Tuesday, June 29, 2010

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು - ಭಾಗ ೨

on April 8, 2009

’ಮ’ಕಾರದಲ್ಲಿ ಮೂರನೆಯದಾಗಿ ಮಾರ್ಕ್ಸಿಸ್ಟ್‌ಗಳು, ಮಾರ್ಕ್ಸಿಸ್ಟ್ ಅಥವಾ ಕಮ್ಯುನಿಸ್ಟ್‌ಗಳು ಕಾರ್ಲ್ ಮಾರ್ಕ್ಸ್ ನ ಕುಡಿ, "ಧರ್ಮವೆನ್ನುವುದು ಸಮೂಹಕ್ಕೆ ಗಾಂಜಾವಿದ್ದಂತೆ"ಎನ್ನುವ ಹೇಳಿಕೆ ಕೊಟ್ಟಿರುವಾತ.ಇವರುಗಳು ಮೂಲತ: ನಾಸ್ತಿಕವಾದಿಗಳು ಆದರೆ ಇವರ ನಾಸ್ತಿಕತೆ ಕೇವಲ ಹಿಂದುತ್ವಕ್ಕೆ ಮಾತ್ರ ಸೀಮಿತವಿದೆ.ಎಂದಿಗು ಬಹಿರಂಗವಾಗಿ ಮುಸ್ಲಿಮರ ಅಥವಾ ಕ್ರೈಸ್ತರ ನಂಬಿಕೆ ಬಗ್ಗೆ ಪ್ರಶ್ನಿಸುವ ಧೈರ್ಯ ಸಾಹಸ ಮಾಡಿಲ್ಲ.ನಂದಿಗ್ರಾಮ್‌ನಲ್ಲಿ ನಡೆದ ಹಿಂಸಾಖಾಂಡದ ಹಿಂದೆ ಇವರ ಕೊಡುಗೆ ಅಪಾರ. ಗೊಧ್ರಾ ಗಲಾಟೆ ನಡೆದು ವರ್ಷಗಳೆ ಕಳೆದ್ರು ಅದರ ಕಳೇಬರವನ್ನು ಎತ್ತಿ ಆಡುವ ಜನ ನಂದಿಗ್ರಾಮದ ಬಗ್ಗೆ ಚಕಾರವೆತ್ತದೆ ಕುಳಿತಿರುವುದು.ಅವರ ಗೋಸುಂಬೆತನದ ಕನ್ನಡಿ,ಅದನ್ನ ನೋಡೋಕ್ಕೆ ನಮಗೆ ಕಣ್ಣುಗಳಿರಬೇಕಲ್ಲವೆ. ಇವರ ನಾಯಕರುಗಳು ಚೀನಾ ಹಾಗು ರಷಿಯಾದಲ್ಲಿ ಇದ್ದಾರೆ,ಕಾಶ್ಮೀರಿಗಳ "ಸ್ವಾತಂತ್ರ್ಯ"ಕ್ಕೆ ಧ್ವನಿಗೂಡಿಸುವ ಇವರು ಟಿಬೇಟಿಯನ್ನರ "ಸ್ವಾತಂತ್ರ್ಯ"ಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಯಾಕಂದ್ರೆ ಚೀನ ಟಿಬೇಟನ್ನು ನುಂಗಿದೆಯಲ್ಲ.ಧಣಿಗಳ ವಿರುದ್ಧ ಧ್ವನಿಯೆತ್ತಿದರೆ ಅದು ನಿಯತ್ತಿಗೆ ಧಕ್ಕೆಯಲ್ಲವೆ?ಬ್ರಿಟೀಷರ ಚೇಲಾಗಳಾಗಿದ್ದ ಇವರು ಭಾರತಕ್ಕೆ ಸ್ವಾತಂತ್ರ್ಯವನ್ನು ಸಹ ವಿರೋಧಿಸಿದವರು!!!ಜಗತ್ತಿನಲ್ಲೆ ಎಲ್ಲೂ ಕಮ್ಯುನಿಸ್ಟ್ ಪಕ್ಷಗಳು ಬದುಕಿಲ್ಲದಿದ್ದರು ಭಾರತದಲ್ಲಿ ಮಾತ್ರ ಸರ್ಕಾರ ರಚನೆಯಲ್ಲಿ ಸಹ ಭಾಗಿಯಾಗಿರೋದು ಅದ್ಭುತ.
ಸುಮಾರು ೩ ಕೋಟಿ ಬಾಂಗ್ಲಾದೇಶಿಗಳು ಪಶ್ಚಿಮ ಬಂಗಾಳದ ಮೂಲಕ ಭಾರತದೊಳಗೆ ನುಸುಳಿದ್ದಾರೆ.ಪಶ್ಚಿಮ ಬಂಗಾಳದ ಸರ್ಕಾರ ಅವರನ್ನು ಸ್ವಾಗತಿಸುವುದಲ್ಲದೆ ಪಡಿತರ ಚೀಟಿ ಹಾಗು ವೋಟರ್ಸ್ ಕಾರ್ಡ್ ಸಹ ವಿತರಿಸಿ ತಮ್ಮ ಗದ್ದುಗೆಯನ್ನು ಸುರಕ್ಷಿತಗೊಳಿಸುತ್ತಿದ್ದಾರೆ ಏಕೆಂದರೆ ಇವರೆ ಅಲ್ಲವೆ ಮುಂದೆ ವೋಟು ಹಾಕುವುದು. ಹೊಟ್ಟೆ ತುಂಬಿದವರು ವೋಟ್ ಮಾಡುವುದಿಲ್ಲ ಇಂತಹವರು ನಮ್ ದೇಶದ ಸರ್ಕಾರವರನ್ನು ನಿರ್ಣಯಿಸುತ್ತಾರೆ.
೧೯೬೨ರಲ್ಲಿ ಚೀನ ಭಾರತದ ಘರ್ಷಣೆಯುಂಟಾದಾಗ ಕಮ್ಯುನಿಸ್ಟ್‌ಗಳು ಚೀನಾದ ಪರ ವಹಿಸಿದ್ದಾರೆ ಇದು ದೇಶ ದ್ರೋಹದ ಪರಮಾವಧಿ, ಇಂದಿಗು ಸಹ ಈ ಘಟನೆಗೆ ಸಂಬಂಧಿಸಿದಂತೆ ಯಾವುದೆ ರೀತಿಯ ಕ್ಷಮಾಪಣೆ ಕೇಳಿಬಂದಿಲ್ಲ ಬರುತ್ತೆ ಎಂಬ ಆಸೆ ಇಟ್ಟುಕೊಳ್ಳುವುದು ಮೂಢತನ.CPM ಎನ್ನುವುದು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಭಾರತೀಯ ಶಾಖೆ ಎನ್ನುವುದರಲ್ಲಿ ಸಂಶಯ ಬೇಡ.
’ಮ’ಕಾರದಲ್ಲಿ ನಾಲ್ಕನೇಯದಾಗಿ ಮೀಡಿಯಾದವರು,ಇವರು ನಮ್ಮ ದೇಶದಲ್ಲಿ ಇದ್ದುಕೊಂಡು ವಿದೇಶದವರ ಕಟ್ಟಾಳುಗಳಂತೆ ವರ್ತಿಸುತ್ತಾರೆ. ಅತಿ ಸಣ್ಣ ವಿಚಾರವನ್ನು ಸಹ ದೊಡ್ಡಾದಾಗಿ ಮಾಡಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಮರ್ಯಾದೆಯನ್ನು ಹರಾಜು ಹಾಕುವುದರಲ್ಲಿ ನಿಸ್ಸೀಮರು. ೨೬ನೇಯ ಎರಡುವರ್ಷಕ್ಕೊಮ್ಮೆ ಸಂಭವಿಸುವ ಕಾಥೋಲಿಕ್ ಬಿಶಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(CBCI) ಕೇರಳದಲ್ಲಿ ೭ರಿಂದ ೧೪ರ ವರೆಗು ಮತಾಂತರ ವಿಚಾರಗಳ ಬಗ್ಗೆ ನಡೆಯಿತು.ಸುಮಾರು ೧೫೦ ಬಿಶಪ್‌ಗಳು,೨೬ ಆರ್ಕಿಬಿಶಪ್‌ಗಳು ಹಾಗು ೩ ಕಾರ್ಡಿನಲ್‍ಗಳು ಕೂಡಿದ್ದರು ಇವರುಗಳ ಜೊತೆಗೆ ’ದಿ ಹಿಂದು’ಪತ್ರಿಕೆಯ ಮುಖ್ಯ ಸಂಕಲನಕಾರರು ಎನ್.ರಾಮ್,ಚೆನ್ನೈ ಶಾಖೆಯ ಎನ್.ಡಿ.ಟಿ.ವಿಯ ಮುಖ್ಯಸ್ತರಾದ ಜೆನ್ನಿಫರ್ ಅರುಲ್,ಮಂಗಳಮ್ ಪ್ರಕಟಣಾ ಸಂಸ್ಥೆಯ ಮುಖ್ಯ ಸಂಪಾದಕರಾದ ಕೆ.ಎನ್.ರಾಯ್ ಇವರುಗಳು ಸಹ ಉಪಸ್ಥಿತರಿದ್ದರು.ಕೇವಲ ಧಾರ್ಮಿಕ ವಿಷಯದ ಚರ್ಚೆಯ ಕೂಟದಲ್ಲೆ ಇವರುಗಳ ಭಾಗೀಧಾರಿ ಏತರದ್ದು?
genocide ಎನ್ನುವುದು ಗುಜರಾತ್ ಗಲಭೆಯನ್ನು ವರ್ಣಿಸಲು ಮೀಡಿಯಾ ಬಳಸಿದ ಪದ, ಆದ್ರೆ ೧೯೮೪ರಲ್ಲಿ ಸಿಖ್ಖರನ್ನು ಹಾಡು ಹಗಲೆ ಪೋಲಿಸರು,ಮಕ್ಕಳು ಹೆಂಗಸರು ಎನ್ನುವುದನ್ನು ನೋಡದೆ ಕಾಂಗ್ರೆಸ್ಸ್ ಸರ್ಕಾರದ ನೆರಳಿನಲ್ಲಿ ನಡೆದ ಹತ್ಯಾಕಾಂಡ ಇವರಿಗೆ ಕಣ್ಣಿಗೆ ಕಾಣುವುದೆ ಇಲ್ಲ.ಸಿಂಗೂರ್‌ನಲ್ಲಿ ಹಾಗು ನಂದಿಗ್ರಾಂ‌ನಲ್ಲಿ ನಡೆದ ಹತ್ಯಾಕಾಂಡ ಉಹು...ಏನು ಅಲ್ವೆ ಅಲ್ಲ ಅಂತ ಸಾಧಿಸುತ್ತಾರೆ. ಸೆಕ್ಯುಲರ್ ಮೀಡಿಯಾಗಳು ಮುಸ್ಲಿಂರಿಂದ ಅಥವಾ ಕ್ರೈಸ್ತರಿಂದ ನಡೆಯುವ ದೌರ್ಜನ್ಯಗಳು ಪತ್ರಿಕೆಗಳಲ್ಲಿ ಅಚ್ಚಾಗುವುದೇ ಇಲ್ಲ,ಅಚ್ಚಗುವುದು ಏನಿದ್ದರು ಗೋಧ್ರಾ,ಕಂಧಮಾಲ್,ಅಮರ್‌ನಾಥ್ ಅಥವಾ ಮಂಗಳೂರಿನಲ್ಲಿ ನಡೆದ "ಪ್ರತಿಕ್ರಿಯೆಗಳು" ಬೆಂಕಿಯಿಲ್ಲದೆ ಹೊಗೆಯಾಡುವುದೆ? ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗಳನ್ನ ಕಡೆಗಾಣಿಸುವ ಈ ಪತ್ರಿಕೆಗಳು ಪ್ರಗ್ಯಾ ಸಾಧ್ವಿ ಎಂಬಂತವರನ್ನು ಸಿಲುಕಿ ಹಾಕಿಸಿ ಹಿಂದುಗಳೂ ಸಹ ಭಯೋತ್ಪಾದಕರು ಎಂದು ಬೊಬ್ಬೆ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ಮುಂಬೈನಲ್ಲಿ ಸೆರೆ ಸಿಕ್ಕ ಭಯೋತ್ಪಾದಕ ಕಸಬ್, ಜೀವಾಂತವಾಗಿ ಉಳಿಯದಿದ್ದರೆ ಕೇರಳ ಮಿನಿಸ್ಟರ್‌ನ (ಮುಸ್ಲಿಂ) ಹುಚ್ಚು ಹೇಳಿಕೆಗೆ ಎಲ್ಲಿಂದೆಲ್ಲ ಬಲಬರುತ್ತಿತ್ತು. ಇವನ ಪ್ರಕಾರ ಕಸಬ್ ಒಬ್ಬ ಹಿಂದು ಭಯೋತ್ಪಾದಕ,ಪ್ರಗ್ಯಾ ಸಾಧ್ವಿಯನ್ನು ಬಂಧಿಸಿದ ಹೇಮಂತ್ ಕರ್‌ಕರೆಯನ್ನು ಕೊಲೆ ಮಾಡಲು ಆಯೋಜಿಸಿದ್ದ ಬೃಹತ್ ಯೋಜನೆಯ ಒಬ್ಬ ಭಾಗಿಧಾರಿ ಎನ್ನುವುದು ಇವನ ಹೇಳಿಕೆ.ಇದಕ್ಕೆ ಪುಷ್ಠಿಕೊಡುವಂತೆ ಕಸಬ್ ತನ್ನ ಕೈಗೆ ಕೇಸರಿ ಬಣ್ಣದ ದಾರವನ್ನು ಕಟ್ಟಿದ್ದ, ಅಪ್ಪಿ ತಪ್ಪಿ ಅವನು ಸತ್ತಿದ್ದರೆ ಅಲ್ಲಿಗೆ ಹಿಂದುಗಳೆಲ್ಲರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು ಈ ಮೀಡಿಯಾದವರೆಲ್ಲ ಸೇರಿ. ದಿನ ಬೆಳಗಾದ್ರೆ ಒಳ್ಳೆ ಸುದ್ದಿ ಓದುವ ಕಾತರದಿಂದ ಪತ್ರಿಕೆ ತೆಗೆದುಕೊಳ್ಳುವ ನಮಗೆ ಆ ಪತ್ರಿಕಾ ಸಂಸ್ಥೆಯ ಉದ್ದೇಶವೆ ತಿಳಿದಿರುವುದಿಲ್ಲ.ಅದರಲ್ಲಿ ಇರುವುದೆಲ್ಲ ಸತ್ಯವೆಂದು ನಂಬಿ ವಾದ ಮಾಡುವ ಜನರೆ ಹೆಚ್ಚು.

’ಮ’ಕಾರದಲ್ಲಿ ಐದನೇಯದಾಗಿ ಮೆಕಾಲೆಯಿಸ್ಟ್‌ಗಳು.ಲಾರ್ಡ್ ಮೆಕಾಲೆ ಭಾರತದ ಶಿಕ್ಷಣ ಪದ್ಧತಿಯನ್ನು ರೂಪಿಸಿದ ಮೇಧಾವಿ.ನೋಟದಲ್ಲಿ ಭಾರತೀಯ,ನಡವಳಿಕೆ ಬ್ರಿಟೀಷ್ ಆಗಿರಬೇಕು ಎಂಬುದು ಈ ಮನುಷ್ಯನ ಲೆಕ್ಕಾಚಾರ.ತನ್ನ ಈ ಹೇಳಿಕೆಯನ್ನು ಮೆಕಾಲೆಯ ಸಮರ್ಥಿಸಿಕೊಂಡಿವುರುದಕ್ಕೆ ಈಗಿನ ಕಾಲದ ಜಾತಿ ಪದ್ದತಿ,ಮಡಿವಂತಿಕೆ ಮುಂತಾದ ಚಿಲ್ಲರೆ ಕಾರಣಕೊಟ್ಟು ತನ್ನದೇನು ತಪ್ಪಿಲ್ಲ ಎಂದಿದ್ದಾನೆ.ಇವನ ರೀತಿಯ ಶಿಕ್ಷಣದ ಪರಿಣಾಮದಿಂದಾಗಿ ಅನೇಕ "ಬುದ್ದಿವಂತರು" - "ಬಾದಾಮಿ"ತರಹ. ಮೇಲ್ಬಣ್ಣ ನಶ್ಯ(ಭಾರತೀಯರ ಬಣ್ಣ)ಒಳಗಡೆಯಿಂದ ಬಿಳಿ(ಬ್ರಿಟೀಷರ)ರುಚಿ,ಅನಿಸಿಕೆ ಹಾಗು ಮೌಲ್ಯಗಳು.
ಈ ಮೇಕಾಲೆಗಳಿಂದಲೆ "ಸೆಕ್ಯುಲರ್" ಎಂಬ ಹೊಸ ಧರ್ಮ ಹುಟ್ಟಿದ್ದು."ಸೆಕ್ಯುಲರ್" ಎಂಬ ಪೊಳ್ಳುವಾದವನ್ನು ಮುಂದಿರಿಸಿಕೊಂಡು ಹಿಂದು ಧರ್ಮವನ್ನು ಹಾಗು ಭಾರತವನ್ನು ಅವಮಾನಿಸುತ್ತಿದ್ದಾರೆ.ಹಿಂದು ಭಾರತವು ಬಹು ಧರ್ಮಗಳ ವಿಚಾರವನ್ನು,ಬಹು ಧರ್ಮಗಳ ಆಚಾರವನ್ನು,ಬಹು ಧರ್ಮಗಳ ಸಮಾಜವನ್ನು ಗೌರವಿಸುತ್ತದೆ ಇದಕ್ಕಾಗಿ ಜಾತ್ಯಾತೀತತೆಯ ಬಣ್ಣ ಬೇಕಿಲ್ಲ.ಜಾತ್ಯಾತೀತ ಎನ್ನುವುದು ಮೊದಲಿನಿಂದಲೂ ಹಿಂದುತ್ವದ ಒಂದು ಭಾಗ.ಅದಕ್ಕೆ ಅಲ್ಲವೆ "ಏಕಂ ಸತ್,ವಿಪ್ರಾ: ಬಹುದಾವಿದಂತಿ - ದೇವನೊಬ್ಬ ನಾಮ ಹಲವು" ಅಂದ ವೇದಗಳಲ್ಲಿ ಹೇಳಿರುವುದು.
ಈ ಮೇಕಾಲೆಗಳಿಗೆ ಸಂಸ್ಕೃತ ಕೋಮುವಾದ ಉರ್ದು ಜಾತ್ಯಾತೀತ;ಮಂದಿರ ಕೋಮುವಾದ ಮಸೀದಿ ಜಾತ್ಯಾತೀತ;ಸಾಧು ಕೋಮುವಾದ ಇಮಾಂ ಜಾತ್ಯಾತೀತ;ಬಿಜೆಪಿ ಕೋಮುವಾದ ಮುಸ್ಲಿಂ ಲೀಗ್ ಜಾತ್ಯಾತೀತ;ಡಾ||ಪ್ರವೀಣ್ ತೊಗಾಡಿಯಾ ಕೋಮುವಾದ ಬುಖಾರಿ ಜಾತ್ಯಾತೀತ(ಇವನೊಬ್ಬ ದೊಡ್ಡ ಫ್ರಾಡ್ -ದಿಲ್ಲಿಯ ಜಾಮಿಯ ಮಸೀದಿಯಲ್ಲಿ ಇಮಾಂ ಆಗಿರುವ ಇವನು ಐಎಸ್‌ಐನ ಗೂಢಾಚಾರಿ ಎಂಬುದು ಇವನ ಹೇಳಿಕೆ/ರೀತಿ/ನೀತಿಗಳಲ್ಲಿ ಸಾಬಿತಾದರು ಸರ್ಕಾರಕ್ಕೆ ಜಾಣ ಕುರುಡು) ;ವಂದೆಮಾತರಂ ಕೋಮುವಾದ ಅಲ್ಲಾ-ಹೋ-ಅಕ್ಬರ್/ಏಸುವೊಬ್ಬನೆ ದೇವರು ಜಾತ್ಯಾತೀತ; ಶ್ರೀಮಾನ್ ಕೋಮುವಾದ ಮಿಯ್ಯಾ ಜಾತ್ಯಾತೀತ;ಹಿಂದು ಕೋಮುವಾದ ಇಸ್ಲಾಂ/ಕ್ರೈಸ್ತ ಜಾತ್ಯಾತೀತ;ಹಿಂದುತ್ವ ಕೋಮುವಾದ ಜಿಹಾದ್/ಕ್ರುಸೇಡರ್ ಜಾತ್ಯಾತೀತ;ಬಜರಂಗದಳ ಕೋಮುವಾದ ಸಿಮಿ ಜಾತ್ಯಾತೀತ;ರಾಮ ರಾಜ್ಯ ಕೋಮುವಾದ ರೋಮ್ ರಾಜ್ಯ ಜಾತ್ಯಾತೀತ; ಕೊನೆಯದಾಗಿ ಭಾರತ ಕೋಮುವಾದ ಇಟಲಿ ಜಾತ್ಯಾತೀತ!

ಮುಂದುವರೆಯುವುದು ....

No comments: