿಯಾಗುತ್ತವೆಯೋ!! ಜಾಹಿರಾತುಗಳಿಂದ ದುಡ್ಡು ಹುಟ್ಟದಿದ್ದರೆ ಒಂದು ದಿನಪತ್ರಿಕೆಯ ಬೆಲೆ ೫೦-೬೦/- ರೂ ಆಗುತ್ತೇನೊ!! ಇನ್ನು ಹೆಚ್ಚಿನ ಗುಣ ಮಟ್ಟದ ಪತ್ರಿಕೆಗಳನ್ನ ಜನ ನೋಡೊ ಹಾಗೆ ಆಗುತ್ತೆ ಹೊರತು ಕೊಳ್ಳೊ ಹಾಗೆ ಇರೊಲ್ಲ). <br />
೪.ಸಣ್ಣ ಪ್ರಮಾಣದಲ್ಲಿ ಕೊಳ್ಳುವುದನ್ನು ಕಡಿಮೆ ಮಾಡುವುದು-- ಚಿಕ್ಕ ಚಿಕ್ಕ ಪೊಟ್ಟಣಗಳನ್ನು ಖರೀದಿಸಿದರೆ packaging ಹೆಚ್ಚಾಗಿ ಅನಗತ್ಯ ತ್ಯಾಜ್ಯ ಉಂಟಾಗುತ್ತದೆ<br />
೫.ನಿಮಗೆ ಅನಗತ್ಯ ಎನಿಸುವ ವಸ್ತುಗಳನ್ನು ನಿಮ್ಮ ಪರಿಚಯಸ್ತರಲ್ಲಿ ಹಂಚಿಕೊಳ್ಳುವುದು ಅಥವಾ ಸಂಘ ಸಂಸ್ಥೆಗಳಿಗೆ ದಾನ ಮಾಡುವುದು.-- ಮಾರಿಬಿಡಿ ತೊಂದರೆ ಇಲ್ಲಾ, ನಿಮಗೆ ಯಾರು ಗೊತ್ತಿಲ್ಲದಿದ್ದರೆ ಯಹೂ ಗುಂಪುಗಳಲ್ಲಿ ಮಾಹಿತಿ ನೀಡಿ. ಒಟ್ಟಿನಲ್ಲಿ ವಸ್ತುಗಳು ಆದಷ್ಟು ಪುನರ್ಬಳಕೆಯಾಗಬೇಕು ಅನಗತ್ಯವಾಗಿ ತ್ಯಾಜ್ಯ ವಸ್ತುವಾಗಬಾರದು.<br />
೬.ಟಾಕ್ಸಿಕ್ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಿ. -- ಪ್ಲಾಸ್ಟಿಕ್,paint,ಕೆಮಿಕಲ್ಸ್ ಅಗತ್ಯ ಪ್ರಮಾಣದಲ್ಲಷ್ಟೆ ಬಳಸಿ,ಕಂಪ್ಯೂಟರ್ ಮಾನಿಟರ್ ಸಹ ಇಂತಿಷ್ಟು ಅಂತ ಕೆಮಿಕಲ್ ಅನ್ನು ಬಿಡಿಗಡೆ ಮಾಡುತ್ತೆ ಹಾಗಾಗಿ ಯಂತ್ರವನ್ನು switch-off ಮಾಡದೆ ಇದ್ರು ಸಹ ಕನಿಷ್ಠ ಮಾನಿಟರನ್ನಾದರು off ಮಾಡಿ.ಚರ್ಮದ ವಸ್ತುಗಳು(ಚರ್ಮ್ ಟಾಕ್ಸಿಕ್ ಅಲ್ಲ :) ಆದ್ರೆ ಅದನ್ನ ಸಿದ್ಧವಸ್ತು ಅನ್ನೊ ಲೆವೆಲ್ಗೆ ತರೊ ಅಷ್ಟು ಹೊತ್ತಿಗೆ ಡೈ ನಲ್ಲಿ ಮುಳುಗೆದ್ದಿರುತ್ತೆ, ಈ ಡೈ ಅನ್ನೊದು ಹಾನಿಕರ),ಆರ್ಟಿಫಿಷಿಯಲ್ ಡೈ ಬಳಸಿರುವ ವಸ್ತುಗಳ ಬಳಕೆಯನ್ನು ನಿಯಂತ್ರಿಸಿ.ಬಟ್ಟೇ ಒಗೆಯೋಕ್ಕೆ ಬಳಸುವ ಡಿಟರ್ಜೆಂಟ್ ಸಹ ಹಾನಿಕಾರಕ ಕೆಮಿಕಲ್ಗಳ ಮೊಲ ಆ ಲೆಖ್ಖಕ್ಕೆ ಬಟ್ಟೆ ಒಗೆದ ನಂತರ ನೀರು ಚೆಲ್ಲುತ್ತೀವಲ್ಲಾ ಅದು ಸಹ ವಿಷ!!! ಏನ್ ಮಾಡ್ತೀರಾ ಬಟ್ಟೆ ಒಗೆಯೋದು ಬಿಡೊಕ್ಕೆ ಆಗುತ್ಯೆ?? ನಿರ್ಮಾ ನಿರ್ಮಾ, ಇದು ಎಲ್ಲ ನಮ್ ಕರ್ಮ :( .<br />
<br />
ಪ್ಲಾಸ್ಟಿಕ್ ಅಂತು ಎಷ್ಟು ಉಪಯೋಗವೋ ಅದಕ್ಕಿಂತಲೂ ಹಾನಿಕರ, ಕೆಲವು ಸನ್ನಿವೇಶದಲ್ಲಿ ಆಪತ್ಭಾಂಧವ ಥರ ಕೆಲಸ ಮಾಡಿದ್ರೆ ಕೆಲವೆಡೆ ಇದೆ ಆಪತ್ತಿಗೆ ಮೊಲ ಸಹ. ಪೇಪರ್ಅನ್ನು ಪುನರ್ಬಳಕೆ ಮಾಡುವುದರಿಂದ(ಹಳೆ ದಿನಪತ್ರಿಕೆ ಕೊಳ್ಳುವ ಅಂಗಡಿಗಳು ಕಾರ್ಖಾನೆಗೆ ಮಾರಿ ಅವು ಪುನರ್ಬಳಕೆ ಮಾಡುವುದಕ್ಕೆ ಸಹಯೋಗಿಸುತ್ತಾರೆ) ಪುನರಬಳಕೆಯಾದ ಪೇಪರ್ನಿಂದ ಹೊಸ ಪೇಪರ್ ತಯಾರಿಸಲು ೫೫% ಕಮ್ಮಿ ಶಕ್ತಿ ಬೇಕಾಗುತ್ತದೆ!!! ೯೫%ರಷ್ಟು ವಾಯು ಮಾಲಿನ್ಯ ತಡೆಗಟ್ಟುತ್ತದೆ. ಇಷ್ಟೆಲ್ಲ ಆಗೊಕ್ಕೆ ಸಹಯೋಗಿಸೋದು ನಮ್ ಕೈಯಲ್ಲೆ ಇದೆ ಹಾಗಾಗಿ ಮುಂದಿನ ಸಲ ಕೆಮ್ಮಿದ್ರು,ಕೆರ್ಕೊಂಡ್ರು ಪೇಪರ್ ನ್ಯಾಪ್ಕಿನ್ ಬಳಸುವುದನ್ನ ಬಿಟ್ರೆ ಒಳ್ಳೆದು ಬಟ್ಟೆಯ ಕೈವಸ್ತ್ರ ಉಪಯೋಗಿಸುವುದು ಉತ್ತಮ,ಅನಗತ್ಯ ದಾಖಲೆಗಳ ಅಚ್ಚುಗಳನ್ನು(ಪ್ರಿಂಟ್ -ಔಟ್)ತೆಗೆಯುವುದನ್ನು ತಡೆಗಟ್ಟಿ.<br />
<br />
ಇದೆಲ್ಲ ಮಾಡ್ಬೇಕು ಅಂತ ಇಚ್ಛೆಯಾದ್ರೆ ಮೊದಲು ಮಾಡ್ಬೇಕಾಗಿರೊ ಕೆಲಸ ನಿಮ್ಮ ಮನೆಯ ಕಸದಬುಟ್ಟಿಗಳನ್ನು ಯಾವ ಯಾವ ಪದಾರ್ಥಗಳ್ಳು ಆಕ್ರಮಿಸಿಕೊಳ್ಳುತ್ತವೆ ಎಂಬುದನ್ನು ಪಟ್ಟಿ ಮಾಡಬೇಕು.ಪಟ್ಟಿ ಮಾಡಿದ ನಂತರ ಯಾವ ವಸ್ತು ಪುನರ್ಬಳಕೆಯಾಗಬಹುದಿತ್ತು,ಯಾವುದನ್ನು ಇನ್ನೂ ಹೆಚ್ಚಿನ ದಿವಸ ಬಳಸಬಹುದಿತ್ತು,ಯಾವ ವಸ್ತುಗಳನ್ನು ಇತರರಿಗೆ ಕೊಟ್ಟಿದ್ದರೆ ಉಪಯೋಗ ಆಗ್ತಿತ್ತು,ಯಾವ ವಸ್ತು ಕೊಳ್ಳುವುದು ಅನಗತ್ಯವಾಗಿತ್ತು ಅನ್ನೋ ಯೋಚನೆಗಳು ತಾನಾಗಿಯೆ ಬರುತ್ತೆ. ಈ ರೀತಿ ಪಟ್ಟಿ ಮಾಡಿ ಆದಮೇಲೆ ಅದು ಪುನರಾವರ್ತನೆಯಾಗದ ಹಾಗೆ ಎಚ್ಚರವಹಿಸಿದರೆ ಮುಗಿಯಿತು ನಮ್ಮ ಪಾಲಿನ ಕೈಲಾದ ಸಹಾಯಮಾಡಿದ ತೃಪ್ತಿ ಸಿಗುತ್ತದೆ.<br />
<br />
ನಿಮ್ಮ ಆಲೋಚನೆಗಳನ್ನು ಹಂಚಿಕೊಂಡರೆ ಸಂತೋಷ<br />
<br />
--- ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-41527685504839557632010-06-29T23:04:00.000-07:002010-06-29T23:04:16.461-07:00ಥಂಡರ್ಬರ್ಡ್ ಎಂಬ ವಂಡರ್ಬರ್ಡ್on May 6, 2009<br />
<br />
ಈ ಹಕ್ಕಿಗೆ ಪ್ರಾಣ ಇಲ್ಲ!!! ಈ ಹಕ್ಕಿ ನಿಮ್ಮ ಕರೆಗೆ ಸ್ಪಂದಿಸುವುದಿಲ್ಲಾ!!! ಎಲ್ಲಾ ಹಕ್ಕಿಗಳು ಹಾರಾಡಿ ಕಲರವ ಮಾಡಿದರೆ ಇದು ಅಲ್ಲಾಡದೆ ಇದ್ದಲ್ಲೆ ಇದ್ದು ತಣ್ಣಗೆ ಠಳಾಯಿಸಿರುತ್ತೆ!!!ಆದ್ರು ಸಹ ನಿಮ್ಮ ಆದೇಶವನ್ನು ಮೀರದೆ ವಿಧೇಯನಾಗಿ ಮಿಂಚಿನ ವೇಗದಲ್ಲಿ ಅಂಚೆಗಳನ್ನು ರವಾನಿಸುತ್ತದೆ.ಇದು ಗುಡುಗುವ ಹಕ್ಕಿಯಂತೂ ಅಲ್ಲಾ ಆದರೆ ಹಿಂದಿನ ಕಾಲದಲ್ಲಿ ಅಂಚೆ ರವಾನಿಸಲು ಪಾರಿವಾಳ/ಹದ್ದನ್ನು ಬಳಸಲಾಗುತ್ತಿತ್ತಲ್ಲವೆ ಹಾಗೆಯೆ ಈಗಿನ ಕಾಲದಲ್ಲಿ ನಮ್ಮ ಎಲ್ಲ ಮಿಂಚೆಗಳನ್ನು ಆಫ್ಲೈನ್/ಆನ್ಲೈನ್ ವೀಕ್ಷಿಸಲು ಅನುಕೂಲ ಮಾಡಿಕೊಡುವ ಸಾಧನ, ಮಿಂಚಿನ ವೇಗದಲ್ಲಿ ಹರಿದಾಡುವ ಅಂಚೆಯೆ-ಮಿಂಚೆ.<br />
<br />
ಥಂಡರ್ಬರ್ಡ್ಅನ್ನು ಉಪಯೋಗಿಸುವ ಪ್ರಯೋಜನವೇನೆಂದರೆ ಹಳೆಯ ಮಿಂಚೆಗಳನ್ನು ನಾವು ಲಾಗ್-ಇನ್ ಆಗದೆಯೆ ನಮಗಿಷ್ಟಬಂದಾಗ ವೀಕ್ಷಿಸಬಹುದು ಆನ್-ಲೈನ್ ಆಗುವ ಪ್ರಮೇಯವೆ ಬರುವುದಿಲ್ಲ.ಇದು ಕಾನ್ಫಿಗರ್ ಮಾಡುವುದು ಸುಲಭ,ಔಟ್ಲುಕ್ನಂತೆ ಕಷ್ಟವಲ್ಲ,ನಿಮಗೆ ಪುಕ್ಕಟೆಯಾಗಿ ದೊರೆಯುತ್ತದೆ,ಕದ್ದ ತಂತ್ರಾಂಶ ಬಳಸುವ ಅಗತ್ಯವಿಲ್ಲ ಯಾಕಂದ್ರೆ ಔಟ್ಲುಕ್ ಬಳಸಲು ಮೈಕ್ರೊಸಾಫ್ಟ್ನವರ "ಆಫಿಸ್" ತಂತ್ರಾಂಶ ಸ್ಥಾಪಿಸಬೇಕು.ಈ "ಆಫಿಸ್" ತಂತ್ರಾಂಶ ಕೊಳ್ಳಲು, ೨೦೦೭ ಆವೃತ್ತಿ ಕೊಳ್ಳುತ್ತೇನೆಂದರು ಸಹ ಕನಿಷ್ಟ ೩೫೦೦/- ಕಕ್ಕಬೇಕು ರಿಟೈಲ್ ಆವೃತ್ತಿಗಂತು ೨೭೦೦೦/-ಆಗುತ್ತದೆ!!! ಶ್ರೀಸಾಮಾನ್ಯನ ಜೇಬಿಗೆಟುಕುವ ಮೌಲ್ಯವೆ ಇವೆಲ್ಲಾ? ಆದ್ರು ಎನು ಮಾಡ್ತೀರಾ ನಮ್ಮ ದೈನಂದಿನ ಜೀವನ ಮಿಂಚೆಯನ್ನು ನೋಡದೆ ಕಳೆಯುವ ಹಾಗಿರುವುದಿಲ್ಲ ಹಾಗಾಗಿ ಇರುವ ಮೂರು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ<br />
<br />
೧.ಕದ್ದ ತಂತ್ರಾಂಶ ಉಪಯೋಗಿಸುವುದು<br />
೨.ದುಡ್ಡು ಕೊಟ್ಟು ನಿಮ್ಮ ಸ್ವಂತ ತಂತ್ರಾಂಶ ಕೊಳ್ಳುವುದು.. ಕೊನೆಯದಾಗಿ<br />
೩.commercial ತಂತ್ರಾಂಶದಂತೆಯೆ ಎಲ್ಲಾ ಕಾರ್ಯವನ್ನು ಶಕ್ತವಾಗಿ ನಿಭಾಯಿಸಬಲ್ಲ ಪುಕ್ಕಟೆಯಾಗಿ ದೊರೆಯುವ ತಂತ್ರಾಂಶ ಉಪಯೋಗಿಸುವುದು. <br />
ಥಂಡರ್ಬರ್ಡ್ ಸ್ಥಾಪನಾಕಡತವನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು <br />
http://www.mozillamessaging.com/en-US/thunderbird/<br />
<br />
ಮಿಂಚೆಯನ್ನು ಕಳುಹಿಸಿಸುವುದಕ್ಕೆ/ಸ್ವೀಕರಿಸುವುದಕ್ಕೆ ವಿಶೇಷ ಜ್ಞಾನದ ಅಗತ್ಯವಿಲ್ಲದೆ ಕೆಲವು ಸರಳವಾದ ಸೆಟ್ಟಿಂಗ್ ಮಾಡುವುದರ ಮೂಲಕ ಥಂಡರ್ಬರ್ಡ್ಅನ್ನು ಯಶಸ್ವಿಯಾಗಿ ಯಾವುದೆ ತೊಂದರೆಯಿಲ್ಲದೆ ಉಪಯೋಗಿಸಬಹುದು.ಮಿಂಚೆಯನ್ನು ಆಫ್ಲೈನ್/ಆನ್ಲೈನ್ ವೀಕ್ಷಿಸಲೂ ಬಹುದು!!! ಕಾನ್ಫಿಗರ್ ಮಾಡುವ ಮುನ್ನ ಈ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ, ಹೇಗೆಲ್ಲಾ ಇದನ್ನು ನಾವು ಉಪಯೋಗಿಸಿಕೊಳ್ಳಬಹುದು ಎಂಬುದನ್ನು ನೋಡೊಣ.<br />
ಸರಳವಾಗಿ ಹೇಳಬೇಕೆಂದರೆ ಈ ತಂತ್ರಾಂಶವನ್ನು ನಮ್ಮ ಜಿಮೈಲ್/ಯಹೂ ಮಿಂಚೆ ಖಾತೆಗಳಿಗೆ ಲಾಗ್-ಇನ್ ಆಗದೆಯೆ (ನಾವು ಬಳಕೆದಾರನ ಹೆಸರು ಹಾಗು ಗುಪ್ತಪದವನ್ನು ಮೊದಲ ಬಾರಿ ನೀಡಿ ಉಳಿಸಿದ್ದಲ್ಲಿ ಸ್ವಯಂಚಾಲಿತವಾಗಿ ಅದೆ ಲಾಗ್-ಇನ್ ಆಗುತ್ತದೆ, ಪ್ರತಿ ಬಾರಿಯು!!)ನಮ್ಮ ಇನ್ಬಾಕ್ಸ್ನಲ್ಲಿರುವ ಎಲ್ಲಾ ಮಿಂಚೆಗಳನ್ನು ನಮ್ಮ ಕಂಪ್ಯೂಟರ್ಗೆ ಡೌನ್ಲೋಡ್ ಮಾಡುತ್ತದೆ.ನಾವು ಜಿ-ಮೈಲ್/ಯಹೂ/ರಿಡಿಫ್/ಹಾಟ್ಮೈಲ್/.. ಇನ್ಯಾವುದೆ ಖಾತೆಯ ಮಿಂಚೆ ವೀಕ್ಷಿಸಬೇಕೆಂದರೆ ಲಾಗ್-ಇನ್ ಆಗಬೇಕು.ನಮಗೆ ಬಂದಿರುವ ಮಿಂಚೆಗಳು ಆಯಾ ವೆಬ್ಸೈಟ್ನ ಸರ್ವರ್ಗಳಲ್ಲಿ ಶೇಖರಿಸಲಾಗಿರುತ್ತದೆ ಹಾಗಾಗಿ ನಾವು ಮಿಂಚೆ ನೋಡುವ ಪ್ರತಿಬಾರಿಯು ವೆಬ್ಸೈಟ್ಗೆ ಲಾಗ್-ಇನ್ ಆಗಿ ಸರ್ವರ್ನಲ್ಲಿರುವುದನ್ನು ನೋಡಬೇಕಾಗುತ್ತದೆ.ಸರ್ವರ್ನಲ್ಲಿ ವೀಕ್ಷಿಸಲು ಮಾತ್ರ ಅವಕಾಶವಿರುತ್ತದೆ,ಕೈಗೆ ಬಂದಿದ್ದು ಬಾಯ್ಗೆ ಬರದೆ ಇರೊ ಪರಿಸ್ಥಿತಿ. ಪ್ರತಿ ಬಾರಿ ನೋಡಬೇಕೆಂದಾಗ ಪ್ರತಿ ಬಾರಿಯು ಲಾಗ್-ಇನ್ ಆಗುವ ಅನಿವಾರ್ಯತೆ ಇರುತ್ತದೆ,ಮೇಲಾಗಿ ಹಳೆಯ ಮೈಲ್ಗಳನ್ನು ನೋಡಲು ಸಹ ದತ್ತಾಂಶ ಸ್ಥಳಾಂತರಗೊಂಡು(Data Transfer)ಇಂಟರ್ನೆಟ್ ಬಳಕೆಯ ವೆಚ್ಚವು ಹೆಚ್ಚಾಗುತ್ತದೆ!! ಇದೆಲ್ಲದರಿಂದ ತಪ್ಪಿಸಿಕೊಂಡು ಜಾಣತನದಿಂದ ಜೇಬಿಗೂ ಭಾರವಾಗದಂತೆ ಮಿಂಚೆ ನಿರ್ವಹಣೆ ಮಾಡಬೇಕೆಂದರೆ ಥಂಡರ್ಬರ್ಡ್ ಉಪಯೋಗಿಸುವುದೆ ಪರಿಹಾರ,ಮೇಲಾಗಿ ಜನ ಚೇಂಜ್ ಕೇಳ್ತಾರೆ,ಆ ಕಾರಣದಿಂದಲು ಉಪಯೋಗಿಸಬಹುದು,ಒಮ್ಮೆ ಪ್ರಯತ್ನಿಸೊಕ್ಕೆ ಆಗಿರೊದೇನು?whose fathers what goes!!! :D.<br />
<br />
ತಂತ್ರಾಂಶವನ್ನು ಸ್ಥಾಪಿಸಿದ ನಂತರ ಕೆಲವು ಸರಳವಾದ ಸೆಟ್ಟಿಂಗ್ಗಳು ಮಾಡಬೇಕಾಗಿ ಬರುವುದು,ಇದು ಯಾಕಪ್ಪಾ ಅಂತಂದ್ರೆ ನಾವು ಕಳುಹಿಸುವ ಮಿಂಚೆಗಳು ಉದ್ದೇಶಿತ ವ್ಯಕ್ತಿಯ ಮಿಂಚೆ ವಿಳಾಸಕ್ಕೆ ತಲುಪಬೇಕೆಂದರೆ ಆ ವಿಳಾಸ ಸರ್ವರ್ಗೆ ಮೊದಲು ತಲುಪಬೇಕು. ಹಾಗಾಗಿ ಸರ್ವರ್ಗೆ ಈ ವಿಳಾಸ ತಲುಪಿಸಲು ಮೊದಲು ಸರ್ವರ್ನ ವಿಳಾಸ ನಮೂದಿಸುವುದು ಅನಿವಾರ್ಯ, ಇದೆ ರೀತಿಯಾಗಿ ನಮಗೆ ಉದ್ದೇಶಿತ ಮಿಂಚೆಗಳನ್ನು ಸ್ವೀಕರಿಸಲು ಸರ್ವರ್ಗೆ ಬರುವ ಮಿಂಚೆಗಳು ತಲುಪಬೇಕೆಂದರೆ ಅದಕ್ಕು ಸಹ ವಿಳಾಸವನ್ನು ನಮೂದಿಸಬೇಕು,ಇಷ್ಟೆ ಮಾಡ್ಬೇಕಾಗಿರೊದು.ನಾವು ಮಾಡಿದ್ದೇನೆಂದರೆ, ಹೊರ ಹೋಗೊ ಮಿಂಚೆಗಳಿಗೆ ದಾರಿಯಾಗುವಂತೆ ವಿಳಾಸ ಸೂಚಿಸಿದೆವು ಹಾಗೆಯೆ ಒಳಗೆ ಬರುವ ಮಿಂಚೆಗಳನ್ನು ಸ್ವೀಕರಿಸಲು ವಿಳಾಸ ಸೂಚಿಸಿದೆವು,ಇಲ್ಲಿ ವಿಳಾಸ ಮುಖ್ಯ.ಇದು ತಪ್ಪಾಯಿತೆಂದರೆ ಹೊಗಬೇಕಾಗಿರುವ ಮಿಂಚೆ ಹೊಗೊಲ್ಲ ಬರಬೇಕಾಗಿರುವ ಮಿಂಚೆ ಬರೊಲ್ಲ. <br />
ಹ್ಮ್ಮ್.. ವಿಳಾಸ ನಮೂದಿಸಬೇಕು ಅಂತ ಗೊತ್ತಾಯ್ತು ಆದ್ರೆ ಮಿಂಚೆ ಸ್ವೀಕರಿಸೊಕ್ಕೆ ಎರಡು ಬಗೆಯ ಸರ್ವರ್ಗಳಿವೆ ಅದ್ರಲ್ಲಿ ಒಂದು PoP ಮತ್ತೊಂದು IMAP, ಇವೆರಡು ಸಹ ಮಿಂಚೆಯನು ಸ್ವೀಕರಿಸಲು ಇರುವ ಸರ್ವರ್ನ ಬಗೆಗಳು ಆದ್ರೆ ಇವೆರಡರಲ್ಲಿ IMAP ಎಂಬ ಸರ್ವರ್ನ ಸೆಟ್ಟಿಂಗ್ ಮಾಡಿಕೊಳ್ಳುವುದು ಉತ್ತಮ.ಯಾಕಂತ ತಿಳ್ಕೊಳೊಕ್ಕೆ ಈ ಕೊಂಡಿಯಲ್ಲಿನ ಮಾಹಿತಿ ಓದಿ..<br />
http://email.cityu.edu.hk/faq/popimap.htm<br />
<br />
ನನಗೆ ತುಂಬಾ ಹಿಡಿಸಿದ ಅಂಶವೆಂದರೆ,ಯಾವುದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಯಾವ ಮಿಂಚೆ ನನಗೆ ಆಫ್-ಲೈನ್ ವೀಕ್ಷಣೆಗೆ ಅನಗತ್ಯವೆಂದು ನಿರ್ಧರಿಸುವ ನಿಯಂತ್ರಣಕೊಡುವ ಸೌಲಭ್ಯ.<br />
PoP ಉಪಯೋಗಿಸಿದರೆ ನಿಮ್ಮ ಇನ್-ಬಾಕ್ಸ್ನ ಮಿಂಚೆಯನ್ನೆಲ್ಲವನ್ನು (ಒಂದನ್ನು ಬಿಡದೆ)ಡೌನ್ಲೋಡ್ ಮಾಡಲು ಶುರು ಮಾಡುತ್ತದೆ, ಮೊದಲೆ SPAM ಕಾಟ ಇರೋವಾಗ ಅನಗತ್ಯ ಮಿಂಚೆಗಳನ್ನೂ ಸಹ ಡೌನ್ಲೋಡ್ ಯಾಕೆ ಮಾಡಬೇಕು?<br />
IMAPನಲ್ಲಿ ಮಿಂಚೆಯು ಸ್ವಯಂಚಾಲಿತವಾಗಿ ಡೌನ್ಲೋಡ್ ಆಗುವುದಿಲ್ಲ,ಕೇವಲ ಇಂತಹ ಮಿಂಚೆ ಬಂದಿದೆ ಎನ್ನುವುದನ್ನಷ್ಟೆ ಸೂಚಿಸುತ್ತದೆ.ನೀವು ಆ ಮಿಂಚೆಯ ಸಂದೇಶವನ್ನು ಆಫ್-ಲೈನ್ ಓದಬೇಕೆಂದರೆ ಆಗ ಡೌನ್ಲೋಡ್ ಮಾಡಬೇಕಾಗುತ್ತದೆ,ಒಮ್ಮೆ ಡೌನ್ಲೋಡ್ ಮಾಡಿದ ನಂತರ ಅದು ಹಾಗೆಯೆ ನಿಮ್ಮ ಕಂಪ್ಯೂಟರ್ನಲ್ಲಿ ಶಾಶ್ವತವಾಗಿ ಉಳಿಯುತ್ತದೆ.ಇಲ್ಲವಾದ್ರೆ ನೀವು ಆ ಮಿಂಚೆಯನ್ನು ನಿರ್ಲ್ಯಕ್ಷಿಸಿ ಮತ್ತೊಂದು ಮಿಂಚೆಯತ್ತ ಕಣ್ಣು ಹಾಯಿಸಬಹುದು.ಆಫ್-ಲೈನ್ ಇದ್ದಾಗಲು ಸಹ ಡೌನ್ಲೋಡ್ ಮಾಡಿ ಆದಮೇಲೆ ಮರು ವೀಕ್ಷಿಸಬಹುದು. ಇಷ್ಟೆಲ್ಲ ಮಾಹಿತಿಯಿಟ್ಟುಕೊಂಡು ಥಂಡರ್ಬರ್ಡ್ಅನ್ನು ಜಿಮೈಲ್ನ ಇನ್-ಬಾಕ್ಸ್ನಿಂದ ಮಿಂಚೆಗಳನ್ನು ಕಂಪ್ಯೂಟರ್ನಲ್ಲಿ ಶೇಖರಿಸಲು ಏನು ಮಾಡಬೇಕೆಂದು ನೋಡೋಣ.<br />
<br />
ಈ ರೀತಿ ಮಿಂಚೆ ಸಾಧನ ಬಳಸಿ ಮಿಂಚೆಗಳನ್ನು ಆಫ್ಲೈನ್ ವೀಕ್ಷಿಸಲು,ನಿಮಗೆ ಮಿಂಚೆ ಸೇವೆ ನೀಡುವವರಿಗೆ ದುಡ್ಡು ತೆತ್ತು ಅವರ ಚಂದಾದಾರರಾಗಬೇಕಾಗುತ್ತದೆ ಆದರೆ ಭಾರತದಲ್ಲಿ ಜಿಮೈಲ್ ಒಂದರಲ್ಲಿ ಮಾತ್ರ ಈ ಸೇವೆ ಉಚಿತ ಹಾಗಾಗಿ ಜಿಮೈಲ್ ಕಾನ್ಫಿಗರ್ ಮಾಡುವುದನ್ನು ನೋಡೋಣ.<br />
ಮೊದಲಿಗೆ ಜಿಮೈಲ್ನ ಇನ್ಬಾಕ್ಸ್ಗೆ ಲಾಗ್-ಇನ್ ಆಗಿ ಅಲ್ಲಿ ಸೆಟ್ಟಿಂಗ್ಸ್ಗೆ ಹೋಗಿ,Forwarding and POP/IMAP ಆಯ್ಕೆ ಮಾಡಿ IMAPಎಂಬುದನ್ನು ಶಕ್ತಗೊಳಿಸಿ,ಬದಲಾವಣೆಗಳನ್ನು ಉಳಿಸಿ.ಲಾಗ್ ಔಟ್ ಆಗಿ..<br />
ಇದಾದ ನಂತರ ಥಂಡರ್ಬರ್ಡ್ ಸ್ಥಾಪಿಸಲು ಶುರು ಮಾಡಿ.(ಆನ್-ಲೈನ್ ಆಗುವ ಅವಶ್ಯಕತೆಯಿಲ್ಲ)<br />
ಕಾಣುವ ಎಲ್ಲಾ ಆಯ್ಕೆಗಳಿಗು "ಮುಂದಿನದು"ಎಂಬ ಗುಂಡಿ ಒತ್ತಿ. <br />
೧."ಹೊಸ ಖಾತೆ ಸ್ಥಾಪನೆ"ಎಂಬ ವಿಂಡೊನಲ್ಲಿ "ಮಿಂಚೆ ಖಾತೆ"ಎಂಬುದನ್ನು ಆಯ್ಕೆ ಮಾಡಿ"ಮುಂದಿನದು"ಎಂಬ ಗುಂಡಿ ಒತ್ತಿ.<br />
೨.ಸ್ವವಿವರ ನಮೂದಿಸಬೇಕಾದ "ಗುರುತು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ಹಾಗು ಮಿಂಚೆ ವಿಳಾಸ ನಮೂದಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.<br />
೩."ಸರ್ವರ್ ಮಾಹಿತಿ"ಎಂಬ ವಿಂಡೊನಲ್ಲಿ ಮೊದಲು IMAP ಎನ್ನುವುದನ್ನು ಆಯ್ಕೆ ಮಾಡಿ ನಂತರ ಒಳಹರಿವನ್ನು ನಿಭಾಯಿಸುವ ಸರ್ವರ್ನ ಹೆಸರನ್ನು imap.gmail.com ಎಂದು ನಮೂದಿಸಿ.<br />
೨.ಅದೆ ವಿಂಡೊವಿನಲ್ಲಿ ಹೊರಹರಿವನ್ನು ನಿಭಾಯಿಸುವ ಸರ್ವರ್ನ ಹೆಸರನ್ನು smtp.gmail.com ಎಂದು ನಮೂದಿಸಿ "ಮುಂದಿನದು"ಎಂಬ ಗುಂಡಿ ಒತ್ತಿ.<br />
೪."ಬಳಕೆದಾರನ ಹೆಸರುಗಳು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ನಮೂದಿಸಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.<br />
೫.ಕೊನೆಯದಾಗಿ "ಖಾತೆಯ ಹೆಸರು"ಎಂಬ ವಿಂಡೊನಲ್ಲಿ ಈ ಖಾತೆಗೆ ಹೆಸರೊಂದನ್ನು ಸೂಚಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ ಮುಗಿಸಿ.<br />
ಇಷ್ಟು ಮಾಡಿದಾಗ,ನೀವು ಸೂಚಿಸಿದಂತೆ ನೀವಿಟ್ಟ ಹೆಸರಿನೊಂದಿಗೆ ನಿಮ್ಮ ಹೊಸ ಖಾತೆಯು ಸೃಷ್ಟಿಯಾಗಿದ್ದನ್ನು "ಖಾತೆ ಸೆಟ್ಟಿಂಗ್ಗಳು"ಎಂದು ಕಾಣುವ ವಿಂಡೊನ ಎಡಭಾಗದಲ್ಲಿ ನೋಡಬಹುದು.<br />
ಇದೆ ರೀತಿಯಾಗಿ ಮತ್ತೊಂದು ಜಿ-ಮೈಲ್ ಖಾತೆಯ ಮಿಂಚೆಗಳನ್ನು ಸಹ ವೀಕ್ಷಿಸಲು ಹೊಸ ಖಾತೆಯನ್ನು ಸೃಷ್ಟಿಸಬಹುದು.ಮತ್ತೊಂದು ಖಾತೆಯನ್ನು ಸೇರಿಸಲು... <br />
<br />
೧.ಸಾಧನ->ಖಾತೆಯ ಸೆಟ್ಟಿಂಗ್ಗಳು ಇದನ್ನು ಕ್ಲಿಕ್ಕಿಸಿ.<br />
೨.ಎಡ ಭಾಗದಲ್ಲಿ ಕಾಣುವ "ಖಾತೆ ಸೇರಿಸಿ"ಎನ್ನುವ ಗುಂಡಿಯನ್ನು ಒತ್ತಿ.<br />
೩."ಖಾತೆ ಜಾದುಗಾರ"ಎಂಬುದು ಶುರುವಾಗಿ ಖಾತೆಯ ಸೆಟ್ಟಿಂಗ್ಗಳು ಎಂಬ ವಿಂಡೊ ಪುಟಿಯುತ್ತದೆ.<br />
೪.ಈ ವಿಂಡೊನಲ್ಲಿ "ಮಿಂಚೆ ಖಾತೆ"ಎನ್ನುವುದನ್ನು ಆಯ್ಕೆ ಮಾಡಿ"ಮುಂದಿನದು"ಎಂಬ ಗುಂಡಿ ಒತ್ತಿ.<br />
೫.ಸ್ವವಿವರ ನಮೂದಿಸಬೇಕಾದ "ಗುರುತು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ಹಾಗು ಮಿಂಚೆ ವಿಳಾಸ ನಮೂದಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.<br />
೬."ಸರ್ವರ್ ಮಾಹಿತಿ"ಎಂಬ ವಿಂಡೊನಲ್ಲಿ ಮೊದಲು IMAP ಎನ್ನುವುದನ್ನು ಆಯ್ಕೆ ಮಾಡಿ ನಂತರ ಒಳಹರಿವನ್ನು ನಿಭಾಯಿಸುವ ಸರ್ವರ್ನ ಹೆಸರನ್ನು imap.gmail.com ಎಂದು ನಮೂದಿಸಿ.<br />
೭.Use Global Inbox ಎಂಬುದನ್ನು ಟಿಕ್ ಮಾಡಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.<br />
೮."ಬಳಕೆದಾರನ ಹೆಸರುಗಳು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ನಮೂದಿಸಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.<br />
೯.ಕೊನೆಯದಾಗಿ "ಖಾತೆಯ ಹೆಸರು"ಎಂಬ ವಿಂಡೊನಲ್ಲಿ ಈ ಖಾತೆಗೆ ಹೆಸರೊಂದನ್ನು ಸೂಚಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ ಮುಗಿಸಿ.<br />
೧೦.ಈಗ ನಿಮಗೆ ಇಲ್ಲಿಯವರೆಗು ತುಂಬಿಸಿದ ಮಾಹಿತಿ "ಶುಭಾಶಯ"ಎನ್ನುವ ವಿಂಡೊನಲ್ಲಿ ಕಂಡು ಬರುತ್ತದೆ, ಯಾವುದಾದರು ಮಾಹಿತಿಯನ್ನು ಬದಲಾಯಿಸಬೇಕೆಂದಲ್ಲಿ "ಹಿಂದಿನದು"ಎಂಬ ಗುಂಡಿಯನ್ನು ಒತ್ತಿ ಬದಲಾಯಿಸಬಹುದು. ಮಾಹಿತಿ ಪರಿಶೀಲಿಸಿಯಾದ ಮೇಲೆ "ಮುಗಿಸು"ಎಂಬ ಗುಂಡಿ ಒತ್ತಿ.<br />
<br />
ಈಗ ಕಾಣುವ "ಖಾತೆ ಸೆಟ್ಟಿಂಗ್"ಎನ್ನುವ ವಿಂಡೊನಲ್ಲಿ ಸೇರಿಸಿದ ಖಾತೆಯ ವಿವರಗಳನ್ನು ಕಾಣಬಹುದು.ಇತರೆ ಸೆಟ್ಟಿಂಗ್ ಮಾಡಲು.. <br />
೧.ವಿಂಡೊನ ಎಡಭಾಗದಲ್ಲಿ ಕಾಣುವ "ಸರ್ವರ್ ಸೆಟ್ಟಿಂಗ್" ಎಂಬುದರ ಮೇಲೆ ಒಮ್ಮೆ ಕ್ಲಿಕ್ ಮಾಡಿ.<br />
೨.ಬಲ ಭಾಗದಲ್ಲಿ ನಿಮಗೆ "ಖಾತೆ ಸೆಟ್ಟಿಂಗ್"ನ ಸಂಪೂರ್ಣ ಮಾಹಿತಿ ಕಾಣಸಿಗುತ್ತದೆ.ಇದರಲ್ಲಿ "ಸರ್ವರ್ ಹೆಸರು" ಎಂಬ ಬಾಕ್ಸ್ ಪಕ್ಕ "ಪೋರ್ಟ್" ಎಂಬುದರಲ್ಲಿ ಮೂಲಭೂತವಾದ ಯಾವುದೆ ಸಂಖ್ಯೆಯಿದ್ದಲ್ಲಿ ಅದನ್ನು ಅಳಿಸಿ ೯೯೩ ಎಂದು ನಮೂದಿಸಿ.<br />
೩.ಕೆಳಗೆ ಕಾಣುವ "ರಕ್ಷಣೆಯ ಸೆಟ್ಟಿಂಗ್"ಎಂಬುದರಲ್ಲಿ SSL ಎಂಬುದನ್ನು ಆಯ್ಕೆ ಮಾಡಿ. <br />
೪."ಸರ್ವರ್ ಸೆಟ್ಟಿಂಗ್ಗಳು" ಎಂಬುದರಲ್ಲಿ,ಹೊಸ ಮಿಂಚೆಗೋಸ್ಕರ ಮೊದಲ ಬಾರಿಗೆ ಶುರುವಾದ ನಂತರ ಹುಡುಕುವ ಆಯ್ಕೆಯನ್ನು ಟಿಕ್ ಮಾಡಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಮಿಂಚೆಗೋಸ್ಕರ ಹುಡುಕುವ ಸಮಯವನ್ನು ನಿಗದಿ ಪಡಿಸಿ ಮಿಕ್ಕ ಆಯ್ಕೆಗಳನ್ನು ಹಾಗೆಯೆ ಬಿಟ್ಟುಬಿಡಿ.<br />
೫.ಇದಾದ ನಂತರ ಎಡಭಾಗದಲ್ಲಿ "ರಚಿಸುವುದು ಹಾಗು ಉತ್ತರಿಸುವ ಬಗೆ"ಏಂಬುದರ ಮೇಲೆ ಕ್ಲಿಕ್ ಮಾಡಿ.<br />
ರಚಿಸುವ/ಉತ್ತರಿಸುವ ಸಂದೇಶಗಳು HTMLನಲ್ಲಿರಬೇಕೆ ಅಥವಾ ಸರಳವಾದ ಅಕ್ಷರ ರೀತಿಯದ್ದಾಗಿರಬೇಕೆ ಎಂಬುದನ್ನು ನಿರ್ಧರಿಸಿ. <br />
HTML - ೧.ಈ ರೀತಿಯದ್ದು ಹೆಚ್ಚು ದತ್ತಾಂಶವನ್ನು ಹಿಡಿದುಕೊಂಡಿರುತ್ತದೆ (ಹೆಚ್ಚಿನ ದತ್ತಂಶ ಹೆಚ್ಚಿನ ದುಡ್ಡು :))<br />
೨.ನಿಧಾನವಾದ ಇಂಟರ್ನೆಟ್ ಸಂಪರ್ಕಗಳಿಗೆ ಸೂಕ್ತವಲ್ಲ.<br />
೩.ಮಿಂಚೆಗಳನ್ನು ಸುಂದರವಾಗಿ ರಚಿಸಬಹುದು. <br />
ಸರಳಾಕ್ಷರ-೧.ಸಂದೇಶಕ್ಕೆ ಸಂಬಂಧಪಟ್ಟದ್ದನ್ನು ಬಿಟ್ಟು ಬೇರೇನು ದತ್ತಾಂಶವನ್ನು ಹೊಂದಿರುವುದಿಲ್ಲ (ಕಮ್ಮಿ ದತ್ತಾಂಶ ಕಮ್ಮಿ ದುಡ್ಡು :)) <br />
೨.ನಿಧಾನವಾದ ಇಂಟರ್ನೆಟ್ ಸಂಪರ್ಕಗಳಿಗೆ ಉಪಯುಕ್ತ. <br />
೩.ಮಿಂಚೆಗಳು ನೋಟ್ಪ್ಯಾಡ್ ಕಡತದಂತೆ ಅಲಂಕಾರವಿಲ್ಲದೆ ಕಾಣುತ್ತದೆ.<br />
<br />
ಸಂದೇಶಗಳನ್ನು ರಚಿಸಲು HTMLಬೇಕೆನಿಸಿದಲ್ಲಿ "ಸಂದೇಶಗಳನ್ನು HTMLನಲ್ಲಿ ರಚಿಸು" ಎಂಬುದನ್ನು ಟಿಕ್ ಮಾಡಿ(ಮೊದಲಿಗೆಯೆ ಆಗಿರುತ್ತದೆ) HTMLಬೇಡದೆ ಇದ್ದಲ್ಲಿ ಆ ಟಿಕ್ಅನ್ನು ತೆಗೆದು ಬಿಡಿ. ಉತ್ತರಿಸುವಾಗ ಹಿಂದಿನ ಸಂದೇಶವನ್ನು,ರಚಿಸುತ್ತಿರುವ ಮಿಂಚೆಯ ಸಂದೇಶದ ಕೆಳಭಾಗದಲ್ಲಿ ಅಥವಾ ಮೇಲ್ಭಾಗದಲ್ಲಿ ಸ್ವಯಂಉಲ್ಲೇಖ ಮಾಡಬೇಕೆ ಎಂಬುದನ್ನು ನಿರ್ಧರಿಸಿ."ಪ್ರತ್ಯುತ್ತರವನ್ನು ಸಂದೇಶದ ಮೇಲ್ಭಾಗದಲ್ಲಿ ಶುರುಮಾಡು" ಎನ್ನುವುದನ್ನು ಆಯ್ಕೆ ಮಾಡಿ ಅಥವಾ ಹಿಂದಿನ ಸಂದೇಶಗಳಿಗೆ ಉತ್ತರಿಸುವಾಗ ಹಳೆಯ ಸಂದೇಶವು ಬೇಡದೆ ಇದ್ದಲ್ಲಿ ಈ ಆಯ್ಕೆಯ ಟಿಕ್ ಗುರುತನ್ನು ತೆಗೆಯಿರಿ.<br />
೬."ಜಂಕ್ ಸೆಟ್ಟಿಂಗ್ಗಳು"ಎಂಬುದರಲ್ಲಿ, ಹೊಂದುಕೊಳ್ಳುವಂತಹ ಜಂಕ್ ಮಿಂಚೆ ನಿಯಂತ್ರಣಗಳನ್ನು ಶಕ್ತಗೊಳಿಸು ಎನ್ನುವುದರ ಟಿಕ್ ಗುರುತನ್ನು ತೆಗೆಯಿರಿ. <br />
ಇಷ್ಟೆಲ್ಲಾ ಮಾಡಿದ ನಂತರ, ಅದೆ ವಿಂಡೊನ ಎಡ ಭಾಗದಲ್ಲಿ ಕಾಣುವ ಹೊರಹರಿವಿನ ಸರ್ವರ್(SMTP)ಎಂಬುದರ ಮೇಲೆ ಒಮ್ಮೆ ಕ್ಲಿಕ್ ಮಾಡಿ.<br />
೧.ನೀವು ಮೊದಲೆ ತಿಳಿಸಿದ "ಹೊರಹರಿವಿನ ಸರ್ವರ್"ಪಟ್ಟಿಯಾಗಿರುತ್ತದೆ. ಈಗ ಅದನ್ನು ಆಯ್ಕೆ ಮಾಡಿ(ಒಂದಕ್ಕಿಂತಾ ಹೆಚ್ಚಿದಲ್ಲಿ)"ಸಂಕಲಿಸು" ಎಂಬ ಗುಂಡಿಯನ್ನು ಒತ್ತಿರಿ. <br />
೨.SMTPಸರ್ವರ್ ಎಂಬ ವಿಂಡೊ ಪುಟಿಯುತ್ತದೆ, ಅದರೊಳಗೆ "ಸುರಕ್ಷಿತವಾದ ಸಂಪರ್ಕವನ್ನು ಬಳಸು" ಎಂಬ ಆಯ್ಕೆಯಲ್ಲಿ TLS ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. ಬೇರೆ ಆಯ್ಕೆಗಳನ್ನು ಬದಲಾಯಿಸಬೇಡಿ. ನಂತರ "ಸರಿ"ಎಂಬ ಗುಂಡಿಯನ್ನು ಒತ್ತಿರಿ.<br />
ಈಗ "ಖಾತೆ ಸೆಟ್ಟಿಂಗ್ಗಳು" ಎಂಬ ವಿಂಡೊನಲ್ಲಿರುವ "ಸರಿ"ಎಂಬ ಗುಂಡಿಯನ್ನು ಒತ್ತಿದರೆ ಕಥೆ ಮುಗಿದಂತೆ ನೀವು ಥಂಡರ್ಬರ್ಡ್ಅನ್ನು ತಡೆಯಿಲ್ಲದೆ ಬಳಸಬಹುದು.<br />
ಥಂಡರ್ಬರ್ಡ್ಅನ್ನು ಒಮ್ಮೆ ಮುಚ್ಚಿ ಆನಂತರ ಪುನ: ಶುರು ಮಾಡಿರಿ. ಶುರುಮಾಡಿದಾಕ್ಷಣ ಅದು ನಿಮಗೆ ಎರಡು ಆಯ್ಕೆಯನ್ನು ಕೊಡುತ್ತದೆ<br />
೧.ಆನ್-ಲೈನ್ ಆಗಿ ಕೆಲಸ ಮಾಡುವುದು<br />
೨.ಆಫ್-ಲೈನ್ ಆಗಿ ಕೆಲಸ ಮಾಡುವುದು <br />
<br />
ಮೊದಲನೆಯ ಆಯ್ಕೆ:ಆನ್-ಲೈನ್ ಆಗಿ ಕೆಲಸ ಮಾಡುವುದು<br />
ಈ ಆಯ್ಕೆಯನ್ನು ಮಾಡಿ ಥಂಡರ್ಬರ್ಡ್ ಶುರು ಮಾಡಿದೊಡನೆಯೆ ಥಂಡರ್ಬರ್ಡ್ ನಿಮ್ಮ ಜಿಮೈಲ್ ಖಾತೆಯನ್ನು ಸಂಪರ್ಕಿಸುತ್ತದೆ.ಸಂಪರ್ಕ ಸೃಷ್ಟಿಯಾದ ಮೇಲೆ ಬಳಕೆದಾರನ ಹೆಸರಿನ ಗುಪ್ತಪದವನ್ನು ನಮೂದಿಸಬೇಕಾಗುತ್ತದೆ.ಗುಪ್ತಪದವನ್ನು ಕಂಪ್ಯೂಟರನಲ್ಲಿ ಶೇಖರಿಸದಿರುವುದೆ ಲೇಸು.ಮೊದಲಿಗೆ ನಿಮ್ಮ ಜಿಮೈಲ್ನಲ್ಲಿರುವ ಎಲ್ಲಾ ಫೋಲ್ಡರ್ಗಳು ಒಂದಾದ ಮೇಲೊಂದರಂತೆ ಥಂಡರ್ಬರ್ಡ್ನ ಇನ್-ಬಾಕ್ಸ್ನಲ್ಲಿ ನಕಲುಗೊಳ್ಳುತ್ತವೆ.ಫೋಲ್ಡರ್ಗಳು ಸೃಷ್ಟಿಯಾದ ನಂತರ ಎಲ್ಲಾ ಮಿಂಚಿಗಳು ನಕಲಾಗುತ್ತವೆ ಆದರೆ ಯಾವುದು ಒಂದು ಮಿಂಚೆ ಸಹ ನಿಮ್ಮ ಕಂಪ್ಯೂಟರ್ನಲ್ಲಿ ಶೇಖರಿಸಲಾಗಿರುವುದಿಲ್ಲ.ಆನ್-ಲೈನ್ ಇದ್ದು ಕೊಂಡು ಮಾಡುವ ಎಲ್ಲಾ ಕಾರ್ಯಗಳು ಜಿಮೈಲ್ನ ಮಿಂಚೆ ಖಾತೆಗೆ ಲಾಗ್-ಇನ್ ಆಗಿ ಮಾಡಿದಂತೆಯೆ ಆಗಿರುತ್ತದೆ.ಒಮ್ಮೆ ನೀವು ಆಫ್-ಲೈನ್ ಆದರೆ ಕಂಡು ಬರುವ ಎಲ್ಲಾ ಸಂದೇಶಗಳ ಮಾಹಿತಿ ಮಾಯವಾಗುತ್ತದೆ (ಡೌನ್ಲೋಡ್ ಮಾಡದೆ ಇದ್ದವು ಮಾತ್ರ).ನಿಮಗೆ ಬೇಕಾಗಿರುವ ಮಿಂಚೆಯನ್ನು ಅಂತರ್ಜಾಲ ಸಂಪರ್ಕವಿಲ್ಲದಾಗಲು ನೋಡಬೇಕೆಂದರೆ ಡೌನ್ಲೋಡ್ ಮಾಡಬೇಕು.ಇದಕ್ಕಾಗಿ ನೀವು ಮೊದಲು ctrlಗುಂಡಿಯನ್ನು ಒತ್ತಿಹಿಡಿದು ನಿಮಗಿಷ್ಟಬಂದ ಮಿಂಚೆಗಳ ಮೇಲೆ ಒಮ್ಮೆ ಕ್ಲಿಕ್ಕಿಸುತ್ತಾ ಆಯ್ಕೆ ಮಾಡಬೇಕು.ನಂತರ ಕಡತ ಮೆನ್ಯುಗೆ ಹೋಗಿ ಅಲ್ಲಿ ಅಫ್-ಲೈನ್ ಎಂಬುದನ್ನು ಕ್ಲಿಕ್ಕಿಸಿದಾಗ ಪುಟಿಯುವ ಆಯ್ಕೆಪಟ್ಟಿಯಲ್ಲಿ ಕೊನೆಯದಾಗಿರುವ "ಆಯ್ಕೆ ಮಾಡಿದ ಸಂದೇಶಗಳನ್ನು ಪಡೆ"ಎಂಬುದನ್ನು ಕ್ಲಿಕ್ಕಿಸಿ.ಆಗ ಆಯ್ಕೆ ಮಾಡಲಾದ ಮಿಂಚೆಗಳನ್ನು ಆಫ್-ಲೈನ್ ವೀಕ್ಷಣೆಗಾಗಿ ಕಂಪ್ಯೂಟರ್ನಲ್ಲಿ ಶೇಖರಿಸಲಾಗುತ್ತದೆ.<br />
ಥಂಡರ್ಬರ್ಡ್ನ ಇನ್-ಬಾಕ್ಸ್ನ ಮೊಲ ವಿಂಡೊನ ಮೇಲ್ಭಾಗದಲ್ಲಿ ಕಾಣುವ "ಮಿಂಚೆಯನ್ನು ಪಡೆ"ಎನ್ನುವ ಗುಂಡಿ ಒತ್ತಿದರೆ,ಥಂಡರ್ಬರ್ಡ್ ನಿಮ್ಮ ಜಿಮೈಲ್ ಖಾತೆಯನ್ನು ಸಂಪರ್ಕಿಸಿ ಓದದಿರುವ(ಬೇಕಾಗಿರೊದು ಬೇಡದೆ ಇರೊ ಎಲ್ಲಾ)ಮಿಂಚೆಗಳನ್ನು ಡೌನ್ಲೋಡ್ ಅನಗತ್ಯವಾಗಿ ಮಾಡುತ್ತದೆ. ಹಾಗಾಗಿ ಮೊದಲು ಆನ್-ಲೈನ್ ಆಗಿ, ಯಾವ ಯಾವ ಮಿಂಚೆ ಬಂದಿದೆ ಎಂದು ವೀಕ್ಷಿಸಿ, ಬೇಡದೆ ಇರುವ ಮಿಂಚೆಗಳನ್ನು ಅಳಿಸಿ(ಒಮ್ಮೆ ಅಳಿಸಿದ ನಂತರ ಅವು ಮತ್ತೆ ಕಾಣಬರುವುದಿಲ್ಲ)ಬೇಕಾಗಿರುವ ಮಿಂಚೆಗಳಲ್ಲಿ ಯಾವುದನ್ನು ಆಫ್-ಲೈನ್ ವೀಕ್ಷಣೆಗೆ ಶೇಖರಿಸಬೇಕೆಂದು ಗುರುತಿಸಿ ಅಂಥಹವನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಿ ಮಿಕ್ಕವನು ಹಾಗೆಯೆ ಬಿಡಿ,ಇವುಗಳು ಆಫ್-ಲೈನ್ ಆಗಿದ್ದಾಗ ಕಂಡುಬರುವುದಿಲ್ಲ. <br />
<br />
ಎರಡನೆಯ ಆಯ್ಕೆ:ಆಫ್-ಲೈನ್ ಆಗಿ ಕೆಲಸ ಮಾಡುವುದು<br />
ಈ ಆಯ್ಕೆಯಲ್ಲಿ ನೀವು ಆನ್-ಲೈನ್ ಆಗಿದ್ದಾಗ ಡೌನ್ಲೋಡ್ ಮಾಡಿ ಉಳಿಸಿದಂತಹ ಮಿಂಚೆಗಳನ್ನು ಮಾತ್ರ ವೀಕ್ಷಿಸಲು ಉಪಯುಕ್ತ!!.<br />
ಥಂಡರ್ಬರ್ಡ್ನ ಮೆನ್ಯುವಿನಲ್ಲಿ ಕಡತ->ಆಫ್-ಲೈನ್ ಇಲ್ಲಿಗೆ ಹೋಗಿ ಆಫ್-ಲೈನ್ ಸೆಟ್ಟಿಂಗ್ ಎಂಬುದನ್ನು ಕ್ಲಿಕ್ಕಿಸಿ.<br />
ಇಲ್ಲಿ ಆಫ್-ಲೈನ್ ಎನ್ನುವ ವಿಭಾಗದಲ್ಲಿರುವ ಎರಡೂ ಚೆಕ್ ಬಾಕ್ಸ್ನಲ್ಲಿ ಟಿಕ್ ಮಾಡಿ ಗುರುತಿ ಮಾಡಿ ನಂತರ ಸರಿ ಎನ್ನುವುದನ್ನು ಕ್ಲಿಕ್ಕಿಸಿ,ವಿಂಡೊ ತಾನಾಗಿಯೆ ಮುಚ್ಚಿಕೊಳ್ಳುತ್ತದೆ.<br />
ಆಫ್-ಲೈನ್ ಆದಾಗ ಎರಡು ಕೆಲಸ ಮಾಡಲು ಸಾಧ್ಯ,ಒಂದು ಹೊಸ ಮಿಂಚೆಗಳನ್ನು ರಚಿಸಬಹುದು ಮತ್ತೊಂದು ಆಫ್-ಲೈನ್ ಸಂದೇಶ ಓದಬಹುದು.ಹೊಸದಾಗಿ ರಚಿಸಿದ ಮಿಂಚೆಯನ್ನು "ಡ್ರಾಫ್ಟ್"ಆಗಿ ಉಳಿಸಿಕೊಂಡು ಆನ್-ಲೈನ್ ಆದ ಮರುಕ್ಷಣವೆ ಕಳುಹಿಸಿ ಆಫ್-ಲೈನ್ ಆಗಿ ಜಿಪುಣತನವನ್ನು ಮೆರೆಯಬಹುದು :D ಏಕೆಂದರೆ ಆನ್-ಲೈನ್ ಆಗಿದ್ದುಕೊಂಡು ಸಂದೇಶವನ್ನು ರಚಿಸಲು ತುಂಬಾ ಸಮಯ ಹಿಡಿಯುತ್ತದೆ,ಹೀಗಿದ್ದಾಗ ದತ್ತಾಂಶವು ಸ್ಥಳಾಂತರಗೊಂಡು ಅನವಶ್ಯಕವಾಗಿ ಅಮೂಲ್ಯವಾದ ಅಂತರ್ಜಾಲ ಸಮಯ/"ಖರ್ಚಾಗುವ ದತ್ತಾಂಶ"ವನ್ನು ವ್ಯಯವಾಗದಂತೆ ತಡೆಗಟ್ಟಬಹುದು. <br />
ಒಟ್ಟಿನಲ್ಲಿ ಥಂಡರ್ಬರ್ಡ್ನೊಂದಿಗೆ ಜಿ-ಮೈಲ್ ಖಾತೆಯ ಮಿಂಚೆ ನಿರ್ವಹಣೆಯನ್ನು ಯೆಂಜಾಯಿಸಬಹುದು :).<br />
<br />
ವಿ.ಸೂ:ನೀವು ಬಳಸುವ ಕಂಪ್ಯೂಟರ್ನಲ್ಲಿ ನಿಮ್ಮದು ಅಂತಾನೆ ಪ್ರತ್ಯೇಕ ಲಾಗ್-ಇನ್ ಇದ್ದಲ್ಲಿ ನಿಮ್ಮ ಮಿಂಚೆಗಳ ಗೌಪ್ಯತೆ ಕಾಪಾಡಬಹುದು.ಕಂಪ್ಯೂಟರ್ ಬಳಸುವ ಎಲ್ಲರೂ ಸಹ ಒಂದೆ ಲಾಗ್-ಇನ್ ಬಳಸಿದಲ್ಲಿ ನಿಮ್ಮ ಮಿಂಚೆಗಳ ಗೌಪ್ಯತೆ ಹರಾಜಾಗಿ ಹೋಗುತ್ತೆ. ಹುಷಾರು!!! <br />
<br />
ಇನ್ನು ತಡ ಯಾಕೆ ಹಕ್ಕಿಯನ್ನು ಗುಡುಗಿಸಿ :)<br />
<br />
ಸಾಧನ - tool<br />
ಮಿಂಚೆ - email<br />
ತಂತ್ರಾಂಶ - software<br />
ಸ್ಥಾಪನಾಕಡತ - setup file<br />
ಬಳಕೆದಾರನ ಹೆಸರು-user name<br />
ಗುಪ್ತಪದ-password<br />
ಮಿಂಚೆ ವಿಳಾಸ-email id<br />
ಮಿಂಚೆ ಸಾಧನ -email client<br />
ಶಕ್ತಗೊಳಿಸಿ-enable<br />
ಮುಂದಿನದು-next<br />
ಗುಂಡಿ-button<br />
ಹೊಸ ಖಾತೆ ಸ್ಥಾಪನೆ-new account setup<br />
ಮಿಂಚೆ ಖಾತೆ -email account<br />
ಗುರುತು-identity<br />
ಸರ್ವರ್ ಮಾಹಿತಿ-server information<br />
ಒಳಹರಿವು-incoming<br />
ಹೊರಹರಿವು-outgoing<br />
ಬಳಕೆದಾರನ ಹೆಸರುಗಳು-usernames<br />
ಖಾತೆಯ ಹೆಸರು-account name<br />
ಖಾತೆ ಸೆಟ್ಟಿಂಗ್ಗಳು-account settings<br />
ಖಾತೆ ಸೇರಿಸಿ-add account<br />
ಖಾತೆ ಜಾದುಗಾರ-account wizard<br />
ಹಿಂದಿನದು-back<br />
ಮೂಲಭೂತವಾದ-default<br />
ರಕ್ಷಣೆಯ ಸೆಟ್ಟಿಂಗ್-security setting<br />
ಸರಳಾಕ್ಷರ-plain text<br />
ದತ್ತಾಂಶ-Data<br />
ಹೊಂದುಕೊಳ್ಳುವಂತಹ -adapative<br />
ನಿಯಂತ್ರಣ-controls<br />
ಸುರಕ್ಷಿತವಾದ ಸಂಪರ್ಕವನ್ನು ಬಳಸು-use secure connection<br />
ನಕಲು-copy<br />
ಆಯ್ಕೆ ಮಾಡಿದ ಸಂದೇಶಗಳನ್ನು ಪಡೆ-get selected messages<br />
<br />
--ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-8947365666441706262010-06-29T23:01:00.002-07:002010-06-29T23:01:56.669-07:00ಅಳುತ್ತಿರುವ ನಿಮ್ಮ ವಿಂಡೊಸ್ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಕೊನೆ ಕಂತುon April 29, 2009 <br />
<br />
ಮೂರಕ್ಕೆ ಮುಕ್ತಾಯ ಮಾಡೊಣ ಅಂತ ಮಿಕ್ಕ ಎಲ್ಲಾ ಟ್ವೀಕ್ಗಳನ್ನು ಇದರಲ್ಲೆ ತುರುಕ್ತಿದೀನಿ.<br />
ಈ ಲೇಖನದ ಟ್ವೀಕ್ಗಳನ್ನು ಮಾಡುವ ಮೊದಲು ನಾವು "ಸಿಸ್ಟಂ ರೆಜಿಸ್ಟರ್ಸ್" ಬಗೆ ತಿಳ್ಕೊಂಡು ಮುಂದುವರಿಯೋದು ಅತ್ಯಾವಶ್ಯಕ.<br />
"ಸಿಸ್ಟಂ ರೆಜಿಸ್ಟರ್ಸ್"ಅನ್ನೋದು ವಿಂಡೊಸ್ನ ತುಂಬಾ ಆಂತರಿಕ ವಿಷಯ, ತಿಳಿಯದೆ ಕೈ ಹಾಕಿ ಕುಲಗೆಡಿಸಿದ್ರೆ ವಿಂಡೊಸ್ಅನ್ನು ಮತ್ತೊಮ್ಮೆ ಸ್ಥಾಪಿಸಬೇಕಾಗುತ್ತದೆ ಹಾಗಾಗಿ ಎಚ್ಚರ!!!<br />
ನಿಮ್ಮ ಸಿಸ್ಟಂನಲ್ಲಿ ಸ್ಥಾಪಿಸಿ/ಅನುಸ್ಥಾಪಿಸುವ ಪ್ರತಿ ಒಂದು ತಂತ್ರಾಶದ ಆಯ್ದ ಕೆಲವು ಮಾಹಿತಿಯನ್ನು "ಸಿಸ್ಟಂ ರೆಜಿಸ್ಟರ್ಸ್"ಅನ್ನೊ ಒಂದು ವಿಭಾಗದಲ್ಲಿ ವಿಂಡೊಸ್ ಕಲೆಹಾಕಿರುತ್ತದೆ.ಪ್ರತಿ ತಂತ್ರಾಶವು ಹೇಗೆ ಶುರು ಆಗಬೇಕು,ಅವುಗಳ ಗುಣ ಧರ್ಮಗಳ ಮಾಹಿತಿ,ಹೀಗೆಯೆ ಅನೇಕ ಮಾಹಿತಿ ಇರುತ್ತದೆ. ಹಾಗಾಗಿ ನಾವು ಇಲ್ಲಿ ಮಾಡುವ ಬದಲಾವಣೆಗಳು ನೇರವಾಗಿ ತಂತ್ರಾಶ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ.ಇಲ್ಲಿ ಕೆಲಸ ಕೆಟ್ಟರೆ ಅಲ್ಲೂ ಸಹ ಕೆಟ್ಟಿತು ಅಂದುಕೊಳ್ಳಿ, ಹಾಗಾಗಿ ಬದಲಾವಣೆಯನ್ನು ತಿಳಿದು ಜಾಗೃತೆಯಿಂದ ಸೂಚಿಸಿದಷ್ಟೆ ಮಾಡಿ.<br />
<br />
ವಿಂಡೋಸ್ನ ಸಿಸ್ಟಂ ಕಡತಗಳೆ ಕೈ ಕೊಟ್ಟಲ್ಲಿ ಮರುಸ್ಥಾಪನಾ ಬಿಂದು ಉಪಯೋಗಿಸಿ ಹೇಗೆ ಕಾರ್ಯಶೀಲತೆಯನ್ನು ಮರಳಿ ಪಡೆಯಬಹುದೊ ಹಾಗೆಯೆ "ಸಿಸ್ಟಂ ರೆಜಿಸ್ಟರ್ಸ್" ಜೊತೆ ಕೆಲಸ ಮಾಡುವಾಗ ಸಹ ಎಲ್ಲ ಮಾಡಿದ ಎಲ್ಲಾ ಬದಲಾವಣೆಗಳನ್ನು ಮರುಪಡೆಯಲು "ರೆಜಿಸ್ಟ್ರಿ ಬ್ಯಾಕ್ಅಪ್" ಮಾಡಿಕೊಳ್ಳಬಹುದು. ಆದ್ರೆ ಇದನ್ನು ನಾವೆ ಕೈಯ್ಯಾರೆ ಮಾಡ್ಬೇಕಾಗುತ್ತದೆ ಕಂಪ್ಯೂಟರ್ ತಾನಗಿಯೆ ಮಾಡುವುದಿಲ್ಲ.<br />
"ರೆಜಿಸ್ಟ್ರಿ" ಜೊತೆ ಕೆಲಸ ಮಾಡಲು<br />
೧.start->run ಎಂಬುದನ್ನು ಕ್ಲಿಕ್ಕಿಸಿ<br />
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.<br />
<br />
ಈಗ ನೀವು ವಿಂಡೊಸ್ನ ಆಂತರಿಕ ಜಗತ್ತಿಗೆ ಹೆಜ್ಜೆ ಇಟ್ಟಿದೀರಾ,ಪ್ರತಿ ಹೆಜ್ಜೆಯನ್ನು ಸಾವಧಾನವಾಗಿ ಇಡಿ,ಅಪಘಾತಕ್ಕೆ ಅವಸರವೆ ಕಾರಣ!!!.<br />
ಈಗ "ರೆಜಿಸ್ಟ್ರಿ ಸಂಕಲನ"ಎಂಬ ವಿಂಡೊ ನೋಡಬಹುದು ಅದನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು (ಎಡ ಹಾಗು ಬಲ ಭಾಗ) ಹಾಗು ಎರಡು ಬಾರ್ ಇರುತ್ತವೆ (ಮೆನು ಹಾಗು ಸ್ಟೇಟಸ್)<br />
ಮೆನು ಬಾರ್ ಮೇಲೆ ಇದ್ದರೆ ಸ್ಟೇಟಸ್ ಬಾರ್ ಕೆಳಗೆ ಇರುತ್ತದೆ.ನೀವು "ರೆಜಿಸ್ಟ್ರಿ ಸಂಕಲನ" ವಿಂಡೊನ ಎಡಭಾಗದಲ್ಲಿ ಕಾಣುವ ಮೈ ಕಂಪ್ಯೂಟರ್ ಅನ್ನು ಸಿಂಗಲ್ ಕ್ಲಿಕ್ ಮಾಡಿ ಆಯ್ಕೆ ಮಾಡಿದಾಗ ಅದೆ ವಿಂಡೊನ ಕೆಳಭಾಗದಲ್ಲಿರುವ ಸ್ಟೇಟಸ್ ಬಾರ್, ಆಯ್ಕೆ ಮಾಡಿದ್ದನ್ನು ತೋರಿಸುತ್ತದೆ. ಇದೆ ರೀತಿಯಾಗಿ ನೀವು HKEY_CLASSES_ROOT(ಮೈ ಕಂಪ್ಯೂಟರ್ನ ಎಡ ಭಾಗದಲ್ಲಿರುವ + ಚಿನ್ಹೆಯನ್ನು ಕ್ಲಿಕ್ಕಿಸಿದಾಗ ಇದು ಕಾಣುತ್ತದೆ) ಎಂಬುದನ್ನು ಆಯ್ಕೆ ಮಾಡಿದರೆ ಸ್ಟೇಟಸ್ ಬಾರ್ನಲ್ಲಿ My Computer\HKEY_CLASSES_ROOT ಎಂದು ತೋರಿಸುತ್ತದೆ, ಹೀಗೆ ಸ್ಟೇಟಸ್ ಬಾರ್ನ ಸಹಾಯದಿಂದ ನಾವು ಯಾವ ಫೋಲ್ಡರ್ಅನ್ನು ಆಯ್ಕೆ ಮಾಡಿದ್ದೀವಿ ಎಂದು ತಿಳಿಯಬಹುದು.<br />
<br />
ಈಗ ಬ್ಯಾಕ್ಅಪ್ ಮಾಡಲು "ರೆಜಿಸ್ಟ್ರಿ ಸಂಕಲನ" ವಿಂಡೊನಲ್ಲಿ ಕಾಣುವ ಮೈ ಕಂಪ್ಯೂಟರ್ ಮೇಲೆ ಒಂಡು ಬಾರಿ ಕ್ಲಿಕ್ ಮಾಡಿ,ಸ್ಟೇಟಸ್ ಬಾರ್ನಲ್ಲಿ ಒಮ್ಮೆ ನೋಡಿ ಖಾತ್ರಿ ಮಾಡಿಕೊಳ್ಳಿ. ನಂತರ ಮೆನು ಬಾರ್ನಲಿರುವ "ಕಡತ"ಮೆನು ಮೇಲೆ ಕ್ಲಿಕ್ಕಿಸಿ,ಅಲ್ಲಿ ಕಾಣುವ "ರಫ್ತು" ಎಂಬುದನ್ನು ಆಯ್ಕೆಮಾಡಿದಾಗ ಮತ್ತೊಂದು ಸಣ್ಣ ವಿಂಡೊ ಪುಟಿಯುತ್ತದೆ ಅದೆ "ರೆಜಿಸ್ಟ್ರಿ ರಫ್ತು ಕಡತ"ವಿಂಡೊ. ಇದರಲ್ಲಿ ನಿಮಗೆ ಸೃಷ್ಟಿಸಲಾಗುವ ಕಡತವನ್ನು ಎಲ್ಲಿ ಉಳಿಸಬೇಕೆಂಬುದರ ವಿವರ ಹಾಗು ಉಳಿಸಲು ಮಾಹಿತಿಯ ವ್ಯಾಪ್ತಿಯನ್ನು ತಿಳಿಸಬೇಕಾಗುತ್ತದೆ, ಚುಟುಕಾಗಿ ಹೇಳಬೇಕಾದರೆ ಎಷ್ಟು ಮಾಹಿತಿಯನ್ನು ಎಲ್ಲಿ ಉಳಿಸಬೇಕೆಂದು ತಿಳಿಸುವುದೆ ಈ ಕಾರ್ಯದ ಉದ್ದೇಶ. ಮುಂದೆ ಅಕಸ್ಮಾತ್ ರೆಜಿಸ್ಟ್ರಿ ಕೆಟ್ಟಲ್ಲಿ, "ಈ" ಸ್ಥಳದಿಂದ "ಈ" ಕಡತದಲ್ಲಿರುವ "ಈ" ವ್ಯಾಪ್ತಿಯಲ್ಲಿರುವ ಮಾಹಿತಿಯನ್ನು ಮರುಸ್ಥಾಪಿಸಬೇಕಾದಲ್ಲಿ ಸಹಾಯಕ್ಕೆ ಬೇಕಾದ "ಈ"ಗಳನ್ನು ಸೂಚಿಸಿ ಈ ರೀತಿ ಬ್ಯಾಕ್ಅಪ್ ತೆಗೆದುಕೊಂಡಿದ್ದನ್ನು ಬಳಸುವುದೆ ಈ ಕಾರ್ಯದ ಉದ್ದೇಶ. <br />
"ರೆಜಿಸ್ಟ್ರಿ ಸಂಕಲನ" ವಿಂಡೊನ ಕೆಳಭಾಗದಲ್ಲಿ ರಫ್ತು ವ್ಯಾಪ್ತಿ ಎಂಬ ಸಣ್ಣ ವಿಭಾಗವಿರುತ್ತದೆ, ಇಲ್ಲಿ "ಎಲ್ಲಾ" ಎಂಬುದನ್ನು ಆಯ್ಕೆ ಮಾಡಿ. ನಂತರ ಈ ವಿಭಾಗದ ಮೇಲ್ಗಡೆ ಕಾಣುವ "ಕಡತದ ಹೆಸರು" ಎಂಬಲ್ಲಿ c:\registry_backup\regbackup ಎಂದು ಟೈಪಿಸಿ "ಉಳಿಸು"ಎನ್ನುವ ಗುಂಡಿಯನ್ನು ಒತ್ತಿ.<br />
ಈಗ ವಿಂಡೋಸ್ ನಿಮ್ಮ ಆದೇಶವನ್ನು ಪ್ರಾಮಾಣಿಕವಾಗಿ c: ಡ್ರೈವ್ನಲ್ಲಿ registry_backup ಎಂಬ ಹೊಸದೊಂದು ಫೋಲ್ಡರ್ ಸೃಷ್ಟಿಸಿ ಅದಕ್ಕೆ regbackup ಎಂದು ನಾಮಕರಣವನ್ನು ಸಹ ಮಾಡಿ .reg ಎಂಬ ಎಕ್ಸ್ಟೆನ್ಷನ್ನೊಂದಿಗೆ ಉಳಿಸಿರುತ್ತದೆ.<br />
ನೀವೇನಾದರು ರೆಜಿಸ್ಟ್ರಿಯಲ್ಲಿ ಬದಲಾವಣೆ ಮಾಡಿ, ಎಲ್ಲಾ ಬದಲಾವಣೆಗಳನ್ನು ಅಳಿಸಬೇಕೆಂದರೆ ಬದಲಾವಣೆ ಮಾಡುವ ಮುನ್ನ ಬ್ಯಾಕ್ಅಪ್ ಮಾಡಿದ ಕದತವನ್ನು,ಕಡತ ಮೆನುಗೆ ಹೋಗಿ ಅಲ್ಲಿ "ಅಮದು" ಎನ್ನುವುದನ್ನು ಆಯ್ಕೆಮಾಡಿ ನೀವು ಉಳಿಸಿದ .reg ಅನ್ನು ಸೂಚಿಸಿ "ತೆರೆ" ಎಂಬ ಗುಂಡಿಯನ್ನು ಒತ್ತಬೇಕು ಆಗ ಎಲ್ಲ ಬದಲಾವಣೆಗಳು ಅಳಿಸಿಹೋಗುತ್ತವೆ. ಸ್ವಲ್ಪ ತಡೆಯಿರಿ ನೀವು ಮಾಡಿದ ಬದಲಾವಣೆಗಳು ಇನ್ನು ಸಕ್ರಿಯವಾಗಿರುವುದಿಲ್ಲಾ, ಹಾಗೆ ಸಕ್ರಿಯಗೊಳಿಸಲು F5 ೨-೩ ಬಾರಿ ಒತ್ತಬೇಕು ಅಥವಾ ಮೆಷೀನ್ಅನ್ನು ಪುನರ್ಶುರು ಮಾಡಬೇಕು.<br />
ಇಲ್ಲಿಗೆ ರೆಜಿಸ್ಟ್ರಿಯ ಅಮದು ಹಾಗು ರಫ್ತಿನ ವಿಚಾರ ಮುಗಿಯಿತು.<br />
ಮುಂದಕ್ಕೆ...<br />
ರೆಜಿಸ್ಟ್ರಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿ ನಮ್ಮ ಕಂಪ್ಯೂಟರ್ಅನ್ನು ಚೂಟಿ ಮಾಡುವ ವಿಷಯದ ಕಡೆ ಗಮನ ಹರಿಸೋಣ :)<br />
<br />
ಫೋಲ್ಡರ್ ಅನ್ನು ಆದಷ್ಟು ಬೇಗನೆ ತೆರೆಯುವುದು - ಕೊನೆಯ ಸರ್ತಿ ಫೋಲ್ಡರ್ ಹಾಗು ಅದರ ಉಪ ಫೋಲ್ಡರ್ಅನ್ನು ಯಾವ ಸಮಯದಲ್ಲಿ ತೆರೆಯಲಾಗಿತ್ತು ಎಂಬ ಮಾಹಿತಿಯನ್ನು ಜ್ಞಾಪಕ ಇಟ್ಟುಕೊಳ್ಳದೆ ಇರುವ ಮೂಲಕ ಕೆಲಸ ಕಮ್ಮಿ ಕೊಟ್ಟು ವಿಂಡೊಸ್ಅನ್ನು ಚೂಟಿಯಾಗೊಸೋಣ<br />
೧.start->run ಎಂಬುದನ್ನು ಕ್ಲಿಕ್ಕಿಸಿ<br />
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.<br />
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್ನ ಕೆಳಗೆ ಐದು ಫೋಲ್ಡರ್ಗಳನ್ನು ಕಾಣಬಹುದು, ಇದರಲ್ಲಿ HKEY_LOCAL_MACHINE ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ<br />
೪.ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ System ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.<br />
೫.ನಂತರ ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ CurrentControlSet ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.<br />
೬.ನಂತರ ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ Control ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ. <br />
೭.ನಂತರ ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ FileSystem ಎಂಬ ಫೋಲ್ಡರ್ನ ಮೇಲೆ ಒಮ್ಮೆ ಕ್ಲಿಕ್ಕಿಸಿ.<br />
೮.ಸ್ಟೇಟಸ್ ಬಾರ್ನಲ್ಲಿ “HKEY_LOCAL_MACHINE\System\CurrentControlSet\Control\FileSystem” ಎಂಬುದು ಡಿಸ್ಪ್ಲೆ ಆಗಿರಬೇಕು<br />
೮.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.<br />
೯.ಈ ಪಟ್ಟಿಯಲ್ಲಿ NtfsDisableLastAccessUpdate ಎಂಬ ರೆಜಿಸ್ಟರ್ ಇದೆಯೆ ಎಂಬುದನ್ನು ನೋಡಿ.<br />
೧೦.ಅದು ಇದ್ದರೆ ಅದರ ಡೇಟಾ (೧) ಎಂಬುದಾಗಿದೆಯೆ ಎನ್ನುವುದನ್ನು ನೋಡಿ,()ರೊಳಗೆ ಸೊನ್ನೆ ಇರಕೂಡದು ಅದು "ಒಂದು" ಆಗಿರಬೇಕು.<br />
೧೧.ಅದು ಸೊನ್ನೆ ಆಗಿದ್ದರೆ NtfsDisableLastAccessUpdateನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ, ಪುಟಿಯುವ ಪುಟಾಣಿ ವಿಂಡೊನಲ್ಲಿ "ಡೇಟಾ ಮೌಲ್ಯ" ೧(ಒಂದು) ಎಂದು ನಮೂದಿಸಿ ಸರಿ ಎನ್ನುವ ಗುಂಡಿಯನ್ನು ಒತ್ತಿ.<br />
೧೨.ಈಗ NtfsDisableLastAccessUpdateನ ರೆಜಿಸ್ಟ್ರಿ ಡೇಟಾ ೧ ಎಂದು ಸೂಚಿಸುತ್ತಿರಬೇಕು.<br />
<br />
ಅಕಸ್ಮಾತ್ “HKEY_LOCAL_MACHINE\System\CurrentControlSet\Control\FileSystem” ಎಂಬ ಹಾದಿಯಲ್ಲಿ NtfsDisableLastAccessUpdate ಎಂಬ ರೆಜಿಸ್ಟ್ರಿ ಇಲ್ಲವಿರಲಿಲ್ಲವೆಂದರೆ ಚಿಂತಿಸುವ ಅಗತ್ಯವಿಲ್ಲ,ಅದನ್ನು ನೀವೆ ಸೃಷ್ಟಿಸಿ ಬದಲಾಯಿಸಬೇಕು. ಸೃಷ್ಟಿಸುವ ವಿಧಾನ :<br />
<br />
೧.“HKEY_LOCAL_MACHINE\System\CurrentControlSet\Control\FileSystem” ಎಂಬ ಹಾದಿಯಲ್ಲಿ ವಿಂಡೊನ ಬಲಭಾಗದಲ್ಲಿ ಕಾಣುವ ಖಾಲಿ ಜಾಗದಲ್ಲಿ ಬಲ ಕ್ಲಿಕ್ ಮಾಡಿ.<br />
೨.ಪುಟಿಯುವ ಮೆನುವಿನಲ್ಲಿ "ಹೊಸ" ಎಂಬುವುದರೊಳಗೆ DWORD Value ಎಂಬುದನ್ನು ಆಯ್ಕೆ ಮಾಡಿ.<br />
೩.ಮಾಡಿದ ನಂತರ New Value #1 ಎಂಬ ಹೆಸರಿನೊಂದಿಗೆ ಹೊಸದಾದ ರೆಜಿಸ್ಟ್ರಿ ಸೃಷ್ಟಿಯಾಗುತ್ತದೆ, ಬೇರೆ ಕಡೆ ಕ್ಲಿಕ್ ಮಾಡುವ ಮುನ್ನ ಅದಕ್ಕೆ NtfsDisableLastAccessUpdate ಎಂಬ ಹೆಸರು ಕೊಡಿ.(ಇಲ್ಲಿಂದಲೆ ನಕಲಿಸಿದರೆ ಒಳಿತು ಇಲ್ಲವಾದಲ್ಲಿ ಸಣ್ಣಾಕ್ಷರ ಹಾಗು ದೊಡ್ಡಾಕ್ಷರಗಳ ಗಮನ ಇಟ್ಟುಕೊಂಡು ನೀವೆ ಹೆಸರನ್ನು ನಮೂದಿಸಿ).<br />
೪.ಮೂಲಭೂತವಾಗಿ ಈ ಹೊಸದಾಗಿ ಸೃಷ್ಟಿಯಾದ ರೆಜಿಸ್ಟ್ರಿಯ ಮೌಲ್ಯ ಸೊನ್ನೆಯಾಗಿರುತ್ತದೆ,ಅದನ್ನು ಒಂದು ಎಂದು ಬದಲಾಯಿಸಲು ಮೇಲೆ ಸೂಚಿಸಿದಂತೆ ಕ್ರಮಾಂಕ ೧೧ನ್ನು ನೋಡಿ.<br />
<br />
ಇದು ಮಾಡಿದ ನಂತರ F5 ೨-೩ ಮೂರು ಬಾರಿ ಒತ್ತಿ :)<br />
<br />
ವಿಂಡೊಸ್ ಸಜ್ಜಾಗುವ ಸಮಯವನ್ನು ಕಡಿಮೆಗೊಳಿಸುವುದು.<br />
ವಿಂಡೋಸ್ ಸಜ್ಜಾಗಲು ಹಲವಾರು ಕಡತಗಳನ್ನು ಮಾಹಿತಿಗೋಸ್ಕರ ಹುಡುಕುತ್ತದೆ. ಸಾಮಾನ್ಯವಾಗಿ ಈ ಮಾಹಿತಿಯೆಲ್ಲವು ಅನೇಕ ಕಡತಗಳಲ್ಲಿ ಹಂಚಿ ಹೋಗಿರುತ್ತದೆ ಹಾಗೆ ಈ ಕಡತಗಳು ಸಹ ಮೆಮೊರಿಯಲ್ಲಿ ವಿವಿದೆಢೆ ಹರಡಿರುತ್ತದೆ. ಎಲ್ಲ ಕಡತಗಳನ್ನು ಶಿಸ್ತುಭದ್ಧವಾಗಿ ಹತ್ತಿರದಲ್ಲಿಟ್ಟರೆ ಹುಡುಕುವ ಸಮಯ ಕಡಿಮೆಗೊಂಡು ಸಜ್ಜಾಗುವುದು ಬೇಗನೆಯಾಗುತ್ತದೆ. <br />
<br />
೧.start->run ಎಂಬುದನ್ನು ಕ್ಲಿಕ್ಕಿಸಿ<br />
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.<br />
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್ನ ಕೆಳಗೆ ಐದು ಫೋಲ್ಡರ್ಗಳನ್ನು ಕಾಣಬಹುದು, ಇದರಲ್ಲಿ HKEY_LOCAL_MACHINE ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ<br />
೪.ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ SOFTWARE ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.<br />
೫.ನಂತರ ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ Microsoft ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.<br />
೬.ನಂತರ ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ Dfrg ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ. <br />
೭.ನಂತರ ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ BootOptimizeFunction ಎಂಬ ಫೋಲ್ಡರ್ನ ಮೇಲೆ ಒಮ್ಮೆ ಕ್ಲಿಕ್ಕಿಸಿ.<br />
೮.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.<br />
೯.ಈ ಪಟ್ಟಿಯಲ್ಲಿ Enable ಎಂಬ ರೆಜಿಸ್ಟರ್ಅನ್ನು ಆಯ್ಕೆ ಮಾಡಿ, ಅದರ ನೇಟಾ Y ಎಂದಾಗಿರಬೇಕು.<br />
೧೦.ಅದು Y ಇರದೆ ಇದ್ದ ಪಕ್ಷದಲ್ಲಿ ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.<br />
೧೧.ಪುಟಿಯುವ ಬಾಕ್ಸ್ನಲ್ಲಿ ಡೇಟಾ ಮೌಲ್ಯವನ್ನು Y ಎಂದು ನಮೂದಿಸಿ, ಸರಿ ಎನ್ನುವ ಗುಂಡಿಯನ್ನು ಒತ್ತಿ.<br />
