Tuesday, June 29, 2010

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು - ಭಾಗ ೩ (ಕೊನೆಯದ್ದು)

on April 15, 2009

’ಮ’ಕಾರದಲ್ಲಿ ಆರನೇಯದಾಗಿ ಮೈನೊ.
ಮೈನೊ ಅಂದರೆ ಏನು? ಅಥವಾ ಯಾರು?ಅಂಟೊನಿಯಾ ಮೈನೊ,ಇಟಲಿಯಲ್ಲಿ ಹುಟ್ಟಿ ರೋಮನ್ ಕಾಥೋಲಿಕ್ ಕ್ರೈಸ್ತೆಯಾಗಿ ಬೆಳೆದು,ಭಾರತಕ್ಕೆ ಬಂದಾದ ಮೇಲೆ ಸೋನಿಯಾ ಗಾಂಧಿಯಾದ ಇವಳಿಗೆ ದೇಶದ ಸಂಸ್ಕೃತಿ,ಇತಿಹಾಸ,ಪರಂಪರೆಯನ್ನೆ ಅರಿಯದ ಇವಳು ಇಂದು ಪರದೆಯ ಹಿಂದೆ ಅವಿತು "ಮನ ಮೋಹಿನಿ"ಯನ್ನು ಮುಂದಿಟ್ಟುಕೊಂಡು ದೇಶದ ಭವಿಷ್ಯವನ್ನೆ ನಿರ್ಧರಿಸುತ್ತಾಳೆ!!ನಮ್ಮ ದೇಶವನ್ನೆ ಮಾರಲಿಕ್ಕೆ ಹೊರಟಿರುವ ಕಾಂಗ್ರೆಸ್ಸ್ ರಾಜಕಾರಣಿಗಳ ಮಂದೆ,ಇವಳ "ಗಾಂಧಿ"ಎಂಬ ಹೆಸರನ್ನೆ ಮುಂದಿಟ್ಟುಕೊಂಡು ಅಧಿಕಾರಕ್ಕಾಗಿ,ದುಡ್ಡಿಗಾಗಿ ಹಪಾಹಪಿ ನಡೆಸುತ್ತಿದ್ದಾರೆ.ಹಿಂದು ಮೌಲ್ಯಗಳು
ಹಿಂದು ಧರ್ಮವೆಂದರೆ ಕಿಂಚಿತ್ ಸಹ ಗೌರವಿಸದ ಇವಳಿಗೆ ನಮ್ಮ ದೇಶದ ರಾಜಕಾರಿಣಿಗಳು ನಾ ಮುಂದು ತಾ ಮುಂದು ಅಂತ ಬಿದ್ದು ಇವಳು ಕಾಲಲ್ಲಿ ತೋರಿಸಿದ್ದನ್ನು ಅತ್ಯಂತ ಭಕ್ತಿಯಿಂದ ಶ್ರದ್ಧೆ ವಹಿಸಿ ಮಾಡುತ್ತಾರೆ ಏಕೆಂದರೆ "ಮೇಡಂ"ಗೆ ಖುಷಿ ಆದ್ರೆ ಖುರ್ಚಿ ಗಟ್ಟಿಯಿದ್ದಂತೆ ಅಲ್ಲವೆ. ಶಿವರಾಜ್ ಪಾಟಿಲ್ ಸಹ ಮೇಡಂನ ಆಗಾಗ ಭೇಟಿ ಮಾಡಿ ಪೆಟ್ಟಿಗೆಗಟ್ಟಲೆ ಕಾಣಿಕೆ ಅರ್ಪಿಸಿದ್ದಕ್ಕೆ ಅಲ್ವೆ ಜನಾಂದೋಲನ ನಡೆಸಿ ಅವನನ್ನು ತೆಗೆಸಬೇಕಾಯಿತು, ಇಲ್ಲವಾದರೆ ಇನ್ನು ಹೇಳಿಕೆ ಕೊಟ್ಟಿಕೊಂಡೆ ಅಧಿಕಾರ ಚಲಾಯಿಸುತ್ತಿದ್ದ "ಧೈರ್ಯವಾಗಿರಿ, ಭಯೊತ್ಪದಕರನ್ನು ಬಗ್ಗುಬಡಿಯುತ್ತೇವೆ, ತಪ್ಪು ಮಾಡಿದವರನ್ನು ಶಿಕ್ಷಿಸುತ್ತೇವೆ"ಅಂತಾನೆ ಡಂಗೂರ ಹೊಡಿತಾ ಇದ್ದಿದ್ದು.ಸುಪ್ರೀಂ ಕೋರ್ಟ್ ಆಜ್ಞೆಯನ್ನು ಮೀರಿ ಅಫಜಲ್ ಗುರುನ ಇನ್ನ ಸಾಕ್ತಾನೆ ಇದಾರೆ, ಈಗ ಕಸಬ್ ಅನ್ನು ಸಹ ಸಾಕಲು ಯೋಜಿಸಿದ್ದಾರೆ.ಒಟ್ನಲ್ಲಿ ಕೇಸರಿ ರಕ್ತ ಹರಿದರು ಪರವಾಯಿಲ್ಲ ಆದ್ರೆ ಹಸಿರು ರಕ್ತ ಒಂದು ತೊಟ್ಟು ಸಹ ಹೊರಬರದಂತೆ ಕಾಪಾಡುವುದರಲ್ಲಿ ಕಾಂಗ್ರೇಸ್ಸಿಗರನ್ನು ಮೀರಿಸುವುದರಲ್ಲಿ ಯಾರು ಹುಟ್ಟಿಲ್ಲ. ಆದ್ರು ಸಹ ನಮ್ಮ ಹಿಂದುಗಳು ಅವರಿಗೆ ಕಣ್ಣುಮುಚ್ಚಿ ವೋಟು ಹಾಕುವುದನ್ನು ಬಿಡುವುದಿಲ್ಲ.ಗಾಂಧಿ ಸತ್ತು ಐವತ್ತು ವರ್ಷ ಆದ್ರು ಗಾಂಧಿತನದ ಹೆಸರಿಟ್ಟುಕೊಂಡು ಆಳುತ್ತಿರುವ ಗೋ ಮುಖವ್ಯಾಘ್ರಗಳಿಗೆ ವೋಟು ಹಾಕುವುದು ನಿಲ್ಲುವುದಿಲ್ಲ.