<br />
ಮೆನುಗಳು ಆದಷ್ಟು ಬೇಗನೆ ಸ್ಪಂದಿಸುವ ಹಾಗೆ ಮಾಡುವುದು.<br />
ನೀವು ಮೆನುಗಳ ಮೇಲೆ ಕ್ಲಿಕ್ ಮಾಡಿದಾಗ, ಆ ಕ್ಲಿಕ್ಕಿಗೆ ನಿಮ್ಮ ಕಂಪ್ಯೂಟರ್ ಎಷ್ಟು ಬೇಗನೆ ಸ್ಪಂದಿಸುತ್ತದೆ ಎಂಬುದನ್ನು ಒಂದು ಟೈಮರ್ ನ ಮೂಲಕ ನಿಯಂತ್ರಿಸಲಾಗುತ್ತದೆ. ಈ ಟೈಮರ್ನ ಮೌಲ್ಯ ಸಣ್ಣದ್ದಿದಷ್ಟು ಮೆನುಗಳು ಕ್ಲಿಕ್ಕಿಗೆ ಬೇಗನೆ ಸ್ಪಂದಿಸುತ್ತವೆ. ಥಿಯೋರಾಟಿಕಲಿ ಈ ಮೌಲ್ಯವನ್ನು ಸೊನ್ನೆ ಕೂಡ ಮಾಡಬಹುದು ಆದರೆ ಅದು ಕಾರ್ಯಚರಣೆಗೆ ಪೂರಕವಾಗಿರುವುದಿಲ್ಲ ಹಾಗಾಗಿ ಈ ಮೌಲ್ಯವನ್ನು ೧೦೦ ಎಂದು ಮಾಡಿದರೆ ಉತ್ತಮ. ಇದನ್ನು ಮಾಡಲು..<br />
೧.start->run ಎಂಬುದನ್ನು ಕ್ಲಿಕ್ಕಿಸಿ<br />
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.<br />
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್ನ ಕೆಳಗೆ ಐದು ಫೋಲ್ಡರ್ಗಳನ್ನು ಕಾಣಬಹುದು, ಇದರಲ್ಲಿ HKEY_CURRENT_USER ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ<br />
೪.ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ Control Panel ಎಂಬ ಫೋಲ್ಡರ್ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.<br />
೫.ನಂತರ ಅದರಳೊರಗಿರುವ ಉಪ-ಫೋಲ್ಡರ್ಗಳಲ್ಲಿ Desktop ಎಂಬ ಫೋಲ್ಡರ್ನ ಮೇಲೆ ಒಮ್ಮೆ ಕ್ಲಿಕ್ಕಿಸಿ.<br />
೬.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.<br />
೭.ಈ ಪಟ್ಟಿಯಲ್ಲಿ MenuShowDelayಎಂಬ ರೆಜಿಸ್ಟರ್ಅನ್ನು ಆಯ್ಕೆ ಮಾಡಿ,ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.<br />
೮.ಪುಟಿಯುವ ಬಾಕ್ಸ್ನಲ್ಲಿ ಡೇಟಾ ಮೌಲ್ಯವನ್ನು ೧೦೦ ಎಂದು ನಮೂದಿಸಿ, ಸರಿ ಎನ್ನುವ ಗುಂಡಿಯನ್ನು ಒತ್ತಿ.<br />
<br />
ಇಲ್ಲಿಗೆ ರೆಜಿಸ್ಟ್ರಿ ಸಂಬಂಧಿತ ಟ್ವೀಕ್ಗಳು ಮುಗಿದವು. ಮಿಕ್ಕ ಇತರೆ ವಿಧಾನದ ಟ್ವೀಕ್ಗಳತ್ತ ಗಮನ ಹಾಯಿಸೋಣ.<br />
<br />
XP,DMA ವಿಧಾನದಲ್ಲಿ ಡೇಟಾ ಸ್ಥಳಾಂತರಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.<br />
ಸಾಮಾನ್ಯಯವಾಗಿ ಹಾರ್ಡ್ ಡಿಸ್ಕ್ ಅಥವಾ ಸಿಡಿಗಳು ಡೇಟಾ ಸ್ಥಳಾಂತರಿಸುವುದಕ್ಕೆ ಎರಡು ಮಾರ್ಗವಿದೆ, ಮೊದಲನೆಯದು ನಿಧಾನವಾದ PIO ವಿಧಾನ ಎರಡನೆಯದು DMA ವಿಧಾನ.<br />
ಕೆಲವು ಬಾರಿ ವೈರಾಣುಗಳ ಹಾವಳಿಯಿಂದ ಕಂಪ್ಯೂಟರ್ಗಳು ತಾವಾಗಿಯೆ DMA ವಿಧಾನದಿಂದ PIO ವಿಧಾನನಕ್ಕೆ ಸರಿದಿರುತ್ತದೆ.ಅದು ಯಾವ ವಿಧಾನದಲ್ಲಿದೆ ಎಂಬುದನ್ನು ನೋಡಲು..<br />
೧.ಮೈ ಕಂಪ್ಯೂಟರ್ ಮೇಲೆ ಬಲ ಕ್ಲಿಕ್ಕಿಸಿ, ಗುಣಧರ್ಮಗಳನ್ನು ಆಯ್ಕೆ ಮಾಡಿ.<br />
೨.ಶುರುವಾಗುವ ವಿಂಡೋನಲ್ಲಿ "ಹಾರ್ಡ್ವೇರ್" ಎಂಬ ಟ್ಯಾಬ್ ಅನ್ನು ಕ್ಲಿಕ್ಕಿಸಿ ಆಯ್ಕೆ ಮಾಡಿ.<br />
೩.ಅದರಲ್ಲಿ ಕಾಣುವ "ಡಿವೈಸ್ ಕಾರ್ಯನಿರ್ವಾಹಕ" ಎಂಬ ಗುಂಡಿಯನ್ನು ಕ್ಲಿಕ್ಕಿಸಿ.<br />
೪.ಆಗ ಮತ್ತೊಂದು "ಡಿವೈಸ್ ಕಾರ್ಯನಿರ್ವಾಹಕ" ವಿಂಡೊ ಶುರುವಾಗುತ್ತದೆ.<br />
೫.ಈ ವಿಂಡೊನಲ್ಲಿ "IDE ATA/ATAPI Controllers" ಎಂಬುದು ಕಾಣುತ್ತದೆ, ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.<br />
೬.Primary IDE Channel ಹಾಗು Secondary IDE Channel ಎಂಬುದು ಇರುತ್ತವೆ. ಇಲ್ಲಿ ಬೇರೆ Controllers ಸಹ ಪಟ್ಟಿಯಾಗಿರಬಹುದು ಆದರೆ ನಮ್ಮ ಗಮನ ಇಲ್ಲಿ ಸೂಚಿಸಿದ ಎರಡು Channelನ ಮೇಲೆ ಮಾತ್ರ. <br />
೭. ಈಗ Primary IDE Channelಮೇಲೆ ಬಲ ಕ್ಲಿಕ್ ಮಾಡಿ ಗುಣಧರ್ಮ ಆಯ್ಕೆ ಮಾಡಿ.<br />
೮.ಇದರೊಳಗೆ "ಮುಂದುವರಿದ ಸೆಟ್ಟಿಂಗ" ಎಂಬ ಟ್ಯಾಬ್ಅನ್ನು ಆಯ್ಕೆ ಮಾಡಿ.<br />
೯.ಇದರೊಳಗೆ ಸ್ಥಳಾಂತರಿಸುವ ವಿಧ ಎಂಬ ಕೆಳಬೀಳುವ ಮೆನು DMA if Available ಎಂಬುದು ಆಯ್ಕೆ ಆಗಿರಬೇಕು ಅದು ಹಾಗೆ ಇರದೆ PIO Only ಅಂತ ಇದ್ದಲ್ಲಿ ಅದನ್ನು ಬದಲಾಯಿಸಿ.ಸರಿ ಎಂಬ ಗುಂಡಿಯನ್ನು ಒತ್ತಬೇಕು<br />
೧೦.ಇದೆ ರೀತಿಯಾಗಿ Secondary IDE Channel ಅನ್ನು ಬದಲಾಯಿಸಿದ/ಪರಿಶೀಲಿಸದ ನಂತರ "ಡಿವೈಸ್ ಕಾರ್ಯನಿರ್ವಾಹಕ" ವಿಂಡೊ ಮುಚ್ಚಿರಿ.<br />
<br />
ಸ್ವಾಪ್ ಫೈಲ್ ಕಾರ್ಯ ದಕ್ಷತೆಯನ್ನು ಹೆಚ್ಚಿಸಿವುದು.<br />
ಈ ಟ್ವೀಕ್ ಮಾಡುವುದರಿಂದ ಲಭ್ಯವಿರುವ ನಿಮ್ಮ RAMನ ಕೊನೆಯ ಮೆಮೊರಿಯು ಸಹ ಉಪಯುಕ್ತವಾಗಿ ಬಳಸಲಾಗುವುದು, ಈ ಟ್ವೀಕ್ ಅತ್ಯಂತ ಪರಿಣಾಮಕಾರಿ ಕೂಡ!!<br />
೧.start->run ಎಂಬುದನ್ನು ಕ್ಲಿಕ್ಕಿಸಿ<br />
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ msconfig ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.<br />
೩.ನಂತರ ಪುಟಿಯುವ ವಿಂಡೊನಲ್ಲಿ System.ini ಎಂಬ ಟ್ಯಾಬ್ಅನ್ನು ಆಯ್ಕೆ ಮಾಡಿ.<br />
೪.ಅದರೊಳಗೆ ಪಟ್ಟಿಯಾಗಿರುವ 386enh ಎಂಬುದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.(ಆಗ ಈ ಆಯ್ಕೆ ನೀಲಿ ಬಣ್ಣದಿಂದ ಹೈಲೈಟ್ ಆಗಬೇಕು)<br />
೫.ನಂತರ ಅಲ್ಲೆ ಲಭ್ಯವಿರುವ "ಹೊಸದು" ಎಂಬ ಗುಂಡಿಯನ್ನು ಒತ್ತಿ .<br />
೬. ತತ್ಕ್ಷಣವೆ 386enh ಕೆಳಗೆ ಖಾಲಿಯಾದ ಬಾಕ್ಸ್ ಒಂದು ಸೃಷ್ಟಿಯಾಗುತ್ತದೆ, ಅದರೊಳಗೆ ConservativeSwapfileUsage =1 ಎಂದು ಟೈಪಿಸಿ (ಇಲ್ಲಿಂದ ನಕಲು ಮಾಡಿ ಅಂಟಿಸಿದರೆ ಉತ್ತಮ, ಸಣ್ಣಾಕ್ಷರ ದೊಡ್ಡಾಕ್ಷರದೆಡೆ ಗಮನವಿರಲಿ!!)<br />
೭.ನಂತರ "ಸರಿ" ಎನ್ನುವುದನ್ನು ಕ್ಲಿಕ್ಕಿಸಿ.<br />
೮.ನಂತರ ಕಂಪ್ಯೂಟರ್ಅನ್ನು "ಪುನರ್ಶುರು"ಮಾಡಿ.<br />
<br />
ಇಷ್ಟೆಲ್ಲ ಟ್ವೀಕ್ಗಳನ್ನು ಮಾಡಿಯಾದ ಮೇಲೆ ಕಟ್ಟಕಡೇಯದಾಗಿ(ನನಗೆ ತಿಳಿದಿರುವಂತೆ)ಮೆಮ್ಮೊರಿಯನ್ನು ನಿರ್ವಹಿಸಲು Cacheman ಎಂಬ ತಂತ್ರಾಂಶವನ್ನು ಸ್ಥಾಪಿಸುವುದು. ತಂತ್ರಾಂಶವನ್ನು ಈ ಕೊಂಡಿಯ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.<br />
http://sites.google....<br />
<br />
ನಿಮ್ಮ ಕಂಪ್ಯೂಟರ್ಗೆ ಉಳಿಸಿಕೊಂಡಾದ ಮೇಲೆ ಅದರೊಳಗಿರುವ ರೆಜಿಸ್ಟರ್ ಸಂಖ್ಯೆಯನ್ನು cacheman ಸ್ಥಾಪಿಸಿ ಆದಮೇಲೆ ನಾಮೂದಿಸಲು ಮರೆಯಬೇಡಿ.(help->Enter CustomerID)<br />
<br />
೧.cacheman ಸ್ಥಾಪಿಸಿ ಆದಮೇಲೆ ಅದನ್ನು ಶುರು ಮಾಡಿ,"ಜಾದುಗಾರನನ್ನು ತೋರು" ಎಂಬ ಮೆನುವನ್ನು ಕ್ಲಿಕ್ಕಿಸಿ.<br />
೨.ಇದರೊಳಗೆ "ಎಲ್ಲಾ" ಎಂಬುದನ್ನು ಆಯ್ಕೆ ಮಾಡಿ.<br />
<br />
೩."disk cache" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ,ಇಲ್ಲಿ ಆಯ್ಕೆ ಮಾಡಲು ಏನು ಇರುವುದಿಲ್ಲಾ ಹಾಗಾಗಿ "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.<br />
೪.ಈಗ ಕಾಣುವ ನಾಲ್ಕು ಆಯ್ಕೆಗಳಲ್ಲಿ "ಕಡತ ಹಂಚಿಕೊಳ್ಳುವುದನ್ನು ಅತ್ಯಂತ ಹೆಚ್ಚಾಗಿ ಚೊಕ್ಕಮಾಡು" ಎಂಬುದನ್ನು ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.<br />
<br />
ಈಗ<br />
೫."Icon cache" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.<br />
೬.ಈಗ ಕಾಣುವ ಎರಡು ಆಯ್ಕೆಗಳಲ್ಲಿ "ಅತ್ಯಂತ ಹೆಚ್ಚಾದ Icon cacheನ ಮೂಲಭೂತವಾದ ಗಾತ್ರವನ್ನು ಸೆಟ್ ಮಾಡು" ಎಂಬುದನ್ನು ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.<br />
<br />
ಈಗ<br />
೭."RAM" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.<br />
೮.ಈಗ ಕಾಣುವ ಎರಡು ಆಯ್ಕೆಗಳಲ್ಲಿ "DLLಗಳನ್ನು ಮೆಮೊರಿಯಿಂದ ಇಳಿಸು" ಎಂಬುದನ್ನು ಮಾತ್ರ ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.<br />
<br />
ಈಗ<br />
೯."Tweaks" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.<br />
೧೦.ಈಗ ಕಾಣುವ ಎರಡು ಆಯ್ಕೆಗಳಲ್ಲಿ "ಹಿರಿದಾದ IO pagelock ಮಿತಿ ಮೌಲ್ಯ" ಎಂಬುದನ್ನು ಆಯ್ಕೆ ಮಾಡಿ.<br />
೧೧.ಕೆಳಗೆ "Disable NTFS last access update" ಎಂಬುದನ್ನು ಟಿಕ್ ಮಾಡಿ, "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.<br />
೧೨.ಈ ವಿಂಡೊನಲ್ಲಿ ಕಾಣುವ ಯಾವದನ್ನು ಸಹ ಆಯ್ಕೆ ಮಾಡದೆ "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.<br />
೧೩.ಈ ವಿಂಡೊನಲ್ಲಿ ಕೆಳಗಡೆ ಇರುವ "ಮೆನು ತೋರಲು ತಡಮಾಡುವುದು" ಎಂಬುದನ್ನು ಆಯ್ಕೆ ಮಾಡಿ,"ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.<br />
೧೪.ಈ ವಿಂಡೊನಲ್ಲಿರುವುದನ್ನು ಆಯ್ಕೆ ಮಾಡಿ, "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.<br />
<br />
ನಂತರ "ಕಡತ" ಮೆನುಗೆ ಹೋಗಿ,"ಸೆಟ್ಟಿಂಗ್ಗಳನ್ನು ಉಳಿಸಿ"ಎಂಬುದನ್ನು ಕ್ಲಿಕ್ಕಿಸಿ..<br />
ನಂತರ cacheman ಅನ್ನು ಮುಚ್ಚಿ, ಅದು ಪುನರ್ಶುರು ಮಾಡಬೇಕೆ ಎಂಬುದನ್ನು ಕೇಳುತ್ತದೆ, ಹೌದು ಎಂದು ಕ್ಲಿಕ್ಕಿಸಿ.<br />
<br />
ಇಲ್ಲಿಗೆ ಟ್ವೀಕಾಯಣ ಸಮಾಪ್ತಿ(ನನ್ ಕಡೆಯಿಂದ), ನಿಮ್ಗೆ ಇನ್ನಷ್ಟು ತಿಳಿದು ಬಂದಲ್ಲಿ ದಯವಿಟ್ಟು ಹಂಚಿಕೊಳ್ಳಿ.<br />
<br />
ತಂತ್ರಾಂಶ - Software<br />
ಗುಣ ಧರ್ಮ -Properties<br />
ಕಡತ - File<br />
ಮರುಸ್ಥಾಪನಾ ಬಿಂದು - System restore<br />
ರೆಜಿಸ್ಟ್ರಿ ಸಂಕಲನ - Registry editor<br />
ರಫ್ತು - Export<br />
ರೆಜಿಸ್ಟ್ರಿ ರಫ್ತು ಕಡತ - Registry export file<br />
ರಫ್ತು ವ್ಯಾಪ್ತಿ - Export Range<br />
ಎಲ್ಲಾ - All<br />
ಕಡತದ ಹೆಸರು - File name<br />
ಉಳಿಸು - Save<br />
ಅಮದು -Import<br />
ತೆರೆ - Open<br />
ಗುಂಡಿ - Button<br />
ಸರಿ - OK<br />
ಡೇಟಾ ಮೌಲ್ಯ - Data Value<br />
ಮೂಲಭೂತ - Default<br />
ಸಜ್ಜು - Boot<br />
ಸ್ಪಂದಿಸುವುದು - Response<br />
ಸ್ಥಳಾಂತರ - Transfer<br />
ಡಿವೈಸ್ ಕಾರ್ಯನಿರ್ವಾಹಕ - Device manager<br />
ಕಾರ್ಯ ದಕ್ಷತೆ - Performance<br />
ಹೊಸದು-New<br />
ಪುನರ್ಶುರು- Restart<br />
ಜಾದುಗಾರನನ್ನು ತೋರು - Show wizard<br />
ಮುಂದಿನ - Next<br />
ಕಡತ ಹಂಚಿಕೊಳ್ಳುವುದನ್ನು ಅತ್ಯಂತ ಹೆಚ್ಚಾಗಿ ಚೊಕ್ಕಮಾಡು - Maximise throughput for file sharing <br />
ಮುಗಿಸು - Finish<br />
ಅತ್ಯಂತ ಹೆಚ್ಚಾದ Icon cacheನ ಮೂಲಭೂತವಾದ ಗಾತ್ರವನ್ನು ಸೆಟ್ ಮಾಡು - Set maximum default size for Icon cache<br />
DLLಗಳನ್ನು ಮೆಮೊರಿಯಿಂದ ಇಳಿಸು - Unload DLL from memory<br />
ಹಿರಿದಾದ IO pagelock ಮಿತಿ ಮೌಲ್ಯ - Largest IO page lock limit value<br />
ಮೆನು ತೋರಲು ತಡಮಾಡುವುದು - Menu show delay<br />
ಸೆಟ್ಟಿಂಗ್ಗಳನ್ನು ಉಳಿಸಿ - Save settings<br />
<br />
ಮುಗಿಯಿತು<br />
<br />
ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-1537791768111107772010-06-29T23:01:00.000-07:002010-06-29T23:01:08.050-07:00ಅಳುತ್ತಿರುವ ನಿಮ್ಮ ವಿಂಡೊಸ್ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಭಾಗ ೨on April 22, 2009<br />
<br />
ಎರಡನೆಯ ಭಾಗ ಶುರುವಾಯಿತು, ವಿಂಡೊಸ್ಅನ್ನು ಮತ್ತಷ್ಟು ಚುರುಕುಗೊಳಿಸಲು ಸಜ್ಜಾಗಿ..<br />
<br />
ಡಿಸ್ಪ್ಲೆ ಸೆಟ್ಟಿಂಗ್ಅನ್ನು ಆಪ್ಟಿಮೈಸ್ಗೊಳಿಸುವುದು.<br />
<br />
ನಿಮ್ಮ ವಿಂಡೊಸ್ ಎಕ್ಸ್.ಪಿ ನೋಡಲು ಆಕರ್ಷಕವಾಗಿ ಕಾಣಬಹುದು ಆದರೆ ಕಾರ್ಯಸಾಧನೆಯಲ್ಲಿ ಮಂದಗತಿಯಾದ್ರೆ ಮೈ ಯಾರಿಗ್ತಾನೆ ಉರಿಯೋಲ್ಲಾ?<br />
ವಿಂಡೊಸ್ "ಸಿಸ್ಟಂ ರಿಸೋರ್ಸ್"ಅನ್ನು(ಮೆಮೊರಿ,cpuಕಾರ್ಯಸಾಧನೆ,ಕ್ಯಾಷ್ ಮೆಮೊರಿ,ರೆಜಿಸ್ಟರ್ಸ್,..) ಹೆಚ್ಚಾಗಿ ಗಣಕತೆರೆ ಬದಲಾದಾಗಲೆ<br />
ನುಂಗುವುದು. ಯಾಕಂದರೆ ಪ್ರತಿ ಸಣ್ಣ ಕಾರ್ಯ ಪ್ರತಿಫಲಿಸಬೇಕೆಂದರೂ ಸಹ ಇಡಿ ಗಣಕತೆರೆಯನ್ನು ಪುನರ್ರಚಿಸಬೇಕಾಗುತ್ತದೆ ಈ ಕಾರ್ಯಕ್ಕೆ "ಸಿಸ್ಟಂ<br />
ರಿಸೋರ್ಸ್" ಅಗತ್ಯ ಬೀಳುತ್ತದೆ ಹಾಗಾಗಿ cpuಗೆ ಕಮ್ಮಿ ಕೆಲಸ ಕೊಡುವುದರ ಮೂಲಕ ಕಂಪ್ಯೂಟರ್ ಹೆಚ್ಚು ವೇಗದಿಂದ ಅಗತ್ಯ ಕಾರ್ಯ ನಿರ್ವಹಿಸುವುದಕ್ಕೆ<br />
ಸಹಾಯ ಮಾಡಬಹುದು. ಹೀಗೆ ಕಾರ್ಯ ತೀಕ್ಷ್ಣಗೊಳಿಸಲು ...<br />
<br />
೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.<br />
<br />
೨."ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.<br />
<br />
೩.ನಂತರ ಅದರಲ್ಲಿ "ಕಾರ್ಯ ದಕ್ಷತೆ"ಗೆ ಸಂಬಂಧಿತ "ಸೆಟ್ಟಿಂಗ್ಗಳು" ಗುಂಡಿಯನ್ನು ಒತ್ತಿ .<br />
<br />
೪."ದೃಷ್ಟಿ ಸಂಬಂಧಿತ ಪರಿಣಾಮ "ಸಂಬಂಧಿತ ಆಯ್ಕೆಯ ಟ್ಯಾಬ್ ಅನ್ನು ಆಯ್ಕೆಮಾಡಿ.<br />
<br />
೫.ಇದರೊಳಗೆ ನಿಮಗೆ ೪ ಆಯ್ಕೆಯಿರುತ್ತದೆ<br />
<br />
ಅ.ಮೊದಲನೆಯ ಆಯ್ಕೆ,ನೀವು ತಲೆ ಕೇಡಿಸಿಕೊಳ್ಳದೆ ಹಾಲಲ್ಲಾದ್ರು ಹಾಕು ನೀರಲ್ಲಾದ್ರು ಹಾಕು ಅಂತ ವಿಂಡೋಸ್ಗೆ ನಿರ್ಧಾರವನ್ನು ಬಿಡುವುದು.ಇದನ್ನು ಆಯ್ಕೆ ಮಾಡಿಕೊಂಡ್ರೆ,ಶಿವನೆ ಶಂಭುಲಿಂಗ!!! ನಿಮ್ಮ ಕಂಪ್ಯೂಟರ್ ಅಳೊಕ್ಕೆ ಶುರು ಮಾಡ್ತು ಅನ್ಕೊಳ್ಳಿ.<br />
<br />
ಆ.ಎರಡನೆಯ ಆಯ್ಕೆ, ಸುಂದರವಾಗಿ ಕಂಡರೆ ಸಾಕು ಕಾರ್ಯಕ್ಷಮತೆ ಸುಮಾರಿದ್ರು ಪರ್ವಾಗಿಲ್ಲ ಅಂತ ನಿರ್ಧರಿಸಿದ್ರೆ ಇದನ್ನ ಆಯ್ಕೆ ಮಾಡಿಕೊಳ್ಳಬಹುದು.<br />
<br />
ಇ.ಮೂರನೆಯ ಆಯ್ಕೆ, ಕಾರ್ಯಕ್ಷಮತೆ ಸಾಕು ಸೌಂದರ್ಯ ಸುಮಾರಿದ್ರು ಪರ್ವಾಗಿಲ್ಲ ಅಂತ ನಿರ್ಧರಿಸಿದ್ರೆ ಇದನ್ನ ಆಯ್ಕೆ ಮಾಡಿಕೊಳ್ಳಬಹುದು.<br />
<br />
ಈ.ನಾಲ್ಕನೆಯ ಆಯ್ಕೆ, ನನ್ನ ಕಂಪ್ಯೂಟರ್ ಹೇಗೆ ಕೆಲಸ ಮಾಡ್ಬೇಕು ಎಷ್ಟು ಸುಂದರವಾಗಿ ಕಾಣಬೇಕು ಅಂತ ಯೋಚಿಸಿ ಎಲ್ಲಾ ನಿರ್ಧಾರ ನಾನೆ ತೊಗೊತೀನಿ ಎಂದರೆ ಇದನ್ನ ಆಯ್ಕೆ ಮಾಡಿ ಏಕೆಂದರೆ ಸುಂದರವಾಗಿ ಕಾಣಿಸುವುದು ತತ್ಪರಿಣಾಮವಾಗಿ ಕಂಪ್ಯೂಟರ್ ಕಾರ್ಯಕ್ಷಮತೆ ಮೇಲೆ ಹಿಡಿತ ಸಾಧಿಸುವುದು ಈ ಆಯ್ಕೆಯಿಂದ ಮಾತ್ರ ಸಾಧ್ಯ. ಈ ಆಯ್ಕೆಗಳಲ್ಲಿ ಕಮ್ಮಿ ಆಯ್ಕೆಗಳು ಟಿಕ್ ಆದಲ್ಲಿ ಸೌಂದರತೆ ಹಾಗು ಕಾರ್ಯಕ್ಷಮತೆ ಮಿಶ್ರವಾಗುತ್ತದೆ. ನಿರ್ಧಾರ ನಿಮಗೆ ಬಿಟ್ಟಿದ್ದು, ನನ್ನ ಕಂಪ್ಯೂಟರ್ನಲ್ಲಿ ಕೇವಲ ಎರಡು ಮಾತ್ರ ಆಯ್ಕೆ ಮಾಡಿಕೊಂಡಿದ್ದೇನೆ (ಕೆಳಗಿನಿಂದ ೨ ಹಾಗು ೩ನೆಯದು - use common task in folders ಹಾಗು use drop shadows for icon labels on desktop) ಮೆಮೊರಿ ವಿಚಾರ ಬಂತೆಂದರೆ ಸಕ್ಕಥ್ ಜಿಪುಣ್ರಾಗೊದ್ರಲ್ಲೆ ಜಾಣತನ ಇದೆ :) <br />
<br />
ಪೇಜ್ಫೈಲ್ ಅನ್ನು ಆಪ್ಟಿಮೈಸ್ಮಾಡುವುದು<br />
<br />
ಪೇಜ್ಫೈಲ್ ಎನ್ನುವುದು ಮೆಮೊರಿಗೆ ಸಂಬಂಧಿತ ವಿಚಾರ,ಈ ಮೆಮೊರಿಯ ಗಾತ್ರ ಎಷ್ಟಿರಬೇಕೆಂದು ಕಂಪ್ಯೂಟರ್ನ ಬದಲು ನಾವೆ ನಿರ್ಧರಿಸಿದರೆ ಅದಕ್ಕೆ ಕಮ್ಮಿ ಕೆಲಸ ಕೊಟ್ಟಂತೆ ಹಾಗಾಗಿ ಅದರ ಕೆಲಸ ಸುಲಭವಾಗಿ ಬೇರೆ ಕೆಲಸಗಳ ಕಡೆ ಗಮನಹರಿಸಿ ಕಾರ್ಯವನ್ನು ತ್ವರಿತವಾಗಿ ಮುಗಿಸುತ್ತವೆ. ಪೇಜ್ಫೈಲ್ ಗಾತ್ರವನ್ನು ಹೊಂದಿಸುವ ಮುನ್ನ ಕಂಪ್ಯೂಟರ್ನ RAM ಗಾತ್ರ ಎಷ್ಟು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಇದನ್ನು ತಿಳಿಯಲು ನಾವು<br />
<br />
೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.<br />
<br />
೨. ಅದರಲ್ಲಿ "ಸಾಮಾನ್ಯ" ಎಂಬ ಟ್ಯಾಬ್ಅನ್ನು ಕ್ಲಿಕ್ಕಿಸಿ.<br />
<br />
೩. ನಿಮಗೆ "ಬೆಂಬಲ ಮಾಹಿತಿ" ಎನ್ನುವ ಗುಂಡಿ ಕಾಣುತ್ತದೆ ಅದರ ಮೇಲ್ಗಡೆ ನೀವು ಬಳಸುತ್ತಿರುವ ಕಂಪ್ಯೂಟರ್ನ RAM ಗಾತ್ರ ಎಷ್ಟು ಎಂಬುದನ್ನು ತಿಳಿಸಲಾಗಿರುತ್ತದೆ. ಇದೆ ನಮಗೆ ಬೇಕಾಗಿರುವ ಮಾಹಿತಿ :)<br />
<br />
ಈಗ ಪೇಜ್ಫೈಲ್ ಗಾತ್ರವನ್ನು ಹೊಂದಿಸಲು ನಾವು ಮಾಡಬೇಕಾಗಿರುವ ಕೆಲಸ...<br />
<br />
೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.<br />
<br />
೨."ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.<br />
<br />
೩.ನಂತರ ಅದರಲ್ಲಿ "ಕಾರ್ಯ ದಕ್ಷತೆ"ಗೆ ಸಂಬಂಧಿತ "ಸೆಟ್ಟಿಂಗ್ಗಳು" ಗುಂಡಿಯನ್ನು ಒತ್ತಿ .<br />
<br />
೪.ಪುನಹ ಅದರೊಳಗಿರುವ "ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.<br />
<br />
೫.ಇದರೊಳಗಿರುವ ಮೂರು ವಿಭಾಗಗಳಲ್ಲಿ "ವರ್ಚುಯಲ್ ಮೆಮೊರಿ" ಎನ್ನುವುದರಲ್ಲಿ ಲಭ್ಯವಿರುವ "ಬದಲಿಸು" ಎಂಬ ಗುಂಡಿಯನ್ನು ಒತ್ತಿರಿ.<br />
<br />
೬.c drive ಅನ್ನು ಒಂದು ಬಾರಿ ಕ್ಲಿಕ್ ಮಾಡಿ (ಇದರ ಸೂಚ್ಯವಾಗಿ ಅದರ ಮೇಲೆ ನೀಲಿ ಪಟ್ಟಿಯಿಂದ ಕಾಣುತ್ತದೆ)<br />
<br />
೭.ನಂತರ ಕೆಳಗೆ "ಆಯ್ಕೆ ಮಾಡಲಾದ ಡ್ರೈವ್ ನ ಪೇಜ್ಫೈಲ್ನ ಗಾತ್ರ" ಎಂಬ ವಿಭಾಗವಿರುತ್ತದೆ<br />
ಅದರಲ್ಲಿ ಮೂರು ಆಯ್ಕೆಗಳಿರುತ್ತವೆ<br />
<br />
ಅ.ನಿಗದಿಪಡಿಸಿದ ಗಾತ್ರ<br />
<br />
ಆ.ಕಂಪ್ಯೂಟರ್ ನಿಭಾಯಿಸುವ ಗಾತ್ರ<br />
<br />
ಇ.ಪೇಜ್ ಫೈಲ್ ಅವಶ್ಯಕವಿಲ್ಲ.<br />
<br />
ನಿಮ್ಮ RAM ಗಾತ್ರ ೫೧೨ MBಗಿಂತ ಕಿರಿದಾಗಿದ್ದರೆ (೫೦೦ಕ್ಕಿಂತ ಕಿರಿದು - ಅಂದ್ರೆ ೧೨೮MB ಅಥವಾ ೨೫೬MB ) ಎರಡನೆಯದನ್ನು ಆಯ್ಕೆ ಮಾಡಿ.<br />
<br />
ನಿಮ್ಮ RAM ಗಾತ್ರ ೫೧೨ MBಗಿಂತ ಹಿರಿದಾಗಿದ್ದರೆ (೪೦೦ಕ್ಕಿಂತ ಹಿರಿದಾಗಿದ್ದರೆ ಸಾಕು) ಮೊದಲನೆಯದನ್ನು ಆಯ್ಕೆ ಮಾಡಿ.<br />
<br />
"ನಿಗದಿಪಡಿಸಿದ ಗಾತ್ರ"ವನ್ನು ನೀವು ಆಯ್ಕೆ ಮಾಡುವುದರ ಮೂಲಕ ಗಾತ್ರವನ್ನು ನಿರ್ಧರಿಸುವ ಮೊತ್ತ ನಿಮ್ಮದಾಗುತ್ತದೆ. ನಿಮ್ಮ RAM ಗಾತ್ರ ಎಷ್ಟಿರುತ್ತದೆಯೊ ಅದೆ ಮೊತ್ತವನ್ನು "ಆರಂಭದ ಗಾತ್ರ"(MB): ದಲ್ಲಿ ನಮೂದಿಸಬೇಕಾಗುತ್ತದೆ. "ಗರಿಷ್ಟ ಗಾತ್ರ"(MB): ದಲ್ಲಿ ಅದರ ಎರಡರಷ್ಟು ಮೊತ್ತವನ್ನು ನಮೂದಿಸಿ. ನಮೂದಿಸಿದ ನಂತರ "ಸರಿ" ಎನ್ನುವುದನ್ನು ಒತ್ತಿ, ನಂತರ "ಅನ್ವಯಿಸು" ಎನ್ನುವುದನ್ನು ಒತ್ತಿ, ನಂತರ "ಸರಿ" ಎನ್ನುವುದನ್ನು ಒತ್ತಿ. ಮತ್ತೆ "ಮುಂದುವರಿದ " ಟ್ಯಾಬ್ ಕಾಣಿಸಿರುತ್ತದೆ ಇಲ್ಲು ಸಹ "ಅನ್ವಯಿಸು" ಎನ್ನುವುದನ್ನು ಒತ್ತಿ, ನಂತರ "ಸರಿ" ಎನ್ನುವುದನ್ನು ಒತ್ತಿದರೆ ಪೇಜ್ಫೈಲ್ ಅನ್ನು ಟ್ವೀಕಿಸಿದಂತೆಯೆ ಸರಿ :)<br />
<br />
ಡಿಲೀಟ್ ಕಾರ್ಯವನ್ನು ಮಾನ್ಯ ಮಾಡದೆ ಕಾರ್ಯಸಾಧಿಸುವುದು:<br />
<br />
ಇದು ಕಂಪ್ಯೂಟರ್ನ ಕಾರ್ಯನಿರ್ವಹಣೆಗೆ ಸಂಬಂಧಿತವಲ್ಲದ್ದಿದ್ದರು, ನಿಮಗು ಅನ್ಸುತ್ತೆ "ಒಹ್, ಎಷ್ಟ್ ಬೇಗ ಆಗೋಯ್ತು!!!" ಅಂತ :)<br />
ಈ ಥರ ಅನಿಸಬೇಕು ಅಂದ್ರೆ<br />
<br />
೧.ಪು.ಬು ಮೇಲೆ ಬಲ ಕ್ಲಿಕ್ ಮಾಡಿ ನಂತರ ಅದರಲ್ಲಿ ಗುಣಧರ್ಮಗಳನ್ನು ಕ್ಲಿಕ್ ಮಾಡಿ<br />
<br />
೨."ಡಿಲೀಟ್ ಮಾನ್ಯ ಮಾಡುವ ಡೈಲಾಗ್ ತೋರು"ಎಂಬ ಚೆಕ್ ಬಾಕ್ಸ್ ಇರುತ್ತದೆ ಅದರಲ್ಲಿ ಟಿಕ್ ಗುರುತು ಇದ್ದಲ್ಲಿ ಆ ಟಿಕ್ ಗುರುತಿನ ಮೇಲೆ ಒಂದು ಬಾರಿ ಕ್ಲಿಕ್ ಮಾಡಿ ತೆಗೆಯಿರಿ.<br />
<br />
೩.ನಂತರ "ಸರಿ" ಎನ್ನುವುದನ್ನು ಒತ್ತಿ.<br />
<br />
ಅಪ್ಪಿ ತಪ್ಪಿ ನೀವೇನಾದ್ರು ಅಗತ್ಯವಿರುವ ಕಡತವನ್ನು ಅಕಸ್ಮಾತಾಗಿ ಡಿಲೀಟ್ ಮಾಡಿದಿರಿ ಅನ್ಕೊಳ್ಳಿ ಹೆದರುವ ಅವಶ್ಯಕತೆಯಿಲ್ಲ, ಆ ಕಡತ ನಿಮಗೆ ಪು.ಬುವಿನಲ್ಲಿ ಲಭ್ಯವಿರುತ್ತದೆ. ಅಲ್ಲಿ ಹೋಗಿ ಆ ಕಡತದ ಮೇಲೆ ಬಲ ಕ್ಲಿಕ್ ಮಾಡಿ ಮರುಸ್ಥಾಪಿಸಿದರೆ ಆಯಿತು, ತೊಂದರೆ ಇಲ್ಲ. ಅದು ಯಥಾಸ್ಥಾನದಲ್ಲಿ ಪ್ರತ್ಯಕ್ಷವಾಗುತ್ತದೆ.<br />
<br />
Custom size - ನಿಗದಿಪಡಿಸಿದ ಗಾತ್ರ<br />
Properties - ಗುಣಧರ್ಮಗಳು<br />
Advanced - ಮುಂದುವರಿದ<br />
Performance - ಕಾರ್ಯ ದಕ್ಷತೆ<br />
General - ಸಾಮಾನ್ಯ<br />
Initial size - ಆರಂಭದ ಗಾತ್ರ<br />
Maximum size - ಗರಿಷ್ಟ ಗಾತ್ರ<br />
Change - ಬದಲಿಸು<br />
Apply - ಅನ್ವಯಿಸು<br />
OK - ಸರಿ<br />
Recycle bin - ಪು.ಬು (ಪುನರ್ಬಳಕೆ ಬುಟ್ಟಿ)<br />
Restore - ಮರುಸ್ಥಾಪಿಸಿ<br />
Display Delete Confirmation Dialog - ಡಿಲೀಟ್ ಮಾನ್ಯ ಮಾಡುವ ಡೈಲಾಗ್ ತೋರು<br />
<br />
ಮುಂದುವರೆಯುವುದು....prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-10341773760872175692010-06-29T22:55:00.000-07:002010-06-29T22:55:03.878-07:00ಅಳುತ್ತಿರುವ ನಿಮ್ಮ ವಿಂಡೊಸ್ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಭಾಗ ೧on April 20, 2009 <br />
<br />
ಲಿನಕ್ಸ್ ಇಂದಿನ ಪೀಳಿಗೆಯ OS ಆಗಿದ್ರು ಸಹ ಲಿನಕ್ಸ್ಗೆ ಹೊಂದಿಕೊಳ್ಳುವವರೆಗು ವಿಂಡೊಸ್ ಜೊತೆ ಗುದ್ದಾಡದೆ ಗತ್ಯಂತರವಿಲ್ಲ.<br />
ವಿಂಡೊಸ್ ಕಂಪ್ಯೂಟರ್ ಗಳ ದೊಡ್ಡ ತಲೆನೋವ್ವುಗಳೇನೆಂದರೆ<br />
೧. ಶುರು ಮಾಡಿದಾಗ ಬೀಪ್ ಅಂತ ಶಬ್ದ ಮಾಡಿದ ಮೇಲು ನಿಧಾನವಾಗಿ (೫-೧೦ ನಿಮಿಷದ ನಂತರ) ಗಣಕ ತೆರೆ ಕಂಡು ಬರುವುದು.<br />
೨. ಷಟ್ ಡೌನ್ ಮಾಡಿದಾಗಲು ಸಹ ಕಾರ್ಯ ಸ್ಥಗಿತವಾಗುವುದಕ್ಕೆ ೫-೧೦ ನಿಮಿಷ ತೆಗೆದುಕೊಳ್ಳುವುದು, ಕೆಲವು ಕಂಪ್ಯೂಟರ್ ಗಳು ೧೫ ನಿಮಿಷ ತೆಗೆದುಕೊಳ್ಳುವುದು ಉಂಟು.<br />
೩. ಮೌಸ್ ಬಲ-ಕ್ಲಿಕ್ ಮಾಡಿದಾಗ ಆಗಲಿ ಅಥ್ವಾ ಯಾವುದೆ ಕೆಲಸ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಾಗಲಿ.<br />
೪. ಯಾವುದಾದ್ರು ವರ್ಡ್ ಕಡತ ತೆರೆಯಲು ನಿಧಾನವಾಗುವುದು.<br />
೫. ಪ್ರೋಗ್ರಾಂಗಳು ಶುರು ಆಗುವುದು ನಿಧಾನವಾಗುವುದಾಗಲಿ.<br />
೬. ಹುಡುಕುವಾಗ ಫಲಿತಾಂಶಗಳು ನಿಧಾನವಾಗಿ ಕಾಣುವುದಾಗಲಿ..<br />
<br />
ಮುಂತಾದ ಅನೇಕ ಸಮಸ್ಯೆಗಳು ನಿಮ್ಮ ಸಹನೆಯನ್ನು ಪರೀಕ್ಷಿಸಿದರೆ ವಿಂಡೊಸ್ನಲ್ಲಿ ಕೆಲವು ಚಿಕ್ಕ ಪುಟ್ಟ ಟ್ವೀಕ್ ಮಾಡಿದರೆ, ವಿಂಡೋಸ್ ಚೂಟಿಯಾಗುವುದರಲಿ ಸಂಶಯವಿಲ್ಲ.<br />
<br />
ವಿ.ಸೂ: ಇಲ್ಲಿ ತಿಳಿಸಿರುವುದಷ್ಟೆ ಮಾಡಿ, ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡ್ತೀನಿ ಅಂದು ಏನೋ ಮಾಡಿ ಏನೋ ಆದರೆ ನಾನು ಜವಾಬ್ದಾರನಲ್ಲ :), ಹುಷಾರು.<br />
ಆದ್ರೆ ನಿಮ್ಮ ವಿಂಡೊಸ್ ಕಂಪ್ಯೂಟರ್ ಯಾವ ಲೆವೆಲ್ ಗೆ ಹಾಳಾಗಿದ್ರು ಸಹ ಸರಿಪಡಿಸುವುದಕ್ಕೆ ಸಹಾಯ ಮಾಡ್ತೀನಿ ಹೆದರಿಕೊಳ್ಳಬೇಡಿ. ಇಷ್ಟು ಭರವಸೆ ಕೊಡಬಲ್ಲೆ :)<br />
<br />
ವಿಂಡೊಸ್ ಟ್ವೀಕಿಸುವ ಮುನ್ನ ಮುಂಜಾಗ್ರತೆ ಕ್ರಮವಾಗಿ ಒಂದು ಮುಖ್ಯವಾದ ವಿಚಾರ ತಿಳಿದುಕೊಳ್ಳಬೇಕು ಅದೇನೆಂದರೆ ಅಪ್ಪಿ ತಪ್ಪಿ ಏನಾದ್ರು ಮಾಮೂಲಿನ ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಉಂಟಾದಲ್ಲಿ ಸಿಸ್ಟಂ ಅನ್ನು ಯಥಾ ಸ್ಥಿತಿಗೆ ಮರಳುವಂತೆ ಮಾಡುವುದು.<br />
ಕಂಪ್ಯೂಟರ್ ಕಾರ್ಯ ನಿರ್ವಹಣೆ ಅನ್ನೋದು ಮುತ್ತಿನ ಹಾಗಲ್ಲ, ಮಾತು ಆಡಿದ್ರೆ ಹೊಯ್ತು ಮುತ್ತು ಒಡೆದರೆ ಹೊಯ್ತು ಅನ್ನೊಕ್ಕೆ,ಏನು ಆಗಲೆ ಇಲ್ಲವೆಂಬಂತೆ ಕಂಪ್ಯೂಟರ್ ಅನ್ನು ಯಥಾ ಸ್ಥಿತಿಗೆ ತರಬಹುದು(ದೈಹಿಕವಾಗಿ ಹಾಳಾಗದೆ ಇದ್ದಲ್ಲಿ ಮಾತ್ರ). ಹಲವಾರು ಬಾರಿ ನೀವು ಯೋಚಿಸಿರಬಹುದು, ನೆನ್ನೆ ಚೆನ್ನಾಗಿ ಕೆಲಸ ಮಾಡುತ್ತಿತ್ತು ಇಂದು ಯಾಕೊ ಈ ಒಂದು ಪ್ರೋಗ್ರಾಂ ಶುರುನೇ ಆಗ್ತಿಲ್ವಲ್ಲ, ನೆನ್ನೆ ವೇಗವಾಗಿ ಕೆಲಸ ಮಾಡುತ್ತಿತ್ತು ಇಂದು ಯಾಕೊ ಅಳುತ್ತಿದೆಯಲ್ಲಾ!! ದೇವ್ರೆ ಕಾಪಾಡಪ್ಪ ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ರೆ ಅಂಥವನ್ನೆಲ್ಲ ತೊಂದರೆ ಇಲ್ಲದೆ ಸರಿಪಡಿಸಬಹುದು. ಹಲವು ಬಾರಿ, ವೈರಾಣುವಿನ ಹಾವಳಿಯಿಂದಲೂ ಕಾಪಡಿಕೊಳ್ಳುವುದಕ್ಕೆ ಉಪಯುಕ್ತವಾಗುತ್ತದೆ. ಅದು ಹೇಗೆ ಎಂಬುದನ್ನು ಮುಂದೆ ತಿಳಿಸುತ್ತೇನೆ<br />
ಖಂಡಿತವಾಗಲು ನಿಮ್ಮ ಕಂಪ್ಯೂಟರ್ ಮೊದಲಿನ ತರಹ ಕೆಲಸ ಮಾಡುವ ಹಾಗೆ ಮಾಡಬಹುದು.<br />
<br />
ಈಗ ಕಂಪ್ಯೂಟರ್ ಯಥಾಸ್ಥಿತಿಗೆ ಮರಳಿ ತರಲು ಅತ್ಯಂತ ಪ್ರಮುಖ ದಾರಿ "ಸಿಸ್ಟಂ ರೀಸ್ಟೊರ್" ಬಗ್ಗೆ ತಿಳಿದುಕೊಳ್ಳುವ.<br />
ಇದನ್ನು ಹುಡುಕಬೇಕಾದ ಮಾರ್ಗ<br />
Start->Programs->Accessories->System Tools->"System Restore"<br />
<br />
೧.ಅಪ್ಪಿ ತಪ್ಪಿ ಇದು ಚಾಲ್ತಿಯಲ್ಲಿಲ್ಲದಿದ್ದರೆ ಮೇಲಿನ ಮಾರ್ಗದಲ್ಲಿ ಸಾಗುತ್ತಾ ಸಿಸ್ಟಂ ರೀಸ್ಟೊರ್ ಕ್ಲಿಕ್ಕಿಸಿದರೆ ಒಂದು ಪುಟ್ಟ ಮೆಸೇಜ್ ಬಾಕ್ಸ್ ಪ್ರತ್ಯಕ್ಷವಾಗುತ್ತದೆ.<br />
System Restore has been Turned Off. Do you want to turn on System Restore now?<br />
ಎಂದು ’ಹೌದು’ಎಂದು ಕ್ಲಿಕ್ಕಿಸಿ ಈಗ ಮೆಸೇಜ್ ಬಾಕ್ಸ್ ಮಾಯವಾಗಿ ನಿಮಗೆ "System Properties"ಎನ್ನುವ ಸಾಧನ ತೆರೆದುಕೊಳ್ಳುತ್ತದೆ. ಅಲ್ಲಿ "turn off System Restore" ಎನ್ನುವುದನ್ನು ಟಿಕ್ ಆಗಿರುತ್ತದೆ, ಅದನ್ನು ತೆಗೆಯಿರಿ. "ಡಿಸ್ಕ್ ಜಾಗದ ಬಳಕೆ" ಎನ್ನುವುದರಲ್ಲಿ ಗರಿಷ್ಟ ಮಟ್ಟಕ್ಕೆ sliderಅನ್ನು ಜರುಗಿಸಿ. ನಂತರ "ಅನ್ವಯಿಸು" ಎನ್ನುವ ಗುಂಡಿಯನ್ನು ಒತ್ತಿ. ನಂತರ ’ಸರಿ’ಎನ್ನುವುದನ್ನು ಒತ್ತಿ.<br />
ಈಗ ನಿಮ್ಮ ಕಂಪ್ಯೂಟರ್, ಕಾರ್ಯನಿರ್ವಹಣೆಯನ್ನು ಗಮನಿಸಲು ಶುರು ಮಾಡುತ್ತದೆ. ಗಮನಿಸುವುದಲ್ಲದೆ ಯಾವ್ದು ಸರಿ, ಯಾವುದು ತಪ್ಪು, ಎಂಬುದನ್ನು ಸಹ ನಿರ್ಧರಿಸಬಹುದು. ಎಷ್ಟು ಹಿಂದೆ ಹೆಜ್ಜೆ ಹಾಕಿದರೆ ತಪ್ಪನ್ನು ತಿದ್ದಬಹುದು ಅಂತೆಲ್ಲ ನಿರ್ಧರಿಸಲಿಕ್ಕಾಗುವುದು.<br />
ನೀವು ಮತ್ತೊಮ್ಮೆ ಮೇಲೆ ಸೂಚಿಸಿದ ಮಾರ್ಗದಲ್ಲಿ ಹೋಗಿ System Restore ಕ್ಲಿಕ್ಕಿಸಿದರೆ ಈ ಸರ್ತಿ ನಿಮಗೆ ಒಂದು ವಿಂಡೊ ಕಾಣಸಿಗುತ್ತದೆ . ಅದರಲ್ಲಿ ನಿಮಗೆ ಎರಡು ಆಯ್ಕೆ ಸಿಗುತ್ತದೆ<br />
೧. ಕಂಪ್ಯೂಟರ್ ಅನ್ನು ಮರುಸ್ಥಾಪಿನೆ ಮಾಡಲು ನಿರ್ಧರಿಸುವ ಸಮಯ.<br />
೨. ಮರುಸ್ಥಾಪಿನೆ ಬಿಂದುವನ್ನು ಸೃಷ್ಟಿಸುವುದು. <br />
<br />
ಮೊದಲನೆಯದನ್ನು ಆಯ್ಕೆ ಮಾಡಿ "ಮುಂದಿನದು" ಎಂದು ಕ್ಲಿಕ್ ಮಾಡಿದಾಗ ನಿಮಗೆ ಕ್ಯಾಲೆಂಡರ್ ಕಾಣಸಿಗುತ್ತದೆ.<br />
ದಪ್ಪನಾದ ದಿನಾಂಕವು ಮರುಸ್ಥಾಪಿನೆ ಮಾಡಲು ಶಕ್ತವಿರುವ ಬಿಂದುವನ್ನು ತೋರುತ್ತದೆ. ಎಷ್ಟೆಲ್ಲಾ ದಪ್ಪನಾದ ಅಕ್ಷರಗಳ ದಿನಾಂಕವಿರುತ್ತದೆಯೊ ಅವೆಲ್ಲವು ಸಹಿತ ಕಂಪ್ಯೂಟರ್ ಅನ್ನು ಮರುಸ್ಥಾಪಿನೆ ಮಾಡಲು ಶಕ್ತವಿರುವ ಬಿಂದುವೆಂದು ತಿಳಿಯಬೇಕು.<br />
ಮುಖ್ಯವಾಗಿ ಗಮನದಲ್ಲಿಡಬೇಕಾದ ವಿಚಾರವೇನೆಂದರೆ ಕಂಪ್ಯೂಟರ್ಅನ್ನು ಹಿಂದಿನ ದಿನಾಂಕಕ್ಕೆ ಮರುಸ್ಥಾಪಿಸಿದಾಗ ಇಂದಿನ ಕೆಲಸದ ಡೇಟಾ ಹಾಳಾಗುವುದಿಲ್ಲ.ಆದರೆ ಇಂದು ಹಾಗು ಹಿಂದಿನ ದಿನಾಂಕದ ಮಧ್ಯೆ ಸ್ಥಾಪಿಸಲಾಗಿರುವ ಪ್ರೋಗ್ರಾಂಗಳು ಮಾಯವಾಗುತ್ತವೆ,ನಿಮ್ಮ ಕಂಪ್ಯೂಟರ್ ನ ಸೆಟ್ಟಿಂಗ್ಗಳು ಆಯ್ಕೆ ಮಾಡಲಾದಂತಹ ಹಿಂದಿನ ದಿನಾಂಕದಂದು ಇದ್ದ ಸೆಟ್ಟಿಂಗ್ನಂತೆಯೆ ಆಗುತ್ತದೆ. <br />
<br />
ಒಮ್ಮೆ ಈ ಸೇವೆ ಶುರುಮಾಡಿದ ನಂತರ ಕಂಪ್ಯೂಟರ್ ತನ್ನ ಪಾಡಿಗೆ ತಾನು,ಹಲವು ದಿನಗಳ ಅಂತರದಲ್ಲಿ ಹೊಸ "ಮರುಸ್ಥಾಪಿನೆ ಬಿಂದು"ವನ್ನು ಸೃಷ್ಟಿಸುತ್ತಾ ಹೋಗುತ್ತದೆ. ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.<br />
<br />
ಒಮ್ಮೊಮ್ಮೆ ನೀವೆ "ಮರುಸ್ಥಾಪಿನೆ ಬಿಂದು"ಸೃಷ್ಟಿಸಬೇಕಾಗಿ ಬರುತ್ತದೆ ಆಗ,ಮೇಲೆ ತಿಳಿಸಿರುವ ಆಯ್ಕೆಗಳಲ್ಲಿ ಎರಡನೆಯನದನ್ನು ಆಯ್ಕೆ ಮಾಡಬೇಕು.<br />
ನಂತರ "ಮುಂದಿನದು" ಎಂಬ ಗುಂಡಿಯನ್ನು ಕ್ಲಿಕ್ ಮಾಡಿದಾಗ ನೀವು ಸೃಷ್ಟಿ ಮಾಡಲು ಹೊರಟಿರುವ "ಮರುಸ್ಥಾಪಿನೆ ಬಿಂದು"ವಿಗೆ ಹೆಸರಿಡಬೇಕಾಗುತ್ತದೆ, ನಿಮ್ಮ ಹೆಸರಿಟ್ಟರು ಅಡ್ಡಿಯಿಲ್ಲ :).<br />
ಹೆಸರು ಸೂಚಿಸಿ "ಮುಂದಿನದು" ಎಂಬ ಗುಂಡಿಯನ್ನು ಕ್ಲಿಕ್ ಮಾಡಿದಾಗ ಹೊಸದಾದ "ಮರುಸ್ಥಾಪಿನೆ ಬಿಂದು"ಸೃಷ್ಟಿಯಾಗುತ್ತದೆ.<br />
<br />
ಒಂದೆ ದಿನದಲ್ಲಿ ಎರಡು "ಮರುಸ್ಥಾಪಿನೆ ಬಿಂದು"ಸೃಷ್ಟಿಯಾಗಿದ್ದರೆ ಸಮಯವನ್ನು ಸಹ ಸೂಚಿಸುತ್ತದೆ. ಇದನ್ನು ಪರಾಮರ್ಶಿಸಲು ನೀವು ಮತ್ತೆ System Restore ತೆರೆಯುವುದರ ಮೂಲಕ ಖಾತ್ರಿಪಡಿಸಿಕೊಳ್ಳಬಹುದು.<br />
<br />
ಈ ರೀತಿಯಲ್ಲಿ ನೀವು ಹಿಂದಿನ ದಿನಾಂಕದ "ಮರುಸ್ಥಾಪಿನೆ ಬಿಂದು"ಸ್ಥಾನಕ್ಕೆ ಹೋಗಬಹುದು ಅಥವ ಹೊಸದಾದ "ಮರುಸ್ಥಾಪಿನೆ ಬಿಂದು"ಸೃಷ್ಟಿ ಮಾಡಬಹುದು. <br />
<br />
ಇಷ್ಟೆಲ್ಲ ಹೇಳಿ ಮುಗಿಸಿ ಆದಮೇಲೆ ಮುಂದಿನ ಟ್ವೀಕ್ಗಳನ್ನು ಮಾಡುವ ಮುನ್ನ ಹೊಸದೊಂದು "ಮರುಸ್ಥಾಪಿನೆ ಬಿಂದು" ಸೃಷ್ಟಿ ಮಾಡಿ, ವಿಂಡೊಸ್ಗೆ ನವಚೇತನ ನೀಡಲು ಅಡಿಗಲ್ಲು ಹಾಕಿ :)<br />
<br />
ಸೂಚಿ ಸೇವೆಗಳನ್ನು ರದ್ದುಪಡಿಸುವುದು:<br />
<br />
ಸಾಮಾನ್ಯವಾಗಿ ನಾವು ಕಂಪ್ಯೂಟರ್ನಲ್ಲಿ ಏನಾದರು ಹುಡುಕಲು ಆದೇಶಿಸಿದಾಗ ಅದು ಜೋರಾಗಿ ಸದ್ದು ಮಾಡುತ್ತಾ ನಿಧಾನವಾಗಿ ಫಲಿತಾಂಶವನ್ನು ನೀಡುವುದು ವಿಂಡೊಸ್ನ ಸಹಜ ಗುಣ.<br />
ಇದನ್ನು ತಪ್ಪಿಸಿ ತ್ವರಿತವಾಗಿ ಸದ್ದಿಲ್ಲದೆ ಕಂಪ್ಯೂಟರ್ ಕೆಲಸ ಮಾಡಲು ಕೆಳಗೆ ತಿಳಿಸಿರುವ ಕೆಲಸವನ್ನು ನಾವು ಮಾಡಬೇಕು.<br />
ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದು ತಿಳ್ಕೋಬೇಕಿದ್ರೆ ಕೇಳಿ ತಿಳಿಸ್ತೀನಿ<br />
<br />
೧.Start ಮೆನು ಕ್ಲಿಕ್ಕಿಸಿ<br />
೨.ನಂತರ Settingsಗೆ ಹೋಗಿ<br />
೩.ಅದರಲ್ಲಿ Control Panel ಆಯ್ಕೆ ಮಾಡಿ<br />
೪.ನಂತರ Add/Remove Programs ಅನ್ನು ಕ್ಲಿಕ್ಕಿಸಿ, ಪುಟ್ಟ ವಿಂಡೊ ಪುಟಿಯುತ್ತದೆ<br />
೫.ಇದರಲ್ಲಿ ಎಡಭಾಗದಲ್ಲಿ ೪ ವಿಭಾಗಗಳಿರುತ್ತವೆ,ಆ ನಾಲ್ಕರಲ್ಲಿ Add/Remove Window Components ಎನ್ನುವುದನ್ನು ಆಯ್ಕೆ ಮಾಡಿ.<br />
೭.ಇದನ್ನು ಆಯ್ಕೆ ಮಾಡಿದ ನಂತರ Windows component wizard ಎನ್ನುವ ಮತ್ತೊಂದು ಪುಟ್ಟ ವಿಂಡೊ ಪುಟಿಯುತ್ತದೆ<br />
೭.ಈ ವಿಂಡೊನಲ್ಲಿ ಹಲವಾರು Windows component ಪಟ್ಟಿಯಾಗಿರುತ್ತದೆ ಅದರೊಳಗೆ "ಸೂಚಿ ಸೇವೆಗಳು" ಎನ್ನುವುದು ಟಿಕ್ ಗುರುತಿನ ಮೂಲಕ ಆಯ್ಕೆಯಾಗಿದ್ದಲ್ಲಿ<br />
ಆ ಟಿಕ್ ಗುರುತನ್ನು uncheck ಮಾಡಿ ತೆಗೆದುಬಿಡಿ. <br />
೮.ನಂತರ Next ಎನ್ನುವ ಗುಂಡಿಯನ್ನು ಒತ್ತಿ.<br />
೯.ವಿಂಡೊಸ್ ಇದನ್ನು ಮಾನ್ಯ ಮಾಡಿ Finish ಎನ್ನುವ ಗುಂಡಿಯನ್ನು ತೋರಿಸುತ್ತದೆ, ಅದನ್ನು ಕ್ಲಿಕ್ಕಿಸಿದೊಡನೆ ನಿಮ್ಮ ಗ.ಯಂ ಹುಡುಕುವ ಕಾರ್ಯಗಳಲ್ಲಿ ತೊಡಗಿದಾಗ ಚೂಟಿಯಾಗುತ್ತದೆ :).<br />
<br />
ಹಿಗ್ಗಿಸಬಹುದಾದ ಕಾರ್ಯದಕ್ಷತೆ ಗಣಕವನ್ನು ರದ್ದುಪಡಿಸುವುದು:<br />
<br />
ನಾವು ಆದೇಶಿಸಿದ ಕೆಲಸ ಆದ್ರೆ ಸಾಕಲ್ವ,ಯಾವ ಆದೇಶಕ್ಕೆ ಕಂಪ್ಯೂಟರ್ ಎಷ್ಟು ಬೇಗ ಸ್ಪಂದಿಸುತ್ತದೆ, ಇದು ನಿಜವಾಗಲು ಪೂರ್ಣಪ್ರಮಾಣದ ದಕ್ಷತೆ ತೋರಿತೆ ಎನ್ನುವ ಲೆಕ್ಕಾಚಾರಗಳು ನಮಗೆ ಅಗತ್ಯವಿದೆಯೆ?<br />
ಇಂಥಹ ಕೆಲಸಗಳು ನಮ್ಮ ಆದೇಶಗಳನ್ನು ನೆರವೇರಿಸುವಲ್ಲಿ ಸಹಾಯ ಮಾಡದಿದ್ದರು ಕಂಪ್ಯೂಟರ್ ಮಂದಸ್ಮಿತವಾಗುವ ಹಾಗೆ ಮಾತ್ರ ಖಂಡಿತವಾಗಿ ಮಾಡುತ್ತದೆ.<br />
ಹಾಗಾಗಿ ಈ ಗಣಕವನ್ನು ರದ್ದುಪಡಿಸುವುದು ಅವಶ್ಯಕ.<br />
ಇದಕ್ಕೋಸ್ಕರ ನೀವು ಪುಟ್ಟ ತಂತ್ರಾಶವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು, ಕೊಂಡಿ ಇಲ್ಲಿದೆ<br />
http://sites.google....<br />
ಡೌನ್ಲೋಡ್ ಮಾಡಿದ ನಂತರ ಅನ್ಝಿಪ್ ಮಾಡ್ಬೇಕು,ಹೊರಬರುವ exe ಕಡತವನ್ನು ಡಬಲ್ ಕ್ಲಿಕ್ ಮಾಡಿ ತಂತ್ರಾಂಶವನ್ನು C:\Program Files ಎನ್ನುವ ಮಾರ್ಗದಲ್ಲಿ ಸ್ಥಾಪಿಸಿದರೆ ಒಳಿತು.<br />
ಸ್ಥಾಪಿಸಿದ ನಂತರ<br />
೧. C:\Program Files\ ಎಂಬ ಮಾರ್ಗದಲ್ಲಿ Resource Kit ಎಂಬ ಫೋಲ್ಡರ್ಅನ್ನು ತೆರೆಯಿರಿ.<br />
೨. ಇದರೊಳಗೆ exctrlst.exe ಎಂಬ ಕಡತದ ಮೇಲೆ ಡಬಲ್ ಕ್ಲಿಕ್ ಮಾಡಿ.<br />
೩. ಕ್ಲಿಕ್ ಮಾಡಿದ ನಂತರ ಪುಟ್ಟ ವಿಂಡೊ ಶುರುವಾಗಿ ಹಲವಾರು ಸೇವೆಗಳ ಪಟ್ಟಿ ತೋರಿಸುತ್ತದೆ.<br />
೪. ಅದರೊಳಗೆ ಪ್ರತಿ ಸೇವೆಗು ಸಹ ಕಾರ್ಯದಕ್ಷತೆ ಗಣಕಗಳು ಸಕ್ರಿಯವಾಗಿದೆ ಎಂದು ತೋರಲು check box ಇರುತ್ತದೆ.<br />
೫. ನೀವು ಮಾಡಬೇಕಿರುವುದಿಷ್ಟೆ, ಪ್ರತಿ ಸೇವೆಯ ಮೇಲೆ ಕ್ಲಿಕ್ಕಿಸುತ್ತಾ ಆಯಾ ಕಾರ್ಯದಕ್ಷತೆ ಗಣಕಗಳು ಸಕ್ರಿಯವಾಗಿದೆ ಎಂಬ check box ನಿಂದ ಟಿಕ್ ಗುರುತನ್ನು ತೆಗೆಯಬೇಕು <br />
೬. ಎಲ್ಲಾ ಸೇವೆಗಳಿಗು ಟಿಕ್ ಗುರುತನ್ನು ತೆಗೆದ ಮೇಲೆ ವಿಂಡೊವನ್ನು ಮುಚ್ಚಿರಿ.<br />
<br />
ನಿಮ್ಮ ಕಂಪ್ಯೂಟರ್ಗೆ ಸ್ವಲ್ಪ ಶಕ್ತಿಕೊಟ್ಟಂತಾಗುತ್ತದೆ.<br />
<br />
ಫೋಲ್ಡರ್ಗಳಲ್ಲಿ ಹುಡುಕುವುದನ್ನು ಚುರುಕುಗೊಳಿಸುವುದು:<br />
<br />
"ಮೈ ಕಂಪ್ಯೂಟರ್" ಡಬಲ್ ಕ್ಲಿಕ್ಕಿಸಿ ಅದರ ಮೂಲದ ಯಾವುದಾದರು ಡ್ರೈವ್ ಒಳಗೆ ಹುಡುಕುವುದಾಗಲಿ ಮಾಡುವಾಗ ನಿಮಗೆ ಕಂಪ್ಯೂಟರ್ ನಿಧಾನವಾಗಿ ಕೆಲಸ ಮಾಡುತ್ತಿದೆ ಎನ್ನಿಸಬಹುದು.<br />
ಹೀಗೆ ಯಾಕಾಗುತ್ತದೆ ಎಂದರೆ ವಿಂಡೊಸ್ ನಿಮ್ಮ ಕಂಪ್ಯೂಟರ್ನಲ್ಲಿ ಸ್ಥಾಪಿತವಾದಾಗಿನಿಂದಲೆ, ಪ್ರತಿ ಫೋಲ್ಡರ್/ಕಡತ ಹುಡುಕುವುದರಲ್ಲಿ ತೊಡಗುವಾಗ ಅನವಶ್ಯಕವಾಗಿ ಜಾಲದಲ್ಲಿ ಇರುವ ಕಡತಗಳನ್ನು ಹಾಗು ಅಚ್ಚುಯಂತ್ರವನ್ನು ಸಹ ಹುಡುಕಲು ರೂಪಿಸಲಾಗಿರುತ್ತದೆ(ಇವರಡು ಲಭ್ಯವಿಲ್ಲದಿದ್ದರು ಸಹ..).<br />
ಇದನ್ನು ತಪ್ಪಿಸಿದರೆ ಹುಡುಕುವ ಕಾರ್ಯವ್ಯಾಪ್ತಿ ಚಿಕ್ಕದಾಗಿ ಹುಡುಕುವ ಕಾರ್ಯ ಮತ್ತಷ್ಟು ಚುರುಕಾಗುತ್ತದೆ. ಇದಕ್ಕೆ ನಾವು ಮಾಡಬೇಕಾಗಿರುವ ಕೆಲಸ<br />
<br />
೧."ಮೈ ಕಂಪ್ಯೂಟರ್" ತೆರೆಯಿರಿ.<br />
೨. "ಸಾಧನ" ಮೆನ್ಯು ಮೇಲೆ ಕ್ಲಿಕ್ಕಿಸಿ.<br />
೩. "ಫೋಲ್ಡ್ರರ್ ಆಯ್ಕೆಗಳು" ಎಂಬುದನ್ನು ಕ್ಲಿಕ್ಕಿಸಿ.<br />
೪. "ವೀಕ್ಷಿಸು" ಎಂಬ ಟ್ಯಾಬ್ ಕ್ಲಿಕ್ಕಿಸಿ.<br />
೫. "ಸ್ವಯಂಚಾಲಿತವಾಗಿ ಜಾಲದಲ್ಲಿರುವ ಕಡತಗಳನ್ನು ಹಾಗು ಅಚ್ಚುಯಂತ್ರಗಳನ್ನು ಹುಡುಕು" ಎಂಬ check boxನಲ್ಲಿ ಟಿಕ್ ಗುರುತನ್ನು ತೆಗೆಯಿರಿ<br />
೬. "ಅನ್ವಯಿಸು" ಎಂಬ ಗುಂಡಿಯನ್ನು ಕ್ಲಿಕ್ಕಿಸಿ<br />
೭. ನಂತರ "ಸರಿ" ಎಂಬ ಗುಂಡಿಯನ್ನು ಕ್ಲಿಕ್ಕಿಸಿ <br />
೯. ಇದಾದ ನಂತರ ನಿಮ್ಮ ಕಂಪ್ಯೂಟರ್ ಅನ್ನು ಪುನರ್ಶುರು ಮಾಡಿ<br />
<br />
ಸೂಚಿ ಸೇವೆ = Indexing Services<br />
ಹಿಗ್ಗಿಸಬಹುದಾದ ಕಾರ್ಯದಕ್ಷತೆ ಗಣಕ = Extensible Performance Counter<br />
ಜಾಲದಲ್ಲಿ ಇರುವ ಕಡತ = network files<br />
ಅಚ್ಚುಯಂತ್ರ = printer<br />
ಸಾಧನ = Tools<br />
ಫೋಲ್ಡ್ರರ್ ಆಯ್ಕೆಗಳು = Folder options<br />
ವೀಕ್ಷಿಸು = View<br />
ಸ್ವಯಂಚಾಲಿತವಾಗಿ ಜಾಲದಲ್ಲಿರುವ ಕಡತಗಳನ್ನು ಹಾಗು ಅಚ್ಚುಯಂತ್ರವನ್ನು ಹುಡುಕು = Automatically search for network folders and printers<br />
ಅನ್ವಯಿಸು = Apply<br />
ಸರಿ = OK<br />
ಪುನರ್ಶುರು = Reboot<br />
ಡಿಸ್ಕ್ ಜಾಗದ ಬಳಕೆ = Disk Space Usage<br />
ಮುಂದಿನದು = Next<br />
ಮರುಸ್ಥಾಪಿನೆ ಬಿಂದು = Restore point<br />
<br />
ಮುಂದುವರೆಯುವುದು.....prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-54853910175156638732010-06-29T22:54:00.000-07:002010-06-29T22:54:08.120-07:00ಪ್ರಾದೇಶಿಕ ಪಕ್ಷಕ್ಕೆ ಮತ ಹಾಕ್ಬೇಕ? ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕ್ಬೇಕ?on April 16, 2009 <br />
<br />
ಎಲ್ಲಿ ನೋಡಿದ್ರು ಚುನಾವಣೆ ಭರಾಟೆ, ಅದರದ್ದೆ ಚರ್ಚೆ,ಮಾತು,ಕಾಡು ಹರಟೆ, ಎಲ್ಲವು ಅದಕ್ಕೆ ಮೀಸಲು. ಚುನಾವಣೆ ಫಲಿತಾಂಶ ಹೊರಗೆ ಬೀಳೋವರ್ಗು ಇದು ತಪ್ಪಿದ್ದಲ್ಲ. ಆದ್ರೆ ವೋಟ್ ಮಾಡೊನಿಗೆ ಇರೊ ತಲೆನೋವು ಯಾರಿಗೆ ಮತ ಹಾಕ್ಲಿ ಅಂತ!!! ಪ್ರಾದೇಶಿಕ ಪಕ್ಷಕ್ಕೆ ಮತ ಹಾಕ್ಬೇಕ?ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕ್ಬೇಕ?ಅಥವಾ ಇಷ್ಟು ವರ್ಷದಿಂದ ಕಣ್ಣ್ ಮುಂಚ್ಕೊಂಡು ವಂಶಪಾರಂಪರ್ಯವಾಗಿ ದೇಶವನ್ನ ಆಳುತ್ತಾ ಬಂದ ಪಕ್ಷಕ್ಕೆ ಮತ ಹಾಕ್ಲಾ ಅಂತ.ಇಷ್ಟು ವರ್ಷ ಉದ್ಧಾರ ಮಾಡಿದ್ದು ಅಷ್ರಲ್ಲೆ ಇದೆ ನಾ ಕಂಡಿಲ್ವಾ ಇವರ ಬಂಡವಾಳಾನ, ಈ ಸರ್ತಿ ಆರಾಮಾಗಿ ರಜೆ ಮಜೆ ಮಾಡಿದ್ರೆ ಸಾಕು, ಯಾವನಿಗೆ ಬೇಕು ಈ ಚುನಾವಣೆ ಅನ್ನೊ ಬೃಹಸ್ಪತಿಗಳಿಗು ಏನು ಕಮ್ಮಿ ಇಲ್ಲ. ಒಟ್ನಲ್ಲಿ ಮತ ಹಾಕೋವರ್ಗು ದ್ವಂದ್ವ ಇದ್ದದ್ದೆ...<br />
<br />
ಈಗ ನೋಡಿ ಒಬ್ರು ಪ್ರಾದೇಶಿಕ ಪಕ್ಷಾನೆ ಒಳ್ಳೆದು, ನಮ್ ನಾಡಿಗೆ ಸೌಕರ್ಯ ಒದಗಿಸ್ತಾರೆ,ರೈಲು ಬರ್ತದೆ,ನಮ್ ಜನಕ್ಕೆನೆ ಕೆಲ್ಸ ಸಿಗ್ತದೆ,ನಮ್ ನಾಡಿನ ನೆಲ ಕಸಿಯೊಲ್ಲ,ನಮ್ ನಾಡಿನ ನೀರು ಬಿಡುವ ಅವಶ್ಯಕತೆಯಿಲ್ಲ ಅಂತೆಲ್ಲಾ ಅಂತ. ಯಾಕಂದ್ರೆ ಕೇಂದ್ರದಾಗೆ ರಚನೆ ಆಗೊ ಸರ್ಕಾರಕ್ಕೆ ನಮ್ ನಾಡಿನ್ ಸರ್ಕಾರ ಸಹಾಯ ತಗಂಡಿರ್ತದೆ ಅಂದ್ಬುಟ್ಟು ನಾವ್ ಕೇಳಿದ್ನ ಅವ್ರು ಕೊಡ್ತಾರೆ ಅನ್ನೊ ನಂಬಿಕೆ ಅಲ್ವ!! ಇದಕ್ಕೆ ಒಪ್ಪೊ ಉದಾಹರ್ಣೆ ಅಂದ್ರೆ ತ್ಯಮುಳುನಾಡ್ನೋರು ಕೇಳಿದ್ದು, ಕೇಂದ್ರ ಸರ್ಕಾರ ಮಾಡ್ಕೊಡ್ಲಿಲ್ಲಾ ಅಂದ್ರೆ ಬೆಂಬಲ ವಾಪನ್ ಪಡಿತೀವಿ ಅಂತ್ ಇವರು ರೋಪ್ ಹಾಕ್ತಾರೆ!! ಆಷ್ಟಕ್ಕು ತ್ಯಮುಳುನಾಡ್ನಲ್ಲಿ ಆಗಿರೋದೇನು? ಒಡಕು ನೀತಿ ರಾಜಕೀಯ,ಉತ್ತರ ಭಾರತೀಯರು ಅರ್ಯನ್ನರು ರಾಷ್ಟ್ರೀಯ ಪಕ್ಷಗಳು ಆರ್ಯನ್ರದ್ದು.ಅವರು ನಮ್ಮ ಶತ್ರುಗಳು ಅನ್ನೋ ಭಾವನೆ ಹೊತ್ತು ಬೆಳೆಯೊ ದಡ್ಡ ಜನರು.ಆರ್ಯನ್ -ದ್ರಾವಿಡ್ ಥಿಯರಿ ಸುಳ್ಳು ಅಂತ ಗೊತ್ತಿದ್ರು ಸೈತಾ ತಮ್ಮ ಬೇಳೆ ಬೇಯ್ಸ್ಕಳಕ್ಕೆ ಜನರಿಗೆ ಸತ್ಯ ತಿಳಿಸ್ದೆ ಮೋಸ ಮಾಡ್ತ ಆಳ್ತಿರೋರು. ಮೇಲಾಗಿ ಪೆರಿಯಾರ್,ಅಣ್ಣಾ ಅನ್ಕೊಂಡು ದೇವ್ರು ಇಲ್ಲ ದಿಂಡ್ರು ಇಲ್ಲಾ ಹಿಂದುಗಳದ್ದೆಲ್ಲಾ ಪೊಳ್ಳುವಾದ ಅಂತ ಒಂದು ಕಡೆ ಶಂಖ ಹೊಡ್ಕೊಂಡು ಮೈನಾರಿಟಿಯವರಿಗೆ ಕುಮ್ಮಕ್ಕು ನೀಡ್ತಾ ಮತಾಂತರದಂತಹ ಆತ್ಮ ವ್ಯಭಿಚಾರಕ್ಕೆ ಆಸ್ಪದ ಕೊಡ್ತಾ ವೋಟ್ ಬ್ಯಾಂಕ್ ಗಟ್ಟಿ ಮಾಡ್ಕಂಡ್ರೆ ಮಾತ್ತೊಂದ್ ಕಡೆ ಮೆಜಾರಿಟಿಯವರ ಜೊತ್ಗೂನು ಕೈ ಕೈ ಮಿಲಾಯಿಸ್ತಾ ಆಸನ ಭದ್ರ ಮಾಡ್ಕೊತಾರೆ. ಸರಿನಪ್ಪಾ ಹಿಂಗೆಲ್ಲಾ ಮಾಡಿದ್ರೆ ರೈಲ್ ಬರ್ತದೆ,ಅಂಚೆ ಚೀಟಿ ಬಿಡುಗಡೆ ಮಾಡ್ತಾರೆ,ನೀರು ಬಿಡೊ ಹಾಗೆ ಮಾಡ್ತಾರೆ, ಇಷ್ಟೆ ಅಲ್ವಾ.. ಅವರ ನಾಡಿನಲ್ಲಿ ಅವರಿಗೆ ಕೆಲ್ಸ ದಕ್ಕೋದಾಗ್ಲಿ ಅಥ್ವಾ ಅವರಿಗೆ ಅವರ ಜಾಗದಲ್ಲಿ ಪ್ರಾಮುಖ್ಯತೆ ಇರೊದಾಗ್ಲಿ ಅದು ಬರಿ ಅವರ ಭಾಷಾಭಿಮಾನ,ನಾಡ್ ಮ್ಯಾಗ್ ಇರೊ ಪಿರೂತಿ ಮೇಲೆ ಮಾತ್ರ ನಿಂತಿರೋದು ಅಟೆಯಾ ಕೇಂದ್ರಕ್ಕೆ ಬೆಂಬಲ ಕೊಟ್ಟಿದೀವಿ ಅಂತಲ್ಲ.<br />
<br />
ಈ ವರಸೆ ಕೂಡ ತ್ಯಪ್ಪು ಅನ್ಕಳಣ,ಈ ಪ್ರಾದೇಶಿಕ ಪಕ್ಷ್ದೋರು ಕಡೆನಾಗೆ ರಾಷ್ಟ್ರೀಯ ಪಕ್ಷಕ್ಕೆ ತಾನೆ ಬೆಂಬಲ ಕೊಡೊದು ಆ ರಾಷ್ಟ್ರೀಯ ಪಕ್ಷ ನಮ್ ದೇಸಾನ ಹೆಂಗ್ ಆಳ್ತಾರೆ ಅನ್ನೊದು ಮುಖ್ಯ ಆಗೊಲ್ವಾ?? ಟೆರರಿಸ್ಟ್ಗೆ ವೇತನ ಕೋಡೊದು ಕೇಳಿದೀರಾ? ಸಿಕ್ಕಿಬಿದ್ದಿರೊ ಟೆರರಿಸ್ಟ್ಗೆ ಗಲ್ಲು ಕೊಡೊಕ್ಕೆ ಆಗಿಲ್ಲಾ!! ನಮ್ ದೇಸ್ದಾಗೆ ಪಾಕಿಸ್ತಾನ ಬಾವುಟ ಹಾರಿಸ್ತಾರೆ!! ಸಾವಿರ ಜನ ಸತ್ರು ತಲೆ ಕೆಡಿಸ್ಕೊಳ್ಳೊರು ಇಲ್ಲಾ!! ಹಿಂಗೆಲ್ಲಾ ನಮ್ ದೇಸ್ದಾಗೆ ಮಾತ್ರ ನಡಿತೈತೆ. ತ್ಯಮುಳುನಾಡಿಗೆ ರೈಲ್ ಬಂದಿರ್ಬೋದು,ಅಂಚೆ ಚೀಟಿ ಬಿಡುಗಡೆ ಮಾಡಿರ್ಬೋದು,ನೀರು ಬಿಡೊಕ್ಕೆ ಒತ್ತಾಯ ಮಾಡಿರ್ಬೋದು, ಆದ್ರೆ ಕೊಯಂಬತ್ತೊರ್ ಅಲ್ಲಿ ಜನ ಬಾಂಬ್ ಹಿಡ್ಕಂಡು ಒಡಾಡ್ತಾರಲ್ಲ ಎನ್ ಅಂತೀರಾ ಈ ಮಾತ್ಗೆ?ಬಾಂಬ್ ಸ್ಫೊಟದ ಕೇಸ್ನಾಗೆ ಸಿಕ್ಕಿಬಿದ್ದಿರೋನು ಮುಸ್ಲಿಂ ರಾಜಕೀಯ ವ್ಯಕ್ತಿ.ಎಲ್ಲ ಪುರಾವೆ ಇದ್ರು ಅವನಿಗೆ ಶಿಕ್ಷೆ ಕೊಡ್ಸೊಕ್ಕೆ ಆಗ್ಲಿಲ್ಲ ಅನ್ನೋದಕ್ಕಿಂತ ಶಿಕ್ಷೆ ಆಗೊಕ್ಕೆ ಬುಡ್ಲಿಲ್ಲಾ ಅನ್ನಿ.ಇವರು ಬೆಂಬಲ ಕೊಟ್ಟಿರೊ ರಾಷ್ಟ್ರೀಯ ಪಕ್ಷದ ನೀತಿ ದೇಸದ್ ಹಿತಾಸಕ್ತಿಗೆ ವಿರುದ್ಧ ಇದ್ರೆ ಎನ್ ಬಂತು ಸುಖಾ.. ನಾವಾಯ್ತು,ನಮ್ ನಾಡು ಆಯ್ತು ಅಂತ ಸಣ್ಣದಾಗಿ ಯೋಚಿಸಿದ್ರೆ ಮಣ್ ತಿನ್ಬೇಕು ನಾವು ಭಾರತೀಯರಾಗಿ ಆಷ್ಟೆ,ಕನ್ನಡದವರಾಗಿ ಉದ್ಧಾರ ಆಗಬೈದೇನೊ ಆದ್ರೆ ಭಾರ್ತೀಯನಾಗಿ ಮಾತ್ರ ಮಾನ ಮರ್ವಾದೆ ಹರಾಜ್ ಹಾಕೊಂಡಿರ್ತೀವಿ ಅಂತ ಅನ್ಸಾಕಿಲ್ವಾ? <br />
<br />
ದೇಶದ್ ಹಿತಾಸಕ್ತಿ ಮುಖ್ಯ.. ನಾಡಿನ್ ಹಿತಾಸಕ್ತಿ ಮುಖ್ಯಾ.. ಈಗ ನೋಡಿ ಗುಜರಾತ್ನಾಗೆ ಇರೋದು ರಾಷ್ಟ್ರೀಯ ಪಕ್ಷ ಅಲ್ವರಾ? ಅದು ಹೆಂಗೈತೆ? ಏಟ್ ಖದರ್ ನಿಂದ ಕೇಂದ್ರಕ್ಕೆ ಸಡ್ಡು ಹೊಡೆದು ನಿಲ್ತದೆ.ಪ್ರಾದೇಶಿಕ ಪಕ್ಷ ಇಲ್ಲ ಅಂದ್ಬುಟ್ಟು ಅಲ್ಲೆನು ಅಭಿವೃದ್ಧಿ ಕೆಲ್ಸ ನಿಂತೊಗೈತಾ?ಜನಕ್ಕೆ ಕೆಲ್ಸಾ ಇಲ್ವಾ?ಅಥ್ವಾ ಆರ್.ಜೆ.ಡಿ ಪ್ರಾದೇಶಿಕ ಪಕ್ಷ ಇದ್ದಾಗ ಬಿಹಾರ ಎಂಗಪ್ಪಾ ಬೆಳೀತು,ಅಲ್ಲಿ ಜನ ಇನ್ನಾನುವ ಆಯ್ಕಂಡ್ ತಿಂತಿಲ್ವಾ? ತಾಕತ್ತು ಅಂದ್ರೆ ಗುಜರಾತ್ ಜನರದ್ದು,ಜನ ಬಲ ಅಂದ್ರೆ ಅದು,ಒಗ್ಗಟ್ಟು ಅಂದ್ರೆ ಅದು.ಅಭಿವೃದ್ಧಿ ಪರ ಇರೊ ಯಾವ್ದು ಜಾತಿ ಮತದವ್ರು ಆದ್ರು ಸಹ ಮೋದಿಗೆ ಕಣ್ ಮುಚ್ಕೊಂಡು ಮತ ಹಾಕ್ತಾರೆ.ಯಾಕಂದ್ರೆ ಅಲ್ಲಿ ಪ್ರಾದೇಶಿಕ ಅಥ್ವಾ ರಾಷ್ಟ್ರೀಯ ಅಂತ ಒಡಕು ಇಲ್ಲಾ, ಏನಿದ್ರು ಗುಜರಾತ್ನ ಭವ್ಯ ಕನ್ಸು ಐತೆ ಜನ್ರ ಮನ್ಸ್ನಾಗೆ.ಹಿಂಗಿದ್ರೆ ನಮ್ಗೆ<br />
ಸಮಾಜ್ದಾಗೆ ಪ್ರೀತಿ,ಸೌಹಾರ್ದತೆ,ಪರಸ್ಪರ ನಂಬಿಕೆ ಅಂತ ಕಾಣೊದು,ಬರೊದು,ನಾಡು ಚಿನ್ನದ ಬೀಡಾಗೋದು. ನಂ ನಾಡ್ಗೆ ಒಳ್ಳೆದು ಆಗ್ಬೆಕು ಅಂದ್ರೆ ನಾವು ಮೊದ್ಲು ಸರಿ ಇರ್ಬೇಕು,ನಾವು ಮೊದ್ಲು ಒಳ್ಳೆ ಪ್ರಜೆ ಆಗಿ ಬಾಳೊದು ಕಲಿಬೇಕು.ಬರಿ ನಂ ಕೋಣೆ ಮಾತ್ರ ಶುಚಿಯಾಗಿದ್ರೆ ಸಾಕಾ? ಮನೆ ಅಂದ್ವಾಗಿಡೊದು ಬೇಡ್ವಾ?<br />
<br />
ಪ್ರಾದೇಶಿಕ,ರಾಷ್ಟ್ರೀಯ ಅಂತ ಅನ್ದೆ ಭಾರ್ತೀಯನಂಗೆ ಯೊಚಿಸಿ ದೇಸದ್ ಹಿತಾಸಕ್ತಿ ನೋಡ್ಕಂಡು ಮತ ಚಲಾಯಿಸ್ಬೇಕು. ಜನ ಹಿನ್ಗೆ ಮೆರಿತಾ ಇರ್ಲಿ ಬತ್ತದೆ ಒಂದ್ ದಿನಾ ಕಾಶ್ಮೀರ್ದಾಗೆ ಪಾಕಿಸ್ತಾನ್ ಬಾವುಟ,ನಾಗಲ್ಯಾಂಡ್ ನಮ್ ದೇಸ್ದಿಂದ ಹೊರಗಾಗ್ಬೇಕು ಅಂತ ಅಮೇರಿಕದಾಗೆ ಕುಂತ್ಕೊಂಡು ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು ಅದನ್ನ ಕ್ರೈಸ್ತ ನಾಡನ್ನ ಮಾಡುದ್ರಲ್ಲ ಅವ್ರು ಬಡ್ಕತ ಅವ್ರೆ. ಹಿಂಗೆನೆಯಾ ನಾವು ಕಚ್ಚಾಡ್ಕಂಡು ಸಾಯ್ತಿದ್ರೆ ಒಂದು ದಿನ ತಲೆ ಮ್ಯಾಗೆ ಟವಲ್ ಹಾಕೊಂಡು ಕುಂತ್ಕೊಂಡು ಲಬೊ,ಲಬೊ,ಲಬೊ ಅಂತಾ ಹೊಯ್ಕಬೇಕು ಅಷ್ಟೆ..<br />
<br />
ಪ್ರಾದೇಶಿಕ ಪಕ್ಷಾ ಇದ್ಕಂಡು ರೈಲ್ ಬರಸ್ಕಂಡು,ಅಂಚೆ ಚೀಟಿ ಬಿಡುಗಡೆ ಮಾಡ್ಕಂಡು,ನೀರು ಬಿಡ್ಬೇಕಾಗಿ ಬರೊ ಹಾಗೆ ಒತ್ತಡ ತರಿಸಿ,ಮತಾಂತರಕ್ಕೆ ಕುಮ್ಮಕ್ಕು ಕೊಡ್ತಾ,ಬಾಂಬ್ ಹಾಕಿರೊ ವ್ಯಕ್ತಿಗಳೆಲ್ಲ ಕೇವಲ ಬೆಂಬಲ ನೀಡೊ ವೋಟ್ ಬ್ಯಾಂಕ್ ಪ್ರತಿನಿಧಿ ಆಗಿರೋದ್ರಿಂದ ಆರಮಾಗಿ ಓಡಾಡ್ತಿರೊ ತ್ಯಮುಳುನಾಡ್ ಥರ ನಮ್ ನಾಡು ಇರ್ಬೇಕಾ ಅಥ್ವಾ ರಾಷ್ಟ್ರೀಯ ಪಕ್ಷಾ ಇದ್ಕಂಡು ಮತಾಂತರದ ವಿರುದ್ಧ ಸಿಡಿದು,ಬಾಲ ಬಿಚ್ಚೊ ಕುನ್ನಿಗಳ ಬಾಲ ಕತ್ತರಿಸಿ,ನಾಡಿಗೆ ನ್ಯಾನೊ ಕೀರ್ತಿ ತಂದು,ಒಂದು ವರ್ಷದಾಗೆ ೮೦೦೦೦ ಕೋಟಿ ಅಂದ್ರೆ ೮೦೦೦೦೦೦೦೦೦೦೦೦ ರೂಊಊಊಊಪಾಯಿ ಆದಾಯ ತಂದು ತಮ್ಮ ನಾಡಿನ ಕೀರ್ತಿ ಹೆಚ್ಚಿಸ್ಕೊಂಡು ಯಾವ್ದೆ ಜಾತಿ/ಮತದವರ ಮ್ಯಾಗೆ ದೌರ್ಜನ್ಯ ಮಾಡ್ದೆ, ಕಾರಣವಿಲ್ಲದೆ ಶಿಕ್ಷಿಸ್ದೆ,ಯಾವ್ದೆ ತಂಟೆ ತಕರಾರು ಇಲ್ದೆ,ಎಲ್ರು ಸೌಹಾರ್ದತೆ ಇಂದ ಬದುಕೋ ಹಾಗೆ ಇರೊ ಗುಜರಾತ್ ಮಾದರಿಯ ರಾಷ್ಟ್ರೀಯ ಪಕ್ಷಾ ಇರೊ ನಾಡು ಬೇಕಾ? ಯೋಚ್ನೆ ಮಾಡ್ಬುಟ್ಟು ನಂಗೆ ವಸಿ ಯೊಳಿ.. ಯಾವ್ದ್ ಸರಿ ಯಾವ್ದ್ ತಪ್ಪು ಅಂತಾprasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-10371624018195542742010-06-29T22:52:00.000-07:002010-06-29T22:52:12.413-07:00"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು - ಭಾಗ ೩ (ಕೊನೆಯದ್ದು)on April 15, 2009<br />
<br />
’ಮ’ಕಾರದಲ್ಲಿ ಆರನೇಯದಾಗಿ ಮೈನೊ.<br />
ಮೈನೊ ಅಂದರೆ ಏನು? ಅಥವಾ ಯಾರು?ಅಂಟೊನಿಯಾ ಮೈನೊ,ಇಟಲಿಯಲ್ಲಿ ಹುಟ್ಟಿ ರೋಮನ್ ಕಾಥೋಲಿಕ್ ಕ್ರೈಸ್ತೆಯಾಗಿ ಬೆಳೆದು,ಭಾರತಕ್ಕೆ ಬಂದಾದ ಮೇಲೆ ಸೋನಿಯಾ ಗಾಂಧಿಯಾದ ಇವಳಿಗೆ ದೇಶದ ಸಂಸ್ಕೃತಿ,ಇತಿಹಾಸ,ಪರಂಪರೆಯನ್ನೆ ಅರಿಯದ ಇವಳು ಇಂದು ಪರದೆಯ ಹಿಂದೆ ಅವಿತು "ಮನ ಮೋಹಿನಿ"ಯನ್ನು ಮುಂದಿಟ್ಟುಕೊಂಡು ದೇಶದ ಭವಿಷ್ಯವನ್ನೆ ನಿರ್ಧರಿಸುತ್ತಾಳೆ!!ನಮ್ಮ ದೇಶವನ್ನೆ ಮಾರಲಿಕ್ಕೆ ಹೊರಟಿರುವ ಕಾಂಗ್ರೆಸ್ಸ್ ರಾಜಕಾರಣಿಗಳ ಮಂದೆ,ಇವಳ "ಗಾಂಧಿ"ಎಂಬ ಹೆಸರನ್ನೆ ಮುಂದಿಟ್ಟುಕೊಂಡು ಅಧಿಕಾರಕ್ಕಾಗಿ,ದುಡ್ಡಿಗಾಗಿ ಹಪಾಹಪಿ ನಡೆಸುತ್ತಿದ್ದಾರೆ.ಹಿಂದು ಮೌಲ್ಯಗಳು<br />
ಹಿಂದು ಧರ್ಮವೆಂದರೆ ಕಿಂಚಿತ್ ಸಹ ಗೌರವಿಸದ ಇವಳಿಗೆ ನಮ್ಮ ದೇಶದ ರಾಜಕಾರಿಣಿಗಳು ನಾ ಮುಂದು ತಾ ಮುಂದು ಅಂತ ಬಿದ್ದು ಇವಳು ಕಾಲಲ್ಲಿ ತೋರಿಸಿದ್ದನ್ನು ಅತ್ಯಂತ ಭಕ್ತಿಯಿಂದ ಶ್ರದ್ಧೆ ವಹಿಸಿ ಮಾಡುತ್ತಾರೆ ಏಕೆಂದರೆ "ಮೇಡಂ"ಗೆ ಖುಷಿ ಆದ್ರೆ ಖುರ್ಚಿ ಗಟ್ಟಿಯಿದ್ದಂತೆ ಅಲ್ಲವೆ. ಶಿವರಾಜ್ ಪಾಟಿಲ್ ಸಹ ಮೇಡಂನ ಆಗಾಗ ಭೇಟಿ ಮಾಡಿ ಪೆಟ್ಟಿಗೆಗಟ್ಟಲೆ ಕಾಣಿಕೆ ಅರ್ಪಿಸಿದ್ದಕ್ಕೆ ಅಲ್ವೆ ಜನಾಂದೋಲನ ನಡೆಸಿ ಅವನನ್ನು ತೆಗೆಸಬೇಕಾಯಿತು, ಇಲ್ಲವಾದರೆ ಇನ್ನು ಹೇಳಿಕೆ ಕೊಟ್ಟಿಕೊಂಡೆ ಅಧಿಕಾರ ಚಲಾಯಿಸುತ್ತಿದ್ದ "ಧೈರ್ಯವಾಗಿರಿ, ಭಯೊತ್ಪದಕರನ್ನು ಬಗ್ಗುಬಡಿಯುತ್ತೇವೆ, ತಪ್ಪು ಮಾಡಿದವರನ್ನು ಶಿಕ್ಷಿಸುತ್ತೇವೆ"ಅಂತಾನೆ ಡಂಗೂರ ಹೊಡಿತಾ ಇದ್ದಿದ್ದು.ಸುಪ್ರೀಂ ಕೋರ್ಟ್ ಆಜ್ಞೆಯನ್ನು ಮೀರಿ ಅಫಜಲ್ ಗುರುನ ಇನ್ನ ಸಾಕ್ತಾನೆ ಇದಾರೆ, ಈಗ ಕಸಬ್ ಅನ್ನು ಸಹ ಸಾಕಲು ಯೋಜಿಸಿದ್ದಾರೆ.ಒಟ್ನಲ್ಲಿ ಕೇಸರಿ ರಕ್ತ ಹರಿದರು ಪರವಾಯಿಲ್ಲ ಆದ್ರೆ ಹಸಿರು ರಕ್ತ ಒಂದು ತೊಟ್ಟು ಸಹ ಹೊರಬರದಂತೆ ಕಾಪಾಡುವುದರಲ್ಲಿ ಕಾಂಗ್ರೇಸ್ಸಿಗರನ್ನು ಮೀರಿಸುವುದರಲ್ಲಿ ಯಾರು ಹುಟ್ಟಿಲ್ಲ. ಆದ್ರು ಸಹ ನಮ್ಮ ಹಿಂದುಗಳು ಅವರಿಗೆ ಕಣ್ಣುಮುಚ್ಚಿ ವೋಟು ಹಾಕುವುದನ್ನು ಬಿಡುವುದಿಲ್ಲ.ಗಾಂಧಿ ಸತ್ತು ಐವತ್ತು ವರ್ಷ ಆದ್ರು ಗಾಂಧಿತನದ ಹೆಸರಿಟ್ಟುಕೊಂಡು ಆಳುತ್ತಿರುವ ಗೋ ಮುಖವ್ಯಾಘ್ರಗಳಿಗೆ ವೋಟು ಹಾಕುವುದು ನಿಲ್ಲುವುದಿಲ್ಲ.<br />
<br />
ಕಾಂಗ್ರೇಸ್ಸಿಗರಿಗೆ ಇಟಲಿಯಿಂದಲೆ ಬಂದಿರುವವರು ಆಗಬೇಕೆ? ಇವರ ಪಾರ್ಟಿಯನ್ನು ನಡೆಸಲು ಅರ್ಹರು ನಮ್ ದೇಶದಲ್ಲಿ ಯಾರು ಹುಟ್ಟೆ ಇಲ್ಲವೆ? ಕರ್ನಾಟಕದಲ್ಲಿ ಅಪ್ಪ-ಮಗನ್ನ ನೋಡಿದ್ದಾಯ್ತು ಇನ್ನ ಕೇಂದ್ರದಲ್ಲಿ ಅಮ್ಮ-ಮಗನ ಸರದಿ!!೨೦೦೪ರಲ್ಲಿ ಲಂಡನ್ನ"ದಿ ಗಾರ್ಡಿಯನ್""A Waitress who became the world leader"ಎಂದು ಪತ್ರಿಕೆಯು ಮುಖ ಪುಟಗಳಲ್ಲಿ ಹೇಳಿತು. ಇವಳಿಗೆ ಓದು, ವಿದ್ಯಾರ್ಹತೆಯೆನ್ನುವುದರ ಗಂಧವೆ ಗೊತ್ತಿಲ್ಲಾ!!ಆಗಲೆ ಸಿದ್ಧಪಡಿಸಿದ ಭಾಷಣವನ್ನು ಬಿಟ್ಟು ನಾಲ್ಕು ಮಾತಾಡಲು ಶಕ್ತಳಿರದ ಇವಳನ್ನು larger than life ಎಂಬ ಹಾಗೆ ಬಿಂಬಿಸುವ ಮೀಡಿಯಾಗೆ ನಮೋ ನಮ:.ರಾಜೀವ್ ಗ್ಯಾಂಡಿ(ghandy) ಯನ್ನು ಮದುವೆ ಆಗಿ ಭಾರತದಲ್ಲಿ ೧೮ ವರ್ಷಗಳಿಂದ ನೆಲೆಸಿದ್ದರು ಸಹ ಭಾರತೀಯ "ಪೌರತ್ವ"ವನ್ನು ಸ್ವೀಕರಿಸಲು ನಿರಾಕರಿಸಿದಳು ಆದರು ಸಹ ದಿಲ್ಲಿಯಲ್ಲಿ ಇವಳು "ವೋಟರ್"!!! ಕರ್ನಾಟಕದಲ್ಲಿದ್ದುಕೊಂಡೆ ಕನ್ನಡ ಬಾರದೆ ಕರ್ನಾಟಕದಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡಿಗರು ಎನಿಸಿಕೊಳ್ಳುವುದಿಲ್ಲವೆ?ನಮ್ಮ ನಾಡಿನ ನೀತಿಯಂತೆ ನಂ ಕೇಂದ್ರ!!<br />
<br />
ಸೆಪ್ಟೆಂಬರ್ ೨೦೦೬ ೭ರಂದು ಆಯೋಜಿಸಲಾಗಿದ್ದ ವಂದೆ ಮಾತರಂನ ಶತಮಾನೋತ್ಸವಕ್ಕೆ ಹಾಜರಾಗಲು ನಿರಾಕರಿಸಿದ ಇವಳಿಗೆ ಭಾರತ ದೇಶದ ಮೌಲ್ಯಗಳ ವಿರುದ್ಧ ಕಾರುವ ವಿಷದ ಅರಿವು ತಿಳಿಯದೆ ಹೋಗದು ಆದ್ರು ಸಹ ಜನರಿಗೆ ಇವಳೆ ಬೇಕು!! ಪೋಪ್ ಜಾನ್ ಪಾಲ್-೨ ತೀರಿಕೊಂಡಾಗ ಈ ಸೆಕ್ಯುಲರ್ ಸರ್ಕಾರಕ್ಕೆ ರಜೆ ಘೋಷಿಸುವುದರಲ್ಲಿ ಯಾವುದೆ ಹಿಂಜರಿಕೆ ತೋರಿಸಲಿಲ್ಲ.ಅಷ್ಟಕ್ಕು ನಮ್ ದೇಶಕ್ಕು ಪೋಪ್ ಜಾನ್ ಪಾಲ್-೨ ಏನು ಸಂಬಂಧ?? ನಾಳೆ ದಿನ ಬಿಹಾರಿನಲ್ಲಿ ಬಿನ್ ಲಾಡೆನ್ ಹಿಂಬಾಲಕರು ಗದ್ದುಗೆ ಏರಿದರೆ, ಬಿನ್ ಲಾಡೆನ್ ತೀರಿಕೊಂಡಾಗ ರಜೆ ಘೋಷಿಸಿದರೆ ಆಶ್ಚರ್ಯವಿಲ್ಲ ಅನ್ಕೋತೀನಿ!!ನಮ್ಮ ದೇಶದ ಬೆಳವಣಿಗೆಗೆ ಶ್ರಮಿಸಿದ ಧರ್ಮ ಗುರುಗಳು ಇವರಿಗೆ ಕೋಮುವಾದಿಗಳ ತರಹ ಕಾಣುತ್ತಾರೆ. ಆಸ್ಟ್ರೆಲಿಯನ್ ಮಿಷಿ-ನರಿ,ಗ್ಲಾಡಿಸ್ ಸ್ಟೈನ್ಸ್ (ಗ್ರಹಾಂ ಸ್ಟೈನ್ಸ್ ಹೆಂಡತಿ),ಗ್ರಹಾಂ ಸ್ಟೈನ್ಸ್ ಮತಾಂತರ ಕಾರ್ಯಗಳಲ್ಲಿ ಅತ್ಯಂತ ಚೂಟಿಯಾಗಿದ್ದ ಕಾರಣ ಅವನನ್ನು ಸ್ಥಳೀಯರು ಜೀವಂತ ಸುಟ್ಟರು- ಇದನ್ನು ನಾನು ಸಮರ್ಥಿಸುವುದಿಲ್ಲ ಆದರೆ ಈ ರೀತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇವನಿಗೆ ಈ ರೀತಿ ಅಂತ್ಯವಾದಾಗ ಅವನ ಹೆಂಡತಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವುದರಲ್ಲಿ ಏನರ್ಥ ಇದೆ? ಭಾರತಕ್ಕೆ ಇವರ ಕೊಡುಗೆ ಏನು?ಶ್ರೀಲಂಕಾದಲ್ಲಿ ತಮಿಳರ ಮೇಲೆ ಅನ್ಯಾಯವಾಗುತ್ತಿದೆ ಅಂತ ರಸ್ತೆಯಲ್ಲೆ ಸಜೀವ ದಹನ ಮಾಡಿಕೊಂಡು ಸತ್ತವರು ತುಂಬ ಸಿಗ್ತಾರೆ, ಅವರ ಮನೆಯವರಿಗು<br />
ಕೊಡಬಹುದಲ್ವ?ಪದ್ಮಶ್ರೀ ಪ್ರಶಸ್ತಿಯನ್ನ!!"ಬೆನ್ನಿ ಹಿನ್ನ್" ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಮತಾಂತರ ಮಾಡಲು ಕಾಲಿಟ್ಟ ಭೂಪ,ಇವನಿಗೆ ಬರುವಾಗ ಅಥವ ಹೋಗುವಾಗ ಯಾವುದೆ ಸೆಕ್ಯುರಿಟಿ ಚೆಕ್ ಆಗಲಿಲ್ಲ. ಏನು ತಂದಿದ್ದ? ಏನು ತೆಗೆದುಕೊಂಡು ಹೋದ!(ಇದು ದೇಶದ ಭದ್ರತೆಯ ವಿಚಾರ)ಯಾರಿಗು ತಿಳಿಯಲಿಲ್ಲ,ಎಲ್ಲ ಮೇಡಂ ಕೃಪೆ,ಬೂಟು ನೆಕ್ಕುವ ರಾಜಕಾರಣಿಗಳ ಸಹಯೋಗ.ಇಷ್ಟೆಲ್ಲಾ ನಡೆಸುವ ಇವಳು ಮತಾಂತರಕ್ಕೆ ಕುಮ್ಮಕ್ಕು ಕೊಡುವುದಿಲ್ಲ ಎಂದು ಯಾವ ಬಾಯಲ್ಲಿ ಹೇಳಬಹುದು?<br />
<br />
ಒಟ್ನಲ್ಲಿ ಹೇಳಬೇಕೆಂದ್ರೆ ಎಲ್ಲಿವರ್ಗು ಈ ಆರು "ಮ"ಕಾರಗಳು ಆಳುತ್ತವೊ ಅಲ್ಲಿವರ್ಗು ಹಿಂದುಗಳ ಬಾಳು ನಾಯಿ ಪಾಡು. "ಪೋಟಾ" ತೆಗೆದ್ರು, ಸುಪ್ರೀಮ್ ಕೋರ್ಟ್ ಆಜ್ಞೆ ಮೀರಿ ಅಫ್ಝಲ್ ಗುರುನ ಇನ್ನು ಸಾಕ್ತಿದಾರೆ. ಈಗ ಕಸಬ್ ಒಬ್ಬ ಬಂದ, ಪಾಕಿಸ್ತಾನಿ ಆದ್ರೇನಂತೆ ಅವನಿಗೆ ಶಿಕ್ಷೆ ಕೊಡಿಸದೆ ನಮ್ಮ ದೇಶದ ಮೈನಾರಿಟಿಯವರ ಹೃದಯಕಮಲಕ್ಕೆ ನೋವ್ವುಂಟಾಗದಂತೆ ನಡೆದುಕೊಳ್ಳುವುದೆ "ಮ"ಕಾರಗಳ ಉದ್ದೇಶ. ಮುಂಬೈ ನಲ್ಲಿ ನಡೆದ ಜಾಗತಿಕ ಮಟ್ಟದ ಹತ್ಯಾಕಾಂಡ ನಡಿಬೇಕಿತ್ತು ಮೈನೊ ಹಾಗು ಮನ ಮೋಹಿನಿಗೆ ಅಲ್ಲಾಡಲು,ಶಿವರಾಜ ಪಾಟೀಲರು ನಿರ್ಗಮಿಸಲು. ಅಕಸ್ಮಾತ್ ಆ ಘಟನೆಯಲ್ಲಿ ಹೊರದೇಶದ ಪ್ರಜೆಗಳು ಸಾಯದೆ ಇದ್ದಿದ್ದರೆ ಅಥವಾ ಅವರ ಪ್ರಜೆಗಳ ಮೇಲೆ ಹಲ್ಲೆಯೆ ಆಗದಿದ್ದರೆ ಬಹುಶ: ಈ ಮಟ್ಟಕ್ಕೆ ಬೆಳವಣಿಗೆಗಳು ಆಗುತ್ತಲೆ ಇರುತ್ತಿರಲಿಲ್ಲ,ಮನ ಮೋಹಿನಿ ಮಿಸುಕಾಡುತ್ತಿರಲಿಲ್ಲ.<br />
<br />
ಗಾಯದ ಮೇಲೆ ಬರೆಯೆಂಬಂತೆ ಈಗ ಎಮ್.ಎಫ್.ಹುಸೈನ್ನ ಮೇಲೆ ಒಂದು ಪಾಠವನ್ನು ಸಹ ಅಳವಡಿಸಲು ಹುನ್ನಾರ ನಡೆಯುತ್ತಿದೆ. ಇವನಿಗೆ ಹಿಂದು ದೇವತೆಗಳೆ ಆಗಬೇಕು ತನ್ನ ಚಿತ್ರಕಲೆ ಸಾಮರ್ಥ್ಯ ತೋರಲು, ಅವನ ಮಗಳು,ತಾಯಿಯೆಲ್ಲ ಮೈ ತುಂಬ ಬಟ್ಟೆ ಹಾಕಿಕೊಂಡಂತೆ ಚಿತ್ರಿಸಿದ್ದರೆ, ಹಿಂದು ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿರುವುದು ದೊಡ್ಡ ವಿಚಾರವೆ ಅಲ್ಲ. http://www.hindujagruti.org/activities/campaigns/national/mfhussain-campaign/<br />
ಈ ಮುದಿಯನ ಮುಖಕ್ಕೆ ಡಾಕ್ಟ್ರೇಟ್ ಬೇರೆ ಕೇಡು,"ಮಾಧುರಿ ಫಿದಾ" ಹುಸೈನ್ ಎಂಬ ಖ್ಯಾತಿ ಇವನಿಗೆ. ವಿಡಿಯೋಸ್ ನೋಡಲು http://www.hindujagruti.org/videos/index.php?id=2<br />
<br />
ಈಗ ಶಾಲೆಯ ಪಠ್ಯ ಪುಸ್ತಕದಲ್ಲಿ ಇವನ ಮೇಲೆ ಒಂದು ಪಾಠ ಮುಂದೊಂದು ದಿನ ಶಾರುಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್, ಸಂಜಯ್ ದತ್ತ್ ಕಾಣಿಸಿಕೊಂಡರೆ ಹೆದರ ಬೇಡಿ. ಇದು, ಕೇವಲ ಮೈನಾರಿಟಿ ಅವರ ಹಿರಿಮೆ ಕೊಂಡಾಡಲು ಅವರನ್ನು ಪುಸಕ್ತಗಳಲ್ಲಿ ಪರಿಚಯಿಸುತ್ತಿರುವುದು ಎಂಬ ಹೇಳಿಕೆ ಬಂದರು ಅಚ್ಚರಿಯಲ್ಲ. ಆದರೆ ನಿಜವಾದ "ಬಣ್ಣ"ವನ್ನು ಬರೆದ ತಸ್ಲೀಮಾ ನಸ್ರೀನ್ಗೆ ಬಹಿಷ್ಕಾರ!!!. "ರಾಮ್ ಸೇತು" ಬಗ್ಗೆ ಪ್ರಶ್ನಿಸುವ ಇವರು , ಶ್ರೀನಗರದಲ್ಲಿ ಇಡಲಾಗಿದೆಯೆಂಡು ಹೇಳುವ "ಮೊಹಮ್ಮದನ ಕೂದಲು" ಅಥ್ವಾ ಜೀಸಸ್ ನ "ಅಸ್ತಿತ್ವದ ಪುರಾವೆ" ಗಳ ಬಗ್ಗೆ ಮಾತೆ ಹೊರಡುವುದಿಲ್ಲ. ಯಾಕಂದರೆ ಜೀಸಸ್ ಅನ್ನುವ ವ್ಯಕ್ತಿಯೊಬ್ಬರು ಇದ್ದರು ಎನ್ನುವುದುಕ್ಕೆ ಯಾವುದೆ ಪುರಾವೆ ಇಲ್ಲ!! ಏನಿದ್ದರು ಬೈಬಲ್ ನ ಕಥೆಗಳಲ್ಲಿ ಮಾತ್ರ ಇವರ ಅಸ್ತಿತ್ವ :-o. ನಾವು ಕೆದಕುತ್ತೆವೆಯೆ ಇಂತಹ ವಿಚಾರಗಳನ್ನ? ಅಯೋಧ್ಯೆ,ದ್ವಾರಕೆಯ ಬಗ್ಗೆಯಾದರು ಪುರಾವೆ ಇವೆ ಆದರೆ ಇವರುಗಳ ಅಸ್ತಿತ್ವ ಹೇಗೆ ರುಜುವಾತು ಮಾಡುವುದು?ಎಲ್ಲದಕ್ಕು ನಂಬಿಕೆಯೆ ಮೂಲವಲ್ಲವೆ, ಹಾಗಾಗಿ ನಮ್ಮ ನಂಬಿಕೆಗನುಸಾರವಾಗಿ ರಾಮ ಸೇತು ವಿಚಾರವಾಗಿ ಪ್ರಶ್ನಿಸುವುದು ತಪ್ಪು. ಆದ್ರೆ ಇದನ್ನ ಕೇಳೊರು ಯಾರು? ಹಿಂದುಸ್ತಾನದಲ್ಲಿ ಹಿಂದುನೆ ಅಲ್ವಾ ಹಿಂದುಳಿದಿರೋದು!!<br />
<br />
ನೀವು,ಕಣ್ಣ್ ಮುಚ್ಚ್ಕೊಂಡು ಹರಕೆಯ ದುಡ್ಡೊ ಅಥವ ದೇವಸ್ಥಾನ ಉದ್ಧಾರ ಆಗ್ಲಿ ಅಂತ ಹುಂಡಿಗೆ ಹಾಕೊ ದುಡ್ಡು ರಾಮನಿಗಿಂತ ರಹೀಮ ಹಾಗು ಪಾದ್ರಿಯ ಇಗರ್ಜಿಯ ಖಾತೆಗಳಿಗೆ ಟ್ರಾನ್ಸ್ಫರ್ ಆಗುವುದು ಖಂಡಿತ.ಹೌದು, ಸರ್ಕಾರದ ಆಡಳಿತದಲ್ಲಿರುವ ದೇವಸ್ಥಾನ ಹುಂಡಿಯ ದುಡ್ಡು ಮಸೀದಿ ಹಾಗು ಇಗರ್ಜಿ(ಚರ್ಚ್) ಉದ್ಧಾರ ಮಾಡಲು ಬಳಸಲಾಗುತ್ತದೆ. ದೇವಸ್ಥಾನದ ೧೦೦ ರೂಪಾಯಿಯಲ್ಲಿ ೬೦/-೮೦/-ಗಳಷ್ಟು ಮಸೀದಿಗೆ ಹಾಗು ಇಗರ್ಜಿಗೆ ಮೀಸಲಿಡಲಾಗುತ್ತದೆ.ನಮ್ಮ ದೇವಸ್ಥಾದ ಪೂಜಾರಿ ಹಾಗು ದೇವಸ್ಥಾನಗಳ ಪಾಲಿಗೆ ಪಂಗನಾಮ ಮೀಸಲು.<br />
ಸಿಮಿಯನ್ನು ಬ್ಯಾನ್ ಮಾಡಲು ನಮ್ಮವರು ಆಗಾಗ ಪುರಾವೆ ನೀಡಬೇಕು ಇಲ್ಲವಾದರೆ "ಬ್ಯಾನ್ ಪೀರಿಯಡ್"ತೀರಿ ಅದು ಲೀಗಲ್ ಆಗುತ್ತೆ!! ಅದೆ ಅರ್.ಎಸ್.ಎಸ್, ಬಜರಂಗ ದಳ,ವಿ.ಹೆಚ್.ಪಿ ಯೆಂತಹ ದೇಶೋದ್ದಾರಕ ಸಂಸ್ಥೆಗಳನ್ನು ಭಯೋತ್ಪಾದಕ ಸಂಸ್ಥೆಯೆಂದು ಪರಿಗಣಿಸಬೇಕು ಎಂದು ಎಲ್ಲಿಲ್ಲದ ಒತ್ತಡ.<br />
"ಮನ ಮೋಹಿನಿಗೆ" ಮುಸ್ಲಿಂ ಒಬ್ಬನನ್ನು ಅರ್ರೆಸ್ಟ್ ಮಾಡಿದಕ್ಕೆ ನಿದ್ದೆಯೆ ಬರುವುದಿಲ್ಲ, ಪ್ರಗ್ಯಾ ಸಾಧ್ವಿ ಎಂಬ ಸನ್ಯಾಸಿನಿಯನ್ನು ಸುಳ್ಳು ಆರೋಪದ ಮೇರೆ ಅರ್ರೆಸ್ಟ್ ಮಾಡಿದಾಗಾಗಲಿ, ನೂರಾರು ಜನರು ಭಯೊತ್ಪಾದ ದಾಳಿಗಳಲ್ಲಿ ಸತ್ತರೆ ಏನು ಅನ್ನಿಸುವುದಿಲ್ಲ. ಒಬ್ಬ ಸಿಖ್ ಪಂಥಕ್ಕೆ ಸೇರಿದ ಪ್ರಧಾನಿ, ಸಿಖ್ ಹತ್ಯಾಖಾಂಡದ ತೀರ್ಪಿನಲ್ಲಿ ಖೇದವಿಲ್ಲದವನ ಹತ್ತಿರ "ಮೆಜಾರಿಟಿ"ಗಳ ಮನಸ್ಸಿಗೆ ಬೆಲೆಯಿದೆಯೆ??<br />
<br />
ಅರುಂಧತಿ ರಾಯ್ - ಶ್ರೀ ಲಂಕಾದಲ್ಲಿ ಭಯೋತ್ಪಾದಕ ಸಂಸ್ಥೆ ಎಲ್.ಟಿ.ಟಿ.ಈ ಜೊತೆ ನಡೆಯುತ್ತಿರುವ ಯುದ್ದದಲ್ಲಿ ಇವಳ ಮನಸ್ಸಿಗೆ ಎಲ್ಲಿಲ್ಲದ ದುಖ: ಆವರಿಸಿಕೊಂಡಿದ್ದೆ, ಅದೆ ನಮ್ಮ ದೇಶದ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರ/ಹಲ್ಲೆ/ಕಗ್ಗೊಲೆ ನಡೆದು ಅವರು ತಮ್ಮೆ ನೆಲ ತ್ಯಜಿಸಿ ಓಡಿದಾಗ ಇವಳು ಕುರುಡಿಯಾಗಿದ್ದಳೆ??<br />
<br />
ರಾಮ್ ವಿಲಾಸ್ ಪಾಸ್ವಾನ್ ಒಬ್ಬ ಮುಸ್ಲಿಮ್ ಮುಖ್ಯ ಮಂತ್ರಿಗೆ ಅಡಿಪಾಯ ಹಾಕುತ್ತಿರುವಾಗ ಓಸಾಮ ಬಿನ್ ಲಾಡೆನ್ ತರಹ ಇರುವವರು ಬೇಕೆ ಇವನ ಪ್ರಚಾರಕ್ಕೆ!! ಕೇಳುವವರು ಯಾರು ಇಲ್ಲವೆ? ಕೇವಲ ಒಡೆದಾಳುವ ನೀತಿಯನ್ನೆ ಪಾಲಿಸಿ ದೇಶವನ್ನೆ ವಿಭಜಿಸಿ ತಮ್ಮೆ ಬೇಳೆಯನ್ನು ಬೇಯಿಸುತ್ತಿರುವ ಇಂತವರಿಗೆ,ಇವೆಲ್ಲವನ್ನು ತಿಳಿದು ಯು.ಪಿ.ಏ/ಕಾಂಗ್ರೆಸ್ಸ್ ಸರ್ಕಾರಕ್ಕೆ ವೋಟ್ ಮಾಡುವ ಭಾರತೀಯರ ಭವಿಷ್ಯವನ್ನು ದೇವರೆ ಕಾಪಾಡಬೇಕು. ಖಂಡಿತವಾಗಲು ಈ ಕಲಿಯುಗದಲ್ಲಿ ಅವತಾರವೆತ್ತಿ ಬಂದು ಕಾಪಾಡಲು ವಿಷ್ಣುವಂತು ಧೈರ್ಯ ಮಾಡುವುದಿಲ್ಲ ಏಕೆಂದರೆ ಅವರು ಮೈನಾರಿಟಿಯಲ್ಲ, ಮೈನಾರಿಟಿಯಲ್ಲದಿದ್ದರೆ ನಮ್ಮ ದೇಶದಲ್ಲಿ ಬೆಲೆಯಿಲ್ಲ!!!<br />
<br />
"ಧರ್ಮೊ ರಕ್ಷತಿ ರಕ್ಷಿತ:" ಎನ್ನುವಲ್ಲಿ ಧರ್ಮವನ್ನು ಜಾತಿಗೆ ಹೋಲಿಸದೆ ಹಿಂದುತ್ವವನ್ನು ಕಾಪಾಡಿ ಮೆರೆದರೆ ಮಾತ್ರ ನಮ್ಮ ದೇಶಕ್ಕೆ ಉಜ್ವಲ ಭವಿಷ್ಯವುಂಟು.<br />
<br />
ಕೊನೆಯದಾಗಿ<br />
ಈ ಸಾಲುಗಳು ತುಂಬಾ ಸ್ವಾರಸ್ಯಕರವಾಗಿದೆ ಒದಿ...<br />
ಲ್ಯಾಟಿನ್ ಕ್ಯಾಥೋಲಿಕ್ ಇಗರ್ಜಿ(ಚರ್ಚ್)ಗೆ ಸೇರಿದವನು, ಸಿರಿಯನ್ ಕ್ಯಾಥೋಲಿಕ್ ಇಗರ್ಜಿ(ಚರ್ಚ್)ಗೆ ಹೋಗುವುದಿಲ್ಲ, ಸಿರಿಯನ್ ಕ್ಯಾಥೋಲಿಕ್ ಇಗರ್ಜಿಗೆ ಸೇರಿದವನು, ಲ್ಯಾಟಿನ್ ಕ್ಯಾಥೋಲಿಕ್ ಇಗರ್ಜಿಗೆ ಹೋಗುವುದಿಲ್ಲ!! ಇವರಿಬ್ಬರು ಮಾರ್ಥೋಮ ಇಗರ್ಜಿಗೆ ಹೋಗುವುದಿಲ್ಲ!! ಈ ಮೂವರು ಪೆಂಟಾಕೋಸ್ಟಲ್ ಇಗರ್ಜಿಗೆ ಹೋಗುವುದಿಲ್ಲ!! ಈ ನಾಲ್ವರು ಸಾಲ್ವೇಷನ್ ಇಗರ್ಜಿಗೆ ಹೋಗುವುದಿಲ್ಲ!! ಈ ಐವರು ಸವೆಂತ್ ಡೆ ಅಡ್ವೆಂಟಿಸ್ಟ್ ಇಗರ್ಜಿಗೆ ಹೋಗುವುದಿಲ್ಲ!!ಈ ಆರು ಜನರು ಆರ್ಥೋಡಾಕ್ಸ್ ಇಗರ್ಜಿಗೆ ಹೋಗುವುದಿಲ್ಲ!! ಈ ಏಳು ಜನರು ಜಾಕೊಬೈಟ್ ಇಗರ್ಜಿಗೆ ಹೋಗುವುದಿಲ್ಲ .... ಇದೆ ರೀತಿಯಲ್ಲಿ ಕೇರಳವೊಂದರಲ್ಲೆ ಕ್ರೈಸ್ತ ಮತದಲ್ಲಿ ೧೪೬ "ಜಾತಿ"ಗಳಿವೆ, ಇವರುಗಳಲ್ಲಿ ಯಾರು ಯಾರೊಬ್ಬರ ಇಗರ್ಜಿಯ ಮಟ್ಟಿಲನ್ನು ಸಹ ಹತ್ತುವುದಿಲ್ಲ.ಒಬ್ಬ ಕ್ರಿಸ್ತ,ಒಂದು ಬೈಬಲ್,ದೇವರಿಗೆ ಜೆಹೋವಾ ಎನ್ನುವ ಒಂದೆ ನಾಮ, ಆದರು ಇಂತಹ ಒಗ್ಗಟ್ಟು!!!<br />
<br />
ಮುಸ್ಲಿಂಗಳಲ್ಲಿ, ಶಿಯಾ ಹಾಗು ಸುನ್ನಿಗಳು ನಿತ್ಯ ಹೊಡೆದಾಡಿಕೊಂಡು ಸಾಯುತ್ತಲೆ ಇರುತ್ತಾರೆ.ಶಿಯಾ ಪಂಥಕ್ಕೆ ಸೇರಿದವನು ಸುನ್ನಿಯ ಮಸೀದಿಗೆ ಹೋಗುವುದಿಲ್ಲ, ಸುನ್ನಿಯಾದವನು ಶೀಯ ಮಸೀದಿಗೆ ಹೋಗುವುದಿಲ್ಲ.ಇವರಿಬ್ಬರು ಅಹಮದೀಯಾ ಮಸೀದಿಗೆ ಹೋಗುವುದಿಲ್ಲ, ಇವರು ಮೂರ್ವರು ಸೂಫಿ ಮಸೀದಿಗೆ ಹೋಗುವುದಿಲ್ಲ, ಈ ನಾಲ್ವರು ಮುಜಾಹಿದ್ದೀನ್ ಮಸೀದಿಗೆ ಹೋಗುವುದಿಲ್ಲ, ಈ ರೀತಿಯಾಗಿ ಇನ್ನು ೧೩ ರೀತಿಯ ಜಾತಿ/ಮತಗಳಿವೆ ಮುಸ್ಲಿಂರಲ್ಲಿ ಒಂದು ಅಲ್ಲಾ,ಒಂದು ಕುರಾನ್,ಒಂದು ದೇವರ ನಾಮ, ಆದರು ಇಂತಹ ಒಗ್ಗಟ್ಟು!!!<br />
<br />
ಹಿಂದುಗಳಿಗೆ ಸಾವಿರಾರು ಧರ್ಮಗ್ರಂಥಗಳು,ಸಾವಿರಾರು ಆಧ್ಯಾತ್ಮ ಪ್ರವಚನಗಳು,ಲಕ್ಷಕ್ಕು ಹೆಚ್ಚು ಉಪ-ಪ್ರವಚನಗಳು,ಮುಕ್ಕೋಟಿ ದೇವತೆಗಳು,ಥರಹೆವಾರಿ ಆಚಾರ ವಿಚಾರಗಳು,ಸಹಸ್ರಾರು ಋಷಿಗಳು,ಸಾವಿರಾರು ದೇವಸ್ಥಾನಗಳು,ಆದರು ಸಹ ಯಾವುದೆ ದೇವಸ್ಥಾನ ಇವರಿಗೆ ಅಂತ ಮೀಸಲು ಇಲ್ಲ.ಎಲ್ಲರು ಎಲ್ಲ ದೇವಸ್ಥಾನಕ್ಕೆ ಹೋಗುತ್ತಾರೆ. ಹಿಂದುಗಳು ದೇವರ ಹೆಸರಿನಲ್ಲಿ ಇದುವರೆಗು ದಾಳಿ ಮಾಡಿದ ಉಲ್ಲೇಖವೆ ಇಲ್ಲ,ಇತಿಹಾಸದಲ್ಲಿ. ಜಿಹಾದ್(ಮ್ಲೇಚ್ಚರು)ಆಗಲಿ ಅಥವಾ ಕ್ರೂಸೇಡರ್ಸ್(ಕ್ರೈಸ್ತರು)ಎಂಬ ಹೆಸರಿನಲ್ಲಾಗಲಿ ಧರ್ಮದ ಹೆಸರಿನಲ್ಲಿ ದಾಳಿ ಮಾಡಿಲ್ಲ.<br />
ಅನೇಕತೆಯಲ್ಲಿ ಏಕತೆಯಿಂದ ಜೀವಿಸುವ ಹಿಂದುಗಳನ್ನು ಮೈನಾರಿಟಿ/ಸೆಕ್ಯುಲರಿಸಂ/ಕಮ್ಯುನಿಸ್ಟ್ಗಳ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ಸ್ ಸರ್ಕಾರದ ನೀತಿಯನ್ನು ಖಂಡಿಸಬೇಕು,ಭಾರತದ ಉಜ್ವಲ ಭವಿಷ್ಯಕ್ಕಾಗಿ ಬಿ.ಜೆ.ಪಿ ವೋಟ್ ಮಾಡಲೆಬೇಕು. <br />
<br />
http://greathindu.com/2009/04/look-at-this-liar-rahul-gandhi/<br />
"Right to Education is most important": ಅನ್ನೊ ರಾಹುಲ್ ಗಾಂಧಿ ಓದಿರೊದಾದ್ರು ಏನು ಅಂದುಕೊಂಡಿದೀರಾ? ಹತ್ತನೆ ತರಗತಿ ಸಹ ತೇರ್ಗಡೆ ಆಗಿಲ್ಲ ಈ ಪಾರ್ಟಿ ಹೇಳ್ಕೊಳ್ಳೋದು M.Phil, ಸರಿನಪ್ಪ ಅಂತ ಅದನ್ನ ಕೆದಕಿದ್ರೆ ಸಿಗೊ ಹೆಸ್ರು "ರಊಲ್ ವಿನ್ಸಿ".. http://news.rinkiss.com/tag/rahul-gandhi<br />
<br />
ಇಷ್ಟೆಲ್ಲ ಬರೆದಿದ್ರು,ತಿಳಿಸಿದ್ರು ಜನ ಹೋಗಿ ಕಾಂಗ್ರೆಸ್ಸ್ ಗೆ ವೋಟ್ ಮಾಡೊದು ಬಿಡೊಲ್ಲ ಏಕಂದ್ರೆ "ರಊಲ್ ವಿನ್ಸಿ" ಒಹ್ ಕ್ಷಮಿಸಿ ರಾಹುಲ್ ಗಾಂಧಿ ನೋಡೋಕ್ಕೆ ಸುಂದರವಾಗಿದ್ದನೆ ಅಂತ ಹುಡುಗೀರು /ಹೆಂಗಸರು "ಬಿಯಾಂಕ ವಾಡ್ರಾ" ಒಹ್ ಕ್ಷಮಿಸಿ ಪ್ರಿಯಾಂಕ ಸುಂದರವಾಗಿದಾಳೆ ಅಂತ ಯುವಕರು/ಗಂಡಸರು/ಮುದುಕರು!!! ಕಣ್ಣ್ ಮುಚ್ಚ್ಕೊಂಡು ಹೋಗಿ ಕೈ ಒತ್ತೋದು ಬಿಡೊಲ್ಲ ಮತ್ತೊಂದು ವರ್ಗದ ಜನ ಗೆಲ್ಲೊ ಪಕ್ಷಕ್ಕೆ ನಮ್ ವೋಟ್ ಬೀಳ್ಬೇಕು ಅಂತ ನಿರ್ಧರಿಸಿಕೊಂಡು ಕಾಂಗ್ರೆಸ್ಸ್ ಗೆಲ್ಲುತ್ತೆ ಅಂತ ಮೊದಲೆ ಊಹಿಸಿ ಅದಕ್ಕೆ ವೋಟ್ ಮಾಡುವುದು ಇನ್ನೊಂದು ವರ್ಗದವರು ನಾನು ವೋಟ್ ಮಾಡಿದ ಪಕ್ಷ<br />
ಸೋಲುತ್ತಪ್ಪ (ಸಚಿನ್ ೧೦೦ ರನ್ ಹೊಡೆದರೆ ಭಾರತ ಸೋಲೊಲ್ವೆ ಆ ತರ್ಕ!!) ಅಂತ ಯೋಚಿಸಿ ಕಾಂಗ್ರೆಸ್ಸ್ ಗೆ ಮತ ಚಲಾಯಿಸುವುದು :). ಇಂತಹವರೆನೆಲ್ಲ ಪ್ರತಿನಿಧಿಸಿ ಕ್ಷೇತ್ರದಿಂದ ಆಯ್ಕೆ ಆಗುವ ಯಾವುದೆ ಪಕ್ಷದ ಮಹಾನುಭಾವರಿಗೆ ನನ್ನ ಒಂದು ದೊಡ್ಡ ನಮಸ್ಕಾರ.<br />
<br />
ಒಟ್ನಲ್ಲಿ ನಮ್ ದೇಶಕ್ಕೆ ಕಾದಿದೆ ಮಾರಿಹಬ್ಬ,ಯಾಕೆ ಅಂತ ತಿಳಿಬೇಕು ಅಂದ್ರೆ ಮುಂದೊಂದು ಲೇಖನಕ್ಕೆ ಕಾಯ್ತಿರಿ :) ತಿಳಿಸ್ತೀನಿ.<br />
<br />
ಅಂತು ಇಂತು ಈ ಲೇಖನ ಮುಗಿಯಿತು (ಮುಗಿಸ್ದೆ ಅಂತ ಅಂದುಕೊಳ್ಳಿ :D)<br />
<br />
ಧನ್ಯವಾದಗಳು<br />
ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-40414057792013457032010-06-29T22:49:00.000-07:002010-06-29T22:49:36.850-07:00"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು - ಭಾಗ ೨on April 8, 2009<br />
<br />
’ಮ’ಕಾರದಲ್ಲಿ ಮೂರನೆಯದಾಗಿ ಮಾರ್ಕ್ಸಿಸ್ಟ್ಗಳು, ಮಾರ್ಕ್ಸಿಸ್ಟ್ ಅಥವಾ ಕಮ್ಯುನಿಸ್ಟ್ಗಳು ಕಾರ್ಲ್ ಮಾರ್ಕ್ಸ್ ನ ಕುಡಿ, "ಧರ್ಮವೆನ್ನುವುದು ಸಮೂಹಕ್ಕೆ ಗಾಂಜಾವಿದ್ದಂತೆ"ಎನ್ನುವ ಹೇಳಿಕೆ ಕೊಟ್ಟಿರುವಾತ.ಇವರುಗಳು ಮೂಲತ: ನಾಸ್ತಿಕವಾದಿಗಳು ಆದರೆ ಇವರ ನಾಸ್ತಿಕತೆ ಕೇವಲ ಹಿಂದುತ್ವಕ್ಕೆ ಮಾತ್ರ ಸೀಮಿತವಿದೆ.ಎಂದಿಗು ಬಹಿರಂಗವಾಗಿ ಮುಸ್ಲಿಮರ ಅಥವಾ ಕ್ರೈಸ್ತರ ನಂಬಿಕೆ ಬಗ್ಗೆ ಪ್ರಶ್ನಿಸುವ ಧೈರ್ಯ ಸಾಹಸ ಮಾಡಿಲ್ಲ.ನಂದಿಗ್ರಾಮ್ನಲ್ಲಿ ನಡೆದ ಹಿಂಸಾಖಾಂಡದ ಹಿಂದೆ ಇವರ ಕೊಡುಗೆ ಅಪಾರ. ಗೊಧ್ರಾ ಗಲಾಟೆ ನಡೆದು ವರ್ಷಗಳೆ ಕಳೆದ್ರು ಅದರ ಕಳೇಬರವನ್ನು ಎತ್ತಿ ಆಡುವ ಜನ ನಂದಿಗ್ರಾಮದ ಬಗ್ಗೆ ಚಕಾರವೆತ್ತದೆ ಕುಳಿತಿರುವುದು.ಅವರ ಗೋಸುಂಬೆತನದ ಕನ್ನಡಿ,ಅದನ್ನ ನೋಡೋಕ್ಕೆ ನಮಗೆ ಕಣ್ಣುಗಳಿರಬೇಕಲ್ಲವೆ. ಇವರ ನಾಯಕರುಗಳು ಚೀನಾ ಹಾಗು ರಷಿಯಾದಲ್ಲಿ ಇದ್ದಾರೆ,ಕಾಶ್ಮೀರಿಗಳ "ಸ್ವಾತಂತ್ರ್ಯ"ಕ್ಕೆ ಧ್ವನಿಗೂಡಿಸುವ ಇವರು ಟಿಬೇಟಿಯನ್ನರ "ಸ್ವಾತಂತ್ರ್ಯ"ಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಯಾಕಂದ್ರೆ ಚೀನ ಟಿಬೇಟನ್ನು ನುಂಗಿದೆಯಲ್ಲ.ಧಣಿಗಳ ವಿರುದ್ಧ ಧ್ವನಿಯೆತ್ತಿದರೆ ಅದು ನಿಯತ್ತಿಗೆ ಧಕ್ಕೆಯಲ್ಲವೆ?ಬ್ರಿಟೀಷರ ಚೇಲಾಗಳಾಗಿದ್ದ ಇವರು ಭಾರತಕ್ಕೆ ಸ್ವಾತಂತ್ರ್ಯವನ್ನು ಸಹ ವಿರೋಧಿಸಿದವರು!!!ಜಗತ್ತಿನಲ್ಲೆ ಎಲ್ಲೂ ಕಮ್ಯುನಿಸ್ಟ್ ಪಕ್ಷಗಳು ಬದುಕಿಲ್ಲದಿದ್ದರು ಭಾರತದಲ್ಲಿ ಮಾತ್ರ ಸರ್ಕಾರ ರಚನೆಯಲ್ಲಿ ಸಹ ಭಾಗಿಯಾಗಿರೋದು ಅದ್ಭುತ.<br />
ಸುಮಾರು ೩ ಕೋಟಿ ಬಾಂಗ್ಲಾದೇಶಿಗಳು ಪಶ್ಚಿಮ ಬಂಗಾಳದ ಮೂಲಕ ಭಾರತದೊಳಗೆ ನುಸುಳಿದ್ದಾರೆ.ಪಶ್ಚಿಮ ಬಂಗಾಳದ ಸರ್ಕಾರ ಅವರನ್ನು ಸ್ವಾಗತಿಸುವುದಲ್ಲದೆ ಪಡಿತರ ಚೀಟಿ ಹಾಗು ವೋಟರ್ಸ್ ಕಾರ್ಡ್ ಸಹ ವಿತರಿಸಿ ತಮ್ಮ ಗದ್ದುಗೆಯನ್ನು ಸುರಕ್ಷಿತಗೊಳಿಸುತ್ತಿದ್ದಾರೆ ಏಕೆಂದರೆ ಇವರೆ ಅಲ್ಲವೆ ಮುಂದೆ ವೋಟು ಹಾಕುವುದು. ಹೊಟ್ಟೆ ತುಂಬಿದವರು ವೋಟ್ ಮಾಡುವುದಿಲ್ಲ ಇಂತಹವರು ನಮ್ ದೇಶದ ಸರ್ಕಾರವರನ್ನು ನಿರ್ಣಯಿಸುತ್ತಾರೆ.<br />
೧೯೬೨ರಲ್ಲಿ ಚೀನ ಭಾರತದ ಘರ್ಷಣೆಯುಂಟಾದಾಗ ಕಮ್ಯುನಿಸ್ಟ್ಗಳು ಚೀನಾದ ಪರ ವಹಿಸಿದ್ದಾರೆ ಇದು ದೇಶ ದ್ರೋಹದ ಪರಮಾವಧಿ, ಇಂದಿಗು ಸಹ ಈ ಘಟನೆಗೆ ಸಂಬಂಧಿಸಿದಂತೆ ಯಾವುದೆ ರೀತಿಯ ಕ್ಷಮಾಪಣೆ ಕೇಳಿಬಂದಿಲ್ಲ ಬರುತ್ತೆ ಎಂಬ ಆಸೆ ಇಟ್ಟುಕೊಳ್ಳುವುದು ಮೂಢತನ.CPM ಎನ್ನುವುದು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಭಾರತೀಯ ಶಾಖೆ ಎನ್ನುವುದರಲ್ಲಿ ಸಂಶಯ ಬೇಡ.<br />
’ಮ’ಕಾರದಲ್ಲಿ ನಾಲ್ಕನೇಯದಾಗಿ ಮೀಡಿಯಾದವರು,ಇವರು ನಮ್ಮ ದೇಶದಲ್ಲಿ ಇದ್ದುಕೊಂಡು ವಿದೇಶದವರ ಕಟ್ಟಾಳುಗಳಂತೆ ವರ್ತಿಸುತ್ತಾರೆ. ಅತಿ ಸಣ್ಣ ವಿಚಾರವನ್ನು ಸಹ ದೊಡ್ಡಾದಾಗಿ ಮಾಡಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಮರ್ಯಾದೆಯನ್ನು ಹರಾಜು ಹಾಕುವುದರಲ್ಲಿ ನಿಸ್ಸೀಮರು. ೨೬ನೇಯ ಎರಡುವರ್ಷಕ್ಕೊಮ್ಮೆ ಸಂಭವಿಸುವ ಕಾಥೋಲಿಕ್ ಬಿಶಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(CBCI) ಕೇರಳದಲ್ಲಿ ೭ರಿಂದ ೧೪ರ ವರೆಗು ಮತಾಂತರ ವಿಚಾರಗಳ ಬಗ್ಗೆ ನಡೆಯಿತು.ಸುಮಾರು ೧೫೦ ಬಿಶಪ್ಗಳು,೨೬ ಆರ್ಕಿಬಿಶಪ್ಗಳು ಹಾಗು ೩ ಕಾರ್ಡಿನಲ್ಗಳು ಕೂಡಿದ್ದರು ಇವರುಗಳ ಜೊತೆಗೆ ’ದಿ ಹಿಂದು’ಪತ್ರಿಕೆಯ ಮುಖ್ಯ ಸಂಕಲನಕಾರರು ಎನ್.ರಾಮ್,ಚೆನ್ನೈ ಶಾಖೆಯ ಎನ್.ಡಿ.ಟಿ.ವಿಯ ಮುಖ್ಯಸ್ತರಾದ ಜೆನ್ನಿಫರ್ ಅರುಲ್,ಮಂಗಳಮ್ ಪ್ರಕಟಣಾ ಸಂಸ್ಥೆಯ ಮುಖ್ಯ ಸಂಪಾದಕರಾದ ಕೆ.ಎನ್.ರಾಯ್ ಇವರುಗಳು ಸಹ ಉಪಸ್ಥಿತರಿದ್ದರು.ಕೇವಲ ಧಾರ್ಮಿಕ ವಿಷಯದ ಚರ್ಚೆಯ ಕೂಟದಲ್ಲೆ ಇವರುಗಳ ಭಾಗೀಧಾರಿ ಏತರದ್ದು?<br />
genocide ಎನ್ನುವುದು ಗುಜರಾತ್ ಗಲಭೆಯನ್ನು ವರ್ಣಿಸಲು ಮೀಡಿಯಾ ಬಳಸಿದ ಪದ, ಆದ್ರೆ ೧೯೮೪ರಲ್ಲಿ ಸಿಖ್ಖರನ್ನು ಹಾಡು ಹಗಲೆ ಪೋಲಿಸರು,ಮಕ್ಕಳು ಹೆಂಗಸರು ಎನ್ನುವುದನ್ನು ನೋಡದೆ ಕಾಂಗ್ರೆಸ್ಸ್ ಸರ್ಕಾರದ ನೆರಳಿನಲ್ಲಿ ನಡೆದ ಹತ್ಯಾಕಾಂಡ ಇವರಿಗೆ ಕಣ್ಣಿಗೆ ಕಾಣುವುದೆ ಇಲ್ಲ.ಸಿಂಗೂರ್ನಲ್ಲಿ ಹಾಗು ನಂದಿಗ್ರಾಂನಲ್ಲಿ ನಡೆದ ಹತ್ಯಾಕಾಂಡ ಉಹು...ಏನು ಅಲ್ವೆ ಅಲ್ಲ ಅಂತ ಸಾಧಿಸುತ್ತಾರೆ. ಸೆಕ್ಯುಲರ್ ಮೀಡಿಯಾಗಳು ಮುಸ್ಲಿಂರಿಂದ ಅಥವಾ ಕ್ರೈಸ್ತರಿಂದ ನಡೆಯುವ ದೌರ್ಜನ್ಯಗಳು ಪತ್ರಿಕೆಗಳಲ್ಲಿ ಅಚ್ಚಾಗುವುದೇ ಇಲ್ಲ,ಅಚ್ಚಗುವುದು ಏನಿದ್ದರು ಗೋಧ್ರಾ,ಕಂಧಮಾಲ್,ಅಮರ್ನಾಥ್ ಅಥವಾ ಮಂಗಳೂರಿನಲ್ಲಿ ನಡೆದ "ಪ್ರತಿಕ್ರಿಯೆಗಳು" ಬೆಂಕಿಯಿಲ್ಲದೆ ಹೊಗೆಯಾಡುವುದೆ? ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗಳನ್ನ ಕಡೆಗಾಣಿಸುವ ಈ ಪತ್ರಿಕೆಗಳು ಪ್ರಗ್ಯಾ ಸಾಧ್ವಿ ಎಂಬಂತವರನ್ನು ಸಿಲುಕಿ ಹಾಕಿಸಿ ಹಿಂದುಗಳೂ ಸಹ ಭಯೋತ್ಪಾದಕರು ಎಂದು ಬೊಬ್ಬೆ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ಮುಂಬೈನಲ್ಲಿ ಸೆರೆ ಸಿಕ್ಕ ಭಯೋತ್ಪಾದಕ ಕಸಬ್, ಜೀವಾಂತವಾಗಿ ಉಳಿಯದಿದ್ದರೆ ಕೇರಳ ಮಿನಿಸ್ಟರ್ನ (ಮುಸ್ಲಿಂ) ಹುಚ್ಚು ಹೇಳಿಕೆಗೆ ಎಲ್ಲಿಂದೆಲ್ಲ ಬಲಬರುತ್ತಿತ್ತು. ಇವನ ಪ್ರಕಾರ ಕಸಬ್ ಒಬ್ಬ ಹಿಂದು ಭಯೋತ್ಪಾದಕ,ಪ್ರಗ್ಯಾ ಸಾಧ್ವಿಯನ್ನು ಬಂಧಿಸಿದ ಹೇಮಂತ್ ಕರ್ಕರೆಯನ್ನು ಕೊಲೆ ಮಾಡಲು ಆಯೋಜಿಸಿದ್ದ ಬೃಹತ್ ಯೋಜನೆಯ ಒಬ್ಬ ಭಾಗಿಧಾರಿ ಎನ್ನುವುದು ಇವನ ಹೇಳಿಕೆ.ಇದಕ್ಕೆ ಪುಷ್ಠಿಕೊಡುವಂತೆ ಕಸಬ್ ತನ್ನ ಕೈಗೆ ಕೇಸರಿ ಬಣ್ಣದ ದಾರವನ್ನು ಕಟ್ಟಿದ್ದ, ಅಪ್ಪಿ ತಪ್ಪಿ ಅವನು ಸತ್ತಿದ್ದರೆ ಅಲ್ಲಿಗೆ ಹಿಂದುಗಳೆಲ್ಲರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು ಈ ಮೀಡಿಯಾದವರೆಲ್ಲ ಸೇರಿ. ದಿನ ಬೆಳಗಾದ್ರೆ ಒಳ್ಳೆ ಸುದ್ದಿ ಓದುವ ಕಾತರದಿಂದ ಪತ್ರಿಕೆ ತೆಗೆದುಕೊಳ್ಳುವ ನಮಗೆ ಆ ಪತ್ರಿಕಾ ಸಂಸ್ಥೆಯ ಉದ್ದೇಶವೆ ತಿಳಿದಿರುವುದಿಲ್ಲ.ಅದರಲ್ಲಿ ಇರುವುದೆಲ್ಲ ಸತ್ಯವೆಂದು ನಂಬಿ ವಾದ ಮಾಡುವ ಜನರೆ ಹೆಚ್ಚು.<br />
<br />
’ಮ’ಕಾರದಲ್ಲಿ ಐದನೇಯದಾಗಿ ಮೆಕಾಲೆಯಿಸ್ಟ್ಗಳು.ಲಾರ್ಡ್ ಮೆಕಾಲೆ ಭಾರತದ ಶಿಕ್ಷಣ ಪದ್ಧತಿಯನ್ನು ರೂಪಿಸಿದ ಮೇಧಾವಿ.ನೋಟದಲ್ಲಿ ಭಾರತೀಯ,ನಡವಳಿಕೆ ಬ್ರಿಟೀಷ್ ಆಗಿರಬೇಕು ಎಂಬುದು ಈ ಮನುಷ್ಯನ ಲೆಕ್ಕಾಚಾರ.ತನ್ನ ಈ ಹೇಳಿಕೆಯನ್ನು ಮೆಕಾಲೆಯ ಸಮರ್ಥಿಸಿಕೊಂಡಿವುರುದಕ್ಕೆ ಈಗಿನ ಕಾಲದ ಜಾತಿ ಪದ್ದತಿ,ಮಡಿವಂತಿಕೆ ಮುಂತಾದ ಚಿಲ್ಲರೆ ಕಾರಣಕೊಟ್ಟು ತನ್ನದೇನು ತಪ್ಪಿಲ್ಲ ಎಂದಿದ್ದಾನೆ.ಇವನ ರೀತಿಯ ಶಿಕ್ಷಣದ ಪರಿಣಾಮದಿಂದಾಗಿ ಅನೇಕ "ಬುದ್ದಿವಂತರು" - "ಬಾದಾಮಿ"ತರಹ. ಮೇಲ್ಬಣ್ಣ ನಶ್ಯ(ಭಾರತೀಯರ ಬಣ್ಣ)ಒಳಗಡೆಯಿಂದ ಬಿಳಿ(ಬ್ರಿಟೀಷರ)ರುಚಿ,ಅನಿಸಿಕೆ ಹಾಗು ಮೌಲ್ಯಗಳು.<br />
ಈ ಮೇಕಾಲೆಗಳಿಂದಲೆ "ಸೆಕ್ಯುಲರ್" ಎಂಬ ಹೊಸ ಧರ್ಮ ಹುಟ್ಟಿದ್ದು."ಸೆಕ್ಯುಲರ್" ಎಂಬ ಪೊಳ್ಳುವಾದವನ್ನು ಮುಂದಿರಿಸಿಕೊಂಡು ಹಿಂದು ಧರ್ಮವನ್ನು ಹಾಗು ಭಾರತವನ್ನು ಅವಮಾನಿಸುತ್ತಿದ್ದಾರೆ.ಹಿಂದು ಭಾರತವು ಬಹು ಧರ್ಮಗಳ ವಿಚಾರವನ್ನು,ಬಹು ಧರ್ಮಗಳ ಆಚಾರವನ್ನು,ಬಹು ಧರ್ಮಗಳ ಸಮಾಜವನ್ನು ಗೌರವಿಸುತ್ತದೆ ಇದಕ್ಕಾಗಿ ಜಾತ್ಯಾತೀತತೆಯ ಬಣ್ಣ ಬೇಕಿಲ್ಲ.ಜಾತ್ಯಾತೀತ ಎನ್ನುವುದು ಮೊದಲಿನಿಂದಲೂ ಹಿಂದುತ್ವದ ಒಂದು ಭಾಗ.ಅದಕ್ಕೆ ಅಲ್ಲವೆ "ಏಕಂ ಸತ್,ವಿಪ್ರಾ: ಬಹುದಾವಿದಂತಿ - ದೇವನೊಬ್ಬ ನಾಮ ಹಲವು" ಅಂದ ವೇದಗಳಲ್ಲಿ ಹೇಳಿರುವುದು.<br />
ಈ ಮೇಕಾಲೆಗಳಿಗೆ ಸಂಸ್ಕೃತ ಕೋಮುವಾದ ಉರ್ದು ಜಾತ್ಯಾತೀತ;ಮಂದಿರ ಕೋಮುವಾದ ಮಸೀದಿ ಜಾತ್ಯಾತೀತ;ಸಾಧು ಕೋಮುವಾದ ಇಮಾಂ ಜಾತ್ಯಾತೀತ;ಬಿಜೆಪಿ ಕೋಮುವಾದ ಮುಸ್ಲಿಂ ಲೀಗ್ ಜಾತ್ಯಾತೀತ;ಡಾ||ಪ್ರವೀಣ್ ತೊಗಾಡಿಯಾ ಕೋಮುವಾದ ಬುಖಾರಿ ಜಾತ್ಯಾತೀತ(ಇವನೊಬ್ಬ ದೊಡ್ಡ ಫ್ರಾಡ್ -ದಿಲ್ಲಿಯ ಜಾಮಿಯ ಮಸೀದಿಯಲ್ಲಿ ಇಮಾಂ ಆಗಿರುವ ಇವನು ಐಎಸ್ಐನ ಗೂಢಾಚಾರಿ ಎಂಬುದು ಇವನ ಹೇಳಿಕೆ/ರೀತಿ/ನೀತಿಗಳಲ್ಲಿ ಸಾಬಿತಾದರು ಸರ್ಕಾರಕ್ಕೆ ಜಾಣ ಕುರುಡು) ;ವಂದೆಮಾತರಂ ಕೋಮುವಾದ ಅಲ್ಲಾ-ಹೋ-ಅಕ್ಬರ್/ಏಸುವೊಬ್ಬನೆ ದೇವರು ಜಾತ್ಯಾತೀತ; ಶ್ರೀಮಾನ್ ಕೋಮುವಾದ ಮಿಯ್ಯಾ ಜಾತ್ಯಾತೀತ;ಹಿಂದು ಕೋಮುವಾದ ಇಸ್ಲಾಂ/ಕ್ರೈಸ್ತ ಜಾತ್ಯಾತೀತ;ಹಿಂದುತ್ವ ಕೋಮುವಾದ ಜಿಹಾದ್/ಕ್ರುಸೇಡರ್ ಜಾತ್ಯಾತೀತ;ಬಜರಂಗದಳ ಕೋಮುವಾದ ಸಿಮಿ ಜಾತ್ಯಾತೀತ;ರಾಮ ರಾಜ್ಯ ಕೋಮುವಾದ ರೋಮ್ ರಾಜ್ಯ ಜಾತ್ಯಾತೀತ; ಕೊನೆಯದಾಗಿ ಭಾರತ ಕೋಮುವಾದ ಇಟಲಿ ಜಾತ್ಯಾತೀತ!<br />
<br />
ಮುಂದುವರೆಯುವುದು ....prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-6462416585757043872010-06-29T22:46:00.000-07:002010-06-29T22:46:43.579-07:00"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯುon April 3, 2009 <br />
<br />
ಭಾರತದ ಭವಿಷ್ಯವನ್ನು ನೀವು ಊಹಿಸ ಬಲ್ಲಿರಾ?ನಿಮ್ಮ ಕಲ್ಪನಾ ಶಕ್ತಿ ಎಷ್ಟು ಮಂದವಾಗಿದೆಯೆಂದು ತಿಳಿಯಬೇಕೆ? ಮುಂದಿಟ್ಟಿರುವ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೆ? ಇರಲಿಕ್ಕಾದರು ಸಾಧ್ಯವೆ? ಓರೆ ಹಚ್ಚಲು ಮುಂದಕ್ಕೆ ಓದಿ...<br />
<br />
೧.ಮನೆಯಿಂದ ಹೊರಗೆ ಕೆಲಸಕ್ಕೆ ಅಂತ ಹೆಜ್ಜೆ ಇಟ್ಟರೆ ಸುರಕ್ಷಿತವಾಗಿ ಹಿಂತಿರುಗಿ ಬರುತ್ತೀರಾ? - ಮೊನ್ನೆ ತಾನೆ ಬೆಂಗಳೂರಿನ ರಾಜಾಜಿನಗರದಲ್ಲಿ ಬಾಂಬ್ ಪತ್ತೆಯಾಗಿದೆ,ಇಡಿ ದೇಶದಲ್ಲೆಲ್ಲಾ ಬಾಂಬ್ನ ಸದ್ದು ಪ್ರತಿಧ್ವನಿಸುತ್ತಿದೆ,ಪಾನಿಪುರಿ ಅಂಗಡಿ ಸಹ ಸುರಕ್ಷಿತವಲ್ಲ,ಹೈದರಾಬಾದ್ನ ಲುಂಬಿನಿ ಪಾರ್ಕ್ ಹೊರಗಡೆ ನಡೆದ ಸ್ಪೋಟ ಇದಕ್ಕೆ ಸಾಕ್ಷಿ,ಐಐಎಸ್ಸಿಯಂತಹ ವಿದ್ಯಾದೇಗುಲದಲ್ಲಿ ಭಯೋತ್ಪಾದಕರ ದಾಳಿ,ದೇವಸ್ಥಾನಗಳಲ್ಲಿ ದಾಳಿಯಂತು ಮಾಮೂಲು ಎಲ್ಲಿಯ ಉದಾಹರಣೆ ಅಂತ ಕೊಡೊದು,ದವಾಖಾನೆ,ಚಿತ್ರ ಮಂದಿರಗಳಂತು ಮೆಚ್ಚಿನ ತಾಣ - ಇಷ್ಟು ಬಿಟ್ರೆ ಜನ ಎಲ್ಲಿ ಅಂತ ಓಡಾಡಬೇಕು? ಮನೆ ಒಳಗೆ ಕೂತಿರಬೇಕು ಅಷ್ಟೆ, ಆಮೇಲೆ ಮುಂದೊಂದು ದಿನ ಕಿಟಕಿ ಒಳಗಿಂದ ಬಾಂಬ್ ಹಾಕೊಕ್ಕೆ ಶುರು ಮಾಡಿದ್ರು ಸಹ ಏನು ಆಶ್ಚರ್ಯ ಇಲ್ಲ,ಕೂತಲ್ಲೆ ಸಾಯಬೇಕು.<br />
<br />
೨.ನಿಮ್ಮ ಸ್ಥಳದಿಂದಲೆ ನಿಮ್ಮನ್ನು ಒಡಿಸಿ ನಿಮ್ಮ ಜಾಗದಲ್ಲಿ ಅನ್ಯರು ವಾಸಿಸುವುದನ್ನು ಸಹಿಸಬಲ್ಲಿರಾ? - ಭೂಮಿಯ ಮೇಲಿರುವ ಸ್ವರ್ಗ ಅಂತಲೆ ಎನಿಸಿಕೊಂಡ ಕಾಶ್ಮೀರದಲ್ಲಿ ದಿನ ಬೆಳಗಾದರೆ ಕೊಲೆ,ಸುಲಿಗೆ,ಅತ್ಯಾಚಾರ,ನಿಲ್ಲದ ಹತ್ಯಾಕಾಂಡಗಳು,೪ ಲಕ್ಷ ಜನರು ಜೀವದ ಹಂಗು ತೊರೆದು ರಾತ್ರೊ ರಾತ್ರಿ ತಮ್ಮ ಮನೆ ಮಠಗಳನ್ನು ತ್ಯಜಿಸಿ ದಿಲ್ಲಿಯ ಸ್ಲಮ್ಗಳಲ್ಲಿ ವಾಸಿಸುವಂತಾಗಿದೆ.<br />
೩.ವರ್ಷದಲ್ಲಿ ಹನ್ನೆರಡು ತಿಂಗಳೂ ಪ್ರತಿ ತಿಂಗಳಿಗೊಂದಂತೆ ಇರುವ ಹಬ್ಬಗಳನ್ನು ಆಚರಿಸದೆ,ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ನಲಿಯದೆ,ಮನೆಯು ಸಿಂಗಾರಗೊಳ್ಳದೆ,ಹಣೆಬೊಟ್ಟಿಲ್ಲದ ವಿಧವೆಯಂತೆ ಕಾಣುವ ರಂಗೋಲೆಯಿಲ್ಲದ ಅಂಗಣ,ಮುಂಡನೆ ಮಾಡಿಸಿಕೊಂಡವರಲ್ಲಿ ಮಾಯವಾದ ಹೂವಿನ ಹಾರದಂತೆ ಹೆಬ್ಬಾಗಿಲಲ್ಲಿ ಕಾಣದ ತಳಿರು ತೋರಣ,ಇವಾವುದು ಕಾಣದೆ ಬರಿದಾದ ಜೀವನವನ್ನು ಊಹಿಸಬಲ್ಲಿರಾ? ಜೀವನ ಅನ್ನೋದು ಕೇವಲ ಊ-ಮ-ಹೇ ಸುತ್ತಾನೆ ಇದ್ದಿದ್ರೆ ಬಹುಶ:ಈ ಬೆಳವಣಿಗೆಗಳು ಸ್ವಾಗತಾರ್ಹವೇನೊ ಆದ್ರೆ ಹಾಗಿಲ್ವಲ್ಲ. ಹಬ್ಬ ಹರಿದಿನ ಆಚರಿಸಬೇಕು,ಮನೆಯ ಮುಂದೆ ನೀರು ಹಾಕಿ ರಂಗೋಲಿಯಿಂದ ಅಂಗಣವನ್ನು ಸಿಂಗರಿಸಬೇಕು.ಮಕ್ಕಳು ಹೊಸ ಬಟ್ಟೆ ತೊಟ್ಟು ಹಬ್ಬದೂಟವನ್ನು ಮಾಡಿ ನಕ್ಕು ನಲಿಯಬೇಕು.ಈ ರೀತಿ ವರ್ಷಕ್ಕೆ ೨-೩ ದಿನಾ ಸಾಕಾ? ಅಥವಾ ತಿಂಗಳಿಗೊಂದರಂತೆ ಸಂಸ್ಕೃತಿ,ಜೀವನಾರ್ಥವನ್ನು ಬಿಂಬಿಸುವ ಹಬ್ಬಗಳು ಇರಬೇಕಾ?<br />
<br />
ಇವೆಲ್ಲಾ ನಿಮ್ಮ ಸುತ್ತ ಮುತ್ತಲೆ ಆಗ್ತಿದೆನೋ ಅಥವ ನಿಮ್ಮ ನೆಂಟರು,ಇಷ್ಟರು,ಬಳಗದವರು ಈ ರೀತಿಯ ಸ್ಥಿತಿ ಗತಿಗೆ ಬಲಿಯಾದರೆ ಹೇಗೋ,ಒಮ್ಮೆ ಸುಮ್ನೆ ಊಹಿಸಿ ನೋಡಿ,ನಡುಕ ಹುಟ್ಟೊಲ್ವೆ? ಇವೆಲ್ಲವೂ ಸತ್ಯಕ್ಕೆ ತುಂಬಾ ದೂರ ಏನು ಉಳಿದಿಲ್ಲ.ಕರ್ನಾಟಕದ ಭದ್ರ ನೆಲೆಯಲ್ಲಿ ಕೂತು ಇದನ್ನೆಲ್ಲ ಓದಿದ್ರೆ ಕೆಲವರಿಗೆ ಆಕಳಿಕೆ ಸಹ ಬರಬಹುದು ಆದರೆ ಜಾಗತಿಕ ವಾಸ್ತವ ಹಾಗಿಲ್ವಲ್ಲ.ನಾವು ಯೊಚಿಸಬೇಕಿದೆ ನಮ್ಮ ಸಮಾಜದ ಮೇಲೆ ಇವುಗಳ ಪ್ರಭಾವ ಹೇಗೆ ನಿಯಂತ್ರಿಸಬಹುದು ಅಂತ.ಈಗ ಕೆಲವು ಘಟನೆಗಳ ಕಡೆ ಗಮ ಹರಿಸೋಣವೆ...<br />
<br />
೧. ೨೦೦(ಇನ್ನೂರು)ವರ್ಷಗಳ ಹಿಂದೆ ಕಂಧಹಾರ್(ಅಫ್ಘಾನಿಸ್ತಾನ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದರು.<br />
ಇಂದು?? ಕೇವಲ ಅಲ್-ಕೈದಾ ಹಾಗು ತಾಲಿಬಾನ್ ಅವರ ತಾಣವಾಗಿದೆ,ಕಣ್ಣಿಗೆ ಕಣ್ಣ್ಣು,ಕೈಗೆ ಕೈ ಎನ್ನುವ ಶರಿಯತ್ ಲಾ ಅನ್ನು ಪಾಲಿಸಲಾಗುತ್ತಿದೆ.<br />
<br />
೨. ೧೦೦(ನೂರು)ವರ್ಷಗಳ ಹಿಂದೆ ಲಾಹೋರ್ ಹಾಗು ಕರಾಚಿ(ಪಾಕಿಸ್ತಾನ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದರು.ಇಂದು??ಹಿಂದುಗಳು ಓಡಿ ಭಾರತದತ್ತ ಬರುತ್ತಿದ್ದಾರೆ,೧೯೪೭ರಲ್ಲಿ ಪಾಕಿಸ್ತಾನ್ ಅನ್ನು ಸೃಷ್ಟಿಸಲಾಯಿತು ಆಗ ಹಿಂದುಗಳ ಸಂಖ್ಯೆ ೨೪% ಇತ್ತು ಇಂದು ೧% ಗಿಂತ ಕಮ್ಮಿ ಆಗಿದಾರೆ.ಹಾಗಿದ್ರೆ ಎಲ್ಲರು ಎಲ್ಲಿ ಹೋದರು?<br />
<br />
೩. ೫೦(ಐವತ್ತು)ವರ್ಷಗಳ ಹಿಂದೆ ಶ್ರೀನಗರ್(ಕಾಶ್ಮೀರ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನಿರ್ಭಯವಾಗಿ ನೆರವೇರಿಸುತ್ತಿದ್ದರು.ಇಂದು??ಕಶ್ಮೀರಿ ಪಂಡಿತರನ್ನು ಹಗಲಲ್ಲೆ ಗುಂಡಿಟ್ಟು ಕೊಲ್ಲಲಾಗುತ್ತಿದೆ.ಭಾರತದ ಧ್ವಜಕ್ಕೆ ಬೆಂಕಿ ಹಚ್ಚಿ ಭಾರತ ಸರ್ಕಾರದ ವಿರುದ್ಧ ಘೋಷಣೆಗಳು ಸಾಮಾನ್ಯವಾಗಿವೆ.ಇದೆ ಶ್ರೀನಗರವನ್ನು ಇಸ್ಲಾಮಬಾದ್ ಅಂತ ನಾಮಕರಣ ಮಾಡಲು ಎಲ್ಲಾ ಹುನ್ನಾರ ನಡೆಯುತ್ತಿದೆ.ಪ್ರಸ್ತುತ ಅಲ್ಲಿನ ಸರ್ಕಾರದ election mandate ಸಹ ಇದೆ ಆಗಿದೆ,ಇದಕ್ಕೆ ಕಾಂಗ್ರೆಸ್ಸ್ ಸರ್ಕಾರದ ಕುಮ್ಮಕ್ಕು ಸಹ ಇದೆ.ಇದರ ಕನಿಷ್ಟ ಅರಿವಾದರು ನಿಮಗಿದೆಯೆ?<br />
<br />
ಈ ಮೇಲೆ ಉಲ್ಲೇಖ ಮಾಡಿರುವ ಘಟನಾವಳಿಗಳನ್ನೊಮ್ಮೆ ಅವಲೋಕಿಸಿ, ೨೦೦, ೧೦೦, ೫೦ ವರ್ಷಗಳಲ್ಲಿ ಆದ ಬದಲಾವಣೆ ಗಮನಿಸಿ. ಮುಂದಿನ ೨೫,೫೦ ವರ್ಷಗಳಲ್ಲಿ ಏನಾಗಬಹುದೆಂದು ಊಹಿಸಲು ಸಾಧ್ಯವೆ?ಊಹಾತೀತ ವಿಷಯ, "ಭಾರತದಲ್ಲಿನ" ಹಿಂದುಗಳ ಬಾಳು. ನನಗೆ ಭಾರತದ ಈಶಾನ್ಯ ರಾಜ್ಯಗಳಲ್ಲಿ (ಅಸ್ಸಾಮ್,ಮೇಘಾಲಯ, ಅರುನಾಚಲ ಪ್ರದೇಶ,ನಾಗಾಲಾಂಡ್,...) ಕರುಣಾಮಯನಾದ ಕ್ರೈಸ್ತನ ಹೆಸರಿನಲ್ಲಿ ಹಾವಳಿ ಕೊಡುತ್ತಿರುವ ಭಯೋತ್ಪಾದಕ ಕ್ರೈಸ್ತ ಸಂಘಟೆನೆಗಳ ಬಗ್ಗೆ ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ,ಹಾಗೆಯೆ ದೀನ ಬಂಧು,ಶಾಂತಿ ದೂತನಾಗಿರುವ ಮೋಹಮ್ಮದ್ ಪೈಗಂಬರ್ ಆಗಲಿ ಕರುಣಾಳು ಅಲ್ಲಾನ ಹೆಸರಿನಲ್ಲಿ ಆಗುತ್ತಿರುವ ಹಿಂಸೆ,ಮುಸ್ಲಿಮ್ ಭಯೋತ್ಪಾದಕ ದಾಳಿಗಳ ಬಗ್ಗೆ ಚರ್ಚಿಸುವುದಕ್ಕಲ್ಲ. ಎಲ್ಲಿಂದಲೊ ಬಂದ ಮಂಗ್ಲಾಯ್ಡ್ ಬಾಬರ್,ನಮ್ಮ ಜನರನ್ನು ದಾಳಿ ಮಾಡಿ,ಅತ್ಯಾಚಾರ ನಡೆಸಿ,ಮಕ್ಕಳು ಹೆಂಗಸರು ಎನ್ನದೆ ಕಗ್ಗೊಲೆ ಮಾಡಿದ ಮಾದಕ ವ್ಯಸನಿಯಾಗಿದ್ದ ಬಾಬರ್ನ ಸಮಾಧಿಯನ್ನು ಧ್ವಂಸ ಮಾಡಿದ ಭಯೋತ್ಪಾದಕ ಹಿಂದುಗಳ ಬಗ್ಗೆಯು ಅಲ್ಲ.<br />
ಭಾರತದ ನಕ್ಷೆ ದಿನೆ ದಿನೆ ಕುಗ್ಗುತ್ತಿರುವುದು ಆಶ್ಚರ್ಯವಲ್ಲ,ಇವೆಲ್ಲದರ ಕಡೆ ನಮ್ಮ ಗಮನ ಹರಿಯದೆ ಕೇವಲ ಸೆಕ್ಯುಲರ್ ಆಲೋಚನೆಗಳನ್ನೆ ತಲೆಗೆ ತುರುಕಲು ಹವಣಿಸುತ್ತಿರುವ ಭಾರತದ ಇಟಲಿಯ ಸರ್ಕಾರ ಹಾಗು ಅದರ ನಿಯಂತ್ರಣದಲ್ಲಿರುವ ಮೀಡಿಯಾ. ನಮ್ಮ ಗಮನ ಬೇರೆಡೆ ಇದ್ದರೆ ಇಂಥವನ್ನೆಲ್ಲ ನಿರಾಂತಕವಾಗಿ ಮುಂದುವರಿಸಿ ವೋಟ್ ಬ್ಯಾಂಕ್ ಖಾತ್ರಿ ಮಾಡಿಕೊಳ್ಳಬಹುದಲ್ಲವೆ.<br />
<br />
ಇಂದು ಜಗತ್ತಿನಲ್ಲಿ ಸುಮಾರು ೧೩೦ ಕೋಟಿ ಮುಸ್ಲಿಮ್ ಜನಸಂಖ್ಯೆಯಿದೆ ಅದಕ್ಕೆ ತಕ್ಕ ಹಾಗೆ ೫೭ ಇಸ್ಲಾಮಿಕ್ ರಾಷ್ಟ್ರಗಳು ಸಹ ಇವೆ.ಇರಲಿ ಒಳ್ಳೆಯದು ನಮಗೆ ಅಭ್ಯಂತರವಿಲ್ಲ.೨೦೦ ಕೋಟಿ ಕ್ರೈಸ್ತರ ಜನಸಂಖ್ಯೆಯಿದೆ ಅದಕ್ಕೆ ತಕ್ಕ ಹಾಗೆ ೧೫೦ ಕ್ರೈಸ್ತ ರಾಷ್ಟ್ರಗಳು ಸಹ ಇವೆ.ಇರಲಿ ಒಳ್ಳೆಯದು ನಮಗೆ ಅಭ್ಯಂತರವಿಲ್ಲ.೧೧೦ ಕೋಟಿ ಹಿಂದು ಜನಸಂಖ್ಯೆಯಿದೆ ಅದಕ್ಕೆ ತಕ್ಕ ಒಂದಾದರು ಹಿಂದು ದೇಶವಿದೆಯ?ಉಹು ದುರ್ಬೀನು ಹಾಕಿಕೊಂಡರು ನಿಮಗೆ ಸಿಗುವುದಿಲ್ಲ.ಹಾಳಾಗಿ ಹೋಗಲಿ ನಾವು ಪ್ರತ್ಯೇಕ ರಾಷ್ಟ್ರ ಕೇಳುತ್ತಿಲ್ಲ,ಕನಿಷ್ಟ ಹಿಂದು ರಾಷ್ತ್ರವಾಗಿದ್ದ ಭಾರತವನ್ನು ಸೆಕ್ಯುಲರ್ ಎಂಬ ಪೊಳ್ಳುವಾದದಲ್ಲಿ ಒಡೆದು ಹಾಕಿರುವ ಸರ್ಕಾರದ ನೀತಿಯನ್ನು ವಿರೋಧಿಸಬೇಕಿದೆ.damage contain ಮಾಡುವ ಅವಶ್ಯಕತೆಯಿದೆ.<br />
ಭಾರತದ ಇತಿಹಾಸ ಕೆದಕಿ ನೋಡಿದರೆ ಕಾಣುವುದು ಮುನಿಗಳು,ಸಂತರು ಹಾಗು ಋಷಿಗಳು.ಇವರುಗಳು ಅಂದು ಮಾಡಿರುವ ಅನ್ವಷಣೆಗಳ ಅರ್ಥ ಇಂದಿನ ವಿಜ್ಞಾನಿಗಳಿಗೆ ಅರಿಯದ ವಿಷಯವಾಗಿದೆ.ಭಾರತೀಯರೆಲ್ಲರಿಗು ಭಾರತ ಖಂಡ ಮಾತೃಭೂಮಿಯಾಗಿದೆ, ಆದ್ರೆ ಕೆಲವರಿಗೆ ಭೂಮಿಯಂತಹ ನಿರ್ಜೀವ ವಸ್ತುವನ್ನು ಮಾತೆಗೆ ಹೋಲಿಸುವುದು ಅವರುಗಳ ಧಾರ್ಮಿಕ ಭಾವನೆಗಳಿಗೆ ನೊವ್ವುಂಟು ಮಾಡುವ ಕಾರಣ ವಿಷಯ ಹೀಗೆಯೆ ಇಲ್ಲ.ಮಾತೆಯನ್ನು ವಂದಿಸುವುದು ಅತ್ಯಂತ ನಿಂದಕರ ಅದಕ್ಕೆ ಅಲ್ವೆ ವಂದೆ ಮಾತರಂ ನಾವು ಹೇಳುವುದಿಲ್ಲ, ಏನು ಮಾಡ್ಕೊತ್ಯೊ ಮಾಡ್ಕೊ ಅಂತ ಎದೆ ತಟ್ಟಿಕೊಂಡು ಸವಾಲು ಹಾಕುವುದು. ಇಂತಹ ನಡುವಳಿಕೆಯನ್ನು ಪ್ರಶ್ನಿಸಿದರೆ ಅದು ಕೋಮು ಸೌಹಾರ್ದತೆಯನ್ನು ಕೆದುಕುವ ಕಾರ್ಯ!!! ಸೌಹಾರ್ದತೆಯೆಂದರೆ ಸವಾಲು ಹಾಕಿಸಿಕೊಂಡು ನರವಿಲ್ಲದವರ ತರಹಬದುಕುವುದಾ?<br />
<br />
ವೇದ ಪುರಾಣ ಕಾಲದಿಂದಲು ಭಾರತವು ಹಿಂದು ರಾಷ್ಟ್ರವಾಗಿ ಉಳಿದಿತ್ತು ಬೆಳೆದಿತ್ತು ಇತ್ತೀಚಿನವರೆಗು.೧೦೦೦ವರ್ಷ ಯಾರು ಯಾರೋ ಆಳಿ ಹೋದರು ಸಹ ಇಂದು ಭಾರತ ಅಖಂಡ ರಾಷ್ಟ್ರವಾಗಿ ಉಳಿದಿರುವ ಗುಟ್ಟು ಹಿಂದುಗಳ ಸಂಸ್ಕೃತಿ,ಆಧ್ಯಾತ್ಮಿಕ ಮೌಲ್ಯಗಳು ಅಷ್ಟೆ.ಬೇರೆ ಯಾವುದಾದ್ರು ಇಸ್ಲಾಮಿಕ್ ಅಥವ ಕ್ರೈಸ್ತ ದೇಶಗಳಲ್ಲಿ ಈ ರೀತಿಯ ಬೆಳವಣಿಗೆಗಳು ಕಂಡು ಬಂದಿದ್ದರೆ ಇಷ್ಟು ಹೊತ್ತಿಗೆ ಆ ದೇಶವು ಇತಿಹಾಸದ ಪುಟ ಸೇರುತ್ತಿತ್ತು.ನಮ್ಮ ಪ್ರತಿ ಪೂಜಾ ಕಾರ್ಯದ "ಸಂಕಲ್ಪ"ದಲ್ಲಿ ಮೊದಲು ಉಚ್ಚರಿಸುವುದು "ಭರತ ವರ್ಷೆ,ಭರತ ಖಂಡೆ,ಜಂಬೂ ದ್ವೀಪೆ..." ತಾನೆ.ಈ ರೀತಿಯ ದೇಶ ಭಕ್ತಿ/ಪ್ರೇಮವನ್ನು (ಭಾರತಿಯತೆಯನ್ನು) ಜ್ಞಾಪಿಸುವ ಪೂಜಾ ವಿಧಿ ಬೇರೆಯಲ್ಲಿರಲು ಸಾಧ್ಯವೆ? ದೇವರೊಬ್ಬನೆ ನಾಮ ಹಲವು ಎನ್ನುವ ಹಿಂದುವಿನ ಸಾರಥ್ಯದಲ್ಲಿ ಮಾತ್ರ ಈ ರಾಷ್ಟ್ರದ ಭವಿಷ್ಯ ಉಜ್ವಲವಿದೆ ಅದು ಬಿಟ್ಟು, ನೀನು ಪರಮ ಪಾಪಿ,(ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡದಿರಿ ಹುಚ್ಚಪ್ಪಗಳಿರಾ ಎಂದು ದಾಸರು ಈಗ ಹಾಡಿದ್ದರೆ ಹುಚ್ಚಾಸ್ಪತ್ರೆಗೆ ಹಾಕ್ತಿದ್ರೇನೊ ಯಾಕಂದ್ರೆ "ಇವರ"ಪ್ರಕಾರ ಮಾನವ ಪಾಪಿ!!,<br />
<br />
ಗೌರವಿಸು ಜೀವನವ,ಗೌರವಿಸು ಚೇತನವ|<br />
<br />
ಆರದೊ ಜಗವೆಂದು ಭೇದವೆಣಿಸದಿರು||<br />
<br />
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ|<br />
<br />
ದಾರಿಯಾತ್ಮೋನ್ನತಿಗೆ - ಮಂಕುತಿಮ್ಮ ||<br />
<br />
ಈ ರೀತಿ ಜೀವನದ ಪ್ರಾಮುಖ್ಯತೆಯನ್ನು ಸೊಗಸಾಗಿ ಬಣ್ಣಿಸಿದ ಡಿ.ವಿ.ಜಿಯವರ ಕಗ್ಗವೆಲ್ಲಿ?) ನೀನು ಪಾಪಿಷ್ಟ, ನನ್ ಹತ್ರ ಬಾ ಎಲ್ಲ ಸರಿ ಮಾಡ್ತೀನಿ, ನಾನೆ ಕರ್ತೃ, ಎಲ್ಲಾ ವಿಷಯದಲ್ಲು "ನಾನೆ""ನಾನೆ" ಅಂತ ಪ್ರತಿಪಾದಿಸುವರ ಕೆಳಗಾಗಲಿ, ದಿನಕ್ಕೆ ಐದು ಬಾರಿ ಅಲ್ಲಾ ಒಬ್ಬನೆ ದೇವರು ಪೈಗಂಬರ್ ಒಬ್ಬನೆ ಪ್ರವಾದಿ(ಜೀಸಸ್ನು ಸಹ ಪ್ರವಾದಿ ಅಂತ ಒಪ್ಪಿಕೊಳ್ಳುತ್ತಾರೆ, ಆದರೆ ಜೀಸಸ್ ತಪ್ಪು ಹಾದಿಯಲ್ಲಿ ನಡೆದ(ಮುಸ್ಲಿಂ ರೀತಿಯ ಜೀವನ ನಡೆಸಲಿಲ್ಲ ಎನ್ನುವುದು ವಾದ) ಇದೆ ವಿಚಾರವಾಗಿ ಜೀಸಸ್ ಮರು ಹುಟ್ಟುತ್ತಾನೆ ಎಂಬುದನ್ನು ಎರಡು ಸಮುದಾಯದವರು ಒಪ್ಪುತ್ತಾರೆ. ಆದ್ರೆ ಹೇಗೆ ಜೀವನ ನಡೆಸುತ್ತಾನೆ ಎಂಬುದೆ ಇವರ ಆಂತರಿಕ ಘರ್ಷಣೆಗೆ ಕಾರಣ), ಅವನಿಗಿಂತ ಶ್ರೇಷ್ಠ ಮನುಷ್ಯ ಭೂಮಿಯಲ್ಲಿ ಹುಟ್ಟಿಲ್ಲ ಎಂದು ಲೌಡ್ ಸ್ಪೀಕರ್ನಲ್ಲಿ ಬೊಬ್ಬೆ ಹೊಡೆಯುವವರ ಸಾರಥ್ಯದಲ್ಲಿ ನಮ್ಮ ದೇಶ ಭವಿಷ್ಯ ಸುಭದ್ರ ಎನಿಸುತ್ತದೆಯೆ? ಇಷ್ಟೆಲ್ಲ ಕಣ್ಣಿಗೆ ರಾಚುತ್ತಿದ್ದರು ಕೈ ಕಟ್ಟಿಕುಳಿತಿರುವ ಪ್ರಮೇಯ ಕೇವಲ ಒಬ್ಬ ಹಿಂದುವಿಗೆ ಮಾತ್ರ ತನ್ನ ರಾಷ್ಟ್ರದಲ್ಲಿ ಅನುಭವಿಸಲು ಸಿಗುತ್ತದೆ. ಭೂಮಿಯ ಯಾವುದೆ ಭಾಗದಲ್ಲಿ ಈ ರೀತಿಯ "ಸೌಹಾರ್ದತೆ"ಕಾಣಲು ಸಾಧ್ಯವಿಲ್ಲ. ಯುಕೆ, ಯುಎಸ್ ನಲ್ಲಿ ಅವರವರ ಧರ್ಮಗಳನ್ನು ನಿರ್ಭಯವಾಗಿ ಯಾವುದೆ ಅಡೆ ತಡೆಯಿಲ್ಲದೆ ಆಚರಿಸುವ ಸ್ವಾತಂತ್ರ್ಯವಿದೆ, ಅಲ್ಲಿ ವಿದ್ಯಾರ್ಹತೆಗೆ ಬರವಿಲ್ಲ, ದುಡ್ಡಿಗೆ ಬರವಿಲ್ಲ, ಸಮಾಜದಲ್ಲಿ ಮೂಲೆಗುಂಪು ಮಾಡಲ್ಪಟ್ಟವರು ಅಂತ ಬೇಧಭಾವವಿಲ್ಲ, ಹೀಗಿದ್ದರು ಸಹ ಅಲ್ಲಿನವರೆ ಅಲ್ಲಿ ಬಾಂಬ್ ಹಾಕುತ್ತಾರೆ.ಇತರೆಡೆ ಅವರ ಸಹಯೋಗವನ್ನು ನೀಡುತ್ತಾರೆ ಇದರರ್ಥವೇನು?ನೀವು ಏನೇ ಸೌಲಭ್ಯ,ವಸತಿ ಸುಭದ್ರತೆ ಕಲ್ಪಿಸಿಕೊಟ್ಟರು ಇಸ್ಲಾಮಿಕ್ ಆಡಳಿತ ತರುವವರೆಗು ನಮ್ಮ ದಾಳಿ ಬಿಡುವುದಿಲ್ಲವೆಂದರ್ಥ ತಾನೆ. ಇಂತಹ ಮೃಗೀಯ ಭಾವನೆಗೆ ಎಲ್ಲರ ಸಹಕಾರವಿರಲು ಸಾಧ್ಯವಿಲ್ಲವೆ ಇಲ್ಲ ಯಾವ ಧರ್ಮದಲ್ಲಾದರು ಸಹ,ಆದ್ರೆ ಮೌನವಾಗಿ ವಿರೋಧಿಸುವವರೆ ಹೆಚ್ಚು ಆದರಿಂದ ಉಪಯೋಗವೇನು, ಈ ಭಯೋತ್ಪಾದಕರೆ ಮೊದಲಿನಿಂದ ಕೊನೆಯವರೆಗು ಮೇಲುಗೈ ಸಾಧಿಸುತ್ತಾರೆ. ಅವರದೆ ಧರ್ಮದವರು ಸಹ ಕೆಲವರು ಮಾಡುವ ನೀಚ ಕಾರ್ಯಗಳಿಗೆ ತಲೆತಗ್ಗಿಸಬೇಕಾಗುತ್ತದೆ. <br />
<br />
ಇಂದು "ಮ"ಕಾರಗಳ ಮಧ್ಯೆ ಸಿಲುಕಿ ಮಿಕಿ ಮಿಕಿ ಅಂತ ದಿಟ್ಟಿಸುತ್ತಿರುವ ಮಧ್ಯಮ ವರ್ಗದ ಹಿಂದು/ಭಾರತೀಯನಿಗೆ ಮುಲ್ಲಾ,ಮಿಷಿನರಿ,ಮಾರ್ಕ್ಸಿಸ್ಟ್,ಮೆಕಾಲೆಯಿಸ್ಟ್,ಮೀಡಿಯಾ ಹಾಗು ಮೈನೊ ವಿಚಾರಗಳ ಅರಿವು ಇರಬೇಕಾದ್ದು ಅತ್ಯಾವಶ್ಯಕವಾಗಿದೆ.<br />
ಹಿಂದೆ ೨೦೦,೧೦೦,೫೦ ವರ್ಷಗಳಲ್ಲಿ ಈ ರೀತಿಯೆಲ್ಲಾ ಆಗಿದೆ ಮುಂದಕ್ಕೆ ಏನು ಕಾದಿದೆಯೊ ಅನ್ನುವುದಕ್ಕಿಂತ ಇಷ್ಟು ವರ್ಷಗಳಲ್ಲಿ ಕೈ ಕಟ್ಟಿ ಕೂತ್ವಿ ಮುಂದೆಯು ಸಹ ಇಂತಹ ಅವಘಡ ಆಗುವುದನ್ನು ತಪ್ಪಿಸಲು ಏನಪ್ಪ ಮಾಡಬಹುದು ಅಂತ ಯೋಚಿಸಬೇಕಷ್ಟೆ. ಇವೆಲ್ಲ ಇಂದು ನಮ್ಮ ಸಮಾಜದ ಅವಿಚ್ಛಿನ್ನ ಭಾಗವಾಗಿ ಬೆಳೆದು ಬಿಟ್ಟಿದೆ,ಹೊಡಿ ಬಡಿ ಅನ್ನುವುದಕ್ಕಿಂತ ಇವೆಲ್ಲವುದನ್ನು ಜೊತೆ ಇಟ್ಟುಕೊಂಡು ಹೇಗೆ ಒಳ್ಳೆಯ ಸಮಾಜವನ್ನು ಕಟ್ಟಬಹುದು ಎನ್ನುವುದರ ಆಲೋಚನೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.<br />
<br />
ಇಂದಿನ ಪ್ರಚಲಿತ ದಿನಗಳಲ್ಲಿ ಭಾರತವನ್ನು ಈ ಆರು "ಮ"ಕಾರಗಳು ಆಕ್ರಮಿಸಿವೆ.ಇವರುಗಳಿಗೆ ದೇಶದ ಮೇಲೆ ಎಳ್ಳಷ್ಟು ಪ್ರೀತಿಯಿಲ್ಲ,ಈ ದೇಶದ ಸಂಸ್ಕೃತಿಯೆಂದರೆ ತಿರಸ್ಕಾರ,ಹಿಂದು ಮೌಲ್ಯಗಳು ಕಾಲು ಕಸ,ಹಿಂದು ಎಂಬ ಪದ ಎಂದರೆ ಅಲರ್ಜಿ,ಇವರುಗಳಿಗೆ ತುರಿಕೆ ಶುರುವಾಗುತ್ತದೆ ಈ ಪದ ಕಿವಿಗೆ ಬಿದ್ದಾಕ್ಷಣ.ಇವುಗಳನ್ನು ನಿಯಂತ್ರಣದಲ್ಲಿಡಲಿಲ್ಲವೆಂದರೆ ಮುಂದೊಂದು ದಿನ ಹಿಂದುಗಳು ಬದುಕುವುದಕ್ಕಾಗಿ ಬೇರೆ ರಾಷ್ಟ್ರಗಳತ್ತ ಓಡಬೇಕಾಗುತ್ತದೆ ಇಲ್ಲವಾದರೆ ಇದ್ದೆ ಇದೆಯಲ್ಲ,ಮತಾಂತರ.ಯಾವನು ಶಕ್ತಿಶಾಲಿಯಾಗಿ ಜಾಲ ಹೊಂದಿರುತ್ತಾನೊ ಅವನ ಧರ್ಮಕ್ಕೆ ಮತಾಂತಗೊಳ್ಳಬೇಕಾಗುತ್ತದೆ. ಗೊವಾ ಇನ್ಕ್ವಝಿಷನ್ ಆಗ್ಲಿ ಮುಸ್ಲಿಮ್ ರಾಜರುಗಳು ಹಿಂದೆ ನಮ್ಮ ದೇಶವನ್ನು ಆಳಿದಾಗ ಇದೆ ಅಲ್ಲವೆ ನಡೆದಿದ್ದು ಈಗ ಮತ್ತೊಮ್ಮೆ ಅದೆ ಪುನರಾವರ್ತನೆಗೊಳ್ಳುತ್ತದೆಯೆ ಎಂಬ ಭಯ ಕಾಡಿದರೆ ಆಶ್ಚರ್ಯವಿಲ್ಲ. ಅರಬ್ ದೇಶಗಳಲ್ಲಿ ಕ್ರೈಸ್ತ ಮಿಷಿ-ನರಿಗಳು ಯಾಕೆ ಕೆಮ್ಮೊಕ್ಕೆ ಆಗೊಲ್ಲ ಅಂದ್ರೆ ಮತಾಂತರದಂತಹ ಚಿಲ್ಲರೆ ಕೆಲಸ ಮಾಡಿದರೆ ನಡು ರಸ್ತೆಯಲ್ಲಿ ಕಲ್ಲು ಹೊಡೆದು ಸಾಯಿಸುತ್ತಾರೆ. ಇಲ್ಲಿ ಹಾಗಿಲ್ಲವಲ್ಲ ಅದಕ್ಕೆ ರಾಜಾ ರೋಷವಾಗಿ ತಮ್ಮ ಕಾರ್ಯನಡೆಸುತ್ತಿದ್ದಾರೆ.<br />
<br />
ಮುಸ್ಲಿಮ್ ಅಥವ ಕ್ರೈಸ್ತರು ಎಂದರೆ ಈ ಧರ್ಮಗಳ ಸಂಬಂಧಪಟ್ಟ ಎಲ್ಲರು ಅಲ್ಲ, ಕೇವಲ ಕಿತಾಪತಿಗಳಲ್ಲಿ ತೊಡಗಿರುವವರ ಮಾತ್ರ ಅನ್ವಯಿಸುತ್ತದೆ.ಏನ್ ಮಾಡ್ತೀರಾ? ಎಲ್ಲ ಭಯೊತ್ಪಾದಕರು ಮುಸ್ಲಿಂಗಳೆ ಆದ್ರೆ ಎಲ್ಲಾ ಮುಸ್ಲಿಂಗಳು ಭಯೊತ್ಪಾದಕರಲ್ವಲ್ಲ ಹಾಗೆ ಸಮಾಚಾರ.<br />
ಮೊನ್ನೆ ತಾನೆ ಇಂಡಿಯಾ ಟುಡೆ ಕಾನ್ಕ್ಲೇವ್ ನಡೆಯಿತು,ಎಮ್.ಜೆ.ಅಕ್ಬರ್ ಹೆಸರಾಂತ ಜರ್ನಲಿಸ್ಟ್ (ಹಿಂದುಗಳನ್ನು ಜರೆಯೊ ಲಿಸ್ಟ್ ಅಲ್ಲಿ ಇವನು ಒಬ್ಬ) ಅವನ ವಾದದ ಪ್ರಕಾರ ಭಯೋತ್ಪಾದಕರು ಯಾವುದೆ ಧರ್ಮಕ್ಕೆ ಸೀಮಿತವಿಲ್ಲ, ಎಲ್ಲರೂ ಕೇವಲ ಮುಸ್ಲಿಂ ಭಯೋತ್ಪಾದಕರ ಬಗ್ಗೆ ಏಕೆ ಆಲೋಚಿಸುತ್ತೀರಾ?ಎಲ್.ಟಿ.ಟಿ.ಈ ನೋಡಿ ಅವರು ಹಿಂದುಗಳಲ್ಲವೆ ಹಾಗಾಗಿ ಹಿಂದು ಭಯೊತ್ಪಾದಕರಾಗಲಿಲ್ಲವೆ?ಅಸ್ಸಾಮ್,ನಾಗಾಲಾಂಡ್ ನಕ್ಸಲ್ಗಳನ್ನು ನೋಡಿ ಅವರೆಲ್ಲ ಕ್ರೈಸ್ತ ಸಮುದಾಯಕ್ಕೆ ಸೇರಿದ ಭಯೋತ್ಪಾದಕರಲ್ಲವೆ, ಅವರಲ್ಲಿ ಬೌದ್ಧರು ಇದ್ದಾರೆ ಹಾಗಾಗಿ ಬೌದ್ಧ ಭಯೊತ್ಪಾದಕರು ಇದ್ದಂತಾಗಲಿಲ್ಲವೆ ಹಾಗಾಗಿ ನಾವು ಭಯೊತ್ಪಾದಕರು ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಆಲೋಚನೆ ಬಿಡಬೇಕು ಅಂದಾಗ ಕರತಾಡನ ಸುರಿಮಳೆಯಾಯಿತು ನನಗೆ ಕೆರದಿಂದ ತಾಡನ ಮಾಡುವ ಹಾಗೆ ಅನಿಸಿತು. ಅವರುಗಳು ಇಂತಹ ಕೂಟ ಏರ್ಪಡಿಸುವುದು ತಮ್ಮ ಸೆಕ್ಯುಲರ್ ಆಲೋಚನೆಗಳನ್ನು ಸಮರ್ಥಿಸುವುದ್ದಕ್ಕೋಸಕರ ಅಷ್ಟೆ ವಿಚಾರ ವಿನಿಮಯಕ್ಕಾಗಲಿ ಅಥವ ವಸ್ತು ಸ್ಥಿತಿಯ ಬಗ್ಗೆ ಚಿಂತನೆ ನಡೆಸುವುದ್ದಕ್ಕಾಗಲಿ ಅಲ್ಲ. <br />
<br />
ಎಲ್.ಟಿ.ಟಿ.ಈ ಹಿಂದು ಭಯೋತ್ಪಾದಕರು ಅಂದ್ರೆ ಅವರ ಉದ್ದೇಶ ಹಿಂದುತ್ವವನ್ನು ಶ್ರೀಲಂಕಾದಲ್ಲಿ ಸ್ಥಾಪಿಸುವುದೆ?ಅವರ ಕ್ಷುಲ್ಲಕ ಕಾರಣಗಳಿಗೆ ಬಂದೂಕು ಹಿಡಿದರೆ ಅವರು ಬೌದ್ಧ ಭಯೋತ್ಪಾದಕರಾಗುತ್ತಾರೆಯೆ? ಇಲ್ಲಿ ಮುಸ್ಲಿಂ ಭಯೋತ್ಪಾದಕ ವಿಚಾರವನ್ನು ವಿಷಯಾಂತರ ಮಾಡಿ ಅದನ್ನು ತಿಳಿಗೊಳಿಸಿ ಅದೇನು ದೊಡ್ಡ ವಿಚಾರವಲ್ಲ ಎನ್ನುವುದನ್ನು ಬಿಂಬಿಸುವುದಕ್ಕೆ ಇಷ್ಟೆಲ್ಲಾ ಹುನ್ನಾರ.ಮುಸ್ಲಿಂ ಭಯೋತ್ಪಾದಕನ ಏಕೈಕ ಉದ್ದೇಶ ಇಸ್ಲಾಮ್ ಧರ್ಮವನ್ನು ಸ್ಥಾಪಿಸುವುದು.ಕಾಫಿರರನ್ನು(ಅಲ್ಲಾನನ್ನು ನಂಬದೆ/ಪೂಜಿಸದೆಯಿರುವವರು ನಾವಾದ್ರು ಅಗಬಹುದು ಮುಸ್ಲಿಂ ಆದ್ರು ಆಗಬಹುದು)ಸಾಯಿಸುವುದು,ಶರಿಯತ್ ಕಾನೂನು ಜಾರಿಗೆ ತರುವುದು ನಂತರದ ವಿಚಾರವಾಗುತ್ತದೆ.<br />
ಇಂತಹ ವಿಚಾರಗಳು ನಮ್ಮ ನಿಮ್ಮ ಸ್ನೇಹಿತ ವರ್ಗದಲ್ಲಿ ಇರುತ್ತಾರೆ ಅಂತ ಹೇಳುತ್ತಿಲ್ಲಾ ನೀವು ಹಾಗೆ ತಪ್ಪಾರ್ಥವನ್ನು ಸಹ ಕಲ್ಪಿಸಿಕೊಳ್ಳಬೇಡಿ ಆದ್ರೆ, ಬೆಂಗಳೂರಿನಲ್ಲಿ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದ ಭಯೋತ್ಪಾದಕರನ್ನು ಸಹ ನಾವು ಮರೆಯಬಾರದಲ್ಲವೆ?ಗ್ಲಾಸ್ಗೊ ಭಯೊತ್ಪಾದಕ ದಾಳಿಯಲ್ಲಿ ವೈದ್ಯನೊಬ್ಬ ಶಾಮೀಲಾಗಿದ್ದನಲ್ಲವೆ?LeT/Al-Qeda on a hiring spree,freshers welcome ಅನ್ನೊ ಜಾಹಿರಾತು ಕಾಣಿಸಿಕೊಳ್ಳುವುದು ಬಾಕಿಯಿದೆ.<br />
<br />
’ಮ’ಕಾರದಲ್ಲಿ ಮೊದಲಿಗೆ ಮುಲ್ಲಾ/ಮೌಲ್ವಿಯ ಬಗ್ಗೆ ತಿಳಿಯಬೇಕೆಂದರೆ ಇವರುಗಳೆ ಸಮುದಾಯದ ನಿಯಂತ್ರಣಕಾರರು.ಫಾತ್ವ ಹೊರಡಿಸುವುದರ ಮೂಲಕ ಸಮುದಾಯ ಯಾರಿಗೆ ವೋಟ್ ಮಾಡ್ಬೇಕು,ಯಾರ ನಡತೆ ಹೇಗಿರಬೇಕು ಎನ್ನುವುದನ್ನು ರೂಪಿಸುವುದು ಸಹ ಇವರ ಒಂದು ಕಾರ್ಯ.ಆಶ್ಚರ್ಯಕರವೆಂದರೆ UPAಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಮಾಣ ಪತ್ರವನ್ನು ಸಹ ಕೊಟ್ಟಿದೆ ಮೌಲ್ವಿಗಳ ಫಾತ್ವ ಭಾರತದ ಕಾನೂನುಗಳ ಉಲ್ಲಂಘನೆ ಮಾಡುವುದಿಲ್ಲ ಎಂದು. ಇದನ್ನ ಕೋರ್ಟ್ ನಂಬಿರುವುದು ಸಹ ಅಷ್ಟೆ ಆಶ್ಚರ್ಯಕರ.<br />
ಉದಾಹರಣೆಗೆ ಕೇರಳದಲ್ಲಿ ೧೨ MLAಗಳು ಅಲ್ಲಾನ ಹೆಸರನ್ನು ಹೇಳಿಕೊಂಡು ಪ್ರಮಾಣ ವಚನ ಸ್ವೀಕರಿಸಿದರು.ಯಾರೊ ಒಬ್ಬ ವ್ಯಕ್ತಿ ಇದು ಸಂವಿಧಾನದ ವಿರುದ್ಧವಾದ ನೀತಿ ಎಂದು PILಹಾಕಿದರೆ ಕೇರಳ ಹೈ ಕೋರ್ಟ್ ಅದನ್ನು ತಿರಸ್ಕರಿಸಿತು.ಅವನು ಛಲ ಬಿಡದೆ ಸುಪ್ರೀಂ ಕೋರ್ಟ್ ಬಾಗಿಲು ಬಡಿದ ಅಲ್ಲಿಯು ಸಹ ಇದೆ ವಾದ,ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಒಂದೆ ಅಲ್ಲಾನ ಹೆಸರಿನಲ್ಲಿ ಸ್ವೀಕರಿಸುವುದು ಒಂದೆ ಎಂದು ತೀರ್ಪಿಟ್ಟಿತು.ಆದ್ರೆ ಬಹುಪಾಲು ಮುಲ್ಲಾ ಹಾಗು ಮೌಲ್ವಿಗಳು "ದೇವರು" ಅನ್ನುವುದು ಏನಿಲ್ಲ "ಅಲ್ಲಾ"ನೆ ಎಲ್ಲಾ ಎಂಬ ಹೇಳಿಕೆ ನೀಡಿದಾರೆ.ಇದರ ಅರ್ಥ ಕೆಲವು ಮೌಲ್ವಿಗಳೆ ದೇವರು ಅಂದ್ರೆ ಅಲ್ಲಾ ಅಲ್ಲ ಎನ್ನುತ್ತಿರಬೇಕಾದರೆ ನಮ್ಮ ಸುಪ್ರೀಂ ಕೋರ್ಟ್ ಎರಡು ಒಂದೆ ಎಂದು ಯಾರಿಗೆ ಸಮರ್ಥನೆ ನೀಡುತ್ತಿದೆ ಎಂದು ಅರ್ಥವಾಗದ ವಿಚಾರ.<br />
ಮುಲ್ಲಾ ಹಾಗು ಮೌಲ್ವಿಗಳ ಉದ್ದೇಶ ಸಮುದಾಯವನ್ನು ಆದಷ್ಟು ಹಿಂದೆಯಿಡುವುದು,ಮುಂದೆ ಬರಲಿಕ್ಕೆ ಬಿಟ್ಟರೆ ಎಲ್ಲಿ ಪ್ರಶ್ನೆಗಳೇಳುತ್ತವೆಯೊ ಎಂಬ ಭಯ.ಏಕೆಂದರೆ ಇವರ ಧರ್ಮದಲ್ಲಿ ಪ್ರಶ್ನೆ ಮಾಡುವ ಹಕ್ಕು ಯಾರಿಗು ಇಲ್ಲ, ಪ್ರಶ್ನೆ ಕೇಳಿದರೆ ಅವನು ಮುಸ್ಲಿಂ ಅಲ್ಲವೆ ಅಲ್ಲ. ಈ ರೀತಿಯಾದ ವಿಚಾರವನ್ನು ಪ್ರತಿಪಾದಿಸುತ್ತದೆ ಧರ್ಮ.ತಮ್ಮ ಧರ್ಮಕ್ಕೆ ಆಪತ್ತು ಬಂದಿದೆ ಎಲ್ಲರು ಒಗ್ಗೂಡಬೇಕು, ಒಬ್ಬೊಬರೆ ತೀರ್ಮಾನ ತೆಗೆದುಕೊಂಡು ಏನು ಕೆಲಸ ಮಾಡಬೇಡಿರಿ ಎಂದು ಭಯ ಹುಟ್ಟಿಸಿ ತಮ್ಮ ನಿಯಂತ್ರಣದಲ್ಲಿಸಿಕೊಳ್ಳುತ್ತಾರೆ.ಈ ಕುಹಕವನ್ನೆಲ್ಲಾ ಅರಿಯುವ ಮುಸ್ಲಿಂರ ಖಾಂಂಈ ಜನರ ಸಂಖ್ಯೆ ಗಣನೆಗೆ ತೆಗೆದು ಕೊಳ್ಳುವ ಹಾಗಿಲ್ಲ ಹಾಗಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದ್ದರು ಸಹ ಏನೂ ಮಾಡಲಾಗದೆ ಕೈ ಚೆಲ್ಲಿ ಕುಳಿತಿರುತ್ತಾರೆ.<br />
<br />
’ಮ’ಕಾರದಲ್ಲಿ ಎರಡನೆಯದಾಗಿ ಮಿಷಿನರಿಗಳು,ಇವರುಗಳ ಕಾರ್ಯ ವೈಖರಿಯಲ್ಲೆ ಬೇಧವಿದೆ ಕೆಲವು ವರ್ಷಗಳ ಹಿಂದೆ ಮತಾಂತರಗೊಂಡ ಕುಟುಂಬಗಳು ಅತ್ಯಂತ ಹುರುಪಿನಿಂದ "ಸೇವೆ"ಸಲ್ಲಿಸಿದರೆ ತಮ್ಮ ಪಾಡಿಗೆ ತಾವಿದ್ದು ಧರ್ಮ ಪಾಲಿಸಿ ಸಮಾಜದಲ್ಲಿ ಹೊಂದಿಕೊಂಡು ಬದುಕುವ ಕ್ರೈಸ್ತ ಕುಟುಂಗಳೊಂದಿಗೆ ಹೋಲಿಸಿ ಅಪಾರ್ಥ ಮಾಡಿಕೊಳ್ಳಬೇಡಿ. ಜಗತ್ತಿನಲ್ಲಿ ಅತ್ಯಂತ ದೊಡ್ಡ ವ್ಯವಹಾರ ಮತ ಪ್ರಚಾರ ಮಾಡುವುದು,ಈ ಕೆಲಸಕ್ಕೆ ಜಗತ್ತಿನ ಎಲ್ಲಾ ಮೂಲಗಳಿಂದ ಹಣ ಬರುವುದು ಅಚ್ಚರಿಯಲ್ಲ.ಜಾಗತೀಕರಣದಿಂದ ಸಣ್ಣ ಪುಟ್ಟ ಕಾರ್ಖಾನೆಗಳೆಲ್ಲ ಮಣ್ಣು ತಿನ್ನಬೇಕಾಯಿತು ಏಕೆಂದರೆ ಎಲ್ಲರು ಅಲ್ಲೆ ಖರೀದಿಸತೊಡಗಿದರು, ವಾಲ್ಮಾರ್ಟ್ ಬಂದರೆ ತಳ್ಳುವ ಗಾಡಿಯಲ್ಲಿ ತರಕಾರಿ ಯಾರು ಕೊಳ್ಳುತ್ತಾರೆ? ಎಲ್ಲರು ವಾಲ್ಮಾರ್ಟ್ಗೆ ಓಡುತ್ತಾರೆ, ತಳ್ಳುಗಾಡಿಯವನು ಹೊಟ್ಟೆಗೆ ಬೇರೆ ಮಾರ್ಗ ನೋಡಿಕೊಳ್ಳಬೇಕು ಇಲ್ಲವಾದರೆ ನೇಣಿಗೆ ಶರಣಾಗಬೇಕು. ಹಾಗೆಯೆ ಹೊರಗಿನಿಂದ ಬೆಂಬಲಿತ "ನರಿ"ಗಳು ಬಂದು ಆಮಿಷವೊಡ್ಡಿ ಸ್ಥಳೀಯ ಆಚರಣೆಗೆ ಬೆಂಕಿಯಿಟ್ಟು "kingdom of christ"ಸ್ಥಾಪಿಸಿ ಜಾಗ ಖಾಲಿ ಮಾಡುವ ಹೊತ್ತಿಗೆ ಮೂಲ ಆಚರಣೆ/ಧರ್ಮಕ್ಕೆ ಕೊಳ್ಳಿಯಿಟ್ಟಾಗಿರುತ್ತದೆ.ಒರ್ರಿಸ್ಸಾದಲ್ಲಿ ೮೪-ವರ್ಷದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನೆ ಹತ್ಯೆಗೈಸಿದರಲ್ಲ? ಇವರು ಮಾಡಿದ ತಪ್ಪು ಮತಾಂತರಗೊಂಡ ಹಿಂದುಗಳನ್ನು/ದಲಿತರನ್ನು ಮತ್ತೆ ಹಿಂದುತ್ವಕ್ಕೆ ತರುವ ಶುದ್ಧೀಕರಣ ಕಾರ್ಯ ಮಾಡಿ ಸಫಲರಾಗಿದ್ದರು.ಇವರು ಇದ್ದರೆ ತಮ್ಮ ಬೇಳೆ ಬೇಯುವುದಿಲ್ಲವೆಂದು ಅವರಿಗೆ ಕೊಲೆ ಮಾಡಿಸಿದರು.<br />
"ಸತ್ಯದರ್ಶಿನಿ"ಯಂತಹ ಸತ್ಯ ಕಥೆಯನ್ನೆ ಬಿಂಬಿಸಿದ ಭೂಪರಲ್ಲವೆ "ನರಿ"ಗಳು,ಕೃಷ್ಣನನ್ನು ೧೬೦೦೦ ಸ್ತ್ರೀಯರೊಂದಿಗೆ "ಸಹವಾಸ"ಮಾಡಿದ ಮನುಷ್ಯನನ್ನು ದೇವರು ಅಂತ ಹೇಗೆ ಒಪ್ಪಿಕೊಳ್ಳುತ್ತೀರಿ ಎಂಬುದನ್ನು ಸಹ ವಾದ ಮಾಡಿದರು.ಪಾಪ ವಿಷಯ ಅರಿಯದ ಮುಗ್ಧರು, ಹೌದಲ್ವ ಈ ಪ್ರಶ್ನೆ ನ್ಯಾಯ ಸಮ್ಮತವಾಗಿದೆ ಎಂದು ತಲೆಯಾಡಿಸಬಹುದು ಆದ್ರೆ ಅದು ಹಾಗಲ್ಲವಲ್ಲ..೧೬೦೦೦ ಸ್ತ್ರೀಯರು ಅವನನ್ನು ಮನಸ್ಸಿನಲ್ಲೆ ಆರಾಧಿಸುತ್ತಿದ್ದರು, ಅವನನ್ನೆ ಸರ್ವಸ್ವ ಎಂದು ಪರಿಗಣಿಸಿದ್ದರು.ಹಾಗೆಂದ ಮಾತ್ರಕ್ಕೆ ಅವನಿಗೆ ಅವರ ಜೊತೆಗೆಲ್ಲ ಸಂಬಂಧವಿತ್ತೆಂದು ಹೇಳಲಿಕ್ಕಗುತ್ತದೆಯೆ?ಇವರುಗಳು ಯಾರ ಹತ್ತಿರವು ಪ್ರಮಾಣ ಮಾಡಿರಲಿಲ್ಲ ಕೃಷ್ಣನೆ ನನ್ನ ಗಂಡನೆಂದು.ಈಗ ಪ್ರತಿ ಹೆಣ್ಣು ಸಹ ಕ್ರೈಸ್ತ ಧರ್ಮದಲ್ಲಿ "ನನ್" ಆಗಬೇಕೆಂದರೆ "ಏಸುವೆ ತನ್ನ ಗಂಡ"ನೆಂದು ಪ್ರಮಾಣ ಮಾಡಬೇಕು ಇದರ ಅರ್ಥವೇನು?? :-0 ಈ ಪ್ರಮಾಣದ ಪ್ರಕಾರ ಜೆಸಸ್ಗೆ ಕೋಟಿ ಕೋಟಿ ಹೆಂಡಿರು!!! ಕೃಷ್ಣ ನ ಲೆಖ್ಖ ೧೬,೦೦೦ಕ್ಕೆ ಮುಗಿದರೆ ಏಸುವಿನದ್ದು ನಿತ್ಯ ಏರುವ ಖಾತೆ. - ಇದು ಕೆಸರೆರಚುವ ಪ್ರಯತ್ನವಲ್ಲ ಆರೋಪವನ್ನು ಕೇಳಿ ಉದ್ಭವಸಿದ ಪ್ರಶ್ನೆ.<br />
ಮುಗ್ಧರನ್ನು ಬುಟ್ಟಿಗೆ ಹಾಕಿ ದುಡ್ಡಿನಿಂದಲೊ ದರ್ಪದಿಂದಲೊ ಮತಾಂತರ ಮಾಡಿ ಕೊನೆಗೆ ಹಿಂದುಗಳು ಅನ್ನೊರು ಒಂದು ಕಾಡು ಜನಾಂಗದವರು ಕರ್ತೃವನ್ನು ಪೂಜಿಸದೆ ಕಲ್ಲುಗಳಿಗೆ ಹೂವ ಹಾರ ಹಾಕಿ ಅದನ್ನೆ ಪೂಜೆ ಅಂತ ಕರಿತಿದ್ರು ಅಂತ ಇತಿಹಾಸ ಸೃಷ್ಟಿಸೊಕ್ಕೆ ಹೊರಟಿರೋರ ಬಗ್ಗೆ ಎಚ್ಚರದಿಂದಿರದೆ ಅವರು ಎನಾದ್ರು ಮಾಡಿಕೊಳ್ಲಿ ನಮ್ಗೇನು ಅಂತ ಸುಮ್ನೆ ಕೂತ್ರೆ ಸರಿನಾ?<br />
<br />
ಮುಂದುವರೆಯುವುದು.....<br />
<br />
ನಾನು ಮುಂದಿಟ್ಟಿರುವ ವಿಚಾರಗಳು ಯಾರಿಗಾದರು ನೋವ್ವುಂಟು ಮಾಡಿದಲ್ಲಿ ಕ್ಷಮೆಯಾಚಿಸುತ್ತೇನೆ, ಆದರೆ ಸತ್ಯ ಯಾವಾಗಲು ಕಹಿಯಲ್ಲವೆ!!! ನನ್ನ ಮಾತುಗಳು ಸುಳ್ಳು ಎನ್ನುವುದಾದರೆ , ದಯವಿಟ್ಟು ಅದು ಸುಳ್ಳು ಎಂಬುದನ್ನು ರುಜುಮಾಡಲು ಆಧಾರಗಳನ್ನು ಕೊಟ್ಟು ಹೇಳಿ. ಇಲ್ಲವಾದರೆ ನಿಮ್ಮ ನಂಬಿಕೆಯೆ ಯಾವಾಗಲು ಸತ್ಯವಾಗೆ ಇರುತ್ತದೆ ಹಾಗೆಯೆ ಇರಲಿ,ಒಳ್ಳೆಯದು ನನಗೆ ಅಭ್ಯಂತರವಿಲ್ಲ. ತಪ್ಪಾದ ಮಹಿತಿಯನ್ನು ನಾನು ಹೇಳಿದ್ದರೆ ಅದನ್ನು ತೆಗೆದು ಹಾಕಲು ನಾನು ತಯಾರಿದ್ದೇನೆ.prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-74130484411243989842010-06-29T22:45:00.001-07:002010-06-29T22:45:27.849-07:00ಡಾ||ಡಿ.ವಿ.ಜಿ - life and times ಭಾಗ - ೨on March 26, 2009<br />
<br />
ಪತ್ರಿಕೊದ್ಯಮದಲ್ಲಿ ಶುರುವಾದ ವೃತ್ತಿ ಇವರನ್ನು ಸಮಾಜದ ಅನೇಕ ಗಣ್ಯರ ಪರಿಚಯವಾಗುವುದಕ್ಕೆ ಸಹಾಯ ಮಾಡಿತು.ಸಮಾಜದ ಉದ್ಧಾರಕ್ಕಾಗಿ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡರು, ಎಲ್ಲಿ ನೋಡಿದರು ಡಿ.ವಿ.ಜಿ ಎನ್ನುವಂತಾಯಿತು. ದೀವಾನರಾಗಿದ್ದ ಸರ್.ಎಂ.ವಿ ಅವರ ಆಪ್ತವಲಯದವರಾಗಿದ್ದರು, ಸಿರ್ ಮಿರ್ಜಾ ಅವರಿಗು ಸಹ ಇವರು ಸಹಾಯ ಮಾಡುತ್ತಿದ್ದುದುಂಟು ಅದು ಕೂಡ ನಿಸ್ಸ್ವಾರ್ಥವಾಗಿ. ಸಮಾಜದ ಹಿತ್ತಕ್ಕಾಗಿ ದುಡಿಯುವ ಈ ತುಡಿತದ ಕಾರಣ ಇವರನ್ನು ಹಲವಾರು ಸಂಘ ಸಂಸ್ಥೆಗಳ ಜೊತೆ ಕೆಲಸ ಮಾಡುವಂತಾಯಿತು.ಹೆಚ್ಚಾಗಿ ಬಿಡಿ ಬಿಡಿಯಾಗಿ ಸಂಘಟನೆಯಾಗುತ್ತಿದ್ದ ಕಾರಣ ಈ ಸಂಘ ಸಂಸ್ಥೆಗಳು ಶುರುವಾಗ್ಗುತ್ತಿದ್ದವು ನಂತರ ಮುಚ್ಚುತ್ತಿದ್ದವು ಒಂದರ ನಂತರ ಮತ್ತೊಂದು ಆದರು ಸಹ ಧೃತಿಗೆಡದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಗೋಪಾಲಕೃಷ್ಣ ಗೋಖಲೆ ಅವರ ಪ್ರಭಾವ ಡಿ.ವಿ.ಜಿಯವರ ಮೇಲೆ ತುಂಬಾ ಇತ್ತು ಗೋಖಲೆಯವರು ನಿಧನರಾದ ನಂತರ ಇವರ ಹೆಸರಿನಲ್ಲಿಯೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಶುರುಮಾಡಿದರು, ಈ ಸಂಸ್ಥೆಯೊಂದು ಮುಚ್ಚದೆ ಇಂದಿಗೂ ಸಹ ಅದು ನಡೆಯುತ್ತಿದೆ . ದೀವಾನರಾಗಿದ್ದ ಸರ್.ಎಂ.ವಿ ಅವರಿಗೆ ಬೆಂಗಳೂರಿನಲ್ಲೊಂದು ಮೋಟಾರು ಕಾರ್ಖಾನೆ ಶುರು ಮಾಡುವ ಇಚ್ಚೆಯಿತ್ತು ಅದಕ್ಕಾಗಿ ಸಮಿತಿಯನ್ನು ಸಹ ರಚಿಸಿದ್ದರು, ಈ ಸಮಿತಿಯಲ್ಲಿ ಡಿ.ವಿ.ಜಿಯವರು ಸಹ ಒಬ್ಬರಾಗಿದ್ದರು, ಹೀರಾನಂದ್ ಹಾಗು ಸರ್.ಎಂ.ವಿಯವರನ್ನು ಹೊರತುಪಡಿಸಿ. ಆ ಯೋಜನೆ ಆಗಿನ ಸರ್ಕಾರಿ ವಿರೋಧಿ ನೀತಿಯಿಂದಾಗಿ ರದ್ದಾಯಿತು ಆದರೆ ಮುಂದೆ ಇದೆ ಆಲೋಚನೆ ಹೀರಚಂದ್ ಆವರು ಹೆಚ್.ಏ.ಎಲ್ ಶುರು ಮಾಡಲು ನಾಂದಿಯಾಯಿತು. ಪತ್ರಿಕೋದ್ಯಮದಲ್ಲಿ ಇದ್ದ ಇವರಿಗೆ ಕೆಲಸ ಮಾಡುವಾಗ ಆಂಗ್ಲ-ಕನ್ನಡ ನಿಘಂಟಿನ ಅಗತ್ಯ ತೋರಿಬಂತು ಅದಕ್ಕಾಗಿಯು ಸಹ ಓಡಾದಿದರು. ಇದೆ ಸಮಯದಲ್ಲಿ ಪತ್ರಕರ್ತರ ಸಂಘ ಶುರು ಮಾಡುವ ಆಲೋಚನೆ ಬಂದಿದ್ದು ನಂತರ ಮೈಸೂರು ಶೀಘ್ರಲಿಪಿಕಾರರ ಸಂಘದ ಬೆಳವಣಿಗೆಗೂ ಶ್ರಮಿಸಿದರು.<br />
<br />
ಸಂಗೀತವು ಕೂಡ ಇವರ ಅಸಕ್ತಿ ಸೆಳೆಯದೆ ಬಿಡಲಿಲ್ಲ, ಸಂಗೀತ ದಿಗ್ಗಜರ ಪರಿಚಯವೂ ಆಯಿತು ಶ್ರಮವಹಿಸಿ ಹಗಲು ರಾತ್ರಿಯೆನ್ನದೆ ತಾಲೀಮು ಸಹ ನಡೆಯಿತು ಆದರೂ ಏಕೊ ಕಲೆ ಕೈಗೂಡಲಿಲ್ಲ. ಇದೆ ಸಂಗೀತದ ಪ್ರಭಾವ ಇವರ ಅನೇಕ ಕೃತಿಗಳಲ್ಲಿ ಕಾಣಬಹುದು.ಗೀತ ಶಾಕುಂತಲ ಹಾಗು ಅಂತ:ಪುರದ ಗೀತೆಗಳಲ್ಲಿ ಇವರ ಸಂಗೀತ ಪ್ರತಿಭೆಯ ಪ್ರತಿಬಿಂಬವನ್ನು ಕಾಣಬಹುದು.ತಮ್ಮ ಅನೇಕ ಹಾಡುಗಳಿಗೆ ಅವರೆ ರಾಗ ನಿರ್ದೇಶನ ಮಾಡಿದ್ದಾರೆ.<br />
<br />
ಸರ್.ಎಂ.ವಿಯವರು ಅರ್ಥಸಾಧಕ ಪರಿಷತ್ತು ಶುರು ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಕನ್ನಡ ಸಾಹಿತ್ಯಕ್ಕೆ ಸೀಮಿತವಿಟ್ಟು ಡಿ.ವಿ.ಜಿಯವರಿಗೆ ಮುಂದಾಳತ್ವ ವಹಿಸಿದರು.ಸರ್.ಎಂ.ವಿಯವರಿಂದ ಶುರುವಾದ ಈ ಪರಿಷತ್ತಿನಿಂದ ಮೈಸೂರು ವಿಶ್ವವಿದ್ಯಾನಿಲಯ ಹಾಗು ಕನ್ನಡ ಸಾಹಿತ್ಯ ಪರಿಷತ್ತು(ಕ.ಸಾ.ಪ)ಕೂಡ ಮೊಳಕೆಯೊಡೆದವು. ಇಂದಿಗೆ ನಮಗೆ ತಿಳಿದಿರುವಂತೆ ಕನ್ನಡದ ಪಾಲನೆ ಹಾಗು ಪೋಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಮಾತೃ ಸಂಸ್ಥೆಯಿದ್ದಂತೆ. ಇದಕ್ಕೆ ಶಿಲಾಧಾರಗಳಾಗಿ ಅನೇಕರು ನಿಂತಿದ್ದರು ಅವರಲ್ಲಿ ಡಿ.ವಿ.ಜಿಯವರು ಸಹ ಒಬ್ಬರು.ಕ.ಸಾ.ಪದ ೧೮ನೇಯ ಸಮ್ಮೇಳನಕ್ಕೆ ಅವರು ಅಧ್ಯಕ್ಷರಾದ ಸಂದರ್ಭದಲ್ಲಿ ಮಾಡಿದ ಪ್ರೋತ್ಸಾಹಕ ಕರೆ "ಕನ್ನಡದ ಒಂದೊಂದು ನುಡಿಯು ಕಿಡಿಯಾಗಬೇಕು,ಸಿಡಿಲಾಗಬೇಕು,ನಕ್ಷತ್ರವಾಗಬೇಕು, ಅಮೃತ ಬಿಂದುವಾಗಬೇಕು. ಇದೀಗ ನಮ್ಮ ಆಶೆ, ಈ ಆಶೆಗಾಗಿ ದುಡಿಯುವುದರಲ್ಲಿ ಎಲ್ಲಾ ದೇಶ ಬಾಂಧವರು ಅವರ ಅದೃಷ್ಟ ಶಕ್ತಿಗಳೂ ಸಹಕರಿಸಲಿ" ಇಂದಿಗೂ ಪ್ರಸ್ತುತವೆನಿಸುತದೆ. ೧೯೩೩ರಲ್ಲಿ ಕ.ಸಾ.ಪದ ಉಪಾಧ್ಯಕ್ಷರಾದಾಗ ಅದರ ಬೆಳವಣಿಗೆಗೋಸ್ಕರ ಬಹಳ ಶ್ರಮಿಸಿ, ಸದಸ್ಯತ್ವ ಹೆಚ್ಚಗುವಂತೆ ಮಾಡಲು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪಂಡಿತರಲ್ಲದೆ ಜನ ಸಾಮಾನ್ಯರಿಗು ಸಹ ಆಹ್ವಾನಿಸಿದರು. ಇದರಿಂದಾಗಿ ಕ.ಸಾ.ಪ ಕನ್ನಡ ಸಾಹಿತ್ಯ ಲೋಕದ ಕೇಂದ್ರ ಬಿಂದುವಾಯಿತು.ಅಲ್ಲಿಯವರೆಗೂ ಕೇವಲ ವೈಯಕ್ತಿಕ ಮಟ್ಟಕ್ಕಿದ್ದ ಗಮಕ ಸಾಹಿತ್ಯವನ್ನು ಬೆಳೆಸಲು ಯೋಜನೆ ಹಾಕಿ, ಆಗಿನ ಖ್ಯಾತ ಗಮಕಿ ಭಾರತ ಬಿಂದುರಾಯರನ್ನು ನೇಮಿಸಿದರು, ಹಳ್ಳಿ ಹಳ್ಳಿಗೆ ಆಗಿನ ಕಾಲದಲ್ಲೆ ಸಾಹಿತ್ಯ ಕಂಪನ್ನು ಹರಡಲು ಶ್ರಮಿಸಿದರು. ಸಿಬ್ಬಂದಿಯನ್ನು ಹೆಚ್ಚಿಸಿದರು ಪರಿಷತ್ತನ್ನು ಸಾಂಘಿಕವಾಗಿ ಬೆಳಸಿ ಹೆಮ್ಮರವಾಗಿಸಿದರು.<br />
<br />
"ಪರಿಷತ್ತಿನ ಕಾರಯ್ಕಲಾಪಗಳನ್ನು ಯಾವ ರೀತಿ ವಿಸ್ತರಿಸಬೇಕು, ಅವುಗಳ ರೂಪರೇಷೆ ಹೇಗಿರಬೇಕು ಎಂಬ ಅಂಶಗಳನ್ನು ಖಚಿತವಾಗಿ ಆಲೋಚಿಸಿ, ಅವುಗಳಲ್ಲಿ ಹಲವನ್ನು ಕಾರಯರೂಪಕ್ಕೆ ತಂದು ಧನ ಬೆಂಬಲ ಅಷ್ಟಾಗಿ ಇಲ್ಲದ್ದಿದ್ದರೂ ಪರಿಷತ್ತಿನ ವ್ಯಕ್ತಿತ್ವವನ್ನು ವ್ಯಾಪಕತೆಯನ್ನೂ ಪ್ರಭಾವವನ್ನು ಹೇಗೆ ಬೆಳೆಸಬಹುದು ಎಂಬುದನ್ನು ತೋರಿಸಿಕೊಟ್ಟವರಲ್ಲಿ ಡಿ.ವಿ.ಗುಂಡಪ್ಪನವರು ಮೊದಲಿಗರು ಎಂದರೆ ಉತ್ಪ್ರೇಕ್ಷೆಯಲ್ಲ" ಎಂದು ಪರಿಷತ್ತಿನ ಇತಿಹಾಸಕಾರ ಮಾ.ನಾ.ಚೌಡಪ್ಪನವರ ನುಡಿದಿದ್ದಾರೆ.<br />
<br />
ಗೋಖಲೆಯವರ ಬಗ್ಗೆ ಡಿ.ವಿ.ಜಿಯವರಿಗೆ ಅಪಾರ ಗೌರವ,ಶ್ರದ್ಧೆ,ಭಕ್ತಿ.ಗೋಖಲೆಯವರ ನಿಧನದ ನಂತರ ತಾವು ಹಾಗು ತಮ್ಮ ಗೆಳೆಯ ಬಳಗದವರೊಂದಿಗೆ ಶುರು ಮಾಡಲು ಯೋಜಿಸಿದ್ದ ಸಾರ್ವಜನಿಕ ಸಂಸ್ಥೆಯನ್ನು ಗೋಖಲೆ ಸಂಸ್ಥೆ ಎಂದು ನಾಮಕರಣ ಮಾಡಿದರು. ಅಧಿಕೃತ್ವವಾಗಿ ಗೋಖಲೆ ಸಂಸ್ಥೆ ಎಂಬುದು ಪ್ರಚಾರವಾಗಿಲ್ಲದ್ದಿದ್ದರೂ ಕೆಲಸ ಕಾರ್ಯಗಳು ನಡೆಯುತ್ತಲೆ ಇದ್ದವು.ಹಲವಾರು ಅಡೆ ತಡೆಗಳ ನಂತರ ೧೯೪೫ ಫೆಬ್ರವರಿ ೧೮ರಂದು ಸಾರ್ವಜನಿಕವಾಗಿ ಉದ್ಘಾಟಿಸಲಾದ ಸಮಯದಲ್ಲಿ "೧.ಮೈಸೂರು. ಕರ್ನಾಟಕ, ಭಾರತ ಹಾಗು ವಿಶ್ವದ ಹಿತಕ್ಕೆ ಸಂಬಂಧಿಸದಿ ಎಲ್ಲ ವಿಷಯಗಳ ವ್ಯವಸ್ಥಿತವಾದ ಅಧ್ಯಯನ. ೨. ನಾಡಿನ ರಾಜಕೀಯ, ಸಾಮಾಜಿಕೆ ಸಂಸ್ಥೆಗಳಿದು ಅತ್ಯುತ್ತಮ ಫಲ ದೊರಕುವಂತೆ, ಪ್ರಜಾಪ್ರಭುತ್ವವಾದಿ ಪೌರತ್ವ ಸ್ವತಂತ್ರವಾಗಿ, ಜ್ಞಾನಪೂರ್ಣವಾಗಿ, ಪ್ರಜ್ಞಾಪೂರ್ಣಾವಾಗಿ ನಿರ್ಹವಾಗೌವರರಲ್ಲಿ ನೆರವಾಗುವುದು - ತನ್ಮೂಲಕ ಭಾರತ ಸ್ವಾತಂತ್ರ್ಯದೆಡೆಗೆ ಮತ್ತು ಪ್ರಜಾಪ್ರಬುತ್ವವಾದೀ ಜವಾಬ್ದಾರಿ ಅಡಳಿತದೆಡೆಗೆ ಮುನ್ನಡೆಯಲು ಶ್ರಮಿಸುವುದು"-ಇದು ಸಂಸ್ಥೆಯ ಗುರಿ ಎಂದು ಆ ದಿನ ಘೋಷಿಸಲಾಯಿತು.ಆದರೆ ಸಕ್ರಮಾವಾಗಿ ಶುರುವಾದದ್ದು ೧೯೪೬ ಜೂನ್ನಲ್ಲಿ. "ಸಾರ್ವಜನಿಕ ವಿಷಯಗಳ ನಗ್ಗೆ ನಾಡಿನಲ್ಲಿ ವಿಚಾರಪ್ರಕ್ರಿಯೆಯನ್ನು ಉತ್ತೇಜಿಸುವುದು, ಪರೀಕ್ಷಿಸುವುದು ಹಾಗು ಪರಿಶುದ್ಧಗೊಳಿಸುವುದು- ಇದೆ ಈ ಸಂಸ್ಥೆಯ ಸೇವೆ" ಎಂದು ೧೯೩೦ ರಲ್ಲೆ ಕಲ್ಪಿಸಿಕೊಂಡಿದ್ದರು.<br />
<br />
ಗೋಖಲೆ ಸಂಸ್ಥೆ ಕೇವಲ ಒಂದು ವಿಚಾರವನ್ನು ಗುರಿಯಾಗಿಸಿ ಹುಟ್ಟಿದ ಸಾಮಾನ್ಯ ಸಂಸ್ಥೆಯಾಗಲಿಲ್ಲ, ಡಿ.ವಿ.ಜಿ ಯವರು ತಮ್ಮ ಸಮಯ,ಜ್ಞಾನವನ್ನು ಸಮಾಜದ ಏಳಿಗೆಗಾಗಿ ಕೊನೆಯವರೆಗು ದುಡಿದ ಸಂಸ್ಥೆ.ದೇಶ ವಿದೇಶಗಳ ವಿದ್ವಾಂಸರು, ಕಲಾವಿದರು, ಮುಖಂಡರು ಇದರ ನೆರಳಿಳಿನಲ್ಲಿ ಅನೇಕ ಜನ ಪರ ಕಾರ್ಯಗಳನ್ನು ನಡೆಸಿದ್ದಾರೆ.ಈ ಸಂಸ್ಥೆಯು ಸಮಾಜದ ಅನೇಕ ಸಮಸ್ಯೆಗಳ ಅಧ್ಯಯನ ಮಾಡಿ, ಪೌರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರಕ್ಕೆ ಪ್ರಯತ್ನ ಮಾಡಿದೆ. ತರುಣರಿಗೆ ರಾಮಾಯಣ, ಭಾರತ, ಗೀತೆ, ರಾಜ್ಯ ಶಾಸ್ತ್ರ, ಅರ್ಥ ಶಾಸ್ತ್ರ, ಕಾಳಿದಾಸ ಇತ್ಯಾದಿ ಮಹ ಗ್ರಂಥಗಳನ್ನು ಪರಿಚಯಿಸಿದೆ.ಸಂಸ್ಕೃತ ತರಗತಿಗಳು ಹಾಗು ಗಮಕ ತರಗತಿಗಳು ಜನಪ್ರಿಯ.ರಾಷ್ತ್ರೀಯ ಅಂತರ್ ರಾಷ್ಟ್ರೀಯ ವಿದ್ಯಮನಗಳ ಬಗ್ಗೆ ಸಂಕೀರ್ಣಗಳು ನಡೆದಿವೆ. ಆರ್ಥಿಕ ವಿಷಯ,ವಿಜ್ಞಾನದ ವಿಷಯ,ರಾಜಕೀಯ,ಶಿಕ್ಷಣ ಹೀಗ್ ಹತ್ತು ಹಲವುದರ ವಿಷಯ ಅಧ್ಯಯನಕ್ಕಾಗಿಯೆ ಪ್ರತ್ಯೇಕ ಸಮಿತಿಗಳು ರಚನೆಯಾಗಿ ವಿಮರ್ಶೆ ನಡೆದಿವೆ. ಅಲ್ಲಿನ ಪುಸ್ತಕ ಬಂಢಾರ ಸಂಶೋಧಕರಿಗೆ ಸುಗ್ಗಿ, ಅಧ್ಯಯನಗಳಿಗೆ ಆಕರ.<br />
<br />
ಆಗಿನ ಕಾಲದ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಹೇಳಿದ್ದಾರೆ,"ಡಿವಿಜಿ ಎಂದರೆ ಗೋಖಲೆ ಸಂಸ್ಥೆ... ಗೋಖಲೆ ಸಂಸ್ಥೆ ಎಂದರೆ ಡಿವಿಜಿ". "ಶ್ರೀ ಮದ್ಭಗವದ್ಗೀತಾ ತಾತ್ಪರ್ಯ" ಅಥವಾ "ಜೀವನ ಧರ್ಮ ಯೋಗ"ಡಿವಿಜಿಯವರ ಮಹಾ ಕೃತಿ ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಮನ್ನಣೆ ಪಡೆಯಿತು . ೧೯೭೪ರಲ್ಲಿ ಕೇಂದ್ರ ಸರ್ಕಾರ ಅವರಿಗೆ ಪದ್ಮಭೂಷಣ ಬಿರುದನ್ನ್ನು ಅರ್ಪಿಸಿತು. ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿಯನ್ನು ಸಮರ್ಪಿಸಿತು.ಇಷ್ಟನ್ನು ಮಾತ್ರ ತಿರಸ್ಕಾರ ಮಾಡಲಿಕ್ಕಾಗದೆ ಸ್ವೀಕರಿಸಲೇಬೇಕಾದ ಪ್ರಶಸ್ತಿಯ ಪಟ್ಟಿ. ತಿರಸ್ಕರಿಸಿದ ಪ್ರಶಸ್ತಿ, ಮನ್ನಣೆಗಳನ್ನು ಪಟ್ಟಿ ಮಾಡಿದರೆ ಅದು ತುಂಬಾನೆ ದೊಡ್ಡದಾಗುವುದರಲ್ಲಿ ಸಂಶಯ ಬೇಡ.<br />
<br />
ಉನ್ನತ ಚಿಂತನೆ, ಸರಳ ಜೀವನ - ಇದಕ್ಕೆ ಡಿ.ವಿ.ಜಿ ಉದಾಹರಣೆ, ಅವರ ಜೀವನ ಶೈಲಿ "ಹೊರಗೆ ಲೋಕಾಸಕ್ತಿ, ಒಳಗದರ ವಿರಕ್ತಿ "<br />
<br />
ಇಳಿಯುವನು ಮುಳುಗುವೆನು ವಿಶ್ವಾತ್ಮ ಸಾಗರದಿ|<br />
ಮುಳುಮುಳುಗಿ ಕಳೆಯುವೆನು ಬೇರೆತನದರಿವ||<br />
ಇಳಬಾನ್ಗಳಾಟದಲಿ ಕುಣಿಯುವೆನು ಮೈಮರೆತು|<br />
ಗಳಸೀನಮನ:ಸ್ಥಿತಿಯ - ಮಂಕುತಿಮ್ಮ||<br />
<br />
ಡಿ.ವಿ.ಜಿಯವರು ಕನ್ನಡ ಬರಹವನ್ನು ಆರಂಭಿಸಿದ್ದು ಜೀವನ ಚರಿತ್ರೆ-ವ್ಯಕ್ತಿ ಚಿತ್ರಗಳಿಂದ, ೧೯೧೧ರಲ್ಲಿ ಹೊರ ಬಂದ ’ದೀವಾನ್ ರಂಗಚಾರ್ಲು’ ಇವರ ಮೊದಲ ಕೃತಿ, ನಂತರದ ದಿನಗಳಲ್ಲಿ ಇವರು ರಾಜರಾಮ್ ಮೋಹನ್ ರಾಯ್,ದಾದ ಭಾಯಿ ನವರೋಜಿ, ಗೋಪಾಲ ಕೃಷ್ಣ ಗೋಖಲೆ, ಶ್ರೀ ವಿದ್ಯಾರಣ್ಯ ಸ್ವಾಮಿ ಇವರುಗಳ ಜೀವನ ಚರಿತ್ರೆಗಳನ್ನು ಬರೆದರು ನಂತರ ಆಂಗ್ಲ ಕೃತಿಗಳ ಅನುವಾದಗಳನ್ನು ಸಹ ಮಾಡಿದರು. ಷೇಕ್ಸ್ಪೀಯರ್, ಕೀಟ್ಸ್,ಟೆನ್ನಿಸನ್, ಬ್ರೌನಿಂಗ್ ಅವರ ಕೃತಿಗಳಿಂದಲೂ ಸಹ ಉತ್ತೇಜಿತರಾಗಿ ಕನ್ನಡಿಗರು ಸಹ ಅದನ್ನು ಆಸ್ವಾದಿಸಲೆಂದು ಕನ್ನಡ ಭಾಷೆ, ಇಲ್ಲಿನ ಪರಿಸರಕ್ಕೆ ಹೊಂದುವಂತೆ ಅನುವಾದ ಮಾಡುತ್ತಿದ್ದರು ಆದರು ಸಹ ಅವರೆ ಹೇಳುವಂತೆ ’ನವುರಾದ ಮಾತುಗಳು ನವುರಾದ ಭಾವಗಳು....ತರ್ಜುಮೆಗೆ ಸಿಲುಕುವುದೆ ಬೇರೆ ಭಾಷೆಯಲಿ?’ ಎನ್ನುವುದು ಸಹ ಡಿ.ವಿ.ಜಿಯವರು ಅರಿತಿದ್ದರೂ ಮೂಲ ಕೃತಿಗೆ ಆದಷ್ಟು ನ್ಯಾಯ ಒದಗಿಸುವುದಕ್ಕೆ ಪ್ರಯತ್ನ ಪಡುತ್ತಿದ್ದರು. ಕುರುಡುಗಣ್ಣಿಗಿಂತಲು ಮೆಳ್ಳಗಣ್ಣು ಮೇಲಲ್ಲವೆ :).ವನಸುಮ ಕವನದಲ್ಲಿ ಡಿ.ವಿ.ಜಿಯವರ ಜೀವನ ದರ್ಶವೆ ಅಡಗಿದೆ, ನಿವೇದನೆ - ಸೃಷ್ಟಿ ಕರ್ತನಿಗೆ ತಲೆಬಾಗುವ ಕೃತಜ್ಞ್ನತಾ ಭಾವ ವ್ಯಕ್ತಪಡಿಸುತ್ತದೆ. ಅಂತ:ಪುರ ಗೀತೆ, ಕೇತಕಿವನ, ಉಮರನ ಒಸಗೆ, ಈಶೋಪನಿಷತ್ತು,ಬೇಲೂರಿನ ಶಿಲಾಬಾಲಿಕೆಯರು, "ಶ್ರೀ ರಾಮ ಪರೀಕ್ಷಣಂ",<br />
<br />
ಏನು ಜೀವನದರ್ಥ, ಏನು ಪ್ರಪಂಚಾರ್ಥ?<br />
ಏನು ಜೀವಿ ಪ್ರಪಂಚಗಳ ಸಂಬಂಧ?<br />
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?<br />
ಜ್ಞಾನ ಪ್ರಮಾಣವೇಂ?<br />
ಒಗಟೆಯೇನೀ ಸೃಷ್ಟಿ?<br />
<br />
ಎಂದು ಮಂಕುತಿಮ್ಮ ಕಗ್ಗ ಆರಂಭ ಸೃಷ್ಟಿಯ ಬಗ್ಗೆ ಬೆರಗು,ತಿಳಿಯುವ ಕೌತುಕ, ಮೂಡುವ ಪ್ರಶ್ನೆಗಳಿಂದಲೆ ಶುರುವಾಗುತ್ತವೆ. ಇದೆ ಹಾದಿಯಲ್ಲಿ ಮರುಳ ಮುನಿಯ ಕೂಡ ಪರಿಚಯಿಸಿದರು.<br />
<br />
ಮರುಳ ಮುನಿಯನ ಮನಸ್ಸು ಸರಳ ಬಾಳ್ವೆಯ ಕನಸು<br />
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು|<br />
ಕೆರೆಯಿನೆದ್ದಲೆಯೆರಚಿ ತಣಿವು ತುಂತುರನಿಸಿತು<br />
ಮರಳಿ ತೆರೆ ಸೇರ್ವುದಲ - ಮರುಳ ಮುನಿಯ.<br />
<br />
ಎನ್ನುವುದು ಕಗ್ಗದ ಧಾಟಿಯಲಿದ್ದರು ಕಗ್ಗದಷ್ಟು ಖ್ಯಾತಿಯಾಗಲಿಲ್ಲ. ಕಗ್ಗದಲ್ಲಿ ಕೌತುಕ,ಪ್ರಶ್ನೆ, ಸೋಜಿಗ.. ಇಂತಹ ಉದ್ವೇಗಕ್ಕೆ ಸಂಬಂಧಿಸಿದ ವಿಷಯಗಳನ್ನು ತೆರೆದಿಡುವ ಕೃತಿ, ಮರುಳ ಮುನಿಯನಲ್ಲಿ ನಿರಾಳ ಹೆಚ್ಚು, ಜೀವನವನ್ನು ತಿಳಿದ ಪಕ್ವತೆಯ ವಿಚಾರಗಳು, ಮಕ್ಕಳಿಗೆ ಸಮಾಧಾನ ಹೇಳುವಂತಹ ಧಾಟಿ. "ಜೀವನ ಸೌಂದರ್ಯ ಮತ್ತು ಸಾಹಿತ್ಯ" ಆರು ಪ್ರಕರಣಗಳ ಸಂಗ್ರಹ. ಹಕ್ಕಿಯ ಪಯಣ - ಪ್ರಬಂಧ, ಮುಂತಾದ ಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿ ಓದುಗರಿಗೆ ಅಭ್ಯಾಸಯೋಗ್ಯ ಕೃತಿಗಳು ದೊರೆತವು.<br />
<br />
ತಮ್ಮ ಜೀವಿತಾವಧಿಯ ೮೭ ವರ್ಷಗಳಲ್ಲಿ ಸುಮಾರು ೭೦ ವರ್ಷ ಸಮಾಜಕ್ಕಾಗಿಯೆ ಜೀವ ಸವೆಸಿದ ಆದರ್ಶ.ಕೊನೆಯ ಉಸಿರಿರುವರೆಗು ಸಾಹಿತ್ಯ ಲೋಕವನ್ನು ಪೋಷಿಸಿದ ಚೇತನ ಡಿ.ವಿ.ಜಿ. ತಮ್ಮ ೩೬-೩೭ ವಯಸ್ಸಿಗೆ ಪತ್ನಿಯನ್ನು ಕಳೆದುಕೊಂಡರು ಸಹ ಎರಡನೆ ಮದುವೆಯಾಗದೆ, ಒತ್ತಾಯ ಮಾಡುವವರಿಗೆ ವಿಧವೆಯಾಗಿದ್ದ ತನ್ನ ತಂಗಿಯ ಮದುವೆ ಮಾಡಿಸಿದರೆ ತಾನು ಸಹ ಮದುವೆಗೆ ಸಿದ್ಧ ಎಂಬ ಮರುತ್ತರ ನೀಡುತ್ತಿದ್ದರೆ.ಈ ನೀತಿ ಅವರ ವಿಧವಾ ವಿವಾಹ ನಡೆಸುವ ಸಮಾಜಿಕ ಕಳಿಕಳಿಯನ್ನು ಬಿಂಬಿಸುತ್ತದೆ.ಒಮ್ಮೆ ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಒಂದು ಸನ್ನಿವೇಶದಲ್ಲಿ ಅವರನ್ನು ಭೇಟಿ ಮಾಡಲು ಬಂದ ಜಿ.ಪಿ.ರಾಜರತ್ನಂ ಅವರನ್ನು ಮಾತನಾಡಿಸಿ "ಈಗೇನು ಬರೆಯುತ್ತಿದ್ದೀರಿ?" ಎಂದು ಕೇಳಿದರು.ಜಿ.ಪಿ.ರಾಜರತ್ನಂ"ವೇದಾಂತ ದೇಶಿಕರ ವೈರಾಗ್ಯ ಪಂಚಕವನ್ನು ಅರ್ಥ ಸಹಿತ ಸಿದ್ಧಗೊಳಿಸುತ್ತಿದ್ದೇನೆ"ಎಂದರು. ಕೂಡಲೆ ಡಿವಿಜಿಯವರ ಕಣ್ಣು ಮುಚ್ಚಿ, ಹನಿಗೂಡಿ ಕೈಗಳೆರಡು ಎದೆಯ ಮೇಲೆ ಒಂದುಗೂಡಿದವು. ಮೆಲ್ಲನೆ ಮಾತು ಹೊರಟಿತು."ವೇದಾಂತ ದೇಶಿಕರು ಮಹಾನುಭಾವರು, ವಿದ್ಯಾರಣ್ಯರ ವಿಷಯ ಇನ್ನೂ ಏನೇನೋ ಮಾಡಬೇಕೆಂದಿದ್ದೆ, ದೇಶಿಕರನ್ನು ಇನ್ನೂ ಅಧ್ಯಯನ ಮಾಡಬೇಕಾಗಿದೆ, ಆದರೆ ಆಗುತ್ತಿಲ್ಲ" ಎಂದು ನುಡಿದರು. ಈ ಸನ್ನಿವೇಶ ಅವರ ನಿಸ್ಸ್ವಾರ್ಥ ಜೀವನ, ಅಭ್ಯಾಸ ಮಾಡುವ ಆಸೆ, ಸಮಾಜಕ್ಕಾಗಿ ಹೋರಾಡಿ, ಜೀವನವನ್ನೆ ಮುಡಿಪಾಗಿರಿಸಿ ಎಲ್ಲರಲು ಒಂದಾಗಿ ಬಾಳಿ, ಕಡೆಯದಾಗಿ ೦೭-೧೦-೧೯೭೫ರಂದು ಮುಂಜಾನೆ ೫-೫೦ರ ಸಮಯಕ್ಕೆ ದೇಹವನ್ನು ತ್ಯಜಿಸಿ ಅಮರರಾದರು. The King is dead, Long live the King, ಎನ್ನುವಂತೆ ಕೊನೆಯ ಕನ್ನಡಿಗನ ಉಸಿರಿರುವರೆಗು ಡಿ.ವಿ.ಜಿಯವರ ನೆನಪು ಹಸಿರಾಗೆ ಇರುತ್ತದೆ.<br />
<br />
ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆಯಾಗು<br />
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ<br />
ಬೆಲ್ಲ ಸಕ್ಕರೆಯಾಗು ದೀನದುರ್ಲಬಲರಿಂಗೆ<br />
ಎಲ್ಲರೊಳಗೊಂದಾಗು ಮಂಕುತಿಮ್ಮ<br />
<br />
ಎಂದು ಸಾರಿ ಅದೆ ರೀತಿಯಾಗಿ ಬಾಳಿ, ಬದುಕಿ, ಇತರಿಗೆ ಆದರ್ಶ ಪ್ರಾಯವಾದ ಚೇತನ ಡಿ.ವಿ.ಜಿ ಕನ್ನಡಿಗರ ಮನದಲ್ಲಿ ಎಂದಿಗೂ ಚಿರಾಯು....<br />
<br />
(ಮುಗಿಯಿತು)prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-70185017594184889302010-06-29T22:44:00.001-07:002010-06-29T22:44:42.029-07:00ಡಾ||ಡಿ.ವಿ.ಜಿ - life and times ಭಾಗ - ೧on March 17, 2009<br />
<br />
D.V.Gundappa<br />
<br />
ಇಂದು ಡಿವಿಜಿಯವರ ೧೨೨ನೇ ಜನುಮದಿನ, ಇದೆ ಸುಸಂದರ್ಭದಲ್ಲಿ ನೀಲತ್ತಹಳ್ಳಿ ಕಸ್ತೂರಿಯವರ ಪುಸ್ತಕ "ಡಾ||ಡಿ.ವಿ.ಗುಂಡಪ್ಪ ಜೀವನ ಹಾಗು ಸಾಧನೆ" ಎಂಬ ಜೀವನ ಚರಿತ್ರೆ ಆಧಾರಿತ ಪುಸ್ತಕವನ್ನು ಮೂಲವಾಗಿರಿಸಿ ನನ್ನ ಮಾತಿನಲ್ಲಿ ಆದಷ್ಟು ಸಂಕ್ಷಿಪ್ತವಾಗಿ ವಿಷಯವನ್ನು ಓದುಗರ ಮುಂದೆ ಇಡಲು ಪ್ರಯತ್ನಿಸಿದ್ದೇನೆ.. ಮೂಲ ಪುಸ್ತಕವನ್ನೆ ಓದಲು ಇಚ್ಚಿಸುವ ಆಸಕ್ತರು ನನಗೆ ತಿಳಿಸಿದಲ್ಲಿ ಕಡತವನ್ನು ಅಪ್ ಲೋಡ್ ಮಾಡಿರುವ ಕೊಂಡಿಯನ್ನು ಕೊಡುತ್ತೇನೆ..<br />
ಡಿವಿಜಿ ಅವರ ಬಗ್ಗೆ ಏನಾದರು ಹೇಳಬೇಕೆಂದರೆ ಕೈ ಆಡೊಲ್ಲಾ, ತಲೆ ಓಡೊಲ್ಲ ಯಾಕಂದ್ರೆ ಕೇವಲ "ಡಿವಿಜಿ"ಯೆಂಬ ೩ ಅಕ್ಷರದ ಹಿಂದೆ ದೊಡ್ಡ ಜ್ಞಾನ ಭಂಡಾರವೆ ಇದೆ. ಇಂತಹ ಸಂದರ್ಭದಲ್ಲಿ,ಎಷ್ಟು ಹೇಳಿದರೂ ಕಮ್ಮಿ ಎಂತಿರುವಾಗ ಹೇಳೊದು ಕಮ್ಮಿ ಆಗಿ ಹೇಳದೆ ಇರುವ ವಿಷಯಗಳೆ ಜಾಸ್ತಿ ಆಗಿರುತ್ತವೆ. ಆದರು ಸಹ ನನ್ನ ಗ್ರಹಣೆಯ ಪರಿಮಿತಿಗೆ ತಿಳಿದಿದ್ದನ್ನು ಇತರರೊಂದಿಗೆ ಹಂಚಿಕೊಳ್ಳಲು ಇಲ್ಲಿ ಪ್ರಯತ್ನ ಪಟ್ಟಿದ್ದೇನೆ.<br />
<br />
<br />
<br />
ಭಾಗ - ೧<br />
<br />
ಡಿವಿಜಿಯವರು ೧೭-ಮಾರ್ಚಿ-೧೮೮೭ರಲ್ಲಿ ದೇವನಹಳ್ಳಿಯಲ್ಲಿ ವೆಂಕಟರಮಣಯ್ಯ ಹಾಗು ಅಲಮೇಲಮ್ಮ ಎಂಬುವವರಿಗೆ ಜನಿಸಿದರು. ನೆಚ್ಚಿನ ಸೋದರಮಾವ ತಿಮ್ಮಪ್ಪ ಅಕ್ಕರೆಯ ಅಜ್ಜಿ(ತಾಯಿಯ ತಾಯಿ) ಸಾಕಮ್ಮ ಇವರ ಬಾಲ್ಯದ ದಿನಗಳಲ್ಲಿ ಗಾಢವಾದ ಪರಿಣಾಮ ಬೀರಿದವರು. ಡಿವಿಜಿಯವರ ಅವರ ಮಾವನೊಂದಿಗಿನ ಹಾಗು ಅಜ್ಜಿಯ ಒಡನಾಟಗಳ ಪ್ರಸಂಗದ ಅರಿವಿನಿಂದ ಡಿವಿಜಿಯವರು ಬಾಲ್ಯದಲ್ಲಿ ತಿಂಡಿಪೋತ,ಚೂಟಿ ಹಾಗು ತಮ್ಮ ಸುತ್ತ ಮುತ್ತ ನಡೆಯುತ್ತಿದ್ದ ವಿಷಯಗಳನ್ನು ಒಣಗಿರುವ ಸ್ಪಾಂಜ್ ನೀರು ಹೀರುವಂತೆ ಗ್ರಹಿಸುತ್ತಿದ್ದ ಹುಡುಗ ಎನ್ನಬಹುದು. ಅಜ್ಜಿ ಸಾಕಮ್ಮನ ಮುದ್ದಿನ ಮೊಮ್ಮಗನಾಗಿ ಬೆಳೆದ ಇವರಿಗೆ ಮನೆಯಲ್ಲಿ ಮಾವನೊಂದಿಗೆ ಪಾಠ ನಡೆಯುವ ಸಮಯದಲ್ಲೂ ಸಹ ಚಕ್ಕುಲಿ,ಕೊಡಬಳೆಯ ಸೇವೆನೆ ಆಗುತ್ತಿತ್ತು ಅದೂ ಸಹ ಕತ್ತಲಿನಲ್ಲಿ ಮಗ್ಗಿ ಒಪ್ಪಿಸುವಾಗ :). ಕತ್ತಲೆಯ ಕೋಣೆಯಲ್ಲಿ ಎದುರಿಗೆ ಕೂತು ಪ್ರಶ್ನೆ ಕೇಳುವ ಸೋದರಮಾವ,ಆ ಪ್ರಶ್ನೆಗಳಿಗೆ ಉತ್ತರವನ್ನು ಕಿವಿಯಲ್ಲಿ ಪಿಸುಗುಟ್ಟಿ ತಿನಿಸುಗಳನ್ನು ಬಾಯಿಗೆ ತುರುಕುವ ಅಜ್ಜಿ ಪಕ್ಕದಲ್ಲಿ, ಇದು ಅವರ ಮಗ್ಗಿ ಒಪ್ಪಿಸುವ ವೈಖರಿ. ಈ ಪಾಠ(ಆಟ) ಜಾಸ್ತಿ ದಿನ ನಡೆಯಲಿಲ್ಲವೆನ್ನುವುದು ಬೇರೆ ವಿಚಾರ :) <br />
<br />
ಬೆಳೆದ ಊರು ಮುಳುಬಾಗಿಲು (ಮೂಡಣದ+ಬಾಗಿಲು), ಊರು ಎನ್ನುವುದಕ್ಕಿಂತ ಹಳ್ಳಿ ಎನ್ನುವುದು ಹೆಚ್ಚು ಸೂಕ್ತ ಅನ್ಸುತ್ತೆ. ಇಂದಿನ ಮುಳುಬಾಗಿಲಿನ ಚಿತ್ರ ಬೇರೆ ಥರನದ್ದೆ ಇದೆ ಬಿಡಿ ಆದರೆ ಡಿವಿಜಿಯವರ ಕಾಲದ ಚಿತ್ರಣ ಊಹಿಸಿಕೊಂಡರೆ ಅದೊಂದು ದೊಡ್ಡ ಹಳ್ಳಿಯಾಗಿತ್ತು ಅಂತ ತಿಳಿಯಬಹುದು. ಇವರದ್ದು ಹತ್ತು ಹಳ್ಳಿಗೆ ಹೆಸರುವಾಸಿಯಾದ ಮನೆ (ಶೇಕ್ ದಾರ್ ಗುಂಡಪ್ಪಗಾರಿಲ್ಲು)/ಮನೆತನ (ಶೇಕ್ ದಾರ್ ಗುಂಡಪ್ಪ -ಇವರ ತಾತ), ಅವಿಭಕ್ತ ಕುಟುಂಬ ಕನಿಷ್ಟ ೨೫ ಮಂದಿ ಇದರ ಮೇಲೆ ಮನೆಗೆ ಹೋಗಿ ಬಂದು ಮಾಡುವವರು. ಒಟ್ನಲ್ಲಿ ಸಂತೆ ಮಧ್ಯೆ ಬೆಳೆದ ವಾತವರಣ ಹಾಗಾಗಿ ಸಂಬಂಧಗಳ ಗುಟ್ಟು ಅರಿವಾಗುವುದಕ್ಕೆ ಸಹಾಯವಾಯಿತೇನೊ ಮೇಲಾಗಿ ಹಳ್ಳಿಯ ವಾತವರಣ ನಿಸರ್ಗ ಮಧ್ಯೆ ಬೆಳೆದರು. ಮುಳುಬಾಗಿಲಿನ ದೂಡ್ಡ ಆಂಜನೇಯ, "ಶ್ರೀ ಮದಾಂಜನೇಯಸ್ವಾಮಿ"ಯೆ ಇವರಿಗೆ ಆದರ್ಶ, ಮಾನಸಿಕೆ ಬೆಳವಣಿಗೆಯ ಮೇಲೆ ಅತ್ಯಂತ ಪ್ರಭಾವ ಬೀರಿದ ದೈವ್ಯವೆನ್ನಲೂ ಬಹುದು ಕಾರಣ "ಬಾಳಿಗೊಂದು ನಂಬಿಕೆ"ಯೆನ್ನುವ ಇವರ ಗ್ರಂಥದಲ್ಲಿ ಆಂಜನೇಯಸ್ವಾಮಿಯನ್ನೆ ಒಬ್ಬ ವ್ಯಕ್ತಿಯ ಆದರ್ಶ ಬೆಳವಣಿಗೆಗೆ ಪೂರಕವೆನ್ನುವಂತೆ ಬಿಂಬಿಸಿದ್ದಾರೆ. ಹಳ್ಳಿಯ ವಾತಾವರಣವಾದ ಕಾರಣ ಹೆಚ್ಚು ಬದಲಾವಣೆಗಳಿಲ್ಲದೆ, ದೈನಂದಿಕ ಜೀವನ ನಡೆಯುವ ಪದ್ಧತಿಗಳು ಇವರ ಉತ್ಸುಕತೆಯನ್ನು ತಣಿಯದ ವಿಷಯಗಳು ಯಾವುದು ಬರಲಿಲ್ಲವೇನೊ, ಉದ್ರೇಕಿಸದ ವಿಚಾರಗಳೆ ಇವರಿಗೆ ಹೊಳೆಯಲ್ಲಿಲ್ಲವೇನೊ ಅಥವಾ ಮನೆಗೆ ಬಂದು ಹೋಗಿ ಮಾಡುತ್ತಿದ್ದ ಸನ್ಯಾಸಿಗಳ,ಫಕೀರರ, ಜೋಗಿಗಳ ಒಡನಾಟವೋ.. ಅಂತೂ ಮನಸ್ಸಿನ ಮೇಲೆ ಸನ್ಯಾಸವು ತನ್ನ ಛಾಪುಮೂಡಿತ್ತು. ನಂತರ ಬೆಂಗಳೂರಿನ ಜೀವನದಲ್ಲಿ ಅದರ ಹಿಂದೆ ಹೋಗಿ ಕಾರ್ಯ ನೆರವೇರದೆ ಆ ಯೋಚನೆಯನ್ನು ತಾತ್ಕಾಲಿಕವಾಗಿಯು ಸಹ ಕೈ ಬಿಡಲಾಯಿತು (ಇದು ಕೇವಲ ತಾತ್ಕಾಲಿಕ ಬೆಳವಣಿಗೆ ಆಯಿತಷ್ಟೆ ವಿನಹ ಸಂಪೂರ್ಣವಾಗಿ ನಶಿಸಲಿಲ್ಲ) ಬಹುಶ: ಅಂದು ಡಿವಿಜಿಯವರು ಸಫಲರಾಗಿದ್ದರೆ ನಮಗೆ ತಿಂಮನ ಪರಿಚಯವಾಗದೆ ನಮ್ಮನು ಅವಲೋಕಿಸಿಕೊಳ್ಳುವ, ನಿತ್ಯ ಜೀವನದ ಭಾವನೆಗಳಿಗೆ ಸ್ಪಂದಿಸಲು ಆಗದೆ, ಜೀವನದ ಸ್ವಾರಸ್ಯವನ್ನು ಕಗ್ಗದ ಮೂಲಕ ಅರಿಯುವ ಸುಸಂದರ್ಭವೆ ತಪ್ಪಿಹೋಗುತ್ತಿತೇನೊ.. ಇದಕ್ಕೆ ಕಾರಣ ಸಾಕ್ರೇಟಿಸ್ ಎಂಬ ಗ್ರೀಕ್ ಮತ್ತೊಬ್ಬ ಜ್ಞಾನಿಯ ಪುಸ್ತಕ "ಸಾಕ್ರೇಟಿಸ್ನ ವಿಚಾರಣೆ ಹಾಗು ಮರಣ", ಈ ಪುಸ್ತಕವನ್ನು ಓದಿ ಪ್ರಭಾವಿತರಾದ ಡಿವಿಜಿಯವರು ಜೀವನದತ್ತ ಮತ್ತೊಮ್ಮೆ ನೋಟ ಹಾಯಿಸಿದರು, ಈ ನೋಟ ಹೊಸ ಆಯಾಮವನ್ನೆ ತಿಳಿಯುವಂತೆ ಮಾಡಿತು ನಂತರದ ಮದುವೆ,ಸಂಸಾರ, ಲೋಕಾರೂಢಿ ಕರ್ಮಗಳ ಬಲೆಯೊಳಗೆ ಸಿಲುಕಿ ಆಗೊಮ್ಮೆ ಈಗೊಮ್ಮೆ ಎಂದು ಬಂದ ಸನ್ಯಾಸದ ಸೆಳೆತ ಗಮನ ಸೆಳೆಯುವುದರಲ್ಲಿ ವಿಫಲವಾಯಿತು. ಜೀವನದ ಬಂಧನಗಳು, ಬಾಂಧವ್ಯ, ಕೆಲಸ, ರಾಜಕೀಯ, ಪುನಸ್ಕಾರ, ಪ್ರಶಸ್ತಿ, ಭೇಟಿಗಳು,ಚಹಾ ಕೂಟಗಳು ಇತರೆ ನೂರಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ನಿಶ್ಚಲವಾದ, ನಿರುಮ್ಮಳವಾದ ಜೀವನಕ್ಕೆ ಹಾತೊರೆಯುತಿತ್ತುದು ಸಹಜವೆ ಅನ್ನಿಸುತ್ತದೆ ಹಾಗಾಗಿಯೆ ಈ ಭಾವನೆಗಳನ್ನು ಅವರು "ಹಕ್ಕಿಯ ಪಯಣ" ಎಂಬ ಪ್ರಬಂಧದಲ್ಲಿ ಬಿಂಬಿಸಿದ್ದಾರೆ. <br />
<br />
ಹೆಚ್ಚಿನ ವ್ಯಾಸಂಗ ಮಾಡದಿದ್ದರೂ ಸಹ ಉತ್ತೀರ್ಣರಾದ ಎರಡು ಪರೀಕ್ಷೆ ಕನ್ನಡ ಲೋವರ್ ಸೆಕೆಂಡರಿ ಹಾಗು ಆಂಗ್ಲ ಲೋವರ್ ಸೆಕೆಂಡರಿ. ಇಷ್ಟರ ವಿಧ್ಯಾಭ್ಯಾಸವೆ ಸಾಹಿತ್ಯದೆಡೆಗೆ ಮನಸ್ಸು ಮಾಡಲು ಸಾಕಷ್ಟಾಗಿತ್ತು, ಜೊತೆಗೆ ಹಿಡಿತವೂ ಬಂದಿತ್ತು. ತದನಂತರ ಹೆಚ್ಚು ಓದಬೇಕೆಂಬ ಹಂಬಲದಿಂದ ಮೈಸೂರು ಮಹಾರಾಜ ಕಾಲೇಜಿಗೆ ಸೇರಿದ್ದ ಪ್ರೌಢಶಾಲೆಯನ್ನು ಸೇರಿದರು. ಆದರೆ ದುರ್ದೈವದಿಂದ ಅಜ್ಜ ಅಜ್ಜಿಯ ಅವಸನ, ಊರಿನಲ್ಲಿ ಪ್ಲೇಗ್ ನ ಹಾವಳಿ, ಮಳೆಯಿಂದಾಗಿ ಮನೆಯ ಆಸ್ತಿ ಪಾಸ್ತಿಗೆ ಹನಿಯಾದ್ದರಿಂದ ತಮ್ಮ ಮೈಸೂರಿನ ನೆಲೆಯನ್ನು ಬಿಟ್ಟು ಊರಿಗೆ ಹಿಂತಿರುಗಿದರು. ಆದರೆ ಅವರ ಆ ಕಡಿಮೆ ಸಮಯದ ಮೈಸೂರಿನ ಕಾಲಾವಧಿ,ಅಲ್ಲಿನ ಉಪಧ್ಯಾಯರುಗಳು ಇವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿ ವ್ಯಕ್ತಿತ್ವಕ್ಕೆ ರೂಪು ಕೊಡುವುದಕ್ಕೆ ಸಾಕಾಗಿತ್ತು. ಊರಿಗೆ ಮರಳಿದ ನಂತರ ಕೋಲಾರದಲ್ಲಿ ಪ್ರೌಢಶಾಲೆಯ ವಿದ್ಯಾಭ್ಯಾಸ ಮುಂದುವರೆಸಿದರು ಆದರ ಕಾರಣಾಂತರಗಳಿಂದ ನಪಾಸಾದರು ಅದೂ ಕನ್ನಡ,ಗಣಿತ ಹಾಗು ವಿಜ್ಞಾನ. ಇದಕ್ಕೆ ಹಲವು ಕಾರಣಗಳಿತ್ತು ಮೈಸೂರಿನ ಓದುವ ಪರಿಸರಕ್ಕು, ಕೋಲಾರದ ಪರಿಸರದ ವ್ಯತ್ಯಾಸ, ಅನಾರೋಗ್ಯ, ಮನೆಯ ಕಡೆ ಚಿಂತೆ, ಹತ್ತು ಹಲವು. ಒಟ್ಟಿನಲ್ಲಿ ಡಿವಿಜಿಯವರು ಪರೀಕ್ಷೆಯಲ್ಲಿ ನಪಾಸಾದರು ಅನ್ನುವುದೊಂದೆ ಉಳಿಯಿತು ಆದ್ರೆ ಇದು ಅವರ ಜ್ಞಾನವನ್ನು ಅಳೆಯುವ ಸಾಧನವಾಗಿರಲಿಲ್ಲ ಅವರ ಪ್ರತಿಭೆ ಬೇರೆಯದರಲ್ಲೆ ಅಡಗಿತ್ತು. ಜೀವನವೆ ಅವರ ಗುರುವಾಗಿತ್ತು, ಎಲ್ಲಾ ಕಲಿಕೆಯು ಶಾಲೆಯ ಆವರಣವನ್ನು ದಾಟಿರುವ ವಿಚಾರಗಳೆ ಪ್ರಭಾವ ಬೀರಿದ್ದವು. ಗೆಳೆಯರು,ವಿದ್ವಾಂಸರು,ಪುಸ್ತಕ,ಪತ್ರಿಕೆ ಇವೆ ಮೊದಲಾದವುಗಳು ಇವರ ಜ್ಞಾನ ಬಂಢಾರ ಹಿರಿದಾಗಲು ಅನುವಾಯಿತು. ಇವರ ಗುರುವಾದ ಎನ್.ನಾರಾಯಣಮೂರ್ತಿಯವರು ಡಿವಿಜಿಯವರ ಬಾಳಿನ ಇತರ ಕೋನಗಳಲ್ಲಿ ಬೆಳಕು ಚೆಲ್ಲಿದವರು ಕೇವಲ ಸಾಹಿತ್ಯಕ್ಕಷ್ಟೆ ಸೀಮಿತವಾದ ಡಿವಿಜಿಯವರ ಆಪ್ತರ ವಲಯವನ್ನು ಹಿಗ್ಗಿಸಿ, ಸಾಮಾಜಿಕ ಕಾರ್ಯಗಳ ತಿಳುವಳಿಕೆ, ಜೀವನದಲ್ಲಿ ಅವಶ್ಯಕವಾಗಿರು ಇತರ ಚಟುವಟಿಕೆಗಳ ಪರಿಚಯವು ಸಹ ಎನ್.ನಾರಾಯಣಮೂರ್ತಿಯವರ ಶಿಷ್ಯತ್ವದಿಂದ ಪಡೆದರು.<br />
<br />
ಇಷ್ಟೆಲ್ಲ ಘಟಿಸಿದ್ರು, ಪಾಂಡಿತ್ಯ ಇದ್ರೂ ಸಹ ಜೀವನೋಪಾಯಕ್ಕೆ ಅಂತ ಒಂದು ಮಾರ್ಗ ಇರಲಿಲ್ಲ. ಅಪ್ಪನ ಆಸೆಗೆ ಸೊಪ್ಪು ಹಾಕದೆ, ಒಲ್ಲದ ಮನಸ್ಸಿನಿಂದ ಅವರು ಹೇಳಿದ ಹಾಗೆ ಮಾಡಿದರು ಕೆಲಸ ಗಿಟ್ಟಿಸಲು ಸಾಧ್ಯವಾಗಲಿಲ್ಲ ಕೊನೆಗೆ ತಮ್ಮ ಭಾಗ್ಯವನ್ನು ಓರೆಗೆ ಹಚ್ಚಲು ಬೆಂಗಳೂರಿಗೆ ಧಾವಿಸಿದರು. ಬರಿಗಾಲಿನಲ್ಲಿ ಕೆಲಸಕ್ಕಾಗಿ ಬಿಸಿಲಿನ ಝಳವನ್ನು ಲೆಕ್ಕಿಸದೆ ಪಾದ ಬೊಬ್ಬೆಯೊಡೆದರೂ ಸಹ ಕೆಲಸ ಗಿಟ್ಟಿಸೆ ತೀರಬೇಕೆಂಬ ಛಲದಿಂದ ಅಲೆದರು ಬೇರೆ ಮಾರ್ಗವು ಇರಲಿಲ್ಲ ಯಾಕೆಂದರೆ ಇಷ್ಟು ಹೊತ್ತಿಗಾಗಲೆ ಅವರಿಗೆ ಮದುವೆ ಸಹ ನಡೆದು ಹೊಗಿತ್ತು ಆಗಿನ ಕಾಲಮಾನಕ್ಕನುಗುಣವಾಗುವಂತೆ. ಅಲೆದು ಅಲೆದು ಕೊನೆಗೆ ಹೊಟ್ಟೆಗೆ ಎರಡೊಪ್ಪತ್ತಿನ ಊಟಕ್ಕಾದರು ಗತಿಯಾಗಲಿ ಅಂತ ಜಟಕಾ ಬಂಡಿಗೆ ಬಣ್ಣ ಬಳೆಯುವ ಒಂದು ಸಣ್ಣ ಅಂಗಡಿಯಲ್ಲಿ ೧೦-೧೨ ರೂಪಾಯಿಗೆ ಕೆಲಸ ಮಾಡಲು ಶುರು ಮಾಡಿದರು ಅಲ್ಲಿಯು ಸಹ ಅವರ ದೌರ್ಭಾಗ್ಯವು ಒಕ್ಕರಿಸಿತು, ಕಾರಣವಾಗಿ ಆ ಮಾಲೀಕ ಅಂಗಡಿಯನ್ನೆ ಮುಚ್ಚಿದ. ಡಿವಿಜಿಯವರಿಗೆ ಮತ್ತದೆ ಗತಿಯಾಯಿತು ಆದರೆ ಈ ಸರ್ತಿ ಭಾಗ್ಯವು ದೌರ್ಭಾಗ್ಯದ ರೂಪದಲ್ಲಿ ಬಂದು ಆ ಕೆಲಸ ಕಳೆದುಕೊಳ್ಳುವ ಹಾಗೆ ಮಾಡಿತ್ತು ಏಕೆಂದರೆ ಅದೆ ಬೀದಿಯಲ್ಲಿದ್ದ ಒಂದು ಪ್ರೆಸ್ಗೆ ಇವರು, ಬೆಂಗಳೂರಿಗೆ ಭೇಟಿ ಕೊಡುತ್ತಿದ್ದ ಸ್ವಾಮಿ ಅಭೇದಾನಂದರನ್ನು ಕುರಿತು ರಚಿಸಿದ ಒಂದು ಆಂಗ್ಲ ಪದ್ಯವನ್ನು ಅಚ್ಚು ಹಾಕಿಸಬೇಕಿತ್ತು (ಆಂಗ್ಲ ಪದ್ಯ ಯಾಕಂದರೆ ಸ್ವಾಮಿ ವಿವೇಕನಂದರು ಜಗತ್ತಿನ ಇತಿಹಾಸ ಪುಟದೊಳಗೆ ಸೇರಿಸಿರುವ ಅವರ ಐತಿಹಾಸಿಕ ಭಾಷಣ/ಪದ್ಯವೂ ಅಂಗ್ಲದಾಗಿತ್ತು, ಹಾಗಾಗಿ ಆಂಗ್ಲದಲ್ಲಿ ಪದ್ಯ ಬರೆಯುವುದು ಆ ನಿರ್ದಿಷ್ಟ ಸಮಯದಲ್ಲಿ ಒಂದು ಟ್ರೆಂಡ್ ಆಗಿತ್ತು ). ಅದನ್ನು ಅಚ್ಚು ಹಾಕಿಸಲೆಂದು ಅಲ್ಲಿ ಹೋದಾಗ ಪ್ರೆಸ್ನವರ ಪರಿಚಯವಾಯಿತು, ಇವರ ಪ್ರತಿಭೆ ಲೋಕವಿಖ್ಯಾತಿಯಾಗಲು ಆ ಪರಿಚಯ ಸಣ್ಣ ಆಶಾಕಿರಣದ ಬೆಳಕು ಬೀರಿತು. "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ" ಅನ್ನುವ ಹಾಗೆ "ಸೂರ್ಯೋದಯ ಪ್ರಕಾಶಿಕಾ" ಎಂಬ ಕನ್ನಡ ವಾರಪತ್ರಿಕೆಯಿಂದ ಶುರುವಾದ ಈ ಸಣ್ಣ ಕೆಲಸ ಅವರಿಗೆ ಪತ್ರಿಕೋದ್ಯಮದಲ್ಲಿ ಕೃಷಿ ಮಾಡಲು ಅನುವಾಯಿತು. ಬೆಂಗಳೂರಿನಲ್ಲಿ ಇನ್ನೂ ಸಂಸಾರ ಹೂಡಿರಲಿಲ್ಲವಾದ್ದರಿಂದ ಕತ್ತಲಾಗುವವರೆಗು ಅಲ್ಲೆ ಕೆಲಸ ಮಾಡುತ್ತಾ ಕೂರುತ್ತಿದ್ದರು. ಇದೆಲ್ಲಾ ಕಷ್ಟಕಾರ್ಪಣ್ಯಗಳನ್ನು ಸಹಿಸಿ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ ನಂತರ ಸರ್ಕಾರದಿಂದ ಕೆಲಸಗಳಿಗೆ ಆಹ್ವಾನ ಬಂದರೂ ಸಹಿತ ಅವೆಲ್ಲವನ್ನೂ ತಿರಸ್ಕರಿಸಿ ಲೇಖನಿಯಲ್ಲೆ ತೃಪ್ತಿಕಂಡರು,ತಮ್ಮ ಜೀವನ ಸವೆಸಿದರು.<br />
<br />
ಪತ್ರಿಕೋದ್ಯಮದಲ್ಲಿ ಉದ್ಯೋಗ ಗಿಟ್ಟಿಸಿಯು ಆಯಿತು ಕನ್ನಡ ಆಂಗ್ಲ ಎನ್ನದೆ ಎರಡೂ ಭಾಷೆಗಳಲ್ಲಿಯು ಪಾಂಡಿತ್ಯವಿತ್ತಾದರಿಂದ ಎರಡರಲ್ಲಿಯೂ ಬರೆಯತೊಡಗಿದರು. ೧೯೧೦ ಆಸು ಪಾಸಿನಲ್ಲಿ ಅವರು ಕೆಲಸ ಮಾಡುತ್ತಿದ್ದ ಪತ್ರಿಕೆಯು ಮುಚ್ಚಬೇಕಾಗಿ ಬಂತು, ಇದೆ ಸಮಯದಲ್ಲಿ ದಿವಾನ್ ವಿ.ಪಿ.ಮಾಧವರಾಯರು ಜಾರಿಗೆ ತಂದ ಪತ್ರಿಕಾ ನಿರ್ಬಂಧದ ಕಾನೂನು ವಿರುದ್ಧ/ಪರ ಬಂದಿದ್ದೆ ಟೀಕೆ/ಟಿಪ್ಪಣಿಗಳನ್ನು ಕಲೆ ಹಾಕಿ ಪುಸ್ತಕ ಮಾಡುವ ವಿಚಾರ ಇವರಿಗೆ ಬಂತು. ಈ ಕಾರ್ಯದಲ್ಲಿ ಡಿವಿಜಿಯವರ ಕೆಲಸಕ್ಕೆ ಒದಗಿ ಬಂದವರು ಶ್ರೀನಿವಾಸ ಅಯ್ಯಂಗಾರರು, ಅದಕ್ಕಾಗಿ ಅವರೊಂದಿಗೆ ಮದರಾಸಿಗೂ ಹೊರಡಬೇಕಾಯಿತು. ಮದರಾಸಿನ ವಾಸ್ತವ್ಯ, ಜನರ ಒಡನಾಟ, ಜನರ ರಾಷ್ಟ್ರೀಯತೆಯ ಭಾವ ಡಿವಿಜಿಯವರನ್ನು ಅಲ್ಲೆ ನೆಲೆಹೂಡಲು ಯೊಚನೆ ಮಾಡುವಂತಾಯಿತು!!!! ಕನ್ನಡಿಗರಲ್ಲಿ ಈ ಗುಣಗಳು ಅಂದಿನಿಂದಲೂ ಇರಲಿಲ್ಲವೇನೊ, ಇಲ್ಲಾಗಿದ್ದಿದ್ದರೆ ಕನ್ನಡ ಆಂಗ್ಲ ಎರಡೂ ಪತ್ರಿಕೆ, ಅಲ್ಲಿ ಇದ್ದಾಗ ಬೇರೇನ್ ಗತಿ?? ತಮಿಳು, ಆಂಗ್ಲ. ಆದ್ರೆ ಆಂಗ್ಲ ಎಷ್ಟು ಪ್ರಭಾವಶಾಲಿ!!! ಕೊನೆಗೆ ತಮಿಳೊಂದೆ ಗಟ್ಟಿ. ಡಿವಿಜಿಯವರೂ ಸಹ ತಮಿಳಿನ ವಾತವರಣಕ್ಕೆ ಒಗ್ಗಿಬಿಟ್ಟಿದ್ರು ಅನ್ಸುತ್ತೆ. ನಮ್ ನಾಡಿನ ಪುಣ್ಯ, ಕನ್ನಡದ ಪುಣ್ಯ ಹಾಗು ಕೆಲವು ಕನ್ನಡಿಗರ ಪುಣ್ಯ, ಸರ್ಕಾರದ ವಿರುದ್ದದ ಅಲ್ಲಿ ಮಾಡಿದ ಯಾವ್ದೊ ಭಾಷಣ ಊರಿನವರೆಗೂ ತಲುಪಿದ ಕಾರಣ ತಂದೆಗೆ ಯಾರೊ ಕಿವಿ ಚುಚ್ಚಿ, ಮಗನಿಗೆ ಮದರಾಸಿನಿಂದ ಗಂಟು ಮೂಟೆ ಕಟ್ಟಿಕೊಂಡು ಊರಿಗೆ ಹಿಂತಿರುಗುವಂತೆ ಆಜ್ಞೆ ಹೊರಟೆಬಿಟ್ಟಿತು(ಕಿವಿ ಚುಚ್ಚಿದ ಆ ಮಹಾತ್ಮನಿಗೆ ನನ್ನ ಹೃತ್ಪೂರ್ವಕ ವಂದನೆಗಳು).<br />
<br />
ಹಿಂತಿರುಗಿದ ನಂತರ, ರಾಜನೀತಿಜ್ಞರಾಗಿದ್ದ ದೀವನ್ ರಂಗಚಾರ್ಲು ಅವರ ಪ್ರಭಾವ ಡಿವಿಜಿಯವರ ಮೇಲೆ ತುಂಬಾ ಪರಿಣಾಮ ಬೀರಿದ ಕಾರಣ ಅವರ ಜೀವನ ಚರಿತ್ರೆಯನ್ನು ಬರೆದರು. ಈ ಕೆಲಸ ಡಿವಿಜಿಯವರನ್ನು ರಾಜಕೀಯ ನಾಯಕರ/ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಪರಿಚಯವಾಗುವುದಕ್ಕೆ ಮೆಟ್ಟಿಲಾಯಿತು.೧೯೧೨ರಲ್ಲಿ ಪತ್ರಿಕಾ ವಿರೋಧಿ ಆಡಳಿತವಿದ್ದರೂ ಸಹ ದೀವಾನ್ ಎಂ.ವಿಶ್ವೇಶ್ವರಯ್ಯನವರನ್ನು ಕಂಡು ಪತ್ರಿಕೆ ನಡೆಸುವುದಕ್ಕೆ ಅನುಮತಿ ಕೋರಿ ಹಾಗೆಯೆ "ಗುಣ ದೋಷ ವಿಮರ್ಷೆಯಿಂದ, ಗುಣವನ್ನು ತಿಳಿಸಿದರೆ ಸರ್ಕಾರಕ್ಕೆ ಜನದ ಬೆಂಬಲ ದೊರಕೀತು. ದೋಷವನ್ನು ತಿಳಿಸಿದರೆ ತಾವು ಅದನ್ನು ತಿದ್ದಿ ಸರಿಪಡಿಸುವಿರಿ" ಎಂಬ ನೇರ ನುಡಿಯಿಂದ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ತತ್ಪರಿಣಾಮವಾಗಿ "ಕರ್ನಾಟಕ"ಪತ್ರಿಕೆ ಶುರುವಾಗಿ ಮೊದಲ ಆಂಗ್ಲ ಆವೃತ್ತಿ ಹೊರಬಿತ್ತು. ಹಲವು ತಿಂಗಳ ನಂತರ ಕನ್ನಡ ಆವೃತ್ತಿ ಶುರುವಾಗಿ ಡಿವಿಜಿಯವರಿಗೆ ಎರಡನ್ನು ನಿಭಾಯಿಸಲು ಆಗದೆ ಕನ್ನಡ ಆವ್ರುತ್ತಿಯನ್ನು ಕೈಬಿಟ್ಟರು, ಕಡೆಗೂ ಕನ್ನಡ ಆವೃತ್ತಿಯ ಅವಸಾನವಾಯಿತು :( ಆಂಗ್ಲ ಎಂದಿನಂತೆ ಮೆರೆಯಿತು. ಆಳುತ್ತಿದ್ದ ಬ್ರಿಟೀಷರಿಗೂ ಸಂದೇಶ ತಲುಪಬೇಕೆಂಬ ಹಂಬಲವಿತ್ತೇನೊ ಆದ್ರೆ ಕನ್ನಡಿಗರಿಗೆ ಮಾತ್ರ ಡಿವಿಜಿಯವರ ಕನ್ನಡ ಲೇಖನದ ಉಣಿಸು ತಪ್ಪುವಂತಾಯಿತು. ತೀಕ್ಷ್ಣವಾಗಿರುತ್ತಿದ್ದ ಡಿವಿಜಿಯವರ ವಿಮರ್ಷೆಗಳು ಬ್ರಿಟೀಷರಿಗೆ ನುಂಗಲಾರದ ತುತ್ತಾಗಿತ್ತು :), ಇವರ ಬರವಣಿಗೆಯನ್ನು ಸ್ವತ: ಎಂ.ವಿಶ್ವೇಶ್ವರಯ್ಯನವರೆ ಹಲವು ಬಾರಿ ಪ್ರಶ್ನಿಸಿದ್ದು ಉಂಟು. ಡಿವಿಜಿಯವರ ಲೇಖನ/ಟೀಕೆ/ಟಿಪ್ಪಣಿಗಳು ತಪ್ಪುಮಾಡಿದವರ ವಿರುದ್ಧ ಹರಿಹಾಯುವ ಶೈಲಿ ಮೆಚ್ಚುವಂತದ್ದೆ ಆಗಿದ್ದರೂ ಸಹ ಕಾನೂನು ಕಟ್ಟಳೆಯನ್ನು ಕೆಲವೊಮ್ಮೆ ಮೀರುತ್ತಿದ್ದವು."ವಿಶ್ವೇಶ್ವರಯ್ಯನವರು ಹುಟ್ಟಿನಿಂದಲೆ ದೊಡ್ಡ ಮನುಷ್ಯರು, ಅನ್ಯಾಯ ಮಾಡುವುದೂ ಹಿಂಸೆ ಮಾಡುವುದೂ ಅವರ ಸ್ವಭಾವಕ್ಕೆ ತೀರ ವಿರೋಧವಾದುದು... ಅಂಥ ಮಹಾನುಭಾವರು ಸರ್ಕಾರ ನಡೆಸುತ್ತಿದ್ದ ಕಾಲದಲ್ಲಿ ಪತ್ರಿಕೆ ನಡೆಸುವುದು ಒಂದು ಸಂತೋಷದ ಕರ್ತವ್ಯವಾಗಿತ್ತು. ಅಂತಹವರ ಸಹಾನುಭೂತಿ ಪಡೆಯುವುದು ಒಂದು ಭಾಗ್ಯ" ಎಂದು ವಿಶ್ವೇಶ್ವರಯ್ಯನವರ ಗುಣಗಾನ ಕೂಡ ಮಾಡಿದ್ದಾರೆ.ಹೀಗೆ ಶುರುವಾದ ಸ್ವಂತಪತ್ರಿಕೆಯ ವ್ಯವಹಾರ ೧೯೨೫ರವರೆಗು ಅಂದರೆ ಗೋಖಲೆ ಸಾರ್ವಜನಿಕ ಸಂಸ್ಥೆ ಶುರುವಾಗುವವರೆಗು ಬರಿ ಏಳು ಬೀಳಿನ ಜೀವನವೆ ಆಗಿತ್ತು. ಎಡವಟ್ಟು ಆಗಿದ್ದು ಬರವಣಿಗೆಯ ಫಲವಾಗಿ ಅಲ್ಲ, ಲೇಖನಗಳ ಕೊರತೆಯಂತು ಅಲ್ವೆ ಅಲ್ಲ ಪತ್ರಿಕೆ ವ್ಯವಹಾರವಾಗಿ ಬೆಳೆಯದೆ ತಮ್ಮ ಸಾಹಿತ್ಯದ ಒಲುಮೆಯ ಕುಡಿಯಾಗಿ ಬೆಳೆಯಿತು,ಹಾಗಾಗಿ ಆರ್ಥಿಕ ಮುಗ್ಗಟ್ಟಿನಿಂದ ಹಲವಾರು ಬಾರಿ ಹೊಸದಾಗಿ ಶುರು ಮಾಡಿದ ಪತ್ರಿಕೆಗಳೆಲ್ಲವನ್ನೂ ಮುಚ್ಚಬೇಕಾಯಿತು.ಈ ಥರನದ ಪತ್ರಿಕೆಗಳಿಂದೆಲ್ಲಕಿಂತ ಭಿನ್ನವಾಗಿ ಗೋಖಲೆ ಸಂಸ್ಥೆಯ ಪತ್ರಿಕೆ ಶುರುವಾಯಿತು ಆದರೆ ಉದ್ದೇಶ ಮಾತ್ರ ಒಂದೆ ಆಗಿತ್ತು, "ಸಾರ್ವಜನಿಕ ಹಿತಾಸಕ್ತಿ" ಇದನ್ನೆ ಧ್ಯೇಯವಾಗಿಟ್ಟುಕೊಂಡು ಕೇವಲ ಗೋಖಲೆ ಸಂಸ್ಥೆಯ ಸದಸ್ಯರಿಗೆ ಮಾತ್ರ ಈ ಪತ್ರಿಕೆ ದೊರಕುವಂತಾಯಿತು,ಸ್ವಂತಿಕೆಯ ಲೇಖನಗಳಿಗೆ ಪ್ರಾಮುಖ್ಯತೆ ಕಮ್ಮಿ ಇತ್ತು ಇದನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ವಿಷಯದ ಚರ್ಚೆಯಾಗುತ್ತಿತ್ತು. ಗೋಖಲೆ ಸಂಸ್ಥೆಯ ಕಾರ್ಯಕ್ರಮಗಳು,ಚಿಂತನೆ, ರಾಷ್ಟ್ರೀಯ ಘಟನೆಗಳ ಬಗೆಗಿನ ವಿಚಾರ,ಟೀಕೆ,ಟಿಪ್ಪಣಿ ಮುಖ್ಯ ಅಂಶವಾಗಿತ್ತು. ಗೋಖಲೆ ಸಂಸ್ಥೆಯ ಕಾರ್ಯಾಚರಣೆ ಹೀಗಿದ್ದರೂ ಇತರೆ ಪತ್ರಿಕೆಗಳಿಗೆ ಬರೆಯುವುದನ್ನು ಬಿಡಲಿಲ್ಲ.ಘಟನೆಗಳು ಹೀಗೆ ಮುಂದುವರೆದು ತಮ್ಮ ಪತ್ರಿಕೋದ್ಯಮದ ೬೦ನೇಯ ವರ್ಷದ ನೆನಪಿನಾರ್ಥವಾಗಿ "ವೃತ್ತ ಪತ್ರಿಕೆ" ಎಂಬ ಕೈಹೊತ್ತಿಗೆಯನ್ನು ಪ್ರಕಟಿಸಿದರು.ಪತ್ರಿಕೋದ್ಯಮ ಬಗ್ಗೆ ಸಂಪೂರ್ಣ ಮಾಹಿತಿ ಅದರಲ್ಲಿತ್ತು, ಪತ್ರಿಕೋದ್ಯಮ ಏನು?ಯಾಕೆ?ಹೇಗೆ?ಹೇಗಿರಬೇಕು?ಹೇಗಿದ್ದರೆ ಹೇಗೆ ಅನ್ನೋದನ್ನು ಸಂಪೂರ್ಣವಾಗಿ ವಿಶ್ಲೇಷಿಸಿ ಸರಳ ಭಾಷೆಯಲ್ಲಿ ಬರೆದ ಪುಸ್ತಕ.ಇನ್ನ ಅದು ಸಿಕ್ಕಾಪಟ್ಟೆ ಜನಪ್ರಿಯ ಆಯ್ತು ಅಂತ ಒತ್ತು ಕೊಟ್ಟು ಹೇಳುವ ಅವಶ್ಯಕತೆ ಇಲ್ಲ ಅಂತ ಅಂದುಕೊಂಡಿದೀನಿ :). ಈ ೬೦ ವರ್ಷಗಳಲ್ಲಿಯೆ ಪತ್ರಿಕೋದ್ಯಮಕ್ಕೆ,ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ.<br />
<br />
ರಾಜಕೀಯದಲ್ಲೂ ಸಹ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು ಇದಕ್ಕೆ ಎಂ.ವಿಶ್ವೇಶ್ವರಯ್ಯ ಅವರ ಒತ್ತಾಯವು ಕೂಡ ಇದೆ. ಪತ್ರಿಕೋದ್ಯಮದಲ್ಲಿ ಇವರ ತೀಕ್ಷ್ಣ ಲೇಖನ ಹಾಗು ಟೀಕೆ ಟಿಪ್ಪಣಿಗಳಿಗೆ ತತ್ತರಿಸಿದ್ದರೂ ಸಹ ಅಧಿಕಾರಿಗಳು ಸರ್ಕಾರ ರಚನೆಯ ಸಮಯದಲ್ಲಿ ಇವರ ಸಹಭಾಗಿತ್ವವನ್ನು ಅಪೇಕ್ಷಿಸಿದ್ದರು."ಮಿತವಾದಿ"ಯಾದ ಡಿವಿಜಿಯವರು ಚಳುವಳಿಗಳಿಂದ ದೂರವೆ ಉಳಿದಿದ್ದರು ಆದರೆ ರಾಷ್ಟ್ರೀಯ ನಿರ್ಮಾಣದ ಹಂತದಲ್ಲಿ ಪ್ರತಿ ವಿಷಯದಲ್ಲೂ ಹಸ್ತಕ್ಷೇಪ ಮಾಡಿದ್ದರು.ಇಡಿ ರಾಷ್ಟ್ರವೆ ರಾಜ ಮಹರಾಜ ನವಾಬುಗಳ ಆಳ್ವಿಕೆಯಿಂದ ಒಡೆದಿದ್ದರ ಕಾರಣ ಏಕೀಕರಣಕ್ಕೆ ಇವರ ಮನವೊಲಿಕೆ ಅಗತ್ಯವಾಗಿತ್ತು.<br />
ಈ ವಿಚಾರದಲ್ಲಿ ಇವರು ದೇಶದ ನಾನಾ ರಾಜ ಮಹರಾಜಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ತಿಳುವಳಿಕೆಯನ್ನು ಸಹ ಮಾಡಿಕೊಟ್ಟಿದ್ದರು.ನಂತರ ಭಾಷೆಯ ಆಧಾರದ ಮೇಲೆ ರಾಜ್ಯ ರಚನೆ, ಹಿಂದಿ ಹೇರಿಕೆಯ ವಿಚಾರ (ಅಂದಿನ ಕಾಲದಿಂದಲೆ!!!), ಆಂಗ್ಲ ಭಾಷೆಯ ಪರ ನಿಲುವು ಹೀಗೆ ನಾನ ವಿಚಾರದಲ್ಲಿ ಚಿಂತನೆ ನಡೆಸಿ. ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಚರ್ಚೆ ಕೂಡ ಮಾಡಿದ್ದರು. ಒಟ್ಟಿನಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಚಾರ ತೆಗೆದುಕೊಂಡರು ಆ ವಿಚಾರಕ್ಕೆ ಸಂಬಂಧಿಸಿದಂತೆ ಇವರ ಆಳವಾದ ಚಿಂತನೆ, ಹಲವಾರು ಆಯಮಗಳಿಂದ ವಿಚಾರವನ್ನು ಅವಲೋಕಿಸುವ ದೃಷ್ಟಿ, ಏಕಪಕ್ಷೀಯವಾಗಿ ವಿಚಾರ ಮಾಡದ ನಿಲುವು, ವಿಷಯ ಜ್ಞಾನ.. ಹೀಗೆ ಹಲವಾರು ರೀತಿಯಿಂದಲು ಪರಿಸ್ಥಿತಿ ಅಳೆದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು, ಜನರಿಗೆ ತಲುಪುವ ಹಾಗೆ ಮಾಡುತ್ತಿದ್ದರು. ಇದಕ್ಕೆ ಸಹಾಯವಾಗಲೆಂದೆ ಅವರು ವಿಷಯ ಸಂಬಂಧಿತ ಪುಸ್ತಕ ಓದದೆ ಇರಲಿಲ್ಲ ಶೃತಿ,ಸ್ಮೃತಿ,ಚಾಣಕ್ಯ ನೀತಿ,ಪುರಾಣ,ದೇಶ ವಿದೇಶಗಳ ರಾಜ ನೀತಿ ಪುಸ್ತಕಗಳು.. ಹೀಗೆ. ಇದೆಲ್ಲದರ ಜ್ಞಾನದ ಸಾರವಾಗಿ ಸ್ವಾತಂತ್ರ್ಯ ದೊರಕುವ ಮುನ್ನವೆ ರೂಪಿತವಾದ ಮಹಾನ್ ಕೃತಿ "ರಾಜ್ಯಶಾಸ್ತ್ರ". "ರಾಷ್ಟ್ರ-ರಾಷ್ಟ್ರಕ ಸಂಬಂಧದ ಭಾವನೆಯೂ ರಾಷ್ಟ್ರಕ ಕರ್ತವ್ಯವೂ ಸರ್ವ ಸಮಾನಯ ಧರ್ಮದ ಒಂದು ಮುಖ್ಯಾಂಶವೆಂಬ ಭಾವನೆಯು ನಮ್ಮ ದೇಶಕ್ಕೆ ಹೊಸದೆಂದು ಕಾಣುತ್ತದೆ. ಇಂಥಾ ಭಾವನೆಯನ್ನು ಪ್ರಚಾರಪಡಿಸುವುದು ಈ ಗ್ರಂಥದ ಉದ್ದೇಶ" ಎಂದು ಡಿವಿಜಿಯವರೆ ಸ್ವತ:ಹೇಳಿಕೊಂಡಿದ್ದಾರೆ.<br />
<br />
ಮುಂದುವರೆಯುವುದು...............prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-23535570118914292382010-06-29T22:43:00.001-07:002010-06-29T22:43:34.955-07:00ಕನ್ನಡಿಗರ ಸಹಾಯಕ್ಕೆ ಕನ್ನಡಿಗರೆ ಆಗಬೇಕು ಯೆನ್ನಡಿಗರಲ್ಲ!!!on March 11, 2009<br />
<br />
ಪ್ರತಿ ಹೆಮ್ಮೆಯ ಕನ್ನಡಿಗನಿಗೂ ತನ್ನ ತಾಯ್ನಾಡಿಗೋಸ್ಕರ,ಕನ್ನಡಕೋಸ್ಕರ,ಕನ್ನಡಿಗನಿಗಾಗಿ ಕೈಲಾದ ಸೇವೆ ಮಾಡಬೇಕೆಂಬ ಹಂಬಲ ತುಡಿತ ಇದ್ದದ್ದೆ. ದಾರಿ ಕಾಣದೆ ಸುಮ್ಮನಾಗುವವರು ಹಲವರು, ಮಾಡೆತೀರಬೇಕೆಂಬ ಛಲಗಾರಿಕೆ ಮತ್ತಷ್ಟು ಜನರದ್ದು. ಈ ಛಲ ಉಳಿಸಿಕೊಂಡು ಸಮಾನ ಅಭಿರುಚಿಯಿರುವವರ ಜೊತೆಗೂಡಿ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲಸ ಮಾಡ್ತಾರೆ, ಶ್ರಮಿಸುತ್ತಾರೆ. ಕೆಲಸ ಫಲಕಾರಿಯಾಗುತ್ತೆ ಅನ್ನೊದು ಸಹ ನೂರಕ್ಕೆ ನೂರು ಪ್ರತಿಶತ: ಸತ್ಯ ಕೆಲವೊಂದು ಹಂತದಲ್ಲಿ ಕುಂಟಬಹುದು ಕೆಲವೊಮ್ಮೆ ಸ್ಠಗಿತವಾಗಲೂಬಹುದು ಆದ್ರೆ ಗುರಿ ಮುಟ್ಟುವುದು ಖಚಿತ. ಆದ್ರೆ ಇದೆಲ್ಲ ಕಾರ್ಯಾಚರಣೆಯ ಬಗ್ಗೆ, ಕನ್ನಡಿಗರಿಗೆ ಇರುವ ಛಲ, ತುಡಿತದ ಮಾತಾಯಿತು, ಕಾರ್ಯವ್ಯಾಪ್ತಿ ಬಗ್ಗೆ ಮಾಹಿತಿ ನೀಡುವುದಿಲ್ಲ. ಇವರ ಯೋಜನೆಗಳು, ಇವರು ವಹಿಸುವ ಶ್ರಮ ಸುತ್ತ ಮುತ್ತಲಿನವರ ಅಥ್ವಾ ಆಪ್ತ ವಲಯಕ್ಕೆ ಮಾತ್ರ ಸೀಮಿತವಿರುತ್ತದೆ. ಕನ್ನಡ ಪರ ಕೆಲಸ ಮಾಡುವ ಕನ್ನಡಿಗರು ತಮ್ಮ ವಿಚಾರಗಳನ್ನ, ಧೋರಣೆಗಳ ಬಗ್ಗೆ ಹಾಗು ಅವರು ಮಾಡುತ್ತಿರುವ ಕನ್ನಡ ಪರ ಚಟುವಟಿಕೆಗಳನ್ನ ಆದಷ್ಟು ಜನರಿಗೆ ಮುಟ್ಟುವಂತೆ ಮಾಡಬೇಕು..<br />
<br />
ವಿಚಾರ ಮುಟ್ಟಿಸಬೇಕು ಅಂತಂದ್ರೆ ಇರೊ ಮಾರ್ಗಗಳಾದ್ರು ಯಾವ್ದು? ಒಂದೊ ಮಿಂಚೆ,ಬ್ಲಾಗ್,ವೆಬ್ ತಾಣ,ಸಾಮಾಜಿಕ ಜಾಲತಾಣಗಳು, ದಿನಪತ್ರಿಕೆಯಲ್ಲಿ ಸುದ್ದಿ,ಆಕಾಶವಾಣಿ, ಟಿವಿ.. ನಿಸ್ವಾರ್ಥ ಸೇವೆಗೆ ನಿಂತಿರುವ ಕನ್ನಡಿಗರ ಜೇಬಿನ ಮೇಲೆ ಕೆಲವು ಮಾಧ್ಯಮ ರೀತಿಗಳು ಭಾರಿಯಾಗುತ್ತವೆ ಅಥವಾ ಇಂತಹ ಕಾರ್ಯಗಳಿಗೆ ದಾನಿಗಳು, ಸಹಾಯಕರು ಸಹ ಮುಂದೆ ಬರುತ್ತಾರೆಂಬುದು ಸಹ ನಿಜ ಆದ್ರೆ ಇವೆಲ್ಲಕಿಂತಲೂ ಪರಿಣಾಮಕಾರಿಯಾದುದು ಬಾಯ್ಮಾತಿನ ಪ್ರಕಟಣೆ.. (word of mouth advertising). ಇಂಥ ಒಂದು ಬಗೆಯ ಜಾಹಿರಾತು ಅನ್ಯ ಮಾರ್ಗಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಏಕೆಂದರೆ ಇವು ವಿಶ್ವಾಸದ ಮಾತುಗಳಗಿರುತ್ತವೆ ವಿನಹ ಯಾವುದೆ ರಾಜಕೀಯ ನಾಯಕರ ಆಶ್ವಾಸನೆಗಳಿಗೆ ಹೋಲಿಸಿಕೊಂಡಿರುವುದಿಲ್ಲ. ಆದರೆ ಈ ಬಗೆಯ ಪ್ರಕಟಣೆಗೆ ಅತೀ ಮುಖ್ಯವಾದುದು ಜಾಲಬಂಧ... ನಮ್ಮ ರಾಜ್ಯದಲ್ಲಿ ಐದು ಕೋಟಿ ಕನ್ನಡಿಗರಿದ್ದರೂ ನೂರಾರು ಸಂಘ ಸಂಸ್ಥೆಗಳಿದ್ದರೂ, ಈ ಸಂಘಗಳ ಅಂಗ ಸಂಸ್ಥೆಗಳಿದ್ದರೂ ಅವೆಲ್ಲ ಪ್ರತ್ಯೇಕ ತುಕಡಿಗಳಂತೆ ಕಾರ್ಯನಿರ್ವಹಿಸುತ್ತವೆ.. ಒಂದಕ್ಕೊಂದು ಹೊಂದಾಣಿಕೆಯಿಲ್ಲದೆ.. ನಮ್ಮ ಸುತ್ತಮುತ್ತಲಿನ ಜನರನ್ನೆ ನೋಡಿದರೆ, ಕನ್ನಡಕ್ಕೆ ಬೆಂಗಳೂರಿನಲ್ಲಿ ಚ್ಯುತಿ ಬಂದಿದ್ದರೂ ಸಹಿತ ಕೆಲವಷ್ಟು ignorant species ತಮಗು ಅದಕ್ಕೂ ಸಂಬಂಧವಿಲ್ಲವೆಂಬಂತೆ ನಿಶ್ಚಿಂತೆಯಿಂದ ನಿರ್ವಿಣ್ಣಮನ:ಸ್ಕರಾಗಿತ್ತಾರೆ.. ಇವರೂ ಸಹ ಕನ್ನಡಿಗರೆ, ಅವರಿಗೆ ತಾತ್ಸಾರ ಇದೆ ಎಂಬುದಾಗಲಿ ಅವರಿಗೆ ಬೇಡದ ವಿಚಾರವಿದ್ದರೂ ಸಹಿತ ಅವರನ್ನು ದೂಷಿಸುವಂತಿಲ್ಲ. ಬಡಿದಂತೂ ಯಾರಿಗು ಬುದ್ಧಿ ಹೇಳಲಿಕ್ಕಾಗುವುದಿಲ್ಲ ಮೇಲಾಗಿ ಯಾರಿಗೆ ಗೊತ್ತು ಯಾವಗ ಅವರಿಗೆ ಙ್ಞ್ನಾನೋದಯವಾಗುತ್ತೊ?ಈ ಮಣ್ಣಿನ ರಕ್ತ, ಙ್ಞ್ನಾನೋದಯವಾಗದಷ್ಟು ತಿಳಿಯಾದುದಲ್ಲವೆಂದು ನನ್ನ ಭಾವನೆ. ಸರಿಯಾದ ಸಮಯಕ್ಕೆ ಸರಿಯಾದ ಉಳಿಏಟು ಬೀಳಬೇಕಷ್ಟೆ ಕಲ್ಲು ಶಿಲೆಯಾಗುವುದಕ್ಕೆ. ಆ ಸಮಯಕ್ಕೆ ಅವರಿಗೆ "ಸರಿಯಾದ" ಒಳಹರಿವು ಆಗಲಿಲ್ಲವೆಂದರೆ ಕನ್ನಡಿಗರೆ ಇಷ್ಟು ಎನ್ನುವ ತಾತ್ಸಾರ ಭಾವ ಮೂಡಿದರು ಅಚ್ಚರಿಯಲ್ಲ ಹಾಗಾಗಿ, ಜಾಲಬಂಧದಲ್ಲಿರುವುದು, ಜಾಲಬಂಧವನ್ನು ಬೆಳೆಸುವುದು ಅತ್ಯಂತ ಮುಖ್ಯವಿಚಾರವಾಗಿ ತೋರುವುದು.<br />
<br />
ಉದಾಹರಣೆಗೆ SSS ಎನ್ನುವ ಬಳಗ ಡಿವಿಜಿ ಯವರ ನುಡಿಮುತ್ತುಗಳನ್ನು ಟಿ-ಷರ್ಟ್ ಮೇಲೆ ಅಚ್ಚಿಸಿ, ಅವನ್ನು ಐಟಿ ವರ್ಗದಲ್ಲಿ ಮಾರಿ, ಬಂದ ಹಣದಿಂದ ಗುಲ್ಬರ್ಗಾದಲ್ಲಿ ಎರಡು ಶಾಲೆಯನ್ನು ನಡೆಸುತ್ತಿದ್ದಾರೆ. ಸಂಗ್ರಹವಾಗುವ ದುಡ್ಡು ಬೆಂಗಳೂರಲ್ಲಿ, ಉಪಯುಕ್ತವಾಗುವುದು ಗುಲ್ಬರ್ಗಾದಲ್ಲಿ :-o. ಅಲ್ಲಾ, ಚಿಣ್ಣರ ಪ್ರಾಥಮಿಕ ಓದು ವಿದ್ಯೆಗೆ ಎಷ್ಟು ಮಹಾ ದುಡ್ಡಾಗುತ್ತೆ ಅಂದುಕೊಂಡಿದೀರಾ? ಅವಿರತ ಎಂಬುವ ಸಂಸ್ಥೆಯ ಪ್ರಕಾರ ೧ ಮಗುವಿಗೆ ೧ ವರ್ಷಕ್ಕೆ ತಗಲುವ ಖರ್ಚು ೧೦೦ರೂ/-, ೧೦೦ ರೂಪಾಯಿಯಲ್ಲಿ ಇಡೀ ವರ್ಷಕ್ಕೆ ಬೇಕಾಗುವ ೧೦ ಪುಸ್ತಕಕ್ಕೆ ೭೦/-, ಮಿಕ್ಕ ೩೦/- ಪೆನ್ಚಿಲ್, ಎರೇಸರ್ ಮಿಕ್ಕ ಸ್ಟೇಷನರಿ ವಸ್ತುಗಳಿಗೆ.. ಹಾಗಾಗಿ ನೀವು ೧೦೦ರೂ/- ಅವರಿಗೆ ದಾನ ಮಾಡಿದಲ್ಲಿ ಒಂದು ಮಗುವಿಗೆ ಒಂದು ಇಡೀ ವರ್ಷದ ಶಿಕ್ಷಣದ ಅಗತ್ಯಗಳನ್ನು ಪೂರೈಕೆ ಮಾಡಿದಂತೆ. ಒಂದು ಹೋಟೀಲ್ ಗೆ ಹೊಗಿ ಊಟ ಮಾಡುವ ವೆಚ್ಚದಲ್ಲಿ ೨ ಮಕ್ಕಳ ವೆಚ್ಚ ಭರಿಸಬಹುದು, ಇನ್ನ ಕುಡಿಯೋ ಪಾರ್ಟಿಗೆ ಹೋದ್ರೆ ಕೇಳಬೇಡಿ.. ಕುಡಿಯೊ ಪ್ರತಿ ೬೦ಎಮ್.ಎಲ್ ಒಂದು ವಿದ್ಯಾರ್ಥಿಯ ವೆಚ್ಚ ಭರಿಸಬಹುದು. ಕುಡಿಯೊದು ಬಿಡಿ ಅಂತಿಲ್ಲ, ತಿನ್ನೋದು ಬಿಡಿ ಅಂತಿಲ್ಲ, ಕನಿಷ್ಟ ಒಂದು ಸರ್ತಿಯಾದ್ರು ಆ ಮೋಜಿಗೆ ಹಣ ಸುರಿಯುವ ಬದಲು ನಮ್ಮ ನಾಡಿನ ಮಕ್ಕಳ ವಿದ್ಯಾಭ್ಯಾಸದಲ್ಲಿ ನೆರವಾಗಿ. ಈಗ ನೋಡಿ SSS ಬಳಗದವರು ಮಾಡುತ್ತಿರೋ ಕೆಲಸಕ್ಕೆ ಗುಲ್ಬರ್ಗಾ ಆಸು ಪಾಸು ಸ್ಥಳಗಳಿಂದ ಬೆಂಬಲವೇಕಿಲ್ಲ? ಅಲ್ಲಿ ಅವರ ಜಾಲಬಂಧವಿಲ್ಲ, ಇಲ್ಲಿ ಇವರುಗಳು ಕೆಲಸ ಮಾಡುತ್ತಾರೆ ಸಹುದ್ಯೋಗಿಗಳು ನೆರವಾಗುತ್ತಾರೆ.. ಇಷ್ಟೆ ಸಾಕ? ಇವಾರ ಈ ನಿಸ್ವಾರ್ಥ ಕ್ರಿಯೆಗೆ ಅಲಿನ ಸ್ಥೆಳೀಯರ ಬೆಂಬಲವಿದ್ದರೆ ಯೋಚಿಸಿ ಎಂತಹ momentum ಬಂದಿರೋದು ಈ ಕಾರ್ಯಕ್ಕೆ.. alas ಸದ್ಯದ ಪರಿಸ್ಥಿತಿ ಹಾಗಿಲ್ಲ :( .<br />
ಈಗ ಕನ್ನಡಿಗರಿಗೆ ಕೆಲಸಗಳು ದೊರಕ್ಕುತ್ತಿಲ್ಲ ಎಂಬ ಕೂಗು ಅನ್ಬೇಕೊ ಅಥವಾ ಹಾಹಾಕಾರ ಎನ್ನಬೇಕೆನೊ ಆ ಲೆವೆಲ್ ಗೆ ಬೊಬ್ಬೆ ಹೊಡೆಯೊ ಹಾಗೆ ಆಗಿದೆ? ಇಂತಹ ಪರಿಸ್ಥಿತಿ ಬರೋಕ್ಕೆ ಏನಪ್ಪ ಕಾರಣ , ಖಾಲಿ ಹುದ್ದೆಗಳ ವಿಚಾರ ಕನ್ನಡಿಗರಿಗೆ ಸಮಯದಲ್ಲಿ ತಲುಪದೆ ಇರುವುದು ಅಥವಾ ತಲುಪದೇನೆ ಇರುವುದು, ಎರಡನೆಯದೆ ಜಾಸ್ತಿ ಅನ್ಕೊಳ್ಳಿ.<br />
<br />
ನಮ್ಮ ರಾಜ್ಯದಲ್ಲಿ ಒಟ್ಟು ೧೪೦ ಎಂಜಿನೀರಿಂಗ್ ಕಾಲೇಜು, ೨೫ ಕಲಾ ಹಾಗು ವಿಙ್ಞ್ನಾನ ಕಾಲೇಜು, ೯೩ ಲಾ ಕಾಲೇಜು, ೧೫ ಕಟ್ಟಡ/ವಾಸ್ತುಕಲಾ ಕಾಲೇಜು, ೪೧ ಹೋಟಲ್ ನಿರ್ವಹಣಾ ಕಾಲೇಜು, ೪ ಫ್ಯಾಷನ್ ವಿನ್ಯಾಸ ಕಾಲೇಜು, ೪೩ ದಂತ ಕಾಲೇಜು, ೩೭ ವೈದ್ಯಕೀಯ ಕಾಲೇಜು, ೪೯ ಆಯುರ್ವೇದ ಕಾಲೇಜು, ೧೬೫ ಶೂಶೃಷ ಕಾಲೇಜು, ೩ ಉನಾನಿ ಕಾಲೇಜು, ೧೨ ಹೋಮೆಯೊಪಥಿ ಕಾಲೇಜು, ೧೧೧ ಫಾರ್ಮಸಿ ಕಾಲೇಜು, ೧೦ ಶಿಕ್ಷಣ ತರಬೇತಿ ಕಾಲೇಜು, ೧೬೯ ಪಾಲಿಟೆಕ್ನಿಕ್ ಕಾಲೇಜು, ೯೮ ಮೆನೇಜ್ಮೆಂಟ್ ಸಂಸ್ಥೆಗಳು, ೩೦ ದೈಹಿಕ ಚಿಕಿತ್ಸಾ(ಫಿಸಿಯೊ ಥೆರಪಿ) ಕಾಲೇಜು, ೪೩ ಎಮ್.ಸಿ.ಎ ಹಾಗು ಎಮ್.ಬಿ.ಎ ಕಾಲೇಜು, ೧೨ ಸಂಶೋಧನಾ ಕಾಲೇಜು, ೧೮ ಮಾಸ್ ಕಮ್ಮುನಿಕೇಷನ್ ಕಾಲೇಜು, ೫೯ ಜೈವಿಕತಂತ್ರಙ್ಞ್ನಾನ ಕಾಲೇಜು, ೨ ಕೃಷಿ ವಿಙ್ಞ್ನಾನ ಕಾಲೇಜು, ೨ ಪ್ರಾಣಿ ವಿಙ್ಞ್ನಾನ ಹಾಗು ಪಶು ಸಂಙ್ನೋಪನಾ ಕಾಲೇಜು, ೧ ಛಾಯಾಗ್ರಹಣ ಹಾಗು ಚಲನಚಿತ್ರ ಸಂಸ್ಥೆಗಳು, ೧೨ ಪ್ರವಾಸೊದ್ಯಮ ಸಂಸ್ಥೆಗಳು.<br />
<br />
ಇದೆಲ್ಲದರ ಮೇಲೆ, ಹತ್ತನೆ ತರಗತಿಗೆ ಶರಣು ಹೊಡೆದು ಕೆಲಸ ಮಾಡಲು ಧಾವಿಸುವವರು, ಓದಿನ ಪ್ರತಿ ಹಂತದಲ್ಲೂ ನಾ ಒಲ್ಲೆ ನಾ ಒಲ್ಲೆ ಎಂದು ಹೊರ ಜಿಗಿಯುವವರು ಬೇರೆ.. ಇವರಿಗೆಲ್ಲಾ ಎಲ್ಲಿಂದಪ್ಪಾ ಕೆಲ್ಸ ಸಿಗಬೇಕು. ನಮ್ಮ ಕಂಪನಿಗಳಲ್ಲೆ ಯಾರಾದ್ರು ಜವಾನ ಬೇಕು ಅಂದ್ರೆ ತಕ್ಷಣ ಒಬ್ಬ ತಮಿಳಿನವನೊ ಅಥವಾ ಮುಖ್ಯವಾಗಿ ಪರಭಾಷಿಕನೊ ಹಲ್ಲ್ಲುಗಿಂಜುತ ಹಾಜರಾಗುತ್ತಾನೆ, ತಾ ಸಿದ್ಧ, ಸಂಬಳ ೩೦೦೦/- ಆದರೂ ಪ್ರವಾಯಿಲ್ಲವೆಂದು. ಕೆಚ್ಚೆದೆಯ ಕನ್ನಡಿಗರಿಗೆ ಕೇಳಿ ಇದೆ ಹುದ್ದೆಯ ಬಗ್ಗೆ, ಹೆಚ್ಚಾಗಿ ಬರುವ ಪ್ರಶ್ನೆಗಳು, ಆಫೀಸ್ ಎಲ್ಲಿದೆ? ತುಂಬ ದೂರ ಆಯ್ತಲ್ವ? ಹೋಗಿ ಬರಲು ತುಂಬಾ ಕಷ್ಟ. ಸಂಬಳ ಇಷ್ಟೆನಾ? ಸರಿ ನೊಡೋಣ ಅನ್ನುವ ಆಸಾಮಿ ತಿರುಗಿ ಸಹ ನೋಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಯಾವುದೆ ಕನ್ನಡಿಗರು ಸಿದ್ಧವಿರುವುದಿಲ್ಲವೆಂದಲ್ಲ. ಅಂತಹಾ ಕನ್ನಡಿಗನನ್ನು ಸಂಪರ್ಕಿಸುವುದರಲ್ಲಿ ನಾವು ವಿಫಲರಾಗಿರುತ್ತೇವೆ ಎಂದಷ್ಟೆ ಅರ್ಥ, ಕಾರಣ ಯಾರಿಗ್ ಗೊತ್ತು ಯಾರು ಎಲ್ಲಿರ್ತಾರೆ? ಯಾರಿಗೆ ಎನು ಬೇಕು ಅಂತ. ಒಮ್ಮೆ ಯೋಚಿಸಿ ಹುಟ್ಟುವ ಪ್ರತಿ ಹುದ್ದೆಗೂ ೧೦೦ ಕನ್ನಡಿಗರು ತಯಾರಿದ್ದರೆ ನಮ್ಮವರಿಗೆ competitiveness ಇಲ್ಲ ಅಂತ ಹೇಳೊಕ್ಕೆ ಯಾರಿಗೆ ಧೈರ್ಯ ಬರುತ್ತೆ? ಈ ೧೦೦ ಕನ್ನಡಿಗರು ನಾನು ಮೇಲೆ ಪಟ್ಟಿ ಮಾಡಿದ ಕಾಲೇಜುಗಳಿಂದ ಉತ್ತೀರ್ಣರಾದವರೆ ಆಗಿರುತ್ತಾರೆ.<br />
<br />
ನಾ ಕಂಡಂತೆ ಉತ್ತರ ಕರ್ನಾಟಕದವರಿಗೆ ಸಹಾಯ ಆಗ್ಬೇಕು ಅಂತ ಉತ್ತರ ಕರ್ನಾಟಕದವರಿಂದ ಉತ್ತರ ಕರ್ನಾಟಕದವರಿಗೋಸ್ಕರ ಇರೋ ಯಾಹೂ ಗುಂಪು nktechies@yahoogroups.com ಇದರ ಒಟ್ಟು ಸದಸ್ಯರ ಸಂಖ್ಯೆ ೨೦೦೦+ ಇದರಲ್ಲೂ ಸಹ ಪರಭಾಷಿಕರ ಹಾವಳಿ, ಕಿತ್ತೊಗೆಯೋಣವೆಂದರೆ ಸದಸ್ಯರ ಸಂಖ್ಯೆ ಕಮ್ಮಿ ಆಗುತ್ತೆ ಅನ್ನೊ ಒಂದು ಚಿಂತೆ :D. ಅಂತು ಇಂತು ಹೇಗೊ ವಿಷಯಗಳು, ಖಾಲಿ ಹುದ್ದೆಯ ಮಿಂಚೆಗಳು ಹರಿದು ಬರುತ್ತಲೆ ಇರುತ್ತವೆ. ನಮ್ಮವರಿಗೂ ಅದೆ ಕಾಲದಲ್ಲಿ ಅವರಿಗು ತಿಳಿಯುತ್ತವೆ.. ಈ ಥರ ಇದ್ರೆ ಕನ್ನಡಿಗನಿಗೆ ಹೇಗೆ ಒಳಿತು ಆಗಬೇಕು? ಪ್ರತಿ ವರ್ಷ ಓಂದು ಕಾಲೇಜಿನಿಂದ ಉತ್ತೀರ್ಣರಾಗಿ ಹೊರ ಬರುವ ಸಂಖ್ಯೆಯೆ ೨೦೦೦+ ಇರುತ್ತದೆ ಎಲ್ಲಾ ಬ್ರಾಂಚ್ ಗಳನ್ನು ಗಣನೆಗೆ ತೆಗೆದುಕೊಂಡರೆ ಅಂಥಾದ್ರಲ್ಲಿ ಈ ಅತಿ ದೊಡ್ಡ ಗುಂಪಿನ ಸದಸ್ಯತ್ವದ ಸಂಖ್ಯೆ ೨೦೦೦+ ಸಾಕಾ? ಈ ಗತಿಯಲ್ಲಿ ಕನ್ನಡಿಗರನ್ನ ತಲುಪಿದರೆ ಅವರಿಗೆ ಮಾಹಿತಿ ಕೊಡೊರು ಯಾರು? ಜಾಲಬಂಧ ಎಲ್ಲಿದೆ?<br />
<br />
ಆರ್ಕುಟ್ನಲ್ಲಿ ಒಂದು ಸಮುದಾಯವಿದೆ ಕನ್ನಡಿಗರಿಗೆ ಖಾಲಿ ಕೆಲಸದ ವಿಚಾರ ತಿಳಿಸಲು, ಇದರಲ್ಲಿನ ಮಾಡರೇಟರ್ ಗಳು ಬಹು ಹುರುಪಿನಿಂದ ಕೆಲಸ ಮಾಡಿತ್ತಾರೆ ಸಮುದಾಯವನು ನಿರ್ವಹಿಸುತ್ತಾರೆ, ಮೆಚ್ಚ ಬೇಕಾದ ಕಾರ್ಯ ಆದರೆ ಸಮುದಾಯದ ಒಟ್ಟು ಸದಸ್ಯತ್ವ ೪೫೦ :( ಕನ್ನಡಿಗರಿಗೆ ಸಹಾಯ ಮಾಡಬೇಕೆಂಬ ಹಂಬಲದಲ್ಲಿ, ತುಕಡಿಯಾಗೆ ಕಾರ್ಯನಿರ್ವಹಿಸುತ್ತಿರುವ ಕಾರಣ ಕನ್ನಡಿಗರನ್ನು ತಲುಪ ಬೇಕೆಂಬ ಛಲದ efficiency factor ತಳ ಮುಟ್ಟಿದೆ ..<br />
೧೪೦ ಎಂಜಿನೀರಿಂಗ್ ಕಾಲೇಜಿನಿಂದ ಪ್ರತಿ ವರ್ಷ ಒಟ್ಟು ೨,೮೦,೦೦೦ ವಿದ್ಯಾರ್ಥಿಗಳು ಹೊರಬರುತ್ತಾರೆ. ೮೦೦೦೦ ಹೊಅರ್ಗಿನವರು ಅಂತ ಲೆಕ್ಕಹಾಕಿದರು ಉಳಿದ ೨೦೦೦೦೦ ಎಲ್ಲಿ ಕಾಣೇ ಆಗ್ತಾರೆ? ಅದೂ ಪ್ರತಿ ವರ್ಷ.. ರೋಡ್ ರೋಡ್ ಅಲೆಯುತ್ತಿರುತ್ತಾರೆ ಕೆಲ್ಸ ಖಾಲಿ ಇಲ್ಲ ಕೆಲ್ಸ ಖಾಲಿ ಇಲ್ಲ ಅಂತ.. ಇಂದಿಗೂ ಸಹ ಅನುಭವವಿಲ್ಲದವರನ್ನ ತೊಗೊತಿದಾರೆ ಈ ಯಾಹೂ ಗುಂಪುಗಳಲ್ಲಿ ಹಾವಿನ ತರಹ ಹರಿದಾಡುತ್ತಿರುತ್ತವೆ ಆಗೊಮ್ಮೆ ಈಗೊಮ್ಮೆ, ಆದ್ರೆ ಅವನ್ನು www.ಕನ್ನಡಮಿತ್ರ.ಕಾಮ್ ನಲ್ಲಿ ಹಾಕಿದರೆ ಒಂದು ರೆಸುಮೆ ಸಹ ಬರುವುದಿಲ್ಲ. ಕನ್ನಡಿಗರಿಗೆ ಒಳ್ಳೆಯದು ಆಗಲಿ ಅಂತ ಬಯಸಿ ಈ ರೀತಿ ಸೇವೆ ಮಾಡಿದರೆ ಅದರ ಸಾರ್ಥಕತೆ ಎಷ್ಟಿದೆ ನೀವೆ ಊಹಿಸಿ.. ಸೊನ್ನೆ ಎಂತ ಹೇಳಲು ದುಖ: ಆಗುತ್ತದೆ. ಉನ್ನತ ಹುದ್ದೆಗಳಲ್ಲಿರುವ ಕನ್ನಡಿಗರು ಕನ್ನಡಿಗರನ್ನು ಪ್ರೊತ್ಸಾಹಿಸಬೇಕು. ಕನ್ನಡಿಗರ ಪರ ಒಲವು ತೋರಬೇಕು.<br />
<br />
ಹಲವಾರು ಬಾರಿ ಇವರ ಪ್ರತಿಷ್ಟೆ ಮೆರೆಯಲಿಕ್ಕಷ್ಟೆ ರೆಸುಮೆ ಸ್ವೀಕರಿಸುತ್ತಾರೆ, ಆಮೇಲೆ ಅದರ ಕಥೆ ಎನಾಗುತ್ತದೆಂದು ಕಳುಹಿಸಿದವನಿಗೆ ತಿಳಿಯದೆ ಇದ್ದರೂ ತೆಗೆದುಕೊಂಡ ದೊಡ್ಡ ಮನುಷ್ಯನಿಗೆ ಖಾತ್ರಿಯಿರುತ್ತದೆ ಎಲ್ಲಿ ಸೇರಬೇಕೆಂದು, ಕ.ಬು ವನ್ನು. ಅಕಸ್ಮಾತ್ ಅವರ ಕಂಪನಿಯಲ್ಲಿ ಹುದ್ದೆ ಖಾಲಿಯಾಯಿತಪ್ಪ ಅಂತಿಟ್ಟುಕೊಳ್ಳೊಣ ಆಗ ಕನ್ನಡಿಗನ ರೆಸುಮೆ ಬಂದರೆ ಇವರ ಧೋರಣೆ ಅವನನ್ನು ಒಳಗೆ ಎಳೆದುಕೊಳ್ಳಬೇಕೆಂಬ ಉತ್ಶಾಹ ಮೂಡದೆ, ಅವನಿಗೆ talent ಅನ್ನೊದು ಇದ್ರೆ ಸಿಕ್ಕೆ ಸಿಗುತ್ತೆ ನಾನು ಯಾಕೆ ಒಡಾಡ್ಲಿ ಅನ್ನುವ ಆಲಸ್ಯ. ನಮ್ ಸುತ್ತ ,ಮುತ್ತ ನೋಡಿದರೆ ಕೆಲಸದ ಗಂಧವೆ ತಿಳಿಯದ ಪರಭಾಷಿಕನೊಬ್ಬ "ಮೇಲಿನವರ" ಕೃಪೆಯಿಂದ ಆಸನ ಅಲಂಕರಿಸಿರುತ್ತಾನೆ. ಕೆಲವು ಸರ್ತಿ ನಾವು ಅಸಹಾಯಕಾರಿ ಇರ್ತೀವಿ ಅನ್ನುವುದು ಎಷ್ಟು ಸತ್ಯವೊ, ಮನಸ್ಸು ಪಟ್ಟಲ್ಲಿ ಅದನ್ನು ಬದಲಾಯಿಸಲುಬಹುದು ಅನ್ನೊದು ಸಹ ಅಷ್ಟೆ ಸತ್ಯ. ಆದರು ಸಹ ತನ್ನ ಹೊಟ್ಟೆ ತುಂಬಿದೆಯಲ್ಲ ಅಷ್ಟು ಸಾಕು, ಎಷ್ಟು ಕಷ್ಟ ಪಟ್ಟು ಈ ಹುದ್ದೆಗೆ ಬಂದಿದೀನಿ ಈಗ ಗುರುತು ಪರಿಚಯವಿಲ್ಲದವನಿಗೆ ಕನ್ನಡಿಗ ಎಂಬ ಒಂದೆ ಕಾರಣಕ್ಕೆ ಸಹಾಯ ಮಾಡಬೇಕೆ, ಯಾವನ್ ಮಾಡ್ತಾನೆ, ನನ್ದೆ ನನ್ಗೆ ನೂರಾಎಂಟು ತಲೆ ನೊವ್ವು ಅದರ ಮಧ್ಯೆ ಇದೊಂದು, ನನ್ಗ್ಯಾಕೆ ಬೇಕು ಇಲ್ಲದ ಉಸಾಬರಿ ಅಂತ ತಲೆ ಕೊಡವಿ ಬಾಳುವವರ ಸಂಖ್ಯೆ ಏನೂ ಕಮ್ಮಿ ಇಲ್ಲ. ಆ ಲೆಕ್ಕಕ್ಕೆ ಇಂತಹವರೆ ಜಾಸ್ತಿ ಅನ್ನಿಸುತ್ತೆ. ಇಂಥಹ ದುರ್ಗತಿ ಕೇವಲ ಕನ್ನಡಿಗನಿಗೆ ಕರ್ನಾಟಕದಲ್ಲಿ ಮಾತ್ರ ಅನುಭವ ಆಗಲು ಸಾಧ್ಯ, ಇಂತಹುದರಿಂದ ಪಾರಾಗಲು ಮೊದಲು ಕನ್ನಡಿಗರು ತಮ್ಮ ಸಂಪರ್ಕವಲಯವನ್ನು ಹೆಚ್ಚಿಸಿಕೊಳ್ಳಬೇಕು. ತಿಳಿಯದವರಿಗೆ ತಿಳಿಸಬೇಕು, ಕನ್ನಡಿಗರಿಗೆ ಆಗುತ್ತಿರುವ ಶೋಷಣೆ ವಿರುದ್ಧ ಧ್ವನಿ ಏರಿಸಬೇಕು. ತುಕಡಿ ಜೀವನ ಬಿಟ್ಟು ಒಂದಾಗಿ, ಒಟ್ಟಾಗಿ ಹೋರಾಡಬೇಕು.. ಈಸ ಬೇಕು.. ಇದ್ದು ಜಯಿಸಬೇಕು..<br />
<br />
ಇತ್ತೀಚೆಗೆ ಏನು ಆಯ್ತು ಅಂದ್ರೆ, ನಾನು ಓದಿದ ಎಂಜಿನೀರಿಂಗ್ ಕಾಲೇಜಿನವರು ಹಳೆ ವಿಧ್ಯಾರ್ಥಿಗಳ ಕೂಟ (ಅಲುಮ್ನಿ ಮೀಟ್) ಏರ್ಪಡಿಸೋಣ ಅಂತ ಯೋಜನೆ ಹಾಕಿ ಒಂದಷ್ಟು ಜನರಿಗೆ ಮಿಂಚೆ ಮಾಡಿದರು.. ಆ ಸರಣಿ ಮಿಂಚೆ ಅಂತೂ ಇಂತೂ ನನ್ ಕೈಗೆ ಬಂತು.. ಮಿಂಚೆಯ ಸಂದೇಶ ಕಂಡು ನನಗೆ ತುಂಬಾ ಖುಷಿ ಆಯ್ತು. ಏಕಂದ್ರೆ ತುಂಬಾ ವರ್ಷಗಳ ನಂತರ ನನ್ನ ಜೀವನದಲ್ಲಿ ಮರೆಯಲಾಗದ ಆ ೪ ವರ್ಷಗಳ ನಂಟು ಅಂಟಿಕೊಂಡ ಸ್ಥಳದಿಂದ ಕರೆಯೋಲೆ ಬಂದಿತ್ತು. ಆದರೆ ಮೊದಲ ಮಹತ್ವದ ಕೆಲಸ ವಿಧ್ಯಾರ್ಥಿಯ ಮಾಹಿತಿಯನ್ನು ಪಡೆಯುವುದಾಗಿತ್ತು ಹಾಗಾಗಿ ಮಿಂಚೆ ಕೈಸೇರಿದ ಪ್ರತಿ ವಿಧ್ಯಾರ್ಥಿಯು ತನ್ನ ಮಾಹಿತಿಯನ್ನು ಕೂಟ ಏರ್ಪಡಿಸುತ್ತಿದ್ದ ವ್ಯಕ್ತಿಗೆ ಮಿಂಚೆ ಮಾಡಬೇಕಿತ್ತು, ನನ್ಗೆ ಈ ಮಿಂಚೆ ಬಂದ ತಕ್ಷಣ ಹೊಳೆದ ಆಲೋಚನೆ ಯಾಕೆ ಈ ಕೂಟವನ್ನು ಕನ್ನಡ ವಿದ್ಯಾರ್ಥಿಗಳ ಒಳ್ಳೆಯದ್ದಕ್ಕಾಗಿ ಉಪಯೋಗಿಸಿಕೊಳ್ಳಬಾರದು ಅಂತ. ತತ್ ಕ್ಷಣವೆ ನಾನು ಒಂದು ಆನ್ಲೈನ್ ಗೂಗಲ್ ಅರ್ಜಿ (docs.google.com) ತಯಾರಿಸಿ ಅದರಲ್ಲಿ ಅವಶ್ಯಕವಿದ್ದ ಮಾಹಿತಿಯ ಪ್ರಶ್ನೆಯಗಳನ್ನು ಸೇರಿಸಿ. ಎಲ್ಲರಿಗೂ ಮಿಂಚೆ ಕಳಿಸಿದೆ, ನಿಮ್ಮ ಮಾಹಿತಿಯನ್ನು ನೀಡಲು ಈ ಅರ್ಜಿಯನ್ನೆ ಉಪಯೋಗಿಸಿ, ವೈಯಕ್ತಿಕ ಮಿಂಚೆಯನ್ನು ಕಳಿಸಬೇಡಿ ನಿರ್ವಹಿಸಲು ಕಷ್ಟವಾಗುತ್ತದೆ ಹಾಗಾಗಿ ಅರ್ಜಿ ಬಳಸಿ ಮಾಹಿತಿ ಆನ್ಲೈನ್ ಉಳಿದಿರುತ್ತದೆ ಹಾಗು ಲಾಗಿನ್ ಆಗಿ ವಿವರಗಳನ್ನು ನೋಡಲು ಸಹ ಸುಲಭ ಇರುತ್ತದೆಂದು ಮತ್ತೊಂದು ಸಮಜಾಯಿಷಿ ನೀಡಿದೆ. ಕಡೆಗೆ ತಾತ್ಕಾಲಿಕವಾಗಿ ಮಾಹಿತಿ ಕಲೆ ಹಾಕಲು ಸೃಷ್ಟಿಸಿದ ಆ ಅರ್ಜಿ ಹೊಸ ವೆಬ್ ಸೈಟ್ ಶುರು ಆಗೊವರೆಗು ಅಧಿಕೃತವಾಯಿತು ನನಗೆ ನೂರಾರು ಕನ್ನಡಿಗರ ಮಿಂಚೆ ಸಿಕ್ಕಿತ್ತು ಹಾಗೆಯೆ ಕೂಟದ ಕಾರ್ಯದರ್ಶಿಗಳ ಪರಿಚಯವೂ ಆಯಿತು. ಸೇವಾ ಮನೋಭಾವ ಇರುವ ಹಾಗು ಈಗಾಗಲೆ ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಜನರೂ ಸಿಕ್ಕರು.<br />
<br />
ಈ ರೀತಿ ಪ್ರತಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನ ಕನ್ನಡಿಗರ ಡೇಟಾಬೇಸ್ ಮಾಡಿಕೊಂಡರೆ ಕೇವಲ ಒಂದು ಮಿಂಚೆ ಇಡಿ ಕನ್ನಡ ವಿದ್ಯಾರ್ಥಿಗಳನ್ನು ತಲುಪಲು ಅಸಾಧ್ಯವೇನಲ್ಲ. ಕನ್ನಡಿಗರಿಗೆ ಹಿನ್ನಡೆ ಆಗಿರುವುದು ಪ್ರತಿಭೆಯ ಅಭಾವದಿಂದಲ್ಲ ಸರಿಯಾದ ಸಮಯಕ್ಕೆ ಸರಿಯಾದ ಜಾಗದಲ್ಲಿ ಇಲ್ಲದೆ ಇರುವುದು, ಇದು ಸಾಧ್ಯ ಆಗಬೇಕೆಂದರೆ ಮೊದಲು ವಿಷಯ ಙ್ಞ್ನಾನ ಮುಖ್ಯ ಹಾಗಾಗಿ ವಿಷಯ ತಲುಪಿಸಲು ನಾವು ಒಂದುಗೂಡಬೇಕಾಗಿದೆ. ಈ ವಿಧಾನವನ್ನು ನಾನು ನನ್ನ ಸ್ನೇಹಿತರೊಂದಿಗೆ ಸಹ ಚರ್ಚೆ ಮಾಡಿದೀನಿ ಈಗ ಕೈಯಲ್ಲಿ ೩ ಕಾಲೇಜಿನ ಡೇಟಾಬೇಸ್ ಕಲೆ ಹಾಕುವ ಕಾರ್ಯ ಶುರುವಾಗಿದೆ, ೩ ಕಾಲೇಜೆಂದರು ಉನ್ನತ ವ್ಯಾಸಂಗ ಮಾಡಲು ಇಚ್ಚಿಸುವವರನ್ನು, ಅನುತ್ತೀರ್ಣರಾದವರನ್ನು ಹಾಗು ಪರಭಾಷಿಕರನ್ನು ಬಿಟ್ಟು ಕನಿಷ್ಟ ೩೦೦೦ ವಿಧ್ಯಾರ್ಥಿಗಳು ಮಾಹಿತಿ ಕಲೆ ಹಾಕುವ ಗುರಿ ಇದೆ..<br />
ಮತ್ತೊಂದು ವಿಚಾರ ಏನಂದ್ರೆ ನಾನು ಅರ್ಜಿಯಲ್ಲಿ ಒಂದು ಪ್ರಶ್ನೆಯನ್ನು ಸಹ ಹಾಕಿದೀನಿ, ನಿಮಗೆ ಸಮಾಜ ಸೇವೆ ಮಾಡುವ ಆಸಕ್ತಿ ಇದೆಯೆ? ಅಥವಾ ಈಗಾಗಲೆ ನಿಮ್ಮನ್ನು ಅಂತಹುದರಲ್ಲಿ ತೊಡಗಿಸಿಕೊಂಡಿದೀರಾ ಅಂತ.. ಇದಕ್ಕೆ ೩ ಆಯ್ಕೆ ೧. ಹೌದು, ಮಿಂಚೆ ಕಳಿಸಿ ೨. ಇಲ್ಲ, ಧನ್ಯವಾದ ೩ ಆಸಕ್ತಿ ಇದೆ, ಆದ್ರೆ ಸದ್ಯಕ್ಕೆ ಅಲ್ಲ ಅಂತ ಕೊನೆಯದು. ಆಶ್ಚರ್ಯವೆಂದರೆ ಇಷ್ಟು ಆಯ್ಕೆಯಲ್ಲಿ ೩ನೇಯದನ್ನೆ ಹೆಚ್ಚು ಜನರು ಆಯ್ಕೆ ಮಾಡಿಕೊಂಡವರು. ಇಂದೇ ಆಲೋಚಿಸದವರು ಮುಂದೆ ಏನು ಆಲೋಚಿಸಿಯಾರು? ಅಂತ ತಲೆ ಕೆರೆದುಕೊಂಡು ನಿರ್ಲಕ್ಷ್ಯ ಮಾಡಿದೆ, ಕಾರಣಗಳು ಕೇಳುವ ಅವಶಯಕತೆಯಿಲ್ಲ ಏಕೆಂದರೆ ಇವರಿಗೆ ಜೀವನದುದ್ದಕ್ಕೂ ಏನಾದರು ಒಂದು ಕಾರಣ ಇದ್ದೆ ಇರುತ್ತದೆ ಇಂತಹವನ್ನು ತಳ್ಳಿ ಹಾಕಲು. ನಿಮ್ಮಲ್ಲಿ ಯಾರಿಗಾದರು ಈ ಆಲೊಚನೆಯಲ್ಲಿ ಹುರುಳಿದೆ ಅಂತ ಅನಿಸಿ ಕೈ ಜೋಡಿಸುವ ಮನಸ್ಸು ಮೂಡಿದರೆ ದಯವಿಟ್ಟು ನನಗೆ ತಿಳಿಸಿ, ಮುಂದಿನ ವಿಚಾರಗಳನ್ನು ಮಾತನಾಡುವ ಹಾಗೆಯೆ ನಿಮಗೆ ಈ ಯೋಜನೆಯಲ್ಲಿ ಏನಾದರು ಬದಲಾವಣೆ ಮಾಡಿದರೆ ಇನ್ನೂ ಒಳಿತು ಎನ್ನುವ ಹಾಗಿದ್ದರೆ ದಯವಿಟ್ಟು ತಿಳಿಸಿ...<br />
<br />
೧. ಡಿವಿಜಿ ಯವರ ೧೨೨ನೇಯ ಜನ್ಮದಿನದ ಅಂಗವಾಗಿ SSS ಬಳಗದವರಿಂದ ೧೭ ಮಾರ್ಚಿ ಬೆಂಗಳೂರಿನಲ್ಲಿರುವ ADA ರಂಗ ಮಂದಿರ ಟೌನ್ ಹಾಲ್ ನ ಹತ್ತಿರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿವಿಜಿಯವರ ಅಭಿಮಾನಿಗಳು ದೇಣಿಗೆ ನೀಡಲು ಅಥವಾ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು sssamaja-at-gmail-dot-com ಗೆ ಮಿಂಚೆ ಕಳಿಸಿ. ಕಾರ್ಯಕರ್ತರ ವಿಳಾಸ ಅಥವಾ ಮೊಬೈಲ್ ಸಂಖ್ಯೆ ಬೇಕಿದ್ದಲ್ಲಿ ನನಗೆ ಮಿಂಚೆಯನ್ನು ಕಳಿಸಿ.<br />
೨. ಅವಿರತ ಸಂಸ್ಥೆಯು ಹಮ್ಮಿ ಕೊಂಡಿರುವ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು kts_gowda-at-yahoo-dot-com ಇವರಿಗೆ ಮೈಲ್ ಮಾಡಿ. ನೀವು ನಿಮ್ಮ ಕಂಪನಿಯಲ್ಲಿ ಒಂದಷ್ಟು ಜನ ಸೇರಿ ಕೂಡ ದಾನ ಮಾಡಬಹುದು. ಹಣ ಕಳಿಸಲು ಆನ್ಲೈನ್ ಸೌಕರ್ಯ ಸಹ ಇದೆ. ಆನ್ಲೈನ್ ಖಾತೆಯ ಸಂಖ್ಯೆ ಹಾಗು ಇತರ ಮಾಹಿತಿಗೆ ಅವಿರತ ಸಂಸ್ಥೆಯ ಅಧ್ಯಕ್ಷರಾದ ಗೌಡ ಅವರನ್ನು ಸಂಪರ್ಕಿಸಬಹುದು.<br />
<br />
*ಯೆನ್ನಡಿಗ ಅಂದರೆ ಪರಭಾಷಿಕ ಅಂತ ಅರ್ಥೈಸಬಹುದು ಆದರೂ ಮೂಲ ಪದ ತಮಿಳಿನ "ಯೆನ್ನ - ಏನು" ಅನ್ನುವುದನ್ನು ತೆಗೆದುಕೊಂಡಿದ್ದೇನೆ. "ಕನ್ನಡ ಅಂದ್ರೆ ಯೆನ್ನ-ಡ" ಅನ್ನೊ ಪರಿಸ್ಥಿತಿ ಅಲ್ಲವೆ!!!<br />
<br />
ನಿಮ್ಮ ಅನಿಸಿಕೆ ಅಭಿಪ್ರಾಯಗಳು ಸ್ವಾಗತ..<br />
ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-86966941648010140112010-06-29T22:39:00.000-07:002010-06-29T22:39:03.854-07:00ಸ್ಲಮ್ ಟೂರಿಸಮ್ ನ ಸುತ್ತ....on February 2, 2009<br />
<br />
ಸದ್ಯಕ್ಕೆ ಸುದ್ದಿ ಮಾಧ್ಯಮಗಳಿಗೆ ಪುಟ ತುಂಬಿಸೊಕ್ಕೆ ಬಿಸಿ ಬಿಸಿಯಾಗಿ ಸಿಕ್ಕಿರೊದು ಸ್ಲಮ್ ಡಾಗ್ ಮಿಲ್ಲಿಯನೇರ್. ಹೆಚ್ಚು ಜನ ನೋಡಿರ್ತೀರ ಕಮ್ಮಿ ಜನ ಕೇಳಿರ್ತೀರ, ಒಟ್ಟಿನಲ್ಲಿ ಆಗಿರೊದು ಏನಂದ್ರೆ ನಮ್ಮ್ ಚಡ್ದಿ ನಾವೆ ಬಿಚ್ಚಿ ಪ್ರದರ್ಶನಕ್ಕಿಟ್ಟು ಶಭಾಷ್ ಗಿರಿ ಪಡ್ಕೊಂಡ ಹಾಗೆ. ಚಿತ್ರ ನಿರೂಪಣೆ ಚೆನ್ನಾಗಿ ಹೆಣೆದಿದ್ರು, ಹೆಣೆಯೊಕ್ಕೆ ಬಳಸಿದ ದಾರ ಮಾತ್ರ ಬಳಸಬಾರದಂತಹ ದಾರ. ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದಾದ್ರು ಏನು ಸಾಧಿಸಿದರು? ಭಾರತೀಯರ ಕಲಾ ನೈಪುಣ್ಯಕ್ಕೆ ಮಾನ್ಯತೆ ದೊರೆತ್ತಿದ್ದಾದ್ರು ಯಾವ ಪುರುಷಾರ್ಥ ಸಾಧಿಸಿದ ಹಾಗೆ? ಚಿತ್ರದ ಪ್ರತಿ ಸನ್ನಿವೇಶದಲ್ಲೂ ನಿಮಗೆ ಸೂಕ್ಷ್ಮವಾಗಿಯೊ, ಪರೋಕ್ಷವಾಗಿಯೊ ಅಥವಾ ಕಣ್ಣಿಗೆ ರಾಚುವಂತೆಯೊ ಗೊಚರಿಸುವುದು ಭಾರತೀಯತೆಯ ಮಾನ ಹರಾಜಗುವುದು ಮಾತ್ರ. ಚಿತ್ರದ ಮೊದಲ ಸನ್ನಿವೇಶದಲ್ಲೆ ಒಬ್ಬ ಅಮಾಯಕನ ಮೇಲೆ ಪೋಲಿಸರ ದೌರ್ಜನ್ಯ, ಅವಮಾನೀಯ ಹಲ್ಲೆ, ಕೇಸ್ ಇಲ್ಲದೆಯೆ ವಿಚಾರಣೆ.. ಹೀಗೆ ಹತ್ತು ಹಲವು. ಇಂದಿನ ಕಾಲಮಾನದಲ್ಲಿ ಭಾರತ ಎಂದರೆ ಈಸ್ಟ್ ಏಷಿಯಾದ ರೈಸಿಂಗ್ ಸನ್ ಇದ್ದ ಹಾಗೆ ನಮ್ಮ ದೇಶವನ್ನು ಹೇಗೆ ಪ್ರದರ್ಶಿಸಬಹುದು ಈಗ ಪ್ರದರ್ಶಿಸಿರುವ ರೀತಿ ನೆನೆಸಿಕೊಂಡರೆ ಊಹಿಸಲು ಅಸಾಧ್ಯ!!!<br />
<br />
ವಿ.ಸೂ: ಕೆಳಗಿನ ವಿಷಯಗಳನ್ನು ಭಾರತೀಯನಂತೆ ಕಾಣಬೇಡಿ, ಭಾರತದ ಜನಜೀವನದ ಗುರುತು ಪರಿಚಯವಿಲ್ಲದ ಅಥವಾ ಕಮ್ಮಿ ತಿಳಿದುಕೊಂಡಿರುವ ಹೊರದೇಶದವರಂತೆ ಓದಿ<br />
ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳ ಕಡೆ ನೋಡಿದರೆ ಕಾಣುವುದು..<br />
<br />
೧. ಅಮಾಯಕನ ಮೇಲೆ ಪೋಲಿಸರ ದೌರ್ಜನ್ಯ, ಅವಮಾನೀಯ ಹಲ್ಲೆ, ಕೇಸ್ ಇಲ್ಲದೆಯೆ ವಿಚಾರಣೆ -- ಇರಾಕ್ ನ ಯುದ್ಧ ಖೈದಿ ಅಥವಾ ಯು.ಎಸ್ ನ ಭದತ್ರಗೆ ಅಪಾಯವೆನಿಸುವವರ ವಿಚಾರಣಾ ಕೇಂದ್ರವಾದ "ಗ್ವಾಂಟಾನೆಮೊ ಬೆ"ಗೆ ನಾವು ಹೋಲಿಸಲು ಸಹ ಆಗುವುದಿಲ್ಲ. "ಗ್ವಾಂಟಾನೆಮೊ ಬೆ" ಯಾಕಪ್ಪ? ಅಂತಂದ್ರೆ ಇಲ್ಲಿ ನಡೆಯುವ ವಿಚಾರಣೆಗಳು ಯಾವುದೆ ಕೇಸ್ ಇಲ್ಲದೆಯೆ ಹೆಚ್ಚು ನಡೆಯುವುದು. ಕೇವಲ ಮುಸ್ಲಿಮ್ ಎನ್ನುವ ಕಾರಣಕ್ಕೆ ಒಳಗೆ ತಳ್ಳಿ ಅವರಿಗೆ ಚಿತ್ರಹಿಂಸೆ ಕೊಟ್ಟು ಟೈಮ್ ಪಾಸ್ ಮಾಡುವ ಸೈನಿಕರು, ಅಧಿಕಾರಿಗಳು. ಇಷ್ಟು ವರ್ಷ ಅಂತರ್ ರಾಷ್ಟ್ರೀಯ ಒತ್ತಡ ಇದ್ದರು ಸಹಿತ ಅದನ್ನು ಮುಚ್ಚದೆ ತಮ್ಮ ದಂಧೆ ನಡೆಸುತ್ತಿದ್ದರೆ. ಇತ್ತಿಚೆಗಷ್ಟೆ ಅಲ್ಲಿ ವಿಚಾರಣ ನಿಯಮಗಳು ಬದಲಾಗಿವೆ. ಇಲ್ಲಿ (ಬೆ ಅಲ್ಲಿ) ನಡೆಯುತ್ತಿದ್ದ ವಿಚಾರಣ ನಿಯಮದಲ್ಲಿ ಅತ್ಯಂತ ಸೈನಿಕಪ್ರಿಯವಾಗಿದ್ದು "ವಾಟರ್ ಬೋರ್ಡಿಂಗ್", ನೀರನ್ನು ಶ್ವಾಸನಾಳಕ್ಕೆ ನುಗ್ಗಿಸುವುದು ಈ ವಿಚಾರಣೆಯ ರೀತಿ. ಕೇವಲ ಶ್ವಾಸನಾಳದ ಬಾಗಿಲಿಗೆ ಅನ್ನದ ಚೂರು/ಯಾವುದೆ ಪದಾರ್ಥ ಸಿಕ್ಕಿಬಿದ್ದಾಗ ನೆತ್ತಿ ತಟ್ಟಿಕೊಂಡು, ಬಗ್ಗಿ ಬೆನ್ನ ಮೇಲೆ ಬಡಿಸಿಕೊಂಡು, ನೀರು ಕುಡಿದು ಸಾವರಿಸಿಕೊಳ್ಳುವ ಹೊತ್ತಿಗೆ ಪ್ರಾಣ ಹೋಗುವ ಅನುಭವ ಆಗುವ ನಮಗೆ ಪದಾರ್ಥ ಒಳಗೆ ಹೋದರೆ ಹೇಗೆ ಅನುಭವ ಆಗಬಹುದು ಒಮ್ಮೆ ಯೋಚಿಸಿ. ಇಂತಹ ಯಾತನೆಯನ್ನು ಕೊಡುವುದು ಬೆ ಅಲ್ಲಿ ಅತ್ಯಂತ ಸೈನಿಕಪ್ರಿಯ ವಿಚಾರಣಾ ನೀತಿ. ಇಂತಹ ಸನ್ನಿವೇಶದಲ್ಲಿ ಒಬ್ಬ ಸೈನಿಕಪ್ರಿಯ ಖೈದಿಯ ಹೆಸರು "ಷಿಟ್ ಫೇಸ್" ಈ ಹೆಸರು ಏಕೆಂದರೆ ಆ ಖೈದಿ ಯಾವಾಗಲು ಅಂದರೆ ೨೪x೭ ಯಾವಗಲು ತನ್ನ ಮುಖಕ್ಕೆ ತನ್ನದೆ ಮಲವನ್ನು ಬಳಿದುಕೊಂಡಿರುತ್ತಿದ್ದ. "ಇಂತಹ ಮಜ"ವನ್ನು ಕೊಡುತ್ತಿದ್ದ ಕಾರಣ, ಹಿಂಸೆಯಲ್ಲಿ ಅವನಿಗೆ ಸ್ವಲ್ಪ ಕಡಿತ. ನಾಯಿಯಿಂದ ಕಚ್ಚಿಸುವುದು, ಪ್ರಾಣಿಗಳಂತೆ ಎರಡು ಕೈ, ಕಾಲು ಬಗ್ಗಿಸಿ ಇಡಿ ದಿನ ಅಲುಗಾಡಲು ಆಗದಷ್ಟು ಚಿಕ್ಕದಾದ ಬೋನಿನಲ್ಲಿ ಅದೆ ರೀತಿಯಾಗಿ ಕೂಡಿಹಾಕುವುದು ಎಲ್ಲಾ ನಗಣ್ಯವಾದ ಉದಾಹರಣೆಗಳು..<br />
೨. ಧಾರಾವಿ "ಏಷಿಯಾದ ಅತ್ಯಂತ ದೊಡ್ಡ ಸ್ಲಮ್"ನ ಜನ ಜೀವನವನ್ನು ನಕಾರಾತ್ಮಕ ಧೋರಣೆಯಲ್ಲಿ ಬಿಂಬಿಸಿರುವುದು. ಧಾರಾವಿ ಎಂಬುದು ಸ್ಲಮ್ ನಿಜ, ಆದರೆ ಒಂದು ಸ್ಲಮ್ ನ ವಿನ್ಯಾಸನ್ನು ಯಾರು ಬದಲಾಯಿಸಲು ಆಗುವುದಿಲ್ಲ ಅಲ್ಲಿನ ಜನಜೀವನ ಬೇರೆ ಸ್ಲಮ್ ಗಿಂತ ಹೆಚ್ಚು ಭಿನ್ನವಿಲ್ಲದಿದ್ದರು ಚಿತ್ರದಲ್ಲಿ ಬಿಂಬಿಸಿರುವಂತೆ ಕೆಟ್ಟದಿಲ್ಲ. ಧಾರಾವಿಗೆ ತನ್ನದೆ ವಿಶೇಷತೆ ಇದೆ, ಅಲ್ಲಿನ ಜನರು ಹೆಚ್ಚು ಪ್ರಜ್ಞ್ನಾವಂತರಾಗಿದ್ದಾರೆ, ಸಮಾಜದಲ್ಲಿ "ಕೇವಲ ಸ್ಲಮ್ ಜನ" ಕಳ್ಳಕಾಕರರು, ಕೊಲೆಗಡುಕರು, ವ್ಯಭಿಚಾರಿಗಳು ಎನಿಸಿಕೊಳ್ಳದೆ ಮರ್ಯಾದಸ್ತ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನೆ, ಹೆಂಡತಿ, ಮಕ್ಕಳು, ಇತರೆ ಜವಾಬ್ದಾರಿಗಳನ್ನು ಅರಿತು ಜೀವಿಸುತ್ತಿದ್ದಾರೆ. ಮಂದಗಾಮಿಗಳಾಗಿ ಸಮಾಜಕ್ಕೆ ಹೊರೆಯಾಗಿ ಜೀವಿಸುತ್ತಿಲ್ಲ ಚುರುಕಿನಿಂದ ಕೆಲಸಗಳಲ್ಲಿ ತೊಡಗಿಸಿಕೊಂಡು ಹೊಟ್ಟೆಹೊರೆದುಕೊಳ್ಳುತ್ತಾರೆ. -<br />
ಯು.ಎಸ್ ನ "ನಿಗ್ಗರ್ ನೆಯ್ಬರ್ ಹುಡ್"ಗಳಿಗಿಂತ ಕಡೆಯೇನಿಲ್ಲ. ನಿಗ್ಗರ್ ಗಳೆಂದೆ ದೂಷಿತರಾಗಿ ಸಮಾಜದಿಂದ ಹೊರಗಟ್ಟಲ್ಪಟ್ಟಿ ತಮ್ಮದೆ ಕಾಂಕ್ರೀಟ್"ಕಾಲೋನಿ"ಯಲ್ಲಿ ರೋಗಗ್ರಸ್ತರಾಗಿ, ಹಗಲು ದರೋಡೆ, ಅತ್ಯಾಚಾರ, ಕೊಲೆಗಡುಕುತನ, ಮಾದಕ ವಸ್ತುಗಳ ಸೇವನೆ, ವ್ಯಭಿಚಾರ, ಮಾನಸಿಕ ಒತ್ತಡದಲ್ಲಿ ತೊಳಲಾಡಿಕೊಂಡು "ನಾಯಿ"ಪಾಡು ಪಡುವ ಜೀವನ ಧಾರಾವಿಯ ವಸ್ತುಸ್ಥಿತಿಗಿಂತ ಹೀನಾಯ ಎನ್ನಲೇನಡ್ಡಿಯಿಲ್ಲ. ಮೈಬಗ್ಗಿಸಿ ದುಡಿಯುತ್ತೇವೆಯೆಂದರು ಸಮಾಜದಲ್ಲಿ ಒಂದು ಸ್ಥಾನವಿಲ್ಲ. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಓದಿ ಪ್ರೆಸಿಡೆಂಟ್ ಆದ ಒಬಾಮ ಈ "ನಿಗ್ಗರ್ ನೆಯ್ಬರ್ ಹುಡ್"ಗಳಿಂದ ಬಂದವರಲ್ಲ. ನೆನ್ನೆಯಷ್ಟೆ (ಜನೇವರಿ ೩೦/೩೧) ನೈರೋಬಿಯಲ್ಲಿರುವ ಅವರ ತಮ್ಮನನ್ನು(ತಂದೆಯ ಎರಡನೆಯ ಸಂಬಂಧದಿಂದ) ಮಾದಕ ವಸ್ತು ಸೇವನೆ ಕಾಯ್ದೆಯಡಿ ಜೈಲಿಗೆ ತಳ್ಳಿದ್ದಾರೆ. ಇದರ ಬಗ್ಗೆ ಯಾರು ಪ್ರತಿಕ್ರಿಯಿಸುತ್ತಾರೆ?<br />
<br />
೩. ಪೋಲಿಸ್ ಗಳು ಬಾಲಕರನ್ನು ಅಟ್ಟಿಸಿಕೊಂಡು ಬರುವಾಗ ಧಾರಾವಿಯ ಪಾಕ್ಷಿಕ ನೋಟ, ಗಲ್ಲಿಗಳಲ್ಲಿ ಓಟ ಧಾರಾಳವಾಗಿ ಚಿತ್ರಿಸಿರುವ ನಿರ್ದೇಶಕನ ತಂಡ ಯು.ಎಸ್ ನ "ನಿಗ್ಗರ್ ನೆಯ್ಬರ್ ಹುಡ್"ಗಳಿಗೆ ಕಾಲಿಡಲು ಭಯ ಪಡುವಂತಹ ಪರಿಸ್ಥಿತಿ ಅಲ್ಲಿ ಪೋಲಿಸರೆ ಹೆಜ್ಜೆ ಇಡಲು ನೂರು ಬಾರಿ ಯೋಚಿಸುತ್ತಾರೆ. ಇನ್ನು ಅಲ್ಲಿ ಚಿತ್ರೀಕರಣ ಮಾಡಲಿಕ್ಕೆ ಆಗುತ್ತದೆಯೆ? ಇದನ್ನು ತಪ್ಪಿಸಲು ಅವರು ಹಾಲಿವುಡ್ ನ ಸೆಟ್ ಗಳಲ್ಲೆ ಸಂತೃಪ್ತಿ ಪಡಬೇಕು. ಹಾಗಾಗಿ ಅವರ "ಕಾಲೋನಿಯ" ಪಾಕ್ಷಿಕ ನೋಟ, ಗಲ್ಲಿಗಳಲ್ಲಿ ಓಟ ಕನಸಿನಲ್ಲೆ ಸಾಧ್ಯ. ಇದರ ಬಗ್ಗೆ ಯಾರಿಗೆ ಯೋಚನೆ ಬರುತ್ತದೆ?<br />
<br />
೪. ಅಮಿತಾಭ್ ಎನ್ನುವ ಚಿತ್ರತಾರೆಯ ಬಗ್ಗೆ ಜನರಿಗಿರುವ fanatism ಬಿಂಬಿಸಲು, ಚಿತ್ರದ ಸನ್ನಿವೇಶದಲ್ಲಿ ಮಲಕೂಪದಲ್ಲಿ ಬಿದ್ದು ಹೊರಲಾಡಿ ಬರುವ ಹುಡುಗನ ಸನ್ನಿವೇಶ ಬೇಕಿತ್ತೆ? ಚರಂಡಿಯ ವ್ಯವಸ್ತೆಯನ್ನು "ಉದಾರವಾಗಿ" ಚಿತ್ರೀಕರಿಸಿರುವ ನಿರ್ದೇಶಕನಿಗೆ ಬಾಗಿಲಿನ ಅಗಳಿ ಅಷ್ಟು ಭದ್ರತೆಯಿಂದ ಕೂಡಿರುತ್ತದೆಯೆಂಬುದು ಹೇಗೆ ಹೊಳೆಯಿತೊ? ನಿರ್ದೇಶಕನಿಗೆ ಜನ ಆ ದೃಶ್ಯವನ್ನು ನಕ್ಕು ಮರೆತುಬಿಡುವ ಸನ್ನಿವೇಶಯೆಂದೆನಿಸಿತೆ? ಅಥವಾ ಸ್ಲಮ್ ನ ಆ "ಒಂದು ಭಾಗ"ವನ್ನು ಆದಷ್ಟು ಹೀನಾಯವಾಗಿ ಚಿತ್ರೀಕರಿಸಬೇಕೆಂಬ ಹಂಬಲ ಇತ್ತೆ? ಇಡೀ ಧಾರಾವಿಯಲ್ಲಿ ಅದೆ ರೀತಿಯ ಪಾಯಿಖಾನೆಗಳು ಮಾತ್ರ ಇವೆ ಎಂಬುದು ಬಿಂಬಿಸಬೇಕಿತ್ತೆ?<br />
<br />
೪. ಶಾಲೆಯಲ್ಲಿ ಕುರಿಮಂದೆಯ ಪ್ರದರ್ಶನ ಬೇಕಿತ್ತೆ? ಅಥವಾ domestic violence/harassment ರೀತಿ categorize ಮಾಡಬಹುದಾದ ಆ ಮೇಷ್ಟರ ನಡತೆ ಅಗತ್ಯವಿತ್ತೆ? ಪರಿಸ್ಥಿತಿಯ ಅರ್ಥ ತಿಳಿಸಲು ಬೇರೆ ಮಾರ್ಗಗಳೆ ಇರಲಿಲ್ಲವೆ, ಇದು ಒಂದು ಅಂತರ್ ರಾಷ್ಟ್ರೀಯ ಚಿತ್ರ ಎಂಬುದು ತಿಳಿದಿರಲಿಲ್ಲವೆ? ನಮ್ಮ ದೇಶದ ವೀಕ್ಷಕರಿಗೆ ಮೇಷ್ಟ್ರು ವಿದ್ಯಾರ್ಥಿಗೆ ಬರೆ ಹಾಕಿದರು ಅಚ್ಚರಿ ಪಡುವುದಿಲ್ಲ-<br />
ಅಷ್ಟು ಮಕ್ಕಳು ಕಲಿಯಲು ಅಥವಾ ಹಾಜರಿದ್ದರು ಅನ್ನುವುದೆ ಸಂತೋಷದ ವಿಚಾರ ನಮ್ಮ ಸರ್ ಎಮ್.ವಿ, ಅಂಬೇಡ್ಕರ್ ಅವರು ವಿದ್ಯಾಭ್ಯಾಸ ಮಾಡಿದ ರೀತಿ ಯು.ಎಸ್ ನಲ್ಲಿ ಯಾರದ್ರು ಮಾಡಿದ್ದರೆ ಅದನ್ನು ಜಗತ್ತಿನ ಇತಿಹಾಸ ಅಂತ ಹಣೆಪಟ್ಟಿ ಕೊಟ್ಟು ದರ್ಬಾರು ಮಾಡುತ್ತಿದ್ದರು. ಈಗ ಅವರ ಮಕ್ಕಳೆ ಓದು ವಿದ್ಯೆ ಕಡೆ ಗಮನ ಹರಿಸದೆ ಹಾಳು ಬೀಳುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ. ವಿದ್ಯಾರ್ಥಿಯ ಮೇಲಿನ "ದೌರ್ಜನ್ಯ" ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಸ್ವೀಕಾರ ಆಗಬಹುದೆಂಬ ಯೊಚನೆಯಿಲ್ಲವೆ?<br />
<br />
೫.ಒಂದು ಸ್ಲಮ್ ಜೀವನದಲ್ಲಿ ಜಾತಿಭೇಧವಿರಲು ಸಾಧ್ಯವೆ ಇಲ್ಲ ಏಕೆಂದರೆ ಅಲ್ಲಿ ನೆಲೆಸಿರುವವರೆಲ್ಲ ಕೇವಲ ಒಂದೆ ವರ್ಗ/ಜಾತಿ - ಬಡವರು. ನಿರ್ಗತಿಕರ ತಾಣ ಧಾರಾವಿ, ಮೇಲು ಕೀಳೆಂಬ ವಿಂಗಡಣೆಯಿಲ್ಲದೆ ಪರಸ್ಪರ ವಿಶ್ವಾಸದಿಂದ (ಎಲ್ಲರೂ ಒಂದೇ ಮನೋಭಾವ ಇಟ್ಕೊಂಡಿರ್ತಾರೆ ಅಂತೇನಿಲ್ಲ ಆದ್ರೂ ಹೆಚ್ಚಿನಾಂಶದಲ್ಲಿ) ಬಾಳುವ ಜನ. ಇದು ಒಂದು ರೀತಿಯಲ್ಲಿ ಅನಿವಾರ್ಯತೆ ಕೂಡ ಕಾರಣ ಇವರಿಗೆ ನೆರೆಹೊರೆಯವರೆ ಬಂಧುಗಳು, ಆಪತ್ತಿಗಾದವನೆ ಆಪತ್ಭಾಂಧವ, ಏನಂತೀರಾ?ಹಬ್ಬಹರಿದಿನಗಳಲ್ಲಿ ಜಾತಿಮತ ಮರೆತು ಒಂದಾಗಿ ಆಚರಿಸುವ ಜನ. ಕೇವಲ ಕೆಲವು ಸಮಾಜದ ಕ್ರಿಮಿಗಳಿಂದ ಜಾತಿ ಮತದ ವಿಂಗಡಣೆಯಾಗಿ ಆಂತರಿಕ ಘರ್ಷಣೆ ಆಗುವುದು ಸಹಜ.ಆದರೆ ಚಿತ್ರದಲ್ಲಿ ಬಿಂಬಿಸಿರುವಂತೆ organized genocide ಸಾಧ್ಯವೆ? -<br />
ಹಿಟ್ಲರ್ ಗೆ ಇಂದಿಗು ಸಹ ಅಭಿಮಾನಿಗಳಿದಾರೆ!!! ಕ್ರೈಸ್ತರ ಗೊವಾ ಇನ್ಕ್ವಿಸಿಷನ್ (goa inquisition), ಟಿಪ್ಪು ಮಾಡಿದ ೧೦೦೦ ನಾಯರ್ ಮನೆತನಗಳ ಸರ್ವನಾಶ ಆಗಿನ ಕಾಲದಲ್ಲಿ ೧ ಮನೆಗೆ ೧೦-೧೫ ತಲೆಗಳಿರುತ್ತಿದ್ದವು ಅಂಥಾದ್ರಲ್ಲಿ ೧೦೦೦ ಮನೆತನಗಳು ಅಂದರೆ ಕನಿಷ್ಟ ೧೦-೧೫೦೦೦ ಜನರ ಕಗ್ಗೊಲೆ!!! ದೇವಸ್ಥಾನಗಳ ಸರ್ವನಾಶ ಮಾಡಿ ಅದೇ ಕಲ್ಲಿನಿಂದ ಕುತುಬ್ ಮಿನಾರ್ ಕಟ್ಟಿ ಇಡುವ ಪ್ರತಿ ಹೆಜ್ಜೆ ದೇವಸ್ಥಾನವನ್ನೆ ತುಳಿಯುವಂತೆ ಮಾಡಿರುವ ಕೃತ್ಯ, ಇಂದಿರಾ ಗಾಂಧಿ ಹತ್ಯೆಗೆ ಕಾರಣವಾದ "ಸಿಖ್" ಕಮ್ಮ್ಯುನಿಟಿಯನ್ನೆ ಗುರಿ ಮಾಡಿ ಹೆಂಗಸರು ಮಕ್ಕಳು ಎನ್ನದೆ ೩೦೦೦ ಜನರ ಕಗ್ಗೊಲೆ ಕೇಂದ್ರ ಸರ್ಕಾರದ ಆಡಳಿತದಲ್ಲಿದ್ದ ಕಾಂಗ್ರೆಸ್ ನ ಛಾಯೆಯಡಿಯಲ್ಲೆ ಆಯಿತು, ಕರ ಸೇವಕರನ್ನು ಸಜೀವ ದಹನ ಮಾಡಲು ಹಿಂದಿನ ರಾತ್ರಿಯೆ ೧೪೦ ಲೀಟರ್ ಪೆಟ್ರೊಲ್ ಅನ್ನು ಹತ್ತಿರದಲ್ಲಿರುವ ಪೆಟ್ರೊಲ್ ಬಂಕಿನಿಂದ ಖರೀದಿಸಿ ಘಟನಾ ಸ್ಥಳದ ಹತ್ತಿರದ ಲಾಡ್ಜ್ ನಲ್ಲಿ ಇಡಲಾಗಿದ್ದ ಅಂಶ ನಂತರ ನಡೆದ ಪ್ರತಿಕ್ರಿಯೆ ೨೦೦೦ ಮಂದಿಯ ಹತ್ಯೆಗೆ ಕಾರಣವಾದವು, ತನ್ನ ಛಾಪನ್ನು ಮತ್ತಷ್ಟು ಸ್ಥಿರಗೊಳಿಸಲು ಇರಾಕ್ ಮೇಲೆ ಸುಳ್ಳು ಆರೋಪ ಮಾಡಿ ಸದ್ದಾಂನನ್ನು ಮುಗಿಸಿ, ಆ ದೇಶಕ್ಕೆ ಎಳ್ಳು ನೀರು ಬಿಟ್ಟ ಯು.ಎಸ್ ನ ನೀತಿ organized genocide ಎನ್ನಬಹುದು. ಯು.ಎಸ್ ನ ಇಂತಹ ಪಾಲಿಸಿಗಳಿಗೆ ಬೆಲೆ ತೆತ್ತ ವಿಚಾರ ಮಾಡಿದರೆ ಅದಕ್ಕೆ ಬೇರೆಯದೆ ಲೇಖನ ಬೇಕಾಗುತ್ತದೆ..<br />
<br />
೬.ಗಲಭೆಯ ಸನ್ನಿವೇಶದಲ್ಲಿ ರಾಮನ ಹಾಗೆ ನೀಲಿ ಬಣ್ಣ ಬಳಿದುಕೊಂಡು ಬಿಲ್ಲು ಬಾಣ ಹಿಡಿದು ನಿಂತಿದ್ದ ಹುಡುಗನನ್ನು ತೋರಿಸಿದಾಗ ಎರಡು ರೀತಿಯ ವಿಚಾರ ಮಾಡಬಹುದು on a lighter note ಅದನ್ನು ಕೆದಕದೆ ಅರ್ಥ ತಿಳಿಯಲೆಬೇಕೆಂಬ ಹಂಬಲ ಇಟ್ಟುಕೊಳ್ಳದೆ ನಿರ್ಲ್ಯಕ್ಷಿಸಬಹುದು, ofcourse - ignorance is bliss ಆದರೆ ಇಲ್ಲಿ ಯೋಚಿಸಬೇಕ್ಕಾದ್ದು ರಾಮನೆ ಯಾಕೆ? ರಾಮನೊಬ್ಬನೆ ಹಿಂದುಗಳು ಪೂಜಿಸುವ ದೈವವೆ? ಅಥಾವ ರಾಮ ಜನ್ಮ ಭೂಮಿಯ ವಿವಾದದ ವಿಚಾರವನ್ನೆ ಹಿನ್ನೆಲೆಯಾಗಿಟ್ಟುಕೊಂಡು ಚಿತ್ರೀಕರಿಸಿದ ಹಿನ್ನೆಲೆಯೆ? ಅಥಾವ ಯು.ಎಸ್ ನ ಹೆಸರಾಂತ ನಟಿಯೊಬ್ಬಳು (ಹಾಳಾದ್ದು ಮರೆವು ಹೆಸರು ಮರೆತು ಹೋಗಿದೆ :() ಹಾಲ್ಲೊವೀನ್ ಪಾರ್ಟಿಯ(ದೆವ್ವಗಳ ಅಥವಾ ವಿಚಿತ್ರವಾದ ವೇಷ ಹಾಕಿ ಮದ್ಯವ್ಯಸನ ಮಾಡಿ ನಂತರ "ಮಜ" ಮಾಡುವುದು ಪಾರ್ಟಿಯ ಉದ್ದೇಶ, ಈ ಸಂಸ್ಕೃತಿ ಶುರುವಾದ ಕಾರಣ ಏನೇ ಇದ್ದರು ಇಂದಿನ ಮುಖ ಇದು) ಕಾಸ್ಟ್ಯೂಮ್ ಆಗಿ ಕಾಳಿ ಮಾತೆಯ ವೇಷ (ಅವಳಿಗೆ ಬೇರೆ ಹೊಳೆಯಲೆ ಇಲ್ಲ ಅಂತ ಕಾಣುತ್ತೆ ಪಾಪ) ಧರಿಸಿ ಯು.ಎಸ್ ನ HUF ಎಂಬ ಹಿಂದು ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಮೀಡಿಯಾ ಮುಂದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಯಿತು. ನಿರ್ದೇಶಕನೊಬ್ಬನಿಗೆ ಗೊತ್ತು ಅಲ್ಲಿ ರಾಮನ ವೇಷ ಯಾಕೆ ಬೇಕಿತ್ತು ಅಂತ.<br />
<br />
೭. ಬೃಹನ್ಮುಂಬೈನ ಕಾಮಟಿಪುರದ ಗಲ್ಲಿ ತೋರಿಸಿ ಇಲಿ ಬೋನಿನಂತಿರುವ ಜಾಗಗಳಲ್ಲಿ "ಕೂಡುವ" ಕಾಮಿಗಳ ಪ್ರದರ್ಶನ ಮಾಡಿ ಕಷ್ಟಪಟ್ಟು ಇಕ್ಕಟಿನಲ್ಲೆ ಸುಖಿಸುವ ಪ್ರೇಮಿಗಳ ಮೇಲೆ ಕನಿಕರ ಅಥವಾ ಹೇಸಿಗೆ ಹುಟ್ಟಿದರೆ ಆಚ್ಚರಿಯೇನಲ್ಲ ಅಥ್ವಾ ಹೆಣ್ಣು ಮಕ್ಕಳ ಶೋಷಣೆ ಎಂಬ ಚಿತ್ರ ಮನಸ್ಸಿನಲಿ ಅಚ್ಚುಮೂಡಿದರು ಆಶ್ಚರ್ಯವಿಲ್ಲ. ಇದನ್ನು ವೀಕ್ಷಿಸಿದ ಹೊರದೇಶದವರಿಗೆ ಅವರ ಸ್ವೇಚ್ಛಾಚಾರವೆ ಹಿರಿದು ಎಂಬ ಭಾವನೆ ಮೂಡಿಸಿ ನಮ್ಮ ದೇಶದ ವೇಶ್ಯಾವಾಟಿಕೆಯ ರೀತಿಯ ಮೇಲೆ ಕನಿಕರ ಮೂಡುತ್ತದೆ. ಅವರಿಗೆ ವೇಶ್ಯಾವಾಟಿಕೆ ತಪ್ಪು ಎನಿಸುವುದಿಲ್ಲ ಆದರೆ ಮಾನವ ಹಕ್ಕು ಆಯೋಗ ಇದರ ಬಗ್ಗೆ ಚಿಂತನೆ ನಡೆಸಲುಬಹುದು. ಪಬ್ ಕಲ್ಚರ್ ಗೆ ಮಿಶ್ರ ಪ್ರಕ್ರಿಯೆ ಬಂದ ಹಿನ್ನೆಲೆಯಲ್ಲೆ ವೇಶ್ಯಾವಾಟಿಕೆಯನ್ನು ಸಹ legalize ಮಾಡಿ ಎನ್ನುವ ದಿನಗಳು ದೂರ ಉಳಿಯೊಲ್ಲ. ofcourse,<br />
ವೇಶ್ಯಾವಾಟಿಕೆಯನ್ನು ಕಾನೂನು ಬಾಹಿರ ಮಾಡಬೇಕೆ ಬೇಡವೆ ಅನ್ನುವುದು ಬೇರೆ ವಿಚಾರ. ಆದರೆ ಚಿತ್ರದಲ್ಲಿ ಅದನ್ನು ಬಿಂಬಿಸುವ ರೀತಿ ತಪ್ಪು, ನೀವು ಸರ್ಫ್ರೋಷ್ ಎಂಬ ಆಮಿರ್ ಖಾನ್ ಚಿತ್ರ ನೋಡಿದಲ್ಲಿ ಕಾಮಟಿಪುರವನ್ನು ತೋರಿಸಿದಾಗ ಹೇಸಿಗೆ ಎನಿಸುವುದಿಲ್ಲ, ಅದು vibrant ಆಗಿ, ಮೈ ಮಾರುವುದು ದಿನ ನಿತ್ಯದ ಕೆಲಸ ಅನ್ನುವ ಮನೋಭಾವ ಬೆಳಸಿಕೊಂಡು ಜೀವನ ಮಾಡುವ ರೀತಿ ತೋರಿಸುತ್ತದೆ. ಇಂದಿನ recession ಕಾಲದಲ್ಲೂ ಬೇಡಿಕೆ ಕಡಿಮೆಯಾಗದ ಉದ್ಯಮ(ನಮ್ಮ ದೇಶದಲ್ಲಿ ಆಲ್ಲ ) ವೇಶ್ಯಾವಾಟಿಕೆ. ಅದನ್ನ ಸರಳವಾಗೆ ಚಿತ್ರೀಕರಿಸುವ ಎಲ್ಲ ವಿಧಾನಗಳು ಇದ್ದವು ಅವೆಲ್ಲವನ್ನು ಬಿಟ್ಟು ಹೀನಾಯವಾಗಿ ಪ್ರದರ್ಶಿಸುವ ಅಗತ್ಯವಿತ್ತೆ?<br />
<br />
೮. ಧೋಭಿ ಘಾಟ್ ತೋರಿಸಿ ನಂತರ ಹೊಡೆಸಿಕೊಳ್ಳುವ ಸನ್ನಿವೇಶದಲ್ಲಿ this is bit of real india ಅಂತ ಹುಡುಗ ಅಂದಾಗ this is bit america,son ಅಂತ ಹೇಳುವ ಅಮೇರಿಕನ್ ಸಿಟಿಝನ್ ಕೈಗೆ ಹಣ ತುರುಕಿ ಕಳಚಿಕೊಳ್ಳುವ ದೃಶ್ಯದಲ್ಲಿ, ಜನರು ತಪ್ಪು ಮಾಡಿದ್ದರು ಸಹಿತ ಅಂಥವರನ್ನು ಕ್ಷಮಿಸಿ ಸಂಕಷ್ಟದಲ್ಲಿರುವ ಸಹಾಯಕ ಎನ್ನುವ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ.<br />
<br />
೯. ಚಿತ್ರದ ನಾಯಕಿಯನ್ನು ಅರಸುತ್ತಾ ನಗರಕ್ಕೆ ಬಂದ ಅಣ್ಣ ತಮ್ಮ ಪಿಡ್ಝಾ ಹಟ್ ನಲ್ಲಿ ಕೆಲಸ ಮಾಡುವಾಗ, ಅಣ್ಣ ಖಾಲಿಯಾದ ಮಿನರಲ್ ನೀರಿನ ಬಾಟಲಿಗೆ ನಳದ ನೀರನ್ನು ತುಂಬಿ ಅದರ ಮುಚ್ಚಳಕ್ಕೆ ಫೆವಿ ಸ್ಟಿಕ್ ನಿಂದ ’ಸೀಲ್ಡ್’ ಅನ್ನುವ ಹಾಗೆ ಮಾಡುತ್ತಿರುವ ದೃಶ್ಯ ಏಕೆ ಬೇಕು? ಆ ದೃಶ್ಯವನ್ನು ಗಂಭೀರವಾಗಿ ಪರಿಗಣಿಸುವ ಯಾರೆ ಆದರು (ಹೊರ ದೇಶದವರು) ನಮ್ಮ ದೇಶದಲ್ಲಿ ದೊರೆಯುವ ಮಿನರಲ್ ನೀರನ್ನು ಬಳಸುವುದರ ಬಗ್ಗೆ ಎರಡು ಸರ್ತಿ ಯೋಚಿಸುವ ಹಾಗೆ ಮಾಡುತ್ತದೆ. ಇದು ಬೇಕಾ?<br />
<br />
೧೦.ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುವವರ ಕಾರ್ಯಾಚರಣೆ, ಕುರಿ ಮಂದೆಯ ತರಹ ಒಂದು ಮಾಳಿಗೆಯಲ್ಲಿ ವಿವಿಧ ಕ್ಯುಬಿಕಲ್ ನಲ್ಲಿ ಕುಳಿತು ಕೆಲಸ ಮಾಡುವ ರೀತಿ, ಚಹಾ ವಿತರಿಸುವವನು ಸಹಿತ (ಚಹಾ ವಿತರಿಸುವವನಿಗೆ ಆಂಗ್ಲ ಬಂದಲ್ಲಿ ಮಾತ್ರ) ಕರೆ ಮಾಡಿದ ಗ್ರಾಹಕನೊಂದಿಗೆ ವ್ಯವಹರಿಸುವ ಪರಿ. ತಮ್ಮ ಸ್ವಾರ್ಥಸಾಧನೆಗೆ ವೈಯಕ್ತಿಕ ಮಾಹಿತಿಗಳ ಮೇಲೆ ಹಿಡಿತವಿರುವ ಗ್ರಾಹಕ ಸಹಾಯ ಕೇಂದ್ರದ ಸಿಬ್ಬಂದಿ ಹೇಗೆ ಮಾಹಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರಿಸಿರುವುದು. ಗ್ರಾಹಕನಿಗೆ ಸುಳ್ಳು ಮಾಹಿತಿ (ತಾನು ಸಹ ಅದೆ ದೇಶದವನೆಂದು)ಕೊಟ್ಟು ಕಾರ್ಯ ಮಾಡುವ ಬಗೆ ಹೀಗೂ ಆಗಬಹುದು ಅಂತ ಯೋಚಿಸದವರು ಸಹಿತ ಒಮ್ಮೆ ಯೋಚಿಸುವ ಹಾಗೆ ಆಗುತ್ತದೆ. ಹೇಳಿ ಕೇಳಿ, ಹೊರಗಿನಿಂದ ಬಂದು ತಮ್ಮ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ಸಿಟ್ಟಿದೆ ಇತ್ತೀಚಿಗಷ್ಟೆ ೫೦೦೦ ಹೆಡ್ ಕೌಂಟ್ ಕಮ್ಮಿ ಮಾಡಬೇಕೆಂದು ಯೋಜನೆ ಹಾಕಿಕೊಂಡಿರುವ ಯು.ಎಸ್ ನ ಮೈಕ್ರೊ ಸಾಫ್ಟ್ ನೆ ಮೇಲೆ ಒತ್ತಡ ಹೇರಲಾಗಿದೆ. ಹೊರ ರಾಷ್ಟ್ರಗಳಲ್ಲಿ ಮುಚ್ಚುತ್ತಿರುವ ಗ್ರಾಹಕ ಸೇವಾ ಕೇಂದ್ರದ ಕಾರ್ಯಾಚರಣೆಯು ಭಾರತಕ್ಕೆ ಬರುತ್ತಿರುವ ಬಗ್ಗೆ ಅಲ್ಲಿನವರಿಗೆ ಅಸಮಾಧಾನ ಇದೆ. ಬಹಳ ವರ್ಷಗಳ ಹಿಂದೆ ಲೇ ಆಫ್ ಆದವರಿಗೆ "ಬಾಂಗಲೋರ್ಡ್ bangalored" ಅನ್ನುವ ಹೊಸ ಪದವನ್ನು ಸೃಷ್ಟಿಸಿದ್ದರು ಏಕೆಂದರೆ ಅಲ್ಲಿನವರ ಕೆಲಸವನ್ನು ಭಾರತದ ಸಿಲಿಕಾನ್ ಸಿಟಿಯೆಂದೆ ಪ್ರಸಿದ್ಧವಾಗಿರುವ ನಮ್ಮ ಬೆಂಗಳೂರಿನವರೆ ಹೆಚ್ಚಾಗಿ ಆಕ್ರಮಿಸಿದ್ದರು :) . ಈಗ ಈ ಚಿತ್ರವನ್ನು ವೀಕ್ಷಿಸಿ ಭಾರತೀಯರ ಮೇಲೆ ಅಸಮಾಧಾನವಿರುವವರು ನಮ್ಮನ್ನು ಸ್ಲಮ್ ಡಾಗ್ಸ್ ಎನ್ನಲೂ ಬಹುದು. www.victimofprejudic...<br />
ಪರದೆಹಿಂದೆ ಇನ್ನೂ ಸಹ ಕಾರ್ಯಗತವಾಗಿರುವ ರೇಸಿಸಂಗೆ ಮತ್ತೊಂದು ಅಸ್ತ್ರದಂತೆ ಕಂಡರು ಕಾಣಬಹುದು.<br />
<br />
ಇಷ್ಟೆಲ್ಲಾ ರೀತಿ ಯೋಚಿಸಲು ಅವಕಾಶವಿರುವ ವೀಕ್ಷಕನಿಗೆ ಒಬ್ಬ ಯು.ಕೆ ನ ನಿರ್ದೇಶಕ ಭಾರತದ ನೈಜ್ಯ ಚಿತ್ರಣ ಮಾಡಿದ್ದಾನೆ ಎಂದರೆ ಪ್ರತಿ ಶಾಟ್ ಅನ್ನು ಸಹ surgical ಆಗಿ ವೀಕ್ಷಿಸಿ ಪ್ರತಿ ಮಾತುಕಥೆಯನ್ನು ಗಂಭೀರವಾಗಿ ಪರಿಗಣಿಸಿ. ಅಭಿಪ್ರಾಯ/ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ..<br />
<br />
ಇತ್ತೀಚೆಗಷ್ಟೆ ತಾಜ್ ಹೋಟಲ್ ಮೇಲೆ ನಡೆದ ಟೆರ್ರರಿಸ್ಟ್ ದಾಳಿಯ ಪ್ರಸಂಗದಲ್ಲಿ ವಿಲಾಸ್ ರಾವ್ ದೇಶ್ಮುಖ್ ರಾಮ್ ಗೋಪಾಲ್ ವರ್ಮಾನೊಂದಿಗೆ ಆ ತಾಣದಲ್ಲಿ ಕಾಣಿಸಿಕೊಂಡು ದೊಡ್ಡ ವಿವಾದವಾಯಿತು ಕಾರಣ?.. ಟೆರ್ರರ್ ಟೂರಿಸಂ - ಮೀಡಿಯಾಗೆ ಹೊಸ ಪದ ಹೊಳೆಯಿತು, ಪುಟ ತುಂಬಿಸಿತು, ಘಂಟಾಘೋಷವಾಗಿ ಕೂಗಿಕೊಂಡರು, ನಿರ್ಗಳವಾಗಿ ಗಂಟೆಗಟ್ಟಲೆ ಮಾತಾಡಿದರು ಅಥವಾ ಹರಟೆ ಕೊಚ್ಚಿದರು ಎನ್ನಬಹುದು. ಬಾಂಬ್ ದಾಳಿ ಸಹ ಭಾರತದ ನಿರ್ಲಕ್ಷ್ಯ ಮಾಡಲಾಗದಂತಹ ಒಂದು ವಿಚಾರವಾಗಿದೆ. ಅಲ್ಲಿ ಜನರ ಪ್ರಾಣ ಹೋಯಿತು, ಜನರಿಗೆ ಸಾಂತ್ವನ, ಸಹಾನುಭೂತಿ ಬೇಕಿತ್ತು. ಅಪರಾಧಿಗೆ ಶಿಕ್ಷೆಯಾಗುವ ತನಕ ದುಖ: ಅನುಭವಿಸಿದವರಿಗೆ ನೆಮ್ಮದಿಯಿರುವುದಿಲ್ಲ. ಶಿಕ್ಷೆಯಾದರು ಸಹ ಹೋದವರು ವಾಪಸ್ಸು ಬರುತ್ತಾರೆಯೆ? ಇಲ್ಲ. ಆದರೆ ಆ ಪರಿಸ್ಥಿತಿಯನ್ನು cash ಮಾಡಿಕೊಂಡವರು ಅದೆಷ್ಟು ಜನ. ದೇಶ್ಮುಖ್ ಸಹ ನಾನು ಮಾಡ್ಕೋತೀನಿ ಅಂತ ಹೊರಟಿದ್ದು ಆದ್ರೆ ಎಡವಿ ಬಿದ್ದರು ಅಷ್ಟೆ. ಈಗ ಈ ಚಿತ್ರವನ್ನು ಸ್ಲಮ್ ಟೂರಿಸಂ ಅಂತ ಕರೆದರೆ ಅತಿಶಯೋಕ್ತಿ ಅಲ್ಲವೇನೊ, ಅಲ್ವಾ? ಟೆರ್ರರ ಟೂರಿಸಂನಲ್ಲಿ ಜನರ ಪ್ರಾಣ ಹೋಗಿತ್ತು ಸ್ಲಮ್ ಟೂರಿಸಂನಲ್ಲಿ ನಮ್ ಮಾನ ಹೋಗಿದೆ. ಸ್ಲಮ್ ಡಾಗ್ ಅನ್ನುವುದು ನಾಯಿ ಅಂತ ಸಂಬೋಧಿಸದ ಹಾಗೆ ಅಲ್ಲದಿದ್ದರು ನಾಯಿ ತರಹದ ಜೀವಿ ಅಂತ ಅನ್ಕೊಬೇಕು.prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-85772535692584590922010-06-29T22:37:00.000-07:002010-06-29T22:37:47.002-07:00three"ಸಂ" is awesomeon January 19, 2009 <br />
ಇಂದು ಕನ್ನಡಿಗರು ಜಾಗತಿಕ ಮಟ್ಟದಲ್ಲಿ ವೈಯಕ್ತಿಕವಾಗಿ ಎಷ್ಟೆ ಬೆಳೆದಿದ್ದರು ಸಮಾಜ,ದೇಶ,ವಾಣೀಜ್ಯದ ವ್ಯವಹಾರಗಳಲ್ಲಿ ಎಷ್ಟೆ ಮುಂದುವರೆದಿದ್ದರು ಸಹ ಅವರುಗಳು ಹೆಚ್ಚಾಗಿ ವಿಫಲವಾಗಿರುವುದು "ಕನ್ನಡಿಗ"ಎಂದು ಗುರುತಿಸಿಕೊಳ್ಳುವುದರಲ್ಲಿ. ಹೀಗಿರುವಾಗ ಒಬ್ಬ "ಎಚ್ಚೆತ್ತ" ಕನ್ನಡಿಗ "3ಕ" ಕನ್ನಡ,ಕನ್ನಡಿಗ,ಕರ್ನಾಟಕ ಉದ್ದೇಶಕ್ಕೆ ಕೈಲಾದ ಸೇವೆ ಮಾಡುವ ಯೋಚನೆ ಬಂದಾಗ ಒಂದು ನಿರ್ದಿಷ್ಟ ಯೋಜನೆ ಕೈಗೆತ್ತುಕೊಂಡು ಆ ನಿಟ್ಟಿನಲ್ಲಿ ಕಾರ್ಯನಿರತವಾಗುವುದು ಸಹಜ. ಅವರುಗಳು ಹೀಗೆ ಸಾಗಿದಾಗ, ಸಾಧನೆಯ ಪಥದಲ್ಲಿ ಹಲವಾರು ಜನ ಪರಿಚಿತರಾಗುವುದು ಸಹಜವೆ . ಹೀಗೆ ಪರಿಚಯವಾದವರ ಗುರಿ ಉದ್ದೇಶಗಳನ್ನು ಅರಿತು ಮುಂದೆ ಸಾಗುತ್ತಾರೆ. ಆಗೋದು ಏನು ಅಂದ್ರೆ, ಇವರ ನಿಸ್ಸ್ವಾರ್ಥ ಉದ್ದೇಶವು ಹಾಗು ಪರಿಚಯವಾಗುವ "ಜನರ" ನಿಸ್ಸ್ವಾರ್ಥ ಸೇವೆ ಹೆಚ್ಚಿನಾಂಶದಲ್ಲಿ ಬೇರೆಯದ್ದೆ ಆಗಿರುತ್ತದೆ. ಎಡವಟ್ಟು ಆಗೋದು ಇಲ್ಲೆ... ಇಬ್ಬರದ್ದು ನಿಸ್ಸ್ವಾರ್ಥ ಸೇವೆಯೆ, ಇದರಲ್ಲಿ ಕಿಂಚಿತ್ ಸಹ ಸಂಶಯವಿಲ್ಲ ಆದರೂ ಸಹ ಇಂತಹ ಉದ್ದೇಶಗಳು ಈಡೆರುವುದಕ್ಕೆ ಜನ ಬೆಂಬಲವಿರುವುದಿಲ್ಲ, ಕಾರ್ಯಗತಗೊಳುವುದು ವಿಳಂಬವಾಗುತ್ತದೆ ಅಥವ ಕುಸಿದೆ ಬೀಳಬಹುದು ಇವು ಯಾವುದು ಇಲ್ಲವಾದಲ್ಲಿ ಆಮೆ ವೇಗದಲ್ಲಿ ಸಾಗುವುದು. ಉದಾಹರಣೆಗೆ ೧೦೦+ ಕನ್ನಡ ಪರವಿರುವ ಯಾಹೂ,ಗೂಗಲ್,ಆರ್ಕುಟ್ ಗುಂಪಿನಲ್ಲಿ ಆಯೋಜಿತವಾಗುವ ಭೇಟಿಗಳು ಹಾಗು ಅವುಗಳ ಕಾರ್ಯಸೂಚಿ ನೋಡಿದಲ್ಲಿ ಸತ್ಯದ ಅರಿವಾಗುತ್ತದೆ. ಸಮಾಜದಲ್ಲಿ ಒಂದು ಕನ್ನಡಪರ ಬದಲಾವಣೆ ತರಬೇಕೆಂಬ ಹಂಬಲ, ಅದಕ್ಕಾಗಿ ಸಂಘರ್ಷ ಮಾಡುವ ಛಲ ಉದ್ದೇಶವಾಗಿಟ್ಟುಕೊಂಡೆ ಈ ಭೇಟಿಗಳು ಆಯೋಜಿತವಾಗಿರುತ್ತದೆ. ಮೊದಲ ಭೇಟಿಯಲ್ಲಿ ೧೦೦ ಜನರು ಅತ್ಯುತ್ಸಾಹದಿಂದ ಬಂದು ಪರಿಚಯ ಮಾಡಿಕೊಂಡು, ಕನ್ನಡ ಪರ ತಮ್ಮ ಉದ್ದೇಶ,ಆಸೆ ಆಕಾಂಕ್ಷೆಗಳ ಬಗ್ಗೆ ಅತ್ಯುತ್ಸಾಹದಿಂದ ಮಾತಾಡಿ ಹೋದವರು ಎರಡನೆಯ ಭೇಟಿಯಲ್ಲಿ ನಾಪತ್ತೆ!!! ಆದರೆ ಆಶ್ಚರ್ಯ ಪಡಬೇಕಿಲ್ಲ ೧೦೦ ಮಂದಿಯ ಗುಂಪು ೧೦ ಆದರೂ ಅದು ದೊಡ್ಡ ವಿಚಾರವಲ್ಲ, ಕಾರಣ ಹಲವಿರಬಹುದು ಅದು ಈ ಸಂದರ್ಭದಲ್ಲಿ ನಿರರ್ಥಕ ಆದರೆ ಮೊದಲ ಭೇಟಿಯಲ್ಲಿದ್ದ ಕಿಚ್ಚು, ಸಂಘಟನೆಯ ಬಗ್ಗೆ ಒಲವು ಏಕಾಏಕಿ ಕಾಣೆಯಾಗಿರುತ್ತದೆ. ಸರಿನಪ್ಪ, ಒಪ್ಕೊಳ್ಳೋಣ ೧೦೦ ಮಂದಿಯ ಕುರಿ ಮಂದೆಗಿಂತ ೧೦ ಮಂದಿಯ ಆನೆ ಗುಂಪು ಉದ್ದೇಶಗಳನ್ನು ಕಾರ್ಯಗತಗೊಳಿಸುವುದಕ್ಕೆ ಸಾಕೆಂದು "ಸಿಕ್ಕ" ಅಥವ ೧೦೦ ರಲ್ಲಿ "ಮಿಕ್ಕ" ವ್ಯಕ್ತಿಗಳೊಂದಿಗೆ ಹಂಚಿಕೊಂಡು ಸಾಗಿದರೆ ಯಾವ ವೇಗದಲ್ಲಿ ಸಾಗಬಹುದು? ದೊಡ್ಡ ಓಟದ ಕುದುರೆಯಾಗುಲು ಸಾಧ್ಯವೆ? ಇದೆಲ್ಲವು ಕನ್ನಡ ಪರ ಉದ್ದೇಶದ"ಕೊನೆಯಾಟ"ದ ದಿಸೆಯ ಕಡೆಗೆ ಸಾಗುತ್ತದೆ. ಗಿಡದ ಬುಡ ದೊಡ್ಡದಾಗದೆ, ಚಿಗುರೊಡೆಯುವ ಮೊಗ್ಗು ಹೂವಾಗಿ ಅರಳಬೇಕ್ಕಾದ್ದು ಪೋಷಣೆಯಿಲ್ಲದೆ ಕಮರಿಹೋಗುತ್ತದೆ. ಇಲ್ಲಿ ಗಮನಿಸಬೇಕಾಗಿರುವುದೆ ಸಂಚಲನೆಯ ಕೊರತೆ.. ಏಕೆಂದರೆ ಇಂತಹ ಗುಂಪುಗಳು ಶುರುವಾಗುವುದೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು, ತಮ್ಮ ಗುರಿಯ ಬಗ್ಗೆ ಮಾತ್ರ ವಿಚಾರ ಮಾಡಿಕೊಂಡು ದಾರಿಯಲ್ಲಿ ಪರಿಚಯವಾದ ಬೇರೆಯವರ ಗುರಿಗೆ ಸ್ಪಂದಿಸದೆ "ನಾನು" ಯೋಜಿಸಿದ್ದು ಕಾರ್ಯಗತವಾದರೆ ಸಾಕು, ಬೇರೆ ಗುಂಪುಗಳಲ್ಲಿರುವ ವ್ಯಕ್ತಿಗಳು "ನನ್ನ" ಉದ್ದೇಶಕ್ಕೆ ಪೂರಕವಾಗಿ ಸಹಾಯ ಮಾಡುವವರು ಬಂದರೆ ತೊಂದರೆ ಇಲ್ಲ ಆದರೆ "ನನ್ನ" ಗುರಿ ಮೊದಲ ಆದ್ಯತೆ ಅಂತ ಲೆಖ್ಖಾ ಮಾಡುವುದರ ಫಲವಾಗಿದೆ ಅಂತ ನನ್ನ ಅಂಬೋಣ. ಇಲ್ಲ ಇರಬೇಕ್ಕಾದ್ದು "ನಾನು" ಆಯೋಜಿಸಿದ್ದು ಮೊದಲ ಆದ್ಯತೆ ಅಂತ ಅಲ್ಲ, "ನಾವು" ಕನ್ನಡಿಗರಾಗಿ ಕನ್ನಡ ಪರ ಕಾರ್ಯಗಳಿಗಾಗಿ ಹೆಗಲಿಗೆ ಹೆಗಲು ಕೊಟ್ಟು ಒಬ್ಬರಿಗೊಬ್ಬರು ನೆರವಾಗುತ್ತಿದ್ದೀವಾ? ಎಂಬ ಆಲೋಚನೆ ಮಾಡಬೇಕಾಗಿದೆ. ಎಲ್ಲಾರು ಎಲ್ಲದನ್ನು ಒಂದೆ ಸಮಯದಲ್ಲಿ ನಿರ್ವಹಿಸುವುದಕ್ಕೆ ಆಗುದಿಲ್ಲ, ಅದಕ್ಕೆ "time slicing" ಅನ್ನೋ concept ಬಳಸಿ ಯಾವ ಯಾವ ಗುರಿಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಹಿನ್ನಡೆಯಾಗುತ್ತಿದೆ ಎಂಬುವುದರ ಬಗ್ಗೆ ಆಲೋಚಿಸಿ ನಮ್ಮ ಕಾರ್ಯವೈಖರಿಯನ್ನು ಸಮಯಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ, ಹಿನ್ನೆಡೆಯೆ ಹೆಚ್ಚು ಯಾಕೆಂದರೆ ಇಂತಹ ಕೆಲಸಗಳಲ್ಲಿ ತೊಡಗುವವರು ನಮ್ಮ ದಿನ ನಿತ್ಯದ ಅಮೂಲ್ಯವಾದ ಸಮಯದಲ್ಲಿ ಒಂದು ಭಾಗದ ಸಮಯವನ್ನು ಇಂತಹ ಚಟುವಟಿಕೆಗಳಿಗೆಯೆ ಮುಡಿಪಾಗಿಟ್ಟಿರುತ್ತಾರೆ ಹಾಗಾಗಿ ಪರಿಸ್ಥಿತಿ ಒತ್ತಡಗಳಿಂದ ಹಿನ್ನೆಡೆ ಆಗುವುದು ಸಹಜ ಆದರೆ ಅದು ಆವರಿಗಿರುವ ಆ ನಿಟ್ಟು,ಗುರಿ ಸಾಧಿಸಬೇಕೆಂಬ ಛಲದ ಮುಂದೆ ಏನೇನೂ ಅಲ್ಲ. ಹಾಗಾಗಿ ಇಂತಹ ಧ್ಯೇಯ,ಉದ್ದೇಶಗಳು ಕಾರ್ಯಗತಗೊಳಿಸುವುದಕ್ಕೆ ನೆರವಾಗುವುದು ಪ್ರತಿಯೊಬ್ಬ ಕನ್ನಡಿಗನ ನಿಲುವಾಗಿರಬೇಕು. ಇಂತಹ ಉದ್ದೇಶವಿರುವ ಪ್ರತಿ ಗುಂಪಿನ "ಮುಖ್ಯ ವ್ಯಕ್ತಿಗೆ" ಅಥವ "ಒಬ್ಬ ವ್ಯ್ಯಕ್ತಿಗೆ" ಸಕ್ರಿಯವಾಗಿರುವ ಗುಂಪುಗಳು ಅಥವ ತೊಡಗಿಸಿಕೊಂಡಿರುವರ ಉದ್ದೇಶಗಳ ಕಿರುಪರಿಚಯವಿರುತ್ತದೆ ಆದರು ಸಹ ಆಲೋಚನೆಗಳನ್ನು ಹಂಚಿಕೊಳ್ಳುವುದರಲ್ಲಿ ಕ್ರಿಯಾಶೀಲರಾಗಿರುವುದಿಲ್ಲ್ಲ. ನಾನು ಗುಂಪುಗಳ ಮಧ್ಯೆ "ಅಹಂ"ನ ಘರ್ಷಣೆ ಬಗ್ಗೆ ಕೇಳಿದ್ದೇನೆ ಹೊರತು ಎರಡು ಸಂಘದವರು ಕೂತು ಮಾತನಾಡಿ ಪರಸ್ಪರ ಸಹಾಯ ಮಾಡುವ/ಪಡೆಯುವ ವಿಚಾರದ ಬಗ್ಗೆ ಕೇಳಿಲ್ಲ. ಪರಸ್ಪರ ಹೊಂದಾಣಿಕೆಯಿದ್ದಲ್ಲಿ ಬೇರೆ ಗುಂಪುಗಳ ಕಾರ್ಯಸೂಚಿಗಳ ಬಗ್ಗೆ ಎಂದಿಗೂ ಸಹ ಗುಂಪಿನ ಮೈಲ್/ಬ್ಲಾಗ್ ನಲ್ಲಿ ಉಲ್ಲೇಖವಾಗಿಲ್ಲ.. ಸೋಜಿಗ!!!! ಒಂದು ಗುಂಪಿನರು ಮತ್ತೊಂದು ಗುಂಪಿನವರೊಂದಿಗೆ ಸಂಪರ್ಕಿಸಿ, ಉದ್ದೇಶಗಳೇನು? ಕಾರ್ಯಗಳು ಹೇಗೆ ಸಾಗುತ್ತಿದೆ? ಸದ್ಯದ ಯೋಜನೆ ಏನು? ಸಹಾಯದ ಅವಶ್ಯಕತೆಯಿದೆಯೆ ಅಥವಾ ನಮ್ಮ ಗುಂಪಿನ ಚಟುವಟಿಕೆಗಳಿಗೆ ಅವರಿಂದ ಸಹಾಯ ಪಡೆಯಲು ಸಾಧ್ಯವೆ ಎಂಬ ಮಾಹಿತಿಯನ್ನು ಸಹ ಕಲೆ ಹಾಕುವ "ತೊಂದರೆ" ತೆಗೆದುಕೊಂಡಿದ್ದು ನನ್ನ ಗಮನಕ್ಕೆ ಬಂದಿಲ್ಲ.<br />
ಕರ್ನಾಟಕ ರಕ್ಷಣಾ ವೇದಿಕೆ - ಅಖಿಲ ಕರ್ನಾಟಕ ಕನ್ನಡ ಪರ ಸಂಘಗಳ ಒಕ್ಕೂಟವಾಗಿರದೆ ಮತ್ತೊಂದು ಕನ್ನಡ ಪರ ಸಂಘವಾಗಿದ್ದರೆ ಬಹುಶ: ಇವತ್ತಿಗೆ ಅದು ಜನಪ್ರಿಯವಾದಷ್ಟು ಆಗಲು ಸಾಧ್ಯವಿರುತ್ತಿರಲಿಲ್ಲ ಅನ್ನುವುದು ನನ್ನ ಅನಿಸಿಕೆ. ಕ.ರ.ವೇ ಯಲ್ಲಿ ನೀವು ಸಂಘರ್ಷ, ಸಂಘಟನೆ, ಸಂಚಲನೆ ಎಂಬ ಮೂರು "ಸಂ" ಗಳು ಕಾರ್ಯನಿರತವಾಗಿರುವುದನ್ನು ಕಾಣಬಹುದು. ಸಂಘರ್ಷವೆಂದರೆ ಹೋರಾಟ ಮಾಡುವುದು, ಪ್ರತಿಭಟಿಸುವುದು. ಸಂಚಲನೆಯೆಂದರೆ ಸಂಘಟನೆಯ ವಿಸ್ತಾರ,ನಿರ್ಮಾಣ ಹಾಗಿಗಿಯೆ ಇಂದು ನೀವು ಪ್ರತಿ ನಗರ,ಜಿಲ್ಲೆ,ಹಳ್ಳಿ ಗಳಲ್ಲಿ ಕ.ರ.ವೇ ಯ ಘಟಕವನ್ನು ಕಾಣಬಹುದು. ಸಂಘಟನೆಯೆಂದರೆ ಸಂಘದ ಬಲವರ್ಧನೆ ಇಂದು ಇಷ್ಟು ಘಟಕಗಳಿಗೆ ಜನಬೆಂಬಲ ಹಾಗು ದಿನೆ ದಿನೆ ಹೆಚ್ಚು ಜನಪ್ರಿಯವಾಗುತ್ತಿರುವುದೆ ಇದರ ಸೂಚಿ. ಹಾಗಾಗಿ ೧೦೦+ ಗುಂಪಿನಲ್ಲಿ ಹರಿದು ಹಂಚಿ,ಕಳೆದು ಹೋಗಿರುವ ಪ್ರತಿಭೆಗಳು ಒಟ್ಟಾಗಿ ಸೇರಿ ತಮ್ಮ ಯೋಜನೆಯ ಬಗ್ಗೆ ಇತರರೊಂದಿಗೆ ಚರ್ಚೆ ಮಾಡಿ ಸಹಾಯ ಒದಗಿಸಿ ಅಥವಾ ಪಡೆದು ಒಂದು ಮುಕ್ತವಾದ ಕನ್ನಡ ಪರ ನಿಲುವನ್ನು ತಾಳಬೇಕಾಗಿದೆ. ಪ್ರತಿ ಗುಂಪಿನ ವೈಶಿಷ್ಟ್ಯತೆ ಏನಪ್ಪ ಅಂದ್ರೆ ಅವರ ಗುಂಪಿನಲ್ಲಿ ಸಮಾಜದ ಹಲವಾರು ಗಣ್ಯವ್ಯಕ್ತಿಗಳು ಸದಸ್ಯರಾಗಿರುತ್ತಾರೆ ಆದರೆ ಸದ್ದೆ ಇರುವುದಿಲ್ಲ... ಮಾರ್ಗದರ್ಶಣಕ್ಕಾಗಿ ಆದರು ಅವರ ಮಾತು ಹೊರಬರುವುದೆ ಇಲ್ಲ... ಗುಂಪಿನ ಸದಸ್ಯರ ಎಣಿಕೆ ೨೦೦೦+ ಆದ್ರೆ ಕ್ರಿಯಾಶೀಲರಾಗಿರುವವರ ಸಂಖ್ಯೆ ೧೦-೧೨ :-o ಇದು ಖಂಡಿತವಾಗಲೂ ಪ್ರಗತಿಯ ಹಾದಿಯ ದಿಕ್ಸೂಚಿಯಲ್ಲ.<br />
ಈಗ ಉದಾಹರಣೆಗೆ ಒಂದು ವಿಷಯ ತೆಗೆದು ಕೊಳ್ಳೋಣ..<br />
ಸದ್ಯಕ್ಕೆ, ಬೆಂಗಳೂರಿನಲ್ಲಿರುವ schenider electric ಸಂಸ್ಥೆಯವರು ITI,s.s.l.c ಪಾಸ್ ಆದವರು ಅಥವ ನಪಾಸು ಅದವರಿಗು ಸಹ ಆದರೆ ಮುಖ್ಯವಾಗಿ ೧೮ ವಯೋಮಿತಿಯನ್ನು ದಾಟಿದವರಿಗೆ ಉಚಿತವಾಗಿ ೪ ತಿಂಗಳ "electrician course" ತರಬೇತಿ ಶಿಬಿರ ಏರ್ಪಡಿಸಿದ್ದಾರೆ ಅರ್ಜಿ ಹಾಕಲು ಕೊನೆಯ ದಿನಾಂಕ ೨೧ ಜನೇವರಿ ಅಂದರೆ ಇನ್ನು ೨ ದಿನಗಳ ನಂತರ!!!!, ತರಬೇತಿ ಮುಗಿದ ಮೇಲೆ schenider electric ಸಂಸ್ಥೆಯು "certified electrcian" ಅಂತ ಪ್ರಮಾಣ ಪತ್ರವನ್ನು ಸಹ ಕೊಡುತ್ತದೆ. ಇದು ನಮ್ಮ ನಿರುದ್ಯೋಗಿ ಕನ್ನಡಿಗರಿಗೆ ಬಳಸಿಕೊಳ್ಳಲು ಒಳ್ಳೆಯ ಸದಾವಕಾಶ, ಈ ವಿಚಾರವನ್ನು ನಾನು ಈಗಾಗ್ಲೆ ಹಲವು ಯಾಹೂ ಗುಂಪುಗಳಿಗೆ ಮೈಲ್ ಮಾಡಿದೀನಿ ಆದರು ಸಹ ಅವಶ್ಯಕತೆಯಿರುವ ಕನ್ನಡಿಗರನ್ನು ತಲುಪುತ್ತದೆ ಎಂಬ ನಂಬಿಕೆ ನನಗಿಲ್ಲ :-) ಅದಕ್ಕೆ ನನ್ನ ಸ್ನೇಹಿತರಿಗೆ ಕರೆ ಮಾಡಿ ಹಳ್ಳಿಯ ಕಡೆ ಸಂಪರ್ಕ ಇರುವವರಿಗೆ ಸಹ ತಿಳಿಸಿದ್ದೇನೆ ಯಾಕೆಂದರೆ ಇದು ಕೇವಲ ೨೧ ಜನೆವರಿ ತನಕ ಫಾರ್ವರ್ಡ್ ಮಾಡಲಾಗುವ ಒಂದು ಸುದ್ದಿಯಾಗೆ ಉಳಿದುಬಿಡಬಾರದು :-( .<br />
ಹೋದ ಸರ್ತಿ ಸಹ ಪೆಟ್ರೋಲ್ ಬಂಕ ನಲ್ಲಿ ನೇಮಕಾತಿ ನಡೆದಾಗ ಇಂತಹದೆ ಕರೆಬಂದಿತ್ತು ಆದರೆ ಅದು ತರಬೇತಿಯಲ್ಲದೆ ಕೆಲಸದ ವಿಚಾರವಾಗಿತ್ತು. ಸಂಬಳ ಕೇವಲ ೨೫೦೦/- ಅಂತ ಮೂಗು ಮುರಿದವರೆಷ್ಟೊ!!! ಆದ್ರೆ ಪರನಾಡಿನವರು ಇಂತಹ ಅವಕಾಶ ಬಿಡುತ್ತಾರೆಯೆ?? ಮೊದಲು ಒಳಗೆ ನುಗ್ಗಿ ನಂತರ ಕಿತಾಪತಿ ಆರಂಭಿಸುತ್ತಾರೆ.. ಈ ಸರ್ತಿಯೂ ಕೂಡ ಅದೆ ಪುನರಾವಾರ್ತಿಯಾಗ ಬಾರದೆಂದರೆ ನಾವು ಆದಷ್ಟು ಜನರಿಗೆ ಸುದ್ದಿ ಮುಟ್ಟಿಸಿ ಅವಶ್ಯಕತೆಯಿದ್ದವರನ್ನು ಸುದ್ದಿ ತಲುಪುತ್ತಿದೆಯೆ ಅನ್ನುವುದನ್ನು ನಿಂತು ನೋಡಬೇಕಾಗಿದೆ.<br />
"3ಸಂ"ಕೇವಲ ಔಪಚಾರಿಕವಾದ ಮಾತಾಗದೆ ಕಾರ್ಯಗತವಾಗುತ್ತದೆಯೆ ಎಂದು ಕಾದು ನೋಡಬೇಕಾಗಿದೆ...<br />
<br />
ರವಿ ಅಂತ ನನ್ನ ಸ್ನೇಹಿತ, rkrules(at)gmail(dot)com - ಈ ಐಡಿ ಗೆ ಮೈಲ್ ಮಾಡಿ ಹೆಚ್ಚಿನ ವಿವರ ತಿಳಿದುಕೊಳ್ಳಬಹುದು<br />
<br />
ವಿ.ಸೂ: ಈ ತರಬೇತಿಗೆ ಸಂಬಂಧಪಟ್ಟ ಕಡತವನ್ನು ತಿಳಿಸಿರುವ ಕೊಂಡಿಯಿಂದ ಡೌನ್ಲೊಡ್ ಮಾಡಿಕೊಳ್ಳಿ<br />
<br />
https://www.yousendit.com/download/WnBUZGVVNkdWRDkzZUE9PQ<br />
<br />
Dear All,<br />
<br />
Regarding the electrician training convey the following details to the<br />
referred candidates.<br />
<br />
Date of enrollment: 21st Jan 2009<br />
Time: 9.30am<br />
<br />
Electrician training Location:<br />
Aide et Action India<br />
iLead - Bangalore<br />
No.4, 2nd cross,<br />
7th Main, KSRTC layout<br />
J.P.Nagar 2nd Phase<br />
Bangalore 560078<br />
<br />
Contact: Srinivasan, Sridhara<br />
Office phone: 080-26592341, 9731920010, 9880720951,<br />
9731754107,9980514557<br />
<br />
Thanks and Best Regards<br />
Roshini D'Souza<br />
Senior Executive - BIPBOP<br />
Global Technology Centre<br />
Schneider Electric India Pvt Ltd<br />
Ph: 28417000 extn :6334<br />
Ph: 99642 82600prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-62425987851403033812010-06-29T22:36:00.000-07:002010-06-29T22:36:18.150-07:00ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...on January 8, 2009<br />
<br />
ಕನ್ನಡ ಬಿಗ್ ಎಫ್.ಎಮ್ ವಾಹಿನಿ ಕೇಳ್ತಾ ಇದ್ರೆ ತಲೆ ಆಡಿಸ್ಕೊಂಡು ಹೇಳ್ಬೇಕು ಅನ್ಸೋದು "ಕೇಳಿ.. ಕೇಳಿಸಿ... ಲೈಫ್ ನಿಮ್ಮದಾಗಿಸಿ.." ಅಂತ.. ಆದ್ರೆ ಅದು ಕೇವಲ ರೇಡಿಯೊ ವಾಹಿನಿಗಳಿಗೆ ಮಾತ್ರ ಸೂಕ್ತ ಆಗ್ತಿರೊದು ದು:ಖದ ಸಂಗತಿ. ಇಂದಿನ ಅಂತರ್ಜಾಲದ ಯುಗದಲ್ಲಿ ಐಟಿ/ತಂತ್ರಙ್ನಾನ ಪ್ರಿಯರಿಗೆ ಅತ್ಯಂತ ಪ್ರಿಯವಾದದ್ದು ಹಾಡುಗಳನ್ನು ಕದಿಯೊದು. ಹೌದು, ದುಡ್ಡು ಕೊಟ್ಟು ಹಾಡುಗಳನ್ನು ಕೊಳ್ಳದೆ ಡೌನ್ ಲೊಡ್ ಮಾಡುವುದು ಶಿಕ್ಷಾರ್ಹ ಅಪರಾಧ ಆದರೆ ಇದೆ ಕಾನೂನು ಆನ್ಲೈನ್ ಹಾಡು ಕೇಳುವುದುಕ್ಕೆ ಅನ್ವಯಿಸುವುದಿಲ್ಲ ಏಕೆಂದರೆ ಪ್ರತಿ ಬಾರಿ ಆ ತಾಣಕ್ಕೆ ಭೇಟಿ ಕೊಟ್ಟಲ್ಲಿ ಆ ತಾಣವು ಜನಪ್ರಿಯವಾಗುವ ಹಾಗೆ ರೇಟಿಂಗ್ ಆಗುತ್ತದೆ. ಇದರಿಂದ ಕಂಪನಿಗಳು ಆ ತಾಣದಲ್ಲಿ ತಮ್ಮ ಜಾಹಿರಾತು ಹಾಕಿ ಉತ್ಪನ್ನ/ಸಾಮಗ್ರಿಗಳನ್ನು ಮಾರುಕಟ್ಟೆ ಮಾಡುತ್ತದೆ ಹಾಗಾಗಿ ಈ ರೀತಿಯಿಂದ ಎಲ್ಲರು ದುಡ್ಡು ಮಾಡುತ್ತಾರೆ. ಬಹಳಷ್ಟು ಜನರಿಗೆ ಈ ಮಾಹಿತಿ ತಿಳಿದಿರುತ್ತದೆ ಆದರೂ ಸಹ ಅವುಗಳನ್ನು ಉಡಾಫೆ ಮಾಡಿ ಕದಿಯೋದು ಮುಂದುವರೆಸುತ್ತಾರೆ... after all, we are indians ಅಲ್ವಾ? ಕಾನೂನಿನ ಪ್ರಕಾರ ಯಾವುದನ್ನ ಸರಿಯಾಗಿ ಪಾಲಿಸಲಾಗುತ್ತದೆ ಅಂತ ಲೆಖ್ಖ ಹಾಕಿದರೆ ಬೆರಳೆಣಿಕೆಯದು ಸಿಗುತ್ತದೆ. ಹ್ಮ್ಮ್.. ಈಗ ಈ ಉಡಾಫೆಯ ಪ್ರವೃತ್ತಿಗೂ ನಮ್ಮ ದೇಶಕ್ಕೆ ಬಂದೊದಗಿರೊ ಅಥವಾ ಬಂದೊದಗಲಿರುವಂತಹ ಸಂಕಷ್ಟಕ್ಕೂ ಏನಪ್ಪಾ ಸಂಭಂದ ಅಂತ ಲೆಖ್ಖ ಹಾಕಿದರೆ ಪರಿಣಾಮ ಅಘಾದವಾದದ್ದು ಅಂತ ಊಹೆಗು ನಿಲುಕೋಲ್ಲ ಅಥವಾ ನಮ್ಗೇನು ಅನ್ನೊ ಮತ್ತೊಂದು ಧೋರಣೆ. ನಮಗೆ ನೇರವಾಗಿ ತೊಂದರೆ ಆಗೊವರೆಗು ಆ ವಿಚಾರ ನಮಗೆ ಸಂಭಂದಿಸಿದ್ದಲ್ಲ ಅನ್ನೊ (ದುರಾ)ಆಲೊಚನೆ ಸಹ ಒಂದು, ಏನೆ ಆದ್ರು ಈಗ ಪ್ರಸ್ತಾಪ ಆಗುತ್ತಿರುವ ವಿಷಯದಲ್ಲಿ ಹಾಡು ಕದಿಯುವ ಪ್ರತಿ ಭಾರತೀಯನ ನೇರ ಹಸ್ತವಿದೆ. ಈ ತೊಂದರೆಯ ಮೂಲ, ಅಂತರ್ಜಾಲದಲ್ಲಿ ಕನ್ನ ಹಾಕೊಕ್ಕೆ ಕಾಯ್ತ ಕೂತಿರೊ ಕಳ್ಳಕಾಕರರು, "hackers" ಅನ್ನೊದು ಸೂಕ್ತವಾದ ಪದ.<br />
ಇದಕ್ಕೂ ಹಾಡು ಕದಿಯೊಕ್ಕು ಹೆಂಗಪ್ಪಾ ಲಿಂಕು ಅಂತ ತಲೆ ಕೆರ್ಕೊಂಡ್ರೆ ಆಶ್ಚರ್ಯ ಇಲ್ಲ. ನೆರೆಮನೆಯಲ್ಲಿ ಕಾಯ್ಕೊಂಡು ಕೂತಿದಾರೆ ಹೆಂಗಪ್ಪ ಭಾರತದ ಗಣಕಯಂತ್ರಗಳನ್ನ ಲಗ್ಗೆ ಹಾಕೋದು? ಅಂತ ಅವರಿಗೆ ನೇರವಾಗಿ ಅಂತು ಆಕ್ರಮಣ ಮಾಡೊ talent ಇಲ್ಲ, ಗೊತ್ತಿರೋದೊಂದೆ ಬೆನ್ನ ಹಿಂದೆ ಚಾಕು ಹಾಕೋದು.. ಕತ್ತಿ ಮಸೆದುಕೊಂಡು ಕಾಯ್ತ ಇದಾರೆ, ನಾವು ಅವರಿಗೆ ಗುರಿಯಾಗುವುದೊಂದೆ ಬಾಕಿ, ಗುರಿ ಸಿಕ್ಕ ತಕ್ಷಣ ಎರಗುವುದರಲ್ಲಿ ಎರಡನೆ ಮಾತಿಲ್ಲ. ಇವೆಲ್ಲಾ ವಿಷಯ ಹೆಂಗೆ ಒಂದಕ್ಕೊಂದು ಹೊಸೆದುಕೊಂಡಿದೆ ಅಂದ್ರೆ ಭಾರತದ ಗಣಕಯಂತ್ರಗಳ ಮೇಲೆ ಲಗ್ಗೆ ಹಾಕೋಕ್ಕೆ ಅವರ ಹೊಸ ಅನ್ವೇಷಣೆ ಏನಂದ್ರೆ ಹಾಡಿನ ಜೊತೆ ವೈರಾಣು ತಂತ್ರಾಶ ಹೊಂದಿಸಿ ಸೆರ್ವರ್ ಗಳಲ್ಲಿ ಇಡುವುದು. ಅಮಾಯಕ ಭಾರತೀಯನೊಬ್ಬ ಹಾಡು ಕದಿಯೊಕ್ಕೆ ಹೋದರೆ ಹಾಡಿನ ಜೊತೆ ವೈರಾಣುವನ್ನು ಸಹ ಅರಿವಿಗೆ ಬಾರದಂತೆ ಗಣಕಯಂತ್ರದಲ್ಲಿ ತೂರಿಸುವುದು. ಪ್ರಶ್ನೆ ಬರಬಹುದು ವೈರಾಣು ತಡೆಗಟ್ಟುವ ತಂತ್ರಾಶವು ನಿಮ್ಮ್ ಬಳಿ ಲಭ್ಯವಿದೆಯಲ್ಲ ಅಂತ :-) ಇಲ್ಲೆ ನಾವು ಜಾಣ ಮೂರ್ಖರಾಗುವುದು, ಎಲ್ಲಾ ಪ್ರಸಿಧ್ಧ ವೈರಾಣು ತಡೆಗಟ್ಟುವ ತಂತ್ರಾಶವು ದಿನೆ ದಿನೆ ಬಿಡುಗಡೆ ಆಗುವ ವೈರಾಣುಗಳನ್ನು ಕನಿಷ್ಟ ಗುರುತಿಸುವಲ್ಲಿ ಶಕ್ತವಾಗಿರುವುದಿಲ್ಲ. ಆ ಕಂಪನಿಗಳು ಈ ವೈರಾಣುವನ್ನು ಗುರುತಿಸಿ ಲಸಿಕೆ ತಯಾರು ಮಾಡಿ process ಪ್ರಕಾರ ತಂತ್ರಾಶ ಬಿಡುಗಡೆ ಮಾಡುವ ಹೊತ್ತಿಗೆ ಬೇಕಾದಷ್ಟು ಹಾನಿ ಆಗಿರುತ್ತದೆ.<br />
ಕೊಳ್ಳೆ ಹೊಗೋದು ನಮ್ಮ ಅಮೂಲ್ಯವಾದ ಗುಪ್ತ/ವೈಯಕ್ತಿಕ ಮಾಹಿತಿ, ಅದನ್ನು ತೆಗೆದುಕೊಂಡು ಅವರೇನು ಮಾಡಿಯಾರು ಅಂತ ಬೀಗುವ ಅವಶ್ಯಕತೆ ಇಲ್ಲ. ದಿನಪತ್ರಿಕೆ ಓದೊ ಹವ್ಯಾಸ ಇರೊವ್ರಿಗೆ ತಿಳಿದಿರ್ಬೇಕು ಮಿಂಚೆಯ ಮೂಲಕ ಕೋಟಿಗಟ್ಟಲೆ(ಇಲ್ಲದಿರುವ) ಹಣದ ಆಸೆಗೆ ಲಕ್ಷಾಂತರ ಸುರಿದು ಮಣ್ಣು ತಿಂದ ಅಭಿಯಂತರರಿಗೆ ನಮ್ಮ ದೇಶದಲ್ಲಿ ಕೊರತೆಯಿಲ್ಲ. ಇವರೊಬ್ಬರೆ ಅಲ್ಲ, ಗಣಕ ಯಂತ್ರವನ್ನು ಉಪಯೊಗಿಸುವ ಪ್ರತಿಯೊಬ್ಬನು ಸಹ ಇದಕ್ಕೆ ಬಲಿಯಾಗುವ ಎಲ್ಲಾ ಸಾಧ್ಯತೆ ಇದೆ ಹಾಗು ತಮ್ಮ ಅಡ್ಡ್ರೆಸ್ಸ್ ಬುಕ್ ನ ಸಂಪರ್ಕದಲ್ಲಿರುವ ಪ್ರತಿಯೊಬ್ಬರನ್ನು ಸಹ vulnerable ಮಾಡ್ತಾರೆ. ಕಾಂಡಮ್ ಇಲ್ಲದೆ ಲೈಂಗಿಕ ಸಂಪರ್ಕ ಮಾಡಿ AIDSಗೆ ತಾವು ಬಲಿ ಆಗಿ ನಂಬಿದವರನ್ನು ಬಲಿಪಶು ಮಾಡೊ ಲೆಖ್ಖಾಚಾರ ಇಂತಹ ಕೆಲಸ. ಇವರೆಲ್ಲ ಬಲಿಯಾಗೋದೆ ತಮ್ಮ ಗುಪ್ತ/ವೈಯಕ್ತಿಕ ಮಾಹಿತಿ ಪರಕೀಯರ ಕೈಗೆ ಸಿಕ್ಕಿದ್ದರ ಫಲದಿಂದ, ಅಲ್ಲಿ, ಇಲ್ಲಿ ಹೋಗಿ ಸಿಕ್ಕ ಕಡೆ ಹಾಡು ಕದಿಯೊದ್ರಿಂದ. ಇದಕ್ಕೆಲ್ಲಾ ಮೂಲ ಸ್ಪೈ ವೇರ್ ಅನ್ನೊ ಒಂದು ವಿಧದ ವೈರಾಣುವಿನಿಂದ. ಈ ವೈರಾಣುವಿನ ಕೆಲಸ ತಾನು ಕೂತ ಗಣಕ ಯಂತ್ರದ ಮಾಹಿತಿಯನ್ನು ಮತ್ತೊಂದು ನಿಗದಿತ ಗಣಕ ಯಂತ್ರಕ್ಕೆ ಕಳುಹಿಸುವುದು. www.songs.pk ಎನ್ನುವ ಹಾಡಿನ ತಾಣದಿಂದ ಈ ಪರಿಯ ವೈರಾಣುಗಳು ಭಾರತದ ಗಣಕಯಂತ್ರಗಳ ಮೇಲೆ ಲಗ್ಗೆ ಹಾಕ್ತಾ ಇವೆ.. ನೀವು ಹೋಗಿ ಆ ತಾಣಕ್ಕೆ ಭೇಟಿ ಕೊಡೊದು, ಹಾಡು ಕದಿಯೋದು, ಕದ್ದ ಹಾಡನ್ನು ಹಂಚೋದು ಇದರಿಂದ ಲಿಂಕ್ ಹೆಚ್ಚು ಜನರಿಗೆ ತಲುಪುವುದು ಯಾವುದು ಬೇಡ, ಕದಿ ಬೇಡಿ... ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ... pk ಎನ್ನುವುದು ಪಾಕಿಸ್ತಾನದ ಸರ್ವರ್ ಅನ್ನು ಸೂಚಿಸುತ್ತದೆ, ದಯವಿಟ್ಟು ಈ ವಿಷಯವನ್ನು ಆದಷ್ಟೂ ಹರಡಿ, ವರದಿಯ ಪ್ರಕಾರ ಈಗಾಗಲೆ ೧೨ ಲಕ್ಷ ಭಾರತೀಯರು ಈ ತಾಣವನ್ನು ಹಾಡು ಕದಿಯಲು ತಮ್ಮನ್ನು ನೋಂದಣಿಸಿಕೊಂಡಿದ್ದಾರೆ. ಮುಖ್ಯ ವರದಿಗಾಗಿ ಉಲ್ಲೇಖಿಸಿರುವ ಕೊಂಡಿಯನ್ನು ನೋಡಿ<br />
<br />
http://in.news.yahoo.com/20/20090106/1416/tnl-pak-hackers-plan-attack-on-indian-cy.htmlprasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-36818384277090665862010-06-29T22:33:00.000-07:002010-06-29T22:33:50.823-07:00"೫.೫ ಲಕ್ಷ ಅಭಿಯಂತರಲ್ಲಿ ...ಗೇಟ್ಸ್, ಜಾಬ್ಸ್.." - ಜಾಣ ಕುರುಡೋ ಅಥವಾ ಇದೆ ವಾಸ್ತವವೋ?ಸಂಪದ.ನೆಟ್ ಎಂಬ ತಾಣದಿಂದ ಉಚ್ಛಾಟಿತನಾದ(ಕುತಂತ್ರದಿಂದ) ಮೇಲೆ ಅಲ್ಲಿ ಪ್ರಕಟಿಸಿದ್ದ ನನ್ನ ಎಲ್ಲಾ ಬರಹಗಳನ್ನು ಮತ್ತೊಮ್ಮೆ ಇಲ್ಲಿ ಪ್ರಕಟಿಸುತ್ತಿದ್ದೇನೆ ಅಷ್ಟೆ... <br />
<br />
March 5, 2009<br />
<br />
ಪ್ರತಾಪ್ ಸಿಂಹ ನವರ ಲೇಖನ "೫.೫ ಲಕ್ಷ ಅಭಿಯಂತರಲ್ಲಿ ...ಗೇಟ್ಸ್, ಜಾಬ್ಸ್.." ಅನ್ನೋ ಲೇಖನದ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ನಾನು ವ್ಯಕ್ತಪಡಿಸಿರುವ ವಿಚಾರಗಳು, ಅಭಿಪ್ರಾಯಗಳು ಪ್ರತಾಪ್ ಸಿಂಹ ಅವರ ಲೇಖನ ಪ್ರತಿ ವಾಕ್ಯಕ್ಕೂ ಉತ್ತರಿಸಲು ಪ್ರಯತ್ನಿಸಿದ್ದೇನೆ ಹಾಗಾಗಿ ಲೇಖನ ಓದಬೇಕಾದರೆ ಪ್ರತಾಪ್ ಸಿಂಹ ರವರ ಲೇಖನ ಹಾಗು ನನ್ನ ಈ ಬರಹ ಎರಡೂ ನಿಮ್ಮ ಗಣಕ ತೆರೆಯ ಮೇಲಿದ್ದು ಅವರ ಲೇಖನದ ಒಂದು ಸಾಲು ಓದಿ ತದನಂತರ ಆ ಸಾಲಿಗೆ ನನ್ನ ಅನಿಸಿಕೆ/ಅಭಿಪ್ರಾಯ/ವಾದ/ಸಮರ್ಥನೆಯನ್ನು ನನ್ನ ಬರಹದಲ್ಲಿ ಓದಿದರೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುವುದನ್ನು ಮರೆಯಬೇಡಿ..<br />
<br />
ಅವರ ಲೇಖನದ ಕೊಂಡಿಗಳು : <br />
೧. http://www.vijaykarnatakaepaper.com/epaper/pdf/2009/02/28/20090228a_008101003.jpg<br />
೨. http://www.flickr.com/photos/36033019@N02/3329709427/<br />
೩. http://www.pratapsimha.com/bettale-jagattu/ಐದೂವರೆ-ಲಕ್ಷ-ಎಂಜಿನಿಯರ್%e2%80%8cಗಳ/<br />
<br />
ನಿಮ್ಮ ಸಮಯಕ್ಕೆ ಧನ್ಯವಾದಗಳು<br />
<br />
ನಮಸ್ಕಾರ ಪ್ರತಾಪ್ ಅವರೇ ,<br />
ನಾನು ನಿಮ್ಮ ಬರವಣಿಗೆಯ ಅಭಿಮಾನಿ ಇಂದಿಗೂ ಸಹ, ಯಾಕಂದ್ರೆ ನೀವು ಆಯ್ಕೆ ಮಾಡ್ಕೊಳ್ಳೋ ವಿಚಾರ, ಅದನ್ನ ತೆರೆದಿಡುವ ರೀತಿ, ಮನ ಮುಟ್ಟುತ್ತೆ ಹಾಗಾಗಿ ನೀವು ಓದುಗನಿಗೆ ಹತ್ತಿರ ಆಗ್ತೀರ. ನಿಮ್ಮ websiteಗೆ ನಾನು regular visitor, ನೂರಾರು ಅಭಿಮಾನಿಗಳ ತರಹ!! ಇವೆಲ್ಲ ನಿಮಗೆ ಗೊತ್ತಿರೋ ವಿಚಾರ ಅನ್ನೋದು ಸಹ ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಿಮ್ಮ ಮೊದಲನೆಯ ಲೇಖನಕ್ಕೆ (ಕುರುಡು ಕಾಂಚನ ...ಕ್ಕೆ) sequel ಥರ ಬರ್ದಿರೋ ನಿಮ್ಮ ಎರಡನೇ ಲೇಖನ (೫.೫ ಲಕ್ಷದಲ್ಲಿ ಗೇಟ್ಸ್, ಜಾಬ್ಸ್,.... ), ಅದ್ರಲ್ಲಿ ಮುಂದಿಟ್ಟಿರುವ ಪ್ರಶ್ನೆಗಳು, ಉತ್ತರಿಸಬೇಕಾದವರಿಗೆ ತಲುಪಿರೋದೆ ಇಲ್ಲ ಅನ್ಕೊಂಡಿದೀನಿ ಯಾಕಂದ್ರೆ ನೀವು ಒತ್ತಿ ಒತ್ತಿ ಉಲ್ಲೇಖ ಮಾಡಿರೋ ಇನ್ಫೋಸಿಸ್ ಹಾಗು ವಿಪ್ರೊ ಚೇರ್ಮನ್ ಗಳು ಕನ್ನಡ ದಿನಪತ್ರಿಕೆ ಓದ್ತಾರೆ ಅನ್ನೋದೇ ನನ್ನ ಮೊದಲನೆಯ ಸಂಶಯ. ಹಾಗಾಗಿ ನಿಮ್ಮ ಅರ್ಧ ಪ್ರಶ್ನೆ (ಬಂಡವಾಳ ಶಾಹಿತನ್ನಕ್ಕೆ ಸಂಬಂಧಿತ ಪ್ರಶ್ನೆ) ಗೆ ಉತ್ತರ ಸಿಗೋದೆ ಇಲ್ಲ. ನೀವು ಬರೀತಾ ಬರೀತಾ, ರವಿ ಬೆಳೆಗೆರೆ S.L.ಭೈರಪ್ಪನವರ (ಮತಾಂತರ ವಿಚಾರ...) ಬಗ್ಗೆ ಬರೆದ ಹಾಗೆ ಈ ಲೇಖನ ಕಾಣ್ತಿದೆ. ವ್ಯತ್ಯಾಸ ಇಷ್ಟೇ, ರವಿ ಬೆಳೆಗೆರೆ ಸ್ಲ್ಭೈರಪ್ಪನವರ ವಿರುದ್ದ ಹರಿಹಾಯ್ದರು ನೀವು IT ಉದ್ಯಮದ ವಿರುದ್ಧ, ಅಷ್ಟೇ. ಇಬ್ಬರ ವಾದದಲ್ಲೂ research ನ ಕೊರತೆ ಎದ್ದು ಕಾಣುತ್ತೆ. ರವಿ ಬೆಳೆಗೆರೆ, S.L.ಭೈರಪ್ಪನವರ ಲೇಖನದ ಪರ/ವಿರುದ್ಧ ಮಾತಡೋದು ಬಿಟ್ಟು ವೈಯಕ್ತಿಕ ಆಗಿ ಹೋದ್ರು. SLB ಅಂತಹ ಮಹಾನ್ ಲೇಖಕರನ್ನೇ ೫ ಕೋಟಿ ಕನ್ನಡಿಗರ ಎದುರು ಜರೆದರು, ಈಗ ತಾವುಗಳು ಅದೇ ೫ ಕೋಟಿ + ಜಗತ್ತಿನ ನಾನಾ ಮೂಲೇಲಿ ಹೆಂಗೋ ಬದುಕಿಕೊಂಡು ಕೆಲಸ ಮಾಡ್ತಿರೋ ಅನಿವಾಸಿಗಳ ಎದುರಿಗೆ ನಾರಾಯಣ್ ಮೂರ್ತಿ, ಅಜಿಮ ಪ್ರೇಮ್ಜಿ ಅನ್ನೋರನ್ನೇ ಮಧ್ಯೆ ಎಳೆದು "idea" ಕೊಡ್ತಿದೀರ IT Industry ಹೇಗೆ ನಡೆಸಬೇಕಿತ್ತು ಅಂತ.<br />
<br />
IT Industry ಕೇವಲ ನಾರಾಯಣ್ ಮೂರ್ತಿ ಅಥವ ಅಜಿಮ ಪ್ರೇಮ್ಜಿ ಇಂದ ನಡಿಬೇಕಿಲ್ಲ, ಅಷ್ಟಕ್ಕೂ ಕನ್ನಡಿಗರೇ ಮೂಲೆ ಗುಂಪು ಆಗಿರೋ ಈ ಕಂಪನಿಗಳಲ್ಲಿ, ನಮ್ ನೆಲದಲ್ಲಿ ಇದ್ಕೊಂಡು ನಮ್ಮವರನ್ನೇ ಅಸಡ್ಡೆ ಮಾಡಿರೋ ಇಂತಹ ಕಂಪನಿ ನಂಬಿಕೊಂಡು ಕನ್ನಡಿಗರು ಹೊಟ್ಟೆ ಹೊರೆದುಕೊಳ್ತಿಲ್ಲ ಕೆಲವು % ಬಿಟ್ರೆ, ಯಾಕಂದ್ರೆ ಕನ್ನಡಿಗರು ಈ ಕಂಪನಿಗಳಲ್ಲಿ minority sector!!! ಒಂದಷ್ಟು service related ಕಂಪನಿಗಳನ್ನೇ ಬೊಟ್ಟು ಮಾಡಿ ತೋರಿಸಿ ಇದೆ IT Industry ಅನ್ನೋದ್ರಲ್ಲಿ ಯಾವ ಅರ್ಥವೂ ಇಲ್ಲ. ನಿಮ್ಮ ಲೇಖನದಲ್ಲಿ ಮೊದಲಿಗೆ ಪ್ರಸ್ತಾಪ ಮಾಡಿರೋದು ಗತ ಕಾಲದ ವೈಭವ... ಸತೀಶ್ ಧವನ್, ಅಬ್ದುಲ್ ಕಲಾಮ್ ಅವರು "ಅಂದು" ಮಾಡಿದ್ದು "ಇಂದು" ಹೇಳ್ತಾ ಇದ್ದೀರಾ, ಹಾಗಾದರೆ "ಇಂದಿ"ನವರು ಏನು ಮಾಡ್ತಿದಾರೆ ಅನ್ನೋದು ವಿವರಿಸಲೇ ಇಲ್ಲ? "ಇಂದಿನವರು" ಹಳೆ ಕಥೆ ಹೇಳ್ಕೊಂಡು ಎದೆ ತಟ್ಕೊತಿದಾರ ಅಂತ ಅನುಮಾನ ಕಾಡ್ತಿದೆ!!! ಅಷ್ಟಕ್ಕೂ "ಇರೋ ಅಷ್ಟರಲ್ಲೇ" "ಅಂದೇ" "ಅಷ್ಟು" ಸಾಧನೆ ಮಾಡಿದವರಿಗೆ "ಇಂದು", "ಇರೋ ಇಷ್ತೆಲ್ಲದರಲ್ಲಿ" "ಏನು ಹೊಸತು ಮಾಡಿದಾರೆ"??? ಮತ್ತೊಬ್ಬ ಕಲಾಮ್, ಸತೀಶ್ ಧವನ್ ಹುಟ್ಲೇಇಲ್ಲ ಯಾಕೆ ಪ್ರಶ್ನೆ ಬರಲಿಲ್ಲ ನಿಮಗೆ?? ಅವೇ ಉಪಗ್ರಹಣ maintain/service ಮಾಡ್ಕೊಂಡು ತಾನೇ ಕೂತಿರೋದು ಈಗಿನವರು, ಅಥವಾ ಅಂಥಾದ್ದೆ "product"ಗಳನ್ನ manufacture ಮಾಡ್ತಿದಾರೆ ಅಲ್ವ, ಅಥ್ವಾ ಯಾರಿಗೂ ತಿಳಿಯದ ಹಾಗೆ fuel ಇಲ್ದೆ ಉಡಾಯಿಸೋ "innovation" ಮಾಡ್ತಿದಾರೆ ಹೇಗೆ? NAL/HAL/DRDO/BHEL/ITI/BEL/BSNL ಇವೆಲ್ಲ ಲಕ್ಷಾಂತರ ಜನರನ್ನ "ಸಾಕ್ತಿರೋ" public sector ಗಳು, ಏನು "innovate" ಮಾಡಿ ಯಾವ "product" ಬಿಡುಗಡೆ ಮಾಡ್ತಿದಾರೆ ಅನ್ನೋದಕ್ಕೆ ಉತ್ತರ ಹುಡುಕಿದರು ಸಿಗೋದಿಲ್ಲ. ನೀವು ಸಹ ಎತ್ತಿ ತೋರಿಸೋಕ್ಕೆ ಹಿಂಜರಿದಿದ್ದೀರ ಅಲ್ವ!! ಅಥವಾ ಕಮ್ಮಿ ಸಂಬಳ ತೊಗೊಂಡು ಸರ್ಕಾರಿ ಕಛೇರಿಗಳಲ್ಲಿ ಓತ್ಲಾ ಹೊಡೆಯೋದನ್ನ ಸಮರ್ಥಿಸ್ತಿದೀರ?? ಏನು ಅರ್ಥ ಆಗ್ಲಿಲ್ಲ, IT ಉದ್ಯಮದವರ ಮೇಲೆ ಆರೋಪ ಒಂದನ್ನು ಬಿಟ್ಟು!!!<br />
<br />
ಅಲ್ಲ ನೀವೇ ಪ್ರಸ್ತಾಪ ಮಾಡಿದೀರಲ್ಲ SLV ಅಂದ್ರೆ Sea Loving Vehicles, ೨೦ ಕೋಟಿ ನೀರಿಗೆ, ೩೦ ಕೋಟಿ ಬಂಗಾಳ ಕೊಲ್ಲಿಗೆ ಅಂತ, ಇವೆಲ್ಲ ಮಾಧ್ಯಮದವರೇ ಮುದ್ದಾಗಿ ಅಚ್ಚು ಹಾಕಿ ಪ್ರಕಟಿಸಿದರು ಅಂತ. ಮುಳುಗ್ತಿರೋವ್ನಿಗೆ ಎಂದೂ ಹುಲ್ಲು ಕಡ್ಡಿ ಸಹ ಕೊಟ್ಟು ಬದುಕಿಸಿದ ಉದಾಹರಣೆಗಳೇ ಇಲ್ಲ, ಕಿತ್ಹೊಗಿರೋ ಮಾಧ್ಯಮದಲ್ಲಿ, ಏನಿದ್ರು ಬಿಸಿ ಬಿಸಿ ಸುದ್ದಿ, head lines ಇಷ್ಟೇ ಬೇಕಿರೋದು. ಯಾರು ಸತ್ರೆಷ್ಟು ಬಿಟ್ರೆಷ್ಟು? ೧೫೦೦ pink chaddi parcel ಮಾಡಿರು, ಪಬ್ ಗೆ ಹೋಗೋದೇ ಸ್ತ್ರೀ ಸಮಾನೆತಯೇ ಹಕ್ಕುಗಳು ಅಂತ ಬೇಕಾದ್ರೆ ಇಡಿ ಪುಟ ಬರದು ಬರದು, ಬೇಡದೆ ಇರೋ ವಿಚಾರಗಳನ್ನ ಓದುಗನ ಮನಸ್ಸು(ಆ ಕಡೆ ಹೋಗದೆ ಇದ್ರೂ ಸಹ) ತಲೆಗೆ ತುರುಕಿ, ಇದು ಪ್ರತಿ ಮಹಿಳೆ ಯೋಚನೆ ಮಾಡ್ಬೇಕಾಗಿರೋ ವಿಚಾರ ಅಂತ "ಆಲೋಚನೆಗಳನ್ನೇ" ಹೇರೋ ಪ್ರಯತ್ನ ಮಾಡಿ ಅದ್ರಲ್ಲಿ ಸಾಕಷ್ಟು ಫಲಕಾರಿ ಆಗೋ ಹಾಗೆ ಕೂಡ ಮಾಡ್ತೀರ. ಈಗ್ಲೂ ಅದೇ ಮಾಡ್ತಿದೀರ IT ಬಗ್ಗೆ ಸರಿಯಾದ ಮಾಹಿತಿ ಕೊಡದೆ ನಾಲ್ಕು ಕಂಪನಿ ಕಡೆ ಬೊಟ್ಟು ಇವೆ ಎಲ್ಲಾ, ಹಿಂಗೆ ಎಲ್ಲಾ ಅಂತ ಹೇರ್ತಾ ಇದ್ದೀರಾ. ಪಾಪ ತಿಳಿಯದೆ ಇರುವವರು ನಿಮ್ಮ ಮಾತನ್ನೇ ನಂಬಿ, ನಿಮ್ಮ ಲೇಖನದ ಪರವಾಗಿ ತಲೆ ಆಡಿಸೋಕ್ಕೆ ಶುರು ಮಾಡಿದಾರೆ ಅಂತ!!! ನಾನು ನಿಮ್ಮ ಮೇಲೆ ದೂಷಣೆ ಮಾಡೋದು ಎಷ್ಟು ಸರಿ? ನೀವು ಅಂಕಣಕಾರರು ಅಂತ ಬೇರೆ ಯಾರೋ ಮಾಡಿದ ತಪ್ಪಿಗೆ ನಿಮ್ಮ ದೂಷಿಸೋಕ್ಕೆ ಆಗೋಲ್ಲ ಅಲ್ವ, ಹಾಗೆಯೇ ಒಂದಷ್ಟು ಬೆರಳೆಣಿಕೆಯ service ಕಂಪೆನಿಗಳು ಇಡಿ IT industry ಅನ್ನೇ represent ಮಾಡುತ್ತೆ ಅನ್ನೋ ನಿಮ್ಮ ವಾದ ಸಹ ಅಷ್ಟೇ ತಪ್ಪು.<br />
<br />
ನಮ್ ದೇಶದಲ್ಲಿ ಮನುಷ್ಯನಿಗೆ ಬೆಲೆ ಇಲ್ಲ (ಅದಕ್ಕೆ ಅಲ್ವ ಸಾವಿರಾರು ಬಲಿ ಆದರು ಯಕಶ್ಚಿತ್ ಒಬ್ಬ terrorist ಗೆ ನೇಣುಗಂಬ ಹತ್ತಿಸೋಕ್ಕೆ ಆಗದೆ ಇರೋ ಷಂಡತನ ಇರೋದು)... ಅದಕ್ಕೆ cheap labour ಧಂಡಿಯಾಗಿ ಸಿಗೋದು. ಬೇಕಿದ್ರೆ ಬಾ ಇಲ್ಲಾಂದ್ರೆ ಬಿಡು ಅಂತಾರೆ. ತಲೆ ಇರೋ ತಲೆಗಳಿಗೆ ಏನ್ರಿ ಕೊರತೆ ನಮ್ ದೇಶದಲ್ಲಿ!!! so half rate cheap rate ಅಂತ ನಮ್ಮ talent ನ ಅಗ್ಗಕ್ಕೆ ಮಾರಿಕೊಳ್ಳಬೇಕಾಗುತ್ತೆ, ಮನುಷ್ಯನಿಗೆ ಹೊಟ್ಟೆ ಮುಖ್ಯ, ಮಣ್ಣು ತಿನ್ಕೊಂಡು ಬದುಕೋಕ್ಕೆ ಆಗೋಲ್ಲ, ಈ ಜಗತ್ತಿನಲ್ಲಿ ಹಸಿವೆ ಅನ್ನೋದು ಇಲ್ದೆ ಇದ್ದಿದ್ರೆ ಈ ದರಿದ್ರತನ ಅನ್ನೋದೇ ಇರ್ತಿರ್ಲಿಲ್ಲ, ಎಲ್ಲಾರ್ ಮಾಡೋದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತಾನೇ. ಮುಂಬೈನಲ್ಲಿ ಮರಾಠಿಗರು, ಬಿಹಾರಿಗಳ ವಿರುದ್ಧ ಕರ್ನಾಟಕದಲ್ಲಿ ಆದ ಘಟನೆಗಳೇ ಇವಕ್ಕೆ ನಿದರ್ಶನ. ನಾವು cheap ಆಗಿ ಒಳ್ಳೆ ಗುಣಮಟ್ಟ ಕೆಲಸ ಮಾಡ್ತೀವಿ ಅದಕ್ಕೆ ನಮ್ ಹತ್ರ ಬರ್ತಾರೆ, ಮನೆ ಕತ್ತಿಸೋನಿಗು ಸಹ cheap architect, cheap ಮೇಸ್ತ್ರಿ, cheap raw materials ಬೇಕಿರೋದು ಇದೆಲ್ಲದರ ಮೇಲೆ ಅದು ಗುಣಮಟ್ಟದ್ದು ಆಗಿರೋ ಅಂಥಾದು ಇರ್ಬೇಕು.<br />
<br />
ವ್ಯವಹಾರ ಮಾಡೋಕ್ಕೆ ವಸ್ತುವಿನಲ್ಲಿ ಗುಣಮಟ್ಟ ಇರ್ಬೇಕು, ಆಗ್ಲೇ ಒಳ್ಳೆ ಬೆಲೆ ಸಿಗೋದು. ಈ ಗುಣಗಳು ನಿಮ್ಮಲ್ಲಿ ಇಲ್ಲ ಅಂದ್ರೆ ನೀವು ಅಂಕಣಕರ್ತ ಆಗ್ತಿರ್ಲಿಲ್ಲ. ನೀವು ನಾಳೆ ದಿನ ವಿಶ್ವೇಶ್ವರ್ ಭಟ್ ಅವರಿಗೆ, ನಂಗೆ ತಿಂಗಳಿಗೆ ೧ ಲಕ್ಷ ಸಂಬಳ ಬೇಕು ಅಂತ demand ಮಾಡಿದ್ರೆ ಓಡಿಸ್ತಾರೆ. paper circulation, ಅಷ್ಟು revenue generate ಮಾಡಿದ್ರೆ ಕೊಡ್ತಿದ್ರೆನೋ ಆದ್ರೆ ಆಗೋ ಒಂದಷ್ಟು ಲಕ್ಷ ಕಾಪಿಗೆ ನೀವು ೧,೦೦,೦೦೦ ಕೇಳೋದ್ರಲ್ಲಿ ಅರ್ಥವೇ ಇರೋಲ್ಲ ಅನ್ನೋದು ನಿಮಗೂ ತಿಳಿದಿರುತ್ತೆ. IT ಳು ಸಹ ಹಿಂಗೆನೆ ನಾವು ಗುಣಮಟ್ಟದ ಕೆಲಸ ಮಾಡಿಲ್ಲ ಅಂದ್ರೆ ಕಾಂಚನ, ಝನ ಝನ ಅನ್ನೋಲ್ಲ.. ಜಾಗತಿಕ ಮಾರುಕಟ್ಟೆ ಅವಲಂಬಿತ ಆಗಿರೋದಕ್ಕೆ ಅಷ್ಟು ಸಂಬಳ. ನಿಮಗೆ ಈಗ ೨೦-೨೫೦೦೦ ಬರ್ತಿರ್ಬಹುದು, ಇದೆ ಸಂಬಳ ಲೆಕ್ಕ ಹಿಡಿದು, ನೀವು ಬರೆಯೋ ಉತ್ಕೃಷ್ಟ ಲೇಖನಗಳನ್ನ ರಾಷ್ಟ್ರೀಯ ಮಟ್ಟದಲ್ಲಿ ಬರೆಯೋ ಅಂಕಣಕಾರ ತೊಗೊಳೋ ಸಂಭಾವನೆಗೆ compare ಮಾಡಿದ್ರೆ ನೀವು ಸಹ cheap labour ಅನ್ನೋದ್ರಲ್ಲಿ ಸಂಶಯ ಉಳಿಯೋಲ್ಲ. cheap labour ಅನ್ನೋದು ತುಂಬಾ relative ಪದ, ಅದನ್ನ ಸಂ ಸುಮ್ನೆ high cost country ಗೆ ಹೊಲೀಸಿ ಇಲ್ಲಿನವರು cheap labour ಅನೋದ್ರಲ್ಲಿ ಏನು ಹುರುಳಿಲ್ಲ. ಒಂದ್ ವಿಷ್ಯ ತಿಳ್ಕೊಳ್ಳಿ, ನಮ್ ದೇಶದ ಹಲವಾರು IT ಕಂಪೆನಿಗಳು ಶ್ರೀಲಂಕ, ಫಿಲಿಪೈನ್ ನತ್ತ ಮುಖ ಮಾಡಿವೆ, ಅಲ್ಲಿ cheap labour ಸಿಗುತ್ತೆ ಅಂತ, ಬೇಕಿದ್ರೆ ಈ ಮಾತು survey ಮಾಡಿ, ಸುಮ್ನೆ ನಾನಿಲ್ಲಿ ಉಲ್ಲೇಖ ಮಾಡ್ತಿಲ್ಲ . ಈ ಲೆಕ್ಕ ತೊಗೊಂಡ್ರೆ ನಾವು ಅವರಿಗಿಂತ great ಅಲ್ವ!! ಈಗ ಅಲ್ಲೊಬ್ಬರು ಪ್ರತಾಪ್ ಸಿಂಹ ಇದ್ರೆ ನಿಮ್ಮ ಲೇಖನವನ್ನೇ ಅವರ ದೇಶಕ್ಕೆ ಹೊಂದುವಂತೆ ತರ್ಜುಮಿಸಿ ಪ್ರಕಟಿಸಬಹುದು ಅಲ್ವ .<br />
<br />
ವಿಜಯನಗರ, ಹಂಪೆ ಎಲ್ಲವೂ ನಮ್ ನಾಡಿನದ್ದೆ ಹಾಗಂತ ಅದರ ಗತ ವೈಭವ ಹೇಳ್ಕೊಂಡು ಕೂತರೆ ಈಗ ಅಲ್ಲಿ ಕಾಣ್ಸೋದು ಹಾಲು ಬಿದ್ದ ದೇವಸ್ಥಾನಗಳು, ಕುಡುಕರು, ವ್ಯಭಿಚಾರಿಗಳು, ಮಾದಕ ವ್ಯಸನಿಗಳು.ಹಂಗಿದ್ದಿದ್ದು ಹಿಂಗ್ಯಾಕೆ ಆಯ್ತು? ಪ್ರತಿ ೬-೭ ವರ್ಷಕ್ಕೊಮೆ ಏಳು/ಬೀಳೋ ಈ IT ಯಾ life cycle ಬಗ್ಗೆ ಇಷ್ಟೆಲ್ಲಾ (ಅಪ)ಪ್ರಚಾರ ಯಾಕೆ? ಜಗತ್ನಲ್ಲಿ globalization ಗೆ ಹೊಂದಿಕೊಂಡು ಕೆಲಸ ಮಾಡ್ತೀರೋ ಪ್ರತಿ ದೇಶವು ಸಹ ಒಂದು ಕಂಪನಿಗೆ ಏನಾದ್ರೂ ಆದ್ರೆ ಅದರ adverse effect ಇದಕ್ಕೆ ಆಗೋದು ಸಹಜ, ಈಗ ಮನೇಲಿ ಒಬ್ರಿಗೆ ಫ್ಲೂ ಬಂದ್ರೆ ಅದು ಮನೆಯವರೆಲ್ಲರಿಗೂ ಹರಡೋಲ್ವೆ? ಹಾಗೇನೆ ಇದು ಸಹ. ಅಂಥಾದ್ರಲ್ಲಿ ತಾವೂ ಗಾಬರಿ ಬಿದ್ದು, ಇತರರನ್ನು ಗಾಬರಿ ಬೀಳಿಸಿ, ಜಗತ್ತೇ ಮುಳುಗಿ ಹೋಯ್ತು ಇನ್ಮೇಲೆ ಅಂಧಾಕಾರದ ಜೀವನ ಅನ್ನೋ ರೀತಿ ಬಿಂಬಿಸೋದು ಎಷ್ಟು sari. BJP ಕರ್ನಾಟಕದಲ್ಲಿ ಇರೋ ಒಂದೇ ಕಾರಣಕ್ಕೆ ಕೇಂದ್ರ ಸರ್ಕಾರ ನಮಗೆ ತಾರತಮ್ಯ ಮಾಡ್ತಿರೋದು ತಿಳಿದ ವಿಷಯವೇ ಅಲ್ವ. ಮಲತಾಯಿ ಧೋರಣೆ ಇಂದ ಅಗತ್ಯ ಇರೋ ಅಷ್ಟು ವಿದ್ಯುತ್ಚಕ್ತಿ ಕೊಡದೆ ಇರೋದು ಮುಂದುವರೆದರೆ ಆಗ ಮಾತ್ರ ಅಂಧಕಾರತೆ ಆಗೋದು ನಮ್ಮಲ್ಲಿ :). IT ನ ಏಳು ಬೀಳುವಿನಲ್ಲಿ ಅಲ್ಲ<br />
<br />
ISRO ಎಂಟು ಉಪಗ್ರಹಾನ ಒಮ್ಮೆಲೇ, ಒಂದೇ ಉಡಾವಣ ವಾಹಕದಿಂದ ಹಾರಿಸಿದ್ದರ ಹಿಂದೆ IT ಇಲ್ಲ ಅನ್ಕೊಂಡಿದೀರ?? ನಿರ್ಜೀವವಾದ mobile ಗೆ ಜೀವ ತುಂಬೋದು ISRO ಉಪಗ್ರಹ ಮಾತ್ರ ಅನ್ನೋದು ಅಂತ ನೀವು ಅನ್ಕೊಂದಿದ್ರೆ ಅದು ನಿಮ್ಮ ಬ್ರಾಂತು ಅಷ್ಟೇ. ಇಂಥಹ ನಿಮ್ಮ ವಿಷಯ ಜ್ಞಾನ ಅಳೆಯೋ ದುಸ್ಸಾಹಸಕ್ಕೆ ನಾನು ಕೈ ಹಾಕೋ ಧೈರ್ಯ ಮಾಡೋಲ್ಲ. ಖಚಿತ ತಂತ್ರಾಂಶ (embedded software) ಅನ್ನೋ ಒಂದು ವಿಭಾಗ ಇದೆ IT ಯಲ್ಲಿ, ಅದು ಇಲ್ದೆ ಈ BHEL/BEL ತಯಾರಿಸೋ IC (integrated chip) ಎಲ್ಲಾ ವೇಸ್ಟ್. ನೀವು ಉಲ್ಲೇಖ ಮಾಡಿದ "ಜೀವ ತುಂಬಿಸೋ" ಕಾರ್ಯಕ್ರಮಕ್ಕೆ ISRO ಅವರು ಅಮದು ಮಾಡಿಕೊಳ್ಳುವ ಪ್ರತಿ processors/ micro-controller ಗಳನ್ನ, ಖಚಿತ ತಂತ್ರಾಂಶದ ಸಹಾಯದಿಂದ ಹೃದಯ ಬಡಿತ ಶುರು ಮಾಡದೆ ಇದ್ರೆ, ಕಿಲೋ ಲೆಕ್ಖದಲ್ಲಿ ತೂಕಕ್ಕೆ ಹಾಕಿದ್ರು ತೊಗೊಳೋರು ಗತಿ ಇರೋಲ್ಲ, ಇನ್ನ "ಜೀವ ತುಂಬೋದು(ಚೇತನ ಬರಿಸೋದು)" ಆಮೇಲಿನ ಮಾತು.<br />
<br />
ಬೆಂಗಳೂರಲ್ಲಿ ಕೂತ್ಕೊಂಡು ಅಮೇರಿಕ, ಬ್ರಿಟನ್, ಜರ್ಮನಿ ಜೊತೆ ಕೆಲಸ ಮಾಡಲು ಸಾಧ್ಯ ಆಗಿರೋದು ಕೇವಲ ISRO/CDoT ಒಂದೇ ಮುಖ್ಯ ಅಲ್ಲ ವ್ಯವಹಾರಕ್ಕೆ ಅಗತ್ಯ ಇರೋ ತಂತ್ರಾಂಶ ಸಹ ಅಷ್ಟೇ ಮುಖ್ಯ. ಸಂಪರ್ಕ ಇದ್ಬಿಟ್ರೆ ಸಾಕಾಗೋಲ್ಲ ಅಗತ್ಯ ಸಂಪನ್ಮೂಲ ಸಹ ಇರೋದು ಅಷ್ಟೇ ಮುಖ್ಯ. landline ಮೂಲಕ ಸಂಪರ್ಕಿಸಿ, ತಂತ್ರಾಂಶ ಬರೆಯೋಕ್ಕೆ ಆಗುತ್ತಾ? ಕಥೆ ಮಾತಾಡಬೇಕು ashte ಗ.ಯ(ಗಣಕ ಯಂತ್ರ) ಇಲ್ಲದೆ ಹೋದರೆ. ಕೂತು ಕೆಲಸ ಮಾಡಬೇಕು ಅಂದರೂ ಸಹ ತಂತ್ರಾಂಶ ಅಷ್ಟೇ ಮುಖ್ಯ. ತಂತ್ರಾಂಶವನ್ನ ಅಸಹಾಯಕ ಅಂತ ತೋರಿಸಿಬಿಟ್ರೆ ಏನು workout ಆಗೋಲ್ಲ ಯಾಕಂದ್ರೆ ನಾನು ಮೇಲೆ ಉಲ್ಲೇಖ ಮಾಡಿದಂತೆ ನಿಮ್ಮ ಮಾತುಗಳು ಸರಿಯಾದ ಅಡಿಪಾಯ ಇಲ್ಲದೆ ಬರೆದಂತಹವು ಅಂತ ತೋರಿಸುತ್ತದೆ. ತಂತ್ರಾಂಶ ಇಲ್ದೆ ಯಾವ artificial intelligence ಅಥವ ಸಂಕೀರ್ಣ ಯೋಜನ್ಗೆಳು execute ಆಗೋಕ್ಕೆ ಸಾಧ್ಯವೇ ಇಲ್ಲ ಇಂದಿನ ಕಾಲದಲ್ಲಿ. ಈಗ ಋಷಿ ಮುನಿಗಳ ಕಾಲಕ್ಕೆಹೋಗಿ ೦ ಕಂಡು ಹಿಡದ ಭಾರತೀಯರ ಉಲ್ಲೇಖ, ಇಡಿ ಮಾನವ ಇತಿಹಾಸದಲ್ಲೇ ಮೊದಲ ಸರ್ಜರಿ ಮಾಡಿದ ಶೂಶ್ರುತ ಮುನಿಗಳು, "father of modern surgery" ನ ಉಲ್ಲೇಖ ಮಾಡೋದು ಸಹ ಸದ್ಯದ ಪರಿಸ್ಥಿತಿಯಲ್ಲಿ ತಪ್ಪಾಗುತ್ತೆ . ನಾವು ಯಾವ್ದೇ ಬೇಸಿಕ್ ಕಾರ್ಯಾಚರಣೆನ ಹೀಗೆಳೆಯೋದರಲ್ಲಿ ದೊಡ್ಡತನ ಇಲ್ಲ. ಪ್ರತಿಯೊಂದು ಕಾರ್ಯವು ಅಥವ ವಿಜ್ಞಾನ ಬೇರೆದರ ಮೇಲೆ ಅವಲಂಬಿತ ಇದೆ. ಬೇರ್ಪಡಿಸಿ ಉದ್ಧಾರ ಆಗೋಕ್ಕೆ ಸಾಧ್ಯ ಇಲ್ಲ . ಎಲ್ಲಾ ವಿಂಗಡನೆಗಳನ್ನು ಸಹ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕೇ ವಿನಃ , ಇದ್ರಿಂದಾನೆ ಅದು, ಇದು ಇಲ್ದೆ ಅದು ಇಲ್ಲ ಅನ್ನೋ ತುಲನೆ ಮಾಡೋದು ಹಾಸ್ಯಾಸ್ಪದ.<br />
<br />
ISRO ನ ನೋಡಿ ಪಾಠ ಕಲಿಯಿರಿ ಅಂತ ಹೇಗೆ "ಕೇವಲ" ಒಂದು amerikan aerospace association ಹೇಳಿತೋ ಹಾಗೆಯೇ "ಇಡಿ ಜಗತ್ತು" ಅಂದ್ರೆ ಲಕ್ಷಾಂತರ, ಕೋಟ್ಯಾಂತರ ಅಸೋಸಿಯೇಷನ್ ಗಳು ಗುರುತಿಸುವ, inspire ಆಗುವುದು ನಮ್ಮ ಬೆಂಗಳೂರನ್ನ ನೋಡಿಯೇ ಅಲ್ವ?? ಅದು "ಸಿಲಿಕಾನ್ ಸಿಟಿ"ಯನ್ನು. ಭಾರತ ನಡುಗ್ತಿರೋದು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುತ್ತೆ ಅನ್ನೋ ಒಂದೇ ಕಾರಣದಿಂದ ಅಷ್ಟೇ. ಕೆಲಸ ಕಳೆದುಕೊಂಡರೆ, ಹೊಟ್ಟೆ ಪಾಡಿಗೆ ಎಲ್ಲರಿಗು ಅನ್ಯ ಮಾರ್ಗ ಇರೋಲ್ವಲ್ಲ ಅದಕ್ಕೆ ಅಷ್ಟೇ. ನಿಮಗೆ ಗೊತ್ತಿರೋ ಹಾಗೆ ಮಾಧ್ಯಮ್ಮಕು ಸಹ recession effect ಆಗಿದೆ, advertisement ಬರ್ತಿಲ್ಲ ಕಾರಣ ಕಂಪನಿಲಿ product move ಆಗ್ತಿಲ್ಲ, ಇದರಿಂದ ದಿನ ಪತ್ರಿಕೆ sustain ಮಾಡೋದು ಕಷ್ಟ. ಹಾಗಾಗಿ ಕೆಲಸದಿಂದ ತೆಗಿತಿರೋದು ಅನಿವಾರ್ಯ ಆಗೋಗಿದೆ, ಹೀಗೆ ಕೆಲಸ ಕಲ್ಕೊಂದಿರೋ journalistgalu ಯಾಕೆ ಬೀದಿ ಬೀದಿ ಅಲಿತಿದಾರೆ?? ಅವರೆಲ್ಲ entrepreneurs ಆಗಬಹುದಲ್ವಾ? ಬರಿ ೫-೧೦ ಪುಟ ದಾಟದ "evening"ಅರ್ಸ್ ಅಥವ advertisement ನೆ ಹೆಚ್ಚು ಪ್ರಕಟಿಸೋ ಹತ್ತಾರು ಪ್ರತ್ರಿಕೆಗಳಲ್ಲಿ ಕೆಲಸ ಮಾಡ್ಕೊಂಡು ಬದುಕೊಕ್ಕು ರೆಡಿ ಆಗಿರೋದು ಯಾಕೆ? ೧೦,೦೦೦ ರೂಪಾಯಿಗೆ ಕೆಲಸ ಮಾಡ್ತಿದ್ದ journalist ಗೆ ಇವತ್ತು ೩೦೦೦/- ರೂಪಾಯಿನ ಕೆಲಸವು ಗತಿ ಇಲ್ಲ, ಯಾಕೆ?? cheap labour ಗೆ ಒಪ್ಪಿಕೊಂಡರು ಸಹ!!! ದಿನ ಪತ್ರಿಕಗಳು ಎಷ್ಟಿವೆ ಕನ್ನಡದ್ದು ಅಥವಾ ಬೆಂಗಳೂರು ಲೋಕಲ್ ನ್ಯೂಸ್ ಪ್ರಕಟಿಸೋದು ಎಷ್ಟಿವೆ ಅಂತ ಯಾರ್ಗಾದ್ರು ಕೇಳಿದ್ರೆ, ಪಾಪ ಮುಗ್ಧ ಜನರಿಗೆ ಏನು ಗೊತ್ತಿರುತ್ತೆ ಲೆಕ್ಕವಿಲ್ಲದಷ್ಟು ಇವೆ ಅಂತ :) ಒಂದ್ ಮೂರ್ನಾಲ್ಕು ಅಂತಾರೆ ಅಷ್ಟೇ. ಎಲ್ಲವೂ ದಿನದ ಕೊನೆಗೆ ಮೂಲೆ ಸೇರೋದಂತು ನಿಜ!! ವಿ.ಕ ದ ಕೆಲವು ಲೇಖನಕ್ಕೆ ಕತ್ತರಿ ಹಾಕಿ circulate ಮಾಡೋದು ಸಹ ಅಷ್ಟೇ ಸತ್ಯ :) ನಿಮ್ಮ ಲೇಖನಗಳು ಹಾಗು ಪುಕ್ಕಟೆಯಾಗಿ ಅಂತರ್ಜಾಲದಲ್ಲಿ (http://www.pratapsim...) ದೊರೆಯುವ ನಿಮ್ಮ ಪುಸ್ತಕಗಳು ಸಹಿತ circulate ಮಾಡಿ ಅವು ಹೆಚ್ಚು ಜನರನ್ನ ತಲುಪೋಕ್ಕೆ IT ಬೇಕೇ ಬೇಕು, ತಲುಪಿಸೋರು ಹೆಚ್ಚಿನವರಲ್ಲಿ IT ಅವರೆನೆ :).<br />
<br />
out sourcing ಅನ್ನೋದು ನಿಲ್ಲಿಸೋಕ್ಕೆ ಸಾಧ್ಯವೇ ಇಲ್ಲ, recession ನ ಪ್ರಭಾವದಿಂದ ಅವರ ಖರ್ಚುಗಳನ್ನು ಮಿತಗೊಳಿಸಲು ಅಥವಾ ಅಂಕೆಯಲ್ಲಿಡಲು ಮತ್ತಷ್ಟು ಕೆಲಸಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತಿದಾರೆ, ಈ ವಿಚಾರ ಯಾಕೆ ಹೇಳಿಲ್ಲ? ಕುರುಡು ಎನ್ನಬೇಕೆ!! ಇಂಥಹ ಕಾರ್ಯಾಚರಣೆಯ ಸಮಯದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ ಇರೋ ಯಾರೆ ಆದರು ನಡುಗ್ಲೆ ಬೇಕು, ಅಮೆರಿಕದವರು ಆದ್ರೇನು ಭಾರತೀಯರು ಆದ್ರೇನು, ಆಶ್ಚರ್ಯ ಯಾಕೆ? IT ಅವರಿಗೆ ಹೆಚ್ಚು ಏಟು ಅನ್ನೋ ಕುಹಕ ಬೇರೆನಾ ಇದ್ರಲ್ಲಿ? ಮಾಧ್ಯಮದವರು ಸಹಿತ ಅನುಭವಿಸುತ್ತಿದ್ದಾರೆ, ಗಣಿಗಾರಿಕೆಯವರು ಅನುಭವಿಸುತ್ತಿದ್ದಾರೆ, "product"oriented ಕಂಪೆನಿಗಳು ಸಹಿತ, . ಯಾರೇನು recession proof ಅಲ್ಲ ಕೇವಲ IT ಒಂದಕ್ಕೆನೆ ಹಾನಿ ಆಗ್ತಿರೋದು ಅನ್ನೋ ಪ್ರಚಾರ ಕೊಡೋಕ್ಕೆ. ಇಂದಿಗೂ ಸಹ "cheap labour + quality" is most sought after in IT industry or for that matter any industry, nim industrygu ಸಹ ಅನ್ವಯಿಸುತ್ತೆ :).<br />
<br />
ನಿಜ, ಪರಸ್ಪರ ಹಳಿದುಕೊಳ್ಳೋ ಕಾಲ ಅಲ್ಲ ಅದಕ್ಕೆ ನಾನು ಕೇವಲ ಸಾಮ್ಯತೆ ತೋರಿಸ್ತಿದೀನಿ ಅಷ್ಟೇ, ಹಳಿಯೋ ಲೆವೆಲ್ ಗೆ ನಾನು ಪ್ರಕ್ರಿಯೆ ನೀಡಿದ್ದರೆ ಅದು ಬೇರೆ ಥರನದ್ದೆ ಆಗಿರೋದು, ನಿಮಗೆ ಅರ್ಥ ಅಗೋ ಉದ್ಯಮದ ಉದಾಹರಣೆ ಕೊಟ್ಟು ಸಾಮ್ಯಾತ ತೋರಿಸ್ತಿರೋದು ಅಷ್ಟೇ. ಯಾಕಂದ್ರೆ ನಿಮ್ಮ ಲೇಖನ ಓದಿದ ಯಾರಿಗೆ ಅದ್ರು ಸಹ IT ಅಂದ್ರೆ ಇಷ್ಟೇನಾ ಅನ್ನೋ ಸಂಕುಚಿತ ಮನೋಭಾವ ಬರಿಸೋ ಹಾಗಿದೆ. ಆದ್ರೆ ಅದು ನೀವು ತೋರಿಸಿದ ಹಾಗಿಲ್ಲ, "ಎಲ್ಲರ ಮನೆ ದೊಸೇನು ತೂತೆ" ಅಂತ ಜನರಿಗೆ ಅರ್ಥೈಸಬೇಕಿದೆ. ನೀವು ಸಹ IT ಅಂದ್ರೆ ಏನು ಅಂತ ಮತ್ತೊಮ್ಮೆ ಶೋಧಿಸಿ ಪರ ವಿರುದ್ಧ ಎರಡೂ ಬರೆಯಿರಿ, ಆಗ ಲೇಖನ ಸ್ವಾಗತಾರ್ಹ ಆಗುತ್ತೆ ಅದು ಬಿಟ್ಟು IT ಅಂದ್ರೆ ಏನು ಅಲ್ವೇ ಅಲ್ಲ ಅನ್ನೋ ಚಿತ್ರಣವನ್ನ ಬಿಂಬಿಸೋ ವ್ಯರ್ಥ ಪ್ರಯತ್ನ ಬಿಡಿ. ಈಗಾಗ್ಲೇ ಎರಡೂ ಲೇಖನ ಬರೆದು ಸಾಕಷ್ಟು ಹಾನಿ ಮಾಡಿದೀರಾ ಅದನ್ನೇ ದಯವಿಟ್ಟು ಪುನರಾವರ್ತನೆ ಮಾಡಬೇಡಿ ಅನ್ನೋದು ನನ್ನ ಕಳಕಳೀಯ ಪ್ರಾರ್ಥನೆ.<br />
<br />
ಅಲ್ಲ ನೀವ್ ಹೇಳಿದೀರಲ್ಲ .. IBM ಅಂದ್ರೆ hardware, CisCo ಅಂದ್ರೆ networking, Microsoft, google ಅಂದ್ರೆ software (google ಅಂದ್ರೆ software ಅಲ್ಲ ಮಹಾ ಸ್ವಾಮೀ ಅದು ಕೇವಲ ಒಂದು search engine, ಅವರದೇ ತಂತ್ರಾಂಶ ವಿಭಾಗ ಇರೋದು ಸತ್ಯ ಆದ್ರೆ ಗೂಗಲ್ ಅಂದ್ರೆ ತಂತ್ರಾಂಶ anta ಯೋಚಿಸೊಲ್ಲ search engine ಅಂತ ಅಷ್ಟೇ ಯೋಚಿಸ್ತಾರೆ) ಹೀಗೆಲ್ಲ ಹೇಳಿದೀರಲ್ಲ, ನಿಮ್ಮ ಈ ಮಾತಿಗೆ ನಂಗೆ Marc Faber ಅವರು ಅಮೆರಿಕದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುರಿವ ಮಾತುಗಳು ನೆನಪಿಗೆ ಬರುತ್ತದೆ. Marc Faber ಅವರು ಅಮೇರಿಕಾದ ಖ್ಯಾತ investment analyst ಹಾಗು "Entrepreneur", ಇವರು ತಮ್ಮ ತಿಂಗಳಿನ ಅಂಕಣದಲ್ಲಿ ಹೇಳಿರೋದು ಏನಂದ್ರೆ.. "ಸರ್ಕಾರ ನಮಗೆಲ್ಲರಿಗೂ ೬೦೦$ rebate ಕೊಡ್ತಿದೆ, ಈ ಹಣವನ್ನ Wal-Mart ನಲ್ಲಿ ಖರ್ಚು ಮಾಡಿದ್ರೆ ಆ ದುಡ್ಡು ಚೀನಾಗೆ ಹೋಗುತ್ತೆ. petrol/ಅಡುಗೆ ಅನಿಲ ಖರೀದಿಸಿದರೆ ಅರಬ್ ದೇಶಕ್ಕೆ ಹೋಗುತ್ತೆ, ಹಣ್ಣು ತರಕಾರಿ ತೊಗೊಂಡ್ರೆ ಮೆಕ್ಸಿಕೋ, ಹೊಂಡುರಾಸ್ ಹಾಗು ಗ್ವಾಟೆಮಾಲಗೆ<br />
ಹೋಗುತ್ತೆ. ಕಾರ್ ಕೊಂಡುಕೊಂಡರೆ ಜರ್ಮನಿ/ಜಪಾನ್ ಗೆ ಹೋಗುತ್ತೆ, ಕಸ (ಹಳೆ ಪಾತ್ರೆ, ಪಿಲಾಸ್ಟಿಕ್ ಸಾಮಾನ್ :)) ತೊಗೊಂಡ್ರೆ ತೈವಾನ್ ಗೆ ಹೋಗುತ್ತೆ , ಗ.ಯ ಕೊಂಡರೆ ಭಾರತಕ್ಕೆ ಆ ದುಡ್ಡು ಸೇರುತ್ತೆ, ಒಟ್ಟಿನಲ್ಲಿ ಅಮೆರಿಕದ ಅರ್ಥಿಕ ವ್ಯವಸ್ತೆಯನ್ನ ಯಾವುದು ಬೆಂಬಲಿಸುವುದಿಲ್ಲ. ಆ ದುಡ್ಡನ್ನ ನಮ್ಮಲ್ಲೇ ಇಟ್ಕೋಬೇಕು ಅಂದ್ರೆ ಇರೋದು ಒಂದೇ ಒಂದು ಮಾರ್ಗ, ಅದು ಏನಪ್ಪಾ ಅಂದ್ರೆ ವೇಶ್ಯೆಯರು ಹಾಗು ಬೀರ್ ನ ಮೇಲೆ ದುಡ್ಡು ಉಡಾಯಿಸಬೇಕು, ಯಾಕಂದ್ರೆ ಇವೆರಡೆ ಪದಾರ್ಥಗಳು US ನಲ್ಲಿ ತಯಾರು ಆಗ್ತಿರೋದು. ಹಾಗಾಗಿ ನಾನು ನನ್ನ ಭಾಗದ ಖರ್ಚನ್ನು ಹೀಗೆ ಮಾಡ್ತಿದೀನಿ" ಅಂತ ಹೇಳಿಕೆ ನೀಡಿದ್ದಾರೆ ಅಂದ್ಮೇಲೆ ನೀವೇ ಲೆಕ್ಕಾಚಾರ ಮಾಡಿ, ನಮ್ ಭಾರತ ಜಾಗತಿಕ ಮಟ್ಟದಲ್ಲಿ ಯಾವುದಕ್ಕೆ ಗುರುತಿಸಿಕೊಳ್ಳುತ್ತದೆ ಅಂತಂದ್ಬಿಟ್ಟು. ಇದರ ಬಗ್ಗೆ ನಾವು ಯೋಚನೆ ಮಾಡಲೇಬೇಕಾದ ಪರಿಸ್ಥಿತಿ ಅಲ್ವ? ಬರಿ ಮಣ್ಣು ಮರುಳು ಸಿಮೆಂಟ್ ಕಬ್ಬಿಣ ಅಂತ ಇದ್ಬಿಟ್ರೆ ಸಾಕಾ? ದೇಶದ ಗಡಿ ದಾಟಿ ನಮ್ಮ ಛಾಪು ಮೂಡಿಸೋದು ಹೇಗೆ? ಲಕ್ಷ್ಮಿ ಮಿತ್ತಲ್ ಹೊರ ದೇಶದಲ್ಲೇ ಯಾಕೆ ಖ್ಯಾತ ಆಗಬೇಕಿತ್ತು? ಅವರು ಸಹ ಇಲ್ಲಿನವರ ತಾನೇ? ಮೋಜಿಗೆ ಅಂತ ಕೆಲ ದಿನಗಳ ಮಟ್ಟಿಗೆ ದೇಶ ಬಿಟ್ಟು ಹೋದವರು ಅಲ್ಲಿನ oppurtunity ನ ಗ್ರಹಿಸಿ settle ಆಗಿಬಿಡೋದ? ಇಲ್ಲಿ ಅಂತಹ oppurtunity ಸಿಗುತ್ತಾ?? ಯಾರಾದ್ರೂ ಇದೆ ಅಂತ ಹೇಳೋ ಧೈರ್ಯ ಮಾಡ್ತೀರ? ಕಚಡ communist ಗಳು TATA nano ಪ್ರಾಜೆಕ್ಟ್ ಗು ಕಲ್ಲು ಹಾಕಿದ ಕ್ರಿಮಿಗಳು, ಲಕ್ಷ ಮಂದಿ ಹೊಟ್ಟೆ ಮೇಲೆ ಕಲ್ಲು ಹಾಕಿದವರು, ಇಂಥಹ competent market, growth oppurtunitites ನ ಚಿಕ್ಕಂದಿನಿಂದಲೇ ನೋಡಿ ಬೆಳೆದ ಭಾರತೀಯನಿಗೆ entrepreneur ಆಗೋ ಆಸೆ ಮೂದೊದ್ರಲ್ಲಿ ಸಂಶಾಯಾನೆ ಇರಬಾರದು, ಏನಂತೀರಾ :) ??<br />
<br />
ಇನ್ಫೋಸಿಸ್, ವಿಪ್ರೊ, TCS, ಸತ್ಯಮ್ ಇವೆಲ್ಲ ದೈತ್ಯ ಕಂಪನಿ ಅನ್ನೋದೇನೋ ನಿಜ , ಹಾಗಂದ ಮಾತ್ರಕ್ಕೆ ಅವೇ ಇಡಿ ಭಾರತದ ಹೊರೆ ಹೊತ್ಕೊಂಡು ಓಡಾಡ್ತಿಲ್ಲ. ಅವರಿಗೆ ಅವರ ವ್ಯವಹಾರ ದೊಡ್ಡದು ಅಷ್ಟೇ, ಇದೆ bottomline. ಹಾಗೆಂದ ಮಾತ್ರಕ್ಕೆ ಪ್ರತಿ ಕಂಪನಿ ಸಹ product oriented ಆಗಿದ್ದು ಬಿಟ್ರೆ ಅದರ maintanence work ಯಾರ್ ಮಾಡ್ಬೇಕು? ಅದೇನು use & throw shaving stick ತ್ರಾಣ? so product ಎಷ್ಟು ಮುಖ್ಯವೋ service ಸಹ ಅಷ್ಟೇ ಮುಖ್ಯ bajaj scooter ಅಷ್ಟೊಂದು ಫೇಮಸ್ ಆಗೋಕ್ಕೆ ಕಾರಣ ಏನು? ಇಡಿ ಗಾಡಿ ಕೆಟ್ಟ ಕೆರ ಹಿಡಿದಿದ್ರು service ಮಾಡ್ಸೋಕ್ಕೆ ೩೦೦೦-೪೦೦೦ ರೂಪಾಯಿ ಅಷ್ಟೇ . A-one ಆಗೋಗುತ್ತೆ ಅಷ್ಟು ಕಡಿಮೆ ಖರ್ಚಿನಲ್ಲೇ, ಇದೆ ತರಹ ಎಲ್ಲಾ ಉದ್ದಿಮೆಗೂ ಒಂದು service division ಇರಲೇಬೇಕು. ಹಾಗೆಯೇ ಜಾಗತಿಕಮಟ್ಟದಲ್ಲಿ ನಮ್ ಭಾರತ software service division ಅನ್ಕೊಂಡ್ರೆ ಏನು ತಪ್ಪಿಲ್ಲ.<br />
<br />
ಅಮೇರಿಕ ವರ್ಷಕ್ಕೆ ೭೦೦೦೦ engineering ಪದವಿಧರನನ್ನ ರೂಪಿಸುತ್ತೆ ಅಂದ್ರಲ್ಲ, ಅದ್ರಲ್ಲಿ ಎಷ್ಟು ಮಂದಿ ಭಾರತೀಯರು ಅಂತ ಸಹ ಹೇಳಬೇಕಿತ್ತು. ವಿದೇಶಿ university ಗಳಿಗೆ ಭಾರತೀಯ ವಿದ್ಯಾರ್ಥಿಗಳು ಅಂದ್ರೆ ಅಚ್ಚು ಮೆಚ್ಚು ಇದು ಸಹ ಗಮನ ಇರಿಸಿಕೊಳ್ಳಿ. ಇದೆಲ್ಲ ಕೇವಲ ISRO impression ಅಲ್ಲ, ನಮ್ಮ ದೇಶದ ವಿಧ್ಯಾರ್ಥಿಗಳ ನಡಾವಳಿ, ನಮ್ ದೇಶದ ಸಂಸ್ಕೃತಿಯ ಛಾಪು . ಇಡಿ europe ನ ಪದವೀದರರ ಸಂಖ್ಯೆ ೧ ಲಕ್ಷ ಆಗಿದ್ರೆನು ಈಗ? ಅವರಲ್ಲಿ ಕಲೆ/ ಇತಿಹಾಸ/ ಸಾಹಿತ್ಯ ವಿದ್ಯಾಭ್ಯಾಸಕ್ಕೂ engineering ನಷ್ಟೇ ಏನು, ಅದಕ್ಕಿಂತ ಹೆಚ್ಚು ಮನ್ನಣೆ, ಗೌರವ ಇದೆ . ನಮ್ಮಲಿ ಕುಂಚ ಹಿಡಿದು ಚಿತ್ರಕಲೆ ಮಾಡ್ತೀನಿ ಅಂದ್ರೆ, ಮೊದ್ಲು ಒದ್ದು ಅನಂತರ ಹೊಟ್ಟೆಗೆ ಹಿಟ್ಟಿನ ದಾರಿ ನೋಡ್ಕೋ ಅಂತ ಹೇಳ್ತಾರೆ. ಅವರು ಹೇಳೋದ್ರಲ್ಲೂ ಅರ್ಥ ಇದೆ, ನಮಗೆ ಶೋಕಿ ಜೀವನ ಬೇಕಿಲ್ಲ ಬೆಳೆಯುವ ಪರಿಸ್ಥಿತಿಯಲ್ಲಿ ಮೊದ್ಲು ಹೊಟ್ಟೆಗೆ, ಗೇಣು ಬಟ್ಟೆಗೆ ಆಮೇಲೆ ಮಿಕ್ಕಿದಕ್ಕೆ, ಅಪ್ಪ ಮಾಡಿದ್ದ ಆಸ್ತೀನೋ ಅಥವ ಓತ್ಲಾ ಹೊಡ್ಕೊಂಡು ಸರ್ಕಾರ ಕೊಡೊ ನಿರುದ್ಯೋಗ ಭತ್ಯೆ ತೊಗೊಂಡು ಜೀವನ ಮಾಡೋ ಹಾಗಿದ್ರೆ ನಮ್ ದೇಶದಲ್ಲೂ ಸಹ ೧ ಲಕ್ಷ ಜನ ಪಾಸು ಆಗ್ತಿದ್ರೆನೋ. ವಿಪರ್ಯಾಸ ಅಂದ್ರೆ ನಮಗೆ ಅಂತಹ ಮನೋ ಭಾವ ಇಲ್ಲ, ಆದರು ಸಹ ಎಷ್ಟು ಜನ ತಂತ್ರಾಂಶ ಅಭಿಯಂತರರು ತಮ್ಮ software career ತ್ಯಜಿಸಿ ಅವರ ಹವ್ಯಾಸಗಳ ಹಿಂದೆ ಹೋಗಿ ಸಫಲ ಆಗಿಲ್ಲ? ಉದಾಹರಣೆಗೆ ನಮ್ಮ ಕನ್ನಡತಿ "ನಂದಿತ"ಅವರನ್ನೇ ತೊಗೊಳ್ಳಿ "ಪಟ್ರೆ loves ಪದ್ಮ" ಚಿತ್ರದಲ್ಲಿ "ಹೇಯ್ ಹುಡುಗಿ, ನೀ ಒಮ್ಮೆ ನೋಡು " ಹಾಡಿಗೆ ಪ್ರಶಸ್ತಿ ತೊಗೊಂಡಿಲ್ವ? ಅವ್ರು ಸಹ ತಂತ್ರಾಂಶ ಅಭಿಯಂತರರೆ ಆಗಿದ್ರು ಮೊದಲು, ಇದು latest ಉದಾಹರಣೆ ಅಷ್ಟೇ. ಅವರೆಲ್ಲ software ತಲೆ ಉಳ್ಳವರು ತಾನೇ ? ಅನುಕೂಲ ಪರಿಸ್ಥಿತಿ ನೋಡಿ software ಬಿಟ್ರು, ಕಲಾ ಸೇವೇಲಿ ತೊಡಗಿಸಿಕೊಂಡರು. ಶೋಕಿಗೆ ಬಿದ್ದು ಹಾಳಾಗೊರನ್ನ ನೋಡಿ ನಾವೇ great ಅನ್ಕೊಂಡ್ರೆ ಅದಕ್ಕಿಂತ ಹುಚ್ಚತನ ಇಲ್ಲ. europe ಅಲ್ಲಿ ೧,೦೦,೦೦೦ ಆಗ್ಲಿ ಇಡಿ ಜಗತ್ತಿನ ಒಟ್ಟು ಅಭಿಯಂತರರ ಸಂಖ್ಯೆ ಒಂದೆಡೆ ಭಾರತೀಯ ಅಭಿಯಂತರ ಸಂಖ್ಯೆ ಒಂದೆದ ಆದರು ಸಹ ನಮ್ಮನ್ನು (ಭಾರತೀಯ ತಂತ್ರಾಂಶ ಅಭಿಯಂತರರನ್ನು) ತುಳಿಯಲು ಸಾಧ್ಯವೇ ಇಲ್ಲ. ಇಂದಿಗೂ, ಎಂದಿಗೂ, ಎಂದೆಂದಿಗೂ. ಏಳು ಬೀಎಳು ಸಹಜ ಅದಕ್ಕೆ ವ್ಯವಹಾರ ಅನ್ನೋದು ಆದ್ರೆ ಇದೆ ಅದರ ಹಣೆ ಬರಹ ಅಂತ ಬಿಂಬಿಸಿರೋ ನಿಮ್ಮ ಮಾತುಗಳಿಗೆ ಅಂದ್ರೆ ಏನು ಅನ್ನೋಣ ??<br />
<br />
IBM, microsoft, dell ಅಂತಹ ಒಂದೂ ಕಂಪನಿ ಯಾಕೆ ರೂಪುಗೊಳ್ಳಲಿಲ್ಲ ಅಂತೀರಲ್ಲ ಈ ಕಂಪನಿಗಳಲ್ಲಿ higher management ಅಲ್ಲಿ ಯಾರ್ ಯಾರಿದ್ದಾರೆ ಅಂತ ನೋಡಿದೀರಾ? ಕನ್ನಡಿಗರು ಇರೋದು ಸಿಕ್ಕಾಪಟ್ಟೆ ವಿರಳ ಬಿಡಿ, ಉತ್ತರ ಭಾರತೀಯರು, ತಮಿಳನೋ ಅಥವ ಕುಟ್ಟಿಕ್ಕಾರನ್ ಇದ್ರೆ ಆಶ್ಚರ್ಯ ಪಡಬೇಕಿಲ್ಲ. ಸರ್ವೇ ಮಾಡಿ ನೋಡಿ :) ನಿಮಗೆ ಜಯವಾಗಲಿ!!! . Gates, Jobs, Dell ಅಂಥವರು ಹುಟ್ಟಿದ ನಾಡಿನಲ್ಲೇ ಅವರಿಗೆ compete ಮಾಡೋಕ್ಕೆ ಬೇರ್ಯಾರು ಹುಟ್ಟಲಿಲ್ಲ, ಕನಿಷ್ಠ ಪಕ್ಷ ಅಂಥವರ ಕಂಪನಿಯಲ್ಲಿ ಒಳ್ಳೆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯರೇ ಹೆಚ್ಚು ಅನ್ನೋದನ್ನು ಸಹ ಅಲ್ಲಗಳೆಯೋಕ್ಕೆ ಆಗೋಲ್ಲ. ಅದೇನು ಕಮ್ಮಿ ಸಾಧನೆ ಅಲ್ಲ.<br />
<br />
ಮಹಾ ಸ್ವಾಮೀ, Thumsup ಎಂಥ brand ನಮ್ ಭಾರತದ್ದು , Bisleri ಎಂಥಹ brand ನಮ್ ಭಾರತದ್ದು ಅವನ್ನೆಲ್ಲ ವಿದೇಶಿ ಕಂಪೆನಿಗಳು ಮಾರುಕಟ್ಟೆ ಮೌಲ್ಯಕ್ಕಿಂತ ೧೦-೨೦ರಷ್ಟು ಹೆಚ್ಚಿಗೆ ಕೊಟ್ಟು ಖರೀದಿಸಿ ಅವುಗಳ ಹೆಸರು ಕೆಡಿಸಿ, ಗುಣಮಟ್ಟ ಹಾಳುಗೆಡವಿ ತಮ್ಮ brand ಗಳೇ ಹಿರಿದು ಅನ್ನೋ ಭಾವನೆ ಮೂಡಿಸಲಿಲ್ವೆ, ಅದಕ್ಕೆ ಮಾಧ್ಯಮ ದವರು ಸಹಕರಿಸಲಿಲ್ವೆ , ಇಂದಿಗೂ ಸಹ ಸಹಕರಿಸ್ತಿಲ್ವೆ? ಸಫಲರು ಕೂಡ ಆದರು ತಾನೇ? ಇನ್ನ computer field ಅಲ್ಲಿ ಬೆಳೆಯೊಕ್ಕೆ ಬಿಡ್ತಾರ? ನಮ್ ಭಾರತೀಯರ "entrepreneurship"ನ ಹೆಚ್ಚಿನ ಬೆಲೆಗೆ ಕೊಂಡು ತಮ್ಮ ಕಂಪನಿಗಳಲ್ಲೇ ದುಡಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ talent ಗೆ ಮೋಸ ಇಲ್ಲ. ನಮ್ಮಲಾಗಿದಿದ್ರೆ minority, ಆ ಜಾತಿ, ಈ ಜನಾಂಗ, ನಮಗೆ ಇಷ್ಟು seat ಬೇಕು, ಇಷ್ಟು ಜನ ನಮ್ಮವರು ಒಳ್ಳೆ ಹುದ್ದೆಗೆ ಹೋಗಲೇ ಬೇಕು ಅಂತ ಧರಣಿ ಹೂಡಿ ರಾಜಕೀಯ ಮಾಡಿ ಅದನ್ನು ಗಬ್ಬೆಬಿಸಿಬಿಡ್ತಿದ್ರು. ಈಗ IIT ಯಲ್ಲೇ ಸೀಟ್ ಹಂಚಿಕೆ ತೊಗೊಳ್ಳಿ, ಆ ಜಾತಿ ಈ ಪಂಗಡ ಅಂತ reservation ಇತ್ತು ಏನು ಮಹಾ ಸಾಧಿಸಿದರು?? ಕಾಲೇಜಿಗೆ entry ಕೊಟ್ರು ಸಹ ಪರೀಕ್ಷೇಲಿ ಉತ್ತೀರ್ಣ ಆಗೋ ತಾಕತ್ತು ಇರದೇ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿ ವೇತನ ತೊಗೊಂಡು ಹಾಯಾಗಿ ಕಾಲ ಕಳಿತಿದಾರೆ.. ಇಂಥ ದೌರ್ಭಾಗ್ಯಕ್ಕೆ ಹೆಸರು ವಾಸಿ ನಮ್ ಭಾರತದ political system.<br />
<br />
"innovation" ಅನ್ನೋದು ಆಗ್ತಿಲ್ಲ ಅಂದೋರು ಯಾರು?? ಕೃಷಿ ವಿಜ್ಞಾನದಲ್ಲಿ ಎಷ್ಟು ಬೆಳವಣಿಗೆ ಆಗಿದೆ, ರೇಷ್ಮೆ ತಂತ್ರಜ್ಞಾನ ಎಷ್ಟು ಬದಲಾಗಿದೆ, ಪಟ್ಟಿ ಮಾಡಿದ್ರೆ ಸಾವಿರ ಇದೆ, ಇಂದು ತುಳಿಯೋ cycle ಮಾದರಿ ನೋಡಿ, ನೀವು flashback ನೆನೆಸ್ಕೊಂಡು ಇವತ್ತು ನೋಡಿದ್ರೆ ನಿಮಗೆ ಎಲ್ಲೆಲ್ಲು innovation ಕಾಣುತ್ತೆ, ಪ್ರತಿ ವಿಷಯದಲ್ಲೂ ಸಹ!!! ಅದನ್ನ ಗುರುತಿಸೋ ಕಣ್ಣು ನಮಗೆ ಇರ್ಬೇಕು ಅಷ್ಟೇ. ITli ಮಾತ್ರ innovation ಆಗ್ತಿಲ್ಲ ಅನ್ನೋದೇ ನಿಮ್ಮ ಮಾತಿನ ಅರ್ಥ ಆಗಿದ್ರೆ ವಿದೇಶದಲ್ಲಿ ಕೂತೋ ಅಥವ ನಮ್ ದೇಶದ R & D centre ಗಳೇ ಆದರು ಸಹ ಕೆಲಸ ಮಾಡ್ತಿರೋದು ನಮ್ ತಲೆಗಳೇ. entrepreneurshipnalli ಕಾಣದ ದುಡ್ಡನ್ನು security ಅನ್ನು ಇವರು ಕೊಡ್ತಾರೆ. ಸ್ವಂತ ವ್ಯವಹಾರ ಆದ್ರೆ loss ಆದ ೨-೩ ತಿಂಗಳಿನಲ್ಲೇ ಬಾಗಿಲು ಹಾಕ್ಬೇಕು, ದೊಡ್ಡ ಕಾಮ್ಪನ್ಯಲಿ ಹಾಗೆ ಇರೋಲ್ಲ ಅಲ್ವ. so ಕೆಲಸ ಮಾಡ್ತಾರೆ ತಪ್ಪೇನು ? ೨೦೦೦ ಅಲ್ಲಿ recession ಆದಾಗ ಪೀಣ್ಯ ಒಂದರಲ್ಲೇ ನೂರಾರು entrepreneurship ಕಂಪೆನಿಗಳು ಕೊಚ್ಚಿ ಹೋದವು?? ಯಾರಾದ್ರೂ ಬಂದು ಕಾಪಾಡಿದ್ರ? ಇಲ್ಲ, ಸತ್ತವರು ಸತ್ರು ಅಷ್ಟೇ. ಅದ್ರಲ್ಲಿ ಕೆಲಸ ಮಾಡ್ತಿದ್ದೊರು ದೊಡ್ಡ ಬಂಡವಾಳ ಇರೋ ಕಂಪನಿಯಲ್ಲಿ ಇದ್ದಿದ್ರೆ ಕನಿಷ್ಠ ಅರ್ಧ ಜನ, ಕಡೆ ಪಕ್ಷ ಕಾಲು ಭಾಗ ಜನರಾದರೂ ನೆಮ್ಮದಿ ಇಂದ ಇರ್ತಿದ್ರು. ಆದ್ರೆ ಹಾಗೆ ಆಗ್ಲಿಲ್ವಲ್ಲ? ಎಲ್ಲಾ ಕಂಪೆನಿಗಳು ವ್ಯವಹಾರಕ್ಕೆ ಅಂತಾನೆ ಇರೋದು, ಬರೋ ದುಡ್ಡನ್ನ ದಾನಮಾಡೋಕ್ಕೆ ವ್ಯವಹಾರ ಮಾಡ್ತೀನಿ ಅಂದ್ರೆ ಯಾವ ಕಂಪನಿ ಸಹ ಉದ್ಧಾರ ಆಗೋಲ್ಲ. ಅವರ ದುಡ್ಡನ್ನ ಅವರು market ಮಾಡ್ತಾರೆ, ನಾವು ನಮ್ talent ನ market ಮಾಡ್ತೀವಿ. ನೀವು ಸಹ ಕೆಲ್ಸಕ್ಕೆ ಸೇರಿದ ಹೊಸತರಲ್ಲಿ ಅತಿ ಕಮ್ಮಿ ಹುದ್ದೆಯಲ್ಲಿದ್ದುಕೊಂಡೆ ಮೇಲಿನವರಿಗೆ ಸಹಾಯ ಮಾಡಿಕೊಂಡು, ನಿಮ್ಮ talent market ಮಾಡಿ ಹೆಸರು, ಮೆಚ್ಚುಗೆ ಗಳಿಸಿದವರಲ್ಲವೇ :). ಅದೆಲ್ಲ<br />
ಮರೆತು ಹೋಯ್ತಾ IT ಕಡೆ ಬೊಟ್ಟು ಮಾಡುವಾಗ? ಮನುಷ್ಯ ಉದ್ಧಾರ ಆಗೋದೇ ತಾನು ನಡೆದು ಬಂದ ಹಾದಿಯನ್ನು ಮರೆಯದೆ ಇದ್ದಾಗ ಮಾತ್ರ? ನೀವು ಮರೆತ್ರ? ಬಿಟ್ರಾ? ಅಥ್ವಾ ಜ್ಞಾಪಕ ಇದ್ಯಾ? ಅನ್ನೋದು ನಿಮಗೆ ಮಾತ್ರ ಗೊತ್ತಿರಬೇಕು.<br />
<br />
nokia ಕಂಪನಿ ಭಾರತ mobile ಕ್ಷೇತ್ರದಲ್ಲೇ ೫೦% ಅಂತ ಯಾಕೆ ಅಂತೀರಾ? asia pacific region ತೊಗೊಂಡ್ರೆ ಅದು ೮೦% ಅನ್ನು ಸಹ cover ಮಾಡುತ್ತೆ. ಈ ಬೆಳವಣಿಗೆ ಆಗಿರೋದು mobile ಅನ್ನೋದು ಒಂದು ಸಂಪರ್ಕ ಮಾಧ್ಯಮ ಆಗದೆ ಶೋಕಿ ಮಾಧ್ಯಮ ವಸ್ತು ಆಗಿದ್ದಕ್ಕೆ. ಮಾಧ್ಯಮಗಳು consumerism ಅನ್ನೋದನ್ನ ಹೆಚ್ಚಿಗೆ ಮಾಡಿದಕ್ಕೆ. ಇಂಥಾ ಬೆಳವಣಿಗೆಗೆ ಸಹಾಯ ಮಾಡಿದ ಮಾಧ್ಯಮಗಳಿಗೆ ಕಂಪನಿ ಚಿರಋಣಿ ಆಗಿರುತ್ತೆ ಬಿಡಿ. ಜನ ಸಾಲ ಸೋಲ ಆದರು ಮಾಡಿದ್ರು ಪರವಾಗಿಲ್ಲ ಕೈಲಿ ಒಂದು ಪಾಶ್ಚಾತ್ಯ ಗೀತೆ ಕೂಗುವ ರಿಂಗಣ ಇರೋ ಮೊಬೈಲ್ ಬೇಕೇ ಬೇಕು!!! ಅದಕ್ಕೆ ಈಗ, nokia ಅವರಿಗೆ ಯಾಕೆ ಎಲ್ಲಾ mobile ಕಂಪನಿ ಅವರು ಮುಟ್ಟಿಕೊಂಡು ನೋಡಿಕೊಳ್ಳೋ ಹಾಗೆ chinese mobile ಗಳು ಮಾರುಕಟ್ಟೆಯಲ್ಲಿ ಲಭ್ಯ ಇದೆ. ಅಗ್ಗದ ಬೆಲೆ ೨-೩ ವರ್ಷ ಉಪಯೋಗಿಸಿ ಬಿಸಾಕೊಕ್ಕೆ ಕೇವಲ ೩೦೦೦-೩೫೦೦ ಅಷ್ಟೇ. color display ಏನು, loud speaker ಏನು, touch panel screen ಏನು, ಆಹಾ!! ಒಂದು featureರ್ರಾ ಎರಡಾ?. ೩೦,೦೦೦ ಕೊಟ್ಟು sony erricsion, nokia ಕೊಂಡವನು ಸಹ ಒಮ್ಮೆ phone ಹೊರತೆಗೆಯಲು ಮುಜುಗರ ಬೀಳಬೇಕು, ಆ level ಗೆ mobile ಅನ್ನೋದು ಶೋಕಿ ಮೂಡಿಸಿದೆ. ಸಾಲದಕ್ಕೆ ಇಂತಹ chinese mobile ಗೆ IMIE ಸಂಖ್ಯೆ ಇರೋದಿಲ್ಲ ಹಾಗಾಗಿ ಟ್ರ್ಯಾಕ್ ಮಾಡುಲು ಸಹ ಆಗದೆ ಇರೋ ಕಾರಣ terrorist ಗಳು ಸಹ ಉಪಯೋಗಿಸಬಹುದು. ಒಟ್ನಲ್ಲಿ ಗ್ರಾಹಕನಿಗೆ ತಂತ್ರಜ್ಞಾನ ಯಾವನು ಮಾಡಿದಾನೆ ಅನ್ನೋದು ಮುಖ್ಯ ಅಲ್ಲ ಎಷ್ಟು ಕಡಿಮೆ ಬೆಲೆಗೆ ತಾನು ಶೋಕಿ ಮಾಡಬಹುದು ಅನೋದು ಅಷ್ಟೇ ಯೋಚನೆ. ಏಕಂದ್ರೆ ಇದರಲ್ಲೂ (chinese mobile ಅಲ್ಲೂ) ಸಹ ತಂತ್ರಜ್ಞಾನ ಇದೆ, network problem ಹಾಗು battery backup ತೊಂದ್ರೆ ಆಗಬಹುದು ಅಷ್ಟೇ. ಆದ್ರೆ ೩೦೦೦ ಮುಂದೆ ಅವೆಲ್ಲ ಅಲಕ್ಷ್ಯ. ಇವೆಲ್ಲ innovation "Just for cost advantage" ಅನ್ನೋದಕ್ಕೆನೆ ಶುರು ಆಗಿರೋದು. entrepreneurs ಮಾಡೋದು ದುಡ್ಡಿಗೆನೆ ಇಂತಹ R&D ಅಲ್ಲಿ ತೊಡಗಿಸಿಕೊಂಡವರು ಸಹ ಹೆಚ್ಚಾಗಿ ದುಡ್ಡಿಗೆನೆ. ಎಲ್ಲೋ ಅಪರೂಪಕ್ಕೆ ಇರ್ತಾರೆ ಬಿಡಿ. Just for Passion about subject" ಅಂತ ಕೆಲಸ ಮಾಡೋರು.<br />
<br />
ನೀವು ಹೇಳಿದೀರಲ್ಲ nokia ಗೆ profit ಕಮ್ಮಿ ಆಗ್ತಿದ್ದ ಹಾಗೆ ಕಿಥಾಕ್ತಾರೆ, ತದನಂತರ ಬಂಡವಾಳ ಹಿಂದೆತೆಗುಕೊಂಡು ಜಾಗ ಖಾಲಿ ಮಾಡ್ತಾರೆ ಅಂತ, ಪ್ರತಿ ಮಾರುಕಟ್ಟೆಯಲ್ಲಿ ಬೇಡಿಕೆ ಇರೋವರ್ಗೆ ಮಾತ್ರ ವ್ಯವಹಾರ ನಡೆಯೋದು. ರಾತ್ರಿ ಹೊತ್ತು ಅಂಗಡಿ ಬಾಗಿಲು ಯಾಕೆ ಹಾಕ್ತಾರೆ!!! ATM ಮಾತ್ರ ಯಾಕೆ ಓಪನ್ ಇರುತ್ತೆ?? ಸಂಪ್ರದಾಯಿಕರು ಇರೋ sikh colony ಗೆ ಹೋಗಿ "Hair Cutting Saloon" ಅಂತ ಬೋರ್ಡ್ ಹಾಕೊಂಡು ಚೌರ ವೃತ್ತಿ ಆರಂಭಿಸಬೇಕು ಅನ್ನೋ ಥರ ಇದೆ ನಿಮ್ಮ ವಿಚಾರದ ಮಂಡನೆ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಪ್ರತಿ indsutry ಪ್ರತಿಕ್ರಯಿಸಬೇಕೋ ಹಾಗೇನೇ ಪ್ರತಿಕ್ರಯಿಸುತ್ತಿದೆ. ಬರಿ ವಿದೇಶಿ ಕಂಪನಿನೆ ಯಾಕೆ? ಪ್ರತಿ ವ್ಯವಹಾರದವನು ಅದೇ ಮಾಡೋದು ಇಲ್ಲಾಂದ್ರೆ ಅವನನ್ನ business man ಅನ್ನದೆ ಗೂಬ್ ನನ್ ಮಗ ಅಂತಾರೆ ಅಷ್ಟೇ . ತಂತ್ರಾಂಶ ಅಭಿಯಂತರರು ಅಂದ್ರೆ ಏನು ಮೇಲಿಂದ ಉದುರಿರೋಲ್ಲ ಹಾಂಗತ ಕೆಲವರು ಅಂದುಕೊಂಡಿರ್ತಾರೆ ಅದಕ್ಕೆ ಯಾರು ಏನು ಮಾಡೋಕ್ಕಾಗೋಲ್ಲ, ಪ್ರತಿ ಉದ್ಯಮಾದಲ್ಲೂ ಇಂಥಾ tuglaq ಗಳು ಇದ್ದೆ ಇರ್ತಾರೆ. ಒಬ್ಬ ಮನುಷ್ಯ ತಂತ್ರಾಂಶ ಅಭಿಯಂತ ಅಂತ ನೆನೆಸಿಕೊಂಡಾಕ್ಷಣ ತಲೆಗೆ ಬರೋದು ಕಾಂಚನ ಝನ ಝನ ಅಷ್ಟೇ, ಇವತ್ತು recession ಇದೆ, ಅದಕ್ಕೆ ಬೆಚ್ಚಿ ಬಿದ್ದದ್ದಾರೆ ಆದ್ರೆ ನಾಳೆ ಉದಯಿಸುವ silver lining ಶುರು ಆದಾಗ ಮತ್ತೆ ಬೆಲ್ಲಕ್ಕೆ ಮುತ್ತುವ ಇರುವೆಯಂತೆ ಬಂದೆ ಬರ್ತಾರೆ, ಬಂದೆ ತೀರಬೇಕು. ದುಡ್ಡೇ ದೊಡ್ಡಪ್ಪ ಆಗಿದೆ, ದುಡ್ಡಿರೋದೆ IT ಯನ್ನು ಅಳವಡಿಸಿಕೊಂಡ ವ್ಯವಹಾರದಲ್ಲಿ, costly ಕೂಲಿಯಲ್ಲಿ. ಚಿತ್ರ ಬಿಡಿಸಿದರೆ ಬರೋಲ್ಲ, ಲಂಚ legal ಆಗೋಲ್ಲ.<br />
<br />
ಅಲ್ಲ ಸ್ವಾಮೀ ನಿಮಗೆ ಯಾರು ಹೇಳಿದ್ದು work culture ಅಂದ್ರೆ ೦೮೦೦ ರಿಂದ ರಾತ್ರಿ ೧೦೦೦ ವರ್ಗು ಕೆಲಸ ಮಾಡೋದು ಅಂತ. ಅವರ ಪಾದ scan ಮಾಡಿಸಿ ಕಳಿಸಿ ಹಣೆಗೆ ಒತ್ತಿಕೊಬೇಕು, ಪರೀಕ್ಷೆಗಳು ಮುಗಿದ ಮೇಲೆ ಮೇಷ್ಟ್ರುಗಳು ಕಂತೆಗಟ್ಟಲೆ ಉತ್ತರ ಹಾಳೆ ಗಂಟು ಕಟ್ಟಿಕೊಂಡು ಹಗಲು ರಾತ್ರಿ ಎನ್ನದೆ ಕೆಲಸ ಮಾಡೋಲ್ವೆ?? production ಜಾಸ್ತಿ ಇದೆ ಅಂದ್ರೆ menchanical/production line ನಲ್ಲಿ ಕೆಲಸ ಮಾಡೋವ್ರು Overtime ಅಂತ ಮಾಡೋಲ್ವಾ? ಹಾಗೇನೇ ನಮಗೂ ಕೆಲಸ ಜಾತಿ ಇದ್ದಲ್ಲಿ ಎಲ್ಲರಂತೆಯೇ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗುತ್ತದೆ. ಅಲ್ಲ IT ಉದ್ಯಮದಲ್ಲಿ ಪ್ರತಿ ವ್ಯಕ್ತಿಯ performance check ಮಾಡೋಕ್ಕೆ process ಇದೆ. ಅದರಲ್ಲಿ ಅಳಿತಾರೆ ಇವನು ಈ ವರ್ಷ ಏನು ಕಿಸಿದ ಏನು ಬಿಟ್ಟ ಅಂತ. ಸುಮ್ನೆ ಸಂಬಳ ಕೊಡೋಲ್ಲ ಬೆಳಗೆ ೦೮೦೦ ರಿಂದ ೧೦೦೦ಕೆ ಬಂದ್ಬಿಟ್ರೆ ಅಲ್ಲ ಇಂತಹ timing idea ಕೊಟ್ಟೋರು ಆದರು ಯಾರು ಅಂತೀನಿ?? :-o<br />
<br />
ಹಾಡಿದ್ದೆ ಹಾಡು ಕಿಸಿಬಾಯಿ ದಾಸ ಅನ್ನೋ ಹಾಗೆ ನಮ್ಮ ಕೆಲಸಗಳು ಇರೋಲ್ಲ, project ನ requirement ಸಹ ಒಂದೇ ಥರನದ್ದು ಇರೋಲ್ಲ so constant learning ಅನ್ನೋದು ನಮ್ಮ ಕೆಲಸದ ಒಂದು ಭಾಗ. ಇನ್ನ vision ಇಲ್ದೆ ಕೆಲಸ ಮಾಡೋದೇ ಸ್ವಾಮಿ? ಗುಣಮಟ್ಟ ಕಾಪಾಡಿಕೊಳ್ಳಬೇಕು, customer/client ನ ಜೊತೆ ಮಾತಾಡಿ ಅವನ ಸಂಶಯ/ ಪ್ರಶ್ನೆಗಳಿಗೆ ಉತ್ತರಕೊಟ್ಟು ವ್ಯವಹಾರನವನ್ನು ಉಳಿಸಿಕೊಳ್ಳಬೇಕು. ಇದೆಲ್ಲ ವಿಸಿಒನ್ ಇಲ್ದೆ ಸಾಧ್ಯಾನಾ? ಪ್ರತಿವರ್ಷ, project ಗೆ ಸಂಬಂಧಿತವಲ್ಲದ ಒಂದು ಯೋಜನೆ ಮಾಡಬೇಕು, ಹೊಸ ತಂತ್ರಜ್ಞಾನ ಬಗ್ಗೆ ತಿಳ್ಕೊಂಡು team ನವರಿಗೆ train ಮಾಡೋದು ಸಹ fore-sighted ನೆಸ್ಸ್ ನತ್ತ ನಮ್ಮ ಪ್ರಕ್ರಿಯೆ. ಎತ್ತು ಗಾಣವ, ತಾ ಸುತ್ತಿದಂತೆ ಸರ್ವಜ್ಞ ಅಂತ ಬೆಳಗ್ಗೆ office ಗೆ ಹೋದ್ಯ ಪುಟ್ಟ ರಾತ್ರಿ ಮನೆಗೆ ಬಂದ್ಯಾ ಪುಟ್ಟ ಅನ್ನೋ ರೀತಿ ಕೆಲಸ ಮಾಡಿದ್ರೆ ಒದ್ದು ಓಡಿಸ್ತಾರೆ. ಇದು ನಿಮ್ಮ ಉದ್ದಿಮೆಗೂ ಹತ್ತಿರವಾದ ವಿಷಯ ಅಂತ ಅರ್ತ್ಕೊತೀರ ಅನ್ಸುತ್ತೆ. ನೀವು breaking news ಕೊಟ್ಟಿಲ್ಲ ಅಂದ್ರೆ ಮುಗೀತು ಕಥೆ. ನಿಮ್ಮ paper ನ ಮೂಸಿ ನೋಡೋರು ಗತಿ ಇರೋಲ್ಲ. ಹಾಗೆಯೇ ಹೊಸ ತಂತ್ರಜ್ಞಾನ ಅಳವಡಿಸಿ ಹಳೆ product ಕೊಟ್ರು ಸಹ ಅದು innovation ಆಗಿರುತ್ತೆ, customerna satisfy ಮಾಡಿ ವ್ಯವಹಾರವನ್ನ ಗಟ್ಟಿ ಮಾದೊಕೊಲ್ಲೋದು vision ಹಾಗು foresightedness ಆಗಿರುತ್ತೆ.<br />
<br />
ಈಗ ನಮ್ಮದೇ ಪ್ರತಿಭೆನ ಉಪಯೋಗಿಸಿ ಇಲ್ಲೇ ಮಾರುಕಟ್ಟೆ ಮಾಡಬಹುದು ಆದ್ರೆ ನೀವು ಅಷ್ಟು ಹಣ ಕೊಟ್ಟು ಕೊಂಡ್ಕೊತೀರ?? ೬೦೦೦/- ಬೆಲೆ ಬಾಳೋ windows XP home edition ನ SP ರಸ್ತೆನಲ್ಲಿ ಹೋಗಿ ಕೇಳಿದ್ರೆ 100/- ರೂಪಾಯಿಗೆ install ಮಾಡಿಕೊಡ್ತಾನೆ . ಕೋಟ್ಯಾಂತರ ಬಂಡವಾಳ ಹಾಕಿ 100/- ರೂಪಾಯಿಗೆ ಕಪ್ಪು ಮಾರುಕಟ್ಟೆಯಲ್ಲಿ ಹರಾಜು ಆಗೋ ಪರಿಸ್ಥಿತಿ ನಮ್ ದೇಶದಲ್ಲಿ. ಅದನ್ನ ತಪ್ಪಿಸ್ತೀರ?? ಹೊರ ದೇಶದಲ್ಲಿ ಹಾಗಿಲ್ಲ ಜನ legal software ಗಳನ್ನೇ ಕೊಳ್ಳೋದು. ನಮ್ ಸರ್ಕಾರಿ ಕಂಪನಿಗಳು ಜನರನ್ನ ಇನ್ನು "ಸಾಕ್ತ" ಇರೋದು, ಕಟ್ಟಿ ಕಡಿದು ಹಾಕಿರೋದು ಅಷ್ಟರಲ್ಲೇ ಇದ್ರೂ ಸಹ. efficient ಆಗಿ ಕೆಲಸ ಮಾಡಿದ್ರೆ ನೀವು ಹೇಳೋದೆಲ್ಲ ಆಗ್ತಿದ್ವು. ಆದ್ರೆ ವಸ್ತು ಸ್ಥಿತಿ ಹಾಗಿಲ್ವೆ? ಅದಕ್ಕೆ ಸರ್ಕಾರಿ ಕೆಲಸ ಅಂದ್ರೆ ಪ್ರತಿಭೆಯ ಛಾಪು ಮೂಡಿಸೋ ಆಸೆ ಇರೋರು ಮೂಗು ಮುರಿಯೋದು . ಅಹ್ತ್ವ "certificate" ಹಿಡ್ಕೊಂಡಿರೋರೆ ಮುಂಚೂನಿಯಲ್ಲಿ ಓಡೋದು.<br />
<br />
ಇಂದಿಗೂ ಸಹ ISRO ದವರು ಎಷ್ಟೋ ಬಿಡಿಭಾಗಗಳನ್ನು ಅಮದು ಮಾಡಿ ತಯಾರಿಸೋದು, ಎಲ್ಲಾ manufacture ಮಾಡೋಲ್ಲ. ಯಾಕಂದ್ರೆ ಕೆಲವು ವಸ್ತುಗಳನ್ನ import ಮಾಡಿಕೊಂಡರೆ ಗುಣಮಟ್ಟ ಹಾಗು ಆ ದೇಶದವರೊಂದಿಗೆ ಒಳ್ಳೆ ಸಂಬಂಧ ಇರುತ್ತೆ. ಇಲ್ಲಾಂದ್ರೆ ನೀವು ಸ್ವಾವಲಂಬಿ, ನಾನು ಸ್ವಾವಲಂಬಿ ಹೆಂಗಾದ್ರೂ ಹಾಳಾಗಿ ಹೋಗು ನನ್ ಹತ್ರ ಬರಬೇಡ ಅಂತಾರೆ. ಜಗತ್ತು ಹೀಗೆ ನಡೆಯೋಕ್ಕೆ ಸಾಧ್ಯ ಇಲ್ಲ ಅಲ್ವ. People become lonely because they build walls instead of bridges ಅನ್ನೋ ಹಾಗೆ ಆಗಬಾರದು ಅಲ್ವ. ಪರಾವಲಂಬಿ ಆಗೋದ್ರಲ್ಲೂ ಸಹ ಅರ್ಥ ಇದೆ, ಒಂದು ಬಾಳುವೆ ಇದೆ. ಅದರ ಸರಿಯಾದ ಅರ್ಹತಾ ನಾವು ಹುಡುಕಿಕೋ ಬೇಕು ಅಷ್ಟೇ.<br />
<br />
ಮೂರ್ತಿ, ರಾಜು, ದೊರೈ, ಪ್ರೇಮ್ಜಿ ಮುಂತಾದವರು ಇದರಲಿ ಹೆಜ್ಜೆ ಹಾಕಿದ್ದೆ ಅದಕ್ಕೆ contracter ಆಗೋಕ್ಕೆ broker ಆಗೋಕ್ಕೆ, body shop ಮಾಡೋಕ್ಕೆ. ನಮ್ ದೇಶದಲ್ಲಿ ನಡೆಯೋದೇ ಅದಲ್ವ. ಇವರೆಲ್ಲ ಸಿಕ್ಕ ಪತ್ತೆ ಜಾಣರು, ಅವಕಾಶವಾದಿಗಳು. ಅವಕಾಶ ಸಿಕ್ತು ಬಾಚಿಕೊಂಡರು, ಇಲ್ಲಾಂದ್ರೆ ನಮ್ ದೇಶದಲ್ಲಿ ೧/- ರೂಪಾಯಿಗೆ ಬೆಲೆ ಬಾಳೋ ಕಳಪೆ coca -cola ಕುಡಿಯೋಕ್ಕೆ ೧೨/- ರೂಪಾಯಿ ಯಾಕೆ ತೆತ್ತುತಾರೆ? ೧೧/- ರೂಪಾಯಿ ಹೋಗೋದು ಎಲ್ಲಿಗೆ ಅಂತ ಯಾರಾದ್ರೂ ಪ್ರಶ್ನಿಸಿದಾರ? ಇಲ್ಲ!!!. ಧೋನಿಗೆ ೨ ರೂಪಾಯಿ, carry & forwarding agent ಗೆ ೫೦ ಪೈಸೆ, ಲಾಭ ೨/- ರೂಪಾಯಿ , advertisement ಗೆ ೪/- ರೂಪಾಯಿ, ಹಿಂಗೆ ಮುಂತಾದ ಲೆಕ್ಕಕ್ಕೆ ಅದು ೧೨/-ರೂಪಾಯಿ ತಲುಪೋದು ಅಂತ ಯಾರಾದ್ರೂ ಯೋಚಿಸ್ತಾರ? ಮತ್ತೆ ಈಗ ಯಾಕೆ ಹಾರಡೋದು ಇಂತಹ contracters ಮೇಲೆ. ಅವರು ತೆಪ್ಗೆ ಅವರ ವ್ಯವಹಾರ ಮಾಡ್ತಿದಾರೆ. ಯಾರು ಯಾರಿಗೂ ಹೇಳೋ ಹಕ್ಕಿಲ್ಲ ನೀನು ಇದೆ ವ್ಯವಹಾರ ಮಾಡ್ಬೇಕು, ಹಿಂಗೆ ಮಾಡಬೇಕು ಅಂತ. ಅದು workout ಸಹ ಆಗೋಲ್ಲ ಎಲ್ಲರು ದಂಧೆ ಮಾಡೋದೇ ದುಡ್ಡಿಗೆ ಅಷ್ಟೇ.<br />
<br />
street smartness ಅಂದ್ರೆ ಜೇಬಿಗೆ ಕತ್ರಿ ಹಾಕಿನೋ ಅಥವ avenue ರಸ್ತೆನಲ್ಲಿ 20/-ರೂಪಾಯಿ ವಸ್ತುಗೆ ಅರ್ಧ ಘಂಟೆ ಎಗಾಡಿ ೧೮/-ರೂಪಾಯಿ ಗೆ ತೊಗೊಳೋ ಬುದ್ಧಿವಂತಿಕೆ ಅನ್ಕೊಂಡಿದೀರ? ರಾತ್ರಿ ಹೊತ್ತು ಬೆಂಗಳೂರು footpath ನ ಮೇಲೆ ಮಲಗೆಬೇಕು ಅಂದ್ರೆ street gang ಗಳಿಗೆ ದುಡ್ಡು ಕೊಡಬೇಕು. incase, ಇಷ್ಟ ಇಲ್ಲ ಅಂದ್ರೆ ಸಲಿಂಗಿಗಳಿಂದ ಬಚಾವಗೆಬೇಕು, ಪೊಲೀಸರಿಗೆ ಮಾಮೂಲು ಕೊಡಬೇಕು. ಇಷ್ಟೆಲ್ಲಾ ಕಷ್ಟ ಇರೋ ಬೀದಿ ಜೀವನವನ್ನ ಎಷ್ಟು ಹಗುರವಾಗಿ ಇಲ್ಲಿ ಬಳಸಿದೀರ? street smartness ಅನ್ನೋದು ಇಂತಹ ಪರಿಸ್ಥಿತಿಗಳಲ್ಲೂ ಸಹ ಬೇಕಾಗುತ್ತೆ, ಹಾಗು ಇವೇನು ಸುಲಭ ಅಲ್ಲ.<br />
<br />
ಈ contractargalu "IDEA" ಇದೆ ಅಂತ ಡಂಗೂರ ಹೊಡ್ಕೊತಿರ್ಬೇಕಾದ್ರೆ ಪುಟಗಟ್ಟಲೆ ಅದರ ಬಗ್ಗೆ ಬರದು ಅರ್ಧ ಪ್ರಚಾರ ಕೊಡೋದೇ ಮಾಧ್ಯಮದವರು. ಬಿದ್ರೆ ಓದಿತೀರ, ಎದ್ರೆ ತಬ್ಕೊತೀರ, ನಿಮಗೆ ಏನು ಹಕ್ಕಿದೆ ಯಾವ್ದು ಸರಿ ಯಾವ್ದು ತಪ್ಪು ಅಂತ ಮಾತಾಡೋಕ್ಕೆ? ರಾಜಕಾರಣಿಗಳು/ಸರ್ಕಾರಿ ಅಧಿಕಾರಿಗಳು ಬಾಯಲ್ಲಿ ಬೆರೆಳು ಇಟ್ಕೊಂಡು ಚೀಪ್ತಾ ಕೂತಿದ್ರ? ಗಂಡಾಂತರ ಇಲ್ದೆ ಇರೋ ಒಂದೇ ಒಂದು ವ್ಯವಹಾರದ ಬಗ್ಗೆ ಮಾತಾಡಿದ್ದಿದ್ರೆ ತುಂಬಾ ಅನುಕೂಲ ಆಗಿರೋದು, alas ವ್ಯವಹಾರ ಅಂದ್ರೆ risk ಅನ್ನೋದು ಯಾವ ಹೆಬ್ಬೆಟ್ಗಾದ್ರು ತಿಳಿದ ವಿಚಾರ. ಅದನ್ನ ಅಬ್ಬರಿಸಿ ಬೊಬ್ಬೆ ಹೊಡೆದು ಬಿಟ್ರೆ ಅದು ಬದಲಾಗಿಬಿಡೋಲ್ಲ. ಯಾರಿಗೆ ಯಾರು ಬೇಕೋ ಅಂಥವರನ್ನೇ ಆಯ್ಕೆ ಮಾಡಿಕೊಲ್ಲೋದ್ದು ಸಹಜ, ofcourse, at a price tag. ವಿದೇಶದವರು - ನಮ್ಮನು ಆಯ್ಕೆ ಮಾಡಿದರು, ನಮ್ಮ ದೇಶದ ಕಂಪನಿ - ನಮ್ಮವರನ್ನು. ತಪ್ಪೇನು? ಇಂಥಹ ಪರಿಸ್ಥಿತಿಯಲ್ಲೂ ಸಹ ನಮ್ಮ ಕನ್ನಡಿಗ ವೈದ್ಯರಿಗೆ ನರ್ಸು ಅಂತ ಅಂದ್ಬಿಟ್ರೆ ಅವರುಗಳು ಕೇರಳ ಇಂದಾನೆ ಅಮದು ಆಗಿರಬೇಕು. ಇಂಥಹ ನಾಚಿಕೆ ಗೆಡಿತನದ ಪರಿಸ್ಥಿತಿ ನಮ್ಮ ಕನ್ನಡಿಗರ ಬಾಳು? ಅವರಿಗೆ ಕನ್ನಡ ಬರೋಲ್ಲ ನಮ್ಮವರಿಗೆ ಮಲಯಾಳಂ ಯಾಕೆ ಬರಬೇಕು? ಈ ಥರ communication gap ಇರೋ ಜೀವನ-ಮೃತ್ಯು ಸನ್ನಿವೇಶದ ವಿರುದ್ಧ ಬರೆಯಿರಿ. ಯಾರಿಗಾದರು ಜ್ಞಾನೋದಯ ಮಾಡ್ಬೇಕು ಅಂದ್ರೆ.<br />
<br />
IIT/IIM ತೊಗೊಳ್ಳಿ ಅಲ್ಲಿ ನಿಮಗೆ entrepreneur ಗಳು ಸಿಗ್ತಾರೆ :) ೧ ಕೋಟಿ ಸಂಬಳ ತಿರಸ್ಕರಿಸಿ ತಮ್ಮ ತಲೆ ಹಾಗು contacts ಉಪಯೋಗಿಸಿ ಏನೋ ಒಂದು ಸಾಧಿಸ್ತಾರೆ. mass communication ನಲ್ಲಿ PG ಮಾಡಿದ ಪದವಿ ಧರರಿಗೆ ಭಾಷೆ ಹೇಗೆ ಬಳಸಬೇಕು ಅನ್ನೋದೇ ಗೊತ್ತಿರೋಲ್ಲ. ಅಂಥಾದ್ರಲ್ಲಿ ಅವರೆಲ್ಲ entrepreneur ಯಾಕೆ ಆಗೋಲ್ಲ ?? ಯಾವ ಯಾವ ಕಂಪನಿಗೆ ಏನು ಉದ್ದೇಶ,ಧ್ಯೇಯ ಇರುತ್ತೋ ಅವರು ಅವನ್ನೇ ಮಾಡೋದು, service ಕಂಪನಿಯವರು ಸಣ್ಣದಾಗಿ product ಶುರು ಮಾಡ್ತೀವಿ ಅಂತ ಕೂತರೆ serive sector ಗು ಹೊಡೆತ ಬೀಳುತ್ತೆ ಅಥವ product group ಅನ್ನೋದು ಸಫಲ ಆಗೋಲ್ಲ. no man can sail in two boats ಅಂತಾರಲ್ಲ ಹಾಗೆ.<br />
<br />
ಹೆಚ್ಚಿನ ತಂತ್ರಾಂಶ ಅಭಿಯಂತರರು pursuit of knowledge ಬಿಟ್ಟು pursuit of money ಹಿಂದೇನೆ ಹೋಗೋದು . ಯಾಕಂದ್ರೆ ನಾಳೆ ದಿನ ಸಮಾಜದಲ್ಲಿ ಅವರಿಗೆ ಗೌರವ, ಮನ್ನಣೆ ಸಿಗೋದು ಅವನ ಸ್ಥಿತಿ ಗತಿ ನೋಡಿನೆನೆ. ಹರ್ಕಲ್ ಚಪ್ಲಿ , ಕಿತ್ಹೊಗಿರೋ ಶರ್ಟ್ ಹಾಕೊಂಡಿರೋ ಮೆಧಾವೀನ ಯಾವನು ಕ್ಯಾ-ರೆ ಅನ್ನೋಲ್ಲ. ಆದ್ರೆ ಈ pursuit of money ಹಿಂದೆ ಹೋದವರು ಚೆನ್ನಾಗಿ ದುಡ್ಡು ಮಾಡಿ ತಾಯಿನಾಡಿಗೆ ವಾಪಸ್ಸ್ ಬಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾವಿರ ಉದಾಹರಣೆಗೆಳಿವೆ. ಇವೆಲ್ಲ ನಿಮಗೆ ತಿಳಿದಿಲ್ಲ ಅನ್ನೋದು ಆಶ್ಚರ್ಯ!! coding, design ಅಲ್ಲದೆ project management, risk management ಅನ್ನೋದನ್ನು ಸಹ ನಾವು ಕಲಿತೀವಿ. ಇವೆಲ್ಲ ಒಂದು project ಸಫಲ ಮಾಡ್ಬೇಕು ಅಂದ್ರೆ ಬೇಕಾಗಿರೋ "core skills".<br />
<br />
ಗುತ್ತಿಗೆ ಕಾಮಗಾರಿ ಅಂದಿಗೂ ತಪ್ಪಲ್ಲ, ಇಂದಿಗೂ ತಪ್ಪಿಲ್ಲ, ಯಾಕಂದ್ರೆ service ಇಲ್ಲದೆ ಇರೋ product ಕೊಂಡುಕೊಳ್ಳುವುದಕ್ಕೆ customer ಏನು ಕಿವಿ ಮೇಲೆ ಹೂವ ಇಟ್ಕೊಂದಿರುವುದಿಲ್ಲ. product ಅಂದ್ರೇನು ಅಂತಾನೆ confuse ಆಗ್ಬೇಕು ಅಷ್ಟು ಸರ್ತಿ product, product anta ಉಲ್ಲೇಖ ಮಾಡಿದೀರ :).<br />
product ಅನ್ನೋದು nut bolt ಇಂದ ಕೂದಿರೋ ವಸ್ತೂನೆ ಆಗಬೇಕಿಲ್ಲ. web site ಮಾಡಿದ್ರು ಸಹ ಅದು ಒಂದು product, ನೀವು ಕಂಪನಿಯೊಳಗೆ ನುಗ್ಗ ಬೇಕಾದ್ರೆ swipe ಮಾಡೋ card ಸಹ IT product, ವಿಜಯ ಕರ್ನಾಟಕಕ್ಕೇ ಸಂಭಂದಿಸಿದ ಹಾಗೆ ಇರೋ ತಂತ್ರಾಂಶ ಸಹ ಭಾರತದವರೇ ಮಾಡಿದ IT PRODUCT. Tally ಸಹ ಒಂದು accounting product .ಇದು ಯಾವ್ದ್ರಲು nut bolt ಇರೋಲ್ಲ, ಅಮದು ಮಾಡಿರೋಲ್ಲ. ನಮಗೆ ಎಷ್ಟು ಉಪಯೋಗಕ್ಕೆ ಬೇಕೋ ಅಷ್ಟು software product ಗಳನ್ನ ಒದಗಿಸೋಕ್ಕೆ ಸಾವಿರ ಕಂಪೆನಿಗಳಿವೆ ಅವಲ್ಲೇ product ಕಂಪನಿಗಳೇ. ಆದ್ರೆ ರಫ್ತು ಮಾಡೋಕ್ಕೆ ಹೋಗಿರೋಲ್ಲ ಅಷ್ಟೇ.<br />
<br />
ವ್ಯವಹಾರ ಮಾಡೋಕ್ಕೆ ಬಂದಿರೋರಿಗೆ ಸಮಾಜ ಸೇವೇನು ಮಾಡಿ ಅಂದ್ರೆ ಹೇಗೆ? ಅವರಿಗೆ ಅದರ ಅರಿವಿದ್ದರೆ ಮಾಡ್ತಾರೆ ಇಲ್ಲಾಂದ್ರೆ compell ಮಾಡೋಕ್ಕೆ ನಾವು ಯಾರು? ಕಂಪನಿ ಶುರು ಮಾಡಿ ೧೦ ಜನಕ್ಕೆ ಕೆಲಸ ಸಿಗೋ ಹಾಗೆ ಮಾಡೋದೇ ಒಂದು ಸಮಾಜ ಸೇವೆ. ಅದ್ರಲ್ಲಿ ಹೋಗ್ಬಿತ್ತು college ಅಲ್ಲಿ ಒಂದು division ಶುರು ಮಾಡಿ ಅಂತ ಕೇಳೋದ್ರಲ್ಲಿ/ idea ಕೊಡೋದ್ರಲ್ಲಿ ಏನು ಅರ್ಥ ಇದೆ? ಅಷ್ಟಕ್ಕೂ ಇಂಥಾಹ ಘಟಕಗಳು ಕೆಲವು ಕಾಲೇಜಿನಲ್ಲಿದೆ "RV-TIFAC" ಅನ್ನೋದು ಬೆಂಗಳೂರಿನಲ್ಲಿರುವ RV ಕಾಲೇಜ್ ಜೊತೆಗೆ ಹೊಂದಿಕೊಂಡು ಕೆಲಸ ಮಾಡುವ TATA ನವರ ಒಂದು ಅಂಗ ಸಂಸ್ಥೆ. IIT ಗಳಲ್ಲಿ ಕಂಪನಿ sponsored LAB ಗಳಿರುತ್ತೆ, ಅಲ್ಲಿ ವಿಧ್ಯಾರ್ಥಿಗಳು ತಮ್ಮ ಪ್ರಯೋಗ ಸಂಶೋಧನೆ ಮಾಡ್ತಾರೆ. ಬೆಂಗಳೂರಿನ IISc ಯಲ್ಲಿ Philips,TI ಅವರಿಂದ sponsor ಆಗಿ maintain ಆಗ್ತಿರೋ Lab ಗಳಿವೆ. ಇದರ ಬಗ್ಗೆ ತಾವು ದಯವಿಟ್ಟು update ಆಗ್ಬೇಕು. ಇಲ್ಲೇನು ಲೋಕ ಕಲ್ಯಾಣ ಕೆಲಸಗಳು ನಡೆಯೋಲ್ಲ Philips,TI ನವರು ತಮ್ಮ ಸಣ್ಣ ಪುಟ್ಟ project ಗಳನ್ನು ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಂದ ಮಾಡಿಸಿಕೊಳ್ತಾರೆ ಅಷ್ಟೇ. ಆದ್ರೆ RV-TIFAC ನಲ್ಲಿ ನಾ ಕಂಡಂತೆ ಒಳ್ಳೆ ಸಂಶೋಧನಾ ಕಾರ್ಯ ನಡೆಯುತ್ತೆ. ಇವೆಲ್ಲ ಉದಾಹರಣೆಗಳು ನಾ ಕಂಡಂತೆಯೇ ನಿಮಗೆ ತಿಳಿಸುತ್ತಿದ್ದೇನೆ. ಸಂಶೋಧನಾ ಕಾರ್ಯ ನಡೆಯೋದೇ ಇಲ್ಲ ಅಂತ ಏಕ ಏಕಿ ಹೇಳಿಬಿಟ್ರೆ ಇವನ್ನೆಲ ನೋಡಿರೋ ನಂಗೆ heart attack ಆದರು ಆಗಬಹುದು :).<br />
<br />
Pure science ಹೊಟ್ಟೆ ಹೊರೆದುಕೊಳ್ಳಬಹುದೇ?? ಮುಜರಾಯಿ ಇಲಾಖೆಗೆ ಸಂಬಂಧ ಪಟ್ಟ ದೇವಸ್ಥಾನಕ್ಕೆ ಸೇರಿ ಕೆಲಸ ಮಾಡೋ ಪೂಜಾರಿ ಥರ ಆಗೋಗುತ್ತೆ ಅವನ ಬಾಳು. ಜ್ಞಾನ, ಸಾಮರ್ಥ್ಯ ಇದ್ರೂ ತಿಂಗಳ ಕೊನೆಗೆ ೧೫೦೦-೨೦೦೦ ಸಂಬಳ ?? :-o ಈ ಗತಿ, ಆ ವೃತ್ತಿಯನ್ನೇ ನಂಬಿ ಕಷ್ಟ ಪಡೋ ಪೂಜಾರಿಗಳಿಗೆ ಬೇಕಾ? ಹಾಗೇನೇ pure science ಗೆ ಹೋಗ್ತೀನಿ ಅಂದ್ರೆ ನಮ್ ದೇಶದಲ್ಲಿ scope ಇಲ್ಲ. ಸಿಕ್ಕಾಪಟ್ಟೆ talent ಇದ್ರೆ ಅವನು ವಿದೇಶಕ್ಕೆ ಹಾರ್ತಾನೆ. ನಮಗೆ ಉಪಯೋಗಿಸಿಕೊಳ್ಳುವ talent ಬರಬೇಕು ಮೊದಲು, ಸಂಪನ್ಮೂಲ ಇದ್ದು ಸಹ ಅದನ್ನ ಸಮರ್ಪಕವಾಗಿ ಬಳಸಿಕೊಲ್ಲೋ ಜ್ಞಾನ ಇಲ್ಲ ಅಂದ್ರೆ ಅದು ಇದ್ರೆಷ್ಟು ಬಿಟ್ಟರೆಷ್ಟು. ಸರ್ಕಾರದಿಂದ ನಾವು ಯಾಕೆ ಬಯಸಬಾರದು?? vote ಮಾಡೋಲ್ವೆ? ಪಂಚ ವಾರ್ಷಿಕೆ ಯೋಜನೆ ಅಂತ ೩೦-೪೦ ವರ್ಷ ಎಳೆಯೋ ಜನರೇ ಆಳುವಾಗ dynasty rule ಇಂದ ದೇಶ ಉದ್ಧಾರ ಆಗೋದು ಹೇಗೆ? vote ಸಹ ಮಾಡ್ಬೇಕು, ತೆರಿಗೆಯನ್ನು ಕಟ್ಟಬೇಕು, ಕೊನೆಗೆ ಸಹಾಯವನ್ನು ಸಹ ನಾವೇ ಮಾಡ್ಬೇಕು. ಬಿಟ್ರೆ, ಬಂದ್ಬಿಟ್ಟು ತೊಳೆದು ಬಿಡಿ ಅಂತಾರೆ!!! ಮತ್ತೆ ಸರ್ಕಾರ ನಮಗೆ ಇರೋದ ನಾವು ಸರ್ಕಾರಕ್ಕೆ ಇರೋದ, ಸರ್ಕಾರಕ್ಕೆ ಒಳ್ಳೆ ಪ್ರಜೆಗಳಾಗಿ ಸಹಕರಿಸ್ತಿಲ್ವೆ ?? :-o ತೆರಿಗೆ ಎಲ್ಲಾ abolish ಮಾಡ್ಬಿಡಿ. ಅದೇ ದುಡ್ಡನ್ನ ಸಮಾಜ ಉದ್ಧಾರಕ್ಕಾಗಿ ಅಂತ ಮೀಸಲು ಇಟ್ಬಿಡಿ ಸಾಕು, ಆಗ India Shining ಆಗುತ್ತೆ. ಕೇಂದ್ರಕ್ಕೆ ೮೦೦೦೦ ಕೋಟಿ ಆದಾಯ ಕೊಟ್ರು ಸಹ ಪುಟಗೋಸಿ ೮೦೦೦ ಕೋಟಿ ಅನುದಾನಕ್ಕು ಅಂಗಲಾಚ್ಬೇಕು ನಾವು, ನಮ್ ನಾಡು ಉದ್ದಾರ ಹೇಗೆ ಆಗ್ಬೇಕು, ೮ ಕೋಟಿ ಸಹ ಕೊಡದೆ ಇರೋ UPA ಬೆಂಬಲಿತ ಬಿಹಾರಿಗೆ ೮೦೦೦ ಕೋಟಿ ಬೇಕಾದ್ರೂ ಅನುದಾನ ಮಾಡ್ತಾರೆ ದೇಶ ಉದ್ಧಾರ ಆಗೋಕ್ಕೆ ಅಂತ.. ಇದರ ವಿರುದ್ದ ಬರೀರಿ ಕ್ರಾಂತಿ ಮಾಡಿ, ಜಾಗೃತಿ ಮೂಡಿಸಿ ಮೊದಲು.<br />
<br />
Venture capitalist ಗಳು ಎಲ್ಲಾ okey,private players ಗೆ ಮಾತ್ರ ಅನ್ವಯ ಆಗ್ಬೇಕು yaake? ಸರ್ಕಾರ ಏನು ಕಿಸಿತಿದೆ? ಜಾಗೃತಿ ಮೂಡಿಸಬೇಕಾದ ಮಾಧ್ಯಮದವರು ಏನು ಕಿಸಿತಿದಾರೆ (ಚಡ್ಡಿ ಹಿಂದೆ ಹೋದರೆ?) ? ಯಾವನೋ journalist ಮೇಲೆ ಕೈ ಮಾಡಿಬಿಟ್ರೆ ಬೊಬ್ಬೆ ಹೊಡ್ಕೊಂಡು ಸಾಯೋ ಇತರ journalistgalige ನಮ್ ದೇಶದ ಮೇಲೆ ರಾಜಕಾರಣಿಗಳು, ಅಧಿಕಾರ ಶಾಹಿಗಳು ವಂಶ ಪಾರಂಪರ್ಯವಾಗಿ ಮಾಡ್ತಿರೋ ಅತ್ಯಾಚಾರ ಕಂಡು ಸಹ ಕಾಣದ ಹಾಗೆ ಸುಮ್ನೆ ಯಾಕೆ ಕೂತಿರೋದು. ನಮಗೆ ಸಂಬಂಧಿತ ಅಲ್ಲ ಅನ್ನೋ ಅಸಡ್ಡೆಯೇ ಅಥವ eye catching head lines ಆಗೋಲ್ಲ ಅನ್ನೋ ವಿಚಾರವೇ? love your job but never love your company ಅಂತ Abdul kalam ಅವರು ಹೇಳಿದಾರಂತೆ . :-) ಅದಕ್ಕೆ employers ಗು employee ಗಳಿಗೂ ಕೇವಲ ಸಂಬಳದ ಸಂಬಂಧ ಅಷ್ಟೇ. ನೆಂಟನನ್ನೇ ನಂಬಿಕೊಂಡು ಹಣ ಹೂಡೋಕ್ಕೆ ಆಗೋಲ್ಲ ಇನ್ನ ಕೆಲಸ ಮಾಡೋಕ್ಕೆ ಬಂದಿರೋ ವ್ಯಕ್ತಿನ ನಂಬಿ ಹಣ ಹೂಡೋದು ಎಷ್ಟು ಸರಿ?? :-o ಎಷ್ಟೆಲ್ಲ risk ಇದೆ ಇದ್ರಲ್ಲ . ಆರಾಮಾಗಿ service ಮಾಡ್ಕೊಂಡು ತಿಂಗಳಿಗೆ ದುಡ್ಡು ಎಣೆಸಿಕೊಂಡು , ಬರೋ challenges ನ face ಮಾಡಿ ದಂಧೆ ನಡೆಸೋದೆ ಸಾಕಾಗಿರುತ್ತೆ. ಇನ್ನ, research ಗೆ ಇಳಿದು ಸುಮ್ನೆ ದುಡ್ಡು ಕಳೆದುಕೊಳ್ಳುವುದರಲ್ಲಿ ಏನ್ ಜಾಣತನ ಇದೆ ಅಂತ ಪ್ರತಿ ವ್ಯವಹಾರಿ ಯೂಚಿಸೊದ್ರಲ್ಲಿ ಅರ್ಥ ಇದೆ ಅಂತ ಅನ್ಸೊಲ್ವಾ?<br />
<br />
software boom ಆಗಿ ೧೫ ವರ್ಷ ಆಯ್ತು ಅಂತ ಯಾರು ಹೇಳಿದ್ದು ಸ್ವಾಮಿ? ೨೦೦೦ ಅಲ್ಲೇ ನೆಲಕ್ಕೆ ಅಪ್ಪಳಿಸಿತ್ತು , e-commerce ಹೊಡೆಸಿಕೊಂಡು ಹೋಯ್ತು, ನಾಯಿ ಕೊಡೆ ಥರ ಇದ್ದಾ website ಗಳು ತರೆಗೆಲೆಗಳಂತೆ address ಗೆ ಇಲ್ಲದಂತೆ ಹಾರಿ ಹೋದವು . ಈ ರೀತಿ ಪ್ರತಿ ೬-೭ ವರ್ಷಕ್ಕೊಮೆ ಆಗೋದು ಸಹಜ. ೧೫ ವರ್ಷ ಇಂದ ಬೂಮ್ ಇದೆ ಅಂತೀರಾ ಅದರ trend ಹೇಗಿದೆ ಅಂತ ಯಾಕೆ ವಿವರಿಸಿಲ್ಲ? ಮೊದಲು ಜೇಬು ಭಾರ ಇರಲಿಲ್ಲ ಹಾಗಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಎಲ್ರಿಗೂ ಜಾಣ ಕುರುಡು, ಜಾಣ ಕಿವುಡು, ಈಗ ಜೇಬು ಭಾರ ಆಗ್ತಿದ ಹಾಗೆ risk ಯಾಕೆ ಅನ್ನೋದನ್ನ ಹೇಳ್ಕೊಂಡು ಎಲ್ಲಾ ಜ್ಞಾನಿ ಗಳಂತೆ ಮಾತಾಡೋಕ್ಕೆ ಶುರು ಮಾಡಿದಾರೆ. ಸ್ವಲ್ಪ ಈ ವಿಚಾರದಲ್ಲಿ ಗಮನ ಹರಿಸಿ update ಮಾಡಿಕೊಳ್ಳಿ. software ಅನ್ನೋದು ಬರಿ ಏರಿಕೊಂಡು ಹೋಗ್ತಿದ್ದ ಉದ್ಯಮ ಅಲ್ಲ, ಎದ್ದು ಬಿದ್ದು ತತ್ತರಿಸಿ ಧೃತಿಗೆಡದೆ ಛಲ ತೋರಿದ ಉದ್ಯಮ. ಇದು ಹೀಗಾಗ್ತಿರೋದು ಮೊದಲಲ್ಲ, ನಿಮ್ಮ ಗಮನಕ್ಕೆ ಮೊದಲು ಬಂದಿರಬಹುದು, ವೃತ್ತಿಯಲ್ಲಿರುವವರಿಗೆ ಹೊಸತಲ್ಲ.. ಹಾಗಾಗಿ "ಜ್ಞಾನಿ"ಗಳನ್ನು ಸೃಷ್ಟಿಸೋ ಭರದಲ್ಲಿ ಇತಿಹಾಸ ಮರೆತು ಬರಿತಿದೀರ.<br />
<br />
ಈಗ stimulus plan ಘೋಷಿಸಿದ ಬಾಮ ಅವರನ್ನ ನಾವು ದೂಶಿಸ್ತೀವಿ ಅಂತ ನೀವು ಯಾಕೆ ಬಿಂಬಿಸ್ತಿದೀರ?? ಅವರು president ಆಗಿ ತಮ್ಮ ಜನತೆಗೆ ಹೇಗೆ ಸಹಾಯ ಮಾಡಬೇಕೋ ಮಾಡ್ತಿದಾರೆ. ನಮ್ ಸರ್ಕಾರಕ್ಕೂಕಾಳಜಿ ಇದ್ರೆ ಇಂಥಾದು ಒಂದೇ ಒಂದು ಏನಾದ್ರೂ ಕಿಸೀಲಿ ನೋಡೋಣ. ಅದು ಬಿಟ್ಟು ನೀವೇ ನಮಗೆ ಸಹಕಾರ ಕೊಡಬೇಕು ಇಂಥಹ ಪರಿಸ್ಥಿತೀಲಿ ಅಂತ ಅಂಗಲಾಚಿಸಿದರೆ, ಇವರನ್ನ ಮತ್ತೆ ಬರಿ red carpet meeting, tape cutting ceremony ಗೆ ಬಂದು smile ಮಾಡಿ, ಕೈ ಬೀಸಿ, ಮಾರುದ್ದ ಭಾಷಣ ಮಾಡಿ ಹೋಗೋದು,ಗ್ರಾಮ್ಯ ವಾಸ ಅಂತ ಇವರ ನಾಟಕ ನೋಡೋಕ್ಕ ಆಯ್ಕೆ ಮಾಡಿರೋದು? ನಾವು ಬ್ರಿಟೀಷರ political system ತೊಗೊಂಡಿದೀವೆ ಹೊರತು work culture ಅಲ್ಲ ಅನ್ನೋದು ರಾಜಕಾರಣಿಗಳು ತಿಳ್ಕೊಬೇಕು, ಮಾಧ್ಯಮದವರು ಬಿಂಬಿಸಬೇಕು ಇಂತಹವನ್ನ. ಬ್ರಿಟೀಷರು ವರ್ಷಕ್ಕೆ ೧೫೯ ದಿನ ಕಾರ್ಯಾಲಾಪ ಮಾಡಿದ್ರೆ ನಮ್ಮ ದೇಶದ ರಾಜಕೀಯ ಮಾಹಾನು(ಹೊಟ್ಟೆ)ಭಾವರು record breaking ೬೪.೪ ದಿನ ಎಷ್ಟೋ ಕೆಲಸ ಮಾಡಿದಾರೆ . ಅಂಕಿ ಅಂಶ accurate ಇಲ್ಲ ಆದ್ರೆ ratio ಹಿಂಗೆ ಇರೋದು :-o ಅದರಲ್ಲೂ ಸಹ ಹೊಡೆದಾಟ, ಬಡಿದಾಟ, ಕಿರುಚಾಟ, ಎಲ್ಲಾ ನಮ್ಮ ದುಡ್ಡಿನ ಮೇಲೆ ಇವರಗೆ ದರ್ಪ .<br />
<br />
ಕಾಲ ಮಿಂಚುತಾನೆ ಇರುತ್ತೆ ಅದನ್ನ ಉಪಯೋಗಿಸಿಕೊಳ್ಳುವ ಅವಕಾಶವಾದಿಗಳೇ ತುಂಬಿರೋ IT sector ಗೆ ಸದ್ಯಕ್ಕೆ ಗ್ರಹಣ ಹಿಡಿದಿದೆ. ಅದು ಬಿಟ್ಟ ನಂತರ ಮತ್ತದೇ ಹೊಳಪು ಮೂಡಿ ಬರುತ್ತೆ ಅಲ್ಲಿವರ್ಗು, ಯಾರೋ ಹೇಳಿದ ಮಾತು ಕೇಳ್ಕೊಂಡು, ಅರ್ಧಂಬರ್ಧ ಊಹೆ ಮಾಡಿ . ಶನಿವಾರಕ್ಕೊಂದು special ಕೊಡಲೇ ಬೇಕು ಅನ್ನೋ ಭರದಲ್ಲಿ ಆ ನಿಮ್ಮ ನಿಟ್ಟಿನಲ್ಲಿ ನಿಮ್ಮ ಅಭಿಮಾನಿಗಳಿಗೆ ನೋವ್ವು ಆಗದೆ ಇರೋ ಹಾಗೆ ಬರೆಯಿರಿ ಅನ್ನೋದೇ ನನ್ನ ಮನವಿ. ಸತ್ಯ ಯಾವತ್ತು ಕಹಿನೆ ಅದಕ್ಕೆ ಮಸಾಲೆ ಹಾಕಿ ಕೊಡಬೇಡಿ ಅಷ್ಟೇ, ಸರಳವಾದ ಕಹಿಯನ್ನೇ ಎಲ್ಲರ ಮುಂದಿಡಿ ಅಭ್ಯಂತರ ಇಲ್ಲ ಬೇಡದಿರುವ ಅಗದ್ದ ಮಸಾಲೆ ಹಾಕಬೇಡಿ.<br />
<br />
"ಸೊಕ್ಕನ್ನು ಸಂಪಾದಿಸ್ಕೊಳ್ಳಬೇಕು, ಗರ್ವವನ್ನು ಗಳಿಸಿಕೊಳ್ಳಬೇಕು" ಅನ್ನೋದು ನಿಮ್ಮ ನಂಬಿಕೆ ಅಲ್ಲವೇ :). ನಮ್ ಭಾರತದಲ್ಲಿ ಆ ಸೊಕ್ಕು, ಗರ್ವ ಬಹು ಬೇಗ ಬರೋದು ದುಡ್ಡಿನ ಮದ ಇದ್ದಾಗಲೇ ಹೆಚ್ಚು. ಹಾಗಾಗಿ ಕೆಲವು ಶೋಕಿ ಪ್ರವೃತ್ತಿ ಅವರ ನಡುವಳಿಕೆ ಇಡಿ IT ಸಮುದಾಯದ ಪ್ರತಿಬಿಂಬ ಅಂತ ಬಿಂಬಿಸೋದು ಸುತಾರಾಂ ಒಪ್ಪಿಕೊಳ್ಳದೆ ಇರೋದಕ್ಕೆ ಆಗದ ಮಾತು. "ಒಂದು ವಿಷ್ಯ ಚೆನ್ನಾಗಿ ತಿಳ್ಕೊಂದ್ರಷ್ಟೇ ಹಠಕ್ಕೆ ಬಿದ್ದು ವಾದ ಪ್ರತಿವಾದ ಮಂಡಿಸಬಹುದು" ಅನ್ನೋದು ಸಹ ನಿಮ್ಮದೇ ವಾದ ತಾನೇ? .. ಈಗ ನಾನು ಮಂಡಿಸಿರುವ ವಾದ/ ಸಮರ್ಥನೆ /ಪ್ರತಿರೋಧ ಬಗ್ಗೆ ನಿಮಗೆ ಪ್ರತಿಕ್ರಿಯಿಸೋಕ್ಕೆ ಆಗುತ್ತಾ?? IT field ಅಲ್ಲೇ ಇದ್ದು ನಿಮಗೆ challenge ಮಾಡ್ತೀನಿ. ನಿಮ್ಮ ಉದ್ಯಮದ yellow journalism ಬಗ್ಗೆನು ಸಹ ಒಂದು ಅಂಕಣ ಬರೆಯಿರಿ, ITyalli ನಿಮಗೆ ನಿಮ್ಮ ಉದ್ಯಮದ yellow journalism ನಂತಹ ಕರಾಳ ವಿಂಗಡಣೆ ಹುಡುಕಿದರು ಸಿಗೋದಿಲ್ಲ. ಸಿಕ್ರು ಅವನ್ನು ವಿರಳ, ಬೆರಳೆಣಿಕೆ ಅಥವಾ ಸಣ್ಣ ಪುಟ್ಟ isolated ghanta ಗಳು ಅಂತ ನಿರ್ಲಕ್ಷಿಸಬಹುದು.. ಗಾಜಿನ ಮನೆಯಲ್ಲಿರುವವರು ಇತರರ ಮನೆಯ ಕಡೆ ಕಲ್ಲೋಗೆಯುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಅವರಿಗೆ ಹಾನಿಕರ ಅಲ್ವ!!!!<br />
<br />
ಕನ್ನಡಿಗರಿಗೆ, ದಿನ ಪತ್ರಿಕೆಯಲ್ಲಿ ಏನಾದ್ರೂ ಒಳ್ಳೆ ವಿಚಾರ ಓದೋಣ ಅನ್ನೋ ಆಸೆ ಇಟ್ಕೊಂಡು ಬಂದವರಿಗೆ ಇಂತಹ ಗುಣಮಟ್ಟ ಇಲ್ದೆ ಇರೋ, ಸಂಶೋಧನೆ ಮಾಡದೆ, ಇತಿಹಾಸ ತಿಳಿಯದೆ, ಸತ್ಯಾಸತ್ಯತೆ ಬಗ್ಗೆ ಪರಾಮರ್ಶಿಸದೇ, ಊಹಾ ಪೋಹ ಗಳ ಮೇಲೆ ಆಧರಿಸಿ ವಿಚಾರ ಮಂಡಿಸಿರೋ ಲೇಖನ ಮುಂದೆ ಇಡೋದೇ ದೊಡ್ದೆ ತಪ್ಪು!!! ನಿಮ್ಮ ಧೋರಣೆ ಇನ್ನೂ ಸರಿ ಅನ್ನುವುದಿದ್ದರೆ ನಾನು ಮುಂದಿಟ್ಟಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ... ಸಾಮ್ಯತೆ ತೋರಿದ ವಿಷಯಗಳು ತಪ್ಪು ಅಂತ ಸಾಧಿಸಿ..<br />
<br />
--- ಇಂತಿ<br />
ನೊಂದ ಅಭಿಮಾನಿ ಹಾಗು ತಂತ್ರಾಂಶ ಅಭಿಯಂತprasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-61357032317953704782010-05-17T03:31:00.000-07:002010-05-17T04:06:32.672-07:00ಹಿಮಾಲಯ ಚಾರಣ<table style="width:194px;"><tr><td align="center" style="height:194px;background:url(http://picasaweb.google.com/s/c/transparent_album_background.gif) no-repeat left"><a href="http://picasaweb.google.com/prasad.preeti/Pixed?feat=embedwebsite"><img src="http://lh6.ggpht.com/_OF8KAF16hTg/S_EgAYP4u2E/AAAAAAAACRY/NjMOWdSyebY/s160-c/Pixed.jpg" width="160" height="160" style="margin:1px 0 0 4px;"></a></td></tr><tr><td style="text-align:center;font-family:arial,sans-serif;font-size:11px"><a href="http://picasaweb.google.com/prasad.preeti/Pixed?feat=embedwebsite" style="color:#4D4D4D;font-weight:bold;text-decoration:none;">pixed</a></td></tr></table>ಕುಲ್ಲು ಹಾಗು ಮನಾಲಿ ಮಧ್ಯದಲ್ಲಿರುವ ಸೌರ್ಕುಂಡಿ ಪಾಸ್ ಎಂಬ ಜಾಗದ ಚಾರಣ ಹೋದವಾರವೆ ಅಂದರೆ ೦೯-೦೫-೨೦೧೦ಕ್ಕೆ ಮುಗಿದಿದ್ದರು ಸಾವಿರಾರು ಕಿ.ಮಿ ಕ್ರಮಿಸಿ ಕೇವಲ ಕುಲ್ಲು ಮನಾಲಿ ಬೆಟ್ಟ ನೋಡಿದರೆ ಶ್ರಮಕ್ಕು ಹಾಗು ವ್ಯಯಿಸಿದ ದುಡ್ಡಿಗೆ ಪೂರ್ತಿ ಲಾಭ ಪಡೆಯಲಾಗದು ಎಂದು ಯೋಚಿಸಿ ಮತ್ತೊಂದು ವಾರದ ಪ್ರವಾಸ ಯೋಜನೆ ಹಾಕಿ ಮಸ್ಸೂರಿ(ಮನ್ಸೂರಿ-ಸ್ಥಳಿಯ ಭಾಷೆಯಲ್ಲಿ), ಹರಿದ್ವಾರ, ಋಷಿಕೇಶವನ್ನು ಸಹ ಸುತ್ತಿ ಬರೋಣ ಎಂದು ನಿರ್ಧರಿಸಿ ಶನಿವಾರ ರಾತ್ರಿ ೧೫-೦೫-೨೦೧೦ ಹಿಂತಿರುಗುವ ಯೋಜನೆ ಸಿದ್ಧಪಡಿಸಿ ಹಿಮಾಚಲ ಪ್ರದೇಶದ ಚಳಿಯಲ್ಲಿ ಹಿಮಗಟ್ಟಿ, ಉತ್ತರ ಪ್ರದೇಶದ ಬಿಸಿಲಲ್ಲಿ ಕರಕಲಾಗಿ ಪ್ರಕೃತಿಯನ್ನು ಸವಿಯುವಾಗ ಕ್ಲಿಕ್ಕಿಸಿದ ಚಿತ್ರಗಳನ್ನು ಪಿಕಾಸದಲ್ಲಿ ಅಪ್-ಲೋಡ್ ಮಾಡಿದ್ದೇನೆ. ನಿಮಗು ಇಷ್ಟವಾಗುತ್ತವೆ ಎಂದು ಭಾವಿಸಿದ್ದೇನೆ.prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-62853475965524455932010-04-21T05:04:00.001-07:002010-04-21T05:04:30.449-07:00ಪರಿಹಾರ ಇದೆಯೆ?ಗೆಳೆಯರೆ,<br />
ಮೊನ್ನೆ "ಮಲ್ಲೇಶರಂ"ನಲ್ಲಿರುವ "ಕಂತ್ರಿ ಸ್ಕ್ವೇರ್", ಕ್ಷಮಿಸಿ ಕನ್ನಡಕ್ಕೆ ಮನ್ನಣೆ ನೀಡದ ಆ "ಮಂತ್ರಿ ಸ್ಕ್ವೇರ್"ಅನ್ನು "ಕಂತ್ರಿ ಸ್ಕ್ವೇರ್" ಎಂದರೂ ನನಗೆ ಬೇಸರವಾಗುವುದಿಲ್ಲ. ಈ ಬರಹದ ಉದ್ದೇಶ ಕಂತ್ರಿ ಸ್ಕ್ವೇರ್ನ ಕನ್ನಡ ಕಡೆಗಣನೆ ತಿಳಿಸಲು ಅಲ್ಲ.. ಬದಲಾಗಿ ಕನ್ನಡ,ಕನ್ನಡಿಗರ ಸಂಸ್ಕೃತಿಯ ಮೇಲೆ ಪರಭಾಷಿಕರ ಆರ್ಭಟ. ಮಲ್ಲೇಶ್ವರದಲ್ಲಿ ಬಿಬಿಎಂಪಿ ಫಲಕಗಳ ಹೊರತಾಗಿ ಎಲ್ಲೆಲ್ಲಿಯೂ "ಮಲ್ಲೇಶ್ವರಂ" ಆಗೆ ಉಳಿದಿರುವುದು ದು:ಖಕರ ವಿಚಾರ. ಹೀಗೆ ಯೋಚಿಸುತ್ತಿರುವಾಗ ಶಿವನಸಮುದ್ರವನ್ನು "ಶಿವನಸಮುದ್ರಂ" ಎಂದು ಉದ್ದೇಶ ಪೂರಿತವಾಗಿ ಮುದ್ರಿಸಿದ/ಪ್ರಕಟಿಸಿದ ಬಗ್ಗೆ ಎಲ್ಲೊ ಚರ್ಚೆಯಾದ ವಿಚಾರ ಓದಿದ ನೆನಪು ಬಂತು.. ಜಾಗೃತ ಕನ್ನಡಿಗರು (ಬೆರಳೆಣಿಕೆಯ)!!!! ಇಂತಹ ಬೆಳವಣಿಗೆಯನ್ನು ಖಂಡಿಸುತ್ತಾ ಆಯಾ ಸಮಯ ಸಂದರ್ಭದಲ್ಲಿ ಪರಿಸ್ಥಿತಿಗನುಗುಣವಾಗಿ ದಿನಪತ್ರಿಕೆ ಮುಖೇನ ಅಥ್ವಾ ದೂರ್ಮಿಂಚೆ(ದೂರು+ಮಿಂಚೆ =ಮೈಲ್ ಕಂಪ್ಲೈಂಟ್)ಮೂಲಕ ಸೂಕ್ತ ಅಧಿಕಾರಿಗಳಿಗೆ/ಮೇಲ್ವಿಚಾರಿಕರಿಗೆ ಅವರ ತಪ್ಪನ್ನು ತಿಳಿಸಿ ಕೆಲವೊಮ್ಮೆ ಅವರ ಧೋರಣೆ ಖಂಡಿಸಿ ಪತ್ರ ಬರೆಯುತ್ತಲೆ ಹೋರಾಡುತಲಿದ್ದಾರೆ,ಇರುತ್ತಾರೆ.ಹಲವಾರು ಸಂದರ್ಭಗಳಲ್ಲಿ ಹಲವು ಪ್ರಕರಣಗಳಲ್ಲಿ ನಿರೀಕ್ಷಿತ ಫಲಿತಾಂಶ ಬಹು ಬೇಗನೆ ದೊರೆತಿದೆ ಕೆಲವೊಮ್ಮೆ ಕವಡೆ ಕಿಮ್ಮತು ಸಹ ದೊರಕದೆ ಹೋಗಿದೆ. ಹೆಚ್ಚಿನ ಬಾರಿ ಗೆಲುವನ್ನು ಸಂಭ್ರಮಿಸುತ್ತ ಕೆಲವು ಬಾರಿ ನೋವನ್ನು ನೆಕ್ಕಿಕೊಳ್ಳುತ್ತಾ ಕನ್ನಡಿಗ ಧೃತಿಗೆಡದೆ ನಡೆಯಲೇಬೇಕಾಗಿದೆ ಯಾಕೆಂದರೆ ಕನ್ನಡ ಪರ ಹಕ್ಕೊತ್ತಾಯ ಹೂವಿನ ಹಾಸಿನಷ್ಟು ಮೆತ್ತಗಿಲ್ಲ ಹೆಚ್ಚಿನ ಬಾರಿ ಕಲ್ಲು ಮುಳ್ಳುಗಳೆ ಸ್ವಾಗತಿಸುತ್ತವೆ. <br />
ನೆನ್ನೆ ನಾನು ಗೂಗಲಿಸಿದ ಪದಗಳ ಜಾಡು ಬೆನ್ನತ್ತಿ ಹೋದಾಗ ಆಘಾತಕಾರಿ ವಿಷಯ ತಿಳಿಯಿತು!!! ಕರ್ನಾಟಕ,ಕನ್ನಡಿಗರ ಬಗ್ಗೆ ತಪ್ಪುಗಳು ಸಾವಿರಾರು ಯಾಕೆ ಲಕ್ಷ ಬಾರಿ ಪುನರಾವರ್ತನೆಯಾಗಿದೆ. ಈ ಫಲಿತಾಂಶಗಳು ಕೇವಲ ಕನ್ನಡಿಗರಿಗೆ ಸೀಮಿತವಾದ ಮಾಹಿತಿಯಾಗದೆ ಜಗತ್ತಿನ ಎಲ್ಲಾ ಮೂಲದ ಜನರನ್ನು ತಲುಪುವ ಮಾಹಿತಿ ಇದಾಗಿದೆ, ಈ ಮಾಹಿತಿ ಗೂಗಲಿನ ಹುಡುಕಾಟದ ಫಲಿತಾಂಶ ಆಧಾರಿತ. ಶಿವನಸಮುದ್ರ ಶಿವನಸಮುದ್ರಂ,ಕೋರಮಂಗಲ ಕೋರಮಂಗಲಂ,ಕಲಾಸಿಪಾಳ್ಯ ಕಲಾಸಿಪಾಲ್ಯಂ.. ಆಗಿದೆ. ಹೀಗೆ ಹುಡುಕುತ್ತಾ ಹೋದರೆ ಅದೆಷ್ಟಿದೆಯೊ!!! ದೂರ್ಮಿಂಚೆ ಬರೆದು ಪ್ರತಿಭಟಿಸಿ,ಅವರಿಗೆ ತಿಳಿಸಿ,ಸಿಗುವ ಫಲಕ್ಕೆ ಎಷ್ಟರ ಮಟ್ಟಿಗೆ ಗೆಲುವು ಅಂತ ಎದೆ ತಟ್ಟಿಕೊಳ್ಳಬಹುದು?ನೀವು ಯಾರು ಯಾರಿಗೆ, ಎಷ್ಟು ಬಾರಿಗೆ ಬರೆಯುತ್ತೀರಾ? ಸಾಯೋವರ್ಗು ದೂರ್ಮಿಂಚೆ ಬರೆದ್ರು ಬರಿತಾನೆ ಇರ್ಬೇಕಾಗುತ್ತೆ :( ಇಂದಿಗೂ ಸಹ ಬೆಂಗಳೂರಿನಲ್ಲಿರುವ ಟಾಟಾ ಇಂಡಿಕಾಂ ಸೇವಾ ಸಂಸ್ಥೆಯಲ್ಲಿ ನಿಮಗೆ ಕನ್ನಡದಲ್ಲಿ ಸೇವೆ ದೊರೆಯುವುದಿಲ್ಲ. ಕನ್ನಡಿಗರು ಎಷ್ಟೆ ಶಂಖ ಹೊಡೆದುಕೊಂಡರು ಈ ಪರಿಸ್ಥಿತಿ ಬದಲಾಗಿಲ್ಲ. ಕನ್ನಡ ಗ್ರಾಹಕರು ಬೇಕು ಆದರೆ ಇವರುಗಳು ಕನ್ನಡ ಸೇವೆ ಒದಗಿಸುವುದಿಲ್ಲ..<br />
ಮೊದಲಿನ ಪ್ರಶ್ನೆ ಈ ಪರಿಸ್ಥಿತಿ ಸರಿಯಿದೆಯೆ? ತಪ್ಪಿದ್ದರೆ ಇದಕ್ಕೆ ಪರಿಹಾರ ಏನು? ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ದಂಡ ವಿಧಿಸಲು ಆಗುವುದಿಲ್ಲವೆ? ಅನಿಸಿಕೆ ತಿಳಿಸಿ..<br />
<br />
--<br />
ಪ್ರಸಾದ್prasadhhttp://www.blogger.com/profile/08103222594500014783noreply@blogger.com0tag:blogger.com,1999:blog-5119665325338414276.post-14599357965825829402010-03-24T09:11:00.000-07:002010-03-24T09:12:15.138-07:00ಬಿ.ಬಿ.ಎಮ್.ಪಿ ಚುನಾವಣೆ ಬರ್ತಿದೆ... ನಿಮ್ ಪಕ್ಷ ಯಾವ್ದು??<meta equiv="Content-Type" content="text/html; charset=utf-8"><meta name="ProgId" content="Word.Document"><meta name="Generator" content="Microsoft Word 11"><meta name="Originator" content="Microsoft Word 11"><link rel="File-List" href="file:///C:%5CDOCUME%7E1%5CHRENUK%7E1.VIS%5CLOCALS%7E1%5CTemp%5Cmsohtml1%5C01%5Cclip_filelist.xml"><!--[if gte mso 9]><xml> <w:worddocument> <w:view>Normal</w:View> <w:zoom>0</w:Zoom> <w:punctuationkerning/> <w:validateagainstschemas/> <w:saveifxmlinvalid>false</w:SaveIfXMLInvalid> <w:ignoremixedcontent>false</w:IgnoreMixedContent> <w:alwaysshowplaceholdertext>false</w:AlwaysShowPlaceholderText> <w:compatibility> <w:breakwrappedtables/> <w:snaptogridincell/> <w:wraptextwithpunct/> <w:useasianbreakrules/> <w:dontgrowautofit/> <w:usefelayout/> </w:Compatibility> <w:browserlevel>MicrosoftInternetExplorer4</w:BrowserLevel> </w:WordDocument> </xml><![endif]--><!--[if gte mso 9]><xml> <w:latentstyles deflockedstate="false" latentstylecount="156"> </w:LatentStyles> </xml><![endif]--><style> <!-- /* Font Definitions */ @font-face {font-family:PMingLiU; panose-1:2 2 3 0 0 0 0 0 0 0; mso-font-alt:"\!Ps2OcuAe"; mso-font-charset:136; mso-generic-font-family:roman; mso-font-pitch:variable; mso-font-signature:3 137232384 22 0 1048577 0;} @font-face {font-family:Tunga; panose-1:0 0 4 0 0 0 0 0 0 0; mso-font-charset:1; mso-generic-font-family:auto; mso-font-pitch:variable; mso-font-signature:4194304 0 0 0 0 0;} @font-face {font-family:"\@PMingLiU"; panose-1:2 2 3 0 0 0 0 0 0 0; mso-font-charset:136; mso-generic-font-family:roman; mso-font-pitch:variable; mso-font-signature:3 137232384 22 0 1048577 0;} /* Style Definitions */ p.MsoNormal, li.MsoNormal, div.MsoNormal {mso-style-parent:""; margin:0in; margin-bottom:.0001pt; mso-pagination:widow-orphan; font-size:12.0pt; font-family:"Times New Roman"; mso-fareast-font-family:PMingLiU; mso-bidi-font-family:"Times New Roman"; mso-bidi-language:AR-SA;} a:link, span.MsoHyperlink {color:blue; text-decoration:underline; text-underline:single;} a:visited, span.MsoHyperlinkFollowed {color:#606420; text-decoration:underline; text-underline:single;} @page Section1 {size:8.5in 11.0in; margin:1.0in 1.25in 1.0in 63.0pt; mso-header-margin:.5in; mso-footer-margin:.5in; mso-paper-source:0;} div.Section1 {page:Section1;} --> </style><!--[if gte mso 10]> <style> /* Style Definitions */ table.MsoNormalTable {mso-style-name:"Table Normal"; mso-tstyle-rowband-size:0; mso-tstyle-colband-size:0; mso-style-noshow:yes; mso-style-parent:""; mso-padding-alt:0in 5.4pt 0in 5.4pt; mso-para-margin:0in; mso-para-margin-bottom:.0001pt; mso-pagination:widow-orphan; font-size:10.0pt; font-family:"Times New Roman"; mso-fareast-font-family:"Times New Roman"; mso-ansi-language:#0400; mso-fareast-language:#0400; mso-bidi-language:#0400;} </style> <![endif]--> <p class="MsoNormal"><span style=""><span style=""> </span></span><b><span style="font-family: Tunga;" lang="KN"><span style=""> </span></span></b><b><span style=""><span style=""> </span></span></b><b><u><span style="font-family: Tunga;" lang="KN">ಬಿ.ಬಿ.ಎಮ್.ಪಿ ಚುನಾವಣೆ ಬರ್ತಿದೆ... ನಿಮ್ ಪಕ್ಷ ಯಾವ್ದು</span></u></b><b><u><span style="">??</span></u></b><b><u><span style=""><span style=""> </span><o:p></o:p></span></u></b></p> <p class="MsoNormal"><span style=""><span style=""> </span><span style=""> </span><o:p></o:p></span></p> <p class="MsoNormal"><span style=""><span style=""> </span></span><span style="font-family: Tunga;" lang="KN">ನಮ್ ಕನ್ನಡಿಗರನ್ನ ನೋಡೆ "ಮನೆಗೆ ಮಾರಿ ಊರಿಗೆ ಉಪಕಾರಿ"ಅಂತ ಮಾತು ಸೃಷ್ಟಿ ಆಗಿರ್ಬಹುದು ಅಂತೀನಿ..</span><span style="" lang="KN"> </span><span style="font-family: Tunga;" lang="KN">ಚಿಲ್ರೆ ಪಲ್ರೆ ವಿಷ್ಯಕ್ಕೆ ಆನ್ಲೈನ್ನಲ್ಲಿ ಇಷ್ಟಿಷ್ಟುದ್ದ ಲೇಖನಗಳು</span>, <span style="font-family: Tunga;" lang="KN">ಅದಕ್ಕೆ ಅದಕ್ಕಿಂತಲು ಉದ್ದವಾದ ಕಾಮೆಂಟುಗಳು!! ಸಂವಾದವೇನು ಚರ್ಚೆಯೇನು.. ಕೈಗೆ ಸಿಕ್ಕಿದ್ದರೆ ಹೊಡೆದೆಬಿಡುವ ರೊಚ್ಚು ಕಿಚ್ಚು ಕಾಮೆಂಟಿಸುವ ಭರ!!ಎಷ್ಟು ಸಂತೋಷವೆನಿಸುತ್ತದೆ ಈ ರೀತಿಯ </span>involvement, <span style="font-family: Tunga;" lang="KN">ಹೌದು ಪಾಲ್ಗೊಳ್ಳುವಿಕೆ ಇರಲೆಬೇಕು ಆಗಲೆ ಚೆಂದ ಸರಿ ತಪ್ಪು</span>, <span style="font-family: Tunga;" lang="KN">ಸೋಲು ಗೆಲುವು ಆಮೇಲಿನ ವಿಚಾರ ಅಲ್ಲವೆ.<span style=""> </span></span></p> <p class="MsoNormal"><span style="font-family: Tunga;" lang="KN"><span style=""> </span>ಎಷ್ಟು ಲೇಖನ ಬಂದಿದೆ ಬಿ.ಬಿ.ಎಮ್.ಪಿ ಚುನಾವಣೆಯ ಬಗ್ಗೆ</span>?? <span style="font-family: Tunga;" lang="KN">ಅದರ ಮಹತ್ವದ ಬಗ್ಗೆ</span>?? <span style="font-family: Tunga;" lang="KN">ಯಾವ ಮಟ್ಟದ ಚರ್ಚೆಯಾಗಿದೆ</span>?? <span style="font-family: Tunga;" lang="KN">ಆನ್ಲೈನ್ ಎಲ್ನೋಡಿದ್ರು ಬನವಾಸಿ ಬಳಗದವರು ಹಾಗು ಕೆಲವೆ ಕೆಲವು ಪುಡಿ ಕನ್ನಡಿಗರ ಆರ್ಭಟ.. ಇಷ್ಟೆನಾ ಆನ್ ಲೈನ್ ಸಮುದಾಯದ ಬೆಂಗಳೂರಿನ ಕನ್ನಡಿಗರ ಒಕ್ಕೊರಲು :</span><span style="">-</span><span style="font-family: Tunga;" lang="KN">( ಸಾಕಾ ಇಷ್ಟು </span>? <span style="font-family: Tunga;" lang="KN">ಎಲ್ಲಾ ಇತರೆ ವಿಚಾರವನ್ನು ಪುಂಖಾನು ಪುಂಖವಾಗಿ ಪುಟಗಟ್ಟಲೆ ವಿಶ್ಲೇಷಿಸುವ ಸಾಹಿತಿಗಳ ಸಮುದಾಯವೆಲ್ಲಿ</span>? </p> <p class="MsoNormal"><span style="font-family: Tunga;" lang="KN"><span style=""> </span>ಬ್ರಾಹ್ಮಣ</span>, <span style="font-family: Tunga;" lang="KN">ಗೌಡ</span>, <span style="font-family: Tunga;" lang="KN">ಲಿಂಗಾಯಿತ</span>, <span style="font-family: Tunga;" lang="KN">ಕುರುಬ</span>, <span style="font-family: Tunga;" lang="KN">ಹಿಂದು</span>, <span style="font-family: Tunga;" lang="KN">ಮುಸ್ಲಿಮ್</span>, <span style="font-family: Tunga;" lang="KN">ಕ್ರಿಶ್ಚಿಯನ್</span>, <span style="font-family: Tunga;" lang="KN">ಸಿಖ್</span>, <span style="font-family: Tunga;" lang="KN">ದಲಿತ... ಇನ್ನು ಯಾವ ಯಾವ ಗುಂಪಿನವರು</span>, <span style="font-family: Tunga;" lang="KN">ಸಮುದಾಯದವರು ಈ ಬೇಧವನ್ನೆಲ್ಲ ಮರೆತು ಒಮ್ಮೆ</span>, <span style="font-family: Tunga;" lang="KN">ಕೇವಲ ಒಮ್ಮೆ ಈ ಬಾರಿ ಈ</span><span style="" lang="KN"> </span><span style="font-family: Tunga;" lang="KN">ಎಲ್ಲಾ ಕ್ಷುಲ್ಲಕ</span><span style="">,</span><span style="font-family: Tunga;" lang="KN"> ಅನಿಷ್ಟ</span><span style="">,</span><span style="font-family: Tunga;" lang="KN"> ಅನಗತ್ಯವಾದ ಬೇಧಗಳನ್ನು ದೂರ ಅಟ್ಟಿ ಕನಿಷ್ಟ ಬಿ.ಬಿ.ಎಮ್.ಪಿ ಚುನಾವಣೆಗೆ ಸೀಮಿತವಾದರು ಸಹ ನಾವು</span>, <span style="font-family: Tunga;" lang="KN">ನಮ್ಮವರು</span>, <span style="font-family: Tunga;" lang="KN">ನಮ್ದು<span style=""> </span>ಎನ್ನುವ ಅಂಶಗಳಾದ ಕನ್ನಡ</span>,<span style="font-family: Tunga;" lang="KN">ಕರ್ನಾಟಕ</span>,<span style="font-family: Tunga;" lang="KN">ಕನ್ನಡಿಗ ಎನ್ನುವ ದೃಷ್ಟಿಕೋನದಿಂದ ಯೋಚಿಸಿ ಮತ ಚಲಾಯಿಸಿದರೆ ಆಗ ಮಾತ್ರ ಅದು ಕನ್ನಡಿಗರ ಒಗ್ಗಟಿನ ಗೆಲುವು ಆಗುವುದು ಖಚಿತ.ಈ ಸರ್ತಿ ಬಿ.ಬಿ.ಎಮ್.ಪಿ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಕ.ರ.ವೆ ಗೆಲ್ಲಲೆ ಬೇಕು.. ಆಗ ಮಾತ್ರ ಅದು ಕನ್ನಡಿಗರ ಗೆಲುವಾಗುತ್ತೆ ಇಲ್ಲವಾದರೆ ಅದು ಅಧಿಕಾರ ದಾಹಕ್ಕಾಗಿ ಪರಭಾಷಿಕರಿಗೆ ಮಣೆ ಹಾಕುವ ಪುಢಾರಿಗಳ ಗೆಲುವು ಎಂಬುದೆ ಅರ್ಥ.. </span></p> <p class="MsoNormal"><o:p> </o:p></p> <p class="MsoNormal"><span style="font-family: Tunga;" lang="KN"><span style=""> </span>ಕನ್ನಡಿಗರು ಧ್ವನಿ ಎತ್ತಬೇಕು</span>, <span style="font-family: Tunga;" lang="KN">ನರ ಸತ್ತವರಂತೆ ಬದುಕುವುದು ಬಿಡಬೇಕು. ದೌರ್ಜನ್ಯ ಅನ್ಯಾಯದ ವಿರುದ್ಧ ಧ್ವನಿ ಏರಿಸುವುದು ಕಲಿಯಬೇಕು(ಈ ಮಾತು ಹೇಳ್ಬೇಕಾಗಿರೊದು ವಿಪರ್ಯಾಸ)</span></p> <p class="MsoNormal"><span style="font-family: Tunga;" lang="KN"><span style=""> </span>ಕನಿಷ್ಟ</span>, <span style="font-family: Tunga;" lang="KN">ಕೀಲಿಮಣೆ ಅಂದ್ರೆ ಆಂಗ್ಲ ಅಂತ ತಿಳಿದಿರುವವರು ಆಂಗ್ಲದಲ್ಲಾದ್ರು ಪ್ರಾದೇಶಿಕ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಬೇಕು.. ಒಟ್ನಲ್ಲಿ ಚರ್ಚೆ ಆಗಬೇಕು</span><span style="">, </span><span style="font-family: Tunga;" lang="KN">ಪಾಲ್ಗೊಳ್ಳುವಿಕೆ ಇರಬೇಕು. </span></p> <p class="MsoNormal"><span style=""><span style=""> </span></span><span style="font-family: Tunga;" lang="KN">ಇದೆಲ್ಲ ಆಗಲ್ಲಾರಿ</span>, <span style="font-family: Tunga;" lang="KN">ಯಾವುದಾದರು ಹುಡುಗಿಯೊ/ಮಹಿಳೆಯೊ ಏನಾದರು </span>’<span style="font-family: Tunga;" lang="KN">ನನ್ಗೆ ಸಹಾಯ ಬೇಕು ನಿಮ್ಗೆ ಗೊತ್ತಿದ್ಯ</span><span style="font-family: PMingLiU;" lang="ZH-TW">’</span><span style="font-family: Tunga;" lang="KN">ಅಂತ ಯಾಹೂ ಅಥವಾ ಗೂಗಲ್ ಗುಂಪಿಗೆ ಮಿಂಚೆ ಕಳಿಸಿದರೆ<span style=""> </span>ಆಗ ಮಿಂಚೆಗಳ ಸುರಿಮಳೆ ನೋಡಬೇಕು.. ಪರ್ವಾಗಿಲ್ವೆ ಇಷ್ಟು ಜನ ಈ ಮಿಂಚೆಯನ್ನು ಓದಿದಾರೆ ಅಂತ ಆಶ್ಚರ್ಯವಾದರು ಸೋಜಿಗವಲ್ಲ. </span></p> <p class="MsoNormal"><span style="font-family: Tunga;" lang="KN"><span style=""> </span>ಬರಿ ಹುಡುಗರೆ ಯಾಕೆ ಪ್ರಚಾರದಲ್ಲಿ ತೊಡಗಬೇಕು</span>?? <span style="font-family: Tunga;" lang="KN">ಮಹಿಳೆಯರಿಗೆ ಸವಲತ್ತುಗಳು ಬೇಕಾದಾಗ ಮಾತ್ರ ಅವರು ಧ್ವನಿ ಎತ್ತಬೇಕೆ</span>? <span style="font-family: Tunga;" lang="KN">ಚುನಾವಣೆ ಎನ್ನುವುದು ಎಲ್ಲರಿಗು ಸಂಬಂಧಪಟ್ಟ ವಿಚಾರ. ಇದು ಕನ್ನಡ ಕನ್ನಡಿಗರ ಉಳಿವಿನ ಪ್ರಶ್ನೆ!! ಕರ್ನಾಟಕದಲ್ಲಿ ಕನ್ನಡ ಪರವಾದ ಪ್ರಾದೇಶಿಕ ಪಕ್ಷ ಗೆದ್ದರೆ ಅದು ಕನ್ನಡಿಗರಾದ ನಮ್ಮ ಮರ್ಯಾದೆ ಉಳಿದಂತೆ. ನಾವು ಮರ್ಯಾದೆ ಬಿಟ್ಟು ಬದುಕುವ ಲೆವೆಲ್ಲಿಗೆ ಒಗ್ಗಿಕೊಂಡಿದ್ದೆವೆಯೆ</span>?<span style=""> </span></p> <p class="MsoNormal"><span style="font-family: Tunga;" lang="KN"><span style=""> </span>ಇಂದು ಹಲಸೂರಿನಲ್ಲಿ ೨೦೦-೩೦೦ ಮಂದಿ ತಮಿಳರು ಒಕ್ಕೊರಳಿನಲ್ಲಿ ತಮಿಳಿನಲ್ಲಿ!! ಬಿ.ಬಿ.ಎಮ್.ಪಿ ಚುನಾವಣೆಗೆ ಪ್ರಚಾರ ಮಾಡುತ್ತಿರುವ ಉದ್ದೇಶವೇನು</span>? <span style="font-family: Tunga;" lang="KN">ಬೆಂಗಳೂರೇನು ತಮಿಳರ ಸ್ವತ್ತೆ</span>? <span style="font-family: Tunga;" lang="KN">ಬೆಂಗಳೂರಿನ ಕೊಳೆಗೇರಿ ಖಾಲಿ ಮಾಡಿಸಿದರೆ ಅರ್ಧ ತಮಿಳುನಾಡು</span><span style="">,</span><span style="font-family: Tunga;" lang="KN"> ಆಂಧ್ರ</span><span style="">,</span><span style="font-family: Tunga;" lang="KN"> ಬಿಹಾರಿ</span><span style="">,</span><span style="font-family: Tunga;" lang="KN"> ಬಾಂಗ್ಲಾದೇಶವನ್ನೆ ಹೊರಗಟ್ಟಿದಂತೆ.. ಇನ್ನು ವಿಚಿತ್ರವೆಂದರೆ <b>ಈ ಪರಭಾಷಿಕರೆ ಕನ್ನಡಿಗ</b> <b>ಸಮುದಾಯವನ್ನು ಆಳುವವರು ಯಾರು ಎಂದು ನಿರ್ಧರಿಸುವ ತಾಕತ್ತು ಇರುವವರು</b>!!! ಈ ತಾಕತ್ತು ದಯಪಾಲಿಸಿದವರು ನಮ್ಮ ಓದಿದ ಮುಟ್ಠಾಳ ಕನ್ನಡಿಗ ಸಮುದಾಯದವರು. </span><span style="" lang="KN"><span style=""> </span></span><span style="font-family: Tunga;" lang="KN">ಛೆ!! ನಾಚಿಕೆಯಾಗಬೇಕು ಮತ ಚಲಾಯಿಸದೆ ಅಸಡ್ಡೆ ಮಾಡುವವರಿಗೆ.<span style=""> </span></span></p> <p class="MsoNormal"><o:p> </o:p></p> <p class="MsoNormal"><span style="font-family: Tunga;" lang="KN"><span style=""> </span>ಚೆನ್ನಾಗಿ ಓದಿಕೊಂಡು ಕತ್ತೆ ಥರ ಹಗಲು ರಾತ್ರಿ ದುಡಿದು ಮನೆ ಚೆನ್ನಾಗಿ ನೋಡಿಕೊಂಡರೆ ಸಾಕೆ</span>? <span style="font-family: Tunga;" lang="KN">ಜೀವನ ಸಾರ್ಥಕವೆ</span>? <span style="font-family: Tunga;" lang="KN">ಸಮಾಜದ ಒಳಿತಿಗೆ ಪೂರಕವಾಗಿರುವ ಕೈಲಾದ ಸೇವೆಯಾಗಿರುವ ಮತ ಚಲಾವಣೆ ಮಾಡದ ಜೀವನವೂ ಸಾರ್ಥಕವೆ</span>? <span style="font-family: Tunga;" lang="KN">ಈ ಸರ್ತಿ ಕ.ರ.ವೆ ನಮ್ಮ ಪಕ್ಷವೆಂದು ಭಾವಿಸಿ (ಯಾಕಂದ್ರೆ ಅರವತ್ತು ವರ್ಷ ರಾಷ್ಟ್ರೀಯ ಪಕ್ಶಗಳ ಬೆನ್ನತ್ತಿ ಮಣ್ಣು ತಿಂದು ಬುದ್ದಿ ಭ್ರಮಣೆ ಆಗಿದೆ</span>, <span style="font-family: Tunga;" lang="KN">ಈ ಸರ್ತಿ ಭಾವಿಸಿದರೆ ಮುಂದೆ ಅದು ನಮ್ಮದೆ ಅಂತ ತಿಳಿಯುತ್ತೆ) ಅದು ಗೆದ್ದು ಬರುವ ಹಾಗೆ ಮಾಡುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ...</span></p> <p class="MsoNormal"><span style=""><o:p> </o:p></span></p> <p class="MsoNormal"><span style="font-family: Tunga;" lang="KN"><span style=""> </span>ಕಳೆದ ಇಪ್ಪತ್ತು ವರ್ಷದಿಂದ ನಾಡು ನುಡಿಗಾಗಿ ಹೋರಾಡಿದ ಕ.ರ.ವೆಯವರಿಗೆ ನಾವು ಕನ್ನಡಿಗರಾಗಿ ಬೆಂಬಲ ಮತ್ಯಾವಾಗ ಸೂಚಿಸಲು ಸಾಧ್ಯ</span>?? TV9<span style="font-family: Tunga;" lang="KN"> ನೋಡ್ತಾ ನಾರಯಣ ಗೌಡ್ರು ಭಾಷಣ ಕೇಳಿದ್ರಾ</span>? <span style="font-family: Tunga;" lang="KN">ಅವರಿಂದಲೆ ಇವತ್ತು ಗಡಿ ಭಾಗಗಳಲ್ಲಿ ಕನ್ನಡ ಉಳಿದಿದೆ ಅಲ್ವಾ</span>? <span style="font-family: Tunga;" lang="KN">ಅಂತ ಮೆಚ್ಚುಗೆ ಪಡಿಸಿಬಿಟ್ಟರೆ ಸಾಲದು ಅವರನ್ನು ಚುನಾಯಿತರನ್ನಾಗಿ ಮಾಡಿದಾಗಲೆ ಅವರ ಇಷ್ಟು ವರ್ಷದ ಸಾಧನೆಗೆ ಮರ್ಯಾದೆ ಕೊಟ್ಟಂತೆ. ಮುಂದಿನ ಯೋಜನೆಗಳಿಗೆ ಪ್ರೋತ್ಸಾಹಿಸಿದಂತೆ.</span></p> <p class="MsoNormal"><o:p> </o:p></p> <p class="MsoNormal"><span style="font-family: Tunga;" lang="KN"><span style=""> </span>ಊರು ಕೊಳ್ಳೆ ಹೊಡೆದಾದ ಮೇಲೆ ಕೋಟೆ ಬಾಗಿಲು ಹಾಕಿದ್ರಂತೆ ಹಾಗೆ ಬೆಂಗಳೂರನ್ನು ಪರಭಾಷಿಕರು ಕೊಳ್ಳೆ ಹೊಡೆದು ಅವರನ್ನು ಸ್ವಾಮಿಗಳಾಗಿ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಈಗಾಗ್ಲೆ ಪರಭಾಷಿಕರು<span style=""> </span>ಸಾಕಷ್ಟು ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ಪ್ರಭಾವಿ ವ್ಯಕ್ತಿಗಳಾಗಿ ಇದ್ದು ಕನ್ನಡಿಗರು "ಆಯ್ತು ಸ್ವಾಮಿ" ಎನ್ನುವ ಬದಲು "ಜಿ ಹುಜೂರ್" ಎನ್ನುವ ವಿಷಮಯ ಸ್ಥಿತಿಯುಂಟಾಗಿದೆ. ನಮ್ಮ ನಾಡಿನಲ್ಲೆ ನಾವು ಸ್ವಾಮಿಗಳಾಗಿ ಉಳಿಯಬೇಕೆಂದರೆ ಪ್ರಾದೇಶಿಕ ಹಿತವನ್ನು ಕಾಯುವ ಪಕ್ಷ ಕ.ರ.ವೆಗೆ ಮತ ಹಾಕಿ</span>, <span style="font-family: Tunga;" lang="KN">ಹಾಕಿಸಿ<span style=""> </span>ಗೆಲ್ಲಿಸಲೆಬೇಕು.</span></p> <p class="MsoNormal"><span style=""><o:p> </o:p></span></p> <p class="MsoNormal"><span style="font-family: Tunga;" lang="KN"><span style=""> </span>ಕರ್ನಾಟಕದಲ್ಲಿ ಕನ್ನಡಿಗನೆ ಸಾರ್ವಭೌಮನಾಗಿ ಉಳಿಯಬೇಕು. ಇಲ್ಲಿ ವಿಚಾರ ಹೇರುವ ಪ್ರಶ್ನೆ ಉದ್ಭವಿಸುವುದಿಲ್ಲ</span>,, <span style="font-family: Tunga;" lang="KN">ಇದ್ದುದ್ದನ್ನು ಇದ್ದ ಹಾಗೆ ಹೇಳಿ ಸರಿಯಾದುದನ್ನು ತಿಳಿ ಹೇಳಿ ನಮಗೆ ನಾವೆ ನ್ಯಾಯ ಒದಗಿಸಿಕೊಳ್ಳುವ ಮಾರ್ಗ ಸೂಚಿಸುವ ಪರಿಯಷ್ಟೆ.</span></p> <p class="MsoNormal"><span style="font-family: Tunga;" lang="KN"><span style=""> </span>ನಾವು</span>,<span style="font-family: Tunga;" lang="KN">ನಮ್ಮವರು</span>,<span style="font-family: Tunga;" lang="KN">ಗೆಳೆಯರು</span>,<span style="font-family: Tunga;" lang="KN">ಗೆಳತಿಯರು</span>,<span style="font-family: Tunga;" lang="KN">ಪರಿಚಯಸ್ತರು</span>, <span style="font-family: Tunga;" lang="KN">ನೆಂಟರು ಇಷ್ಟರು ಎಲ್ಲರ ಮಧ್ಯೆ ವಿಚಾರ ಹಂಚಿಕೊಳ್ಳಲೆಬೇಕಾಗಿದೆ</span>, <span style="font-family: Tunga;" lang="KN">ಚುನಾವಣೆಯಾದ ಮೇಲೆ ಮತ್ತದೆ ಹಳೆ ಚಾಳಿ ಮುಂದುವರಿಸಿಕೊಳ್ಳಿ ಆದರೆ ಸದ್ಯಕ್ಕೆ ಚುನವಣೆ ಮುಗಿಯುವವರೆಗು ಕ.ರ.ವೆ ಪರವಾಗಿ ಬೆಂಬಲ ಸೂಚಿಸಿ.</span></p> <p class="MsoNormal"><o:p> </o:p></p> <p class="MsoNormal"><span style="font-family: Tunga;" lang="KN"><span style=""> </span>ಅತಿ ಹೆಚ್ಚು ಪರಭಾಷಿಕರಿಗೆ ಟಿಕೆಟ್ ಕೊಟ್ಟು ಅಧಿಕಾರದ ಲಾಲಸೆಗೋಸ್ಕರ ಸಾಕಿದವರಿಗೆ ಕಚ್ಚುವ ನಾಯಿಗಳನ್ನು ತಯಾರಿಸುತ್ತಿರುವ ರಾಷ್ಟ್ರೀಯ ಪಕ್ಷಗಳಲ್ಲಿ ಮೊದಲಾದ ಜೆಡಿಎಸ್ ನಂತರ ಬರುವ</span><span style="" lang="KN"> </span><span style="font-family: Tunga;" lang="KN">ಕಾಂಗ್ರೆಸ್ ಹಾಗು ಬಿಜೆಪಿಯನ್ನು ಬಗ್ಗು ಬಡಿಯಲೆಬೇಕು</span>, <span style="font-family: Tunga;" lang="KN">ಬಡಿದು ಸಂದೇಶ ಸಾರಲೇಬೆಕು ಕನ್ನಡಿಗರು ನರಸತ್ತವನಲ್ಲ ಎಂದು.<span style=""> </span></span></p> <p class="MsoNormal"><span style=""><o:p> </o:p></span></p> <p class="MsoNormal"><span style="font-family: Tunga;" lang="KN"><span style=""> </span>ಬೆಂಗಳೂರು ನಮ್ಮದು</span>, <span style="font-family: Tunga;" lang="KN">ಅದನ್ನು ಕಾಪಾಡುವ ಸೈನಿಕರು ನಾವು</span>, <span style="font-family: Tunga;" lang="KN">ಕನ್ನಡಾಂಬೆಯನ್ನು ಆಶ್ರಯಿಸಿದ ಮುದ್ದಿನ ಕಣ್ಮಣಿಗಳು ನಾವು</span>, <span style="font-family: Tunga;" lang="KN">ಕನ್ನಡ ತಾಯಿಯ ಗೌರವಕ್ಕೆ<span style=""> </span>ತೊಂದರೆಯಾಗದಂತೆ ಖಡ್ಗ ಹಿರಿದಾದರು ಎಲ್ಲ ದಿಕ್ಕಿನಿಂದಲು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ಈಗಾಗಲೆ ಕನ್ನಡ</span>,<span style="font-family: Tunga;" lang="KN">ಕರ್ನಾಟಕ</span>,<span style="font-family: Tunga;" lang="KN">ಕನ್ನಡಿರಿಗೋಸ್ಕರ ಜೀವನ ಮುಡಿಪಾಗಿಟ್ಟಿರುವ ಕ.ರ.ವೆಯವರ ಪರವಾಗಿ ಮತ ಚಲಾಯಿಸಿ ಬೆಂಬಲ ಸೂಚಿಸಿದರೆ ಮಿಕ್ಕ ಕೆಲಸ ಅವರು ಮಾಡುತ್ತಾರೆ.. </span></p> <p class="MsoNormal"><span style=""><o:p> </o:p></span></p> <p class="MsoNormal"><span style="font-family: Tunga;" lang="KN"><span style=""> </span>ಈ ಸಮಯದಲ್ಲಿ ನಾವು ಹಿಂಜರಿಯಲೇಬಾರದು ಕ.ರ.ವೆ ಪರವಾಗಿ<span style=""> </span>ಮತ ಚಲಾಯಿಸಲೆಬೇಕು ಅವರಿಗೋಸ್ಕರ ನಮ್ಮ ಬಳಗದಲ್ಲಿ ಪ್ರಚಾರ ಮಾಡಲೇಬೇಕು...ಗಾಳಿ ಬಂದಾಗ ತೂರಿಕೊ ಎನ್ನುವ ಹಾಗೆ ಈಗ ಬದಲಾವಣೆಯ ಗಾಳಿ ಬರುವ ಸಮಯ</span><span style="">,</span><span style="font-family: Tunga;" lang="KN"> ಸರಿಯಾದ ದಿಕ್ಕಿನಲ್ಲಿ ಬೀಸುವ ಹಾಗೆ ಮಾಡುವ ಶಕ್ತಿ ಕನ್ನಡಿಗರ ಒಗ್ಗೂಡುವಿಕೆಯಲ್ಲಿದೆ.</span></p> <p class="MsoNormal"><span style="font-family: Tunga;" lang="KN">ಕಬ್ಬಿಣ ಕಾದಾಗ ಬಾರಿಸಬೇಕು</span>, <span style="font-family: Tunga;" lang="KN">ಇದೆ ಸದಾವಕಾಶ --- ಕ.ರ.ವೆ ಪರ ಮತ ಚಲಾಯಿಸಿ ಕನ್ನಡಿಗರ ಮರ್ಯಾದೆ ಉಳಿಸಿ ಇಲ್ಲವಾದರೆ ಮುಂದೊಂದು ದಿನ ಖಂಡಿತವಾಗಿಯು ನಮ್ಮನ್ನು ನೋಡಿ ಕರುಣಾನಿಧಿ ಅಥವಾ ಜಯಲಲಿತ ಗಹಗಹಿಸಿ ನಕ್ಕಾರು</span>,<span style="font-family: Tunga;" lang="KN">ತಮ್ಮ ನೆಲದಲ್ಲೆ ತಮ್ಮವರ ಮತ ದಕ್ಕಿಸಿಕೊಳ್ಳಲಾಗದ ನಾಲಾಯಕ್ಕುಗಳು ಕನ್ನಡಿಗರು ಎಂದು</span><span style="">.</span><span style="font-family: Tunga;" lang="KN"><span style=""> </span></span></p> <p class="MsoNormal"><o:p> </o:p></p> <p class="MsoNormal"><span style="font-family: Tunga;" lang="KN">ಜೈ ಕರ್ನಾಟಕ </span></p> <p class="MsoNormal">-<span style="font-family: Tunga;" lang="KN">ಪ್ರಸಾದ್</span><span style=""><o:p></o:p></span></p> <p class="MsoNormal"><span style=""><a href="mailto:prasad.preeti@gmail.com">prasad.preeti@gmail.com</a><o:p></o:p></span></p> <p class="MsoNormal"><span style=""><o:p> </o:p></span></p> <p class="MsoNormal"><span style=""><o:p> </o:p></span></p> <p class="MsoNormal"><span style=""><o:p> </o:p></span></p> <p class="MsoNormal"><u><span style="font-family: Tunga;" lang="KN">ಸೂಚನೆ</span></u><span style="font-family: Tunga;" lang="KN"> </span><span style="">: </span><span style="font-family: Tunga;" lang="KN">ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರು ಪರಿಚಯಸ್ತರಿಗೆ ಮಿಂಚೆ ಮುಂದೂಡಿ(</span>Forward) <span style="font-family: Tunga;" lang="KN">ಇಷ್ಟ ಆಗ್ಲಿಲ್ಲಾ ಅಂದ್ರು ಸಹ ಮುಂದೂಡಿ</span>, <span style="font-family: Tunga;" lang="KN">ಯಾವ ಅಂಶ ನಿಮಗೆ ಇಷ್ಟವಾಗಲಿಲ್ಲ ಎಂದು ತಿಳಿಸಿ ಚರ್ಚೆ ಮಾಡೊಣ. ಒಟ್ನಲ್ಲಿ ಚರ್ಚೆ ಆಗಲಿ</span><span style="">,</span><span style="font-family: Tunga;" lang="KN"> ಪಾಲ್ಗೊಳ್ಳುವಿಕೆ ಹೆಚ್ಚಾಗಲಿ</span><span style="">,</span><span style="font-family: Tunga;" lang="KN"> ವಿಷಯ ಹರಡಲಿ.</span><span style=""><o:p></o:p></span></p> prasadhhttp://www.blogger.com/profile/08103222594500014783noreply@blogger.com0