ಕಾಂಗ್ರೇಸ್ಸಿಗರಿಗೆ ಇಟಲಿಯಿಂದಲೆ ಬಂದಿರುವವರು ಆಗಬೇಕೆ? ಇವರ ಪಾರ್ಟಿಯನ್ನು ನಡೆಸಲು ಅರ್ಹರು ನಮ್ ದೇಶದಲ್ಲಿ ಯಾರು ಹುಟ್ಟೆ ಇಲ್ಲವೆ? ಕರ್ನಾಟಕದಲ್ಲಿ ಅಪ್ಪ-ಮಗನ್ನ ನೋಡಿದ್ದಾಯ್ತು ಇನ್ನ ಕೇಂದ್ರದಲ್ಲಿ ಅಮ್ಮ-ಮಗನ ಸರದಿ!!೨೦೦೪ರಲ್ಲಿ ಲಂಡನ್‌ನ"ದಿ ಗಾರ್ಡಿಯನ್""A Waitress who became the world leader"ಎಂದು ಪತ್ರಿಕೆಯು ಮುಖ ಪುಟಗಳಲ್ಲಿ ಹೇಳಿತು. ಇವಳಿಗೆ ಓದು, ವಿದ್ಯಾರ್ಹತೆಯೆನ್ನುವುದರ ಗಂಧವೆ ಗೊತ್ತಿಲ್ಲಾ!!ಆಗಲೆ ಸಿದ್ಧಪಡಿಸಿದ ಭಾಷಣವನ್ನು ಬಿಟ್ಟು ನಾಲ್ಕು ಮಾತಾಡಲು ಶಕ್ತಳಿರದ ಇವಳನ್ನು larger than life ಎಂಬ ಹಾಗೆ ಬಿಂಬಿಸುವ ಮೀಡಿಯಾಗೆ ನಮೋ ನಮ:.ರಾಜೀವ್ ಗ್ಯಾಂಡಿ(ghandy) ಯನ್ನು ಮದುವೆ ಆಗಿ ಭಾರತದಲ್ಲಿ ೧೮ ವರ್ಷಗಳಿಂದ ನೆಲೆಸಿದ್ದರು ಸಹ ಭಾರತೀಯ "ಪೌರತ್ವ"ವನ್ನು ಸ್ವೀಕರಿಸಲು ನಿರಾಕರಿಸಿದಳು ಆದರು ಸಹ ದಿಲ್ಲಿಯಲ್ಲಿ ಇವಳು "ವೋಟರ್"!!! ಕರ್ನಾಟಕದಲ್ಲಿದ್ದುಕೊಂಡೆ ಕನ್ನಡ ಬಾರದೆ ಕರ್ನಾಟಕದಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡಿಗರು ಎನಿಸಿಕೊಳ್ಳುವುದಿಲ್ಲವೆ?ನಮ್ಮ ನಾಡಿನ ನೀತಿಯಂತೆ ನಂ ಕೇಂದ್ರ!!

ಸೆಪ್ಟೆಂಬರ್ ೨೦೦೬ ೭ರಂದು ಆಯೋಜಿಸಲಾಗಿದ್ದ ವಂದೆ ಮಾತರಂನ ಶತಮಾನೋತ್ಸವಕ್ಕೆ ಹಾಜರಾಗಲು ನಿರಾಕರಿಸಿದ ಇವಳಿಗೆ ಭಾರತ ದೇಶದ ಮೌಲ್ಯಗಳ ವಿರುದ್ಧ ಕಾರುವ ವಿಷದ ಅರಿವು ತಿಳಿಯದೆ ಹೋಗದು ಆದ್ರು ಸಹ ಜನರಿಗೆ ಇವಳೆ ಬೇಕು!! ಪೋಪ್ ಜಾನ್ ಪಾಲ್-೨ ತೀರಿಕೊಂಡಾಗ ಈ ಸೆಕ್ಯುಲರ್ ಸರ್ಕಾರಕ್ಕೆ ರಜೆ ಘೋಷಿಸುವುದರಲ್ಲಿ ಯಾವುದೆ ಹಿಂಜರಿಕೆ ತೋರಿಸಲಿಲ್ಲ.ಅಷ್ಟಕ್ಕು ನಮ್ ದೇಶಕ್ಕು ಪೋಪ್ ಜಾನ್ ಪಾಲ್-೨ ಏನು ಸಂಬಂಧ?? ನಾಳೆ ದಿನ ಬಿಹಾರಿನಲ್ಲಿ ಬಿನ್ ಲಾಡೆನ್ ಹಿಂಬಾಲಕರು ಗದ್ದುಗೆ ಏರಿದರೆ, ಬಿನ್ ಲಾಡೆನ್ ತೀರಿಕೊಂಡಾಗ ರಜೆ ಘೋಷಿಸಿದರೆ ಆಶ್ಚರ್ಯವಿಲ್ಲ ಅನ್ಕೋತೀನಿ!!ನಮ್ಮ ದೇಶದ ಬೆಳವಣಿಗೆಗೆ ಶ್ರಮಿಸಿದ ಧರ್ಮ ಗುರುಗಳು ಇವರಿಗೆ ಕೋಮುವಾದಿಗಳ ತರಹ ಕಾಣುತ್ತಾರೆ. ಆಸ್ಟ್ರೆಲಿಯನ್ ಮಿಷಿ-ನರಿ,ಗ್ಲಾಡಿಸ್ ಸ್ಟೈನ್ಸ್ (ಗ್ರಹಾಂ ಸ್ಟೈನ್ಸ್ ಹೆಂಡತಿ),ಗ್ರಹಾಂ ಸ್ಟೈನ್ಸ್ ಮತಾಂತರ ಕಾರ್ಯಗಳಲ್ಲಿ ಅತ್ಯಂತ ಚೂಟಿಯಾಗಿದ್ದ ಕಾರಣ ಅವನನ್ನು ಸ್ಥಳೀಯರು ಜೀವಂತ ಸುಟ್ಟರು- ಇದನ್ನು ನಾನು ಸಮರ್ಥಿಸುವುದಿಲ್ಲ ಆದರೆ ಈ ರೀತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇವನಿಗೆ ಈ ರೀತಿ ಅಂತ್ಯವಾದಾಗ ಅವನ ಹೆಂಡತಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವುದರಲ್ಲಿ ಏನರ್ಥ ಇದೆ? ಭಾರತಕ್ಕೆ ಇವರ ಕೊಡುಗೆ ಏನು?ಶ್ರೀಲಂಕಾದಲ್ಲಿ ತಮಿಳರ ಮೇಲೆ ಅನ್ಯಾಯವಾಗುತ್ತಿದೆ ಅಂತ ರಸ್ತೆಯಲ್ಲೆ ಸಜೀವ ದಹನ ಮಾಡಿಕೊಂಡು ಸತ್ತವರು ತುಂಬ ಸಿಗ್ತಾರೆ, ಅವರ ಮನೆಯವರಿಗು
ಕೊಡಬಹುದಲ್ವ?ಪದ್ಮಶ್ರೀ ಪ್ರಶಸ್ತಿಯನ್ನ!!"ಬೆನ್ನಿ ಹಿನ್ನ್" ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಮತಾಂತರ ಮಾಡಲು ಕಾಲಿಟ್ಟ ಭೂಪ,ಇವನಿಗೆ ಬರುವಾಗ ಅಥವ ಹೋಗುವಾಗ ಯಾವುದೆ ಸೆಕ್ಯುರಿಟಿ ಚೆಕ್ ಆಗಲಿಲ್ಲ. ಏನು ತಂದಿದ್ದ? ಏನು ತೆಗೆದುಕೊಂಡು ಹೋದ!(ಇದು ದೇಶದ ಭದ್ರತೆಯ ವಿಚಾರ)ಯಾರಿಗು ತಿಳಿಯಲಿಲ್ಲ,ಎಲ್ಲ ಮೇಡಂ ಕೃಪೆ,ಬೂಟು ನೆಕ್ಕುವ ರಾಜಕಾರಣಿಗಳ ಸಹಯೋಗ.ಇಷ್ಟೆಲ್ಲಾ ನಡೆಸುವ ಇವಳು ಮತಾಂತರಕ್ಕೆ ಕುಮ್ಮಕ್ಕು ಕೊಡುವುದಿಲ್ಲ ಎಂದು ಯಾವ ಬಾಯಲ್ಲಿ ಹೇಳಬಹುದು?

ಒಟ್ನಲ್ಲಿ ಹೇಳಬೇಕೆಂದ್ರೆ ಎಲ್ಲಿವರ್ಗು ಈ ಆರು "ಮ"ಕಾರಗಳು ಆಳುತ್ತವೊ ಅಲ್ಲಿವರ್ಗು ಹಿಂದುಗಳ ಬಾಳು ನಾಯಿ ಪಾಡು. "ಪೋಟಾ" ತೆಗೆದ್ರು, ಸುಪ್ರೀಮ್ ಕೋರ್ಟ್ ಆಜ್ಞೆ ಮೀರಿ ಅಫ್‌ಝಲ್ ಗುರುನ ಇನ್ನು ಸಾಕ್ತಿದಾರೆ. ಈಗ ಕಸಬ್ ಒಬ್ಬ ಬಂದ, ಪಾಕಿಸ್ತಾನಿ ಆದ್ರೇನಂತೆ ಅವನಿಗೆ ಶಿಕ್ಷೆ ಕೊಡಿಸದೆ ನಮ್ಮ ದೇಶದ ಮೈನಾರಿಟಿಯವರ ಹೃದಯಕಮಲಕ್ಕೆ ನೋವ್ವುಂಟಾಗದಂತೆ ನಡೆದುಕೊಳ್ಳುವುದೆ "ಮ"ಕಾರಗಳ ಉದ್ದೇಶ. ಮುಂಬೈ ನಲ್ಲಿ ನಡೆದ ಜಾಗತಿಕ ಮಟ್ಟದ ಹತ್ಯಾಕಾಂಡ ನಡಿಬೇಕಿತ್ತು ಮೈನೊ ಹಾಗು ಮನ ಮೋಹಿನಿಗೆ ಅಲ್ಲಾಡಲು,ಶಿವರಾಜ ಪಾಟೀಲರು ನಿರ್ಗಮಿಸಲು. ಅಕಸ್ಮಾತ್ ಆ ಘಟನೆಯಲ್ಲಿ ಹೊರದೇಶದ ಪ್ರಜೆಗಳು ಸಾಯದೆ ಇದ್ದಿದ್ದರೆ ಅಥವಾ ಅವರ ಪ್ರಜೆಗಳ ಮೇಲೆ ಹಲ್ಲೆಯೆ ಆಗದಿದ್ದರೆ ಬಹುಶ: ಈ ಮಟ್ಟಕ್ಕೆ ಬೆಳವಣಿಗೆಗಳು ಆಗುತ್ತಲೆ ಇರುತ್ತಿರಲಿಲ್ಲ,ಮನ ಮೋಹಿನಿ ಮಿಸುಕಾಡುತ್ತಿರಲಿಲ್ಲ.

ಗಾಯದ ಮೇಲೆ ಬರೆಯೆಂಬಂತೆ ಈಗ ಎಮ್.ಎಫ್.ಹುಸೈನ್‌ನ ಮೇಲೆ ಒಂದು ಪಾಠವನ್ನು ಸಹ ಅಳವಡಿಸಲು ಹುನ್ನಾರ ನಡೆಯುತ್ತಿದೆ. ಇವನಿಗೆ ಹಿಂದು ದೇವತೆಗಳೆ ಆಗಬೇಕು ತನ್ನ ಚಿತ್ರಕಲೆ ಸಾಮರ್ಥ್ಯ ತೋರಲು, ಅವನ ಮಗಳು,ತಾಯಿಯೆಲ್ಲ ಮೈ ತುಂಬ ಬಟ್ಟೆ ಹಾಕಿಕೊಂಡಂತೆ ಚಿತ್ರಿಸಿದ್ದರೆ, ಹಿಂದು ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿರುವುದು ದೊಡ್ಡ ವಿಚಾರವೆ ಅಲ್ಲ. http://www.hindujagruti.org/activities/campaigns/national/mfhussain-campaign/
ಈ ಮುದಿಯನ ಮುಖಕ್ಕೆ ಡಾಕ್ಟ್ರೇಟ್ ಬೇರೆ ಕೇಡು,"ಮಾಧುರಿ ಫಿದಾ" ಹುಸೈನ್ ಎಂಬ ಖ್ಯಾತಿ ಇವನಿಗೆ. ವಿಡಿಯೋಸ್ ನೋಡಲು http://www.hindujagruti.org/videos/index.php?id=2

ಈಗ ಶಾಲೆಯ ಪಠ್ಯ ಪುಸ್ತಕದಲ್ಲಿ ಇವನ ಮೇಲೆ ಒಂದು ಪಾಠ ಮುಂದೊಂದು ದಿನ ಶಾರುಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್, ಸಂಜಯ್ ದತ್ತ್ ಕಾಣಿಸಿಕೊಂಡರೆ ಹೆದರ ಬೇಡಿ. ಇದು, ಕೇವಲ ಮೈನಾರಿಟಿ ಅವರ ಹಿರಿಮೆ ಕೊಂಡಾಡಲು ಅವರನ್ನು ಪುಸಕ್ತಗಳಲ್ಲಿ ಪರಿಚಯಿಸುತ್ತಿರುವುದು ಎಂಬ ಹೇಳಿಕೆ ಬಂದರು ಅಚ್ಚರಿಯಲ್ಲ. ಆದರೆ ನಿಜವಾದ "ಬಣ್ಣ"ವನ್ನು ಬರೆದ ತಸ್ಲೀಮಾ ನಸ್ರೀನ್‌ಗೆ ಬಹಿಷ್ಕಾರ!!!. "ರಾಮ್ ಸೇತು" ಬಗ್ಗೆ ಪ್ರಶ್ನಿಸುವ ಇವರು , ಶ್ರೀನಗರದಲ್ಲಿ ಇಡಲಾಗಿದೆಯೆಂಡು ಹೇಳುವ "ಮೊಹಮ್ಮದನ ಕೂದಲು" ಅಥ್ವಾ ಜೀಸಸ್ ನ "ಅಸ್ತಿತ್ವದ ಪುರಾವೆ" ಗಳ ಬಗ್ಗೆ ಮಾತೆ ಹೊರಡುವುದಿಲ್ಲ. ಯಾಕಂದರೆ ಜೀಸಸ್ ಅನ್ನುವ ವ್ಯಕ್ತಿಯೊಬ್ಬರು ಇದ್ದರು ಎನ್ನುವುದುಕ್ಕೆ ಯಾವುದೆ ಪುರಾವೆ ಇಲ್ಲ!! ಏನಿದ್ದರು ಬೈಬಲ್ ನ ಕಥೆಗಳಲ್ಲಿ ಮಾತ್ರ ಇವರ ಅಸ್ತಿತ್ವ :-o. ನಾವು ಕೆದಕುತ್ತೆವೆಯೆ ಇಂತಹ ವಿಚಾರಗಳನ್ನ? ಅಯೋಧ್ಯೆ,ದ್ವಾರಕೆಯ ಬಗ್ಗೆಯಾದರು ಪುರಾವೆ ಇವೆ ಆದರೆ ಇವರುಗಳ ಅಸ್ತಿತ್ವ ಹೇಗೆ ರುಜುವಾತು ಮಾಡುವುದು?ಎಲ್ಲದಕ್ಕು ನಂಬಿಕೆಯೆ ಮೂಲವಲ್ಲವೆ, ಹಾಗಾಗಿ ನಮ್ಮ ನಂಬಿಕೆಗನುಸಾರವಾಗಿ ರಾಮ ಸೇತು ವಿಚಾರವಾಗಿ ಪ್ರಶ್ನಿಸುವುದು ತಪ್ಪು. ಆದ್ರೆ ಇದನ್ನ ಕೇಳೊರು ಯಾರು? ಹಿಂದುಸ್ತಾನದಲ್ಲಿ ಹಿಂದುನೆ ಅಲ್ವಾ ಹಿಂದುಳಿದಿರೋದು!!

ನೀವು,ಕಣ್ಣ್ ಮುಚ್ಚ್ಕೊಂಡು ಹರಕೆಯ ದುಡ್ಡೊ ಅಥವ ದೇವಸ್ಥಾನ ಉದ್ಧಾರ ಆಗ್ಲಿ ಅಂತ ಹುಂಡಿಗೆ ಹಾಕೊ ದುಡ್ಡು ರಾಮನಿಗಿಂತ ರಹೀಮ ಹಾಗು ಪಾದ್ರಿಯ ಇಗರ್ಜಿಯ ಖಾತೆಗಳಿಗೆ ಟ್ರಾನ್ಸ್ಫರ್ ಆಗುವುದು ಖಂಡಿತ.ಹೌದು, ಸರ್ಕಾರದ ಆಡಳಿತದಲ್ಲಿರುವ ದೇವಸ್ಥಾನ ಹುಂಡಿಯ ದುಡ್ಡು ಮಸೀದಿ ಹಾಗು ಇಗರ್ಜಿ(ಚರ್ಚ್) ಉದ್ಧಾರ ಮಾಡಲು ಬಳಸಲಾಗುತ್ತದೆ. ದೇವಸ್ಥಾನದ ೧೦೦ ರೂಪಾಯಿಯಲ್ಲಿ ೬೦/-೮೦/-ಗಳಷ್ಟು ಮಸೀದಿಗೆ ಹಾಗು ಇಗರ್ಜಿಗೆ ಮೀಸಲಿಡಲಾಗುತ್ತದೆ.ನಮ್ಮ ದೇವಸ್ಥಾದ ಪೂಜಾರಿ ಹಾಗು ದೇವಸ್ಥಾನಗಳ ಪಾಲಿಗೆ ಪಂಗನಾಮ ಮೀಸಲು.
ಸಿಮಿಯನ್ನು ಬ್ಯಾನ್ ಮಾಡಲು ನಮ್ಮವರು ಆಗಾಗ ಪುರಾವೆ ನೀಡಬೇಕು ಇಲ್ಲವಾದರೆ "ಬ್ಯಾನ್ ಪೀರಿಯಡ್"ತೀರಿ ಅದು ಲೀಗಲ್ ಆಗುತ್ತೆ!! ಅದೆ ಅರ್.ಎಸ್.ಎಸ್, ಬಜರಂಗ ದಳ,ವಿ.ಹೆಚ್.ಪಿ ಯೆಂತಹ ದೇಶೋದ್ದಾರಕ ಸಂಸ್ಥೆಗಳನ್ನು ಭಯೋತ್ಪಾದಕ ಸಂಸ್ಥೆಯೆಂದು ಪರಿಗಣಿಸಬೇಕು ಎಂದು ಎಲ್ಲಿಲ್ಲದ ಒತ್ತಡ.
"ಮನ ಮೋಹಿನಿಗೆ" ಮುಸ್ಲಿಂ ಒಬ್ಬನನ್ನು ಅರ್ರೆಸ್ಟ್ ಮಾಡಿದಕ್ಕೆ ನಿದ್ದೆಯೆ ಬರುವುದಿಲ್ಲ, ಪ್ರಗ್ಯಾ ಸಾಧ್ವಿ ಎಂಬ ಸನ್ಯಾಸಿನಿಯನ್ನು ಸುಳ್ಳು ಆರೋಪದ ಮೇರೆ ಅರ್ರೆಸ್ಟ್ ಮಾಡಿದಾಗಾಗಲಿ, ನೂರಾರು ಜನರು ಭಯೊತ್ಪಾದ ದಾಳಿಗಳಲ್ಲಿ ಸತ್ತರೆ ಏನು ಅನ್ನಿಸುವುದಿಲ್ಲ. ಒಬ್ಬ ಸಿಖ್ ಪಂಥಕ್ಕೆ ಸೇರಿದ ಪ್ರಧಾನಿ, ಸಿಖ್ ಹತ್ಯಾಖಾಂಡದ ತೀರ್ಪಿನಲ್ಲಿ ಖೇದವಿಲ್ಲದವನ ಹತ್ತಿರ "ಮೆಜಾರಿಟಿ"ಗಳ ಮನಸ್ಸಿಗೆ ಬೆಲೆಯಿದೆಯೆ??

ಅರುಂಧತಿ ರಾಯ್ - ಶ್ರೀ ಲಂಕಾದಲ್ಲಿ ಭಯೋತ್ಪಾದಕ ಸಂಸ್ಥೆ ಎಲ್.ಟಿ.ಟಿ.ಈ ಜೊತೆ ನಡೆಯುತ್ತಿರುವ ಯುದ್ದದಲ್ಲಿ ಇವಳ ಮನಸ್ಸಿಗೆ ಎಲ್ಲಿಲ್ಲದ ದುಖ: ಆವರಿಸಿಕೊಂಡಿದ್ದೆ, ಅದೆ ನಮ್ಮ ದೇಶದ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರ/ಹಲ್ಲೆ/ಕಗ್ಗೊಲೆ ನಡೆದು ಅವರು ತಮ್ಮೆ ನೆಲ ತ್ಯಜಿಸಿ ಓಡಿದಾಗ ಇವಳು ಕುರುಡಿಯಾಗಿದ್ದಳೆ??

ರಾಮ್ ವಿಲಾಸ್ ಪಾಸ್ವಾನ್ ಒಬ್ಬ ಮುಸ್ಲಿಮ್ ಮುಖ್ಯ ಮಂತ್ರಿಗೆ ಅಡಿಪಾಯ ಹಾಕುತ್ತಿರುವಾಗ ಓಸಾಮ ಬಿನ್ ಲಾಡೆನ್ ತರಹ ಇರುವವರು ಬೇಕೆ ಇವನ ಪ್ರಚಾರಕ್ಕೆ!! ಕೇಳುವವರು ಯಾರು ಇಲ್ಲವೆ? ಕೇವಲ ಒಡೆದಾಳುವ ನೀತಿಯನ್ನೆ ಪಾಲಿಸಿ ದೇಶವನ್ನೆ ವಿಭಜಿಸಿ ತಮ್ಮೆ ಬೇಳೆಯನ್ನು ಬೇಯಿಸುತ್ತಿರುವ ಇಂತವರಿಗೆ,ಇವೆಲ್ಲವನ್ನು ತಿಳಿದು ಯು.ಪಿ.ಏ/ಕಾಂಗ್ರೆಸ್ಸ್ ಸರ್ಕಾರಕ್ಕೆ ವೋಟ್ ಮಾಡುವ ಭಾರತೀಯರ ಭವಿಷ್ಯವನ್ನು ದೇವರೆ ಕಾಪಾಡಬೇಕು. ಖಂಡಿತವಾಗಲು ಈ ಕಲಿಯುಗದಲ್ಲಿ ಅವತಾರವೆತ್ತಿ ಬಂದು ಕಾಪಾಡಲು ವಿಷ್ಣುವಂತು ಧೈರ್ಯ ಮಾಡುವುದಿಲ್ಲ ಏಕೆಂದರೆ ಅವರು ಮೈನಾರಿಟಿಯಲ್ಲ, ಮೈನಾರಿಟಿಯಲ್ಲದಿದ್ದರೆ ನಮ್ಮ ದೇಶದಲ್ಲಿ ಬೆಲೆಯಿಲ್ಲ!!!

"ಧರ್ಮೊ ರಕ್ಷತಿ ರಕ್ಷಿತ:" ಎನ್ನುವಲ್ಲಿ ಧರ್ಮವನ್ನು ಜಾತಿಗೆ ಹೋಲಿಸದೆ ಹಿಂದುತ್ವವನ್ನು ಕಾಪಾಡಿ ಮೆರೆದರೆ ಮಾತ್ರ ನಮ್ಮ ದೇಶಕ್ಕೆ ಉಜ್ವಲ ಭವಿಷ್ಯವುಂಟು.

ಕೊನೆಯದಾಗಿ
ಈ ಸಾಲುಗಳು ತುಂಬಾ ಸ್ವಾರಸ್ಯಕರವಾಗಿದೆ ಒದಿ...
ಲ್ಯಾಟಿನ್ ಕ್ಯಾಥೋಲಿಕ್ ಇಗರ್ಜಿ(ಚರ್ಚ್)ಗೆ ಸೇರಿದವನು, ಸಿರಿಯನ್ ಕ್ಯಾಥೋಲಿಕ್ ಇಗರ್ಜಿ(ಚರ್ಚ್)ಗೆ ಹೋಗುವುದಿಲ್ಲ, ಸಿರಿಯನ್ ಕ್ಯಾಥೋಲಿಕ್ ಇಗರ್ಜಿಗೆ ಸೇರಿದವನು, ಲ್ಯಾಟಿನ್ ಕ್ಯಾಥೋಲಿಕ್ ಇಗರ್ಜಿಗೆ ಹೋಗುವುದಿಲ್ಲ!! ಇವರಿಬ್ಬರು ಮಾರ್ಥೋಮ ಇಗರ್ಜಿಗೆ ಹೋಗುವುದಿಲ್ಲ!! ಈ ಮೂವರು ಪೆಂಟಾಕೋಸ್ಟಲ್ ಇಗರ್ಜಿಗೆ ಹೋಗುವುದಿಲ್ಲ!! ಈ ನಾಲ್ವರು ಸಾಲ್ವೇಷನ್ ಇಗರ್ಜಿಗೆ ಹೋಗುವುದಿಲ್ಲ!! ಈ ಐವರು ಸವೆಂತ್ ಡೆ ಅಡ್ವೆಂಟಿಸ್ಟ್ ಇಗರ್ಜಿಗೆ ಹೋಗುವುದಿಲ್ಲ!!ಈ ಆರು ಜನರು ಆರ್ಥೋಡಾಕ್ಸ್ ಇಗರ್ಜಿಗೆ ಹೋಗುವುದಿಲ್ಲ!! ಈ ಏಳು ಜನರು ಜಾಕೊಬೈಟ್ ಇಗರ್ಜಿಗೆ ಹೋಗುವುದಿಲ್ಲ .... ಇದೆ ರೀತಿಯಲ್ಲಿ ಕೇರಳವೊಂದರಲ್ಲೆ ಕ್ರೈಸ್ತ ಮತದಲ್ಲಿ ೧೪೬ "ಜಾತಿ"ಗಳಿವೆ, ಇವರುಗಳಲ್ಲಿ ಯಾರು ಯಾರೊಬ್ಬರ ಇಗರ್ಜಿಯ ಮಟ್ಟಿಲನ್ನು ಸಹ ಹತ್ತುವುದಿಲ್ಲ.ಒಬ್ಬ ಕ್ರಿಸ್ತ,ಒಂದು ಬೈಬಲ್,ದೇವರಿಗೆ ಜೆಹೋವಾ ಎನ್ನುವ ಒಂದೆ ನಾಮ, ಆದರು ಇಂತಹ ಒಗ್ಗಟ್ಟು!!!

ಮುಸ್ಲಿಂಗಳಲ್ಲಿ, ಶಿಯಾ ಹಾಗು ಸುನ್ನಿಗಳು ನಿತ್ಯ ಹೊಡೆದಾಡಿಕೊಂಡು ಸಾಯುತ್ತಲೆ ಇರುತ್ತಾರೆ.ಶಿಯಾ ಪಂಥಕ್ಕೆ ಸೇರಿದವನು ಸುನ್ನಿಯ ಮಸೀದಿಗೆ ಹೋಗುವುದಿಲ್ಲ, ಸುನ್ನಿಯಾದವನು ಶೀಯ ಮಸೀದಿಗೆ ಹೋಗುವುದಿಲ್ಲ.ಇವರಿಬ್ಬರು ಅಹಮದೀಯಾ ಮಸೀದಿಗೆ ಹೋಗುವುದಿಲ್ಲ, ಇವರು ಮೂರ್ವರು ಸೂಫಿ ಮಸೀದಿಗೆ ಹೋಗುವುದಿಲ್ಲ, ಈ ನಾಲ್ವರು ಮುಜಾಹಿದ್ದೀನ್ ಮಸೀದಿಗೆ ಹೋಗುವುದಿಲ್ಲ, ಈ ರೀತಿಯಾಗಿ ಇನ್ನು ೧೩ ರೀತಿಯ ಜಾತಿ/ಮತಗಳಿವೆ ಮುಸ್ಲಿಂರಲ್ಲಿ ಒಂದು ಅಲ್ಲಾ,ಒಂದು ಕುರಾನ್,ಒಂದು ದೇವರ ನಾಮ, ಆದರು ಇಂತಹ ಒಗ್ಗಟ್ಟು!!!

ಹಿಂದುಗಳಿಗೆ ಸಾವಿರಾರು ಧರ್ಮಗ್ರಂಥಗಳು,ಸಾವಿರಾರು ಆಧ್ಯಾತ್ಮ ಪ್ರವಚನಗಳು,ಲಕ್ಷಕ್ಕು ಹೆಚ್ಚು ಉಪ-ಪ್ರವಚನಗಳು,ಮುಕ್ಕೋಟಿ ದೇವತೆಗಳು,ಥರಹೆವಾರಿ ಆಚಾರ ವಿಚಾರಗಳು,ಸಹಸ್ರಾರು ಋಷಿಗಳು,ಸಾವಿರಾರು ದೇವಸ್ಥಾನಗಳು,ಆದರು ಸಹ ಯಾವುದೆ ದೇವಸ್ಥಾನ ಇವರಿಗೆ ಅಂತ ಮೀಸಲು ಇಲ್ಲ.ಎಲ್ಲರು ಎಲ್ಲ ದೇವಸ್ಥಾನಕ್ಕೆ ಹೋಗುತ್ತಾರೆ. ಹಿಂದುಗಳು ದೇವರ ಹೆಸರಿನಲ್ಲಿ ಇದುವರೆಗು ದಾಳಿ ಮಾಡಿದ ಉಲ್ಲೇಖವೆ ಇಲ್ಲ,ಇತಿಹಾಸದಲ್ಲಿ. ಜಿಹಾದ್(ಮ್ಲೇಚ್ಚರು)ಆಗಲಿ ಅಥವಾ ಕ್ರೂಸೇಡರ್ಸ್(ಕ್ರೈಸ್ತರು)ಎಂಬ ಹೆಸರಿನಲ್ಲಾಗಲಿ ಧರ್ಮದ ಹೆಸರಿನಲ್ಲಿ ದಾಳಿ ಮಾಡಿಲ್ಲ.
ಅನೇಕತೆಯಲ್ಲಿ ಏಕತೆಯಿಂದ ಜೀವಿಸುವ ಹಿಂದುಗಳನ್ನು ಮೈನಾರಿಟಿ/ಸೆಕ್ಯುಲರಿಸಂ/ಕಮ್ಯುನಿಸ್ಟ್‌ಗಳ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ಸ್ ಸರ್ಕಾರದ ನೀತಿಯನ್ನು ಖಂಡಿಸಬೇಕು,ಭಾರತದ ಉಜ್ವಲ ಭವಿಷ್ಯಕ್ಕಾಗಿ ಬಿ.ಜೆ.ಪಿ ವೋಟ್ ಮಾಡಲೆಬೇಕು.

http://greathindu.com/2009/04/look-at-this-liar-rahul-gandhi/
"Right to Education is most important": ಅನ್ನೊ ರಾಹುಲ್ ಗಾಂಧಿ ಓದಿರೊದಾದ್ರು ಏನು ಅಂದುಕೊಂಡಿದೀರಾ? ಹತ್ತನೆ ತರಗತಿ ಸಹ ತೇರ್ಗಡೆ ಆಗಿಲ್ಲ ಈ ಪಾರ್ಟಿ ಹೇಳ್ಕೊಳ್ಳೋದು M.Phil, ಸರಿನಪ್ಪ ಅಂತ ಅದನ್ನ ಕೆದಕಿದ್ರೆ ಸಿಗೊ ಹೆಸ್ರು "ರಊಲ್ ವಿನ್ಸಿ".. http://news.rinkiss.com/tag/rahul-gandhi

ಇಷ್ಟೆಲ್ಲ ಬರೆದಿದ್ರು,ತಿಳಿಸಿದ್ರು ಜನ ಹೋಗಿ ಕಾಂಗ್ರೆಸ್ಸ್ ಗೆ ವೋಟ್ ಮಾಡೊದು ಬಿಡೊಲ್ಲ ಏಕಂದ್ರೆ "ರಊಲ್ ವಿನ್ಸಿ" ಒಹ್ ಕ್ಷಮಿಸಿ ರಾಹುಲ್ ಗಾಂಧಿ ನೋಡೋಕ್ಕೆ ಸುಂದರವಾಗಿದ್ದನೆ ಅಂತ ಹುಡುಗೀರು /ಹೆಂಗಸರು "ಬಿಯಾಂಕ ವಾಡ್ರಾ" ಒಹ್ ಕ್ಷಮಿಸಿ ಪ್ರಿಯಾಂಕ ಸುಂದರವಾಗಿದಾಳೆ ಅಂತ ಯುವಕರು/ಗಂಡಸರು/ಮುದುಕರು!!! ಕಣ್ಣ್ ಮುಚ್ಚ್‌ಕೊಂಡು ಹೋಗಿ ಕೈ ಒತ್ತೋದು ಬಿಡೊಲ್ಲ ಮತ್ತೊಂದು ವರ್ಗದ ಜನ ಗೆಲ್ಲೊ ಪಕ್ಷಕ್ಕೆ ನಮ್ ವೋಟ್ ಬೀಳ್ಬೇಕು ಅಂತ ನಿರ್ಧರಿಸಿಕೊಂಡು ಕಾಂಗ್ರೆಸ್ಸ್ ಗೆಲ್ಲುತ್ತೆ ಅಂತ ಮೊದಲೆ ಊಹಿಸಿ ಅದಕ್ಕೆ ವೋಟ್ ಮಾಡುವುದು ಇನ್ನೊಂದು ವರ್ಗದವರು ನಾನು ವೋಟ್ ಮಾಡಿದ ಪಕ್ಷ
ಸೋಲುತ್ತಪ್ಪ (ಸಚಿನ್ ೧೦೦ ರನ್ ಹೊಡೆದರೆ ಭಾರತ ಸೋಲೊಲ್ವೆ ಆ ತರ್ಕ!!) ಅಂತ ಯೋಚಿಸಿ ಕಾಂಗ್ರೆಸ್ಸ್ ಗೆ ಮತ ಚಲಾಯಿಸುವುದು :). ಇಂತಹವರೆನೆಲ್ಲ ಪ್ರತಿನಿಧಿಸಿ ಕ್ಷೇತ್ರದಿಂದ ಆಯ್ಕೆ ಆಗುವ ಯಾವುದೆ ಪಕ್ಷದ ಮಹಾನುಭಾವರಿಗೆ ನನ್ನ ಒಂದು ದೊಡ್ಡ ನಮಸ್ಕಾರ.

ಒಟ್ನಲ್ಲಿ ನಮ್ ದೇಶಕ್ಕೆ ಕಾದಿದೆ ಮಾರಿಹಬ್ಬ,ಯಾಕೆ ಅಂತ ತಿಳಿಬೇಕು ಅಂದ್ರೆ ಮುಂದೊಂದು ಲೇಖನಕ್ಕೆ ಕಾಯ್ತಿರಿ :) ತಿಳಿಸ್ತೀನಿ.

ಅಂತು ಇಂತು ಈ ಲೇಖನ ಮುಗಿಯಿತು (ಮುಗಿಸ್ದೆ ಅಂತ ಅಂದುಕೊಳ್ಳಿ :D)

ಧನ್ಯವಾದಗಳು
ಪ್ರಸಾದ್

No comments: