Tuesday, June 29, 2010

ಮನೊವೈದ್ಯರ ಮನೊವೇದನೆ!!!!

on May 21, 2010

ಕಾರಣ - ದಾರಿ ತಪ್ಪಿದ ಹಿರಿಯರು/ಮಾರ್ಗದರಶಕರು/ತಂದೆ ತಾಯಿಂದರು..

ಹೇಗೆ - ಸವಿವರವಾಗಿ ಮನೋವೈದ್ಯರ ಮಾತಿನಲ್ಲೆ ತಿಳಿಯಲು ಕೆಳಗಿರುವ ಕೊಂಡಿಯನ್ನು ಹೊಸ ವಿಂಡೋ ಅಲ್ಲಿ ತೆರೆದು ಓದಿ....,

http://tinyurl.com/29vnfj5

ಅತ್ತ.. ಇತ್ತ...

on April 16, 2010

ಅತ್ತ ಅಂದ್ರೆ ಏನ್ಗುರು ಬ್ಲಾಗ್ ಅಲ್ಲಿ ಅಂದ್ರೆ ಇಲ್ಲಿ ನೆಸ್ಲೆ ಸಂಸ್ಥೆಯವರು ಕನ್ನಡಿಗರ ಮೇಲೆ "ದಹಿ" ಸುರಿತಿದಾರೆ ಅಂತ ಸುದ್ದಿ ಪ್ರಕಟ ಆಗಿ.. ವಿಚಾರದ ಪರ ವಾದಿಗಳು ವಿರೋಧಿಗಳ ಚರ್ಚೆ, ಉರಿಯುತ್ತಿರುವ ಯಜ್ಞಕುಂಡಕ್ಕೆ ತುಪ್ಪ ಸುರಿದ ಹಾಗೆ ಮಾತುಗಳು ಬರ್ತಿದೆ.. ಬೇರೆ ಯಾರ ಮಧ್ಯೆನು ಅಲ್ಲ ಕನ್ನಡಿಗರ ಮಧ್ಯೇನೆ :) ಎಂತಹ ವಿಪರ್ಯಾಸ. ಕನ್ನಡಕ್ಕೆ ಕುತ್ತು ಬರೋದು,ಇರೋದು ಕನ್ನಡಿಗರಿಂದಲೆ ಪರಭಾಷಿಕರು ಬೇಕಾಗೆ ಇಲ್ಲ..
ಇತ್ತ ಸಂಪದ ಅಲ್ಲಿ, ಕನ್ನಡ ಸಾಹಿತ್ಯ ಅಭಿರುಚಿ ಇರುವರವರ ಕನ್ನಡ ವಿಚಾರವಂತರ ತಾಣದಲ್ಲಿ ಮೊಸರಿನ ರುಚಿ ಕಂಡು ಬರುತ್ತಿಲ್ಲ.. ಅವ್ರ್ ಕಾಲೆಳಿ ಇವ್ರ್ ಕಾಲೆಳಿ ಅಂತ ವಿನೋದವಾಗಿ ಮಾತು ಕತೆ ಸಾಗ್ತಿದೆ!! ಇರ್ಲಿ ಸಂತೋಷ ಹಾಗೆಯೆ ಮೊಸರು "ಒಡೆದು" ದಹಿಯಾಗುತ್ತಿರುವ ಸಂಸ್ಕೃತಿಯ ಬಗ್ಗೆಯು ಚರ್ಚೆಯಾದರೆ ಉತ್ತಮ ಅಲ್ಲವೆ?? ಮಾವೋವಾದಿಗಳು ಇನ್ನು ೧೦೦ ಜನ ಪೋಲೀಸರನ್ನು ಸಾಯಿಸಿದರೂ ಸಹ ಸದ್ಯದ ಪರಿಸ್ಥಿತಿಯಲ್ಲಿ ಚರ್ಚೆ ಒಂದು ಬಿಟ್ಟರೆ ಬೇರೇನು ಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ಈಗ ನೆಸ್ಲೆಯ ಆಕ್ರಮಣ ಕೋಟಿ ಕನ್ನಡಿಗರ ಮೇಲೆ ಆಗ್ತಿದೆ.. localization ಬಗ್ಗೆ ಎಚ್ಚರ ವಹಿಸುವ ಬಹುರಾಷ್ಟ್ರೀಯಕಂಪನಿಗಳು ಬೆಂಗಳೂರಿನಲ್ಲಿ ಎಡವಿ ಬೀಳುವಂತೆ ಸಾಗುತ್ತಿರುವುದಕ್ಕೆ ಕಾರಣವೇನು? ಈ ರೀತಿಯ ಬೆಳವಣಿಗೆ ವಿರುದ್ದ ಆ ಕಂಪನಿಯ ವಸ್ತುಗಳನ್ನು ಉಪಯೋಗಿಸುವ ಕನ್ನಡಿಗರು ನಾವು ಹೇಗೆ ಅವರಿಗೆ ತಿಳಿ ಹೇಳುವುದು? ಸರ್ಕಾರ ಅಂತು ತಣ್ಣಗೆ ಮಲಗಿದೆ ಕನ್ನಡಿಗರಿಗೆ ಜೋಗುಳ ಹಾಡುತ್ತ!! ಕನ್ನಡಿಗರು ಎಚ್ಚರ ಆದ್ರೆ ಹಿಂದಿ ಹೇರಿಕೆಗೆ ಕುತ್ತು!!
ಪಕ್ಕದ ನಾಡಿನಲ್ಲೆ World Tamil Conference ದಿನಗಳು ಹತ್ತಿರ ಬರುತ್ತಿರುವುದರ ಮುನ್ಸೂಚನೆಯಾಗಿ ಆಗತ್ಯ ಕ್ರಮಗಳನ್ನ ತೊಗೊತಿದಾರೆ ಅದು ಅತ್ಯಂತ ವೇಗದಲ್ಲಿ!! ಇವೆಲ್ಲ ಕಾರ್ಯರೂಪಕ್ಕೆ ತರ್ತಾರೆ.. ಹೇಗ್ ಗೊತ್ತಾ?? ಮೂಲ ಆಂಗ್ಲ ಪದಗಳಿಗೆ ತಮಿಳಿನ ಪರ್ಯಾಯ ಪದ "ಕಂಡು ಹಿಡಿದು" ಅದನ್ನು ಕಡ್ಡಾಯವಾಗಿ ಫಲಕಗಳಲ್ಲಿ/ಜಾಹಿರಾತಿನಲ್ಲಿ ಹಾಕಬೇಕು ಇಲ್ಲಿ ಓದಿ !!! ಚಂಡಿ ಹಿಡಿದ ಮಗೂಗೆ ಊಟ ಮಾಡಿಸಿದ ಹಾಗೆ ಕನ್ನಡದವರಿಗೆ ತಮಿಳಿನವರನ್ನೆ ತೋರಿಸಿ ಅವ್ರನ್ ನೋಡಿ ಕಲೀರಿ ಅಂತಾನೆ ಆಗ್ಬೇಕಾ ಯಾವಾಗ್ಲು? ನಮ್ಮಲ್ಲಿ ಈ ರೀತಿ ಆಗ್ಬಿಟ್ರೆ ಎದ್ದು ನಿಂತ್ಬಿಡ್ತಾರೆ ಕೆಲವರು ಬೇಳೆ ಬೇಯಿಸಿಕೊಳ್ಳುವುದಕ್ಕೆ.. ಅಯ್ಯೊ ಕನ್ನಡ ಬರದೆ ಇರುವವರಿಗೆ ಅನ್ಯಾಯ ಅಲ್ವ ಅಂತ..ಹೀಗೆ ತಮ್ಮ ಸ್ವಾರ್ಥಕ್ಕೆ ಮಣೆ ಹಾಕ್ತಿರ್ತಾರೆ. ಅವರಲ್ಲಿ(ವರದಿ ಓದಿ) ಹೇಳಿಕೊಂಡಿದ್ದಾರೆ ಇಂಥ ನಿರ್ಧಾರ ಕೈಗೊಂಡಾಗ ಒಬ್ಬರು ಕೂಡ ಇದರ ವಿರುದ್ಧ ಸೊಲ್ಲೆತ್ತದೆ ಒಪ್ಪಿದ್ದಾರೆ.
ನಮ್ಮವರಿಗೆ, ದಹಿ ಹೇರ್ತಿರೊದನ್ನ ವಿರೋಧಿಸಿ ಸಂಸ್ಥೆಯವರಿಗೆ ತಿಳಿಸಿ ಮಿಂಚೆ ಬರೆದು ದಬ್ಬಾಳಿಕೆ ತಡೆಯೋಣ ಅಂದ್ರೆ ಕೆಲವರು ಅಯ್ಯೂ ಅದ್ರಲ್ಲೇನಿದೆ ಬಿಡಿ.. ದಹಿ ಅಂದ್ರು ಅದೆ ಮೊಸರು ಅಂದ್ರು ಒಂದೆ.. ನಾವೇನು ಉಪಯೊಗಿಸೋದು ನಿಲ್ಲಿಸುವುದಿಲ್ಲವಲ್ಲ ಅಂತ!!! ಏನ್ ವಿಚಾರ ಅಂತೀನಿ.. ಹ್ಮ್ಮ್ ಇವರು ಸಹ ನಮ್ಮ್ ಕನ್ನಡ ಬಾಂಧವರು. ಮತ್ತೊಬ್ರು ಅಂತಾರೆ ಇಷ್ಟೆಲ್ಲ ಮಾತಾಡ್ತಿರೋರು ನೀವೇನು ಮಾಡ್ತಿದೀರಾ ಅಂತ!! ಅವನು ಅವನನ್ನು ಪ್ರಶ್ನಿಸಿಕೊಳ್ಳಲಿಲ್ಲ ನಾನು ಏನು ಮಾಡಬಹುದು ಅಂತ ಪ್ರಶ್ನಿಸೊ ಹಾಗಿದ್ರೆ ಅಥವಾ ಸಲಹೆ ನೀಡೊ ಹಾಗಿದ್ರೆ ಕೊಂಡಿ ಇಲ್ಲಿದೆ .. ಜೊತೆಗೆ ಸ್ವಿಟ್ಝರ್ ಲ್ಯಾಂಡ್ ಅಲ್ಲಿರೊ ಮುಖ್ಯ ಸಂಸ್ಥೆಗು ಸಹ ಕರ್ನಾಟಕದ ಬೆಂಗಳೂರಿನ ಸಂಸ್ಥೆಯವರು ಈ ರೀತಿ ಮಾರುಕಟ್ಟೆ ಮಾಡ್ತಿದಾರೆ.. ಈ ರೀತಿ ಮಾಡುವುದು ಲಾಭಕ್ಕೆ ಕುತ್ತು!! ಗ್ರಾಹಕರನ್ನು ತಲುಪಲಾಗುವುದಿಲ್ಲ ಅಂತ ತಿಳಿಹೇಳಿದರೆ ಹಿಂದಿ ಹೇರುತ್ತಿರುವವರಿಗೆ ಝಾಡಿಸುತ್ತಾರೆ..ಅವ್ರಿಗೆ ಸಹ ಬರೆದಿದ್ದು ಕಾಪಿ ಪೇಸ್ಟ್ ಮಾಡೊಕ್ಕೆ ಮತ್ತೆ ಬರೆಯುವ ಕೆಲಸ ಇಲ್ಲ, ಇಲ್ಲಿ ತಿಳಿಸಿರಿ
ಮತ್ತೊಂದು ಸಮಾಚಾರ ಅವ್ರ್ಯಾಕೆ ಹಂಗೆ ದಹಿ ಸುರಿತಿದಾರೆ ಅಂದ್ರೆ ಅವರ ಪ್ರಕಾರ ಮೊಸರು ಅಸ್ತಿತ್ವದಲ್ಲಿ ಇಲ್ಲ!!! ಎಲ್ನೋಡಿದ್ರು ದಹಿ ವಡಾ, ದಹಿ ಪುರಿ, ಕರ್ಡ್ ರೈಸ್!! ಅದಕ್ಕೆ ಈ ಬೆಳವಣಿಗೆ, ಮೊಸರು ಎಂಬ ಪರಿಚಯದ ನೆರಳು ಸಹ ಅವರ ಮೇಲೆ ಬೀಳ ಹಾಗೆ ಕನ್ನಡಿಗರು ಎಚ್ಚರ ವಹಿಸಿದ್ದಾರೆ. ಸಂಸ್ಥೆಯವರಿಗೆ ತಿಳಿ ಹೇಳಬೇಕಾಗಿದೆ ದಹಿಗೆ ಪರ್ಯಾಯವಾಗಿ ಕನ್ನಡದ್ದೆ ಆದ ಮೊಸರು ಇದೆ, ನಮ್ಗೆ ದಹಿ ಆಗ್ಬರಲ್ಲ ಮೊಸರು ಕೊಡಿ ಅನ್ಬೇಕು.
ಏನಂತೀರಾ ದಹಿನಾ ಮೊಸ್ರಾ?

ಪ್ರಸಾದ್

ತೀರ್ಮಾನವಾಗದಿರುವ ಸರಿ ತಪ್ಪಿನ ಸರಣಿ

on March 12, 2010

ಸಂಪದದಲ್ಲಿ "ಇಲ್ಲಿ ಯಾರು ಸರಿ"(http://sampada.net/blog/manjunath-s-reddy/09/03/2010/24339) ಎನ್ನುವ ಬರಹ ಉದ್ದೇಶಿಸಿ ಚರ್ಚೆಯ ಹೆಸರಿನಲ್ಲಿ ಮಾತಿನ ಕಚ್ಚಾಟ ಹಿಂಬಾಲಿಸುತ್ತಿರುವಾಗಲೆ ಆ ಕಡೆ ನಂಗೊಂದು ಮಿಂಚೆ ಬಂತು. ಅದನ್ನ ಹಾಗೆಯೆ ನಕಲಿಸಿ ಅಂಟಿಸುತ್ತಿದ್ದೇನೆ, ಚರ್ಚೆ(!!!) ಮಾಡುವವರಿಗೆ ಸಹಾಯ ಆಗಬಹುದು :)

ಏನೆ ಹೇಳಿಪ್ಪ, ಆ ಬರಹದ ಹಿಂಬಾಲಿಸಿದಾಗ ತಿಳಿದಿದ್ದು, ದೇವ್ರು ದಿಂಡ್ರನ್ನ ಚಿತ್ರಿಸಕ್ಕೆ ಅಭಿವ್ಯಕ್ತ ಸ್ವಾತಂತ್ರ್ಯ್ ಇದೆ ಆದ್ರೆ ನಮ್ಗೆ ಸಂಬಂಧಪಟ್ಟವರನಲ್ಲ/ಇಷ್ಟಪಟ್ಟವರನಲ್ಲ.

ಖಜುರಾಹೊ ಅಲ್ಲಿ ನಗ್ನವಾಗಿರುವ ಶಿಲ್ಪಗಳು ಅಭಿಸಾರಿಕೆಯರದ್ದು ದೇವರದ್ದಲ್ಲ ಅಂದ್ರೆ ಈ ಮಾತನ್ನು ಜಾಣ ನಿರ್ಲಕ್ಶ್ಯ ಮಾಡಿ , ದೇವ್ರಿಗೆ ಬಟ್ಟೆ ಹೊಲೆದ ಟೈಲರ್ ಮಾಹಿತಿ ಕೊಡಿ ಅಂತ ವಿತಂಡವಾದ ಮಾಡೊರು.

ನಾಳೆ ದಿನ ನಾನು(ಬೇರಯವರನ್ನ ನಿಲ್ಲಿಸಿದ್ರೆ ನಂಗೆ ಹೊಡಿತಾರೆ ಅನ್ನೊ ಭಯಕ್ಕೆ:) ) ಸರ್ಕಲ್ ಅಲ್ಲಿ ನಗ್ನವಾಗಿ ನಿಂತ್ರೆ (ಇದಕ್ಕು ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿ ಆರ್ಟ್ ಅಂತಾರೆ ಅಲ್ವಾ?) ಜನಕ್ಕೆ ಓಡಾಡಲು ಮುಜುಗರ ಮಾಡ್ತಿದೀನಿ ಅಂತ ಪೋಲಿಸರು ನನ್ನನ್ನು ಹಿಡ್ಕೊಂಡು ಬಡಿಯದೆ ಇರ್ತಾರಾ? ಹುಚ್ಚಾಸ್ಪತ್ರೆಯವರು ನನ್ನನ್ನು ಎಳೆದೊಯ್ಯುದೆ ಇರ್ತಾರಾ? ನನ್ನ ಆರ್ಟ್!! ಅರ್ಥ ಮಾಡ್ಕೊಬೇಕು ತಾನೆ.. ಸಹಿಸಿಕೊಬೇಕು ತಾನೆ.. ಇದಕ್ಕೆ ನೀವು ಒಪ್ಪ್ಪಿದರೆ ನಾನು ಎಲ್ಲೊ ನಿಂತ್ರೆ ಬೇಜಾರಗಲ್ಲ ಆದರೆ ನಿಮ್ ಮನೆ ಮುಂದೆ ಬಂದು ನಿಂತ್ರೆ ಕಲ್ಲು ತೊಗೊಂಡು ಹೊಡಿತೀರಾ ಯಾಕಂದ್ರೆ ಅದು ಸಂಪದ ಲೇಖನ ಅಲ್ವಲ್ಲ ಫ್ಲಾಗ್ ಮಾಡಕ್ಕೆ, ಇದುವೆ ನಿಜ ಜೀವನ!!

ಅಲ್ಲಿ ಪಂಡಿತರು ಚರ್ಚೆ ಮಾಡಿದ್ದಕಿಂತ ಮೀರಿ ನನ್ನ ಬಳಿ ಏನು ಇಲ್ಲ.. ಒಪ್ಪ್ಪುವವರಿಗೆ ಅಲ್ಲಿ ಉತ್ತರ ಸಿಗುತ್ತದೆ ವಿತಂಡದವರಿಗೆ ಇಲ್ಲೊಬ್ಬ ಬಕರಾ ಸಿಗುತ್ತಾನೆ :)

--- ಪ್ರಸಾದ್

ಮಿಂಚೆ ಓದಿ

This is a Letter to the Editor of The Hindu, from a practicing Christian lady who was Professor in Stella Maris
College, Chennai till recently; now settled at Baroda, regarding an Edit in The Hindu in favour of bringing back MF Hussain to India.
==============
Dear Ram,
I have taken time to write this to you Ram,- for the simple reason that we have known you for so many years- you and The Hindu bring back happy memories. Please take what I am putting down as those that come from an agonized soul. You know that I do not mince words and what I have to say I will-I call a spade a spade-now it is too late for me to learn the tricks of being called a ‘secularist’ if that means a bias for, one, and a bias against, another.

Hussain is now a citizen of Qatar-this has generated enough of heat and less of light. Qatar you know better than me is not a country which respects democracy or freedom of expression. Hussain says he has complete freedom-I challenge him to paint a picture of Mohammed fully clad.

There is no second opinion that artists have the Right of Freedom of expression. Is such a right restricted only to Hussain? Will that right not flow to Dan Brown-why was his film-Da Vinci Code not screened? Why was Satanic Verses banned-does Salman Rushdie not have that freedom of expression? Similarly why is Taslima hunted and hounded and why fatwas have been issued on both these writers? Why has Qatar not offered citizenship to Taslima? In the present rioting in Shimoga in Karnataka against the article Taslima wrote against the tradition of burqua which appeared in the Out Look in Jan 2007. Nobody protested then either in Delhi or in any other part of the country; now when it reappears in a Karnataka paper there is rioting. Is there a political agenda to create a problem in Karnataka by the intolerant goons? Why has the media not condemned this insensitivity and intolerance of the Muslims against Taslima’s views? When it comes to the Sangh Parivar it is quick to call them goons and intolerant etc. Now who are the goons and where is this tolerance and sensitivity?

Regarding Hussain’s artistic freedom it seems to run unfettered in an expression of sexual perversion only when he envisages the Hindu Gods and Goddesses. There is no quarrel had he painted a nude woman sitting on the tail of a monkey. The point is he captioned it as Sita. Nobody would have protested against the sexual perversion and his orientatation to sexual signs and symbols. But would he dare to caption it as ‘Fatima enjoying in Jannat with animals’? Next example-is the painting of Saraswati copulating with a lion. Here again his perversion is evident and so is his intent. Even that lets concede cannot be faulted-each one’s sexual orientation is each one’s business. I suppose. But he captioned it as Saraswati. This is the problem. It is Hussain’s business to enjoy in painting his sexual perversion. But why use Saraswati and Sita for his perverted expressions? Use
Fatima and watch the consequence. Let the media people come to his rescue then.

Now that he is in a country that gives him complete freedom let him go ahead and paint Fatima copulating with a lion or any other animal of his choice. And then turn around and prove to India-the Freedom of expression he enjoys in Qatar.

Talking about Freedom of Expression-this is the Hussain who supported Emergency-painted Indira Gandhi as Durga slaying Jayaprakash Narayan. He supported the jailing of artists and writers. Where did this Freedom of Expression go? And you call him secularist? Would you support the jailing of artists and writers Ram –would you support the abeyance of the Constitution and all that we held sacred in democracy and the excessiveness of Indira Gandhi to gag the media-writers- political opponents? Tell me honesty why does Hussain expect this Freedom when he himself did not support others with the same freedom he wants? And the media has rushed to his rescue. Had it been a Ram who painted such obnoxious, degrading painting-the reactions of the media and the elite ‘secularists’ would have been different; because there is a different perception/and index of secularism when it comes to Ram-and a different perception/and index of secularism when it comes to Rahim/Hussain.

It brings back to my mind an episode that happened to The Hindu some years ago.[1991]. You had a separate weekly page for children with cartoons, quizzes, and with poems and articles of school children. In one such weekly page The Hindu printed a venerable bearded man-fully robed with head dress, mouthing some passages of the Koran-trying to teach children. It was done not only in good faith but as a part of inculcating values to children from the Koran. All hell broke loose. Your office witnessed goons who rushed in-demanded an apology-held out threats. In Ambur,Vaniambadi and Vellore the papers stands were burned-the copies of The Hindu were consigned to the fire. A threat to raise the issue in Parliament through a Private Members Bill was held out-Hectic activities went on-I am not sure of the nature and the machinations behind the scene. But The Hindu next day brought out a public apology in its front page. Where were you Ram? How secular and tolerant were the Muslims?

Well this is of the past-today it is worse because the communal temperature in this country is at an all high-even a small friction can ignite and demolition the country’s peace and harmony. It is against this background that one should view Hussain who is bent on abusing and insulting the Hindu Gods and Goddesses. Respect for religious sentiments, need to maintain peace and harmony should also be part of the agenda of an artist-if he is great. If it is absent then he cannot say that he respects India and express his
longing for India.

Let’s face it - he is a fugitive of law. Age and religion are immaterial.What does the media want - that he be absolved by the courts?
Even for that he has to appear in the courts-he cannot run away-After all this is the country where he lived and gave expression to his pervert sadist, erotic artistic mind under Freedom of Expression. I simply cannot jump into the bandwagon of the elite ‘secularist’ and uphold what he had done. With his brush he had committed jihad-bloodletting.The issue is just not nudity-Yes the temples-the frescos in Konarak and Kajhuraho have nude figures-But does it say that they are Sita, Sarswati or any goddesses? We have the Yoni and the Phallus as sacred signs of Life-of Siva and Shakthi-take these icons to the streets, paint them -give it a caption it becomes vulgar. Times have changed. Even granted that our ancients sculptured and painted naked forms and figures, with a pervert mind to demean religion is no license to repeat that in today’s changed political and social scenario and is not a sign of secularism and tolerance. I repeat there is no quarrel with nudity-painters have time and again found in it the perfection of God’s hand craft.
Let me wish Hussain peace in Qatar-the totalitarian regime with zero tolerance May be he will convince the regime there to permit freedom of expression in word, writing and painting. For this he could start experimenting painting forms and figure of Mohamed the Prophet-and his family And may I fervently wish that the media-especially The Hindu does not discriminate goons-let it not substitute tolerance for intolerance when it comes to Rahim and Antony and another index for Ram.

I hope you will read this in the same spirit that I have written. All the best to you Ram.

Dr Mrs Hilda Raja,
Vadodara
__._,_.___

ಪ್ಲಾಸ್ಟಿಕ್

on June 3, 2009

ಇನ್ನೇನು ಕೆಲವೆ ದಿನಗಳಲ್ಲಿ,ಮಕ್ಕಳಿಗೆ ಗಣಿತ ಕಲಿಯಲು ಸುಲಭವಾಗುವ ಉದ್ದೇಶವನ್ನಿಟ್ಟುಕೊಂಡು DVDಯೊಂದನ್ನು ಬಿಡುಗಡೆ ಮಾಡಲಾಗುತಿದೆ.ಈ DVDಯಲ್ಲಿರುವ ವಿಷಯ ಕೇವಲ ಗಣಿತಕ್ಕೆ ಸೀಮಿತವಾಗಿರದೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಕಾಳಜಿಯನ್ನು ಮೂಡಿಸುವ ಹಂಬಲವೂ ಇದೆ. http://www.freeganita.com/ ಎಂಬ ಅಂತರಜಾಲದ ತಾಣದ ಸಮಗ್ರ ವಿಷಯವನ್ನು ಈ DVDಆವೃತ್ತಿಯಲ್ಲಿ ಬಿಡುಗಡೆ ಮಾಡಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಚಿಣ್ಣರಿಗೆ ಗಣಿತ ಅಂದ್ರೆ ಕಬ್ಬಿಣದ ಕಡಲೆಯಲ್ಲ ಎಂದು ತಿಳಿಸುವ ಪ್ರಯತ್ನ ಇದಾಗಿರುತ್ತದೆ. ಇದೆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಎಂಬ ವಸ್ತುವಿನ ನೈಜ್ಯ ಚಿತ್ರಣವನ್ನು ಬಿಂಬಿಸಲು ಈ ಲೇಖನವನ್ನು ಬರೆದಿದ್ದೇನೆ.ಗ್ಲೋಬಲ್ ವಾರ್ಮಿಂಗ್ ಎನ್ನುವುದರ ಬಗ್ಗೆಯು ಸಹ ಬರೆಯಲು ಸಹ ಇಚ್ಚಿಸಿದ್ದೇನೆ. ಹಾಗಾಗಿ ಈ ಲೇಖನದಲ್ಲಿ ಕಂಡು ಬರುವ ದೋಷ ಲೋಪಗಳನ್ನು ತಿಳಿಸಿದಲ್ಲಿ ಅಗತ್ಯ ತಿದ್ದುಪಡಿಮಾಡಿ DVDಯಲ್ಲಿ ಪ್ರಕಟಿಸಲು ಸಹಾಯವಾಗುತ್ತದೆ. ಇದೆ ರೀತಿಯಾಗಿ ಮಕ್ಕಳಿಗೆ ತಿಳಿಸಬಹುದಾದಂತಹ ಹಾಗು ಅವರಿಗೆ ಸಹಾಯವಾಗಬಲ್ಲಂತಹ ಲೇಖನ,ವಿಚಾರಗಳು ನಿಮಗೆ ತಿಳಿದಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ ಅದನ್ನೂ ಸಹ DVDಯಲ್ಲಿ ಪ್ರಕಟಿಸಲು ವಿಚಾರಮಾಡಬಹುದು.ನಿಮ್ಮ ಹತ್ತಿರ ಈಗಾಗಲೆ ಸಿದ್ಧಪಡಿಸಿದ ಲೇಖನವಿದ್ದರೆ ದಯವಿಟ್ಟು ಅದನ್ನು ನನ್ನ ಮಿಂಚೆಗೆ ಕಳಿಸಿ prasad[dot]preeti[at]gmail[dot]com ಅಥವಾ ನಿಮ್ಮ ಮಿಂಚೆ ತಿಳಿಸಿದಲ್ಲಿ ಮುಂದಿನ ವಿಚಾರಗಳನ್ನು ಚರ್ಚಿಸಬಹುದು. ಕಾಪಿರೈಟೆಡ್ ಲೇಖನವಾಗಿದ್ದರೆ ಅದನ್ನು ಪ್ರಕಟಿಸಲು ತಕ್ಕ ಅನುಮತಿಯಿದ್ದರೂ ನಡೆಯುತ್ತದೆ.ಸ್ವಂತ ಲೇಖನಗಳು ಇದ್ದಲ್ಲಿ ತಲೆ ನೋವ್ವು ಇರೋದಿಲ್ಲ.ಪ್ರಭಂಧ,ಸಣ್ಣ ಕತೆಗಳು,ನೀತಿ ಕತೆಗಳು,ನಾಟಕ,ಪದ್ಯ ಮುಂತಾದ ಯಾವ ವಿಚಾರವಾಗಿದ್ದರು ಸಹ ಹಂಚಿಕೊಳ್ಳಿ.

ಲೇಖನ ಪ್ಲಾಸ್ಟಿಕ್ ಬಗ್ಗೆ...

ಪ್ಲಾಸ್ಟಿಕ್ ಎಂದಾಕ್ಷಣ ನಮಗೆ ತಕ್ಷಣ ತಲೆಗೆ ಹೊಳೆಯೋದು ಕೈಚೀಲಗಳು,ಖುರ್ಚಿ,ಮೇಜು.. ಇತ್ಯಾದಿ. ಆ ಲೆಕ್ಕಕ್ಕೆ ನಮ್ಮ ನಿತ್ಯ ಉಪಯೋಗಿ ವಸ್ತುಗಳಲ್ಲಿ ಹೆಚ್ಚಿನದಾಗಿ ಪ್ಲಾಸ್ಟಿಕ್ ಉಪಕರಣ, ಸಾಧನಗಳನ್ನು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ಉಪಯೋಗಿಸುತ್ತೇವೆ. ಇಷ್ಟೆಲ್ಲಾ ಬಹುಪಯೋಗಿ ವಸ್ತು ಆಗಿದ್ರು ಸಹ ಒಂದೆಡೆ ಪರಿಸರ ಪ್ರೇಮಿಗಳ ಕೂಗು ಇದ್ದೆ ಇದೆ.ಪ್ಲಾಸ್ಟಿಕ್ ನ ಬಳಕೆ ಹಾನಿಕಾರಕ ಅಂತ.ಹೀಗೆ ಪ್ಲಾಸ್ಟಿಕ್ ನ ಪರ ಹಾಗು ವಿರೋಧಿ ಅಂಶಗಳ ಚರ್ಚೆ ಮಾಡುವ ಮುನ್ನ ನಾವು ಪ್ಲಾಸ್ಟಿಕ್ ನ ಇತಿಹಾಸ ಸ್ವಲ್ಪ ತಿಳಿದುಕೊಂಡು ತದನಂತರ ಪೂರ್ವಾಪರಗಳ ಬಗ್ಗೆ ಆಲೋಚಿಸಿದರೆ ಒಳಿತು.

ಪ್ಲಾಸ್ಟಿಕ್ ಬೆಳೆದು ಬಂದ ರೀತಿ
೧೮೬೨ರಲ್ಲಿ ಲಂಡನ್ನಲ್ಲಿ ನಡೆದ ಒಂದು ಪ್ರದರ್ಶನದಲ್ಲಿ ಮೊದಲ ಬಾರಿಗೆ "ಇಂದಿನ ಪ್ಲಾಸ್ಟಿಕ್ ಅನ್ನು ಹೋಲುವಂತಹ" ವಸ್ತುವೊಂದನ್ನು ಅಲೆಕ್ಸಾಂಡರ್ ಪರ್ಕೆಸ್ ಎನ್ನುವವರು ಜಗತ್ತಿಗೆ ಪರಿಚಯಿಸಿದರು. ಆದ್ರೆ ಈ ಬಗೆಯ ಪ್ಲಾಸ್ಟಿಕ್ ತಯಾರಿಸಲು ಕಚ್ಚಾ ವಸ್ತುಗಳು ತುಂಬ ದುಬಾರಿಯಾಗಿದ್ದ ಕಾರಣ ಈ ಪದಾರ್ಥವನ್ನು ಕೈ ಬಿಡಲಾಯಿತು. ಈ ಘಟನೆ ನಡೆದು ಕೇವಲ ೭ ವರ್ಷಗಳ ನಂತರ ಅಂದ್ರೆ ೧೮೬೯ ರಲ್ಲಿ ಜಾನ್ ವೆಸ್ಲಿ ಹ್ಯಾತ್ತ್ ಎಂಬುವವರು ಪ್ಲಾಸ್ಟಿಕ್ ಅನ್ನು ಉತ್ಪಾದಿಸಲು ಮೊದಲ ಪ್ರಯೋಗ ಮಾಡಿದ್ರು. ಈ ಪ್ರಯೋಗಕ್ಕೆ ಬಳಸಿದ ವಸ್ತುಗಳು ತುಂಬ ತಿಳಿಯಾದ ನೈಟ್ರಿಕ್ ಹಾಗು ಸಲ್ಫ್ಯೂರಿಕ್ ಆಸಿಡ್ ಗಳ ಮಿಶ್ರಿತ ಪೇಪರ್, ಅದೇ celluloid . ಈ ಮಿಶ್ರಣ "flammable" ಪದಾರ್ಥಗಳಿದ್ದ ಕಾರಣ ಸಫಲವಾಗಲಿಲ್ಲ. ಆದರೆ ಸೆಲ್ಲ್ಯುಲಾಯ್ಡ್‌ಅನ್ನು film reels ಮಾಡಲು ಯೋಗ್ಯವಾಯಿತು. ತರುವಾಯ ೧೮೭೨ರಲ್ಲಿ ಯುಗೆನ್ ಬೌಮನ್ನ್ ಎನ್ನುವವರು PVCಯನ್ನು ಕಂಡು ಹಿಡಿದರು. ನಂತರ ೧೯೦೭ರಲ್ಲಿ, ಲಿಯೋ ಬೇಕಲ್ಯಾಂಡ್ ಅನ್ನುವವರು, ನಾವು ಇಂದು ಮಾರುಕಟ್ಟೆಯಲ್ಲಿ ಕಾಣುವ "ಪ್ಲಾಸ್ಟಿಕ್" ಕಂಡು ಹಿಡಿದರು. ಶಾಖ ಕೊಟ್ಟಾಗ ಮೆತ್ತಗೆ, ಹಾಗು ತಣ್ಣಗೆ ಮಾಡಿದಾಗ ಗಟ್ಟಿ ಆಗುವ ಈ ಪದಾರ್ಥ ಎಲ್ಲರ ಗಮನ ಸೆಳೆಯಿತು,ವ್ಯಾಪಾರ ದೃಷ್ಟಿಯಿಂದ ಎಲ್ಲರ ಕಣ್ಣು ಕುಕ್ಕಿತು.ಪ್ಲಾಸ್ಟಿಕ್ ನ ಮೊದಲು ಎಲ್ಲರು ಪೇಪರ್,ಕಬ್ಬಿಣ,ತಾಮ್ರ, ಗಾಜು ಇಂಥಾದವುಗಳ ಮೇಲೆ ಅವಲಂಬಿತರಿದ್ದರು.
ಆದ್ರೆ ಪ್ಲಾಸ್ಟಿಕ್ ಅನ್ನೋದು ಮನುಷ್ಯನಿಂದ ಮನುಷ್ಯನಿಗಾಗಿ,ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗದೆ ತಯಾರಿಸಬಹುದಾದಂತಹ ಮೊದಲ ವಸ್ತುವಾಯಿತು.ಹಾಗಾಗಿ ಯಾವ ಯಾವ ವಸ್ತುಗಳನ್ನು ತಯಾರಿಸಲು ಆಗುತ್ತಿತ್ತೋ ಅವನ್ನೆಲ್ಲ ಪ್ಲಾಸ್ಟಿಕ್ ನಿಂದ ತಯಾರಿಸಲು ಶುರು ಮಾಡಿದರು.ತದನಂತರ ಈ ಪ್ಲಾಸ್ಟಿಕ್ ನಿಂದ ಹಲವಾರು ಕುಡಿಗಳು ಚಿಗುರೊಡೆದವು vinyl,acryllic,ethylene ಅಂತ ಹುಟ್ಟಿಕೊಂಡವು.ಇಂದಿಗೂ ಸಹ ಪ್ಲಾಸ್ಟಿಕ್ ನ ಗುಣಧರ್ಮಗಳನ್ನು ಬದಲಾಯಿಸಿ ಸಂಶೋಧನೆ ನಡಿಯುತ್ತಲೇ ಇದೆ ಹಾಗಾಗಿ ನಾವು ಇಂದು PVC ಪೈಪ್ಗಳನ್ನು ನೋಡಲು ಸಾಧ್ಯವಾದವು,ಹಗುರ,ಗಟ್ಟಿ ಹಾಗು ಧೀರ್ಘ ಬಾಳಿಕೆ ಬರುವಂಥಾದ್ದು.ಹೀಗೆ ವ್ಯಾವಹಾರಿಕವಾಗಿ ತುಂಬಾ ಲಾಭದಾಯಕವಾಗಿರುವುದನ್ನ ಮನೆ ಮನೆಗೂ ತಲುಪುವಂತೆ ಮಾಡಿದರು.

ಇದಕ್ಕಾಗಿಯೇ ೧೯೩೭ರಲ್ಲಿ SPI (ಪ್ಲಾಸ್ಟಿಕ್ ಕೈಗಾರಿಕೆಗಳ ಸಮುದಾಯ) ಸಂಸ್ಥೆ ಕೂಡ ಸ್ಥಾಪಿಸಲಾಯಿತು. ನಾವು ಇಂದು ನೀರು ಕುಡಿಯಲು ಬಳಸುವ PET(PolyEthylene Terephthalate) ಬಾಟಲ್ ಗಳನ್ನು ೧೯೭೫ರಲ್ಲಿ ಕಂಡು ಹಿಡಿಯಲಾಯಿತು. ಪ್ರತಿ PET ಬಾಟಲ್ ನ ಗುಣಮಟ್ಟದ ಆಧಾರದ ಮೇರೆಗೆ ಒಂದು ದರ್ಜೆಯನ್ನು ಗುರುತಿಸಿ ಅದನ್ನು ಬಾಟಲ್ ನ ತಳ ಭಾಗದಲ್ಲಿ ಮುದ್ರಿಸಿರುತ್ತಾರೆ, ಈ ದರ್ಜೆ ೧-೭ ಆಗಿರುತ್ತದೆ.

ಸಾಮಾನ್ಯವಾಗಿ ತಂಪಾದ ಪಾನೀಯಗಳನ್ನು ಇಂಥಹ ಬಾಟಲ್ ನಲ್ಲಿ ಶೇಖರಿಸುತ್ತಾರೆ. ಹಾಗಾಗಿ ಇಂಥಹ ಬಾಟಲ್ ಗಳಲ್ಲಿ ಕುಡಿಯುವ ನೀರು ಶೇಖರಿಸಿ ಪುನರ್ಬಳಕೆ ಮಾಡುವುದರಿಂದ ಕಾಲಾಂತರದಲ್ಲಿ ನಮಗೆ ಹಾನಿಕರ.

ಪರ ವಿಚಾರಗಳು:
ಪ್ಲಾಸ್ಟಿಕ್ ಕಂಡು ಹಿಡಿಯುವ ಮುನ್ನ ದಿನ ನಿತ್ಯ ವಸ್ತುಗಳ ತಯಾರಿಕೆಗೆ ಮುಖ್ಯವಾದ ಕಚ್ಚಾ ವಸ್ತುವಾಗಿದ್ದುದು ಕಬ್ಬಿಣ,ಗಾಜು ಹಾಗು ಮರ, ಇತರೆ ಕಚ್ಚಾ ವಸ್ತುವೇನಿದ್ದರು ಪಟ್ಟಿಯಲ್ಲಿ ಅಮೇಲಿನದಾಗಿರುತ್ತಿತ್ತು.ಒಮ್ಮೆ ಯೋಚಿಸಿ, ನಮ್ಮ ದಿನೋಪಯೋಗಿ ವಸ್ತುಗಳಾದ ಟೂತ್ ಬ್ರಷ್‌ ಮರದ್ದಾಗಿದ್ದರೆ ಹೇಗಿರುತ್ತಿತ್ತು, ನೀರು ಹಾಯಿಸಲು ಪಿ.ವಿ.ಸಿ ಪೈಪ್ ಬದಲು ಕಬ್ಬಿಣ ಪೈಪ್ ಬಳಸಿದರೆ ಖರ್ಚು ಎಷ್ಟು? ಭಾರವೆಷ್ಟು,ಎಷ್ಟು ಬೇಗ ತುಕ್ಕು ಹಿಡಿಯುತ್ತಿತ್ತು.. ಹೀಗೆಯೆ ನಮ್ಮ ಗಾಡಿಯ ಬಿಡಿ ಭಾಗಗಳು ಸಹ ಕಬ್ಬಿಣದ್ದಾಗಿದ್ದರೆ ಗಾಡಿಯ ಭಾರ ಹೆಚ್ಚಿ, ಪ್ರತಿ ಲೀಟರ್‌ಗೆ ಸರಾಸರಿ ೫೦ ಕಿ.ಮಿ ಮೈಲೇಜ್ ಕೊಡುವ ವಾಹನ ಏಕಾಏಕಿ ೩೫-೪೦ ಕಿ.ಮಿ ಕೊಡುವ ಹಾಗಾದರೆ ಹೇಗಿರುತ್ತಿತ್ತು?ಪರಿಸರ ಮಾಲೀನ್ಯ ಹಾಗು ಜೇಬಿಗೂ ಭಾರ ಅಲ್ಲವೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಅಥವಾ ಪರ್ಯಾಯ ಸಾಧನವಾಗಿ ಜನ-ಜೀವನದಲ್ಲಿ ತನ್ನ ಛಾಪು ಮೂಡಿಸಿದ ವಸ್ತು ಪ್ಲಾಸ್ಟಿಕ್.
ಋಷಿ ಮುನಿಗಳು ಕಮಂಡಲ ಬಳಸುತ್ತಿದ್ದರು, ನಂತರ ಪುಣ್ಯ ಕ್ಷೇತ್ರಗಳಿಗೆ ಹೋಗುವಾಗ ಸಹಾಯವಾಗಲೆಂದು ಹಿಡಿಕೆ ಹಾಗು ಮುಚ್ಚಳವಿರುವ ತಾಮ್ರದ ಚಂಬುಗಳು ಹುಟ್ಟಿಕೊಂಡವು ಆದರೆ ಪ್ಲಾಸ್ಟಿಕ್‌ನ ಪರಿಚಯದ ನಂತರ ಎಲ್ಲೆಡೆಯು ಪ್ಲಾಸ್ಟಿಕ್‌ ಬಾಟಲ್‌ಮಯವಾಯಿತು ಇಲ್ಲವಾದಲ್ಲಿ ಮಕ್ಕಳು ಶಾಲೆಗೆ ಮಧ್ಯಾನ್ಹ ಊಟ ಮಾಡಲು ಚಂಬನ್ನು ಸಹ ತೆಗೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತಿತ್ತು. ಆದ್ದರಿಂದ ಪ್ಲಾಸ್ಟಿಕ್‌ ಎನ್ನುವುದು ಮನುಷ್ಯನ ಇತಿಹಾಸದಲ್ಲೆ ಅತ್ಯಂತ ಮಹತ್ತರವಾದ ಸಂಶೋಧನೆಯಾಯಿತು.
ಬೆಳಗ್ಗೆ ಎದ್ದು ಹಲ್ಲುಜಲು ಬಳಸುವ ಟೂತ್ ಬ್ರಷ್‌ನಿಂದ ಹಿಡಿದು ಬಾಚಣಿಗೆ,ಬಾಗಿಲು,ಬಕೀಟು,ಚಂಬು,ಖುರ್ಚಿ,ಕೈ ಚೀಲ,ಪೊರಕೆಯ ಹಿಡಿಕೆಗಳು,ರೈನ್ ಕೋಟ್,ಚಪ್ಪಲಿ ಕೊನೆಗೆ ಮಲಗುವ ಮುನ್ನ ದೀಪ ಆರಿಸುವ ಸ್ವಿಚ್ ಸಹ ಪ್ಲಾಸ್ಟಿಕ್ ನದ್ದೆ ಆಗಿರುತ್ತದೆ. ಮನುಷ್ಯನ ಆಲೋಚನಾ ಶಕ್ತಿಗೆ ಯಾವುದೆಲ್ಲಾ ನಿಲುಕಿತೋ ಅವನ್ನೆಲ್ಲ ಪ್ಲಾಸ್ಟಿಕ್ ಗೆ ಮಾರ್ಪಡಿಸಲು ಯತ್ನಗಳು ನಡೆಯುತ್ತಿವೆ. ನೈಸರ್ಗಿಕವಲ್ಲದ ಇದನ್ನು ಮನುಷ್ಯರಿಗೆ ಅನ್ಯ ಮಾರ್ಗವಿಲ್ಲದೆ ಪ್ರತಿ ಕೆಲಸಗಳಲ್ಲೂ ಅವಶ್ಯಕವಿರುವ ಪದಾರ್ಥ ಎನ್ನುವಂತೆ ಮಾರುಕಟ್ಟೆ ಮಾಡಿದ ವಸ್ತುವಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳು ಜಗತ್ತಿನಲ್ಲೇ ಅತ್ಯಂತ ದೊಡ್ಡ ಕಾರ್ಖಾನೆಯಾಗಿ ಬೆಳೆದಿದೆ. ಉದ್ಯಮ ಬೆಳೆದಂತೆ ಜನರಿಗೆ ಕೆಲಸ ಸಿಗಲು ಆರಂಭವಾಯಿತು.ಹೊಸ ಅನ್ವೇಶಣೆಗಳಿಗೆ ಆಡಿಗಲ್ಲಾಯಿತು,ಕೆಲಸ ಸಿಕ್ಕ ನಂತರ ಜನರ ಜೀವನ ಶೈಲಿ ಉತ್ತಮಗೊಂಡು ದೇಶ ಪ್ರಗತಿಗೆ ಸಹಕಾರಿಯಾಯಿತು. ಜಗತ್ತಿನೆಲ್ಲೆಡೆ ದೇಶ ವಿದೇಶಗಳ ಮಧ್ಯೆ ವ್ಯವಹಾರವು ಕುದುರಿತು, ದೇಶದ ಆರ್ಥಿಕ ಸ್ಥಿತಿ ಉತ್ತಮವಾಗುವಂತೆ ಮಾಡಿತು. ಧೀರ್ಘ ಬಾಳಿಕೆಯ,ಹಗುರವಾದ,ತುಕ್ಕು ಹಿಡಿಯದ,ಹೆಚ್ಚು ಒತ್ತಡ ಸಹಿಸುವ ಎಲ್ಲಕಿಂತ ಮುಖ್ಯವಾಗಿ ಬೇಗನೆ ಹಾಳಾಗದಿರುವ ಅಗ್ಗದ ಬೆಲೆಗೆ ಸಿಗುವಂತಹ ಪ್ಲಾಸ್ಟಿಕ್ ಉಪಕರಣಗಳು ಜೇಬಿನ ಮೇಲೆ ಹಗುರವಾಗಿ,ಪ್ರಯೋಜನಕಾರಿ ವಸ್ತುವಾಗಿ ಲಭ್ಯವಾಯಿತು. ಕಣ್ಣಿಗೆ ಆಕರ್ಷಕವಾಗಿ ಕಾಣುವ ಬಣ್ಣಗಳಲ್ಲಿ ಪ್ಲಾಸ್ಟಿಕ್ ಉಪಕರಣಗಳು ಬಂದವು. ಅಲಂಕಾರಿಕ ವಸ್ತುವಾಗಿ ಬಳಸುವಂತಾಯಿತು. ಹೇಳಬೇಕೆಂದರೆ ಪ್ಲಾಸ್ಟಿಕ್ ಇಲ್ಲದೆಯೇ ಜಗತ್ತನು ಊಹಿಸಿಕೊಳ್ಳಲು ಸಾಧ್ಯವಿಲ್ಲದ ಮಟ್ಟಿಗೆ ಅದು ನಮ್ಮ ಜೀವನಕ್ಕೆ ಅತ್ಯಂತ ಉಪಯುಕ್ತವಾದಂತಹ ಸಂಶೋಧನೆಯಾಗಿ ಪರಿಣಮಿಸಿದೆ. ಪ್ಲಾಸ್ಟಿಕ್‌ನ ಸ್ಥಾನವನ್ನು ಬೇರೆ ಯಾವುದೇ ವಸ್ತುವು ಆಕ್ರಮಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ನಮ್ಮ ಸಾಧನಗಳಲ್ಲಿ ಬೆಸೆದು ಕೊಂಡಿವೆ. ಹೊರನೋಟಕ್ಕೆ ಬೆಲೆಬಾಳುವ ವಸ್ತುಗಳಂತೆಯೇ ಕಾಣುವ ಪ್ಲಾಸ್ಟಿಕ್ ಉಪಕರಣಗಳು ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಸಿಕ್ಕು ಅವರ ಮನವನ್ನು ಸಂತೋಷಿಸುತ್ತದೆ.

ವಿರೋಧ ವಿಚಾರಗಳು:
ಪ್ಲಾಸ್ಟಿಕ್ ಒಂದು ಗೋಮುಖ ವ್ಯಾಘ್ರವಿದ್ದಂತೆ. ನಿತ್ಯ ಜೀವನ ಉಪಕರಣಗಳಿಗೆ ಅಗತ್ಯ ವಸ್ತುವೆಂದೆನಿಸಿದರು ಸಹ ಅದರ ತಯಾರಿಕ ಹೆಜ್ಜೆಯಿಂದ ಹಿಡಿದು ಇನ್ನು ಉಪಯೋಗವಿಲ್ಲವೆಂದು ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯ ತದನಂತರ ನೈಸರ್ಗಿಕವಾಗಿ ಕೊಳೆಯದೆ ೧೦ ಲಕ್ಷ ವರ್ಷಗಳ ನಂತರವೂ ಹಾಗೆ ಉಳಿಯುವ ಕರಾಳ ಗುಣಧರ್ಮವನ್ನು ಸಹ ಹೊಂದಿದೆ.ಕೇವಲ ಒಂದು ಕಿಲೊ ಕಚ್ಚಾ ಪ್ಲಾಸ್ಟಿಕ್ ತಯಾರಿಕೆಗೆ ಬೇಕಾಗುವ ಶಕ್ತಿ, ೧೦೦ watt ಬಲ್ಬ್ ಅನ್ನು ೫೬ ವರ್ಷ ಸತತವಾಗಿ ಉರಿಸಬಹುದು.ಇದಕ್ಕೆ ಹೋಲಿಸಿದರೆ ಯೋಚಿಸಿ,ಕೇವಲ ಒಂದು ಕಿಲೊಗೆ ಎಷ್ಟು ಶಕ್ತಿ ಖರ್ಚು ಆಗುತ್ತಿದೆ ಎಂದು.ಖುರ್ಚಿ,ಬಾಗಿಲು,ಟೇಬಲ್ ತಯಾರಿಸಲು ಎಷ್ಟೆಲ್ಲಾ ಕಿಲೊಗಟ್ಟಲೆ ಪ್ಲಾಸ್ಟಿಕ್ ಬೇಕಾಗುತ್ತದೆ!!!ಮೊದಲ ಪ್ರಶ್ನೆ ಎಷ್ಟು ಶಕ್ತಿ ಬೇಕಾಗಿರುವುದು ಅಂತ ಆದರೆ, ಈ ತಯಾರಿಕಾ ಘಟಕಗಳಲ್ಲಿ ಬಿಡುಗಡೆಯಾಗುವ ವಿಷಯುಕ್ತ ಅನಿಲಗಳು ನಾವು ಉಸಿರಾಡುವ ಗಾಳಿಯನ್ನು ಸಹ ಕಲುಷಿತಗೊಳಿಸುತ್ತದೆ. ಪ್ಲಾಸ್ಟಿಕ್ ಅನ್ನು ಸಂಸ್ಕರಿಸುವ ವಿಧಾನದಲ್ಲಿ ಅವಶ್ಯಕವಿರುವ ನೀರು ಕಲುಷಿತಗೊಂಡು ನೆಲ ಹಾಗು ಜಲ ಮೊಲಗಳನ್ನು ಸೇರಿ ಅದನ್ನು ಸಹ ಹಾಳು ಮಾಡುತ್ತದೆ.ನಾವು ನಮ್ಮ ಮನೆಯ ಆವರಣದಲ್ಲಿ ಬೋರ್ ಹಾಕಿಸಿ ಅಂತರ್ ಜಲದ ನೀರು ಮೇಲೆತ್ತಿದಾಗ ಇದೆ ಕಲುಷಿತ ನೀರು ನಮ್ಮ ಅರಿವಿಲ್ಲದಂತೆಯೇ ಅಡುಗೆ ಕೊಣೆಯನ್ನೂ ಸೇರುತ್ತದೆ. ಇಂತಹ ನೀರನ್ನು ಬಳಸಿದಾಗ ಕೆಲವೊಮ್ಮೆ ತಾತ್ಕಾಲಿಕ ರೋಗ ಉಂಟಾದರೂ ಧೀರ್ಘ ಕಾಲದ ರೋಗಗಳು ಬರುವುದರಲ್ಲಿ ಸಂಶಯವಿಲ್ಲ.ಸಿಗರೇಟು,ತಂಬಾಕು ಚಟವಿದ್ದರೆ ಹೇಗೆ ಮೊದಲು ಸುಸ್ಥಿತಿಯಲ್ಲಿರುವವರ ಆರೋಗ್ಯ ನಿಧಾನವಾಗಿ ಹದಗೆಟ್ಟು ಕ್ಯಾನ್ಸರ್‌ನಂತಹ ರೋಗಕ್ಕೆ ತುತ್ತಾಗಿ ಸಾಯುತ್ತಾರೊ ಹಾಗೆಯೆ ಪ್ಲಾಸ್ಟಿಕ್‌ನಲ್ಲಿ ಆಹಾರ ಪದಾರ್ಥಗಳನ್ನು ಶೇಖರಿಸಿ ಉಪಯೋಗಿಸಿದರೆ ಧೀರ್ಘ ಕಾಲದ ರೋಗಗಳಿಗೆ ತುತ್ತಾಗಬೇಕಾಗುತ್ತದೆ.ನಾವು ಊಟದ ಡಬ್ಬಕ್ಕೆ ಪ್ಲಾಸ್ಟಿಕ್ ಡಬ್ಬವನ್ನು ಬಳಸಿದರೆ,ಬಿಸಿ ಬಿಸಿಯಾದ ಆಹಾರ ಪ್ಲಾಸ್ಟಿಕ್ ನೊಂದಿಗೆ ಬೆರೆತು ನಗ್ನ ಕಣ್ಣಿಗೆ ಕಾಣದ ರಾಸಾಯನಿಕ ಕ್ರಿಯೆಯುಂಟಾಗಿ ತಿನ್ನುವ ಪದಾರ್ಥವನ್ನು ಹಾಳು ಮಾಡುತ್ತದೆ, ಇಂತಹ ಅಡುಗೆಯನ್ನು ತಿಂದಾಗ ನಿಮಗೆ ಪ್ಲಾಸ್ಟಿಕ್ ತಿಂದ ಅನುಭವವಾದಲ್ಲಿ ಆಶ್ಚರ್ಯವಿಲ್ಲ.ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ತಿನ್ನುವ ಪದಾರ್ಥವನ್ನು ಕಲುಷಿತಗೊಳಿಸುತ್ತದೆ,ಇದರ ಅರಿವಿಲ್ಲದೆ ನಾವು ತಿಂದಾಗ ಅಥವಾ ಬಿಸಿ ಬಿಸಿಯಾದ ಚಹಾ/ಕಾಫಿ/ಹಾಲು ಮುಂತಾದ ಪಾನೀಯಗಳನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ಸೇವಿಸಿದಾಗ ನಮ್ಮ ಆರೋಗ್ಯವು ಹಾಳಾಗುವುದರಲ್ಲಿ ಸಂಶಯವಿಲ್ಲ.ಒಂದು ಥೆಳುವಾದ (ದಪ್ಪನದಲ್ಲ ಎಂಬುದು ಗಮನದಲ್ಲಿರಲಿ!!) ಪ್ಲಾಸ್ಟಿಕ್ ಚೀಲ ನೈಸರ್ಗಿಕವಾಗಿ ಕೊಳೆಯಲು ಹಲವು ಮಿಲಿಯನ್ ವರ್ಷ ಬೇಕಾಗುತ್ತದೆ, ಅಂದಾಜಿಗೆ ಹತ್ತು ಲಕ್ಷ ವರ್ಷ. ಅವು ಕೊಳೆಯುವ ಪ್ರಕ್ರಿಯೆ ಕೂಡ ಭಯಾನಕ ಅನೇಕ ರೀತಿಯ ವಿಷಯುಕ್ತ ಅನಿಲಗಳನ್ನು ಗಾಳಿಗೆ ಬಿಡುಗಡೆ ಮಾಡುತ್ತದೆ ವಿಷಯುಕ್ತ ರಾಸಾಯನಿಕಗಳನ್ನು ಭೂಮಿಗೆ ಬಿಡುಗಡೆ ಮಾಡಿ ಕೊಳೆಯುತ್ತದೆ. ಹೀಗಾಗಿ ಅವು ಉಪಯುಕ್ತವಾಗಿದ್ದಾಗಲು ಆರೋಗ್ಯಕ್ಕೆ ಹಾನಿಕಾರಕ,ಕೊಳೆಯ ಬೇಕಾದರೂ ಆರೋಗ್ಯಕ್ಕೆ/ಪರಿಸರಕ್ಕೆ ಹಾನಿಕಾರಕ.ಪೇಪರ್ ನೈಸರ್ಗಿಕವಾಗಿ ಬೇಗನೆ ಕೊಳೆಯುತ್ತದೆ,ವಿಷಯುಕ್ತ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ ಆದರೆ ಪ್ಲಾಸ್ಟಿಕ್ ಇದಕ್ಕೆ ವ್ಯತಿರಿಕ್ತ .
ಕುಡಿಯುವ ನೀರನ್ನು PET ಬಾಟಲ್ ಗಳಲ್ಲಿ ಶೇಖರಿಸಿಟ್ಟು ಕುಡಿದರೆ ಹಲವಾರು ಕ್ಯಾನ್ಸರ್ ಬರುತ್ತದೆ ತಕ್ಷಣವೇ ಇದರ ಲಕ್ಷಣಗಳು ಕಾಣದೆ ಇದ್ದರು ಹಲವಾರು ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಬಳಸಿ ಬಿಸಾಡುವ ಪ್ರತಿ ಪ್ಲಾಸ್ಟಿಕ್ ಬಾಟಲ್/ಕವರ್/ಇತರೆಗಳು ನಮ್ಮ ಭೂಮಿಯನ್ನು ಮಲಿನಗೊಳಿಸುತ್ತವೆ. ನಮ್ಮ ಪರಿಸರದ ನಿರ್ಮಲತೆಯನ್ನು ಹಾಳುಗೆಡವುತ್ತದೆ. ಮುಂದಿನ ಪೀಳಿಗೆಗಳು ಇಂತಹ ಮಲಿನಗೊಂಡ ಭೂಮಿ, ಉಸಿರಾಡಲು ಕಲುಷಿತ ಗಾಳಿ, ತಿಪ್ಪೆಯಂತಹ ವಾತಾವರಣದ ಮಧ್ಯೆ ಬದುಕ ಬೇಕಾಗುವ ಅನಿವಾರ್ಯತೆ ಉಂಟಾಗುತ್ತದೆ.

ತಿಳಿದುಕೊಳ್ಳಬೇಕಾದ ವಿಚಾರ

ಪ್ಲಾಸ್ಟಿಕ್ ಅನ್ನು ಏಕಾ ಏಕಿ ತ್ಯಜಿಸಲು ಸಾಧ್ಯವಿಲ್ಲದೇ ಇದ್ದರು ಸಹ ಅವನ್ನು ಆದಷ್ಟು ನಾಜೂಕಾಗಿ,ಮಿತಿಯಲ್ಲಿ ಬಳಸಬೇಕು. ದುಷ್ಟರಿಂದ ದೂರ ಇರು ಎನ್ನುವ ಹಾಗೆ ಪ್ಲಾಸ್ಟಿಕ್ ವಸ್ತುಗಳಿಂದ ಆದಷ್ಟು ದೂರವಿರಬೇಕು.ನಮ್ಮ ಜೀವನ ಹೇಗೆ ಅಡೆ ತಡೆಗಳಿಲ್ಲದೆ ಸುಗಮವಾಗಿ ಸಾಗಲು ಇಚ್ಚಿಸುತ್ತೆವೆಯೋ ಹಾಗೆ ನಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಎಲ್ಲರೂ ಸ್ವಚ್ಚವಾದ ವಾತಾವರಣದಲ್ಲಿ ಬದುಕುವ ಹಾಗೆ ಮಾಡಬೇಕು. ಪ್ಲಾಸ್ಟಿಕ್ ನ "ನಿಜ" ಗುಣಗಳ ಬಗ್ಗೆ ಅರಿವಿಲ್ಲದವರಿಗೆ ತಿಳಿ ಹೇಳಬೇಕಾದದ್ದು ವಿಷಯ ಅರಿತುಕೊಂಡವರ ಧರ್ಮ ಹಾಗು ಕರ್ತವ್ಯ. ಸುಂದರ, ಸ್ವಚ್ಛ, ಸಮಾಜ ಕಟ್ಟಲು ನಾವು ಮಾಡುವ ಅತಿ ಸಣ್ಣ ಕೆಲಸವಾಗುತ್ತದೆ.
ಪ್ರತಿ ನಿತ್ಯ ಪ್ಲಾಸ್ಟಿಕ್ ಅನ್ನು ಎಲ್ಲಿ ಎಲ್ಲಿ ಬಳಸುತ್ತೇವೆಯೋ ಆಯಾ ಸಂಧರ್ಭಗಳಲ್ಲಿ ಅವುಗಳನ್ನು ಉಪಯೋಗಿಸದೆ ಪರ್ಯಾಯ ಮಾರ್ಗದಿಂದ ಕಾರ್ಯಸಾಧನೆ ಮಾರ್ಗ ಯೋಚಿಸಬೇಕು.
ಗೊತ್ತಾಗದಿದ್ದರೆ ಕೇಳಿ ತಿಳಿದುಕೊಳ್ಳಬೇಕು, ಸಫಲವಾದ ಸ್ವಂತ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.
ಉದಾಹರಣೆಗೆ :
೧. ಅಂಗಡಿಗೆ ಹೋಗುವ ಮುನ್ನ ಮನೆಯಿಂದ ಬಟ್ಟೆಯ ಕೈ ಚೀಲ ಅಥವಾ ಮೊದಲೇ ಉಪಯೋಗಿಸಿದ ಪ್ಲಾಸ್ಟಿಕ್ ಚೀಲವನ್ನು ತೆಗೆಕೊಂಡು ಹೋಗಬೇಕು. ಇದರ ಉದ್ದೇಶ, ಹೊಸ ಪ್ಲಾಸ್ಟಿಕ್ ಚೀಲದ ಬಳಕೆಯಾಗದಂತೆ ತಡೆಯುವುದು.
೨. ಪ್ಲಾಸ್ಟಿಕ್ ವಸ್ತುಗಳನ್ನು ಸಾಧ್ಯವಾದಷ್ಟು ಪುನರ್ಬಳಕೆ ಮಾಡಬೇಕು.
೩. ಊಟದ ಪದಾರ್ಥ ಅಥವಾ ಪಾನೀಯಗಳನ್ನು ಪ್ಲಾಸ್ಟಿಕ್‌ನ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿ ಇಡಬೇಕು.ಇದು ಬಹು ಮುಖ್ಯ.
೪. ರೆಫಿಲ್ ಪೆನ್ ಬದಲು ಇಂಕ್ ಪೆನ್ ಗಳನ್ನು ಬಳಸಬೇಕು.
೫. ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು.ನಿಮ್ಮ ಊರಿನಲ್ಲಿ ಪ್ಲಾಸ್ಟಿಕ್ ಪುನರ್ಬಳಕೆ ಸಂಸ್ಕರಣ ಘಟಕಗಳಿದ್ದರೆ, ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಪ್ರತ್ಯೇಕವಾಗಿ ಶೇಖರಿಸಿ ಅವರಿಗೆ ವಿಚಾರ ತಿಳಿಸಿದಲ್ಲಿ ಬಂದು ಒಯ್ಯುತ್ತಾರೆ.
೬. ಊಟದ ಚೀಲಗಳನ್ನು ಹಾಗೆಯೇ ತಿಪ್ಪೆಗೆ ಹಾಕುವುದರಿಂದ ಅದ್ರಲ್ಲಿ ಉಳಿದಿರುವ ಆಹಾರ ಪದಾರ್ಥವನ್ನು ತಿನ್ನಲು ಬರುವ ಹಸು,ಕರು ಅರಿವಿಲ್ಲದೆಯೇ ಪ್ಲಾಸ್ಟಿಕ್ ಕವರ್ ಅನ್ನು ಸಹ ತಿನ್ನುತ್ತದೆ. ಈ ಪ್ಲಾಸ್ಟಿಕ್ ಚೀಲ ಪ್ರಾಣಿಗಳ ಹೊಟ್ಟೆ ಸೇರಿ ಅವುಗಳ ಸಾವಿಗೆ ಸಹ ಕಾರಣವಾಗುತ್ತದೆ. ಇಂತಹ ಸಾವಿಗೆ ನಮ್ಮ ಅಜ್ಞಾನವು ಕಾರಣವಾಗಿರಬಾರದು. ಆದ್ದರಿಂದ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ಶೇಖರಿಸಿ ಬಿಸಾಡುವ ಪದ್ದತಿಯನ್ನು ರೂಢಿಸಿಕೊಳ್ಳಬೇಕು.
೭. ಪ್ಲಾಸ್ಟಿಕ್ ಲೇಪಿತವಿರುವ ಯಾವುದೆ ವಸ್ತುವನ್ನು ಸುಡಬಾರದು. ಇಂದಿನ ದಿನಗಳಲ್ಲಿ ನೀರಿನಾಂಶವಿರುವ ಅಥವಾ vaccum pack ಮಾಡಿ ತಿನ್ನುವ ಪದಾರ್ಥಗಳನ್ನು ಶೇಖರಿಸಲು ಪ್ಲಾಸ್ಟಿಕ್‌ನ ಥೆಳುವಾದ ಲೇಪನವನ್ನು ಕಾಗದದಲ್ಲಿ ತಯಾರಿಸಿದ ಡಬ್ಬಗಳ ಒಳಪದರದಲ್ಲಿ ಬಳಸಿರುತ್ತಾರೆ. ಕಾಗದದ ಡಬ್ಬವೆಂದು ಸುಟ್ಟಾಗ ಒಳಗಿರುವ ಪ್ಲಾಸ್ಟಿಕ್ ಪದರವೂ ಸಹ ಸುಟ್ಟು ಹಾನಿಕಾರಕ ಅನಿಲ ಬಿಡುಗಡೆಯಾಗುತ್ತವೆ.
೮. ಷೇವಿಂಗ್ ಸ್ಟಿಕ್/ರೇಝರ್‌ನ ಬದಲು ಬ್ಲೇಡ್ ಹಾಕಿ ಬಳಸುವ ಷೇವಿಂಗ್ ಸಾಧನವನ್ನು ಬಳಸಬೇಕು. ಬ್ಲೇಡ್ ಮೂಂಡಾದ ಮೇಲೆ ಕೇವಲ ಬ್ಲೇಡ್‌ವೊಂದನ್ನೆ ಬದಲಾಯಿಸಿದರೆ ನಮ್ಮ ಕಾರ್ಯವು ಸಾಧಿಸಿದ ಹಾಗೆ ಆಗುತ್ತದೆ ಮತ್ತೆ ಪರಿಸರ ಕಾಪಾಡುವುದರಲ್ಲಿ ನಮ್ಮ ದಿಟ್ಟ,ಪುಟ್ಟ ಹೆಜ್ಜೆ ಸಫಲವೂ ಆಗುತ್ತದೆ.

ಕೊಸರು:
ನೀವು ನೀರು ಕುಡಿಯುವ ಬಾಟಲ್ ಕೆಳಗೆ ನೋಡಿದಾಗ ಈ ರೀತಿಯಾಗಿ PVC ತ್ರಿಕೊಣದೊಳಗೆ ಯಾವುದಾದರು ಸಂಖ್ಯೆಯನ್ನು ಮುದ್ರಿಸಿದ್ದು ಗಮನಿಸಿದೀರಾ?
ನೋಡಿದ್ದರೆ ಅದು ಏನು ಸೂಚಿಸುತ್ತದೆ ಎಂಬ ಆಲೋಚನೆ ಬಂದಿತ್ತೆ?
ಅಥವಾ ಅದು ಕೇವಲ ಪುನರ್ಸಂಸ್ಕರಿಸಬಹುದೆಂದು ಯೋಚಿಸಿದಿರಾ?ಆ ರೀತಿಯ ಆಲೋಚನೆ ತಪ್ಪು!!!ಆ ಬಾಟಲಿಯ ಪ್ಲಾಸ್ಟಿಕ್‌ ಯಾವ ರಾಸಾಯನಿಕದಿಂದ ತಯಾರಿಸಲಾಗಿದೆ ಎಂದು ಸೂಚಿಸಲು ನಮೂದಿಸಿರುವ ಸಂಖ್ಯೆ ಇದಾಗಿರುತ್ತದೆ.
೧.Polyethylene terephalate (PET)
೨.High density polyethylene (HDPE)
೩.Unplasticised polyvinyl chloride (UPVC) ಅಥವಾ Plasticised polyvinyl chloride (PPVC)
೪.Low density polyethylene (LDPE)
೫.Polypropylene (PP)
೬.Polystyrene (PS) ಅಥವಾ Expandable polystyrene (EPS)
೭.ಇತರೆ, nylon ಹಾಗು acrylicನಿಂದಲೂ ಸಹ ಮಾಡಿರಲಾಗಿರುತ್ತದೆ.
ನಿಮಗೆ ಈ ಮಾಹಿತಿ ಎಲ್ಲೂ ಕಾಣಸಿಗುವುದಿಲ್ಲ ಯಾಕೆಂದರೆ ಬಹುತೇಕ ಪ್ಲಾಸ್ಟಿಕ್ ಹಾಗು ಬಳಸಲಾಗುವ ರಾಸಾಯನಿಕಗಳು ವಿಷಪೂರಿತವಾದವು ಹಾಗು ಆರೋಗ್ಯಕ್ಕೆ ಹಾನಿಕಾರಕ.ಇವು ಆಯಾ ಪ್ಲಾಸ್ಟಿಕ್ ವಸ್ತುಗಳಿಂದ ಅಹಾರ/ಕುಡಿಯುವ ನೀರು/ಪಾನೆಯಗಳಲ್ಲಿ ಸಲೀಸಾಗಿ ಬೆರೆತು ಆರೋಗ್ಯವನ್ನು ಹಾಳು ಮಾಡುತ್ತದೆ.
ಪ್ಲಾಸ್ಟಿಕ್ ಡಬ್ಬಗಳಲ್ಲಿ ಶೇಖರಿಸಿದ ಊಟಮಾಡಿದ ನಂತರ ನಿಮಗೆ ಖಂಡಿತವಾಗಿಯೂ ಊಟದ ರುಚಿ ಜೊತೆ ಪ್ಲಾಸ್ಟಿಕ್‌ನ "ರುಚಿ"ಯ ಅನುಭವ ಸಹ ಆಗುತ್ತದೆ. ಇದು ಯಾಕೆಂದರೆ ನೀವು ನಿಜವಾಗಲೂ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ.ಭೂಮಿಯ ಮೇಲೆ ಅಗಾಧವಾದ ಕೆಟ್ಟ ಪರಿಣಾಮ ಬೀರುವ ಪ್ಲಾಸ್ಟಿಕ್ ನಮ್ಮ ದೇಹಾರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದೆಂದು ಊಹಿಸಿ.
ಈ ಪಟ್ಟಿಯಲ್ಲಿ ಅತ್ಯಂತ ಕೆಟ್ಟವಾದುದು ೩,೬ ಹಾಗು ೭ ಸಂಖ್ಯೆಯ ರಾಸಾಯನಿಕದಿಂದ ಮಾಡಿರುವ ಪ್ಲಾಸ್ಟಿಕ್.
ನಾವು ಕುಡಿಯುವ ಅಥವಾ ತಿನ್ನುವ ಪದಾರ್ಥಗಳನ್ನು ಶೇಖರಿಸಲು PETಬಾಟಲ್‌ನ ಸಂಖ್ಯೆ ಸೂಚಿಸುವ ೧ ಎಂಬ ಸಂಖ್ಯೆಯಿಂದ ಗುರುತು ಮಾಡಿರುವ ಪ್ಲಾಸ್ಟಿಕ್ ವಸ್ಟುಗಳನ್ನೆ ಬಳಸಿದರೆ ಒಂದು ಹಂತಕ್ಕೆ ನಾವು ಸುರಕ್ಷಿತವಾಗಿರಬಹುದು. ಆದ್ದರಿಂದ ಪ್ಲಾಸ್ಟಿಕ್ ಬಳಸುವಾಗ ಎಚ್ಚರವಾಗಿರಬೇಕು.

ಧನ್ಯವಾದ
ಪ್ರಸಾದ್

ಪರಿಸರ ಪ್ರೇಮಿಗಳಿಗೆ ಕಿವಿಮಾತು

on May 8, 2009

೧.ನಿಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿಯಿದೆಯೆ?
೨.ನೀವು ಗ್ಲೋಬಲ್ ವಾರ್ಮಿಂಗ್ ಎನ್ನುವುದರ ಬಗ್ಗೆ ಚಿಂತಿತರಾಗಿದ್ದೀರಾ?
೩.ಗ್ಲೋಬಲ್ ವಾರ್ಮಿಂಗ್‌ನ ವಿಚಾರದಲ್ಲಿ ‌ನೀವು ನಿಸ್ಸಹಾಯಕರು ಎಂದೆನೆಸುತ್ತಿದೆಯೆ?
೪.ಸ್ವಚ್ಛವಾದ ಸಮಾಜಕ್ಕಾಗಿ, ನಿಮಗೆ ಕೆಲವು ಮಾಹಿತಿ ಬೇಕೆ?
೫.ತ್ಯಾಜ್ಯ ವಸ್ತು ನಿರ್ವಹಣೆ ಬಗ್ಗೆ ನೀವು ಇತರರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬೇಕೆ?
ಹಾಗಿದ್ದರೆ ಮುಂದೆ ಓದಿ...

ಗ್ಲೋಬಲ್ ವಾರ್ಮಿಂಗ್ ಅನ್ನೋದು ಎಲ್ರುಗೂ ತಿಳ್ದಿರೊ ವಿಚಾರ ಅಂತ ಗೊತ್ತು(ಕನಿಷ್ಠ ಈ ಲೇಖನವನ್ನ ಓದೋರಿಗಾದ್ರು ತಿಳ್ದಿರುತ್ತೆ ಅಂದ್ಕೊಂಡಿದೀನಿ) ಅದಕ್ಕೆ ಅದರ ಬಗ್ಗೆ ಕೊರೆತ ಶುರು ಹಚ್ಕೊಂಡಿಲ್ಲ :) ಖುಷಿ ಪಡಿ. ನಿಮಗೆ ಟಾರ್ಚರ್ ಕೊಡೊಕ್ಕೆ ಬಂದಿರೋದು ಬಡಪಾಯಿ ಆಗಿ ಜೀವ್ಸಿತಿರೊ ನಮ್ಮಂತವರು ಸಾಧ್ಯವಾದಷ್ಟು ಏನು ಮಾಡಬಹುದು ಅಂತ ಹಂಚಿಕೊಳ್ಳೊಕ್ಕೆ ಆಷ್ಟೆ.ನಿಮ್ಗು ತಿಳಿದಿರೋ ಆಲೋಚನೆಗಳನ್ನ ಹಂಚಿಕೊಂಡರೆ ಇನ್ನಷ್ಟು ಸಹಾಯ ಆಗೋದ್ರಲ್ಲಿ ಸಂಶಯವಿಲ್ಲ.
ಹೆಚ್ಚಿನಾಂಶದಲ್ಲಿ ಭೂಮಿನ ಹಾಳು ಮಾಡೊದೆಲ್ಲ ಕಾರ್ಖಾನೆಗಳೆ ಆಗಿದ್ರು ಸಹ ಕೊನೆಗೆ ಏನಾದ್ರು ನೈಜ್ಯವಾದ ಬದಲಾವಣೆ ಮಾಡ್ಬೇಕು/ತರಬೇಕು ಅಂದ್ರೆ ಒತ್ತಡ ಬರೊದು ಬಡಪಾಯಿ ಸಾಮಾನ್ಯ ಮನುಷ್ಯರು ಮೇಲೇನೆ. ಏನ್ಮಾಡೊದು?? ನಾಗರೀಕತೆ ಅನ್ನೋದು ಹೆಚ್ಚದಂತೆಲ್ಲಾ ಸೌಕರ್ಯಗಳು (ಬೇಡದೆ ಇರೋವು ಜಾಸ್ತಿ)ಸಹ ಜಾಸ್ತಿ ಆಗ್ತ ಹೋಗುತ್ತೆ, ಕೆಲವೊಮ್ಮೆ ಈ ಸೌಕರ್ಯಗಳು ಅನಿವಾರ್ಯವು ಕೂಡ!!! ಅದೆ ವಿಪರ್ಯಾಸ, ಗೊತ್ತಿದ್ದು ಗೊತ್ತಿದ್ದು ಅಸಹಾಯಕರಾಗಿ ಏನೂ ಮಾಡೊಕ್ಕೆ ಆಗದೆ ಪರಿಸರ ಮಾಲಿನ್ಯದಲ್ಲಿ ನಮ್ಮ contributionಸಹ ಆಗಿ ಹೊಗುತ್ತೆ.ಮಜಾ ಸುದ್ದಿ ಅಂದ್ರೆ ಜಗತ್ತಿನಲ್ಲಿ "ಕಾರ್ಬನ್ ಟ್ರೇಡಿಂಗ್" ಅಂತ ಒಂದು ಸೌಕರ್ಯ ಇದೆ.

ಮೂಲವಾಗಿ ನಮ್ಮ ಪರಿಸರ ಹಾಳಾಗ್ತಿರೋದಕ್ಕೆ ಹಲವಾರು ಕಾರಣಗಳಿದ್ರು ಸಹ ಕಾರ್ಬನ್ ಬಿಡುಗಡೆಯಾಗುವುದು ಇವೆಲ್ಲಾ ಕಾರಣಗಳಲ್ಲಿ ಅತ್ಯಂತ ಪ್ರಮುಖವಾದುದು.ಹಾಗಾಗಿ ಜಗತ್ತಿನ worstಜನರೆಲ್ಲ ಒಂದು ಕಡೆ ಗುಂಪುಗೂಡಿ ಕಾರ್ಬನ್ ತಡೆಗಟ್ಟುವುದಕ್ಕೆ ಒಂಡು ಮನೆ ಹಾಳು ಯೋಜನೆ ಹಾಕಿಕೊಂಡ್ರು,ಈ ಯೋಜನೆಗೆ "ಕಾರ್ಬನ್ ಟ್ರೇಡಿಂಗ್"ಅಂತ ಕೂಡ ನಾಮಕರಣ ಮಾಡಿದ್ರು ಚಪ್ಪಾಳೆನೂ ಸಹ ಹೊಡೆದ್ರು ಊಟ ಹಾಗು ಪಾನೀಯದ ಜೊತೆ.ಇದು ಯಾಕೆ ಮನೆ ಹಾಳು ಯೋಜನೆ ಅಂತ ನಾನು ಕರೀತೀನಿ ಗೊತ್ತಾ? ಈ ಯೋಜನೆ ಪ್ರಕಾರ ಗುಂಪಿನ ಸದಸ್ಯರಿಗೆ(ಆಯಾ ದೇಶದ ಪ್ರತಿನಿಧಿ) ಪ್ರತಿ ವರ್ಷ ಲೆಖ್ಖ ಕೊಡಬೇಕು,ನಾವು ಮಾಡೊ ಕೆಲಸದಿಂದ ಇಂತಿಷ್ಟು ಕಾರ್ಬನ್ ಬಿಡುಗಡೆಯಾಯ್ತು ಅಂತ.ಬರಿ ಲೆಖ್ಖ ಕೊಟ್ರೆ ಕೆಲಸ ಮುಗಿದುಹೋಗೊಲ್ಲ ದುಡ್ಡು ಕೂಡ ಕೊಡಬೇಕು.ಎಲ್ರು ಸಹ ಕಾರ್ಬನ್ ಬಿಡುಗಡೆ ಮಾಡೊದ್ರಿಂದ ಎಲ್ಲ ದೇಶದವರು ಸಹ ದಂಡ ಕಟ್ಟುತಾರೆ. ಈ ರೀತಿ ಸಂದಾಯ ಆಗೊ ಹಣವನ್ನ ಹಸಿರು ಚಳುಚಳಿಗೆ ಬಳಸಿಕೊತಾರೆ, ಗಿಡ ನೇಡೊ ಕಾರ್ಯಕ್ರಮ ಆಗ್ಲಿ ಅಥ್ವಾ ಬೇರೇನೆ ಆಗಿರ್ಲಿ ಒಟ್ನಲ್ಲಿ ಹಸಿರಿನಲ್ಲಿ ದುಡ್ಡನ್ನ ಹೂಡುತ್ತಾರೆ. ಇಲ್ಲಿ ಯೋಚಿಸ್ಬೇಕಾಗಿರೋದು ಏನಂದ್ರೆ ಇಗರ್ಜಿಗಳಲ್ಲಿ confession box ಅಂತ ಇರೊಲ್ವೆ ಇದು ಸಹ ಒಂಥರಾ ಅದೆ schemeu,ಮತ್ತೆ ಶಾಸ್ತ್ರಿಗಳ ಜೊತೆ ಚರ್ಚೆ ಮಾಡಿ ಈ ರೀತಿ ತಪ್ಪು ನಡೆದು ಹೋಗಿದೆ ಪರಿಹಾರ ಅಂತ ಏನಾದ್ರು ಪೂಜೆ ಗೀಜೆ ಅಂತ ಮಾಡ್ಸಿ ಮತ್ತೆ ಅದೆ ತಪ್ಪು ಪುನರಾವರ್ತನೆ ಮಾಡೊಕ್ಕೆ ಸಿದ್ಧ ಆಗೊಲ್ವೆ. ಅದೆ ರೀತಿ "ಕಾರ್ಬನ್ ಟ್ರೇಡಿಂಗ್"ಸಹ ತಪ್ಪು ತಿದ್ದಿಕೊಳ್ಳೊ ವಿಚಾರ ಇಲ್ಲ ಮಾಡಿದಕ್ಕೆ ಶಾಸ್ತಿ ಅಷ್ಟೆ, ಮತ್ತೆ ಮಾಡಿದ ತಪ್ಪನ್ನ ಮಾಡೊಕ್ಕೆ ಎಲ್ಲಾ ಸ್ವಾತಂತ್ರ್ಯ ಇದೆ !!!

ಸದಸ್ಯರು ಪ್ರತಿ ವರ್ಷ ದುಡ್ಡು ಕೊಡ್ತಾರೆ ಅವು ಮತ್ತೆ ಹಸಿರಿನಲ್ಲಿ ಹೂಡಿಕೆ ಆಗುತ್ತೆ ಎಲ್ಲ ನಿಜ ಆದ್ರೆ ನಾವು ಹಾಳು ಮಾಡೊದು exponential ವೇಗದಲ್ಲಿ ಇರ್ಬೇಕಾದ್ರೆ ಇವರು ಮಾಡೊ ತ್ಯಾಪೆ ಕಾರ್ಯಕ್ರಮಕ್ಕೆ ಹೊಂದಾಣಿಕೆ ಆಗುತ್ತಾ?? ಹಾಳು ಮಾಡೊದು ಜಾಸ್ತಿ ಆಗಿದ್ದಾಗ ಅದನ್ನ ಸರಿ ಮಾಡೊ ಪ್ರಯತ್ನಗಳು ಏಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ? ಹಾಳು ಮಾಡೊಕ್ಕೆ ನಿಮಿಷ ರಿಪೇರಿ ಮಾಡೊಕ್ಕೆ ವರುಷ!!! ಏನೂ ಮಾಡದೆ ಇರೊದಕ್ಕಿಂತ ಏನೊ ಮಾಡ್ತಿದೀವಿ ಅಂತ ತಮಗೆ ತಾವೆ ಸಮಾಧಾನ ಹೇಳ್ಕೊಳ್ಳೊಕ್ಕೆ ಅಂತ ಇದೆ ಈ ಯೋಜನೆ...
ಹೊಸ ಸುದ್ದಿ ಏನೂ ಅಂದ್ರೆ ವಿಪ್ರೊ/ಫಿಲಿಪ್ಸ್ ಕಾರ್ಖಾನೆಯವರು ೫೫/- ರೂ ಬೆಲೆ ಬಾಳೊ CFLಬಲ್ಬ್‌ಗಳನ್ನ ೧೫/- ರೂ ಮಾರಾಟ ಮಾಡೊ ಯೋಜನೆ ಇದೆ. ಅಲ್ಲಾ ಈಗಿನ ಕಾಲದಲ್ಲಿ ವ್ಯಾಪರಕ್ಕೆ ಅಂತಾನೆ ನಿಂತಿರೊ ಜನ ೪೦/- ರೂ ಕಳ್ಕೊಂಡು ವ್ಯಾಪಾರ ಮಾಡ್ತಾರೆ ಅಂದ್ರೆ ನಂಬೊ ಅಂಥಾ ವಿಚಾರನಾ ನೀವೆ ಹೇಳಿ... ಆದ್ರೆ ಈ ಕಥೆಯಲ್ಲಿ ತಿರುವು ಬರೊದೆ ಸರ್ಕಾರ ಇವರಿಗೆ ಕೊಡೊ ದುಡ್ಡಿಂದ. ಇದು ಯಾವ್ ಹೊಸ schemeu ಅಂತ ಅಚ್ಚರಿ ಪಡ್ಬೇಡಿ. ನಡೆಯೋದಿಷ್ಟೆ, ಇವರು ೪೦/-ರೂ ನಷ್ಟ ಮಾಡಿಕೊಂಡು ಮಾರುತ್ತಾರೆ, ಸರ್ಕಾರ ಏನ್ಮಾಡುತ್ತೆ ಅಂದ್ರೆ ಲೆಖ್ಖ ಒಪ್ಪಿಸುತ್ತೆ, ಈ ವರ್ಷ ನಾವು ಇಷ್ಟು CFLಬಲ್ಬ್‌ಗಳನ್ನ ತಯಾರಿಸಿ ಉಪಯೋಗಿಸಿದ್ವಿ ಹಾಗಾಗಿ ಕಾರ್ಬನ್ ಬಿಡುಗಡೆ ಕಮ್ಮಿ ಆಗಿದೆ ಅಂತ, ಇದಕ್ಕೆ ಮೆಚ್ಚಿ ನಮ್ ಸರ್ಕಾರಕ್ಕೆ ಸಂಸ್ಥೆ ದುಡ್ಡು ಕೊಡ್ತಾರೆ. ಈಗ ಸರ್ಕಾರ ಇದೆ ದುಡ್ಡನ್ನ ವಿಪ್ರೊ ಹಾಗು ಫಿಲಿಪ್ಸ್ ಅವರಿಗೆ ಕೊಡುತ್ತೆ ಹಿಂಗೆ ಎಲ್ಲಾರುನು ಖುಷಿಯಿಂದ ಇರೋ ಯೋಜನೆ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತೆ ಅಂತ ನೋಡಬೇಕಷ್ಟೆ... ಅವರು ಮಾಡ್ಕೊಳ್ಳೋದು ಮಾಡಿಕೊಳ್ಳಲಿ ನಾವು ಏನು ಮಾಡಬಹುದು ಅಂತ ವಿಚಾರ ಮಾಡೋಣ ಬನ್ನಿ.

ಮೊದಲನೆಯದಾಗಿ ತ್ಯಾಜ್ಯ ಅನ್ನೋದನ್ನೆ ಹೇಗೆ ಕಮ್ಮಿ ಮಾಡಬಹುದು ಅನ್ನೋದು ಮುಖ್ಯ ವಿಚಾರ.
೧.ಧೀರ್ಘಬಾಳಿಕೆ ವಸ್ತುಗಳನ್ನ ಕೊಳ್ಳುವುದು--ಕಮ್ಮಿ ಬಾಳಿಕೆಯ ಅಗ್ಗದ ವಸ್ತುವನ್ನು ಕೊಂಡರೆ ಆಗಾಗ ತಿಪ್ಪೆಗೆ ಎಸೆಯೋದು ಜಾಸ್ತಿಯಾಗಿ ತ್ಯಾಜ್ಯವಸ್ತುವಿನ ರಾಶಿ ಹೆಚ್ಚಾಗುತ್ತೆ "ಹನಿ ಹನಿ ಗೂಡಿದ್ರೆ ಹಳ್ಳ"
೨.ಕೆಲಸ ಮಾಡದ ವಸ್ತುಗಳನ್ನು ಸಾಧ್ಯವಾದಷ್ಟು ರಿಪೇರಿ ಮಾಡಿಸಿ ಉಪಯೋಗಿಸುವುದು--ಪೂರ್ಣವಾಗಿ ಬದಲಾಯಿಸುವ ಮುನ್ನ ಒಮ್ಮೆ ಪರಿಶೀಲಿಸಿ,ಯೋಚಿಸಿ ವಸ್ತುವನ್ನು ಬದಲಾಯಿಸಬೇಕೆ ಅಥವಾ ರಿಪೇರಿ ಮಾಡಿದರೆ ಸಾಕೆ ಅಂತ.
೩.ಆದಷ್ಟು ಪುನರ್ಬಳಕೆಯಾಗುವಂತಹ ವಸ್ತುಗಳನ್ನು ಕೊಳ್ಳುವುದು ಹಾಗು ಇತರರಿಗೂ ಪ್ರೋತ್ಸಾಹಿಸುವುದು.--ವಸ್ತುಗಳನ್ನು ಕೊಳ್ಳಲು ಹೊರಡಬೇಕಾದರೆ ಮನೆಯಿಂದಲೆ ಬಟ್ಟೆಯ ಚೀಲವನ್ನು ಒಯ್ಯಬಹುದು ಇಲ್ಲವಾದಲ್ಲಿ ಅಂಗಡಿಯ ಕೈಗೆ ತುರುಕುವ ಪ್ಲಾಸ್ಟಿಕ್ ಚೀಲವನ್ನು ಉಪಯೋಗಿಸಬೇಕಾಗಿ ಬರುವುದು.ರೆಚಾರ್ಜೆಬಲ್ ಬ್ಯಾಟರಿಯನ್ನು ಉಪಯೊಗಿಸಬಹುದು (ಮೂಮೂಲಿ ಎವೆರೆಡಿ ಬ್ಯಾಟರಿ ಜೋಡಿ ೩೦/- ರೂ ಇರಬಹುದು ಆದರೆ ಪ್ಯಾನಸೋನಿಕ್ ರೆಚಾರ್ಜೆಬಲ್ ಬ್ಯಾಟರಿ ಜೋಡಿ ೧೦೦/- ರೂ,ಆದರೆ ಒಮ್ಮೆ ಯೋಚಿಸಿ ಕ್ಯಾಮೆರಾಗಳಿಗೆ ಉಪಯೋಗಿಸುವಾಗ ಎಷ್ಟು ಬ್ಯಾಟರಿ ಬದಲಿಸ್ತೀವಿ ಅಂತ ಧೀರ್ಘಕಾಲದಲ್ಲಿ ಎವೆರೆಡಿಗಿಂತ ಪ್ಯಾನಸೋನಿಕ್ ರೆಚಾರ್ಜೆಬಲ್ ಬ್ಯಾಟರಿಯೆ ಉತ್ತಮ,ಜೇಬಿಗು ಹಾಗು ಪರಿಸರದ ಮೇಲೂ),ಅಗತ್ಯಕ್ಕಿಂತ ಹೆಚ್ಚಿನ ದಿನಪತ್ರಿಕೆಯಾಗಲಿ,ವೃತ್ತಪತ್ರಿಕೆಯಾಗಲಿ ತರಿಸುವುದನ್ನು ನಿಲ್ಲಿಸಬಹುದು(ಒಂದು ದಿನಪತ್ರಿಕೆ ಹೊರಬರುವುದಕ್ಕೆ ಅದೆಷ್ಟು ಮರಗಳು ಬಲಿಯಾಗುತ್ತವೆಯೋ!! ಜಾಹಿರಾತುಗಳಿಂದ ದುಡ್ಡು ಹುಟ್ಟದಿದ್ದರೆ ಒಂದು ದಿನಪತ್ರಿಕೆಯ ಬೆಲೆ ೫೦-೬೦/- ರೂ ಆಗುತ್ತೇನೊ!! ಇನ್ನು ಹೆಚ್ಚಿನ ಗುಣ ಮಟ್ಟದ ಪತ್ರಿಕೆಗಳನ್ನ ಜನ ನೋಡೊ ಹಾಗೆ ಆಗುತ್ತೆ ಹೊರತು ಕೊಳ್ಳೊ ಹಾಗೆ ಇರೊಲ್ಲ).
೪.ಸಣ್ಣ ಪ್ರಮಾಣದಲ್ಲಿ ಕೊಳ್ಳುವುದನ್ನು ಕಡಿಮೆ ಮಾಡುವುದು-- ಚಿಕ್ಕ ಚಿಕ್ಕ ಪೊಟ್ಟಣಗಳನ್ನು ಖರೀದಿಸಿದರೆ packaging ಹೆಚ್ಚಾಗಿ ಅನಗತ್ಯ ತ್ಯಾಜ್ಯ ಉಂಟಾಗುತ್ತದೆ
೫.ನಿಮಗೆ ಅನಗತ್ಯ ಎನಿಸುವ ವಸ್ತುಗಳನ್ನು ನಿಮ್ಮ ಪರಿಚಯಸ್ತರಲ್ಲಿ ಹಂಚಿಕೊಳ್ಳುವುದು ಅಥವಾ ಸಂಘ ಸಂಸ್ಥೆಗಳಿಗೆ ದಾನ ಮಾಡುವುದು.-- ಮಾರಿಬಿಡಿ ತೊಂದರೆ ಇಲ್ಲಾ, ನಿಮಗೆ ಯಾರು ಗೊತ್ತಿಲ್ಲದಿದ್ದರೆ ಯಹೂ ಗುಂಪುಗಳಲ್ಲಿ ಮಾಹಿತಿ ನೀಡಿ. ಒಟ್ಟಿನಲ್ಲಿ ವಸ್ತುಗಳು ಆದಷ್ಟು ಪುನರ್ಬಳಕೆಯಾಗಬೇಕು ಅನಗತ್ಯವಾಗಿ ತ್ಯಾಜ್ಯ ವಸ್ತುವಾಗಬಾರದು.
೬.ಟಾಕ್ಸಿಕ್ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಿ. -- ಪ್ಲಾಸ್ಟಿಕ್,paint,ಕೆಮಿಕಲ್ಸ್ ಅಗತ್ಯ ಪ್ರಮಾಣದಲ್ಲಷ್ಟೆ ಬಳಸಿ,ಕಂಪ್ಯೂಟರ್ ಮಾನಿಟರ್ ಸಹ ಇಂತಿಷ್ಟು ಅಂತ ಕೆಮಿಕಲ್ ಅನ್ನು ಬಿಡಿಗಡೆ ಮಾಡುತ್ತೆ ಹಾಗಾಗಿ ಯಂತ್ರವನ್ನು switch-off ಮಾಡದೆ ಇದ್ರು ಸಹ ಕನಿಷ್ಠ ಮಾನಿಟರನ್ನಾದರು off ಮಾಡಿ.ಚರ್ಮದ ವಸ್ತುಗಳು(ಚರ್ಮ್ ಟಾಕ್ಸಿಕ್ ಅಲ್ಲ :) ಆದ್ರೆ ಅದನ್ನ ಸಿದ್ಧವಸ್ತು ಅನ್ನೊ ಲೆವೆಲ್‌ಗೆ ತರೊ ಅಷ್ಟು ಹೊತ್ತಿಗೆ ಡೈ ನಲ್ಲಿ ಮುಳುಗೆದ್ದಿರುತ್ತೆ, ಈ ಡೈ ಅನ್ನೊದು ಹಾನಿಕರ),ಆರ್ಟಿಫಿಷಿಯಲ್ ಡೈ ಬಳಸಿರುವ ವಸ್ತುಗಳ ಬಳಕೆಯನ್ನು ನಿಯಂತ್ರಿಸಿ.ಬಟ್ಟೇ ಒಗೆಯೋಕ್ಕೆ ಬಳಸುವ ಡಿಟರ್ಜೆಂಟ್‌ ಸಹ ಹಾನಿಕಾರಕ ಕೆಮಿಕಲ್‌ಗಳ ಮೊಲ ಆ ಲೆಖ್ಖಕ್ಕೆ ಬಟ್ಟೆ ಒಗೆದ ನಂತರ ನೀರು ಚೆಲ್ಲುತ್ತೀವಲ್ಲಾ ಅದು ಸಹ ವಿಷ!!! ಏನ್ ಮಾಡ್ತೀರಾ ಬಟ್ಟೆ ಒಗೆಯೋದು ಬಿಡೊಕ್ಕೆ ಆಗುತ್ಯೆ?? ನಿರ್ಮಾ ನಿರ್ಮಾ, ಇದು ಎಲ್ಲ ನಮ್ ಕರ್ಮ :( .

ಪ್ಲಾಸ್ಟಿಕ್ ಅಂತು ಎಷ್ಟು ಉಪಯೋಗವೋ ಅದಕ್ಕಿಂತಲೂ ಹಾನಿಕರ, ಕೆಲವು ಸನ್ನಿವೇಶದಲ್ಲಿ ಆಪತ್ಭಾಂಧವ ಥರ ಕೆಲಸ ಮಾಡಿದ್ರೆ ಕೆಲವೆಡೆ ಇದೆ ಆಪತ್ತಿಗೆ ಮೊಲ ಸಹ. ಪೇಪರ್‌ಅನ್ನು ಪುನರ್ಬಳಕೆ ಮಾಡುವುದರಿಂದ(ಹಳೆ ದಿನಪತ್ರಿಕೆ ಕೊಳ್ಳುವ ಅಂಗಡಿಗಳು ಕಾರ್ಖಾನೆಗೆ ಮಾರಿ ಅವು ಪುನರ್ಬಳಕೆ ಮಾಡುವುದಕ್ಕೆ ಸಹಯೋಗಿಸುತ್ತಾರೆ) ಪುನರಬಳಕೆಯಾದ ಪೇಪರ್‌ನಿಂದ ಹೊಸ ಪೇಪರ್ ತಯಾರಿಸಲು ೫೫% ಕಮ್ಮಿ ಶಕ್ತಿ ಬೇಕಾಗುತ್ತದೆ!!! ೯೫%ರಷ್ಟು ವಾಯು ಮಾಲಿನ್ಯ ತಡೆಗಟ್ಟುತ್ತದೆ. ಇಷ್ಟೆಲ್ಲ ಆಗೊಕ್ಕೆ ಸಹಯೋಗಿಸೋದು ನಮ್ ಕೈಯಲ್ಲೆ ಇದೆ ಹಾಗಾಗಿ ಮುಂದಿನ ಸಲ ಕೆಮ್ಮಿದ್ರು,ಕೆರ್ಕೊಂಡ್ರು ಪೇಪರ್ ನ್ಯಾಪ್ಕಿನ್ ಬಳಸುವುದನ್ನ ಬಿಟ್ರೆ ಒಳ್ಳೆದು ಬಟ್ಟೆಯ ಕೈವಸ್ತ್ರ ಉಪಯೋಗಿಸುವುದು ಉತ್ತಮ,ಅನಗತ್ಯ ದಾಖಲೆಗಳ ಅಚ್ಚುಗಳನ್ನು(ಪ್ರಿಂಟ್ -ಔಟ್)ತೆಗೆಯುವುದನ್ನು ತಡೆಗಟ್ಟಿ.

ಇದೆಲ್ಲ ಮಾಡ್ಬೇಕು ಅಂತ ಇಚ್ಛೆಯಾದ್ರೆ ಮೊದಲು ಮಾಡ್ಬೇಕಾಗಿರೊ ಕೆಲಸ ನಿಮ್ಮ ಮನೆಯ ಕಸದಬುಟ್ಟಿಗಳನ್ನು ಯಾವ ಯಾವ ಪದಾರ್ಥಗಳ್ಳು ಆಕ್ರಮಿಸಿಕೊಳ್ಳುತ್ತವೆ ಎಂಬುದನ್ನು ಪಟ್ಟಿ ಮಾಡಬೇಕು.ಪಟ್ಟಿ ಮಾಡಿದ ನಂತರ ಯಾವ ವಸ್ತು ಪುನರ್ಬಳಕೆಯಾಗಬಹುದಿತ್ತು,ಯಾವುದನ್ನು ಇನ್ನೂ ಹೆಚ್ಚಿನ ದಿವಸ ಬಳಸಬಹುದಿತ್ತು,ಯಾವ ವಸ್ತುಗಳನ್ನು ಇತರರಿಗೆ ಕೊಟ್ಟಿದ್ದರೆ ಉಪಯೋಗ ಆಗ್ತಿತ್ತು,ಯಾವ ವಸ್ತು ಕೊಳ್ಳುವುದು ಅನಗತ್ಯವಾಗಿತ್ತು ಅನ್ನೋ ಯೋಚನೆಗಳು ತಾನಾಗಿಯೆ ಬರುತ್ತೆ. ಈ ರೀತಿ ಪಟ್ಟಿ ಮಾಡಿ ಆದಮೇಲೆ ಅದು ಪುನರಾವರ್ತನೆಯಾಗದ ಹಾಗೆ ಎಚ್ಚರವಹಿಸಿದರೆ ಮುಗಿಯಿತು ನಮ್ಮ ಪಾಲಿನ ಕೈಲಾದ ಸಹಾಯಮಾಡಿದ ತೃಪ್ತಿ ಸಿಗುತ್ತದೆ.

ನಿಮ್ಮ ಆಲೋಚನೆಗಳನ್ನು ಹಂಚಿಕೊಂಡರೆ ಸಂತೋಷ

--- ಪ್ರಸಾದ್

ಥಂಡರ್‌ಬರ್ಡ್ ಎಂಬ ವಂಡರ್‌ಬರ್ಡ್

on May 6, 2009

ಈ ಹಕ್ಕಿಗೆ ಪ್ರಾಣ ಇಲ್ಲ!!! ಈ ಹಕ್ಕಿ ನಿಮ್ಮ ಕರೆಗೆ ಸ್ಪಂದಿಸುವುದಿಲ್ಲಾ!!! ಎಲ್ಲಾ ಹಕ್ಕಿಗಳು ಹಾರಾಡಿ ಕಲರವ ಮಾಡಿದರೆ ಇದು ಅಲ್ಲಾಡದೆ ಇದ್ದಲ್ಲೆ ಇದ್ದು ತಣ್ಣಗೆ ಠಳಾಯಿಸಿರುತ್ತೆ!!!ಆದ್ರು ಸಹ ನಿಮ್ಮ ಆದೇಶವನ್ನು ಮೀರದೆ ವಿಧೇಯನಾಗಿ ಮಿಂಚಿನ ವೇಗದಲ್ಲಿ ಅಂಚೆಗಳನ್ನು ರವಾನಿಸುತ್ತದೆ.ಇದು ಗುಡುಗುವ ಹಕ್ಕಿಯಂತೂ ಅಲ್ಲಾ ಆದರೆ ಹಿಂದಿನ ಕಾಲದಲ್ಲಿ ಅಂಚೆ ರವಾನಿಸಲು ಪಾರಿವಾಳ/ಹದ್ದನ್ನು ಬಳಸಲಾಗುತ್ತಿತ್ತಲ್ಲವೆ ಹಾಗೆಯೆ ಈಗಿನ ಕಾಲದಲ್ಲಿ ನಮ್ಮ ಎಲ್ಲ ಮಿಂಚೆಗಳನ್ನು ಆಫ್‌ಲೈನ್/ಆನ್‌ಲೈನ್ ವೀಕ್ಷಿಸಲು ಅನುಕೂಲ ಮಾಡಿಕೊಡುವ ಸಾಧನ, ಮಿಂಚಿನ ವೇಗದಲ್ಲಿ ಹರಿದಾಡುವ ಅಂಚೆಯೆ-ಮಿಂಚೆ.

ಥಂಡರ್‌ಬರ್ಡ್‌ಅನ್ನು ಉಪಯೋಗಿಸುವ ಪ್ರಯೋಜನವೇನೆಂದರೆ ಹಳೆಯ ಮಿಂಚೆಗಳನ್ನು ನಾವು ಲಾಗ್-ಇನ್ ಆಗದೆಯೆ ನಮಗಿಷ್ಟಬಂದಾಗ ವೀಕ್ಷಿಸಬಹುದು ಆನ್-ಲೈನ್ ಆಗುವ ಪ್ರಮೇಯವೆ ಬರುವುದಿಲ್ಲ.ಇದು ಕಾನ್ಫಿಗರ್ ಮಾಡುವುದು ಸುಲಭ,ಔಟ್‌ಲುಕ್‌ನಂತೆ ಕಷ್ಟವಲ್ಲ,ನಿಮಗೆ ಪುಕ್ಕಟೆಯಾಗಿ ದೊರೆಯುತ್ತದೆ,ಕದ್ದ ತಂತ್ರಾಂಶ ಬಳಸುವ ಅಗತ್ಯವಿಲ್ಲ ಯಾಕಂದ್ರೆ ಔಟ್‌ಲುಕ್‌ ಬಳಸಲು ಮೈಕ್ರೊಸಾಫ್ಟ್‌ನವರ "ಆಫಿಸ್" ತಂತ್ರಾಂಶ ಸ್ಥಾಪಿಸಬೇಕು.ಈ "ಆಫಿಸ್" ತಂತ್ರಾಂಶ ಕೊಳ್ಳಲು, ೨೦೦೭ ಆವೃತ್ತಿ ಕೊಳ್ಳುತ್ತೇನೆಂದರು ಸಹ ಕನಿಷ್ಟ ೩೫೦೦/- ಕಕ್ಕಬೇಕು ರಿಟೈಲ್ ಆವೃತ್ತಿಗಂತು ೨೭೦೦೦/-ಆಗುತ್ತದೆ!!! ಶ್ರೀಸಾಮಾನ್ಯನ ಜೇಬಿಗೆಟುಕುವ ಮೌಲ್ಯವೆ ಇವೆಲ್ಲಾ? ಆದ್ರು ಎನು ಮಾಡ್ತೀರಾ ನಮ್ಮ ದೈನಂದಿನ ಜೀವನ ಮಿಂಚೆಯನ್ನು ನೋಡದೆ ಕಳೆಯುವ ಹಾಗಿರುವುದಿಲ್ಲ ಹಾಗಾಗಿ ಇರುವ ಮೂರು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ

೧.ಕದ್ದ ತಂತ್ರಾಂಶ ಉಪಯೋಗಿಸುವುದು
೨.ದುಡ್ಡು ಕೊಟ್ಟು ನಿಮ್ಮ ಸ್ವಂತ ತಂತ್ರಾಂಶ ಕೊಳ್ಳುವುದು.. ಕೊನೆಯದಾಗಿ
೩.commercial ತಂತ್ರಾಂಶದಂತೆಯೆ ಎಲ್ಲಾ ಕಾರ್ಯವನ್ನು ಶಕ್ತವಾಗಿ ನಿಭಾಯಿಸಬಲ್ಲ ಪುಕ್ಕಟೆಯಾಗಿ ದೊರೆಯುವ ತಂತ್ರಾಂಶ ಉಪಯೋಗಿಸುವುದು.
ಥಂಡರ್‌ಬರ್ಡ್ ಸ್ಥಾಪನಾಕಡತವನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು
http://www.mozillamessaging.com/en-US/thunderbird/

ಮಿಂಚೆಯನ್ನು ಕಳುಹಿಸಿಸುವುದಕ್ಕೆ/ಸ್ವೀಕರಿಸುವುದಕ್ಕೆ ವಿಶೇಷ ಜ್ಞಾನದ ಅಗತ್ಯವಿಲ್ಲದೆ ಕೆಲವು ಸರಳವಾದ ಸೆಟ್ಟಿಂಗ್ ಮಾಡುವುದರ ಮೂಲಕ ಥಂಡರ್‌ಬರ್ಡ್‌ಅನ್ನು ಯಶಸ್ವಿಯಾಗಿ ಯಾವುದೆ ತೊಂದರೆಯಿಲ್ಲದೆ ಉಪಯೋಗಿಸಬಹುದು.ಮಿಂಚೆಯನ್ನು ಆಫ್‌ಲೈನ್/ಆನ್‌ಲೈನ್ ವೀಕ್ಷಿಸಲೂ ಬಹುದು!!! ಕಾನ್ಫಿಗರ್ ಮಾಡುವ ಮುನ್ನ ಈ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ, ಹೇಗೆಲ್ಲಾ ಇದನ್ನು ನಾವು ಉಪಯೋಗಿಸಿಕೊಳ್ಳಬಹುದು ಎಂಬುದನ್ನು ನೋಡೊಣ.
ಸರಳವಾಗಿ ಹೇಳಬೇಕೆಂದರೆ ಈ ತಂತ್ರಾಂಶವನ್ನು ನಮ್ಮ ಜಿಮೈಲ್/ಯಹೂ ಮಿಂಚೆ ಖಾತೆಗಳಿಗೆ ಲಾಗ್-ಇನ್ ಆಗದೆಯೆ (ನಾವು ಬಳಕೆದಾರನ ಹೆಸರು ಹಾಗು ಗುಪ್ತಪದವನ್ನು ಮೊದಲ ಬಾರಿ ನೀಡಿ ಉಳಿಸಿದ್ದಲ್ಲಿ ಸ್ವಯಂಚಾಲಿತವಾಗಿ ಅದೆ ಲಾಗ್-ಇನ್ ಆಗುತ್ತದೆ, ಪ್ರತಿ ಬಾರಿಯು!!)ನಮ್ಮ ಇನ್‌ಬಾಕ್ಸ್‌ನಲ್ಲಿರುವ ಎಲ್ಲಾ ಮಿಂಚೆಗಳನ್ನು ನಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡುತ್ತದೆ.ನಾವು ಜಿ-ಮೈಲ್/ಯಹೂ/ರಿಡಿಫ್/ಹಾಟ್‌ಮೈಲ್/.. ಇನ್ಯಾವುದೆ ಖಾತೆಯ ಮಿಂಚೆ ವೀಕ್ಷಿಸಬೇಕೆಂದರೆ ಲಾಗ್-ಇನ್ ಆಗಬೇಕು.ನಮಗೆ ಬಂದಿರುವ ಮಿಂಚೆಗಳು ಆಯಾ ವೆಬ್‌ಸೈಟ್‌ನ ಸರ್ವರ್‌ಗಳಲ್ಲಿ ಶೇಖರಿಸಲಾಗಿರುತ್ತದೆ ಹಾಗಾಗಿ ನಾವು ಮಿಂಚೆ ನೋಡುವ ಪ್ರತಿಬಾರಿಯು ವೆಬ್‌ಸೈಟ್‌ಗೆ ಲಾಗ್-ಇನ್ ಆಗಿ ಸರ್ವರ್‌ನಲ್ಲಿರುವುದನ್ನು ನೋಡಬೇಕಾಗುತ್ತದೆ.ಸರ್ವರ್‌ನಲ್ಲಿ ವೀಕ್ಷಿಸಲು ಮಾತ್ರ ಅವಕಾಶವಿರುತ್ತದೆ,ಕೈಗೆ ಬಂದಿದ್ದು ಬಾಯ್ಗೆ ಬರದೆ ಇರೊ ಪರಿಸ್ಥಿತಿ. ಪ್ರತಿ ಬಾರಿ ನೋಡಬೇಕೆಂದಾಗ ಪ್ರತಿ ಬಾರಿಯು ಲಾಗ್-ಇನ್ ಆಗುವ ಅನಿವಾರ್ಯತೆ ಇರುತ್ತದೆ,ಮೇಲಾಗಿ ಹಳೆಯ ಮೈಲ್‌ಗಳನ್ನು ನೋಡಲು ಸಹ ದತ್ತಾಂಶ ಸ್ಥಳಾಂತರಗೊಂಡು(Data Transfer)ಇಂಟರ್ನೆಟ್ ಬಳಕೆಯ ವೆಚ್ಚವು ಹೆಚ್ಚಾಗುತ್ತದೆ!! ಇದೆಲ್ಲದರಿಂದ ತಪ್ಪಿಸಿಕೊಂಡು ಜಾಣತನದಿಂದ ಜೇಬಿಗೂ ಭಾರವಾಗದಂತೆ ಮಿಂಚೆ ನಿರ್ವಹಣೆ ಮಾಡಬೇಕೆಂದರೆ ಥಂಡರ್‌ಬರ್ಡ್ ಉಪಯೋಗಿಸುವುದೆ ಪರಿಹಾರ,ಮೇಲಾಗಿ ಜನ ಚೇಂಜ್ ಕೇಳ್ತಾರೆ,ಆ ಕಾರಣದಿಂದಲು ಉಪಯೋಗಿಸಬಹುದು,ಒಮ್ಮೆ ಪ್ರಯತ್ನಿಸೊಕ್ಕೆ ಆಗಿರೊದೇನು?whose fathers what goes!!! :D.

ತಂತ್ರಾಂಶವನ್ನು ಸ್ಥಾಪಿಸಿದ ನಂತರ ಕೆಲವು ಸರಳವಾದ ಸೆಟ್ಟಿಂ‌ಗ್‌ಗಳು ಮಾಡಬೇಕಾಗಿ ಬರುವುದು,ಇದು ಯಾಕಪ್ಪಾ ಅಂತಂದ್ರೆ ನಾವು ಕಳುಹಿಸುವ ಮಿಂಚೆಗಳು ಉದ್ದೇಶಿತ ವ್ಯಕ್ತಿಯ ಮಿಂಚೆ ವಿಳಾಸಕ್ಕೆ ತಲುಪಬೇಕೆಂದರೆ ಆ ವಿಳಾಸ ಸರ್ವರ್‌ಗೆ ಮೊದಲು ತಲುಪಬೇಕು. ಹಾಗಾಗಿ ಸರ್ವರ್‌ಗೆ ಈ ವಿಳಾಸ ತಲುಪಿಸಲು ಮೊದಲು ಸರ್ವರ್‌ನ ವಿಳಾಸ ನಮೂದಿಸುವುದು ಅನಿವಾರ್ಯ, ಇದೆ ರೀತಿಯಾಗಿ ನಮಗೆ ಉದ್ದೇಶಿತ ಮಿಂಚೆಗಳನ್ನು ಸ್ವೀಕರಿಸಲು ಸರ್ವರ್‌ಗೆ ಬರುವ ಮಿಂಚೆಗಳು ತಲುಪಬೇಕೆಂದರೆ ಅದಕ್ಕು ಸಹ ವಿಳಾಸವನ್ನು ನಮೂದಿಸಬೇಕು,ಇಷ್ಟೆ ಮಾಡ್ಬೇಕಾಗಿರೊದು.ನಾವು ಮಾಡಿದ್ದೇನೆಂದರೆ, ಹೊರ ಹೋಗೊ ಮಿಂಚೆಗಳಿಗೆ ದಾರಿಯಾಗುವಂತೆ ವಿಳಾಸ ಸೂಚಿಸಿದೆವು ಹಾಗೆಯೆ ಒಳಗೆ ಬರುವ ಮಿಂಚೆಗಳನ್ನು ಸ್ವೀಕರಿಸಲು ವಿಳಾಸ ಸೂಚಿಸಿದೆವು,ಇಲ್ಲಿ ವಿಳಾಸ ಮುಖ್ಯ.ಇದು ತಪ್ಪಾಯಿತೆಂದರೆ ಹೊಗಬೇಕಾಗಿರುವ ಮಿಂಚೆ ಹೊಗೊಲ್ಲ ಬರಬೇಕಾಗಿರುವ ಮಿಂಚೆ ಬರೊಲ್ಲ.
ಹ್ಮ್ಮ್.. ವಿಳಾಸ ನಮೂದಿಸಬೇಕು ಅಂತ ಗೊತ್ತಾಯ್ತು ಆದ್ರೆ ಮಿಂಚೆ ಸ್ವೀಕರಿಸೊಕ್ಕೆ ಎರಡು ಬಗೆಯ ಸರ್ವರ್‌ಗಳಿವೆ ಅದ್ರಲ್ಲಿ ಒಂದು PoP ಮತ್ತೊಂದು IMAP, ಇವೆರಡು ಸಹ ಮಿಂಚೆಯನು ಸ್ವೀಕರಿಸಲು ಇರುವ ಸರ್ವರ್‌ನ ಬಗೆಗಳು ಆದ್ರೆ ಇವೆರಡರಲ್ಲಿ IMAP ಎಂಬ ಸರ್ವರ್‌ನ ಸೆಟ್ಟಿಂಗ್ ಮಾಡಿಕೊಳ್ಳುವುದು ಉತ್ತಮ.ಯಾಕಂತ ತಿಳ್ಕೊಳೊಕ್ಕೆ ಈ ಕೊಂಡಿಯಲ್ಲಿನ ಮಾಹಿತಿ ಓದಿ..
http://email.cityu.edu.hk/faq/popimap.htm

ನನಗೆ ತುಂಬಾ ಹಿಡಿಸಿದ ಅಂಶವೆಂದರೆ,ಯಾವುದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಯಾವ ಮಿಂಚೆ ನನಗೆ ಆಫ್-ಲೈನ್ ವೀಕ್ಷಣೆಗೆ ಅನಗತ್ಯವೆಂದು ನಿರ್ಧರಿಸುವ ನಿಯಂತ್ರಣಕೊಡುವ ಸೌಲಭ್ಯ.
PoP ಉಪಯೋಗಿಸಿದರೆ ನಿಮ್ಮ ಇನ್-ಬಾಕ್ಸ್‌ನ ಮಿಂಚೆಯನ್ನೆಲ್ಲವನ್ನು (ಒಂದನ್ನು ಬಿಡದೆ)ಡೌನ್‌ಲೋಡ್ ಮಾಡಲು ಶುರು ಮಾಡುತ್ತದೆ, ಮೊದಲೆ SPAM ಕಾಟ ಇರೋವಾಗ ಅನಗತ್ಯ ಮಿಂಚೆಗಳನ್ನೂ ಸಹ ಡೌನ್‌ಲೋಡ್ ಯಾಕೆ ಮಾಡಬೇಕು?
IMAPನಲ್ಲಿ ಮಿಂಚೆಯು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದಿಲ್ಲ,ಕೇವಲ ಇಂತಹ ಮಿಂಚೆ ಬಂದಿದೆ ಎನ್ನುವುದನ್ನಷ್ಟೆ ಸೂಚಿಸುತ್ತದೆ.ನೀವು ಆ ಮಿಂಚೆಯ ಸಂದೇಶವನ್ನು ಆಫ್-ಲೈನ್ ಓದಬೇಕೆಂದರೆ ಆಗ ಡೌನ್‌ಲೋಡ್ ಮಾಡಬೇಕಾಗುತ್ತದೆ,ಒಮ್ಮೆ ಡೌನ್‌ಲೋಡ್ ಮಾಡಿದ ನಂತರ ಅದು ಹಾಗೆಯೆ ನಿಮ್ಮ ಕಂಪ್ಯೂಟರ್‌ನಲ್ಲಿ ಶಾಶ್ವತವಾಗಿ ಉಳಿಯುತ್ತದೆ.ಇಲ್ಲವಾದ್ರೆ ನೀವು ಆ ಮಿಂಚೆಯನ್ನು ನಿರ್ಲ್ಯಕ್ಷಿಸಿ ಮತ್ತೊಂದು ಮಿಂಚೆಯತ್ತ ಕಣ್ಣು ಹಾಯಿಸಬಹುದು.ಆಫ್-ಲೈನ್ ಇದ್ದಾಗಲು ಸಹ ಡೌನ್‌ಲೋಡ್ ಮಾಡಿ ಆದಮೇಲೆ ಮರು ವೀಕ್ಷಿಸಬಹುದು. ಇಷ್ಟೆಲ್ಲ ಮಾಹಿತಿಯಿಟ್ಟುಕೊಂಡು ಥಂಡರ್‌ಬರ್ಡ್ಅನ್ನು ಜಿಮೈಲ್‌ನ ಇನ್-ಬಾಕ್ಸ್‌ನಿಂದ ಮಿಂಚೆಗಳನ್ನು ಕಂಪ್ಯೂಟರ್‌ನಲ್ಲಿ ಶೇಖರಿಸಲು ಏನು ಮಾಡಬೇಕೆಂದು ನೋಡೋಣ.

ಈ ರೀತಿ ಮಿಂಚೆ ಸಾಧನ ಬಳಸಿ ಮಿಂಚೆಗಳನ್ನು ಆಫ್‌ಲೈನ್ ವೀಕ್ಷಿಸಲು,ನಿಮಗೆ ಮಿಂಚೆ ಸೇವೆ ನೀಡುವವರಿಗೆ ದುಡ್ಡು ತೆತ್ತು ಅವರ ಚಂದಾದಾರರಾಗಬೇಕಾಗುತ್ತದೆ ಆದರೆ ಭಾರತದಲ್ಲಿ ಜಿಮೈಲ್ ಒಂದರಲ್ಲಿ ಮಾತ್ರ ಈ ಸೇವೆ ಉಚಿತ ಹಾಗಾಗಿ ಜಿಮೈಲ್ ಕಾನ್ಫಿಗರ್ ಮಾಡುವುದನ್ನು ನೋಡೋಣ.
ಮೊದಲಿಗೆ ಜಿಮೈಲ್‌ನ ಇನ್‌ಬಾಕ್ಸ್‌ಗೆ ಲಾಗ್-ಇನ್ ಆಗಿ ಅಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ,Forwarding and POP/IMAP ಆಯ್ಕೆ ಮಾಡಿ IMAPಎಂಬುದನ್ನು ಶಕ್ತಗೊಳಿಸಿ,ಬದಲಾವಣೆಗಳನ್ನು ಉಳಿಸಿ.ಲಾಗ್ ಔಟ್ ಆಗಿ..
ಇದಾದ ನಂತರ ಥಂಡರ್‌ಬರ್ಡ್ ಸ್ಥಾಪಿಸಲು ಶುರು ಮಾಡಿ.(ಆನ್-ಲೈನ್ ಆಗುವ ಅವಶ್ಯಕತೆಯಿಲ್ಲ)
ಕಾಣುವ ಎಲ್ಲಾ ಆಯ್ಕೆಗಳಿಗು "ಮುಂದಿನದು"ಎಂಬ ಗುಂಡಿ ಒತ್ತಿ.
೧."ಹೊಸ ಖಾತೆ ಸ್ಥಾಪನೆ"ಎಂಬ ವಿಂಡೊನಲ್ಲಿ "ಮಿಂಚೆ ಖಾತೆ"ಎಂಬುದನ್ನು ಆಯ್ಕೆ ಮಾಡಿ"ಮುಂದಿನದು"ಎಂಬ ಗುಂಡಿ ಒತ್ತಿ.
೨.ಸ್ವವಿವರ ನಮೂದಿಸಬೇಕಾದ "ಗುರುತು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ಹಾಗು ಮಿಂಚೆ ವಿಳಾಸ ನಮೂದಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೩."ಸರ್ವರ್‌ ಮಾಹಿತಿ"ಎಂಬ ವಿಂಡೊನಲ್ಲಿ ಮೊದಲು IMAP ಎನ್ನುವುದನ್ನು ಆಯ್ಕೆ ಮಾಡಿ ನಂತರ ಒಳಹರಿವನ್ನು ನಿಭಾಯಿಸುವ ಸರ್ವರ್‌ನ ಹೆಸರನ್ನು imap.gmail.com ಎಂದು ನಮೂದಿಸಿ.
೨.ಅದೆ ವಿಂಡೊವಿನಲ್ಲಿ ಹೊರಹರಿವನ್ನು ನಿಭಾಯಿಸುವ ಸರ್ವರ್‌ನ ಹೆಸರನ್ನು smtp.gmail.com ಎಂದು ನಮೂದಿಸಿ "ಮುಂದಿನದು"ಎಂಬ ಗುಂಡಿ ಒತ್ತಿ.
೪."ಬಳಕೆದಾರನ ಹೆಸರುಗಳು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ನಮೂದಿಸಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೫.ಕೊನೆಯದಾಗಿ "ಖಾತೆಯ ಹೆಸರು"ಎಂಬ ವಿಂಡೊನಲ್ಲಿ ಈ ಖಾತೆಗೆ ಹೆಸರೊಂದನ್ನು ಸೂಚಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ ಮುಗಿಸಿ.
ಇಷ್ಟು ಮಾಡಿದಾಗ,ನೀವು ಸೂಚಿಸಿದಂತೆ ನೀವಿಟ್ಟ ಹೆಸರಿನೊಂದಿಗೆ ನಿಮ್ಮ ಹೊಸ ಖಾತೆಯು ಸೃಷ್ಟಿಯಾಗಿದ್ದನ್ನು "ಖಾತೆ ಸೆಟ್ಟಿಂಗ್‌ಗಳು"ಎಂದು ಕಾಣುವ ವಿಂಡೊನ ಎಡಭಾಗದಲ್ಲಿ ನೋಡಬಹುದು.
ಇದೆ ರೀತಿಯಾಗಿ ಮತ್ತೊಂದು ಜಿ-ಮೈಲ್ ಖಾತೆಯ ಮಿಂಚೆಗಳನ್ನು ಸಹ ವೀಕ್ಷಿಸಲು ಹೊಸ ಖಾತೆಯನ್ನು ಸೃಷ್ಟಿಸಬಹುದು.ಮತ್ತೊಂದು ಖಾತೆಯನ್ನು ಸೇರಿಸಲು...

೧.ಸಾಧನ->ಖಾತೆಯ ಸೆಟ್ಟಿಂಗ್‌ಗಳು ಇದನ್ನು ಕ್ಲಿಕ್ಕಿಸಿ.
೨.ಎಡ ಭಾಗದಲ್ಲಿ ಕಾಣುವ "ಖಾತೆ ಸೇರಿಸಿ"ಎನ್ನುವ ಗುಂಡಿಯನ್ನು ಒತ್ತಿ.
೩."ಖಾತೆ ಜಾದುಗಾರ"ಎಂಬುದು ಶುರುವಾಗಿ ಖಾತೆಯ ಸೆಟ್ಟಿಂಗ್‌ಗಳು ಎಂಬ ವಿಂಡೊ ಪುಟಿಯುತ್ತದೆ.
೪.ಈ ವಿಂಡೊನಲ್ಲಿ "ಮಿಂಚೆ ಖಾತೆ"ಎನ್ನುವುದನ್ನು ಆಯ್ಕೆ ಮಾಡಿ"ಮುಂದಿನದು"ಎಂಬ ಗುಂಡಿ ಒತ್ತಿ.
೫.ಸ್ವವಿವರ ನಮೂದಿಸಬೇಕಾದ "ಗುರುತು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ಹಾಗು ಮಿಂಚೆ ವಿಳಾಸ ನಮೂದಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೬."ಸರ್ವರ್‌ ಮಾಹಿತಿ"ಎಂಬ ವಿಂಡೊನಲ್ಲಿ ಮೊದಲು IMAP ಎನ್ನುವುದನ್ನು ಆಯ್ಕೆ ಮಾಡಿ ನಂತರ ಒಳಹರಿವನ್ನು ನಿಭಾಯಿಸುವ ಸರ್ವರ್‌ನ ಹೆಸರನ್ನು imap.gmail.com ಎಂದು ನಮೂದಿಸಿ.
೭.Use Global Inbox ಎಂಬುದನ್ನು ಟಿಕ್ ಮಾಡಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೮."ಬಳಕೆದಾರನ ಹೆಸರುಗಳು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ನಮೂದಿಸಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೯.ಕೊನೆಯದಾಗಿ "ಖಾತೆಯ ಹೆಸರು"ಎಂಬ ವಿಂಡೊನಲ್ಲಿ ಈ ಖಾತೆಗೆ ಹೆಸರೊಂದನ್ನು ಸೂಚಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ ಮುಗಿಸಿ.
೧೦.ಈಗ ನಿಮಗೆ ಇಲ್ಲಿಯವರೆಗು ತುಂಬಿಸಿದ ಮಾಹಿತಿ "ಶುಭಾಶಯ"ಎನ್ನುವ ವಿಂಡೊನಲ್ಲಿ ಕಂಡು ಬರುತ್ತದೆ, ಯಾವುದಾದರು ಮಾಹಿತಿಯನ್ನು ಬದಲಾಯಿಸಬೇಕೆಂದಲ್ಲಿ "ಹಿಂದಿನದು"ಎಂಬ ಗುಂಡಿಯನ್ನು ಒತ್ತಿ ಬದಲಾಯಿಸಬಹುದು. ಮಾಹಿತಿ ಪರಿಶೀಲಿಸಿಯಾದ ಮೇಲೆ "ಮುಗಿಸು"ಎಂಬ ಗುಂಡಿ ಒತ್ತಿ.

ಈಗ ಕಾಣುವ "ಖಾತೆ ಸೆಟ್ಟಿಂಗ್"ಎನ್ನುವ ವಿಂಡೊನಲ್ಲಿ ಸೇರಿಸಿದ ಖಾತೆಯ ವಿವರಗಳನ್ನು ಕಾಣಬಹುದು.ಇತರೆ ಸೆಟ್ಟಿಂಗ್ ಮಾಡಲು..
೧.ವಿಂಡೊನ ಎಡಭಾಗದಲ್ಲಿ ಕಾಣುವ "ಸರ್ವರ್ ಸೆಟ್ಟಿಂಗ್" ಎಂಬುದರ ಮೇಲೆ ಒಮ್ಮೆ ಕ್ಲಿಕ್ ಮಾಡಿ.
೨.ಬಲ ಭಾಗದಲ್ಲಿ ನಿಮಗೆ "ಖಾತೆ ಸೆಟ್ಟಿಂಗ್"ನ ಸಂಪೂರ್ಣ ಮಾಹಿತಿ ಕಾಣಸಿಗುತ್ತದೆ.ಇದರಲ್ಲಿ "ಸರ್ವರ್ ಹೆಸರು" ಎಂಬ ಬಾಕ್ಸ್ ಪಕ್ಕ "ಪೋರ್ಟ್" ಎಂಬುದರಲ್ಲಿ ಮೂಲಭೂತವಾದ ಯಾವುದೆ ಸಂಖ್ಯೆಯಿದ್ದಲ್ಲಿ ಅದನ್ನು ಅಳಿಸಿ ೯೯೩ ಎಂದು ನಮೂದಿಸಿ.
೩.ಕೆಳಗೆ ಕಾಣುವ "ರಕ್ಷಣೆಯ ಸೆಟ್ಟಿಂಗ್"ಎಂಬುದರಲ್ಲಿ SSL ಎಂಬುದನ್ನು ಆಯ್ಕೆ ಮಾಡಿ.
೪."ಸರ್ವರ್ ಸೆಟ್ಟಿಂಗ್‌ಗಳು" ಎಂಬುದರಲ್ಲಿ,ಹೊಸ ಮಿಂಚೆಗೋಸ್ಕರ ಮೊದಲ ಬಾರಿಗೆ ಶುರುವಾದ ನಂತರ ಹುಡುಕುವ ಆಯ್ಕೆಯನ್ನು ಟಿಕ್ ಮಾಡಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಮಿಂಚೆಗೋಸ್ಕರ ಹುಡುಕುವ ಸಮಯವನ್ನು ನಿಗದಿ ಪಡಿಸಿ ಮಿಕ್ಕ ಆಯ್ಕೆಗಳನ್ನು ಹಾಗೆಯೆ ಬಿಟ್ಟುಬಿಡಿ.
೫.ಇದಾದ ನಂತರ ಎಡಭಾಗದಲ್ಲಿ "ರಚಿಸುವುದು ಹಾಗು ಉತ್ತರಿಸುವ ಬಗೆ"ಏಂಬುದರ ಮೇಲೆ ಕ್ಲಿಕ್ ಮಾಡಿ.
ರಚಿಸುವ/ಉತ್ತರಿಸುವ ಸಂದೇಶಗಳು HTMLನಲ್ಲಿರಬೇಕೆ ಅಥವಾ ಸರಳವಾದ ಅಕ್ಷರ ರೀತಿಯದ್ದಾಗಿರಬೇಕೆ ಎಂಬುದನ್ನು ನಿರ್ಧರಿಸಿ.
HTML - ೧.ಈ ರೀತಿಯದ್ದು ಹೆಚ್ಚು ದತ್ತಾಂಶವನ್ನು ಹಿಡಿದುಕೊಂಡಿರುತ್ತದೆ (ಹೆಚ್ಚಿನ ದತ್ತಂಶ ಹೆಚ್ಚಿನ ದುಡ್ಡು :))
೨.ನಿಧಾನವಾದ ಇಂಟರ್ನೆಟ್ ಸಂಪರ್ಕಗಳಿಗೆ ಸೂಕ್ತವಲ್ಲ.
೩.ಮಿಂಚೆಗಳನ್ನು ಸುಂದರವಾಗಿ ರಚಿಸಬಹುದು.
ಸರಳಾಕ್ಷರ-೧.ಸಂದೇಶಕ್ಕೆ ಸಂಬಂಧಪಟ್ಟದ್ದನ್ನು ಬಿಟ್ಟು ಬೇರೇನು ದತ್ತಾಂಶವನ್ನು ಹೊಂದಿರುವುದಿಲ್ಲ (ಕಮ್ಮಿ ದತ್ತಾಂಶ ಕಮ್ಮಿ ದುಡ್ಡು :))
೨.ನಿಧಾನವಾದ ಇಂಟರ್ನೆಟ್ ಸಂಪರ್ಕಗಳಿಗೆ ಉಪಯುಕ್ತ.
೩.ಮಿಂಚೆಗಳು ನೋಟ್‌ಪ್ಯಾಡ್ ಕಡತದಂತೆ ಅಲಂಕಾರವಿಲ್ಲದೆ ಕಾಣುತ್ತದೆ.

ಸಂದೇಶಗಳನ್ನು ರಚಿಸಲು HTMLಬೇಕೆನಿಸಿದಲ್ಲಿ "ಸಂದೇಶಗಳನ್ನು HTMLನಲ್ಲಿ ರಚಿಸು" ಎಂಬುದನ್ನು ಟಿಕ್ ಮಾಡಿ(ಮೊದಲಿಗೆಯೆ ಆಗಿರುತ್ತದೆ) HTMLಬೇಡದೆ ಇದ್ದಲ್ಲಿ ಆ ಟಿಕ್‌ಅನ್ನು ತೆಗೆದು ಬಿಡಿ. ಉತ್ತರಿಸುವಾಗ ಹಿಂದಿನ ಸಂದೇಶವನ್ನು,ರಚಿಸುತ್ತಿರುವ ಮಿಂಚೆಯ ಸಂದೇಶದ ಕೆಳಭಾಗದಲ್ಲಿ ಅಥವಾ ಮೇಲ್‌ಭಾಗದಲ್ಲಿ ಸ್ವಯಂಉಲ್ಲೇಖ ಮಾಡಬೇಕೆ ಎಂಬುದನ್ನು ನಿರ್ಧರಿಸಿ."ಪ್ರತ್ಯುತ್ತರವನ್ನು ಸಂದೇಶದ ಮೇಲ್‌ಭಾಗದಲ್ಲಿ ಶುರುಮಾಡು" ಎನ್ನುವುದನ್ನು ಆಯ್ಕೆ ಮಾಡಿ ಅಥವಾ ಹಿಂದಿನ ಸಂದೇಶಗಳಿಗೆ ಉತ್ತರಿಸುವಾಗ ಹಳೆಯ ಸಂದೇಶವು ಬೇಡದೆ ಇದ್ದಲ್ಲಿ ಈ ಆಯ್ಕೆಯ ಟಿಕ್ ಗುರುತನ್ನು ತೆಗೆಯಿರಿ.
೬."ಜಂಕ್ ಸೆಟ್ಟಿಂಗ್‌ಗಳು"ಎಂಬುದರಲ್ಲಿ, ಹೊಂದುಕೊಳ್ಳುವಂತಹ ಜಂಕ್ ಮಿಂಚೆ ನಿಯಂತ್ರಣಗಳನ್ನು ಶಕ್ತಗೊಳಿಸು ಎನ್ನುವುದರ ಟಿಕ್ ಗುರುತನ್ನು ತೆಗೆಯಿರಿ.
ಇಷ್ಟೆಲ್ಲಾ ಮಾಡಿದ ನಂತರ, ಅದೆ ವಿಂಡೊನ ಎಡ ಭಾಗದಲ್ಲಿ ಕಾಣುವ ಹೊರಹರಿವಿನ ಸರ್ವರ್(SMTP)ಎಂಬುದರ ಮೇಲೆ ಒಮ್ಮೆ ಕ್ಲಿಕ್ ಮಾಡಿ.
೧.ನೀವು ಮೊದಲೆ ತಿಳಿಸಿದ "ಹೊರಹರಿವಿನ ಸರ್ವರ್"ಪಟ್ಟಿಯಾಗಿರುತ್ತದೆ. ಈಗ ಅದನ್ನು ಆಯ್ಕೆ ಮಾಡಿ(ಒಂದಕ್ಕಿಂತಾ ಹೆಚ್ಚಿದಲ್ಲಿ)"ಸಂಕಲಿಸು" ಎಂಬ ಗುಂಡಿಯನ್ನು ಒತ್ತಿರಿ.
೨.SMTPಸರ್ವರ್ ಎಂಬ ವಿಂಡೊ ಪುಟಿಯುತ್ತದೆ, ಅದರೊಳಗೆ "ಸುರಕ್ಷಿತವಾದ ಸಂಪರ್ಕವನ್ನು ಬಳಸು" ಎಂಬ ಆಯ್ಕೆಯಲ್ಲಿ TLS ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. ಬೇರೆ ಆಯ್ಕೆಗಳನ್ನು ಬದಲಾಯಿಸಬೇಡಿ. ನಂತರ "ಸರಿ"ಎಂಬ ಗುಂಡಿಯನ್ನು ಒತ್ತಿರಿ.
ಈಗ "ಖಾತೆ ಸೆಟ್ಟಿಂಗ್‌ಗಳು" ಎಂಬ ವಿಂಡೊನಲ್ಲಿರುವ "ಸರಿ"ಎಂಬ ಗುಂಡಿಯನ್ನು ಒತ್ತಿದರೆ ಕಥೆ ಮುಗಿದಂತೆ ನೀವು ಥಂಡರ್‌ಬರ್ಡ್‌ಅನ್ನು ತಡೆಯಿಲ್ಲದೆ ಬಳಸಬಹುದು.
ಥಂಡರ್‌ಬರ್ಡ್‌ಅನ್ನು ಒಮ್ಮೆ ಮುಚ್ಚಿ ಆನಂತರ ಪುನ: ಶುರು ಮಾಡಿರಿ. ಶುರುಮಾಡಿದಾಕ್ಷಣ ಅದು ನಿಮಗೆ ಎರಡು ಆಯ್ಕೆಯನ್ನು ಕೊಡುತ್ತದೆ
೧.ಆನ್-ಲೈನ್ ಆಗಿ ಕೆಲಸ ಮಾಡುವುದು
೨.ಆಫ್-ಲೈನ್ ಆಗಿ ಕೆಲಸ ಮಾಡುವುದು

ಮೊದಲನೆಯ ಆಯ್ಕೆ:ಆನ್-ಲೈನ್ ಆಗಿ ಕೆಲಸ ಮಾಡುವುದು
ಈ ಆಯ್ಕೆಯನ್ನು ಮಾಡಿ ಥಂಡರ್‌ಬರ್ಡ್‌ ಶುರು ಮಾಡಿದೊಡನೆಯೆ ಥಂಡರ್‌ಬರ್ಡ್‌ ನಿಮ್ಮ ಜಿಮೈಲ್ ಖಾತೆಯನ್ನು ಸಂಪರ್ಕಿಸುತ್ತದೆ.ಸಂಪರ್ಕ ಸೃಷ್ಟಿಯಾದ ಮೇಲೆ ಬಳಕೆದಾರನ ಹೆಸರಿನ ಗುಪ್ತಪದವನ್ನು ನಮೂದಿಸಬೇಕಾಗುತ್ತದೆ.ಗುಪ್ತಪದವನ್ನು ಕಂಪ್ಯೂಟರನಲ್ಲಿ ಶೇಖರಿಸದಿರುವುದೆ ಲೇಸು.ಮೊದಲಿಗೆ ನಿಮ್ಮ ಜಿಮೈಲ್‌ನಲ್ಲಿರುವ ಎಲ್ಲಾ ಫೋಲ್ಡರ್‌ಗಳು ಒಂದಾದ ಮೇಲೊಂದರಂತೆ ಥಂಡರ್‌ಬರ್ಡ್‌ನ ಇನ್-ಬಾಕ್ಸ್‌ನಲ್ಲಿ ನಕಲುಗೊಳ್ಳುತ್ತವೆ.ಫೋಲ್ಡರ್‌ಗಳು ಸೃಷ್ಟಿಯಾದ ನಂತರ ಎಲ್ಲಾ ಮಿಂಚಿಗಳು ನಕಲಾಗುತ್ತವೆ ಆದರೆ ಯಾವುದು ಒಂದು ಮಿಂಚೆ ಸಹ ನಿಮ್ಮ ಕಂಪ್ಯೂಟರ್‌ನಲ್ಲಿ ಶೇಖರಿಸಲಾಗಿರುವುದಿಲ್ಲ.ಆನ್-ಲೈನ್ ಇದ್ದು ಕೊಂಡು ಮಾಡುವ ಎಲ್ಲಾ ಕಾರ್ಯಗಳು ಜಿಮೈಲ್‌ನ ಮಿಂಚೆ ಖಾತೆಗೆ ಲಾಗ್-ಇನ್ ಆಗಿ ಮಾಡಿದಂತೆಯೆ ಆಗಿರುತ್ತದೆ.ಒಮ್ಮೆ ನೀವು ಆಫ್-ಲೈನ್ ಆದರೆ ಕಂಡು ಬರುವ ಎಲ್ಲಾ ಸಂದೇಶಗಳ ಮಾಹಿತಿ ಮಾಯವಾಗುತ್ತದೆ (ಡೌನ್‌ಲೋಡ್ ಮಾಡದೆ ಇದ್ದವು ಮಾತ್ರ).ನಿಮಗೆ ಬೇಕಾಗಿರುವ ಮಿಂಚೆಯನ್ನು ಅಂತರ್ಜಾಲ ಸಂಪರ್ಕವಿಲ್ಲದಾಗಲು ನೋಡಬೇಕೆಂದರೆ ಡೌನ್‌ಲೋಡ್ ಮಾಡಬೇಕು.ಇದಕ್ಕಾಗಿ ನೀವು ಮೊದಲು ctrlಗುಂಡಿಯನ್ನು ಒತ್ತಿಹಿಡಿದು ನಿಮಗಿಷ್ಟಬಂದ ಮಿಂಚೆಗಳ ಮೇಲೆ ಒಮ್ಮೆ ಕ್ಲಿಕ್ಕಿಸುತ್ತಾ ಆಯ್ಕೆ ಮಾಡಬೇಕು.ನಂತರ ಕಡತ ಮೆನ್ಯುಗೆ ಹೋಗಿ ಅಲ್ಲಿ ಅಫ್-ಲೈನ್ ಎಂಬುದನ್ನು ಕ್ಲಿಕ್ಕಿಸಿದಾಗ ಪುಟಿಯುವ ಆಯ್ಕೆಪಟ್ಟಿಯಲ್ಲಿ ಕೊನೆಯದಾಗಿರುವ "ಆಯ್ಕೆ ಮಾಡಿದ ಸಂದೇಶಗಳನ್ನು ಪಡೆ"ಎಂಬುದನ್ನು ಕ್ಲಿಕ್ಕಿಸಿ.ಆಗ ಆಯ್ಕೆ ಮಾಡಲಾದ ಮಿಂಚೆಗಳನ್ನು ಆಫ್-ಲೈನ್ ವೀಕ್ಷಣೆಗಾಗಿ ಕಂಪ್ಯೂಟರ್‌ನಲ್ಲಿ ಶೇಖರಿಸಲಾಗುತ್ತದೆ.
ಥಂಡರ್‌ಬರ್ಡ್‌ನ ಇನ್-ಬಾಕ್ಸ್‌ನ ಮೊಲ ವಿಂಡೊನ ಮೇಲ್ಭಾಗದಲ್ಲಿ ಕಾಣುವ "ಮಿಂಚೆಯನ್ನು ಪಡೆ"ಎನ್ನುವ ಗುಂಡಿ ಒತ್ತಿದರೆ,ಥಂಡರ್‌ಬರ್ಡ್‌ ನಿಮ್ಮ ಜಿಮೈಲ್ ಖಾತೆಯನ್ನು ಸಂಪರ್ಕಿಸಿ ಓದದಿರುವ(ಬೇಕಾಗಿರೊದು ಬೇಡದೆ ಇರೊ ಎಲ್ಲಾ)ಮಿಂಚೆಗಳನ್ನು ಡೌನ್‌ಲೋಡ್ ಅನಗತ್ಯವಾಗಿ ಮಾಡುತ್ತದೆ. ಹಾಗಾಗಿ ಮೊದಲು ಆನ್-ಲೈನ್ ಆಗಿ, ಯಾವ ಯಾವ ಮಿಂಚೆ ಬಂದಿದೆ ಎಂದು ವೀಕ್ಷಿಸಿ, ಬೇಡದೆ ಇರುವ ಮಿಂಚೆಗಳನ್ನು ಅಳಿಸಿ(ಒಮ್ಮೆ ಅಳಿಸಿದ ನಂತರ ಅವು ಮತ್ತೆ ಕಾಣಬರುವುದಿಲ್ಲ)ಬೇಕಾಗಿರುವ ಮಿಂಚೆಗಳಲ್ಲಿ ಯಾವುದನ್ನು ಆಫ್-ಲೈನ್ ವೀಕ್ಷಣೆಗೆ ಶೇಖರಿಸಬೇಕೆಂದು ಗುರುತಿಸಿ ಅಂಥಹವನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಿ ಮಿಕ್ಕವನು ಹಾಗೆಯೆ ಬಿಡಿ,ಇವುಗಳು ಆಫ್-ಲೈನ್‌ ಆಗಿದ್ದಾಗ ಕಂಡುಬರುವುದಿಲ್ಲ.

ಎರಡನೆಯ ಆಯ್ಕೆ:ಆಫ್-ಲೈನ್ ಆಗಿ ಕೆಲಸ ಮಾಡುವುದು
ಈ ಆಯ್ಕೆಯಲ್ಲಿ ನೀವು ಆನ್-ಲೈನ್ ಆಗಿದ್ದಾಗ ಡೌನ್‌ಲೋಡ್ ಮಾಡಿ ಉಳಿಸಿದಂತಹ ಮಿಂಚೆಗಳನ್ನು ಮಾತ್ರ ವೀಕ್ಷಿಸಲು ಉಪಯುಕ್ತ!!.
ಥಂಡರ್‌ಬರ್ಡ್‌‌ನ ಮೆನ್ಯುವಿನಲ್ಲಿ ಕಡತ->ಆಫ್-ಲೈನ್ ಇಲ್ಲಿಗೆ ಹೋಗಿ ಆಫ್-ಲೈನ್ ಸೆಟ್ಟಿಂಗ್‌ ಎಂಬುದನ್ನು ಕ್ಲಿಕ್ಕಿಸಿ.
ಇಲ್ಲಿ ಆಫ್-ಲೈನ್ ಎನ್ನುವ ವಿಭಾಗದಲ್ಲಿರುವ ಎರಡೂ ಚೆಕ್ ಬಾಕ್ಸ್‌ನಲ್ಲಿ ಟಿಕ್ ಮಾಡಿ ಗುರುತಿ ಮಾಡಿ ನಂತರ ಸರಿ ಎನ್ನುವುದನ್ನು ಕ್ಲಿಕ್ಕಿಸಿ,ವಿಂಡೊ ತಾನಾಗಿಯೆ ಮುಚ್ಚಿಕೊಳ್ಳುತ್ತದೆ.
ಆಫ್-ಲೈನ್ ಆದಾಗ ಎರಡು ಕೆಲಸ ಮಾಡಲು ಸಾಧ್ಯ,ಒಂದು ಹೊಸ ಮಿಂಚೆಗಳನ್ನು ರಚಿಸಬಹುದು ಮತ್ತೊಂದು ಆಫ್-ಲೈನ್ ಸಂದೇಶ ಓದಬಹುದು.ಹೊಸದಾಗಿ ರಚಿಸಿದ ಮಿಂಚೆಯನ್ನು "ಡ್ರಾಫ್ಟ್"ಆಗಿ ಉಳಿಸಿಕೊಂಡು ಆನ್-ಲೈನ್ ಆದ ಮರುಕ್ಷಣವೆ ಕಳುಹಿಸಿ ಆಫ್-ಲೈನ್ ಆಗಿ ಜಿಪುಣತನವನ್ನು ಮೆರೆಯಬಹುದು :D ಏಕೆಂದರೆ ಆನ್-ಲೈನ್ ಆಗಿದ್ದುಕೊಂಡು ಸಂದೇಶವನ್ನು ರಚಿಸಲು ತುಂಬಾ ಸಮಯ ಹಿಡಿಯುತ್ತದೆ,ಹೀಗಿದ್ದಾಗ ದತ್ತಾಂಶವು ಸ್ಥಳಾಂತರಗೊಂಡು ಅನವಶ್ಯಕವಾಗಿ ಅಮೂಲ್ಯವಾದ ಅಂತರ್ಜಾಲ ಸಮಯ/"ಖರ್ಚಾಗುವ ದತ್ತಾಂಶ"ವನ್ನು ವ್ಯಯವಾಗದಂತೆ ತಡೆಗಟ್ಟಬಹುದು.
ಒಟ್ಟಿನಲ್ಲಿ ಥಂಡರ್‌ಬರ್ಡ್‌ನೊಂದಿಗೆ ಜಿ-ಮೈಲ್ ಖಾತೆಯ ಮಿಂಚೆ ನಿರ್ವಹಣೆಯನ್ನು ಯೆಂಜಾಯಿಸಬಹುದು :).

ವಿ.ಸೂ:ನೀವು ಬಳಸುವ ಕಂಪ್ಯೂಟರ್ನಲ್ಲಿ ನಿಮ್ಮದು ಅಂತಾನೆ ಪ್ರತ್ಯೇಕ ಲಾಗ್-ಇನ್ ಇದ್ದಲ್ಲಿ ನಿಮ್ಮ ಮಿಂಚೆಗಳ ಗೌಪ್ಯತೆ ಕಾಪಾಡಬಹುದು.ಕಂಪ್ಯೂಟರ್ ಬಳಸುವ ಎಲ್ಲರೂ ಸಹ ಒಂದೆ ಲಾಗ್-ಇನ್ ಬಳಸಿದಲ್ಲಿ ನಿಮ್ಮ ಮಿಂಚೆಗಳ ಗೌಪ್ಯತೆ ಹರಾಜಾಗಿ ಹೋಗುತ್ತೆ. ಹುಷಾರು!!!

ಇನ್ನು ತಡ ಯಾಕೆ ಹಕ್ಕಿಯನ್ನು ಗುಡುಗಿಸಿ :)

ಸಾಧನ - tool
ಮಿಂಚೆ - email
ತಂತ್ರಾಂಶ - software
ಸ್ಥಾಪನಾಕಡತ - setup file
ಬಳಕೆದಾರನ ಹೆಸರು-user name
ಗುಪ್ತಪದ-password
ಮಿಂಚೆ ವಿಳಾಸ-email id
ಮಿಂಚೆ ಸಾಧನ -email client
ಶಕ್ತಗೊಳಿಸಿ-enable
ಮುಂದಿನದು-next
ಗುಂಡಿ-button
ಹೊಸ ಖಾತೆ ಸ್ಥಾಪನೆ-new account setup
ಮಿಂಚೆ ಖಾತೆ -email account
ಗುರುತು-identity
ಸರ್ವರ್‌ ಮಾಹಿತಿ-server information
ಒಳಹರಿವು-incoming
ಹೊರಹರಿವು-outgoing
ಬಳಕೆದಾರನ ಹೆಸರುಗಳು-usernames
ಖಾತೆಯ ಹೆಸರು-account name
ಖಾತೆ ಸೆಟ್ಟಿಂಗ್‌ಗಳು-account settings
ಖಾತೆ ಸೇರಿಸಿ-add account
ಖಾತೆ ಜಾದುಗಾರ-account wizard
ಹಿಂದಿನದು-back
ಮೂಲಭೂತವಾದ-default
ರಕ್ಷಣೆಯ ಸೆಟ್ಟಿಂಗ್-security setting
ಸರಳಾಕ್ಷರ-plain text
ದತ್ತಾಂಶ-Data
ಹೊಂದುಕೊಳ್ಳುವಂತಹ -adapative
ನಿಯಂತ್ರಣ-controls
ಸುರಕ್ಷಿತವಾದ ಸಂಪರ್ಕವನ್ನು ಬಳಸು-use secure connection
ನಕಲು-copy
ಆಯ್ಕೆ ಮಾಡಿದ ಸಂದೇಶಗಳನ್ನು ಪಡೆ-get selected messages

--ಪ್ರಸಾದ್

ಅಳುತ್ತಿರುವ ನಿಮ್ಮ ವಿಂಡೊಸ್‌ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಕೊನೆ ಕಂತು

on April 29, 2009

ಮೂರಕ್ಕೆ ಮುಕ್ತಾಯ ಮಾಡೊಣ ಅಂತ ಮಿಕ್ಕ ಎಲ್ಲಾ ಟ್ವೀಕ್‌ಗಳನ್ನು ಇದರಲ್ಲೆ ತುರುಕ್ತಿದೀನಿ.
ಈ ಲೇಖನದ ಟ್ವೀಕ್‌ಗಳನ್ನು ಮಾಡುವ ಮೊದಲು ನಾವು "ಸಿಸ್ಟಂ ರೆಜಿಸ್ಟರ್ಸ್" ಬಗೆ ತಿಳ್ಕೊಂಡು ಮುಂದುವರಿಯೋದು ಅತ್ಯಾವಶ್ಯಕ.
"ಸಿಸ್ಟಂ ರೆಜಿಸ್ಟರ್ಸ್"ಅನ್ನೋದು ವಿಂಡೊಸ್‌ನ ತುಂಬಾ ಆಂತರಿಕ ವಿಷಯ, ತಿಳಿಯದೆ ಕೈ ಹಾಕಿ ಕುಲಗೆಡಿಸಿದ್ರೆ ವಿಂಡೊಸ್‌ಅನ್ನು ಮತ್ತೊಮ್ಮೆ ಸ್ಥಾಪಿಸಬೇಕಾಗುತ್ತದೆ ಹಾಗಾಗಿ ಎಚ್ಚರ!!!
ನಿಮ್ಮ ಸಿಸ್ಟಂನಲ್ಲಿ ಸ್ಥಾಪಿಸಿ/ಅನುಸ್ಥಾಪಿಸುವ ಪ್ರತಿ ಒಂದು ತಂತ್ರಾಶದ ಆಯ್ದ ಕೆಲವು ಮಾಹಿತಿಯನ್ನು "ಸಿಸ್ಟಂ ರೆಜಿಸ್ಟರ್ಸ್"ಅನ್ನೊ ಒಂದು ವಿಭಾಗದಲ್ಲಿ ವಿಂಡೊಸ್‌ ಕಲೆಹಾಕಿರುತ್ತದೆ.ಪ್ರತಿ ತಂತ್ರಾಶವು ಹೇಗೆ ಶುರು ಆಗಬೇಕು,ಅವುಗಳ ಗುಣ ಧರ್ಮಗಳ ಮಾಹಿತಿ,ಹೀಗೆಯೆ ಅನೇಕ ಮಾಹಿತಿ ಇರುತ್ತದೆ. ಹಾಗಾಗಿ ನಾವು ಇಲ್ಲಿ ಮಾಡುವ ಬದಲಾವಣೆಗಳು ನೇರವಾಗಿ ತಂತ್ರಾಶ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ಪ್ರಭಾವ ಬೀರುತ್ತದೆ.ಇಲ್ಲಿ ಕೆಲಸ ಕೆಟ್ಟರೆ ಅಲ್ಲೂ ಸಹ ಕೆಟ್ಟಿತು ಅಂದುಕೊಳ್ಳಿ, ಹಾಗಾಗಿ ಬದಲಾವಣೆಯನ್ನು ತಿಳಿದು ಜಾಗೃತೆಯಿಂದ ಸೂಚಿಸಿದಷ್ಟೆ ಮಾಡಿ.

ವಿಂಡೋಸ್‌‌ನ ಸಿಸ್ಟಂ ಕಡತಗಳೆ ಕೈ ಕೊಟ್ಟಲ್ಲಿ ಮರುಸ್ಥಾಪನಾ ಬಿಂದು ಉಪಯೋಗಿಸಿ ಹೇಗೆ ಕಾರ್ಯಶೀಲತೆಯನ್ನು ಮರಳಿ ಪಡೆಯಬಹುದೊ ಹಾಗೆಯೆ "ಸಿಸ್ಟಂ ರೆಜಿಸ್ಟರ್ಸ್" ಜೊತೆ ಕೆಲಸ ಮಾಡುವಾಗ ಸಹ ಎಲ್ಲ ಮಾಡಿದ ಎಲ್ಲಾ ಬದಲಾವಣೆಗಳನ್ನು ಮರುಪಡೆಯಲು "ರೆಜಿಸ್ಟ್ರಿ ಬ್ಯಾಕ್‌ಅಪ್" ಮಾಡಿಕೊಳ್ಳಬಹುದು. ಆದ್ರೆ ಇದನ್ನು ನಾವೆ ಕೈಯ್ಯಾರೆ ಮಾಡ್ಬೇಕಾಗುತ್ತದೆ ಕಂಪ್ಯೂಟರ್ ತಾನಗಿಯೆ ಮಾಡುವುದಿಲ್ಲ.
"ರೆಜಿಸ್ಟ್ರಿ" ಜೊತೆ ಕೆಲಸ ಮಾಡಲು
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.

ಈಗ ನೀವು ವಿಂಡೊಸ್‌ನ ಆಂತರಿಕ ಜಗತ್ತಿಗೆ ಹೆಜ್ಜೆ ಇಟ್ಟಿದೀರಾ,ಪ್ರತಿ ಹೆಜ್ಜೆಯನ್ನು ಸಾವಧಾನವಾಗಿ ಇಡಿ,ಅಪಘಾತಕ್ಕೆ ಅವಸರವೆ ಕಾರಣ!!!.
ಈಗ "ರೆಜಿಸ್ಟ್ರಿ ಸಂಕಲನ"ಎಂಬ ವಿಂಡೊ ನೋಡಬಹುದು ಅದನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು (ಎಡ ಹಾಗು ಬಲ ಭಾಗ) ಹಾಗು ಎರಡು ಬಾರ್ ಇರುತ್ತವೆ (ಮೆನು ಹಾಗು ಸ್ಟೇಟಸ್)
ಮೆನು ಬಾರ್ ಮೇಲೆ ಇದ್ದರೆ ಸ್ಟೇಟಸ್ ಬಾರ್ ಕೆಳಗೆ ಇರುತ್ತದೆ.ನೀವು "ರೆಜಿಸ್ಟ್ರಿ ಸಂಕಲನ" ವಿಂಡೊನ ಎಡಭಾಗದಲ್ಲಿ ಕಾಣುವ ಮೈ ಕಂಪ್ಯೂಟರ್ ಅನ್ನು ಸಿಂಗಲ್ ಕ್ಲಿಕ್ ಮಾಡಿ ಆಯ್ಕೆ ಮಾಡಿದಾಗ ಅದೆ ವಿಂಡೊನ ಕೆಳಭಾಗದಲ್ಲಿರುವ ಸ್ಟೇಟಸ್ ಬಾರ್‌, ಆಯ್ಕೆ ಮಾಡಿದ್ದನ್ನು ತೋರಿಸುತ್ತದೆ. ಇದೆ ರೀತಿಯಾಗಿ ನೀವು HKEY_CLASSES_ROOT(ಮೈ ಕಂಪ್ಯೂಟರ್‌ನ ಎಡ ಭಾಗದಲ್ಲಿರುವ + ಚಿನ್ಹೆಯನ್ನು ಕ್ಲಿಕ್ಕಿಸಿದಾಗ ಇದು ಕಾಣುತ್ತದೆ) ಎಂಬುದನ್ನು ಆಯ್ಕೆ ಮಾಡಿದರೆ ಸ್ಟೇಟಸ್ ಬಾರ್‌ನಲ್ಲಿ My Computer\HKEY_CLASSES_ROOT ಎಂದು ತೋರಿಸುತ್ತದೆ, ಹೀಗೆ ಸ್ಟೇಟಸ್ ಬಾರ್‌ನ ಸಹಾಯದಿಂದ ನಾವು ಯಾವ ಫೋಲ್ಡರ್‌ಅನ್ನು ಆಯ್ಕೆ ಮಾಡಿದ್ದೀವಿ ಎಂದು ತಿಳಿಯಬಹುದು.

ಈಗ ಬ್ಯಾಕ್‌ಅಪ್ ಮಾಡಲು "ರೆಜಿಸ್ಟ್ರಿ ಸಂಕಲನ" ವಿಂಡೊನಲ್ಲಿ ಕಾಣುವ ಮೈ ಕಂಪ್ಯೂಟರ್ ಮೇಲೆ ಒಂಡು ಬಾರಿ ಕ್ಲಿಕ್ ಮಾಡಿ,ಸ್ಟೇಟಸ್ ಬಾರ್‌ನಲ್ಲಿ ಒಮ್ಮೆ ನೋಡಿ ಖಾತ್ರಿ ಮಾಡಿಕೊಳ್ಳಿ. ನಂತರ ಮೆನು ಬಾರ್‌‍ನಲಿರುವ "ಕಡತ"ಮೆನು ಮೇಲೆ ಕ್ಲಿಕ್ಕಿಸಿ,ಅಲ್ಲಿ ಕಾಣುವ "ರಫ್ತು" ಎಂಬುದನ್ನು ಆಯ್ಕೆಮಾಡಿದಾಗ ಮತ್ತೊಂದು ಸಣ್ಣ ವಿಂಡೊ ಪುಟಿಯುತ್ತದೆ ಅದೆ "ರೆಜಿಸ್ಟ್ರಿ ರಫ್ತು ಕಡತ"ವಿಂಡೊ. ಇದರಲ್ಲಿ ನಿಮಗೆ ಸೃಷ್ಟಿಸಲಾಗುವ ಕಡತವನ್ನು ಎಲ್ಲಿ ಉಳಿಸಬೇಕೆಂಬುದರ ವಿವರ ಹಾಗು ಉಳಿಸಲು ಮಾಹಿತಿಯ ವ್ಯಾಪ್ತಿಯನ್ನು ತಿಳಿಸಬೇಕಾಗುತ್ತದೆ, ಚುಟುಕಾಗಿ ಹೇಳಬೇಕಾದರೆ ಎಷ್ಟು ಮಾಹಿತಿಯನ್ನು ಎಲ್ಲಿ ಉಳಿಸಬೇಕೆಂದು ತಿಳಿಸುವುದೆ ಈ ಕಾರ್ಯದ ಉದ್ದೇಶ. ಮುಂದೆ ಅಕಸ್ಮಾತ್ ರೆಜಿಸ್ಟ್ರಿ ಕೆಟ್ಟಲ್ಲಿ, "ಈ" ಸ್ಥಳದಿಂದ "ಈ" ಕಡತದಲ್ಲಿರುವ "ಈ" ವ್ಯಾಪ್ತಿಯಲ್ಲಿರುವ ಮಾಹಿತಿಯನ್ನು ಮರುಸ್ಥಾಪಿಸಬೇಕಾದಲ್ಲಿ ಸಹಾಯಕ್ಕೆ ಬೇಕಾದ "ಈ"ಗಳನ್ನು ಸೂಚಿಸಿ ಈ ರೀತಿ ಬ್ಯಾಕ್‌ಅಪ್ ತೆಗೆದುಕೊಂಡಿದ್ದನ್ನು ಬಳಸುವುದೆ ಈ ಕಾರ್ಯದ ಉದ್ದೇಶ.
"ರೆಜಿಸ್ಟ್ರಿ ಸಂಕಲನ" ವಿಂಡೊನ ಕೆಳಭಾಗದಲ್ಲಿ ರಫ್ತು ವ್ಯಾಪ್ತಿ ಎಂಬ ಸಣ್ಣ ವಿಭಾಗವಿರುತ್ತದೆ, ಇಲ್ಲಿ "ಎಲ್ಲಾ" ಎಂಬುದನ್ನು ಆಯ್ಕೆ ಮಾಡಿ. ನಂತರ ಈ ವಿಭಾಗದ ಮೇಲ್ಗಡೆ ಕಾಣುವ "ಕಡತದ ಹೆಸರು" ಎಂಬಲ್ಲಿ c:\registry_backup\regbackup ಎಂದು ಟೈಪಿಸಿ "ಉಳಿಸು"ಎನ್ನುವ ಗುಂಡಿಯನ್ನು ಒತ್ತಿ.
ಈಗ ವಿಂಡೋಸ್ ನಿಮ್ಮ ಆದೇಶವನ್ನು ಪ್ರಾಮಾಣಿಕವಾಗಿ c: ಡ್ರೈವ್‌ನಲ್ಲಿ registry_backup ಎಂಬ ಹೊಸದೊಂದು ಫೋಲ್ಡರ್ ಸೃಷ್ಟಿಸಿ ಅದಕ್ಕೆ regbackup ಎಂದು ನಾಮಕರಣವನ್ನು ಸಹ ಮಾಡಿ .reg ಎಂಬ ಎಕ್ಸ್ಟೆನ್‌ಷನ್‌ನೊಂದಿಗೆ ಉಳಿಸಿರುತ್ತದೆ.
ನೀವೇನಾದರು ರೆಜಿಸ್ಟ್ರಿಯಲ್ಲಿ ಬದಲಾವಣೆ ಮಾಡಿ, ಎಲ್ಲಾ ಬದಲಾವಣೆಗಳನ್ನು ಅಳಿಸಬೇಕೆಂದರೆ ಬದಲಾವಣೆ ಮಾಡುವ ಮುನ್ನ ಬ್ಯಾಕ್‌ಅಪ್ ಮಾಡಿದ ಕದತವನ್ನು,ಕಡತ ಮೆನುಗೆ ಹೋಗಿ ಅಲ್ಲಿ "ಅಮದು" ಎನ್ನುವುದನ್ನು ಆಯ್ಕೆಮಾಡಿ ನೀವು ಉಳಿಸಿದ .reg ಅನ್ನು ಸೂಚಿಸಿ "ತೆರೆ" ಎಂಬ ಗುಂಡಿಯನ್ನು ಒತ್ತಬೇಕು ಆಗ ಎಲ್ಲ ಬದಲಾವಣೆಗಳು ಅಳಿಸಿಹೋಗುತ್ತವೆ. ಸ್ವಲ್ಪ ತಡೆಯಿರಿ ನೀವು ಮಾಡಿದ ಬದಲಾವಣೆಗಳು ಇನ್ನು ಸಕ್ರಿಯವಾಗಿರುವುದಿಲ್ಲಾ, ಹಾಗೆ ಸಕ್ರಿಯಗೊಳಿಸಲು F5 ೨-೩ ಬಾರಿ ಒತ್ತಬೇಕು ಅಥವಾ ಮೆಷೀನ್‌ಅನ್ನು ಪುನರ್ಶುರು ಮಾಡಬೇಕು.
ಇಲ್ಲಿಗೆ ರೆಜಿಸ್ಟ್ರಿಯ ಅಮದು ಹಾಗು ರಫ್ತಿನ ವಿಚಾರ ಮುಗಿಯಿತು.
ಮುಂದಕ್ಕೆ...
ರೆಜಿಸ್ಟ್ರಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿ ನಮ್ಮ ಕಂಪ್ಯೂಟರ್‌ಅನ್ನು ಚೂಟಿ ಮಾಡುವ ವಿಷಯದ ಕಡೆ ಗಮನ ಹರಿಸೋಣ :)

ಫೋಲ್ಡರ್ ಅನ್ನು ಆದಷ್ಟು ಬೇಗನೆ ತೆರೆಯುವುದು - ಕೊನೆಯ ಸರ್ತಿ ಫೋಲ್ಡರ್ ಹಾಗು ಅದರ ಉಪ ಫೋಲ್ಡರ್ಅನ್ನು ಯಾವ ಸಮಯದಲ್ಲಿ ತೆರೆಯಲಾಗಿತ್ತು ಎಂಬ ಮಾಹಿತಿಯನ್ನು ಜ್ಞಾಪಕ ಇಟ್ಟುಕೊಳ್ಳದೆ ಇರುವ ಮೂಲಕ ಕೆಲಸ ಕಮ್ಮಿ ಕೊಟ್ಟು ವಿಂಡೊಸ್‌ಅನ್ನು ಚೂಟಿಯಾಗೊಸೋಣ
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್‌ನ ಕೆಳಗೆ ಐದು ಫೋಲ್ಡರ್‌ಗಳನ್ನು ಕಾಣಬಹುದು, ಇದರಲ್ಲಿ HKEY_LOCAL_MACHINE ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ
೪.ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ System ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೫.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ CurrentControlSet ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೬.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Control ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೭.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ FileSystem ಎಂಬ ಫೋಲ್ಡರ್‌ನ ಮೇಲೆ ಒಮ್ಮೆ ಕ್ಲಿಕ್ಕಿಸಿ.
೮.ಸ್ಟೇಟಸ್ ಬಾರ್‌ನಲ್ಲಿ “HKEY_LOCAL_MACHINE\System\CurrentControlSet\Control\FileSystem” ಎಂಬುದು ಡಿಸ್ಪ್ಲೆ ಆಗಿರಬೇಕು
೮.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.
೯.ಈ ಪಟ್ಟಿಯಲ್ಲಿ NtfsDisableLastAccessUpdate ಎಂಬ ರೆಜಿಸ್ಟರ್ ಇದೆಯೆ ಎಂಬುದನ್ನು ನೋಡಿ.
೧೦.ಅದು ಇದ್ದರೆ ಅದರ ಡೇಟಾ (೧) ಎಂಬುದಾಗಿದೆಯೆ ಎನ್ನುವುದನ್ನು ನೋಡಿ,()ರೊಳಗೆ ಸೊನ್ನೆ ಇರಕೂಡದು ಅದು "ಒಂದು" ಆಗಿರಬೇಕು.
೧೧.ಅದು ಸೊನ್ನೆ ಆಗಿದ್ದರೆ NtfsDisableLastAccessUpdateನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ, ಪುಟಿಯುವ ಪುಟಾಣಿ ವಿಂಡೊನಲ್ಲಿ "ಡೇಟಾ ಮೌಲ್ಯ" ೧(ಒಂದು) ಎಂದು ನಮೂದಿಸಿ ಸರಿ ಎನ್ನುವ ಗುಂಡಿಯನ್ನು ಒತ್ತಿ.
೧೨.ಈಗ NtfsDisableLastAccessUpdateನ ರೆಜಿಸ್ಟ್ರಿ ಡೇಟಾ ೧ ಎಂದು ಸೂಚಿಸುತ್ತಿರಬೇಕು.

ಅಕಸ್ಮಾತ್ “HKEY_LOCAL_MACHINE\System\CurrentControlSet\Control\FileSystem” ಎಂಬ ಹಾದಿಯಲ್ಲಿ NtfsDisableLastAccessUpdate ಎಂಬ ರೆಜಿಸ್ಟ್ರಿ ಇಲ್ಲವಿರಲಿಲ್ಲವೆಂದರೆ ಚಿಂತಿಸುವ ಅಗತ್ಯವಿಲ್ಲ,ಅದನ್ನು ನೀವೆ ಸೃಷ್ಟಿಸಿ ಬದಲಾಯಿಸಬೇಕು. ಸೃಷ್ಟಿಸುವ ವಿಧಾನ :

೧.“HKEY_LOCAL_MACHINE\System\CurrentControlSet\Control\FileSystem” ಎಂಬ ಹಾದಿಯಲ್ಲಿ ವಿಂಡೊನ ಬಲಭಾಗದಲ್ಲಿ ಕಾಣುವ ಖಾಲಿ ಜಾಗದಲ್ಲಿ ಬಲ ಕ್ಲಿಕ್ ಮಾಡಿ.
೨.ಪುಟಿಯುವ ಮೆನುವಿನಲ್ಲಿ "ಹೊಸ" ಎಂಬುವುದರೊಳಗೆ DWORD Value ಎಂಬುದನ್ನು ಆಯ್ಕೆ ಮಾಡಿ.
೩.ಮಾಡಿದ ನಂತರ New Value #1 ಎಂಬ ಹೆಸರಿನೊಂದಿಗೆ ಹೊಸದಾದ ರೆಜಿಸ್ಟ್ರಿ ಸೃಷ್ಟಿಯಾಗುತ್ತದೆ, ಬೇರೆ ಕಡೆ ಕ್ಲಿಕ್ ಮಾಡುವ ಮುನ್ನ ಅದಕ್ಕೆ NtfsDisableLastAccessUpdate ಎಂಬ ಹೆಸರು ಕೊಡಿ.(ಇಲ್ಲಿಂದಲೆ ನಕಲಿಸಿದರೆ ಒಳಿತು ಇಲ್ಲವಾದಲ್ಲಿ ಸಣ್ಣಾಕ್ಷರ ಹಾಗು ದೊಡ್ಡಾಕ್ಷರಗಳ ಗಮನ ಇಟ್ಟುಕೊಂಡು ನೀವೆ ಹೆಸರನ್ನು ನಮೂದಿಸಿ).
೪.ಮೂಲಭೂತವಾಗಿ ಈ ಹೊಸದಾಗಿ ಸೃಷ್ಟಿಯಾದ ರೆಜಿಸ್ಟ್ರಿಯ ಮೌಲ್ಯ ಸೊನ್ನೆಯಾಗಿರುತ್ತದೆ,ಅದನ್ನು ಒಂದು ಎಂದು ಬದಲಾಯಿಸಲು ಮೇಲೆ ಸೂಚಿಸಿದಂತೆ ಕ್ರಮಾಂಕ ೧೧ನ್ನು ನೋಡಿ.

ಇದು ಮಾಡಿದ ನಂತರ F5 ೨-೩ ಮೂರು ಬಾರಿ ಒತ್ತಿ :)

ವಿಂಡೊಸ್ ಸಜ್ಜಾಗುವ ಸಮಯವನ್ನು ಕಡಿಮೆಗೊಳಿಸುವುದು.
ವಿಂಡೋಸ್ ಸಜ್ಜಾಗಲು ಹಲವಾರು ಕಡತಗಳನ್ನು ಮಾಹಿತಿಗೋಸ್ಕರ ಹುಡುಕುತ್ತದೆ. ಸಾಮಾನ್ಯವಾಗಿ ಈ ಮಾಹಿತಿಯೆಲ್ಲವು ಅನೇಕ ಕಡತಗಳಲ್ಲಿ ಹಂಚಿ ಹೋಗಿರುತ್ತದೆ ಹಾಗೆ ಈ ಕಡತಗಳು ಸಹ ಮೆಮೊರಿಯಲ್ಲಿ ವಿವಿದೆಢೆ ಹರಡಿರುತ್ತದೆ. ಎಲ್ಲ ಕಡತಗಳನ್ನು ಶಿಸ್ತುಭದ್ಧವಾಗಿ ಹತ್ತಿರದಲ್ಲಿಟ್ಟರೆ ಹುಡುಕುವ ಸಮಯ ಕಡಿಮೆಗೊಂಡು ಸಜ್ಜಾಗುವುದು ಬೇಗನೆಯಾಗುತ್ತದೆ.

೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್‌ನ ಕೆಳಗೆ ಐದು ಫೋಲ್ಡರ್‌ಗಳನ್ನು ಕಾಣಬಹುದು, ಇದರಲ್ಲಿ HKEY_LOCAL_MACHINE ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ
೪.ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ SOFTWARE ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೫.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Microsoft ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೬.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Dfrg ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೭.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ BootOptimizeFunction ಎಂಬ ಫೋಲ್ಡರ್‌ನ ಮೇಲೆ ಒಮ್ಮೆ ಕ್ಲಿಕ್ಕಿಸಿ.
೮.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.
೯.ಈ ಪಟ್ಟಿಯಲ್ಲಿ Enable ಎಂಬ ರೆಜಿಸ್ಟರ್‌ಅನ್ನು ಆಯ್ಕೆ ಮಾಡಿ, ಅದರ ನೇಟಾ Y ಎಂದಾಗಿರಬೇಕು.
೧೦.ಅದು Y ಇರದೆ ಇದ್ದ ಪಕ್ಷದಲ್ಲಿ ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
೧೧.ಪುಟಿಯುವ ಬಾಕ್ಸ್‌ನಲ್ಲಿ ಡೇಟಾ ಮೌಲ್ಯವನ್ನು Y ಎಂದು ನಮೂದಿಸಿ, ಸರಿ ಎನ್ನುವ ಗುಂಡಿಯನ್ನು ಒತ್ತಿ.

ಮೆನುಗಳು ಆದಷ್ಟು ಬೇಗನೆ ಸ್ಪಂದಿಸುವ ಹಾಗೆ ಮಾಡುವುದು.
ನೀವು ಮೆನುಗಳ ಮೇಲೆ ಕ್ಲಿಕ್ ಮಾಡಿದಾಗ, ಆ ಕ್ಲಿಕ್ಕಿಗೆ ನಿಮ್ಮ ಕಂಪ್ಯೂಟರ್ ಎಷ್ಟು ಬೇಗನೆ ಸ್ಪಂದಿಸುತ್ತದೆ ಎಂಬುದನ್ನು ಒಂದು ಟೈಮರ್ ನ ಮೂಲಕ ನಿಯಂತ್ರಿಸಲಾಗುತ್ತದೆ. ಈ ಟೈಮರ್‌ನ ಮೌಲ್ಯ ಸಣ್ಣದ್ದಿದಷ್ಟು ಮೆನುಗಳು ಕ್ಲಿಕ್ಕಿಗೆ ಬೇಗನೆ ಸ್ಪಂದಿಸುತ್ತವೆ. ಥಿಯೋರಾಟಿಕಲಿ ಈ ಮೌಲ್ಯವನ್ನು ಸೊನ್ನೆ ಕೂಡ ಮಾಡಬಹುದು ಆದರೆ ಅದು ಕಾರ್ಯಚರಣೆಗೆ ಪೂರಕವಾಗಿರುವುದಿಲ್ಲ ಹಾಗಾಗಿ ಈ ಮೌಲ್ಯವನ್ನು ೧೦೦ ಎಂದು ಮಾಡಿದರೆ ಉತ್ತಮ. ಇದನ್ನು ಮಾಡಲು..
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ regedit ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ರೆಜ್ ಎಡಿಟ್ ತೆರೆದ ನಂತರ ಮೈ ಕಂಪ್ಯೂಟರ್‌ನ ಕೆಳಗೆ ಐದು ಫೋಲ್ಡರ್‌ಗಳನ್ನು ಕಾಣಬಹುದು, ಇದರಲ್ಲಿ HKEY_CURRENT_USER ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ
೪.ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Control Panel ಎಂಬ ಫೋಲ್ಡರ್‌ನ ಪಕ್ಕದಲ್ಲಿರುವ "+" ಚಿನ್ಹೆಯನ್ನು ಒಮ್ಮೆ ಕ್ಲಿಕ್ಕಿಸಿ.
೫.ನಂತರ ಅದರಳೊರಗಿರುವ ಉಪ-ಫೋಲ್ಡರ್‌ಗಳಲ್ಲಿ Desktop ಎಂಬ ಫೋಲ್ಡರ್‌ನ ಮೇಲೆ ಒಮ್ಮೆ ಕ್ಲಿಕ್ಕಿಸಿ.
೬.ಈಗ ವಿಂಡೋನ ಬಲಭಾಗದಲ್ಲಿ ನಿಮಗೆ ಕೆಲವು ರೆಜಿಸ್ಟ್ರಿ,ಅದರ ಬಗೆ ಹಾಗು ಅದರ ಡೇಟಾ ಮೌಲ್ಯಗಳ ಪಟ್ಟಿ ಕಾಣುತ್ತದೆ.
೭.ಈ ಪಟ್ಟಿಯಲ್ಲಿ MenuShowDelayಎಂಬ ರೆಜಿಸ್ಟರ್‌ಅನ್ನು ಆಯ್ಕೆ ಮಾಡಿ,ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
೮.ಪುಟಿಯುವ ಬಾಕ್ಸ್‌ನಲ್ಲಿ ಡೇಟಾ ಮೌಲ್ಯವನ್ನು ೧೦೦ ಎಂದು ನಮೂದಿಸಿ, ಸರಿ ಎನ್ನುವ ಗುಂಡಿಯನ್ನು ಒತ್ತಿ.

ಇಲ್ಲಿಗೆ ರೆಜಿಸ್ಟ್ರಿ ಸಂಬಂಧಿತ ಟ್ವೀಕ್‌ಗಳು ಮುಗಿದವು. ಮಿಕ್ಕ ಇತರೆ ವಿಧಾನದ ಟ್ವೀಕ್‌ಗಳತ್ತ ಗಮನ ಹಾಯಿಸೋಣ.

XP,DMA ವಿಧಾನದಲ್ಲಿ ಡೇಟಾ ಸ್ಥಳಾಂತರಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.
ಸಾಮಾನ್ಯಯವಾಗಿ ಹಾರ್ಡ್ ಡಿಸ್ಕ್ ಅಥವಾ ಸಿಡಿಗಳು ಡೇಟಾ ಸ್ಥಳಾಂತರಿಸುವುದಕ್ಕೆ ಎರಡು ಮಾರ್ಗವಿದೆ, ಮೊದಲನೆಯದು ನಿಧಾನವಾದ PIO ವಿಧಾನ ಎರಡನೆಯದು DMA ವಿಧಾನ.
ಕೆಲವು ಬಾರಿ ವೈರಾಣುಗಳ ಹಾವಳಿಯಿಂದ ಕಂಪ್ಯೂಟರ್‌ಗಳು ತಾವಾಗಿಯೆ DMA ವಿಧಾನದಿಂದ PIO ವಿಧಾನನಕ್ಕೆ ಸರಿದಿರುತ್ತದೆ.ಅದು ಯಾವ ವಿಧಾನದಲ್ಲಿದೆ ಎಂಬುದನ್ನು ನೋಡಲು..
೧.ಮೈ ಕಂಪ್ಯೂಟರ್ ಮೇಲೆ ಬಲ ಕ್ಲಿಕ್ಕಿಸಿ, ಗುಣಧರ್ಮಗಳನ್ನು ಆಯ್ಕೆ ಮಾಡಿ.
೨.ಶುರುವಾಗುವ ವಿಂಡೋನಲ್ಲಿ "ಹಾರ್ಡ್‌ವೇರ್" ಎಂಬ ಟ್ಯಾಬ್ ಅನ್ನು ಕ್ಲಿಕ್ಕಿಸಿ ಆಯ್ಕೆ ಮಾಡಿ.
೩.ಅದರಲ್ಲಿ ಕಾಣುವ "ಡಿವೈಸ್ ಕಾರ್ಯನಿರ್ವಾಹಕ" ಎಂಬ ಗುಂಡಿಯನ್ನು ಕ್ಲಿಕ್ಕಿಸಿ.
೪.ಆಗ ಮತ್ತೊಂದು "ಡಿವೈಸ್ ಕಾರ್ಯನಿರ್ವಾಹಕ" ವಿಂಡೊ ಶುರುವಾಗುತ್ತದೆ.
೫.ಈ ವಿಂಡೊನಲ್ಲಿ "IDE ATA/ATAPI Controllers" ಎಂಬುದು ಕಾಣುತ್ತದೆ, ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.
೬.Primary IDE Channel ಹಾಗು Secondary IDE Channel ಎಂಬುದು ಇರುತ್ತವೆ. ಇಲ್ಲಿ ಬೇರೆ Controllers ಸಹ ಪಟ್ಟಿಯಾಗಿರಬಹುದು ಆದರೆ ನಮ್ಮ ಗಮನ ಇಲ್ಲಿ ಸೂಚಿಸಿದ ಎರಡು Channelನ ಮೇಲೆ ಮಾತ್ರ.
೭. ಈಗ Primary IDE Channelಮೇಲೆ ಬಲ ಕ್ಲಿಕ್ ಮಾಡಿ ಗುಣಧರ್ಮ ಆಯ್ಕೆ ಮಾಡಿ.
೮.ಇದರೊಳಗೆ "ಮುಂದುವರಿದ ಸೆಟ್ಟಿಂಗ" ಎಂಬ ಟ್ಯಾಬ್‌ಅನ್ನು ಆಯ್ಕೆ ಮಾಡಿ.
೯.ಇದರೊಳಗೆ ಸ್ಥಳಾಂತರಿಸುವ ವಿಧ ಎಂಬ ಕೆಳಬೀಳುವ ಮೆನು DMA if Available ಎಂಬುದು ಆಯ್ಕೆ ಆಗಿರಬೇಕು ಅದು ಹಾಗೆ ಇರದೆ PIO Only ಅಂತ ಇದ್ದಲ್ಲಿ ಅದನ್ನು ಬದಲಾಯಿಸಿ.ಸರಿ ಎಂಬ ಗುಂಡಿಯನ್ನು ಒತ್ತಬೇಕು
೧೦.ಇದೆ ರೀತಿಯಾಗಿ Secondary IDE Channel ಅನ್ನು ಬದಲಾಯಿಸಿದ/ಪರಿಶೀಲಿಸದ ನಂತರ "ಡಿವೈಸ್ ಕಾರ್ಯನಿರ್ವಾಹಕ" ವಿಂಡೊ ಮುಚ್ಚಿರಿ.

ಸ್ವಾಪ್ ಫೈಲ್ ಕಾರ್ಯ ದಕ್ಷತೆಯನ್ನು ಹೆಚ್ಚಿಸಿವುದು.
ಈ ಟ್ವೀಕ್ ಮಾಡುವುದರಿಂದ ಲಭ್ಯವಿರುವ ನಿಮ್ಮ RAMನ ಕೊನೆಯ ಮೆಮೊರಿಯು ಸಹ ಉಪಯುಕ್ತವಾಗಿ ಬಳಸಲಾಗುವುದು, ಈ ಟ್ವೀಕ್ ಅತ್ಯಂತ ಪರಿಣಾಮಕಾರಿ ಕೂಡ!!
೧.start->run ಎಂಬುದನ್ನು ಕ್ಲಿಕ್ಕಿಸಿ
೨.ಪುಟಿಯುವ ಇನ್ಪುಟ್ ಬಾಕ್ಸ್ ನಲ್ಲಿ msconfig ಎಂದು ಟೈಪಿಸಿ "ಸರಿ" ಗುಂಡಿಯನ್ನು ಒತ್ತಿ.
೩.ನಂತರ ಪುಟಿಯುವ ವಿಂಡೊನಲ್ಲಿ System.ini ಎಂಬ ಟ್ಯಾಬ್‌ಅನ್ನು ಆಯ್ಕೆ ಮಾಡಿ.
೪.ಅದರೊಳಗೆ ಪಟ್ಟಿಯಾಗಿರುವ 386enh ಎಂಬುದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ.(ಆಗ ಈ ಆಯ್ಕೆ ನೀಲಿ ಬಣ್ಣದಿಂದ ಹೈಲೈಟ್ ಆಗಬೇಕು)
೫.ನಂತರ ಅಲ್ಲೆ ಲಭ್ಯವಿರುವ "ಹೊಸದು" ಎಂಬ ಗುಂಡಿಯನ್ನು ಒತ್ತಿ .
೬. ತತ್‌ಕ್ಷಣವೆ 386enh ಕೆಳಗೆ ಖಾಲಿಯಾದ ಬಾಕ್ಸ್ ಒಂದು ಸೃಷ್ಟಿಯಾಗುತ್ತದೆ, ಅದರೊಳಗೆ ConservativeSwapfileUsage =1 ಎಂದು ಟೈಪಿಸಿ (ಇಲ್ಲಿಂದ ನಕಲು ಮಾಡಿ ಅಂಟಿಸಿದರೆ ಉತ್ತಮ, ಸಣ್ಣಾಕ್ಷರ ದೊಡ್ಡಾಕ್ಷರದೆಡೆ ಗಮನವಿರಲಿ!!)
೭.ನಂತರ "ಸರಿ" ಎನ್ನುವುದನ್ನು ಕ್ಲಿಕ್ಕಿಸಿ.
೮.ನಂತರ ಕಂಪ್ಯೂಟರ್‌ಅನ್ನು "ಪುನರ್ಶುರು"ಮಾಡಿ.

ಇಷ್ಟೆಲ್ಲ ಟ್ವೀಕ್‌ಗಳನ್ನು ಮಾಡಿಯಾದ ಮೇಲೆ ಕಟ್ಟಕಡೇಯದಾಗಿ(ನನಗೆ ತಿಳಿದಿರುವಂತೆ)ಮೆಮ್ಮೊರಿಯನ್ನು ನಿರ್ವಹಿಸಲು Cacheman ಎಂಬ ತಂತ್ರಾಂಶವನ್ನು ಸ್ಥಾಪಿಸುವುದು. ತಂತ್ರಾಂಶವನ್ನು ಈ ಕೊಂಡಿಯ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.
http://sites.google....

ನಿಮ್ಮ ಕಂಪ್ಯೂಟರ್‌ಗೆ ಉಳಿಸಿಕೊಂಡಾದ ಮೇಲೆ ಅದರೊಳಗಿರುವ ರೆಜಿಸ್ಟರ್ ಸಂಖ್ಯೆಯನ್ನು cacheman ಸ್ಥಾಪಿಸಿ ಆದಮೇಲೆ ನಾಮೂದಿಸಲು ಮರೆಯಬೇಡಿ.(help->Enter CustomerID)

೧.cacheman ಸ್ಥಾಪಿಸಿ ಆದಮೇಲೆ ಅದನ್ನು ಶುರು ಮಾಡಿ,"ಜಾದುಗಾರನನ್ನು ತೋರು" ಎಂಬ ಮೆನುವನ್ನು ಕ್ಲಿಕ್ಕಿಸಿ.
೨.ಇದರೊಳಗೆ "ಎಲ್ಲಾ" ಎಂಬುದನ್ನು ಆಯ್ಕೆ ಮಾಡಿ.

೩."disk cache" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ,ಇಲ್ಲಿ ಆಯ್ಕೆ ಮಾಡಲು ಏನು ಇರುವುದಿಲ್ಲಾ ಹಾಗಾಗಿ "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೪.ಈಗ ಕಾಣುವ ನಾಲ್ಕು ಆಯ್ಕೆಗಳಲ್ಲಿ "ಕಡತ ಹಂಚಿಕೊಳ್ಳುವುದನ್ನು ಅತ್ಯಂತ ಹೆಚ್ಚಾಗಿ ಚೊಕ್ಕಮಾಡು" ಎಂಬುದನ್ನು ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ಈಗ
೫."Icon cache" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.
೬.ಈಗ ಕಾಣುವ ಎರಡು ಆಯ್ಕೆಗಳಲ್ಲಿ "ಅತ್ಯಂತ ಹೆಚ್ಚಾದ Icon cacheನ ಮೂಲಭೂತವಾದ ಗಾತ್ರವನ್ನು ಸೆಟ್ ಮಾಡು" ಎಂಬುದನ್ನು ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ಈಗ
೭."RAM" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.
೮.ಈಗ ಕಾಣುವ ಎರಡು ಆಯ್ಕೆಗಳಲ್ಲಿ "DLLಗಳನ್ನು ಮೆಮೊರಿಯಿಂದ ಇಳಿಸು" ಎಂಬುದನ್ನು ಮಾತ್ರ ಆಯ್ಕೆ ಮಾಡಿ "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ಈಗ
೯."Tweaks" ಎಂಬ ವಿಂಡೊ ಮೊದಲ ಬಾರಿಗೆ ಶುರುವಾಗುತ್ತದೆ.
೧೦.ಈಗ ಕಾಣುವ ಎರಡು ಆಯ್ಕೆಗಳಲ್ಲಿ "ಹಿರಿದಾದ IO pagelock ಮಿತಿ ಮೌಲ್ಯ" ಎಂಬುದನ್ನು ಆಯ್ಕೆ ಮಾಡಿ.
೧೧.ಕೆಳಗೆ "Disable NTFS last access update" ಎಂಬುದನ್ನು ಟಿಕ್ ಮಾಡಿ, "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೧೨.ಈ ವಿಂಡೊನಲ್ಲಿ ಕಾಣುವ ಯಾವದನ್ನು ಸಹ ಆಯ್ಕೆ ಮಾಡದೆ "ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೧೩.ಈ ವಿಂಡೊನಲ್ಲಿ ಕೆಳಗಡೆ ಇರುವ "ಮೆನು ತೋರಲು ತಡಮಾಡುವುದು" ಎಂಬುದನ್ನು ಆಯ್ಕೆ ಮಾಡಿ,"ಮುಂದಿನ"ಎಂಬುದರ ಮೇಲೆ ಕ್ಲಿಕ್ಕಿಸಿ.
೧೪.ಈ ವಿಂಡೊನಲ್ಲಿರುವುದನ್ನು ಆಯ್ಕೆ ಮಾಡಿ, "ಮುಗಿಸು"ಎಂಬುದರ ಮೇಲೆ ಕ್ಲಿಕ್ಕಿಸಿ.

ನಂತರ "ಕಡತ" ಮೆನುಗೆ ಹೋಗಿ,"ಸೆಟ್ಟಿಂಗ್‌ಗಳನ್ನು ಉಳಿಸಿ"ಎಂಬುದನ್ನು ಕ್ಲಿಕ್ಕಿಸಿ..
ನಂತರ cacheman ಅನ್ನು ಮುಚ್ಚಿ, ಅದು ಪುನರ್ಶುರು ಮಾಡಬೇಕೆ ಎಂಬುದನ್ನು ಕೇಳುತ್ತದೆ, ಹೌದು ಎಂದು ಕ್ಲಿಕ್ಕಿಸಿ.

ಇಲ್ಲಿಗೆ ಟ್ವೀಕಾಯಣ ಸಮಾಪ್ತಿ(ನನ್ ಕಡೆಯಿಂದ), ನಿಮ್ಗೆ ಇನ್ನಷ್ಟು ತಿಳಿದು ಬಂದಲ್ಲಿ ದಯವಿಟ್ಟು ಹಂಚಿಕೊಳ್ಳಿ.

ತಂತ್ರಾಂಶ - Software
ಗುಣ ಧರ್ಮ -Properties
ಕಡತ - File
ಮರುಸ್ಥಾಪನಾ ಬಿಂದು - System restore
ರೆಜಿಸ್ಟ್ರಿ ಸಂಕಲನ - Registry editor
ರಫ್ತು - Export
ರೆಜಿಸ್ಟ್ರಿ ರಫ್ತು ಕಡತ - Registry export file
ರಫ್ತು ವ್ಯಾಪ್ತಿ - Export Range
ಎಲ್ಲಾ - All
ಕಡತದ ಹೆಸರು - File name
ಉಳಿಸು - Save
ಅಮದು -Import
ತೆರೆ - Open
ಗುಂಡಿ - Button
ಸರಿ - OK
ಡೇಟಾ ಮೌಲ್ಯ - Data Value
ಮೂಲಭೂತ - Default
ಸಜ್ಜು - Boot
ಸ್ಪಂದಿಸುವುದು - Response
ಸ್ಥಳಾಂತರ - Transfer
ಡಿವೈಸ್ ಕಾರ್ಯನಿರ್ವಾಹಕ - Device manager
ಕಾರ್ಯ ದಕ್ಷತೆ - Performance
ಹೊಸದು-New
ಪುನರ್ಶುರು- Restart
ಜಾದುಗಾರನನ್ನು ತೋರು - Show wizard
ಮುಂದಿನ - Next
ಕಡತ ಹಂಚಿಕೊಳ್ಳುವುದನ್ನು ಅತ್ಯಂತ ಹೆಚ್ಚಾಗಿ ಚೊಕ್ಕಮಾಡು - Maximise throughput for file sharing
ಮುಗಿಸು - Finish
ಅತ್ಯಂತ ಹೆಚ್ಚಾದ Icon cacheನ ಮೂಲಭೂತವಾದ ಗಾತ್ರವನ್ನು ಸೆಟ್ ಮಾಡು - Set maximum default size for Icon cache
DLLಗಳನ್ನು ಮೆಮೊರಿಯಿಂದ ಇಳಿಸು - Unload DLL from memory
ಹಿರಿದಾದ IO pagelock ಮಿತಿ ಮೌಲ್ಯ - Largest IO page lock limit value
ಮೆನು ತೋರಲು ತಡಮಾಡುವುದು - Menu show delay
ಸೆಟ್ಟಿಂಗ್‌ಗಳನ್ನು ಉಳಿಸಿ - Save settings

ಮುಗಿಯಿತು

ಪ್ರಸಾದ್

ಅಳುತ್ತಿರುವ ನಿಮ್ಮ ವಿಂಡೊಸ್‌ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಭಾಗ ೨

on April 22, 2009

ಎರಡನೆಯ ಭಾಗ ಶುರುವಾಯಿತು, ವಿಂಡೊಸ್‌ಅನ್ನು ಮತ್ತಷ್ಟು ಚುರುಕುಗೊಳಿಸಲು ಸಜ್ಜಾಗಿ..

ಡಿಸ್‌ಪ್ಲೆ ಸೆಟ್ಟಿಂಗ್ಅನ್ನು ಆಪ್ಟಿಮೈಸ್‌ಗೊಳಿಸುವುದು.

ನಿಮ್ಮ ವಿಂಡೊಸ್ ಎಕ್ಸ್.ಪಿ ನೋಡಲು ಆಕರ್ಷಕವಾಗಿ ಕಾಣಬಹುದು ಆದರೆ ಕಾರ್ಯಸಾಧನೆಯಲ್ಲಿ ಮಂದಗತಿಯಾದ್ರೆ ಮೈ ಯಾರಿಗ್ತಾನೆ ಉರಿಯೋಲ್ಲಾ?
ವಿಂಡೊಸ್‌ "ಸಿಸ್ಟಂ ರಿಸೋರ್ಸ್"ಅನ್ನು(ಮೆಮೊರಿ,cpuಕಾರ್ಯಸಾಧನೆ,ಕ್ಯಾಷ್ ಮೆಮೊರಿ,ರೆಜಿಸ್ಟರ್ಸ್,..) ಹೆಚ್ಚಾಗಿ ಗಣಕತೆರೆ ಬದಲಾದಾಗಲೆ
ನುಂಗುವುದು. ಯಾಕಂದರೆ ಪ್ರತಿ ಸಣ್ಣ ಕಾರ್ಯ ಪ್ರತಿಫಲಿಸಬೇಕೆಂದರೂ ಸಹ ಇಡಿ ಗಣಕತೆರೆಯನ್ನು ಪುನರ್ರಚಿಸಬೇಕಾಗುತ್ತದೆ ಈ ಕಾರ್ಯಕ್ಕೆ "ಸಿಸ್ಟಂ
ರಿಸೋರ್ಸ್" ಅಗತ್ಯ ಬೀಳುತ್ತದೆ ಹಾಗಾಗಿ cpuಗೆ ಕಮ್ಮಿ ಕೆಲಸ ಕೊಡುವುದರ ಮೂಲಕ ಕಂಪ್ಯೂಟರ್ ಹೆಚ್ಚು ವೇಗದಿಂದ ಅಗತ್ಯ ಕಾರ್ಯ ನಿರ್ವಹಿಸುವುದಕ್ಕೆ
ಸಹಾಯ ಮಾಡಬಹುದು. ಹೀಗೆ ಕಾರ್ಯ ತೀಕ್ಷ್ಣಗೊಳಿಸಲು ...

೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.

೨."ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

೩.ನಂತರ ಅದರಲ್ಲಿ "ಕಾರ್ಯ ದಕ್ಷತೆ"ಗೆ ಸಂಬಂಧಿತ "ಸೆಟ್ಟಿಂಗ್‌ಗಳು" ಗುಂಡಿಯನ್ನು ಒತ್ತಿ .

೪."ದೃಷ್ಟಿ ಸಂಬಂಧಿತ ಪರಿಣಾಮ "ಸಂಬಂಧಿತ ಆಯ್ಕೆಯ ಟ್ಯಾಬ್ ಅನ್ನು ಆಯ್ಕೆಮಾಡಿ.

೫.ಇದರೊಳಗೆ ನಿಮಗೆ ೪ ಆಯ್ಕೆಯಿರುತ್ತದೆ

ಅ.ಮೊದಲನೆಯ ಆಯ್ಕೆ,ನೀವು ತಲೆ ಕೇಡಿಸಿಕೊಳ್ಳದೆ ಹಾಲಲ್ಲಾದ್ರು ಹಾಕು ನೀರಲ್ಲಾದ್ರು ಹಾಕು ಅಂತ ವಿಂಡೋಸ್‌ಗೆ ನಿರ್ಧಾರವನ್ನು ಬಿಡುವುದು.ಇದನ್ನು ಆಯ್ಕೆ ಮಾಡಿಕೊಂಡ್ರೆ,ಶಿವನೆ ಶಂಭುಲಿಂಗ!!! ನಿಮ್ಮ ಕಂಪ್ಯೂಟರ್ ಅಳೊಕ್ಕೆ ಶುರು ಮಾಡ್ತು ಅನ್ಕೊಳ್ಳಿ.

ಆ.ಎರಡನೆಯ ಆಯ್ಕೆ, ಸುಂದರವಾಗಿ ಕಂಡರೆ ಸಾಕು ಕಾರ್ಯಕ್ಷಮತೆ ಸುಮಾರಿದ್ರು ಪರ್ವಾಗಿಲ್ಲ ಅಂತ ನಿರ್ಧರಿಸಿದ್ರೆ ಇದನ್ನ ಆಯ್ಕೆ ಮಾಡಿಕೊಳ್ಳಬಹುದು.

ಇ.ಮೂರನೆಯ ಆಯ್ಕೆ, ಕಾರ್ಯಕ್ಷಮತೆ ಸಾಕು ಸೌಂದರ್ಯ ಸುಮಾರಿದ್ರು ಪರ್ವಾಗಿಲ್ಲ ಅಂತ ನಿರ್ಧರಿಸಿದ್ರೆ ಇದನ್ನ ಆಯ್ಕೆ ಮಾಡಿಕೊಳ್ಳಬಹುದು.

ಈ.ನಾಲ್ಕನೆಯ ಆಯ್ಕೆ, ನನ್ನ ಕಂಪ್ಯೂಟರ್ ಹೇಗೆ ಕೆಲಸ ಮಾಡ್ಬೇಕು ಎಷ್ಟು ಸುಂದರವಾಗಿ ಕಾಣಬೇಕು ಅಂತ ಯೋಚಿಸಿ ಎಲ್ಲಾ ನಿರ್ಧಾರ ನಾನೆ ತೊಗೊತೀನಿ ಎಂದರೆ ಇದನ್ನ ಆಯ್ಕೆ ಮಾಡಿ ಏಕೆಂದರೆ ಸುಂದರವಾಗಿ ಕಾಣಿಸುವುದು ತತ್ಪರಿಣಾಮವಾಗಿ ಕಂಪ್ಯೂಟರ್ ಕಾರ್ಯಕ್ಷಮತೆ ಮೇಲೆ ಹಿಡಿತ ಸಾಧಿಸುವುದು ಈ ಆಯ್ಕೆಯಿಂದ ಮಾತ್ರ ಸಾಧ್ಯ. ಈ ಆಯ್ಕೆಗಳಲ್ಲಿ ಕಮ್ಮಿ ಆಯ್ಕೆಗಳು ಟಿಕ್ ಆದಲ್ಲಿ ಸೌಂದರತೆ ಹಾಗು ಕಾರ್ಯಕ್ಷಮತೆ ಮಿಶ್ರವಾಗುತ್ತದೆ. ನಿರ್ಧಾರ ನಿಮಗೆ ಬಿಟ್ಟಿದ್ದು, ನನ್ನ ಕಂಪ್ಯೂಟರ್‍ನಲ್ಲಿ ಕೇವಲ ಎರಡು ಮಾತ್ರ ಆಯ್ಕೆ ಮಾಡಿಕೊಂಡಿದ್ದೇನೆ (ಕೆಳಗಿನಿಂದ ೨ ಹಾಗು ೩ನೆಯದು - use common task in folders ಹಾಗು use drop shadows for icon labels on desktop) ಮೆಮೊರಿ ವಿಚಾರ ಬಂತೆಂದರೆ ಸಕ್ಕಥ್ ಜಿಪುಣ್ರಾಗೊದ್ರಲ್ಲೆ ಜಾಣತನ ಇದೆ :)

ಪೇಜ್‌ಫೈಲ್ ಅನ್ನು ಆಪ್ಟಿಮೈಸ್‌ಮಾಡುವುದು

ಪೇಜ್‌ಫೈಲ್ ಎನ್ನುವುದು ಮೆಮೊರಿಗೆ ಸಂಬಂಧಿತ ವಿಚಾರ,ಈ ಮೆಮೊರಿಯ ಗಾತ್ರ ಎಷ್ಟಿರಬೇಕೆಂದು ಕಂಪ್ಯೂಟರ್‍ನ ಬದಲು ನಾವೆ ನಿರ್ಧರಿಸಿದರೆ ಅದಕ್ಕೆ ಕಮ್ಮಿ ಕೆಲಸ ಕೊಟ್ಟಂತೆ ಹಾಗಾಗಿ ಅದರ ಕೆಲಸ ಸುಲಭವಾಗಿ ಬೇರೆ ಕೆಲಸಗಳ ಕಡೆ ಗಮನಹರಿಸಿ ಕಾರ್ಯವನ್ನು ತ್ವರಿತವಾಗಿ ಮುಗಿಸುತ್ತವೆ. ಪೇಜ್‌ಫೈಲ್ ಗಾತ್ರವನ್ನು ಹೊಂದಿಸುವ ಮುನ್ನ ಕಂಪ್ಯೂಟರ್‍ನ RAM ಗಾತ್ರ ಎಷ್ಟು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಇದನ್ನು ತಿಳಿಯಲು ನಾವು

೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.

೨. ಅದರಲ್ಲಿ "ಸಾಮಾನ್ಯ" ಎಂಬ ಟ್ಯಾಬ್‌ಅನ್ನು ಕ್ಲಿಕ್ಕಿಸಿ.

೩. ನಿಮಗೆ "ಬೆಂಬಲ ಮಾಹಿತಿ" ಎನ್ನುವ ಗುಂಡಿ ಕಾಣುತ್ತದೆ ಅದರ ಮೇಲ್ಗಡೆ ನೀವು ಬಳಸುತ್ತಿರುವ ಕಂಪ್ಯೂಟರ್‍ನ RAM ಗಾತ್ರ ಎಷ್ಟು ಎಂಬುದನ್ನು ತಿಳಿಸಲಾಗಿರುತ್ತದೆ. ಇದೆ ನಮಗೆ ಬೇಕಾಗಿರುವ ಮಾಹಿತಿ :)

ಈಗ ಪೇಜ್‌ಫೈಲ್ ಗಾತ್ರವನ್ನು ಹೊಂದಿಸಲು ನಾವು ಮಾಡಬೇಕಾಗಿರುವ ಕೆಲಸ...

೧."ಮೈ ಕಂಪ್ಯೂಟರ್" ಮೇಲೆ ಬಲ ಕ್ಲಿಕ್ ಮಾಡಿ "ಗುಣಧರ್ಮಗಳು" ಕ್ಲಿಕ್ಕಿಸಿ.

೨."ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

೩.ನಂತರ ಅದರಲ್ಲಿ "ಕಾರ್ಯ ದಕ್ಷತೆ"ಗೆ ಸಂಬಂಧಿತ "ಸೆಟ್ಟಿಂಗ್‌ಗಳು" ಗುಂಡಿಯನ್ನು ಒತ್ತಿ .

೪.ಪುನಹ ಅದರೊಳಗಿರುವ "ಮುಂದುವರಿದ " ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

೫.ಇದರೊಳಗಿರುವ ಮೂರು ವಿಭಾಗಗಳಲ್ಲಿ "ವರ್ಚುಯಲ್ ಮೆಮೊರಿ" ಎನ್ನುವುದರಲ್ಲಿ ಲಭ್ಯವಿರುವ "ಬದಲಿಸು" ಎಂಬ ಗುಂಡಿಯನ್ನು ಒತ್ತಿರಿ.

೬.c drive ಅನ್ನು ಒಂದು ಬಾರಿ ಕ್ಲಿಕ್ ಮಾಡಿ (ಇದರ ಸೂಚ್ಯವಾಗಿ ಅದರ ಮೇಲೆ ನೀಲಿ ಪಟ್ಟಿಯಿಂದ ಕಾಣುತ್ತದೆ)

೭.ನಂತರ ಕೆಳಗೆ "ಆಯ್ಕೆ ಮಾಡಲಾದ ಡ್ರೈವ್ ನ ಪೇಜ್‍ಫೈಲ್‌ನ ಗಾತ್ರ" ಎಂಬ ವಿಭಾಗವಿರುತ್ತದೆ
ಅದರಲ್ಲಿ ಮೂರು ಆಯ್ಕೆಗಳಿರುತ್ತವೆ

ಅ.ನಿಗದಿಪಡಿಸಿದ ಗಾತ್ರ

ಆ.ಕಂಪ್ಯೂಟರ್ ನಿಭಾಯಿಸುವ ಗಾತ್ರ

ಇ.ಪೇಜ್ ಫೈಲ್ ಅವಶ್ಯಕವಿಲ್ಲ.

ನಿಮ್ಮ RAM ಗಾತ್ರ ೫೧೨ MBಗಿಂತ ಕಿರಿದಾಗಿದ್ದರೆ (೫೦೦ಕ್ಕಿಂತ ಕಿರಿದು - ಅಂದ್ರೆ ೧೨೮MB ಅಥವಾ ೨೫೬MB ) ಎರಡನೆಯದನ್ನು ಆಯ್ಕೆ ಮಾಡಿ.

ನಿಮ್ಮ RAM ಗಾತ್ರ ೫೧೨ MBಗಿಂತ ಹಿರಿದಾಗಿದ್ದರೆ (೪೦೦ಕ್ಕಿಂತ ಹಿರಿದಾಗಿದ್ದರೆ ಸಾಕು) ಮೊದಲನೆಯದನ್ನು ಆಯ್ಕೆ ಮಾಡಿ.

"ನಿಗದಿಪಡಿಸಿದ ಗಾತ್ರ"ವನ್ನು ನೀವು ಆಯ್ಕೆ ಮಾಡುವುದರ ಮೂಲಕ ಗಾತ್ರವನ್ನು ನಿರ್ಧರಿಸುವ ಮೊತ್ತ ನಿಮ್ಮದಾಗುತ್ತದೆ. ನಿಮ್ಮ RAM ಗಾತ್ರ ಎಷ್ಟಿರುತ್ತದೆಯೊ ಅದೆ ಮೊತ್ತವನ್ನು "ಆರಂಭದ ಗಾತ್ರ"(MB): ದಲ್ಲಿ ನಮೂದಿಸಬೇಕಾಗುತ್ತದೆ. "ಗರಿಷ್ಟ ಗಾತ್ರ"(MB): ದಲ್ಲಿ ಅದರ ಎರಡರಷ್ಟು ಮೊತ್ತವನ್ನು ನಮೂದಿಸಿ. ನಮೂದಿಸಿದ ನಂತರ "ಸರಿ" ಎನ್ನುವುದನ್ನು ಒತ್ತಿ, ನಂತರ "ಅನ್ವಯಿಸು" ಎನ್ನುವುದನ್ನು ಒತ್ತಿ, ನಂತರ "ಸರಿ" ಎನ್ನುವುದನ್ನು ಒತ್ತಿ. ಮತ್ತೆ "ಮುಂದುವರಿದ " ಟ್ಯಾಬ್ ಕಾಣಿಸಿರುತ್ತದೆ ಇಲ್ಲು ಸಹ "ಅನ್ವಯಿಸು" ಎನ್ನುವುದನ್ನು ಒತ್ತಿ, ನಂತರ "ಸರಿ" ಎನ್ನುವುದನ್ನು ಒತ್ತಿದರೆ ಪೇಜ್‌ಫೈಲ್ ಅನ್ನು ಟ್ವೀಕಿಸಿದಂತೆಯೆ ಸರಿ :)

ಡಿಲೀಟ್ ಕಾರ್ಯವನ್ನು ಮಾನ್ಯ ಮಾಡದೆ ಕಾರ್ಯಸಾಧಿಸುವುದು:

ಇದು ಕಂಪ್ಯೂಟರ್‌ನ ಕಾರ್ಯನಿರ್ವಹಣೆಗೆ ಸಂಬಂಧಿತವಲ್ಲದ್ದಿದ್ದರು, ನಿಮಗು ಅನ್ಸುತ್ತೆ "ಒಹ್, ಎಷ್ಟ್ ಬೇಗ ಆಗೋಯ್ತು!!!" ಅಂತ :)
ಈ ಥರ ಅನಿಸಬೇಕು ಅಂದ್ರೆ

೧.ಪು.ಬು ಮೇಲೆ ಬಲ ಕ್ಲಿಕ್ ಮಾಡಿ ನಂತರ ಅದರಲ್ಲಿ ಗುಣಧರ್ಮಗಳನ್ನು ಕ್ಲಿಕ್ ಮಾಡಿ

೨."ಡಿಲೀಟ್ ಮಾನ್ಯ ಮಾಡುವ ಡೈಲಾಗ್ ತೋರು"ಎಂಬ ಚೆಕ್ ಬಾಕ್ಸ್ ಇರುತ್ತದೆ ಅದರಲ್ಲಿ ಟಿಕ್ ಗುರುತು ಇದ್ದಲ್ಲಿ ಆ ಟಿಕ್ ಗುರುತಿನ ಮೇಲೆ ಒಂದು ಬಾರಿ ಕ್ಲಿಕ್ ಮಾಡಿ ತೆಗೆಯಿರಿ.

೩.ನಂತರ "ಸರಿ" ಎನ್ನುವುದನ್ನು ಒತ್ತಿ.

ಅಪ್ಪಿ ತಪ್ಪಿ ನೀವೇನಾದ್ರು ಅಗತ್ಯವಿರುವ ಕಡತವನ್ನು ಅಕಸ್ಮಾತಾಗಿ ಡಿಲೀಟ್ ಮಾಡಿದಿರಿ ಅನ್ಕೊಳ್ಳಿ ಹೆದರುವ ಅವಶ್ಯಕತೆಯಿಲ್ಲ, ಆ ಕಡತ ನಿಮಗೆ ಪು.ಬುವಿನಲ್ಲಿ ಲಭ್ಯವಿರುತ್ತದೆ. ಅಲ್ಲಿ ಹೋಗಿ ಆ ಕಡತದ ಮೇಲೆ ಬಲ ಕ್ಲಿಕ್ ಮಾಡಿ ಮರುಸ್ಥಾಪಿಸಿದರೆ ಆಯಿತು, ತೊಂದರೆ ಇಲ್ಲ. ಅದು ಯಥಾಸ್ಥಾನದಲ್ಲಿ ಪ್ರತ್ಯಕ್ಷವಾಗುತ್ತದೆ.

Custom size - ನಿಗದಿಪಡಿಸಿದ ಗಾತ್ರ
Properties - ಗುಣಧರ್ಮಗಳು
Advanced - ಮುಂದುವರಿದ
Performance - ಕಾರ್ಯ ದಕ್ಷತೆ
General - ಸಾಮಾನ್ಯ
Initial size - ಆರಂಭದ ಗಾತ್ರ
Maximum size - ಗರಿಷ್ಟ ಗಾತ್ರ
Change - ಬದಲಿಸು
Apply - ಅನ್ವಯಿಸು
OK - ಸರಿ
Recycle bin - ಪು.ಬು (ಪುನರ್ಬಳಕೆ ಬುಟ್ಟಿ)
Restore - ಮರುಸ್ಥಾಪಿಸಿ
Display Delete Confirmation Dialog - ಡಿಲೀಟ್ ಮಾನ್ಯ ಮಾಡುವ ಡೈಲಾಗ್ ತೋರು

ಮುಂದುವರೆಯುವುದು....

ಅಳುತ್ತಿರುವ ನಿಮ್ಮ ವಿಂಡೊಸ್‌ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಭಾಗ ೧

on April 20, 2009

ಲಿನಕ್ಸ್ ಇಂದಿನ ಪೀಳಿಗೆಯ OS ಆಗಿದ್ರು ಸಹ ಲಿನಕ್ಸ್‌ಗೆ ಹೊಂದಿಕೊಳ್ಳುವವರೆಗು ವಿಂಡೊಸ್‌ ಜೊತೆ ಗುದ್ದಾಡದೆ ಗತ್ಯಂತರವಿಲ್ಲ.
ವಿಂಡೊಸ್‌ ಕಂಪ್ಯೂಟರ್ ಗಳ ದೊಡ್ಡ ತಲೆನೋವ್ವುಗಳೇನೆಂದರೆ
೧. ಶುರು ಮಾಡಿದಾಗ ಬೀಪ್ ಅಂತ ಶಬ್ದ ಮಾಡಿದ ಮೇಲು ನಿಧಾನವಾಗಿ (೫-೧೦ ನಿಮಿಷದ ನಂತರ) ಗಣಕ ತೆರೆ ಕಂಡು ಬರುವುದು.
೨. ಷಟ್ ಡೌನ್ ಮಾಡಿದಾಗಲು ಸಹ ಕಾರ್ಯ ಸ್ಥಗಿತವಾಗುವುದಕ್ಕೆ ೫-೧೦ ನಿಮಿಷ ತೆಗೆದುಕೊಳ್ಳುವುದು, ಕೆಲವು ಕಂಪ್ಯೂಟರ್ ಗಳು ೧೫ ನಿಮಿಷ ತೆಗೆದುಕೊಳ್ಳುವುದು ಉಂಟು.
೩. ಮೌಸ್ ಬಲ-ಕ್ಲಿಕ್ ಮಾಡಿದಾಗ ಆಗಲಿ ಅಥ್ವಾ ಯಾವುದೆ ಕೆಲಸ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಾಗಲಿ.
೪. ಯಾವುದಾದ್ರು ವರ್ಡ್ ಕಡತ ತೆರೆಯಲು ನಿಧಾನವಾಗುವುದು.
೫. ಪ್ರೋಗ್ರಾಂಗಳು ಶುರು ಆಗುವುದು ನಿಧಾನವಾಗುವುದಾಗಲಿ.
೬. ಹುಡುಕುವಾಗ ಫಲಿತಾಂಶಗಳು ನಿಧಾನವಾಗಿ ಕಾಣುವುದಾಗಲಿ..

ಮುಂತಾದ ಅನೇಕ ಸಮಸ್ಯೆಗಳು ನಿಮ್ಮ ಸಹನೆಯನ್ನು ಪರೀಕ್ಷಿಸಿದರೆ ವಿಂಡೊಸ್‌ನಲ್ಲಿ ಕೆಲವು ಚಿಕ್ಕ ಪುಟ್ಟ ಟ್ವೀಕ್ ಮಾಡಿದರೆ, ವಿಂಡೋಸ್ ಚೂಟಿಯಾಗುವುದರಲಿ ಸಂಶಯವಿಲ್ಲ.

ವಿ.ಸೂ: ಇಲ್ಲಿ ತಿಳಿಸಿರುವುದಷ್ಟೆ ಮಾಡಿ, ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡ್ತೀನಿ ಅಂದು ಏನೋ ಮಾಡಿ ಏನೋ ಆದರೆ ನಾನು ಜವಾಬ್ದಾರನಲ್ಲ :), ಹುಷಾರು.
ಆದ್ರೆ ನಿಮ್ಮ ವಿಂಡೊಸ್ ಕಂಪ್ಯೂಟರ್ ಯಾವ ಲೆವೆಲ್ ಗೆ ಹಾಳಾಗಿದ್ರು ಸಹ ಸರಿಪಡಿಸುವುದಕ್ಕೆ ಸಹಾಯ ಮಾಡ್ತೀನಿ ಹೆದರಿಕೊಳ್ಳಬೇಡಿ. ಇಷ್ಟು ಭರವಸೆ ಕೊಡಬಲ್ಲೆ :)

ವಿಂಡೊಸ್ ಟ್ವೀಕಿಸುವ ಮುನ್ನ ಮುಂಜಾಗ್ರತೆ ಕ್ರಮವಾಗಿ ಒಂದು ಮುಖ್ಯವಾದ ವಿಚಾರ ತಿಳಿದುಕೊಳ್ಳಬೇಕು ಅದೇನೆಂದರೆ ಅಪ್ಪಿ ತಪ್ಪಿ ಏನಾದ್ರು ಮಾಮೂಲಿನ ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಉಂಟಾದಲ್ಲಿ ಸಿಸ್ಟಂ ಅನ್ನು ಯಥಾ ಸ್ಥಿತಿಗೆ ಮರಳುವಂತೆ ಮಾಡುವುದು.
ಕಂಪ್ಯೂಟರ್ ಕಾರ್ಯ ನಿರ್ವಹಣೆ ಅನ್ನೋದು ಮುತ್ತಿನ ಹಾಗಲ್ಲ, ಮಾತು ಆಡಿದ್ರೆ ಹೊಯ್ತು ಮುತ್ತು ಒಡೆದರೆ ಹೊಯ್ತು ಅನ್ನೊಕ್ಕೆ,ಏನು ಆಗಲೆ ಇಲ್ಲವೆಂಬಂತೆ ಕಂಪ್ಯೂಟರ್ ಅನ್ನು ಯಥಾ ಸ್ಥಿತಿಗೆ ತರಬಹುದು(ದೈಹಿಕವಾಗಿ ಹಾಳಾಗದೆ ಇದ್ದಲ್ಲಿ ಮಾತ್ರ). ಹಲವಾರು ಬಾರಿ ನೀವು ಯೋಚಿಸಿರಬಹುದು, ನೆನ್ನೆ ಚೆನ್ನಾಗಿ ಕೆಲಸ ಮಾಡುತ್ತಿತ್ತು ಇಂದು ಯಾಕೊ ಈ ಒಂದು ಪ್ರೋಗ್ರಾಂ ಶುರುನೇ ಆಗ್ತಿಲ್ವಲ್ಲ, ನೆನ್ನೆ ವೇಗವಾಗಿ ಕೆಲಸ ಮಾಡುತ್ತಿತ್ತು ಇಂದು ಯಾಕೊ ಅಳುತ್ತಿದೆಯಲ್ಲಾ!! ದೇವ್ರೆ ಕಾಪಾಡಪ್ಪ ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ರೆ ಅಂಥವನ್ನೆಲ್ಲ ತೊಂದರೆ ಇಲ್ಲದೆ ಸರಿಪಡಿಸಬಹುದು. ಹಲವು ಬಾರಿ, ವೈರಾಣುವಿನ ಹಾವಳಿಯಿಂದಲೂ ಕಾಪಡಿಕೊಳ್ಳುವುದಕ್ಕೆ ಉಪಯುಕ್ತವಾಗುತ್ತದೆ. ಅದು ಹೇಗೆ ಎಂಬುದನ್ನು ಮುಂದೆ ತಿಳಿಸುತ್ತೇನೆ
ಖಂಡಿತವಾಗಲು ನಿಮ್ಮ ಕಂಪ್ಯೂಟರ್ ಮೊದಲಿನ ತರಹ ಕೆಲಸ ಮಾಡುವ ಹಾಗೆ ಮಾಡಬಹುದು.

ಈಗ ಕಂಪ್ಯೂಟರ್ ಯಥಾಸ್ಥಿತಿಗೆ ಮರಳಿ ತರಲು ಅತ್ಯಂತ ಪ್ರಮುಖ ದಾರಿ "ಸಿಸ್ಟಂ ರೀಸ್ಟೊರ್" ಬಗ್ಗೆ ತಿಳಿದುಕೊಳ್ಳುವ.
ಇದನ್ನು ಹುಡುಕಬೇಕಾದ ಮಾರ್ಗ
Start->Programs->Accessories->System Tools->"System Restore"

೧.ಅಪ್ಪಿ ತಪ್ಪಿ ಇದು ಚಾಲ್ತಿಯಲ್ಲಿಲ್ಲದಿದ್ದರೆ ಮೇಲಿನ ಮಾರ್ಗದಲ್ಲಿ ಸಾಗುತ್ತಾ ಸಿಸ್ಟಂ ರೀಸ್ಟೊರ್ ಕ್ಲಿಕ್ಕಿಸಿದರೆ ಒಂದು ಪುಟ್ಟ ಮೆಸೇಜ್ ಬಾಕ್ಸ್ ಪ್ರತ್ಯಕ್ಷವಾಗುತ್ತದೆ.
System Restore has been Turned Off. Do you want to turn on System Restore now?
ಎಂದು ’ಹೌದು’ಎಂದು ಕ್ಲಿಕ್ಕಿಸಿ ಈಗ ಮೆಸೇಜ್ ಬಾಕ್ಸ್ ಮಾಯವಾಗಿ ನಿಮಗೆ "System Properties"ಎನ್ನುವ ಸಾಧನ ತೆರೆದುಕೊಳ್ಳುತ್ತದೆ. ಅಲ್ಲಿ "turn off System Restore" ಎನ್ನುವುದನ್ನು ಟಿಕ್ ಆಗಿರುತ್ತದೆ, ಅದನ್ನು ತೆಗೆಯಿರಿ. "ಡಿಸ್ಕ್ ಜಾಗದ ಬಳಕೆ" ಎನ್ನುವುದರಲ್ಲಿ ಗರಿಷ್ಟ ಮಟ್ಟಕ್ಕೆ sliderಅನ್ನು ಜರುಗಿಸಿ. ನಂತರ "ಅನ್ವಯಿಸು" ಎನ್ನುವ ಗುಂಡಿಯನ್ನು ಒತ್ತಿ. ನಂತರ ’ಸರಿ’ಎನ್ನುವುದನ್ನು ಒತ್ತಿ.
ಈಗ ನಿಮ್ಮ ಕಂಪ್ಯೂಟರ್, ಕಾರ್ಯನಿರ್ವಹಣೆಯನ್ನು ಗಮನಿಸಲು ಶುರು ಮಾಡುತ್ತದೆ. ಗಮನಿಸುವುದಲ್ಲದೆ ಯಾವ್ದು ಸರಿ, ಯಾವುದು ತಪ್ಪು, ಎಂಬುದನ್ನು ಸಹ ನಿರ್ಧರಿಸಬಹುದು. ಎಷ್ಟು ಹಿಂದೆ ಹೆಜ್ಜೆ ಹಾಕಿದರೆ ತಪ್ಪನ್ನು ತಿದ್ದಬಹುದು ಅಂತೆಲ್ಲ ನಿರ್ಧರಿಸಲಿಕ್ಕಾಗುವುದು.
ನೀವು ಮತ್ತೊಮ್ಮೆ ಮೇಲೆ ಸೂಚಿಸಿದ ಮಾರ್ಗದಲ್ಲಿ ಹೋಗಿ System Restore ಕ್ಲಿಕ್ಕಿಸಿದರೆ ಈ ಸರ್ತಿ ನಿಮಗೆ ಒಂದು ವಿಂಡೊ ಕಾಣಸಿಗುತ್ತದೆ . ಅದರಲ್ಲಿ ನಿಮಗೆ ಎರಡು ಆಯ್ಕೆ ಸಿಗುತ್ತದೆ
೧. ಕಂಪ್ಯೂಟರ್ ಅನ್ನು ಮರುಸ್ಥಾಪಿನೆ ಮಾಡಲು ನಿರ್ಧರಿಸುವ ಸಮಯ.
೨. ಮರುಸ್ಥಾಪಿನೆ ಬಿಂದುವನ್ನು ಸೃಷ್ಟಿಸುವುದು.

ಮೊದಲನೆಯದನ್ನು ಆಯ್ಕೆ ಮಾಡಿ "ಮುಂದಿನದು" ಎಂದು ಕ್ಲಿಕ್ ಮಾಡಿದಾಗ ನಿಮಗೆ ಕ್ಯಾಲೆಂಡರ್ ಕಾಣಸಿಗುತ್ತದೆ.
ದಪ್ಪನಾದ ದಿನಾಂಕವು ಮರುಸ್ಥಾಪಿನೆ ಮಾಡಲು ಶಕ್ತವಿರುವ ಬಿಂದುವನ್ನು ತೋರುತ್ತದೆ. ಎಷ್ಟೆಲ್ಲಾ ದಪ್ಪನಾದ ಅಕ್ಷರಗಳ ದಿನಾಂಕವಿರುತ್ತದೆಯೊ ಅವೆಲ್ಲವು ಸಹಿತ ಕಂಪ್ಯೂಟರ್ ಅನ್ನು ಮರುಸ್ಥಾಪಿನೆ ಮಾಡಲು ಶಕ್ತವಿರುವ ಬಿಂದುವೆಂದು ತಿಳಿಯಬೇಕು.
ಮುಖ್ಯವಾಗಿ ಗಮನದಲ್ಲಿಡಬೇಕಾದ ವಿಚಾರವೇನೆಂದರೆ ಕಂಪ್ಯೂಟರ್‌ಅನ್ನು ಹಿಂದಿನ ದಿನಾಂಕಕ್ಕೆ ಮರುಸ್ಥಾಪಿಸಿದಾಗ ಇಂದಿನ ಕೆಲಸದ ಡೇಟಾ ಹಾಳಾಗುವುದಿಲ್ಲ.ಆದರೆ ಇಂದು ಹಾಗು ಹಿಂದಿನ ದಿನಾಂಕದ ಮಧ್ಯೆ ಸ್ಥಾಪಿಸಲಾಗಿರುವ ಪ್ರೋಗ್ರಾಂಗಳು ಮಾಯವಾಗುತ್ತವೆ,ನಿಮ್ಮ ಕಂಪ್ಯೂಟರ್ ನ ಸೆಟ್ಟಿಂಗ್‌ಗಳು ಆಯ್ಕೆ ಮಾಡಲಾದಂತಹ ಹಿಂದಿನ ದಿನಾಂಕದಂದು ಇದ್ದ ಸೆಟ್ಟಿಂಗ್‌‍ನಂತೆಯೆ ಆಗುತ್ತದೆ.

ಒಮ್ಮೆ ಈ ಸೇವೆ ಶುರುಮಾಡಿದ ನಂತರ ಕಂಪ್ಯೂಟರ್ ತನ್ನ ಪಾಡಿಗೆ ತಾನು,ಹಲವು ದಿನಗಳ ಅಂತರದಲ್ಲಿ ಹೊಸ "ಮರುಸ್ಥಾಪಿನೆ ಬಿಂದು"ವನ್ನು ಸೃಷ್ಟಿಸುತ್ತಾ ಹೋಗುತ್ತದೆ. ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಒಮ್ಮೊಮ್ಮೆ ನೀವೆ "ಮರುಸ್ಥಾಪಿನೆ ಬಿಂದು"ಸೃಷ್ಟಿಸಬೇಕಾಗಿ ಬರುತ್ತದೆ ಆಗ,ಮೇಲೆ ತಿಳಿಸಿರುವ ಆಯ್ಕೆಗಳಲ್ಲಿ ಎರಡನೆಯನದನ್ನು ಆಯ್ಕೆ ಮಾಡಬೇಕು.
ನಂತರ "ಮುಂದಿನದು" ಎಂಬ ಗುಂಡಿಯನ್ನು ಕ್ಲಿಕ್ ಮಾಡಿದಾಗ ನೀವು ಸೃಷ್ಟಿ ಮಾಡಲು ಹೊರಟಿರುವ "ಮರುಸ್ಥಾಪಿನೆ ಬಿಂದು"ವಿಗೆ ಹೆಸರಿಡಬೇಕಾಗುತ್ತದೆ, ನಿಮ್ಮ ಹೆಸರಿಟ್ಟರು ಅಡ್ಡಿಯಿಲ್ಲ :).
ಹೆಸರು ಸೂಚಿಸಿ "ಮುಂದಿನದು" ಎಂಬ ಗುಂಡಿಯನ್ನು ಕ್ಲಿಕ್ ಮಾಡಿದಾಗ ಹೊಸದಾದ "ಮರುಸ್ಥಾಪಿನೆ ಬಿಂದು"ಸೃಷ್ಟಿಯಾಗುತ್ತದೆ.

ಒಂದೆ ದಿನದಲ್ಲಿ ಎರಡು "ಮರುಸ್ಥಾಪಿನೆ ಬಿಂದು"ಸೃಷ್ಟಿಯಾಗಿದ್ದರೆ ಸಮಯವನ್ನು ಸಹ ಸೂಚಿಸುತ್ತದೆ. ಇದನ್ನು ಪರಾಮರ್ಶಿಸಲು ನೀವು ಮತ್ತೆ System Restore ತೆರೆಯುವುದರ ಮೂಲಕ ಖಾತ್ರಿಪಡಿಸಿಕೊಳ್ಳಬಹುದು.

ಈ ರೀತಿಯಲ್ಲಿ ನೀವು ಹಿಂದಿನ ದಿನಾಂಕದ "ಮರುಸ್ಥಾಪಿನೆ ಬಿಂದು"ಸ್ಥಾನಕ್ಕೆ ಹೋಗಬಹುದು ಅಥವ ಹೊಸದಾದ "ಮರುಸ್ಥಾಪಿನೆ ಬಿಂದು"ಸೃಷ್ಟಿ ಮಾಡಬಹುದು.

ಇಷ್ಟೆಲ್ಲ ಹೇಳಿ ಮುಗಿಸಿ ಆದಮೇಲೆ ಮುಂದಿನ ಟ್ವೀಕ್‌ಗಳನ್ನು ಮಾಡುವ ಮುನ್ನ ಹೊಸದೊಂದು "ಮರುಸ್ಥಾಪಿನೆ ಬಿಂದು" ಸೃಷ್ಟಿ ಮಾಡಿ, ವಿಂಡೊಸ್‌ಗೆ ನವಚೇತನ ನೀಡಲು ಅಡಿಗಲ್ಲು ಹಾಕಿ :)

ಸೂಚಿ ಸೇವೆಗಳನ್ನು ರದ್ದುಪಡಿಸುವುದು:

ಸಾಮಾನ್ಯವಾಗಿ ನಾವು ಕಂಪ್ಯೂಟರ್ನಲ್ಲಿ ಏನಾದರು ಹುಡುಕಲು ಆದೇಶಿಸಿದಾಗ ಅದು ಜೋರಾಗಿ ಸದ್ದು ಮಾಡುತ್ತಾ ನಿಧಾನವಾಗಿ ಫಲಿತಾಂಶವನ್ನು ನೀಡುವುದು ವಿಂಡೊಸ್‌ನ ಸಹಜ ಗುಣ.
ಇದನ್ನು ತಪ್ಪಿಸಿ ತ್ವರಿತವಾಗಿ ಸದ್ದಿಲ್ಲದೆ ಕಂಪ್ಯೂಟರ್ ಕೆಲಸ ಮಾಡಲು ಕೆಳಗೆ ತಿಳಿಸಿರುವ ಕೆಲಸವನ್ನು ನಾವು ಮಾಡಬೇಕು.
ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದು ತಿಳ್ಕೋಬೇಕಿದ್ರೆ ಕೇಳಿ ತಿಳಿಸ್ತೀನಿ

೧.Start ಮೆನು ಕ್ಲಿಕ್ಕಿಸಿ
೨.ನಂತರ Settingsಗೆ ಹೋಗಿ
೩.ಅದರಲ್ಲಿ Control Panel ಆಯ್ಕೆ ಮಾಡಿ
೪.ನಂತರ Add/Remove Programs ಅನ್ನು ಕ್ಲಿಕ್ಕಿಸಿ, ಪುಟ್ಟ ವಿಂಡೊ ಪುಟಿಯುತ್ತದೆ
೫.ಇದರಲ್ಲಿ ಎಡಭಾಗದಲ್ಲಿ ೪ ವಿಭಾಗಗಳಿರುತ್ತವೆ,ಆ ನಾಲ್ಕರಲ್ಲಿ Add/Remove Window Components ಎನ್ನುವುದನ್ನು ಆಯ್ಕೆ ಮಾಡಿ.
೭.ಇದನ್ನು ಆಯ್ಕೆ ಮಾಡಿದ ನಂತರ Windows component wizard ಎನ್ನುವ ಮತ್ತೊಂದು ಪುಟ್ಟ ವಿಂಡೊ ಪುಟಿಯುತ್ತದೆ
೭.ಈ ವಿಂಡೊನಲ್ಲಿ ಹಲವಾರು Windows component ಪಟ್ಟಿಯಾಗಿರುತ್ತದೆ ಅದರೊಳಗೆ "ಸೂಚಿ ಸೇವೆಗಳು" ಎನ್ನುವುದು ಟಿಕ್ ಗುರುತಿನ ಮೂಲಕ ಆಯ್ಕೆಯಾಗಿದ್ದಲ್ಲಿ
ಆ ಟಿಕ್ ಗುರುತನ್ನು uncheck ಮಾಡಿ ತೆಗೆದುಬಿಡಿ.
೮.ನಂತರ Next ಎನ್ನುವ ಗುಂಡಿಯನ್ನು ಒತ್ತಿ.
೯.ವಿಂಡೊಸ್ ಇದನ್ನು ಮಾನ್ಯ ಮಾಡಿ Finish ಎನ್ನುವ ಗುಂಡಿಯನ್ನು ತೋರಿಸುತ್ತದೆ, ಅದನ್ನು ಕ್ಲಿಕ್ಕಿಸಿದೊಡನೆ ನಿಮ್ಮ ಗ.ಯಂ ಹುಡುಕುವ ಕಾರ್ಯಗಳಲ್ಲಿ ತೊಡಗಿದಾಗ ಚೂಟಿಯಾಗುತ್ತದೆ :).

ಹಿಗ್ಗಿಸಬಹುದಾದ ಕಾರ್ಯದಕ್ಷತೆ ಗಣಕವನ್ನು ರದ್ದುಪಡಿಸುವುದು:

ನಾವು ಆದೇಶಿಸಿದ ಕೆಲಸ ಆದ್ರೆ ಸಾಕಲ್ವ,ಯಾವ ಆದೇಶಕ್ಕೆ ಕಂಪ್ಯೂಟರ್ ಎಷ್ಟು ಬೇಗ ಸ್ಪಂದಿಸುತ್ತದೆ, ಇದು ನಿಜವಾಗಲು ಪೂರ್ಣಪ್ರಮಾಣದ ದಕ್ಷತೆ ತೋರಿತೆ ಎನ್ನುವ ಲೆಕ್ಕಾಚಾರಗಳು ನಮಗೆ ಅಗತ್ಯವಿದೆಯೆ?
ಇಂಥಹ ಕೆಲಸಗಳು ನಮ್ಮ ಆದೇಶಗಳನ್ನು ನೆರವೇರಿಸುವಲ್ಲಿ ಸಹಾಯ ಮಾಡದಿದ್ದರು ಕಂಪ್ಯೂಟರ್ ಮಂದಸ್ಮಿತವಾಗುವ ಹಾಗೆ ಮಾತ್ರ ಖಂಡಿತವಾಗಿ ಮಾಡುತ್ತದೆ.
ಹಾಗಾಗಿ ಈ ಗಣಕವನ್ನು ರದ್ದುಪಡಿಸುವುದು ಅವಶ್ಯಕ.
ಇದಕ್ಕೋಸ್ಕರ ನೀವು ಪುಟ್ಟ ತಂತ್ರಾಶವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು, ಕೊಂಡಿ ಇಲ್ಲಿದೆ
http://sites.google....
ಡೌನ್ಲೋಡ್ ಮಾಡಿದ ನಂತರ ಅನ್‌ಝಿಪ್ ಮಾಡ್ಬೇಕು,ಹೊರಬರುವ exe ಕಡತವನ್ನು ಡಬಲ್ ಕ್ಲಿಕ್ ಮಾಡಿ ತಂತ್ರಾಂಶವನ್ನು C:\Program Files ಎನ್ನುವ ಮಾರ್ಗದಲ್ಲಿ ಸ್ಥಾಪಿಸಿದರೆ ಒಳಿತು.
ಸ್ಥಾಪಿಸಿದ ನಂತರ
೧. C:\Program Files\ ಎಂಬ ಮಾರ್ಗದಲ್ಲಿ Resource Kit ಎಂಬ ಫೋಲ್ಡರ್‌ಅನ್ನು ತೆರೆಯಿರಿ.
೨. ಇದರೊಳಗೆ exctrlst.exe ಎಂಬ ಕಡತದ ಮೇಲೆ ಡಬಲ್ ಕ್ಲಿಕ್ ಮಾಡಿ.
೩. ಕ್ಲಿಕ್ ಮಾಡಿದ ನಂತರ ಪುಟ್ಟ ವಿಂಡೊ ಶುರುವಾಗಿ ಹಲವಾರು ಸೇವೆಗಳ ಪಟ್ಟಿ ತೋರಿಸುತ್ತದೆ.
೪. ಅದರೊಳಗೆ ಪ್ರತಿ ಸೇವೆಗು ಸಹ ಕಾರ್ಯದಕ್ಷತೆ ಗಣಕಗಳು ಸಕ್ರಿಯವಾಗಿದೆ ಎಂದು ತೋರಲು check box ಇರುತ್ತದೆ.
೫. ನೀವು ಮಾಡಬೇಕಿರುವುದಿಷ್ಟೆ, ಪ್ರತಿ ಸೇವೆಯ ಮೇಲೆ ಕ್ಲಿಕ್ಕಿಸುತ್ತಾ ಆಯಾ ಕಾರ್ಯದಕ್ಷತೆ ಗಣಕಗಳು ಸಕ್ರಿಯವಾಗಿದೆ ಎಂಬ check box ನಿಂದ ಟಿಕ್ ಗುರುತನ್ನು ತೆಗೆಯಬೇಕು
೬. ಎಲ್ಲಾ ಸೇವೆಗಳಿಗು ಟಿಕ್ ಗುರುತನ್ನು ತೆಗೆದ ಮೇಲೆ ವಿಂಡೊವನ್ನು ಮುಚ್ಚಿರಿ.

ನಿಮ್ಮ ಕಂಪ್ಯೂಟರ್‌ಗೆ ಸ್ವಲ್ಪ ಶಕ್ತಿಕೊಟ್ಟಂತಾಗುತ್ತದೆ.

ಫೋಲ್ಡರ್‌ಗಳಲ್ಲಿ ಹುಡುಕುವುದನ್ನು ಚುರುಕುಗೊಳಿಸುವುದು:

"ಮೈ ಕಂಪ್ಯೂಟರ್" ಡಬಲ್ ಕ್ಲಿಕ್ಕಿಸಿ ಅದರ ಮೂಲದ ಯಾವುದಾದರು ಡ್ರೈವ್ ಒಳಗೆ ಹುಡುಕುವುದಾಗಲಿ ಮಾಡುವಾಗ ನಿಮಗೆ ಕಂಪ್ಯೂಟರ್ ನಿಧಾನವಾಗಿ ಕೆಲಸ ಮಾಡುತ್ತಿದೆ ಎನ್ನಿಸಬಹುದು.
ಹೀಗೆ ಯಾಕಾಗುತ್ತದೆ ಎಂದರೆ ವಿಂಡೊಸ್ ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿತವಾದಾಗಿನಿಂದಲೆ, ಪ್ರತಿ ಫೋಲ್ಡರ್/ಕಡತ ಹುಡುಕುವುದರಲ್ಲಿ ತೊಡಗುವಾಗ ಅನವಶ್ಯಕವಾಗಿ ಜಾಲದಲ್ಲಿ ಇರುವ ಕಡತಗಳನ್ನು ಹಾಗು ಅಚ್ಚುಯಂತ್ರವನ್ನು ಸಹ ಹುಡುಕಲು ರೂಪಿಸಲಾಗಿರುತ್ತದೆ(ಇವರಡು ಲಭ್ಯವಿಲ್ಲದಿದ್ದರು ಸಹ..).
ಇದನ್ನು ತಪ್ಪಿಸಿದರೆ ಹುಡುಕುವ ಕಾರ್ಯವ್ಯಾಪ್ತಿ ಚಿಕ್ಕದಾಗಿ ಹುಡುಕುವ ಕಾರ್ಯ ಮತ್ತಷ್ಟು ಚುರುಕಾಗುತ್ತದೆ. ಇದಕ್ಕೆ ನಾವು ಮಾಡಬೇಕಾಗಿರುವ ಕೆಲಸ

೧."ಮೈ ಕಂಪ್ಯೂಟರ್" ತೆರೆಯಿರಿ.
೨. "ಸಾಧನ" ಮೆನ್ಯು ಮೇಲೆ ಕ್ಲಿಕ್ಕಿಸಿ.
೩. "ಫೋಲ್ಡ್ರರ್ ಆಯ್ಕೆಗಳು" ಎಂಬುದನ್ನು ಕ್ಲಿಕ್ಕಿಸಿ.
೪. "ವೀಕ್ಷಿಸು" ಎಂಬ ಟ್ಯಾಬ್ ಕ್ಲಿಕ್ಕಿಸಿ.
೫. "ಸ್ವಯಂಚಾಲಿತವಾಗಿ ಜಾಲದಲ್ಲಿರುವ ಕಡತಗಳನ್ನು ಹಾಗು ಅಚ್ಚುಯಂತ್ರಗಳನ್ನು ಹುಡುಕು" ಎಂಬ check boxನಲ್ಲಿ ಟಿಕ್ ಗುರುತನ್ನು ತೆಗೆಯಿರಿ
೬. "ಅನ್ವಯಿಸು" ಎಂಬ ಗುಂಡಿಯನ್ನು ಕ್ಲಿಕ್ಕಿಸಿ
೭. ನಂತರ "ಸರಿ" ಎಂಬ ಗುಂಡಿಯನ್ನು ಕ್ಲಿಕ್ಕಿಸಿ
೯. ಇದಾದ ನಂತರ ನಿಮ್ಮ ಕಂಪ್ಯೂಟರ್ ಅನ್ನು ಪುನರ್ಶುರು ಮಾಡಿ

ಸೂಚಿ ಸೇವೆ = Indexing Services
ಹಿಗ್ಗಿಸಬಹುದಾದ ಕಾರ್ಯದಕ್ಷತೆ ಗಣಕ = Extensible Performance Counter
ಜಾಲದಲ್ಲಿ ಇರುವ ಕಡತ = network files
ಅಚ್ಚುಯಂತ್ರ = printer
ಸಾಧನ = Tools
ಫೋಲ್ಡ್ರರ್ ಆಯ್ಕೆಗಳು = Folder options
ವೀಕ್ಷಿಸು = View
ಸ್ವಯಂಚಾಲಿತವಾಗಿ ಜಾಲದಲ್ಲಿರುವ ಕಡತಗಳನ್ನು ಹಾಗು ಅಚ್ಚುಯಂತ್ರವನ್ನು ಹುಡುಕು = Automatically search for network folders and printers
ಅನ್ವಯಿಸು = Apply
ಸರಿ = OK
ಪುನರ್ಶುರು = Reboot
ಡಿಸ್ಕ್ ಜಾಗದ ಬಳಕೆ = Disk Space Usage
ಮುಂದಿನದು = Next
ಮರುಸ್ಥಾಪಿನೆ ಬಿಂದು = Restore point

ಮುಂದುವರೆಯುವುದು.....

ಪ್ರಾದೇಶಿಕ ಪಕ್ಷಕ್ಕೆ ಮತ ಹಾಕ್ಬೇಕ? ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕ್ಬೇಕ?

on April 16, 2009

ಎಲ್ಲಿ ನೋಡಿದ್ರು ಚುನಾವಣೆ ಭರಾಟೆ, ಅದರದ್ದೆ ಚರ್ಚೆ,ಮಾತು,ಕಾಡು ಹರಟೆ, ಎಲ್ಲವು ಅದಕ್ಕೆ ಮೀಸಲು. ಚುನಾವಣೆ ಫಲಿತಾಂಶ ಹೊರಗೆ ಬೀಳೋವರ್ಗು ಇದು ತಪ್ಪಿದ್ದಲ್ಲ. ಆದ್ರೆ ವೋಟ್ ಮಾಡೊನಿಗೆ ಇರೊ ತಲೆನೋವು ಯಾರಿಗೆ ಮತ ಹಾಕ್ಲಿ ಅಂತ!!! ಪ್ರಾದೇಶಿಕ ಪಕ್ಷಕ್ಕೆ ಮತ ಹಾಕ್ಬೇಕ?ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕ್ಬೇಕ?ಅಥವಾ ಇಷ್ಟು ವರ್ಷದಿಂದ ಕಣ್ಣ್ ಮುಂಚ್ಕೊಂಡು ವಂಶಪಾರಂಪರ್ಯವಾಗಿ ದೇಶವನ್ನ ಆಳುತ್ತಾ ಬಂದ ಪಕ್ಷಕ್ಕೆ ಮತ ಹಾಕ್ಲಾ ಅಂತ.ಇಷ್ಟು ವರ್ಷ ಉದ್ಧಾರ ಮಾಡಿದ್ದು ಅಷ್ರಲ್ಲೆ ಇದೆ ನಾ ಕಂಡಿಲ್ವಾ ಇವರ ಬಂಡವಾಳಾನ, ಈ ಸರ್ತಿ ಆರಾಮಾಗಿ ರಜೆ ಮಜೆ ಮಾಡಿದ್ರೆ ಸಾಕು, ಯಾವನಿಗೆ ಬೇಕು ಈ ಚುನಾವಣೆ ಅನ್ನೊ ಬೃಹಸ್ಪತಿಗಳಿಗು ಏನು ಕಮ್ಮಿ ಇಲ್ಲ. ಒಟ್ನಲ್ಲಿ ಮತ ಹಾಕೋವರ್ಗು ದ್ವಂದ್ವ ಇದ್ದದ್ದೆ...

ಈಗ ನೋಡಿ ಒಬ್ರು ಪ್ರಾದೇಶಿಕ ಪಕ್ಷಾನೆ ಒಳ್ಳೆದು, ನಮ್ ನಾಡಿಗೆ ಸೌಕರ್ಯ ಒದಗಿಸ್ತಾರೆ,ರೈಲು ಬರ್ತದೆ,ನಮ್ ಜನಕ್ಕೆನೆ ಕೆಲ್ಸ ಸಿಗ್ತದೆ,ನಮ್ ನಾಡಿನ ನೆಲ ಕಸಿಯೊಲ್ಲ,ನಮ್ ನಾಡಿನ ನೀರು ಬಿಡುವ ಅವಶ್ಯಕತೆಯಿಲ್ಲ ಅಂತೆಲ್ಲಾ ಅಂತ. ಯಾಕಂದ್ರೆ ಕೇಂದ್ರದಾಗೆ ರಚನೆ ಆಗೊ ಸರ್ಕಾರಕ್ಕೆ ನಮ್ ನಾಡಿನ್ ಸರ್ಕಾರ ಸಹಾಯ ತಗಂಡಿರ್ತದೆ ಅಂದ್ಬುಟ್ಟು ನಾವ್ ಕೇಳಿದ್ನ ಅವ್ರು ಕೊಡ್ತಾರೆ ಅನ್ನೊ ನಂಬಿಕೆ ಅಲ್ವ!! ಇದಕ್ಕೆ ಒಪ್ಪೊ ಉದಾಹರ್ಣೆ ಅಂದ್ರೆ ತ್ಯಮುಳುನಾಡ್ನೋರು ಕೇಳಿದ್ದು, ಕೇಂದ್ರ ಸರ್ಕಾರ ಮಾಡ್ಕೊಡ್ಲಿಲ್ಲಾ ಅಂದ್ರೆ ಬೆಂಬಲ ವಾಪನ್ ಪಡಿತೀವಿ ಅಂತ್ ಇವರು ರೋಪ್ ಹಾಕ್ತಾರೆ!! ಆಷ್ಟಕ್ಕು ತ್ಯಮುಳುನಾಡ್ನಲ್ಲಿ ಆಗಿರೋದೇನು? ಒಡಕು ನೀತಿ ರಾಜಕೀಯ,ಉತ್ತರ ಭಾರತೀಯರು ಅರ್ಯನ್ನರು ರಾಷ್ಟ್ರೀಯ ಪಕ್ಷಗಳು ಆರ್ಯನ್ರದ್ದು.ಅವರು ನಮ್ಮ ಶತ್ರುಗಳು ಅನ್ನೋ ಭಾವನೆ ಹೊತ್ತು ಬೆಳೆಯೊ ದಡ್ಡ ಜನರು.ಆರ್ಯನ್ -ದ್ರಾವಿಡ್ ಥಿಯರಿ ಸುಳ್ಳು ಅಂತ ಗೊತ್ತಿದ್ರು ಸೈತಾ ತಮ್ಮ ಬೇಳೆ ಬೇಯ್ಸ್ಕಳಕ್ಕೆ ಜನರಿಗೆ ಸತ್ಯ ತಿಳಿಸ್ದೆ ಮೋಸ ಮಾಡ್ತ ಆಳ್ತಿರೋರು. ಮೇಲಾಗಿ ಪೆರಿಯಾರ್,ಅಣ್ಣಾ ಅನ್ಕೊಂಡು ದೇವ್ರು ಇಲ್ಲ ದಿಂಡ್ರು ಇಲ್ಲಾ ಹಿಂದುಗಳದ್ದೆಲ್ಲಾ ಪೊಳ್ಳುವಾದ ಅಂತ ಒಂದು ಕಡೆ ಶಂಖ ಹೊಡ್ಕೊಂಡು ಮೈನಾರಿಟಿಯವರಿಗೆ ಕುಮ್ಮಕ್ಕು ನೀಡ್ತಾ ಮತಾಂತರದಂತಹ ಆತ್ಮ ವ್ಯಭಿಚಾರಕ್ಕೆ ಆಸ್ಪದ ಕೊಡ್ತಾ ವೋಟ್ ಬ್ಯಾಂಕ್ ಗಟ್ಟಿ ಮಾಡ್ಕಂಡ್ರೆ ಮಾತ್ತೊಂದ್ ಕಡೆ ಮೆಜಾರಿಟಿಯವರ ಜೊತ್ಗೂನು ಕೈ ಕೈ ಮಿಲಾಯಿಸ್ತಾ ಆಸನ ಭದ್ರ ಮಾಡ್ಕೊತಾರೆ. ಸರಿನಪ್ಪಾ ಹಿಂಗೆಲ್ಲಾ ಮಾಡಿದ್ರೆ ರೈಲ್ ಬರ್ತದೆ,ಅಂಚೆ ಚೀಟಿ ಬಿಡುಗಡೆ ಮಾಡ್ತಾರೆ,ನೀರು ಬಿಡೊ ಹಾಗೆ ಮಾಡ್ತಾರೆ, ಇಷ್ಟೆ ಅಲ್ವಾ.. ಅವರ ನಾಡಿನಲ್ಲಿ ಅವರಿಗೆ ಕೆಲ್ಸ ದಕ್ಕೋದಾಗ್ಲಿ ಅಥ್ವಾ ಅವರಿಗೆ ಅವರ ಜಾಗದಲ್ಲಿ ಪ್ರಾಮುಖ್ಯತೆ ಇರೊದಾಗ್ಲಿ ಅದು ಬರಿ ಅವರ ಭಾಷಾಭಿಮಾನ,ನಾಡ್ ಮ್ಯಾಗ್ ಇರೊ ಪಿರೂತಿ ಮೇಲೆ ಮಾತ್ರ ನಿಂತಿರೋದು ಅಟೆಯಾ ಕೇಂದ್ರಕ್ಕೆ ಬೆಂಬಲ ಕೊಟ್ಟಿದೀವಿ ಅಂತಲ್ಲ.

ಈ ವರಸೆ ಕೂಡ ತ್ಯಪ್ಪು ಅನ್ಕಳಣ,ಈ ಪ್ರಾದೇಶಿಕ ಪಕ್ಷ್ದೋರು ಕಡೆನಾಗೆ ರಾಷ್ಟ್ರೀಯ ಪಕ್ಷಕ್ಕೆ ತಾನೆ ಬೆಂಬಲ ಕೊಡೊದು ಆ ರಾಷ್ಟ್ರೀಯ ಪಕ್ಷ ನಮ್ ದೇಸಾನ ಹೆಂಗ್ ಆಳ್ತಾರೆ ಅನ್ನೊದು ಮುಖ್ಯ ಆಗೊಲ್ವಾ?? ಟೆರರಿಸ್ಟ್‌ಗೆ ವೇತನ ಕೋಡೊದು ಕೇಳಿದೀರಾ? ಸಿಕ್ಕಿಬಿದ್ದಿರೊ ಟೆರರಿಸ್ಟ್‌ಗೆ ಗಲ್ಲು ಕೊಡೊಕ್ಕೆ ಆಗಿಲ್ಲಾ!! ನಮ್ ದೇಸ್ದಾಗೆ ಪಾಕಿಸ್ತಾನ ಬಾವುಟ ಹಾರಿಸ್ತಾರೆ!! ಸಾವಿರ ಜನ ಸತ್ರು ತಲೆ ಕೆಡಿಸ್ಕೊಳ್ಳೊರು ಇಲ್ಲಾ!! ಹಿಂಗೆಲ್ಲಾ ನಮ್ ದೇಸ್ದಾಗೆ ಮಾತ್ರ ನಡಿತೈತೆ. ತ್ಯಮುಳುನಾಡಿಗೆ ರೈಲ್ ಬಂದಿರ್ಬೋದು,ಅಂಚೆ ಚೀಟಿ ಬಿಡುಗಡೆ ಮಾಡಿರ್ಬೋದು,ನೀರು ಬಿಡೊಕ್ಕೆ ಒತ್ತಾಯ ಮಾಡಿರ್ಬೋದು, ಆದ್ರೆ ಕೊಯಂಬತ್ತೊರ್ ಅಲ್ಲಿ ಜನ ಬಾಂಬ್ ಹಿಡ್ಕಂಡು ಒಡಾಡ್ತಾರಲ್ಲ ಎನ್ ಅಂತೀರಾ ಈ ಮಾತ್ಗೆ?ಬಾಂಬ್ ಸ್ಫೊಟದ ಕೇಸ್ನಾಗೆ ಸಿಕ್ಕಿಬಿದ್ದಿರೋನು ಮುಸ್ಲಿಂ ರಾಜಕೀಯ ವ್ಯಕ್ತಿ.ಎಲ್ಲ ಪುರಾವೆ ಇದ್ರು ಅವನಿಗೆ ಶಿಕ್ಷೆ ಕೊಡ್ಸೊಕ್ಕೆ ಆಗ್ಲಿಲ್ಲ ಅನ್ನೋದಕ್ಕಿಂತ ಶಿಕ್ಷೆ ಆಗೊಕ್ಕೆ ಬುಡ್ಲಿಲ್ಲಾ ಅನ್ನಿ.ಇವರು ಬೆಂಬಲ ಕೊಟ್ಟಿರೊ ರಾಷ್ಟ್ರೀಯ ಪಕ್ಷದ ನೀತಿ ದೇಸದ್ ಹಿತಾಸಕ್ತಿಗೆ ವಿರುದ್ಧ ಇದ್ರೆ ಎನ್ ಬಂತು ಸುಖಾ.. ನಾವಾಯ್ತು,ನಮ್ ನಾಡು ಆಯ್ತು ಅಂತ ಸಣ್ಣದಾಗಿ ಯೋಚಿಸಿದ್ರೆ ಮಣ್ ತಿನ್ಬೇಕು ನಾವು ಭಾರತೀಯರಾಗಿ ಆಷ್ಟೆ,ಕನ್ನಡದವರಾಗಿ ಉದ್ಧಾರ ಆಗಬೈದೇನೊ ಆದ್ರೆ ಭಾರ್ತೀಯನಾಗಿ ಮಾತ್ರ ಮಾನ ಮರ್ವಾದೆ ಹರಾಜ್ ಹಾಕೊಂಡಿರ್ತೀವಿ ಅಂತ ಅನ್ಸಾಕಿಲ್ವಾ?

ದೇಶದ್ ಹಿತಾಸಕ್ತಿ ಮುಖ್ಯ.. ನಾಡಿನ್ ಹಿತಾಸಕ್ತಿ ಮುಖ್ಯಾ.. ಈಗ ನೋಡಿ ಗುಜರಾತ್‌ನಾಗೆ ಇರೋದು ರಾಷ್ಟ್ರೀಯ ಪಕ್ಷ ಅಲ್ವರಾ? ಅದು ಹೆಂಗೈತೆ? ಏಟ್ ಖದರ್ ನಿಂದ ಕೇಂದ್ರಕ್ಕೆ ಸಡ್ಡು ಹೊಡೆದು ನಿಲ್ತದೆ.ಪ್ರಾದೇಶಿಕ ಪಕ್ಷ ಇಲ್ಲ ಅಂದ್ಬುಟ್ಟು ಅಲ್ಲೆನು ಅಭಿವೃದ್ಧಿ ಕೆಲ್ಸ ನಿಂತೊಗೈತಾ?ಜನಕ್ಕೆ ಕೆಲ್ಸಾ ಇಲ್ವಾ?ಅಥ್ವಾ ಆರ್.ಜೆ.ಡಿ ಪ್ರಾದೇಶಿಕ ಪಕ್ಷ ಇದ್ದಾಗ ಬಿಹಾರ ಎಂಗಪ್ಪಾ ಬೆಳೀತು,ಅಲ್ಲಿ ಜನ ಇನ್ನಾನುವ ಆಯ್ಕಂಡ್ ತಿಂತಿಲ್ವಾ? ತಾಕತ್ತು ಅಂದ್ರೆ ಗುಜರಾತ್ ಜನರದ್ದು,ಜನ ಬಲ ಅಂದ್ರೆ ಅದು,ಒಗ್ಗಟ್ಟು ಅಂದ್ರೆ ಅದು.ಅಭಿವೃದ್ಧಿ ಪರ ಇರೊ ಯಾವ್ದು ಜಾತಿ ಮತದವ್ರು ಆದ್ರು ಸಹ ಮೋದಿಗೆ ಕಣ್ ಮುಚ್ಕೊಂಡು ಮತ ಹಾಕ್ತಾರೆ.ಯಾಕಂದ್ರೆ ಅಲ್ಲಿ ಪ್ರಾದೇಶಿಕ ಅಥ್ವಾ ರಾಷ್ಟ್ರೀಯ ಅಂತ ಒಡಕು ಇಲ್ಲಾ, ಏನಿದ್ರು ಗುಜರಾತ್‌ನ ಭವ್ಯ ಕನ್ಸು ಐತೆ ಜನ್ರ ಮನ್ಸ್ನಾಗೆ.ಹಿಂಗಿದ್ರೆ ನಮ್ಗೆ
ಸಮಾಜ್ದಾಗೆ ಪ್ರೀತಿ,ಸೌಹಾರ್ದತೆ,ಪರಸ್ಪರ ನಂಬಿಕೆ ಅಂತ ಕಾಣೊದು,ಬರೊದು,ನಾಡು ಚಿನ್ನದ ಬೀಡಾಗೋದು. ನಂ ನಾಡ್ಗೆ ಒಳ್ಳೆದು ಆಗ್ಬೆಕು ಅಂದ್ರೆ ನಾವು ಮೊದ್ಲು ಸರಿ ಇರ್ಬೇಕು,ನಾವು ಮೊದ್ಲು ಒಳ್ಳೆ ಪ್ರಜೆ ಆಗಿ ಬಾಳೊದು ಕಲಿಬೇಕು.ಬರಿ ನಂ ಕೋಣೆ ಮಾತ್ರ ಶುಚಿಯಾಗಿದ್ರೆ ಸಾಕಾ? ಮನೆ ಅಂದ್ವಾಗಿಡೊದು ಬೇಡ್ವಾ?

ಪ್ರಾದೇಶಿಕ,ರಾಷ್ಟ್ರೀಯ ಅಂತ ಅನ್ದೆ ಭಾರ್ತೀಯನಂಗೆ ಯೊಚಿಸಿ ದೇಸದ್ ಹಿತಾಸಕ್ತಿ ನೋಡ್ಕಂಡು ಮತ ಚಲಾಯಿಸ್ಬೇಕು. ಜನ ಹಿನ್ಗೆ ಮೆರಿತಾ ಇರ್ಲಿ ಬತ್ತದೆ ಒಂದ್ ದಿನಾ ಕಾಶ್ಮೀರ್ದಾಗೆ ಪಾಕಿಸ್ತಾನ್ ಬಾವುಟ,ನಾಗಲ್ಯಾಂಡ್ ನಮ್ ದೇಸ್ದಿಂದ ಹೊರಗಾಗ್ಬೇಕು ಅಂತ ಅಮೇರಿಕದಾಗೆ ಕುಂತ್ಕೊಂಡು ಮತಾಂತರಕ್ಕೆ ಕುಮ್ಮಕ್ಕು ಕೊಟ್ಟು ಅದನ್ನ ಕ್ರೈಸ್ತ ನಾಡನ್ನ ಮಾಡುದ್ರಲ್ಲ ಅವ್ರು ಬಡ್ಕತ ಅವ್ರೆ. ಹಿಂಗೆನೆಯಾ ನಾವು ಕಚ್ಚಾಡ್ಕಂಡು ಸಾಯ್ತಿದ್ರೆ ಒಂದು ದಿನ ತಲೆ ಮ್ಯಾಗೆ ಟವಲ್ ಹಾಕೊಂಡು ಕುಂತ್ಕೊಂಡು ಲಬೊ,ಲಬೊ,ಲಬೊ ಅಂತಾ ಹೊಯ್ಕಬೇಕು ಅಷ್ಟೆ..

ಪ್ರಾದೇಶಿಕ ಪಕ್ಷಾ ಇದ್ಕಂಡು ರೈಲ್ ಬರಸ್ಕಂಡು,ಅಂಚೆ ಚೀಟಿ ಬಿಡುಗಡೆ ಮಾಡ್ಕಂಡು,ನೀರು ಬಿಡ್ಬೇಕಾಗಿ ಬರೊ ಹಾಗೆ ಒತ್ತಡ ತರಿಸಿ,ಮತಾಂತರಕ್ಕೆ ಕುಮ್ಮಕ್ಕು ಕೊಡ್ತಾ,ಬಾಂಬ್ ಹಾಕಿರೊ ವ್ಯಕ್ತಿಗಳೆಲ್ಲ ಕೇವಲ ಬೆಂಬಲ ನೀಡೊ ವೋಟ್ ಬ್ಯಾಂಕ್ ಪ್ರತಿನಿಧಿ ಆಗಿರೋದ್ರಿಂದ ಆರಮಾಗಿ ಓಡಾಡ್ತಿರೊ ತ್ಯಮುಳುನಾಡ್ ಥರ ನಮ್ ನಾಡು ಇರ್ಬೇಕಾ ಅಥ್ವಾ ರಾಷ್ಟ್ರೀಯ ಪಕ್ಷಾ ಇದ್ಕಂಡು ಮತಾಂತರದ ವಿರುದ್ಧ ಸಿಡಿದು,ಬಾಲ ಬಿಚ್ಚೊ ಕುನ್ನಿಗಳ ಬಾಲ ಕತ್ತರಿಸಿ,ನಾಡಿಗೆ ನ್ಯಾನೊ ಕೀರ್ತಿ ತಂದು,ಒಂದು ವರ್ಷದಾಗೆ ೮೦೦೦೦ ಕೋಟಿ ಅಂದ್ರೆ ೮೦೦೦೦೦೦೦೦೦೦೦೦ ರೂಊಊಊಊಪಾಯಿ ಆದಾಯ ತಂದು ತಮ್ಮ ನಾಡಿನ ಕೀರ್ತಿ ಹೆಚ್ಚಿಸ್ಕೊಂಡು ಯಾವ್ದೆ ಜಾತಿ/ಮತದವರ ಮ್ಯಾಗೆ ದೌರ್ಜನ್ಯ ಮಾಡ್ದೆ, ಕಾರಣವಿಲ್ಲದೆ ಶಿಕ್ಷಿಸ್ದೆ,ಯಾವ್ದೆ ತಂಟೆ ತಕರಾರು ಇಲ್ದೆ,ಎಲ್ರು ಸೌಹಾರ್ದತೆ ಇಂದ ಬದುಕೋ ಹಾಗೆ ಇರೊ ಗುಜರಾತ್ ಮಾದರಿಯ ರಾಷ್ಟ್ರೀಯ ಪಕ್ಷಾ ಇರೊ ನಾಡು ಬೇಕಾ? ಯೋಚ್ನೆ ಮಾಡ್ಬುಟ್ಟು ನಂಗೆ ವಸಿ ಯೊಳಿ.. ಯಾವ್ದ್ ಸರಿ ಯಾವ್ದ್ ತಪ್ಪು ಅಂತಾ

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು - ಭಾಗ ೩ (ಕೊನೆಯದ್ದು)

on April 15, 2009

’ಮ’ಕಾರದಲ್ಲಿ ಆರನೇಯದಾಗಿ ಮೈನೊ.
ಮೈನೊ ಅಂದರೆ ಏನು? ಅಥವಾ ಯಾರು?ಅಂಟೊನಿಯಾ ಮೈನೊ,ಇಟಲಿಯಲ್ಲಿ ಹುಟ್ಟಿ ರೋಮನ್ ಕಾಥೋಲಿಕ್ ಕ್ರೈಸ್ತೆಯಾಗಿ ಬೆಳೆದು,ಭಾರತಕ್ಕೆ ಬಂದಾದ ಮೇಲೆ ಸೋನಿಯಾ ಗಾಂಧಿಯಾದ ಇವಳಿಗೆ ದೇಶದ ಸಂಸ್ಕೃತಿ,ಇತಿಹಾಸ,ಪರಂಪರೆಯನ್ನೆ ಅರಿಯದ ಇವಳು ಇಂದು ಪರದೆಯ ಹಿಂದೆ ಅವಿತು "ಮನ ಮೋಹಿನಿ"ಯನ್ನು ಮುಂದಿಟ್ಟುಕೊಂಡು ದೇಶದ ಭವಿಷ್ಯವನ್ನೆ ನಿರ್ಧರಿಸುತ್ತಾಳೆ!!ನಮ್ಮ ದೇಶವನ್ನೆ ಮಾರಲಿಕ್ಕೆ ಹೊರಟಿರುವ ಕಾಂಗ್ರೆಸ್ಸ್ ರಾಜಕಾರಣಿಗಳ ಮಂದೆ,ಇವಳ "ಗಾಂಧಿ"ಎಂಬ ಹೆಸರನ್ನೆ ಮುಂದಿಟ್ಟುಕೊಂಡು ಅಧಿಕಾರಕ್ಕಾಗಿ,ದುಡ್ಡಿಗಾಗಿ ಹಪಾಹಪಿ ನಡೆಸುತ್ತಿದ್ದಾರೆ.ಹಿಂದು ಮೌಲ್ಯಗಳು
ಹಿಂದು ಧರ್ಮವೆಂದರೆ ಕಿಂಚಿತ್ ಸಹ ಗೌರವಿಸದ ಇವಳಿಗೆ ನಮ್ಮ ದೇಶದ ರಾಜಕಾರಿಣಿಗಳು ನಾ ಮುಂದು ತಾ ಮುಂದು ಅಂತ ಬಿದ್ದು ಇವಳು ಕಾಲಲ್ಲಿ ತೋರಿಸಿದ್ದನ್ನು ಅತ್ಯಂತ ಭಕ್ತಿಯಿಂದ ಶ್ರದ್ಧೆ ವಹಿಸಿ ಮಾಡುತ್ತಾರೆ ಏಕೆಂದರೆ "ಮೇಡಂ"ಗೆ ಖುಷಿ ಆದ್ರೆ ಖುರ್ಚಿ ಗಟ್ಟಿಯಿದ್ದಂತೆ ಅಲ್ಲವೆ. ಶಿವರಾಜ್ ಪಾಟಿಲ್ ಸಹ ಮೇಡಂನ ಆಗಾಗ ಭೇಟಿ ಮಾಡಿ ಪೆಟ್ಟಿಗೆಗಟ್ಟಲೆ ಕಾಣಿಕೆ ಅರ್ಪಿಸಿದ್ದಕ್ಕೆ ಅಲ್ವೆ ಜನಾಂದೋಲನ ನಡೆಸಿ ಅವನನ್ನು ತೆಗೆಸಬೇಕಾಯಿತು, ಇಲ್ಲವಾದರೆ ಇನ್ನು ಹೇಳಿಕೆ ಕೊಟ್ಟಿಕೊಂಡೆ ಅಧಿಕಾರ ಚಲಾಯಿಸುತ್ತಿದ್ದ "ಧೈರ್ಯವಾಗಿರಿ, ಭಯೊತ್ಪದಕರನ್ನು ಬಗ್ಗುಬಡಿಯುತ್ತೇವೆ, ತಪ್ಪು ಮಾಡಿದವರನ್ನು ಶಿಕ್ಷಿಸುತ್ತೇವೆ"ಅಂತಾನೆ ಡಂಗೂರ ಹೊಡಿತಾ ಇದ್ದಿದ್ದು.ಸುಪ್ರೀಂ ಕೋರ್ಟ್ ಆಜ್ಞೆಯನ್ನು ಮೀರಿ ಅಫಜಲ್ ಗುರುನ ಇನ್ನ ಸಾಕ್ತಾನೆ ಇದಾರೆ, ಈಗ ಕಸಬ್ ಅನ್ನು ಸಹ ಸಾಕಲು ಯೋಜಿಸಿದ್ದಾರೆ.ಒಟ್ನಲ್ಲಿ ಕೇಸರಿ ರಕ್ತ ಹರಿದರು ಪರವಾಯಿಲ್ಲ ಆದ್ರೆ ಹಸಿರು ರಕ್ತ ಒಂದು ತೊಟ್ಟು ಸಹ ಹೊರಬರದಂತೆ ಕಾಪಾಡುವುದರಲ್ಲಿ ಕಾಂಗ್ರೇಸ್ಸಿಗರನ್ನು ಮೀರಿಸುವುದರಲ್ಲಿ ಯಾರು ಹುಟ್ಟಿಲ್ಲ. ಆದ್ರು ಸಹ ನಮ್ಮ ಹಿಂದುಗಳು ಅವರಿಗೆ ಕಣ್ಣುಮುಚ್ಚಿ ವೋಟು ಹಾಕುವುದನ್ನು ಬಿಡುವುದಿಲ್ಲ.ಗಾಂಧಿ ಸತ್ತು ಐವತ್ತು ವರ್ಷ ಆದ್ರು ಗಾಂಧಿತನದ ಹೆಸರಿಟ್ಟುಕೊಂಡು ಆಳುತ್ತಿರುವ ಗೋ ಮುಖವ್ಯಾಘ್ರಗಳಿಗೆ ವೋಟು ಹಾಕುವುದು ನಿಲ್ಲುವುದಿಲ್ಲ.

ಕಾಂಗ್ರೇಸ್ಸಿಗರಿಗೆ ಇಟಲಿಯಿಂದಲೆ ಬಂದಿರುವವರು ಆಗಬೇಕೆ? ಇವರ ಪಾರ್ಟಿಯನ್ನು ನಡೆಸಲು ಅರ್ಹರು ನಮ್ ದೇಶದಲ್ಲಿ ಯಾರು ಹುಟ್ಟೆ ಇಲ್ಲವೆ? ಕರ್ನಾಟಕದಲ್ಲಿ ಅಪ್ಪ-ಮಗನ್ನ ನೋಡಿದ್ದಾಯ್ತು ಇನ್ನ ಕೇಂದ್ರದಲ್ಲಿ ಅಮ್ಮ-ಮಗನ ಸರದಿ!!೨೦೦೪ರಲ್ಲಿ ಲಂಡನ್‌ನ"ದಿ ಗಾರ್ಡಿಯನ್""A Waitress who became the world leader"ಎಂದು ಪತ್ರಿಕೆಯು ಮುಖ ಪುಟಗಳಲ್ಲಿ ಹೇಳಿತು. ಇವಳಿಗೆ ಓದು, ವಿದ್ಯಾರ್ಹತೆಯೆನ್ನುವುದರ ಗಂಧವೆ ಗೊತ್ತಿಲ್ಲಾ!!ಆಗಲೆ ಸಿದ್ಧಪಡಿಸಿದ ಭಾಷಣವನ್ನು ಬಿಟ್ಟು ನಾಲ್ಕು ಮಾತಾಡಲು ಶಕ್ತಳಿರದ ಇವಳನ್ನು larger than life ಎಂಬ ಹಾಗೆ ಬಿಂಬಿಸುವ ಮೀಡಿಯಾಗೆ ನಮೋ ನಮ:.ರಾಜೀವ್ ಗ್ಯಾಂಡಿ(ghandy) ಯನ್ನು ಮದುವೆ ಆಗಿ ಭಾರತದಲ್ಲಿ ೧೮ ವರ್ಷಗಳಿಂದ ನೆಲೆಸಿದ್ದರು ಸಹ ಭಾರತೀಯ "ಪೌರತ್ವ"ವನ್ನು ಸ್ವೀಕರಿಸಲು ನಿರಾಕರಿಸಿದಳು ಆದರು ಸಹ ದಿಲ್ಲಿಯಲ್ಲಿ ಇವಳು "ವೋಟರ್"!!! ಕರ್ನಾಟಕದಲ್ಲಿದ್ದುಕೊಂಡೆ ಕನ್ನಡ ಬಾರದೆ ಕರ್ನಾಟಕದಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡಿಗರು ಎನಿಸಿಕೊಳ್ಳುವುದಿಲ್ಲವೆ?ನಮ್ಮ ನಾಡಿನ ನೀತಿಯಂತೆ ನಂ ಕೇಂದ್ರ!!

ಸೆಪ್ಟೆಂಬರ್ ೨೦೦೬ ೭ರಂದು ಆಯೋಜಿಸಲಾಗಿದ್ದ ವಂದೆ ಮಾತರಂನ ಶತಮಾನೋತ್ಸವಕ್ಕೆ ಹಾಜರಾಗಲು ನಿರಾಕರಿಸಿದ ಇವಳಿಗೆ ಭಾರತ ದೇಶದ ಮೌಲ್ಯಗಳ ವಿರುದ್ಧ ಕಾರುವ ವಿಷದ ಅರಿವು ತಿಳಿಯದೆ ಹೋಗದು ಆದ್ರು ಸಹ ಜನರಿಗೆ ಇವಳೆ ಬೇಕು!! ಪೋಪ್ ಜಾನ್ ಪಾಲ್-೨ ತೀರಿಕೊಂಡಾಗ ಈ ಸೆಕ್ಯುಲರ್ ಸರ್ಕಾರಕ್ಕೆ ರಜೆ ಘೋಷಿಸುವುದರಲ್ಲಿ ಯಾವುದೆ ಹಿಂಜರಿಕೆ ತೋರಿಸಲಿಲ್ಲ.ಅಷ್ಟಕ್ಕು ನಮ್ ದೇಶಕ್ಕು ಪೋಪ್ ಜಾನ್ ಪಾಲ್-೨ ಏನು ಸಂಬಂಧ?? ನಾಳೆ ದಿನ ಬಿಹಾರಿನಲ್ಲಿ ಬಿನ್ ಲಾಡೆನ್ ಹಿಂಬಾಲಕರು ಗದ್ದುಗೆ ಏರಿದರೆ, ಬಿನ್ ಲಾಡೆನ್ ತೀರಿಕೊಂಡಾಗ ರಜೆ ಘೋಷಿಸಿದರೆ ಆಶ್ಚರ್ಯವಿಲ್ಲ ಅನ್ಕೋತೀನಿ!!ನಮ್ಮ ದೇಶದ ಬೆಳವಣಿಗೆಗೆ ಶ್ರಮಿಸಿದ ಧರ್ಮ ಗುರುಗಳು ಇವರಿಗೆ ಕೋಮುವಾದಿಗಳ ತರಹ ಕಾಣುತ್ತಾರೆ. ಆಸ್ಟ್ರೆಲಿಯನ್ ಮಿಷಿ-ನರಿ,ಗ್ಲಾಡಿಸ್ ಸ್ಟೈನ್ಸ್ (ಗ್ರಹಾಂ ಸ್ಟೈನ್ಸ್ ಹೆಂಡತಿ),ಗ್ರಹಾಂ ಸ್ಟೈನ್ಸ್ ಮತಾಂತರ ಕಾರ್ಯಗಳಲ್ಲಿ ಅತ್ಯಂತ ಚೂಟಿಯಾಗಿದ್ದ ಕಾರಣ ಅವನನ್ನು ಸ್ಥಳೀಯರು ಜೀವಂತ ಸುಟ್ಟರು- ಇದನ್ನು ನಾನು ಸಮರ್ಥಿಸುವುದಿಲ್ಲ ಆದರೆ ಈ ರೀತಿಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಇವನಿಗೆ ಈ ರೀತಿ ಅಂತ್ಯವಾದಾಗ ಅವನ ಹೆಂಡತಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವುದರಲ್ಲಿ ಏನರ್ಥ ಇದೆ? ಭಾರತಕ್ಕೆ ಇವರ ಕೊಡುಗೆ ಏನು?ಶ್ರೀಲಂಕಾದಲ್ಲಿ ತಮಿಳರ ಮೇಲೆ ಅನ್ಯಾಯವಾಗುತ್ತಿದೆ ಅಂತ ರಸ್ತೆಯಲ್ಲೆ ಸಜೀವ ದಹನ ಮಾಡಿಕೊಂಡು ಸತ್ತವರು ತುಂಬ ಸಿಗ್ತಾರೆ, ಅವರ ಮನೆಯವರಿಗು
ಕೊಡಬಹುದಲ್ವ?ಪದ್ಮಶ್ರೀ ಪ್ರಶಸ್ತಿಯನ್ನ!!"ಬೆನ್ನಿ ಹಿನ್ನ್" ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಮತಾಂತರ ಮಾಡಲು ಕಾಲಿಟ್ಟ ಭೂಪ,ಇವನಿಗೆ ಬರುವಾಗ ಅಥವ ಹೋಗುವಾಗ ಯಾವುದೆ ಸೆಕ್ಯುರಿಟಿ ಚೆಕ್ ಆಗಲಿಲ್ಲ. ಏನು ತಂದಿದ್ದ? ಏನು ತೆಗೆದುಕೊಂಡು ಹೋದ!(ಇದು ದೇಶದ ಭದ್ರತೆಯ ವಿಚಾರ)ಯಾರಿಗು ತಿಳಿಯಲಿಲ್ಲ,ಎಲ್ಲ ಮೇಡಂ ಕೃಪೆ,ಬೂಟು ನೆಕ್ಕುವ ರಾಜಕಾರಣಿಗಳ ಸಹಯೋಗ.ಇಷ್ಟೆಲ್ಲಾ ನಡೆಸುವ ಇವಳು ಮತಾಂತರಕ್ಕೆ ಕುಮ್ಮಕ್ಕು ಕೊಡುವುದಿಲ್ಲ ಎಂದು ಯಾವ ಬಾಯಲ್ಲಿ ಹೇಳಬಹುದು?

ಒಟ್ನಲ್ಲಿ ಹೇಳಬೇಕೆಂದ್ರೆ ಎಲ್ಲಿವರ್ಗು ಈ ಆರು "ಮ"ಕಾರಗಳು ಆಳುತ್ತವೊ ಅಲ್ಲಿವರ್ಗು ಹಿಂದುಗಳ ಬಾಳು ನಾಯಿ ಪಾಡು. "ಪೋಟಾ" ತೆಗೆದ್ರು, ಸುಪ್ರೀಮ್ ಕೋರ್ಟ್ ಆಜ್ಞೆ ಮೀರಿ ಅಫ್‌ಝಲ್ ಗುರುನ ಇನ್ನು ಸಾಕ್ತಿದಾರೆ. ಈಗ ಕಸಬ್ ಒಬ್ಬ ಬಂದ, ಪಾಕಿಸ್ತಾನಿ ಆದ್ರೇನಂತೆ ಅವನಿಗೆ ಶಿಕ್ಷೆ ಕೊಡಿಸದೆ ನಮ್ಮ ದೇಶದ ಮೈನಾರಿಟಿಯವರ ಹೃದಯಕಮಲಕ್ಕೆ ನೋವ್ವುಂಟಾಗದಂತೆ ನಡೆದುಕೊಳ್ಳುವುದೆ "ಮ"ಕಾರಗಳ ಉದ್ದೇಶ. ಮುಂಬೈ ನಲ್ಲಿ ನಡೆದ ಜಾಗತಿಕ ಮಟ್ಟದ ಹತ್ಯಾಕಾಂಡ ನಡಿಬೇಕಿತ್ತು ಮೈನೊ ಹಾಗು ಮನ ಮೋಹಿನಿಗೆ ಅಲ್ಲಾಡಲು,ಶಿವರಾಜ ಪಾಟೀಲರು ನಿರ್ಗಮಿಸಲು. ಅಕಸ್ಮಾತ್ ಆ ಘಟನೆಯಲ್ಲಿ ಹೊರದೇಶದ ಪ್ರಜೆಗಳು ಸಾಯದೆ ಇದ್ದಿದ್ದರೆ ಅಥವಾ ಅವರ ಪ್ರಜೆಗಳ ಮೇಲೆ ಹಲ್ಲೆಯೆ ಆಗದಿದ್ದರೆ ಬಹುಶ: ಈ ಮಟ್ಟಕ್ಕೆ ಬೆಳವಣಿಗೆಗಳು ಆಗುತ್ತಲೆ ಇರುತ್ತಿರಲಿಲ್ಲ,ಮನ ಮೋಹಿನಿ ಮಿಸುಕಾಡುತ್ತಿರಲಿಲ್ಲ.

ಗಾಯದ ಮೇಲೆ ಬರೆಯೆಂಬಂತೆ ಈಗ ಎಮ್.ಎಫ್.ಹುಸೈನ್‌ನ ಮೇಲೆ ಒಂದು ಪಾಠವನ್ನು ಸಹ ಅಳವಡಿಸಲು ಹುನ್ನಾರ ನಡೆಯುತ್ತಿದೆ. ಇವನಿಗೆ ಹಿಂದು ದೇವತೆಗಳೆ ಆಗಬೇಕು ತನ್ನ ಚಿತ್ರಕಲೆ ಸಾಮರ್ಥ್ಯ ತೋರಲು, ಅವನ ಮಗಳು,ತಾಯಿಯೆಲ್ಲ ಮೈ ತುಂಬ ಬಟ್ಟೆ ಹಾಕಿಕೊಂಡಂತೆ ಚಿತ್ರಿಸಿದ್ದರೆ, ಹಿಂದು ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿರುವುದು ದೊಡ್ಡ ವಿಚಾರವೆ ಅಲ್ಲ. http://www.hindujagruti.org/activities/campaigns/national/mfhussain-campaign/
ಈ ಮುದಿಯನ ಮುಖಕ್ಕೆ ಡಾಕ್ಟ್ರೇಟ್ ಬೇರೆ ಕೇಡು,"ಮಾಧುರಿ ಫಿದಾ" ಹುಸೈನ್ ಎಂಬ ಖ್ಯಾತಿ ಇವನಿಗೆ. ವಿಡಿಯೋಸ್ ನೋಡಲು http://www.hindujagruti.org/videos/index.php?id=2

ಈಗ ಶಾಲೆಯ ಪಠ್ಯ ಪುಸ್ತಕದಲ್ಲಿ ಇವನ ಮೇಲೆ ಒಂದು ಪಾಠ ಮುಂದೊಂದು ದಿನ ಶಾರುಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್, ಸಂಜಯ್ ದತ್ತ್ ಕಾಣಿಸಿಕೊಂಡರೆ ಹೆದರ ಬೇಡಿ. ಇದು, ಕೇವಲ ಮೈನಾರಿಟಿ ಅವರ ಹಿರಿಮೆ ಕೊಂಡಾಡಲು ಅವರನ್ನು ಪುಸಕ್ತಗಳಲ್ಲಿ ಪರಿಚಯಿಸುತ್ತಿರುವುದು ಎಂಬ ಹೇಳಿಕೆ ಬಂದರು ಅಚ್ಚರಿಯಲ್ಲ. ಆದರೆ ನಿಜವಾದ "ಬಣ್ಣ"ವನ್ನು ಬರೆದ ತಸ್ಲೀಮಾ ನಸ್ರೀನ್‌ಗೆ ಬಹಿಷ್ಕಾರ!!!. "ರಾಮ್ ಸೇತು" ಬಗ್ಗೆ ಪ್ರಶ್ನಿಸುವ ಇವರು , ಶ್ರೀನಗರದಲ್ಲಿ ಇಡಲಾಗಿದೆಯೆಂಡು ಹೇಳುವ "ಮೊಹಮ್ಮದನ ಕೂದಲು" ಅಥ್ವಾ ಜೀಸಸ್ ನ "ಅಸ್ತಿತ್ವದ ಪುರಾವೆ" ಗಳ ಬಗ್ಗೆ ಮಾತೆ ಹೊರಡುವುದಿಲ್ಲ. ಯಾಕಂದರೆ ಜೀಸಸ್ ಅನ್ನುವ ವ್ಯಕ್ತಿಯೊಬ್ಬರು ಇದ್ದರು ಎನ್ನುವುದುಕ್ಕೆ ಯಾವುದೆ ಪುರಾವೆ ಇಲ್ಲ!! ಏನಿದ್ದರು ಬೈಬಲ್ ನ ಕಥೆಗಳಲ್ಲಿ ಮಾತ್ರ ಇವರ ಅಸ್ತಿತ್ವ :-o. ನಾವು ಕೆದಕುತ್ತೆವೆಯೆ ಇಂತಹ ವಿಚಾರಗಳನ್ನ? ಅಯೋಧ್ಯೆ,ದ್ವಾರಕೆಯ ಬಗ್ಗೆಯಾದರು ಪುರಾವೆ ಇವೆ ಆದರೆ ಇವರುಗಳ ಅಸ್ತಿತ್ವ ಹೇಗೆ ರುಜುವಾತು ಮಾಡುವುದು?ಎಲ್ಲದಕ್ಕು ನಂಬಿಕೆಯೆ ಮೂಲವಲ್ಲವೆ, ಹಾಗಾಗಿ ನಮ್ಮ ನಂಬಿಕೆಗನುಸಾರವಾಗಿ ರಾಮ ಸೇತು ವಿಚಾರವಾಗಿ ಪ್ರಶ್ನಿಸುವುದು ತಪ್ಪು. ಆದ್ರೆ ಇದನ್ನ ಕೇಳೊರು ಯಾರು? ಹಿಂದುಸ್ತಾನದಲ್ಲಿ ಹಿಂದುನೆ ಅಲ್ವಾ ಹಿಂದುಳಿದಿರೋದು!!

ನೀವು,ಕಣ್ಣ್ ಮುಚ್ಚ್ಕೊಂಡು ಹರಕೆಯ ದುಡ್ಡೊ ಅಥವ ದೇವಸ್ಥಾನ ಉದ್ಧಾರ ಆಗ್ಲಿ ಅಂತ ಹುಂಡಿಗೆ ಹಾಕೊ ದುಡ್ಡು ರಾಮನಿಗಿಂತ ರಹೀಮ ಹಾಗು ಪಾದ್ರಿಯ ಇಗರ್ಜಿಯ ಖಾತೆಗಳಿಗೆ ಟ್ರಾನ್ಸ್ಫರ್ ಆಗುವುದು ಖಂಡಿತ.ಹೌದು, ಸರ್ಕಾರದ ಆಡಳಿತದಲ್ಲಿರುವ ದೇವಸ್ಥಾನ ಹುಂಡಿಯ ದುಡ್ಡು ಮಸೀದಿ ಹಾಗು ಇಗರ್ಜಿ(ಚರ್ಚ್) ಉದ್ಧಾರ ಮಾಡಲು ಬಳಸಲಾಗುತ್ತದೆ. ದೇವಸ್ಥಾನದ ೧೦೦ ರೂಪಾಯಿಯಲ್ಲಿ ೬೦/-೮೦/-ಗಳಷ್ಟು ಮಸೀದಿಗೆ ಹಾಗು ಇಗರ್ಜಿಗೆ ಮೀಸಲಿಡಲಾಗುತ್ತದೆ.ನಮ್ಮ ದೇವಸ್ಥಾದ ಪೂಜಾರಿ ಹಾಗು ದೇವಸ್ಥಾನಗಳ ಪಾಲಿಗೆ ಪಂಗನಾಮ ಮೀಸಲು.
ಸಿಮಿಯನ್ನು ಬ್ಯಾನ್ ಮಾಡಲು ನಮ್ಮವರು ಆಗಾಗ ಪುರಾವೆ ನೀಡಬೇಕು ಇಲ್ಲವಾದರೆ "ಬ್ಯಾನ್ ಪೀರಿಯಡ್"ತೀರಿ ಅದು ಲೀಗಲ್ ಆಗುತ್ತೆ!! ಅದೆ ಅರ್.ಎಸ್.ಎಸ್, ಬಜರಂಗ ದಳ,ವಿ.ಹೆಚ್.ಪಿ ಯೆಂತಹ ದೇಶೋದ್ದಾರಕ ಸಂಸ್ಥೆಗಳನ್ನು ಭಯೋತ್ಪಾದಕ ಸಂಸ್ಥೆಯೆಂದು ಪರಿಗಣಿಸಬೇಕು ಎಂದು ಎಲ್ಲಿಲ್ಲದ ಒತ್ತಡ.
"ಮನ ಮೋಹಿನಿಗೆ" ಮುಸ್ಲಿಂ ಒಬ್ಬನನ್ನು ಅರ್ರೆಸ್ಟ್ ಮಾಡಿದಕ್ಕೆ ನಿದ್ದೆಯೆ ಬರುವುದಿಲ್ಲ, ಪ್ರಗ್ಯಾ ಸಾಧ್ವಿ ಎಂಬ ಸನ್ಯಾಸಿನಿಯನ್ನು ಸುಳ್ಳು ಆರೋಪದ ಮೇರೆ ಅರ್ರೆಸ್ಟ್ ಮಾಡಿದಾಗಾಗಲಿ, ನೂರಾರು ಜನರು ಭಯೊತ್ಪಾದ ದಾಳಿಗಳಲ್ಲಿ ಸತ್ತರೆ ಏನು ಅನ್ನಿಸುವುದಿಲ್ಲ. ಒಬ್ಬ ಸಿಖ್ ಪಂಥಕ್ಕೆ ಸೇರಿದ ಪ್ರಧಾನಿ, ಸಿಖ್ ಹತ್ಯಾಖಾಂಡದ ತೀರ್ಪಿನಲ್ಲಿ ಖೇದವಿಲ್ಲದವನ ಹತ್ತಿರ "ಮೆಜಾರಿಟಿ"ಗಳ ಮನಸ್ಸಿಗೆ ಬೆಲೆಯಿದೆಯೆ??

ಅರುಂಧತಿ ರಾಯ್ - ಶ್ರೀ ಲಂಕಾದಲ್ಲಿ ಭಯೋತ್ಪಾದಕ ಸಂಸ್ಥೆ ಎಲ್.ಟಿ.ಟಿ.ಈ ಜೊತೆ ನಡೆಯುತ್ತಿರುವ ಯುದ್ದದಲ್ಲಿ ಇವಳ ಮನಸ್ಸಿಗೆ ಎಲ್ಲಿಲ್ಲದ ದುಖ: ಆವರಿಸಿಕೊಂಡಿದ್ದೆ, ಅದೆ ನಮ್ಮ ದೇಶದ ನಾಲ್ಕು ಲಕ್ಷ ಕಾಶ್ಮೀರಿ ಪಂಡಿತರ ಮೇಲೆ ಅತ್ಯಾಚಾರ/ಹಲ್ಲೆ/ಕಗ್ಗೊಲೆ ನಡೆದು ಅವರು ತಮ್ಮೆ ನೆಲ ತ್ಯಜಿಸಿ ಓಡಿದಾಗ ಇವಳು ಕುರುಡಿಯಾಗಿದ್ದಳೆ??

ರಾಮ್ ವಿಲಾಸ್ ಪಾಸ್ವಾನ್ ಒಬ್ಬ ಮುಸ್ಲಿಮ್ ಮುಖ್ಯ ಮಂತ್ರಿಗೆ ಅಡಿಪಾಯ ಹಾಕುತ್ತಿರುವಾಗ ಓಸಾಮ ಬಿನ್ ಲಾಡೆನ್ ತರಹ ಇರುವವರು ಬೇಕೆ ಇವನ ಪ್ರಚಾರಕ್ಕೆ!! ಕೇಳುವವರು ಯಾರು ಇಲ್ಲವೆ? ಕೇವಲ ಒಡೆದಾಳುವ ನೀತಿಯನ್ನೆ ಪಾಲಿಸಿ ದೇಶವನ್ನೆ ವಿಭಜಿಸಿ ತಮ್ಮೆ ಬೇಳೆಯನ್ನು ಬೇಯಿಸುತ್ತಿರುವ ಇಂತವರಿಗೆ,ಇವೆಲ್ಲವನ್ನು ತಿಳಿದು ಯು.ಪಿ.ಏ/ಕಾಂಗ್ರೆಸ್ಸ್ ಸರ್ಕಾರಕ್ಕೆ ವೋಟ್ ಮಾಡುವ ಭಾರತೀಯರ ಭವಿಷ್ಯವನ್ನು ದೇವರೆ ಕಾಪಾಡಬೇಕು. ಖಂಡಿತವಾಗಲು ಈ ಕಲಿಯುಗದಲ್ಲಿ ಅವತಾರವೆತ್ತಿ ಬಂದು ಕಾಪಾಡಲು ವಿಷ್ಣುವಂತು ಧೈರ್ಯ ಮಾಡುವುದಿಲ್ಲ ಏಕೆಂದರೆ ಅವರು ಮೈನಾರಿಟಿಯಲ್ಲ, ಮೈನಾರಿಟಿಯಲ್ಲದಿದ್ದರೆ ನಮ್ಮ ದೇಶದಲ್ಲಿ ಬೆಲೆಯಿಲ್ಲ!!!

"ಧರ್ಮೊ ರಕ್ಷತಿ ರಕ್ಷಿತ:" ಎನ್ನುವಲ್ಲಿ ಧರ್ಮವನ್ನು ಜಾತಿಗೆ ಹೋಲಿಸದೆ ಹಿಂದುತ್ವವನ್ನು ಕಾಪಾಡಿ ಮೆರೆದರೆ ಮಾತ್ರ ನಮ್ಮ ದೇಶಕ್ಕೆ ಉಜ್ವಲ ಭವಿಷ್ಯವುಂಟು.

ಕೊನೆಯದಾಗಿ
ಈ ಸಾಲುಗಳು ತುಂಬಾ ಸ್ವಾರಸ್ಯಕರವಾಗಿದೆ ಒದಿ...
ಲ್ಯಾಟಿನ್ ಕ್ಯಾಥೋಲಿಕ್ ಇಗರ್ಜಿ(ಚರ್ಚ್)ಗೆ ಸೇರಿದವನು, ಸಿರಿಯನ್ ಕ್ಯಾಥೋಲಿಕ್ ಇಗರ್ಜಿ(ಚರ್ಚ್)ಗೆ ಹೋಗುವುದಿಲ್ಲ, ಸಿರಿಯನ್ ಕ್ಯಾಥೋಲಿಕ್ ಇಗರ್ಜಿಗೆ ಸೇರಿದವನು, ಲ್ಯಾಟಿನ್ ಕ್ಯಾಥೋಲಿಕ್ ಇಗರ್ಜಿಗೆ ಹೋಗುವುದಿಲ್ಲ!! ಇವರಿಬ್ಬರು ಮಾರ್ಥೋಮ ಇಗರ್ಜಿಗೆ ಹೋಗುವುದಿಲ್ಲ!! ಈ ಮೂವರು ಪೆಂಟಾಕೋಸ್ಟಲ್ ಇಗರ್ಜಿಗೆ ಹೋಗುವುದಿಲ್ಲ!! ಈ ನಾಲ್ವರು ಸಾಲ್ವೇಷನ್ ಇಗರ್ಜಿಗೆ ಹೋಗುವುದಿಲ್ಲ!! ಈ ಐವರು ಸವೆಂತ್ ಡೆ ಅಡ್ವೆಂಟಿಸ್ಟ್ ಇಗರ್ಜಿಗೆ ಹೋಗುವುದಿಲ್ಲ!!ಈ ಆರು ಜನರು ಆರ್ಥೋಡಾಕ್ಸ್ ಇಗರ್ಜಿಗೆ ಹೋಗುವುದಿಲ್ಲ!! ಈ ಏಳು ಜನರು ಜಾಕೊಬೈಟ್ ಇಗರ್ಜಿಗೆ ಹೋಗುವುದಿಲ್ಲ .... ಇದೆ ರೀತಿಯಲ್ಲಿ ಕೇರಳವೊಂದರಲ್ಲೆ ಕ್ರೈಸ್ತ ಮತದಲ್ಲಿ ೧೪೬ "ಜಾತಿ"ಗಳಿವೆ, ಇವರುಗಳಲ್ಲಿ ಯಾರು ಯಾರೊಬ್ಬರ ಇಗರ್ಜಿಯ ಮಟ್ಟಿಲನ್ನು ಸಹ ಹತ್ತುವುದಿಲ್ಲ.ಒಬ್ಬ ಕ್ರಿಸ್ತ,ಒಂದು ಬೈಬಲ್,ದೇವರಿಗೆ ಜೆಹೋವಾ ಎನ್ನುವ ಒಂದೆ ನಾಮ, ಆದರು ಇಂತಹ ಒಗ್ಗಟ್ಟು!!!

ಮುಸ್ಲಿಂಗಳಲ್ಲಿ, ಶಿಯಾ ಹಾಗು ಸುನ್ನಿಗಳು ನಿತ್ಯ ಹೊಡೆದಾಡಿಕೊಂಡು ಸಾಯುತ್ತಲೆ ಇರುತ್ತಾರೆ.ಶಿಯಾ ಪಂಥಕ್ಕೆ ಸೇರಿದವನು ಸುನ್ನಿಯ ಮಸೀದಿಗೆ ಹೋಗುವುದಿಲ್ಲ, ಸುನ್ನಿಯಾದವನು ಶೀಯ ಮಸೀದಿಗೆ ಹೋಗುವುದಿಲ್ಲ.ಇವರಿಬ್ಬರು ಅಹಮದೀಯಾ ಮಸೀದಿಗೆ ಹೋಗುವುದಿಲ್ಲ, ಇವರು ಮೂರ್ವರು ಸೂಫಿ ಮಸೀದಿಗೆ ಹೋಗುವುದಿಲ್ಲ, ಈ ನಾಲ್ವರು ಮುಜಾಹಿದ್ದೀನ್ ಮಸೀದಿಗೆ ಹೋಗುವುದಿಲ್ಲ, ಈ ರೀತಿಯಾಗಿ ಇನ್ನು ೧೩ ರೀತಿಯ ಜಾತಿ/ಮತಗಳಿವೆ ಮುಸ್ಲಿಂರಲ್ಲಿ ಒಂದು ಅಲ್ಲಾ,ಒಂದು ಕುರಾನ್,ಒಂದು ದೇವರ ನಾಮ, ಆದರು ಇಂತಹ ಒಗ್ಗಟ್ಟು!!!

ಹಿಂದುಗಳಿಗೆ ಸಾವಿರಾರು ಧರ್ಮಗ್ರಂಥಗಳು,ಸಾವಿರಾರು ಆಧ್ಯಾತ್ಮ ಪ್ರವಚನಗಳು,ಲಕ್ಷಕ್ಕು ಹೆಚ್ಚು ಉಪ-ಪ್ರವಚನಗಳು,ಮುಕ್ಕೋಟಿ ದೇವತೆಗಳು,ಥರಹೆವಾರಿ ಆಚಾರ ವಿಚಾರಗಳು,ಸಹಸ್ರಾರು ಋಷಿಗಳು,ಸಾವಿರಾರು ದೇವಸ್ಥಾನಗಳು,ಆದರು ಸಹ ಯಾವುದೆ ದೇವಸ್ಥಾನ ಇವರಿಗೆ ಅಂತ ಮೀಸಲು ಇಲ್ಲ.ಎಲ್ಲರು ಎಲ್ಲ ದೇವಸ್ಥಾನಕ್ಕೆ ಹೋಗುತ್ತಾರೆ. ಹಿಂದುಗಳು ದೇವರ ಹೆಸರಿನಲ್ಲಿ ಇದುವರೆಗು ದಾಳಿ ಮಾಡಿದ ಉಲ್ಲೇಖವೆ ಇಲ್ಲ,ಇತಿಹಾಸದಲ್ಲಿ. ಜಿಹಾದ್(ಮ್ಲೇಚ್ಚರು)ಆಗಲಿ ಅಥವಾ ಕ್ರೂಸೇಡರ್ಸ್(ಕ್ರೈಸ್ತರು)ಎಂಬ ಹೆಸರಿನಲ್ಲಾಗಲಿ ಧರ್ಮದ ಹೆಸರಿನಲ್ಲಿ ದಾಳಿ ಮಾಡಿಲ್ಲ.
ಅನೇಕತೆಯಲ್ಲಿ ಏಕತೆಯಿಂದ ಜೀವಿಸುವ ಹಿಂದುಗಳನ್ನು ಮೈನಾರಿಟಿ/ಸೆಕ್ಯುಲರಿಸಂ/ಕಮ್ಯುನಿಸ್ಟ್‌ಗಳ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ಸ್ ಸರ್ಕಾರದ ನೀತಿಯನ್ನು ಖಂಡಿಸಬೇಕು,ಭಾರತದ ಉಜ್ವಲ ಭವಿಷ್ಯಕ್ಕಾಗಿ ಬಿ.ಜೆ.ಪಿ ವೋಟ್ ಮಾಡಲೆಬೇಕು.

http://greathindu.com/2009/04/look-at-this-liar-rahul-gandhi/
"Right to Education is most important": ಅನ್ನೊ ರಾಹುಲ್ ಗಾಂಧಿ ಓದಿರೊದಾದ್ರು ಏನು ಅಂದುಕೊಂಡಿದೀರಾ? ಹತ್ತನೆ ತರಗತಿ ಸಹ ತೇರ್ಗಡೆ ಆಗಿಲ್ಲ ಈ ಪಾರ್ಟಿ ಹೇಳ್ಕೊಳ್ಳೋದು M.Phil, ಸರಿನಪ್ಪ ಅಂತ ಅದನ್ನ ಕೆದಕಿದ್ರೆ ಸಿಗೊ ಹೆಸ್ರು "ರಊಲ್ ವಿನ್ಸಿ".. http://news.rinkiss.com/tag/rahul-gandhi

ಇಷ್ಟೆಲ್ಲ ಬರೆದಿದ್ರು,ತಿಳಿಸಿದ್ರು ಜನ ಹೋಗಿ ಕಾಂಗ್ರೆಸ್ಸ್ ಗೆ ವೋಟ್ ಮಾಡೊದು ಬಿಡೊಲ್ಲ ಏಕಂದ್ರೆ "ರಊಲ್ ವಿನ್ಸಿ" ಒಹ್ ಕ್ಷಮಿಸಿ ರಾಹುಲ್ ಗಾಂಧಿ ನೋಡೋಕ್ಕೆ ಸುಂದರವಾಗಿದ್ದನೆ ಅಂತ ಹುಡುಗೀರು /ಹೆಂಗಸರು "ಬಿಯಾಂಕ ವಾಡ್ರಾ" ಒಹ್ ಕ್ಷಮಿಸಿ ಪ್ರಿಯಾಂಕ ಸುಂದರವಾಗಿದಾಳೆ ಅಂತ ಯುವಕರು/ಗಂಡಸರು/ಮುದುಕರು!!! ಕಣ್ಣ್ ಮುಚ್ಚ್‌ಕೊಂಡು ಹೋಗಿ ಕೈ ಒತ್ತೋದು ಬಿಡೊಲ್ಲ ಮತ್ತೊಂದು ವರ್ಗದ ಜನ ಗೆಲ್ಲೊ ಪಕ್ಷಕ್ಕೆ ನಮ್ ವೋಟ್ ಬೀಳ್ಬೇಕು ಅಂತ ನಿರ್ಧರಿಸಿಕೊಂಡು ಕಾಂಗ್ರೆಸ್ಸ್ ಗೆಲ್ಲುತ್ತೆ ಅಂತ ಮೊದಲೆ ಊಹಿಸಿ ಅದಕ್ಕೆ ವೋಟ್ ಮಾಡುವುದು ಇನ್ನೊಂದು ವರ್ಗದವರು ನಾನು ವೋಟ್ ಮಾಡಿದ ಪಕ್ಷ
ಸೋಲುತ್ತಪ್ಪ (ಸಚಿನ್ ೧೦೦ ರನ್ ಹೊಡೆದರೆ ಭಾರತ ಸೋಲೊಲ್ವೆ ಆ ತರ್ಕ!!) ಅಂತ ಯೋಚಿಸಿ ಕಾಂಗ್ರೆಸ್ಸ್ ಗೆ ಮತ ಚಲಾಯಿಸುವುದು :). ಇಂತಹವರೆನೆಲ್ಲ ಪ್ರತಿನಿಧಿಸಿ ಕ್ಷೇತ್ರದಿಂದ ಆಯ್ಕೆ ಆಗುವ ಯಾವುದೆ ಪಕ್ಷದ ಮಹಾನುಭಾವರಿಗೆ ನನ್ನ ಒಂದು ದೊಡ್ಡ ನಮಸ್ಕಾರ.

ಒಟ್ನಲ್ಲಿ ನಮ್ ದೇಶಕ್ಕೆ ಕಾದಿದೆ ಮಾರಿಹಬ್ಬ,ಯಾಕೆ ಅಂತ ತಿಳಿಬೇಕು ಅಂದ್ರೆ ಮುಂದೊಂದು ಲೇಖನಕ್ಕೆ ಕಾಯ್ತಿರಿ :) ತಿಳಿಸ್ತೀನಿ.

ಅಂತು ಇಂತು ಈ ಲೇಖನ ಮುಗಿಯಿತು (ಮುಗಿಸ್ದೆ ಅಂತ ಅಂದುಕೊಳ್ಳಿ :D)

ಧನ್ಯವಾದಗಳು
ಪ್ರಸಾದ್

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು - ಭಾಗ ೨

on April 8, 2009

’ಮ’ಕಾರದಲ್ಲಿ ಮೂರನೆಯದಾಗಿ ಮಾರ್ಕ್ಸಿಸ್ಟ್‌ಗಳು, ಮಾರ್ಕ್ಸಿಸ್ಟ್ ಅಥವಾ ಕಮ್ಯುನಿಸ್ಟ್‌ಗಳು ಕಾರ್ಲ್ ಮಾರ್ಕ್ಸ್ ನ ಕುಡಿ, "ಧರ್ಮವೆನ್ನುವುದು ಸಮೂಹಕ್ಕೆ ಗಾಂಜಾವಿದ್ದಂತೆ"ಎನ್ನುವ ಹೇಳಿಕೆ ಕೊಟ್ಟಿರುವಾತ.ಇವರುಗಳು ಮೂಲತ: ನಾಸ್ತಿಕವಾದಿಗಳು ಆದರೆ ಇವರ ನಾಸ್ತಿಕತೆ ಕೇವಲ ಹಿಂದುತ್ವಕ್ಕೆ ಮಾತ್ರ ಸೀಮಿತವಿದೆ.ಎಂದಿಗು ಬಹಿರಂಗವಾಗಿ ಮುಸ್ಲಿಮರ ಅಥವಾ ಕ್ರೈಸ್ತರ ನಂಬಿಕೆ ಬಗ್ಗೆ ಪ್ರಶ್ನಿಸುವ ಧೈರ್ಯ ಸಾಹಸ ಮಾಡಿಲ್ಲ.ನಂದಿಗ್ರಾಮ್‌ನಲ್ಲಿ ನಡೆದ ಹಿಂಸಾಖಾಂಡದ ಹಿಂದೆ ಇವರ ಕೊಡುಗೆ ಅಪಾರ. ಗೊಧ್ರಾ ಗಲಾಟೆ ನಡೆದು ವರ್ಷಗಳೆ ಕಳೆದ್ರು ಅದರ ಕಳೇಬರವನ್ನು ಎತ್ತಿ ಆಡುವ ಜನ ನಂದಿಗ್ರಾಮದ ಬಗ್ಗೆ ಚಕಾರವೆತ್ತದೆ ಕುಳಿತಿರುವುದು.ಅವರ ಗೋಸುಂಬೆತನದ ಕನ್ನಡಿ,ಅದನ್ನ ನೋಡೋಕ್ಕೆ ನಮಗೆ ಕಣ್ಣುಗಳಿರಬೇಕಲ್ಲವೆ. ಇವರ ನಾಯಕರುಗಳು ಚೀನಾ ಹಾಗು ರಷಿಯಾದಲ್ಲಿ ಇದ್ದಾರೆ,ಕಾಶ್ಮೀರಿಗಳ "ಸ್ವಾತಂತ್ರ್ಯ"ಕ್ಕೆ ಧ್ವನಿಗೂಡಿಸುವ ಇವರು ಟಿಬೇಟಿಯನ್ನರ "ಸ್ವಾತಂತ್ರ್ಯ"ಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಯಾಕಂದ್ರೆ ಚೀನ ಟಿಬೇಟನ್ನು ನುಂಗಿದೆಯಲ್ಲ.ಧಣಿಗಳ ವಿರುದ್ಧ ಧ್ವನಿಯೆತ್ತಿದರೆ ಅದು ನಿಯತ್ತಿಗೆ ಧಕ್ಕೆಯಲ್ಲವೆ?ಬ್ರಿಟೀಷರ ಚೇಲಾಗಳಾಗಿದ್ದ ಇವರು ಭಾರತಕ್ಕೆ ಸ್ವಾತಂತ್ರ್ಯವನ್ನು ಸಹ ವಿರೋಧಿಸಿದವರು!!!ಜಗತ್ತಿನಲ್ಲೆ ಎಲ್ಲೂ ಕಮ್ಯುನಿಸ್ಟ್ ಪಕ್ಷಗಳು ಬದುಕಿಲ್ಲದಿದ್ದರು ಭಾರತದಲ್ಲಿ ಮಾತ್ರ ಸರ್ಕಾರ ರಚನೆಯಲ್ಲಿ ಸಹ ಭಾಗಿಯಾಗಿರೋದು ಅದ್ಭುತ.
ಸುಮಾರು ೩ ಕೋಟಿ ಬಾಂಗ್ಲಾದೇಶಿಗಳು ಪಶ್ಚಿಮ ಬಂಗಾಳದ ಮೂಲಕ ಭಾರತದೊಳಗೆ ನುಸುಳಿದ್ದಾರೆ.ಪಶ್ಚಿಮ ಬಂಗಾಳದ ಸರ್ಕಾರ ಅವರನ್ನು ಸ್ವಾಗತಿಸುವುದಲ್ಲದೆ ಪಡಿತರ ಚೀಟಿ ಹಾಗು ವೋಟರ್ಸ್ ಕಾರ್ಡ್ ಸಹ ವಿತರಿಸಿ ತಮ್ಮ ಗದ್ದುಗೆಯನ್ನು ಸುರಕ್ಷಿತಗೊಳಿಸುತ್ತಿದ್ದಾರೆ ಏಕೆಂದರೆ ಇವರೆ ಅಲ್ಲವೆ ಮುಂದೆ ವೋಟು ಹಾಕುವುದು. ಹೊಟ್ಟೆ ತುಂಬಿದವರು ವೋಟ್ ಮಾಡುವುದಿಲ್ಲ ಇಂತಹವರು ನಮ್ ದೇಶದ ಸರ್ಕಾರವರನ್ನು ನಿರ್ಣಯಿಸುತ್ತಾರೆ.
೧೯೬೨ರಲ್ಲಿ ಚೀನ ಭಾರತದ ಘರ್ಷಣೆಯುಂಟಾದಾಗ ಕಮ್ಯುನಿಸ್ಟ್‌ಗಳು ಚೀನಾದ ಪರ ವಹಿಸಿದ್ದಾರೆ ಇದು ದೇಶ ದ್ರೋಹದ ಪರಮಾವಧಿ, ಇಂದಿಗು ಸಹ ಈ ಘಟನೆಗೆ ಸಂಬಂಧಿಸಿದಂತೆ ಯಾವುದೆ ರೀತಿಯ ಕ್ಷಮಾಪಣೆ ಕೇಳಿಬಂದಿಲ್ಲ ಬರುತ್ತೆ ಎಂಬ ಆಸೆ ಇಟ್ಟುಕೊಳ್ಳುವುದು ಮೂಢತನ.CPM ಎನ್ನುವುದು ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಭಾರತೀಯ ಶಾಖೆ ಎನ್ನುವುದರಲ್ಲಿ ಸಂಶಯ ಬೇಡ.
’ಮ’ಕಾರದಲ್ಲಿ ನಾಲ್ಕನೇಯದಾಗಿ ಮೀಡಿಯಾದವರು,ಇವರು ನಮ್ಮ ದೇಶದಲ್ಲಿ ಇದ್ದುಕೊಂಡು ವಿದೇಶದವರ ಕಟ್ಟಾಳುಗಳಂತೆ ವರ್ತಿಸುತ್ತಾರೆ. ಅತಿ ಸಣ್ಣ ವಿಚಾರವನ್ನು ಸಹ ದೊಡ್ಡಾದಾಗಿ ಮಾಡಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಮರ್ಯಾದೆಯನ್ನು ಹರಾಜು ಹಾಕುವುದರಲ್ಲಿ ನಿಸ್ಸೀಮರು. ೨೬ನೇಯ ಎರಡುವರ್ಷಕ್ಕೊಮ್ಮೆ ಸಂಭವಿಸುವ ಕಾಥೋಲಿಕ್ ಬಿಶಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(CBCI) ಕೇರಳದಲ್ಲಿ ೭ರಿಂದ ೧೪ರ ವರೆಗು ಮತಾಂತರ ವಿಚಾರಗಳ ಬಗ್ಗೆ ನಡೆಯಿತು.ಸುಮಾರು ೧೫೦ ಬಿಶಪ್‌ಗಳು,೨೬ ಆರ್ಕಿಬಿಶಪ್‌ಗಳು ಹಾಗು ೩ ಕಾರ್ಡಿನಲ್‍ಗಳು ಕೂಡಿದ್ದರು ಇವರುಗಳ ಜೊತೆಗೆ ’ದಿ ಹಿಂದು’ಪತ್ರಿಕೆಯ ಮುಖ್ಯ ಸಂಕಲನಕಾರರು ಎನ್.ರಾಮ್,ಚೆನ್ನೈ ಶಾಖೆಯ ಎನ್.ಡಿ.ಟಿ.ವಿಯ ಮುಖ್ಯಸ್ತರಾದ ಜೆನ್ನಿಫರ್ ಅರುಲ್,ಮಂಗಳಮ್ ಪ್ರಕಟಣಾ ಸಂಸ್ಥೆಯ ಮುಖ್ಯ ಸಂಪಾದಕರಾದ ಕೆ.ಎನ್.ರಾಯ್ ಇವರುಗಳು ಸಹ ಉಪಸ್ಥಿತರಿದ್ದರು.ಕೇವಲ ಧಾರ್ಮಿಕ ವಿಷಯದ ಚರ್ಚೆಯ ಕೂಟದಲ್ಲೆ ಇವರುಗಳ ಭಾಗೀಧಾರಿ ಏತರದ್ದು?
genocide ಎನ್ನುವುದು ಗುಜರಾತ್ ಗಲಭೆಯನ್ನು ವರ್ಣಿಸಲು ಮೀಡಿಯಾ ಬಳಸಿದ ಪದ, ಆದ್ರೆ ೧೯೮೪ರಲ್ಲಿ ಸಿಖ್ಖರನ್ನು ಹಾಡು ಹಗಲೆ ಪೋಲಿಸರು,ಮಕ್ಕಳು ಹೆಂಗಸರು ಎನ್ನುವುದನ್ನು ನೋಡದೆ ಕಾಂಗ್ರೆಸ್ಸ್ ಸರ್ಕಾರದ ನೆರಳಿನಲ್ಲಿ ನಡೆದ ಹತ್ಯಾಕಾಂಡ ಇವರಿಗೆ ಕಣ್ಣಿಗೆ ಕಾಣುವುದೆ ಇಲ್ಲ.ಸಿಂಗೂರ್‌ನಲ್ಲಿ ಹಾಗು ನಂದಿಗ್ರಾಂ‌ನಲ್ಲಿ ನಡೆದ ಹತ್ಯಾಕಾಂಡ ಉಹು...ಏನು ಅಲ್ವೆ ಅಲ್ಲ ಅಂತ ಸಾಧಿಸುತ್ತಾರೆ. ಸೆಕ್ಯುಲರ್ ಮೀಡಿಯಾಗಳು ಮುಸ್ಲಿಂರಿಂದ ಅಥವಾ ಕ್ರೈಸ್ತರಿಂದ ನಡೆಯುವ ದೌರ್ಜನ್ಯಗಳು ಪತ್ರಿಕೆಗಳಲ್ಲಿ ಅಚ್ಚಾಗುವುದೇ ಇಲ್ಲ,ಅಚ್ಚಗುವುದು ಏನಿದ್ದರು ಗೋಧ್ರಾ,ಕಂಧಮಾಲ್,ಅಮರ್‌ನಾಥ್ ಅಥವಾ ಮಂಗಳೂರಿನಲ್ಲಿ ನಡೆದ "ಪ್ರತಿಕ್ರಿಯೆಗಳು" ಬೆಂಕಿಯಿಲ್ಲದೆ ಹೊಗೆಯಾಡುವುದೆ? ಮುಸ್ಲಿಂ ಭಯೋತ್ಪಾದಕರ ಚಟುವಟಿಕೆಗಳನ್ನ ಕಡೆಗಾಣಿಸುವ ಈ ಪತ್ರಿಕೆಗಳು ಪ್ರಗ್ಯಾ ಸಾಧ್ವಿ ಎಂಬಂತವರನ್ನು ಸಿಲುಕಿ ಹಾಕಿಸಿ ಹಿಂದುಗಳೂ ಸಹ ಭಯೋತ್ಪಾದಕರು ಎಂದು ಬೊಬ್ಬೆ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ಮುಂಬೈನಲ್ಲಿ ಸೆರೆ ಸಿಕ್ಕ ಭಯೋತ್ಪಾದಕ ಕಸಬ್, ಜೀವಾಂತವಾಗಿ ಉಳಿಯದಿದ್ದರೆ ಕೇರಳ ಮಿನಿಸ್ಟರ್‌ನ (ಮುಸ್ಲಿಂ) ಹುಚ್ಚು ಹೇಳಿಕೆಗೆ ಎಲ್ಲಿಂದೆಲ್ಲ ಬಲಬರುತ್ತಿತ್ತು. ಇವನ ಪ್ರಕಾರ ಕಸಬ್ ಒಬ್ಬ ಹಿಂದು ಭಯೋತ್ಪಾದಕ,ಪ್ರಗ್ಯಾ ಸಾಧ್ವಿಯನ್ನು ಬಂಧಿಸಿದ ಹೇಮಂತ್ ಕರ್‌ಕರೆಯನ್ನು ಕೊಲೆ ಮಾಡಲು ಆಯೋಜಿಸಿದ್ದ ಬೃಹತ್ ಯೋಜನೆಯ ಒಬ್ಬ ಭಾಗಿಧಾರಿ ಎನ್ನುವುದು ಇವನ ಹೇಳಿಕೆ.ಇದಕ್ಕೆ ಪುಷ್ಠಿಕೊಡುವಂತೆ ಕಸಬ್ ತನ್ನ ಕೈಗೆ ಕೇಸರಿ ಬಣ್ಣದ ದಾರವನ್ನು ಕಟ್ಟಿದ್ದ, ಅಪ್ಪಿ ತಪ್ಪಿ ಅವನು ಸತ್ತಿದ್ದರೆ ಅಲ್ಲಿಗೆ ಹಿಂದುಗಳೆಲ್ಲರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು ಈ ಮೀಡಿಯಾದವರೆಲ್ಲ ಸೇರಿ. ದಿನ ಬೆಳಗಾದ್ರೆ ಒಳ್ಳೆ ಸುದ್ದಿ ಓದುವ ಕಾತರದಿಂದ ಪತ್ರಿಕೆ ತೆಗೆದುಕೊಳ್ಳುವ ನಮಗೆ ಆ ಪತ್ರಿಕಾ ಸಂಸ್ಥೆಯ ಉದ್ದೇಶವೆ ತಿಳಿದಿರುವುದಿಲ್ಲ.ಅದರಲ್ಲಿ ಇರುವುದೆಲ್ಲ ಸತ್ಯವೆಂದು ನಂಬಿ ವಾದ ಮಾಡುವ ಜನರೆ ಹೆಚ್ಚು.

’ಮ’ಕಾರದಲ್ಲಿ ಐದನೇಯದಾಗಿ ಮೆಕಾಲೆಯಿಸ್ಟ್‌ಗಳು.ಲಾರ್ಡ್ ಮೆಕಾಲೆ ಭಾರತದ ಶಿಕ್ಷಣ ಪದ್ಧತಿಯನ್ನು ರೂಪಿಸಿದ ಮೇಧಾವಿ.ನೋಟದಲ್ಲಿ ಭಾರತೀಯ,ನಡವಳಿಕೆ ಬ್ರಿಟೀಷ್ ಆಗಿರಬೇಕು ಎಂಬುದು ಈ ಮನುಷ್ಯನ ಲೆಕ್ಕಾಚಾರ.ತನ್ನ ಈ ಹೇಳಿಕೆಯನ್ನು ಮೆಕಾಲೆಯ ಸಮರ್ಥಿಸಿಕೊಂಡಿವುರುದಕ್ಕೆ ಈಗಿನ ಕಾಲದ ಜಾತಿ ಪದ್ದತಿ,ಮಡಿವಂತಿಕೆ ಮುಂತಾದ ಚಿಲ್ಲರೆ ಕಾರಣಕೊಟ್ಟು ತನ್ನದೇನು ತಪ್ಪಿಲ್ಲ ಎಂದಿದ್ದಾನೆ.ಇವನ ರೀತಿಯ ಶಿಕ್ಷಣದ ಪರಿಣಾಮದಿಂದಾಗಿ ಅನೇಕ "ಬುದ್ದಿವಂತರು" - "ಬಾದಾಮಿ"ತರಹ. ಮೇಲ್ಬಣ್ಣ ನಶ್ಯ(ಭಾರತೀಯರ ಬಣ್ಣ)ಒಳಗಡೆಯಿಂದ ಬಿಳಿ(ಬ್ರಿಟೀಷರ)ರುಚಿ,ಅನಿಸಿಕೆ ಹಾಗು ಮೌಲ್ಯಗಳು.
ಈ ಮೇಕಾಲೆಗಳಿಂದಲೆ "ಸೆಕ್ಯುಲರ್" ಎಂಬ ಹೊಸ ಧರ್ಮ ಹುಟ್ಟಿದ್ದು."ಸೆಕ್ಯುಲರ್" ಎಂಬ ಪೊಳ್ಳುವಾದವನ್ನು ಮುಂದಿರಿಸಿಕೊಂಡು ಹಿಂದು ಧರ್ಮವನ್ನು ಹಾಗು ಭಾರತವನ್ನು ಅವಮಾನಿಸುತ್ತಿದ್ದಾರೆ.ಹಿಂದು ಭಾರತವು ಬಹು ಧರ್ಮಗಳ ವಿಚಾರವನ್ನು,ಬಹು ಧರ್ಮಗಳ ಆಚಾರವನ್ನು,ಬಹು ಧರ್ಮಗಳ ಸಮಾಜವನ್ನು ಗೌರವಿಸುತ್ತದೆ ಇದಕ್ಕಾಗಿ ಜಾತ್ಯಾತೀತತೆಯ ಬಣ್ಣ ಬೇಕಿಲ್ಲ.ಜಾತ್ಯಾತೀತ ಎನ್ನುವುದು ಮೊದಲಿನಿಂದಲೂ ಹಿಂದುತ್ವದ ಒಂದು ಭಾಗ.ಅದಕ್ಕೆ ಅಲ್ಲವೆ "ಏಕಂ ಸತ್,ವಿಪ್ರಾ: ಬಹುದಾವಿದಂತಿ - ದೇವನೊಬ್ಬ ನಾಮ ಹಲವು" ಅಂದ ವೇದಗಳಲ್ಲಿ ಹೇಳಿರುವುದು.
ಈ ಮೇಕಾಲೆಗಳಿಗೆ ಸಂಸ್ಕೃತ ಕೋಮುವಾದ ಉರ್ದು ಜಾತ್ಯಾತೀತ;ಮಂದಿರ ಕೋಮುವಾದ ಮಸೀದಿ ಜಾತ್ಯಾತೀತ;ಸಾಧು ಕೋಮುವಾದ ಇಮಾಂ ಜಾತ್ಯಾತೀತ;ಬಿಜೆಪಿ ಕೋಮುವಾದ ಮುಸ್ಲಿಂ ಲೀಗ್ ಜಾತ್ಯಾತೀತ;ಡಾ||ಪ್ರವೀಣ್ ತೊಗಾಡಿಯಾ ಕೋಮುವಾದ ಬುಖಾರಿ ಜಾತ್ಯಾತೀತ(ಇವನೊಬ್ಬ ದೊಡ್ಡ ಫ್ರಾಡ್ -ದಿಲ್ಲಿಯ ಜಾಮಿಯ ಮಸೀದಿಯಲ್ಲಿ ಇಮಾಂ ಆಗಿರುವ ಇವನು ಐಎಸ್‌ಐನ ಗೂಢಾಚಾರಿ ಎಂಬುದು ಇವನ ಹೇಳಿಕೆ/ರೀತಿ/ನೀತಿಗಳಲ್ಲಿ ಸಾಬಿತಾದರು ಸರ್ಕಾರಕ್ಕೆ ಜಾಣ ಕುರುಡು) ;ವಂದೆಮಾತರಂ ಕೋಮುವಾದ ಅಲ್ಲಾ-ಹೋ-ಅಕ್ಬರ್/ಏಸುವೊಬ್ಬನೆ ದೇವರು ಜಾತ್ಯಾತೀತ; ಶ್ರೀಮಾನ್ ಕೋಮುವಾದ ಮಿಯ್ಯಾ ಜಾತ್ಯಾತೀತ;ಹಿಂದು ಕೋಮುವಾದ ಇಸ್ಲಾಂ/ಕ್ರೈಸ್ತ ಜಾತ್ಯಾತೀತ;ಹಿಂದುತ್ವ ಕೋಮುವಾದ ಜಿಹಾದ್/ಕ್ರುಸೇಡರ್ ಜಾತ್ಯಾತೀತ;ಬಜರಂಗದಳ ಕೋಮುವಾದ ಸಿಮಿ ಜಾತ್ಯಾತೀತ;ರಾಮ ರಾಜ್ಯ ಕೋಮುವಾದ ರೋಮ್ ರಾಜ್ಯ ಜಾತ್ಯಾತೀತ; ಕೊನೆಯದಾಗಿ ಭಾರತ ಕೋಮುವಾದ ಇಟಲಿ ಜಾತ್ಯಾತೀತ!

ಮುಂದುವರೆಯುವುದು ....

"ಮ"ಕಾರದಲ್ಲಿ ಅಡಗಿರುವ ಅಕಾಲ ಮೃತ್ಯು

on April 3, 2009

ಭಾರತದ ಭವಿಷ್ಯವನ್ನು ನೀವು ಊಹಿಸ ಬಲ್ಲಿರಾ?ನಿಮ್ಮ ಕಲ್ಪನಾ ಶಕ್ತಿ ಎಷ್ಟು ಮಂದವಾಗಿದೆಯೆಂದು ತಿಳಿಯಬೇಕೆ? ಮುಂದಿಟ್ಟಿರುವ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿದೆಯೆ? ಇರಲಿಕ್ಕಾದರು ಸಾಧ್ಯವೆ? ಓರೆ ಹಚ್ಚಲು ಮುಂದಕ್ಕೆ ಓದಿ...

೧.ಮನೆಯಿಂದ ಹೊರಗೆ ಕೆಲಸಕ್ಕೆ ಅಂತ ಹೆಜ್ಜೆ ಇಟ್ಟರೆ ಸುರಕ್ಷಿತವಾಗಿ ಹಿಂತಿರುಗಿ ಬರುತ್ತೀರಾ? - ಮೊನ್ನೆ ತಾನೆ ಬೆಂಗಳೂರಿನ ರಾಜಾಜಿನಗರದಲ್ಲಿ ಬಾಂಬ್ ಪತ್ತೆಯಾಗಿದೆ,ಇಡಿ ದೇಶದಲ್ಲೆಲ್ಲಾ ಬಾಂಬ್‌ನ ಸದ್ದು ಪ್ರತಿಧ್ವನಿಸುತ್ತಿದೆ,ಪಾನಿಪುರಿ ಅಂಗಡಿ ಸಹ ಸುರಕ್ಷಿತವಲ್ಲ,ಹೈದರಾಬಾದ್‌ನ ಲುಂಬಿನಿ ಪಾರ್ಕ್ ಹೊರಗಡೆ ನಡೆದ ಸ್ಪೋಟ ಇದಕ್ಕೆ ಸಾಕ್ಷಿ,ಐಐಎಸ್ಸಿಯಂತಹ ವಿದ್ಯಾದೇಗುಲದಲ್ಲಿ ಭಯೋತ್ಪಾದಕರ ದಾಳಿ,ದೇವಸ್ಥಾನಗಳಲ್ಲಿ ದಾಳಿಯಂತು ಮಾಮೂಲು ಎಲ್ಲಿಯ ಉದಾಹರಣೆ ಅಂತ ಕೊಡೊದು,ದವಾಖಾನೆ,ಚಿತ್ರ ಮಂದಿರಗಳಂತು ಮೆಚ್ಚಿನ ತಾಣ - ಇಷ್ಟು ಬಿಟ್ರೆ ಜನ ಎಲ್ಲಿ ಅಂತ ಓಡಾಡಬೇಕು? ಮನೆ ಒಳಗೆ ಕೂತಿರಬೇಕು ಅಷ್ಟೆ, ಆಮೇಲೆ ಮುಂದೊಂದು ದಿನ ಕಿಟಕಿ ಒಳಗಿಂದ ಬಾಂಬ್ ಹಾಕೊಕ್ಕೆ ಶುರು ಮಾಡಿದ್ರು ಸಹ ಏನು ಆಶ್ಚರ್ಯ ಇಲ್ಲ,ಕೂತಲ್ಲೆ ಸಾಯಬೇಕು.

೨.ನಿಮ್ಮ ಸ್ಥಳದಿಂದಲೆ ನಿಮ್ಮನ್ನು ಒಡಿಸಿ ನಿಮ್ಮ ಜಾಗದಲ್ಲಿ ಅನ್ಯರು ವಾಸಿಸುವುದನ್ನು ಸಹಿಸಬಲ್ಲಿರಾ? - ಭೂಮಿಯ ಮೇಲಿರುವ ಸ್ವರ್ಗ ಅಂತಲೆ ಎನಿಸಿಕೊಂಡ ಕಾಶ್ಮೀರದಲ್ಲಿ ದಿನ ಬೆಳಗಾದರೆ ಕೊಲೆ,ಸುಲಿಗೆ,ಅತ್ಯಾಚಾರ,ನಿಲ್ಲದ ಹತ್ಯಾಕಾಂಡಗಳು,೪ ಲಕ್ಷ ಜನರು ಜೀವದ ಹಂಗು ತೊರೆದು ರಾತ್ರೊ ರಾತ್ರಿ ತಮ್ಮ ಮನೆ ಮಠಗಳನ್ನು ತ್ಯಜಿಸಿ ದಿಲ್ಲಿಯ ಸ್ಲಮ್‌ಗಳಲ್ಲಿ ವಾಸಿಸುವಂತಾಗಿದೆ.
೩.ವರ್ಷದಲ್ಲಿ ಹನ್ನೆರಡು ತಿಂಗಳೂ ಪ್ರತಿ ತಿಂಗಳಿಗೊಂದಂತೆ ಇರುವ ಹಬ್ಬಗಳನ್ನು ಆಚರಿಸದೆ,ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ನಲಿಯದೆ,ಮನೆಯು ಸಿಂಗಾರಗೊಳ್ಳದೆ,ಹಣೆಬೊಟ್ಟಿಲ್ಲದ ವಿಧವೆಯಂತೆ ಕಾಣುವ ರಂಗೋಲೆಯಿಲ್ಲದ ಅಂಗಣ,ಮುಂಡನೆ ಮಾಡಿಸಿಕೊಂಡವರಲ್ಲಿ ಮಾಯವಾದ ಹೂವಿನ ಹಾರದಂತೆ ಹೆಬ್ಬಾಗಿಲಲ್ಲಿ ಕಾಣದ ತಳಿರು ತೋರಣ,ಇವಾವುದು ಕಾಣದೆ ಬರಿದಾದ ಜೀವನವನ್ನು ಊಹಿಸಬಲ್ಲಿರಾ? ಜೀವನ ಅನ್ನೋದು ಕೇವಲ ಊ-ಮ-ಹೇ ಸುತ್ತಾನೆ ಇದ್ದಿದ್ರೆ ಬಹುಶ:ಈ ಬೆಳವಣಿಗೆಗಳು ಸ್ವಾಗತಾರ್ಹವೇನೊ ಆದ್ರೆ ಹಾಗಿಲ್ವಲ್ಲ. ಹಬ್ಬ ಹರಿದಿನ ಆಚರಿಸಬೇಕು,ಮನೆಯ ಮುಂದೆ ನೀರು ಹಾಕಿ ರಂಗೋಲಿಯಿಂದ ಅಂಗಣವನ್ನು ಸಿಂಗರಿಸಬೇಕು.ಮಕ್ಕಳು ಹೊಸ ಬಟ್ಟೆ ತೊಟ್ಟು ಹಬ್ಬದೂಟವನ್ನು ಮಾಡಿ ನಕ್ಕು ನಲಿಯಬೇಕು.ಈ ರೀತಿ ವರ್ಷಕ್ಕೆ ೨-೩ ದಿನಾ ಸಾಕಾ? ಅಥವಾ ತಿಂಗಳಿಗೊಂದರಂತೆ ಸಂಸ್ಕೃತಿ,ಜೀವನಾರ್ಥವನ್ನು ಬಿಂಬಿಸುವ ಹಬ್ಬಗಳು ಇರಬೇಕಾ?

ಇವೆಲ್ಲಾ ನಿಮ್ಮ ಸುತ್ತ ಮುತ್ತಲೆ ಆಗ್ತಿದೆನೋ ಅಥವ ನಿಮ್ಮ ನೆಂಟರು,ಇಷ್ಟರು,ಬಳಗದವರು ಈ ರೀತಿಯ ಸ್ಥಿತಿ ಗತಿಗೆ ಬಲಿಯಾದರೆ ಹೇಗೋ,ಒಮ್ಮೆ ಸುಮ್ನೆ ಊಹಿಸಿ ನೋಡಿ,ನಡುಕ ಹುಟ್ಟೊಲ್ವೆ? ಇವೆಲ್ಲವೂ ಸತ್ಯಕ್ಕೆ ತುಂಬಾ ದೂರ ಏನು ಉಳಿದಿಲ್ಲ.ಕರ್ನಾಟಕದ ಭದ್ರ ನೆಲೆಯಲ್ಲಿ ಕೂತು ಇದನ್ನೆಲ್ಲ ಓದಿದ್ರೆ ಕೆಲವರಿಗೆ ಆಕಳಿಕೆ ಸಹ ಬರಬಹುದು ಆದರೆ ಜಾಗತಿಕ ವಾಸ್ತವ ಹಾಗಿಲ್ವಲ್ಲ.ನಾವು ಯೊಚಿಸಬೇಕಿದೆ ನಮ್ಮ ಸಮಾಜದ ಮೇಲೆ ಇವುಗಳ ಪ್ರಭಾವ ಹೇಗೆ ನಿಯಂತ್ರಿಸಬಹುದು ಅಂತ.ಈಗ ಕೆಲವು ಘಟನೆಗಳ ಕಡೆ ಗಮ ಹರಿಸೋಣವೆ...

೧. ೨೦೦(ಇನ್ನೂರು)ವರ್ಷಗಳ ಹಿಂದೆ ಕಂಧಹಾರ್(ಅಫ್ಘಾನಿಸ್ತಾನ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದರು.
ಇಂದು?? ಕೇವಲ ಅಲ್-ಕೈದಾ ಹಾಗು ತಾಲಿಬಾನ್ ಅವರ ತಾಣವಾಗಿದೆ,ಕಣ್ಣಿಗೆ ಕಣ್ಣ್ಣು,ಕೈಗೆ ಕೈ ಎನ್ನುವ ಶರಿಯತ್ ಲಾ ಅನ್ನು ಪಾಲಿಸಲಾಗುತ್ತಿದೆ.

೨. ೧೦೦(ನೂರು)ವರ್ಷಗಳ ಹಿಂದೆ ಲಾಹೋರ್ ಹಾಗು ಕರಾಚಿ(ಪಾಕಿಸ್ತಾನ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದರು.ಇಂದು??ಹಿಂದುಗಳು ಓಡಿ ಭಾರತದತ್ತ ಬರುತ್ತಿದ್ದಾರೆ,೧೯೪೭ರಲ್ಲಿ ಪಾಕಿಸ್ತಾನ್ ಅನ್ನು ಸೃಷ್ಟಿಸಲಾಯಿತು ಆಗ ಹಿಂದುಗಳ ಸಂಖ್ಯೆ ೨೪% ಇತ್ತು ಇಂದು ೧% ಗಿಂತ ಕಮ್ಮಿ ಆಗಿದಾರೆ.ಹಾಗಿದ್ರೆ ಎಲ್ಲರು ಎಲ್ಲಿ ಹೋದರು?

೩. ೫೦(ಐವತ್ತು)ವರ್ಷಗಳ ಹಿಂದೆ ಶ್ರೀನಗರ್(ಕಾಶ್ಮೀರ್)ನಲ್ಲಿ ಹಿಂದುಗಳು ಸನಾತನ ಧರ್ಮವನ್ನು ಆಚರಿಸುತ್ತಿದ್ದರು,ಪೂಜೆ ಪುನಸ್ಕಾರಗಳನ್ನು ನಿರ್ಭಯವಾಗಿ ನೆರವೇರಿಸುತ್ತಿದ್ದರು.ಇಂದು??ಕಶ್ಮೀರಿ ಪಂಡಿತರನ್ನು ಹಗಲಲ್ಲೆ ಗುಂಡಿಟ್ಟು ಕೊಲ್ಲಲಾಗುತ್ತಿದೆ.ಭಾರತದ ಧ್ವಜಕ್ಕೆ ಬೆಂಕಿ ಹಚ್ಚಿ ಭಾರತ ಸರ್ಕಾರದ ವಿರುದ್ಧ ಘೋಷಣೆಗಳು ಸಾಮಾನ್ಯವಾಗಿವೆ.ಇದೆ ಶ್ರೀನಗರವನ್ನು ಇಸ್ಲಾಮಬಾದ್ ಅಂತ ನಾಮಕರಣ ಮಾಡಲು ಎಲ್ಲಾ ಹುನ್ನಾರ ನಡೆಯುತ್ತಿದೆ.ಪ್ರಸ್ತುತ ಅಲ್ಲಿನ ಸರ್ಕಾರದ election mandate ಸಹ ಇದೆ ಆಗಿದೆ,ಇದಕ್ಕೆ ಕಾಂಗ್ರೆಸ್ಸ್ ಸರ್ಕಾರದ ಕುಮ್ಮಕ್ಕು ಸಹ ಇದೆ.ಇದರ ಕನಿಷ್ಟ ಅರಿವಾದರು ನಿಮಗಿದೆಯೆ?

ಈ ಮೇಲೆ ಉಲ್ಲೇಖ ಮಾಡಿರುವ ಘಟನಾವಳಿಗಳನ್ನೊಮ್ಮೆ ಅವಲೋಕಿಸಿ, ೨೦೦, ೧೦೦, ೫೦ ವರ್ಷಗಳಲ್ಲಿ ಆದ ಬದಲಾವಣೆ ಗಮನಿಸಿ. ಮುಂದಿನ ೨೫,೫೦ ವರ್ಷಗಳಲ್ಲಿ ಏನಾಗಬಹುದೆಂದು ಊಹಿಸಲು ಸಾಧ್ಯವೆ?ಊಹಾತೀತ ವಿಷಯ, "ಭಾರತದಲ್ಲಿನ" ಹಿಂದುಗಳ ಬಾಳು. ನನಗೆ ಭಾರತದ ಈಶಾನ್ಯ ರಾಜ್ಯಗಳಲ್ಲಿ (ಅಸ್ಸಾಮ್,ಮೇಘಾಲಯ, ಅರುನಾಚಲ ಪ್ರದೇಶ,ನಾಗಾಲಾಂಡ್,...) ಕರುಣಾಮಯನಾದ ಕ್ರೈಸ್ತನ ಹೆಸರಿನಲ್ಲಿ ಹಾವಳಿ ಕೊಡುತ್ತಿರುವ ಭಯೋತ್ಪಾದಕ ಕ್ರೈಸ್ತ ಸಂಘಟೆನೆಗಳ ಬಗ್ಗೆ ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ,ಹಾಗೆಯೆ ದೀನ ಬಂಧು,ಶಾಂತಿ ದೂತನಾಗಿರುವ ಮೋಹಮ್ಮದ್ ಪೈಗಂಬರ್ ಆಗಲಿ ಕರುಣಾಳು ಅಲ್ಲಾನ ಹೆಸರಿನಲ್ಲಿ ಆಗುತ್ತಿರುವ ಹಿಂಸೆ,ಮುಸ್ಲಿಮ್ ಭಯೋತ್ಪಾದಕ ದಾಳಿಗಳ ಬಗ್ಗೆ ಚರ್ಚಿಸುವುದಕ್ಕಲ್ಲ. ಎಲ್ಲಿಂದಲೊ ಬಂದ ಮಂಗ್ಲಾಯ್ಡ್ ಬಾಬರ್,ನಮ್ಮ ಜನರನ್ನು ದಾಳಿ ಮಾಡಿ,ಅತ್ಯಾಚಾರ ನಡೆಸಿ,ಮಕ್ಕಳು ಹೆಂಗಸರು ಎನ್ನದೆ ಕಗ್ಗೊಲೆ ಮಾಡಿದ ಮಾದಕ ವ್ಯಸನಿಯಾಗಿದ್ದ ಬಾಬರ್‌ನ ಸಮಾಧಿಯನ್ನು ಧ್ವಂಸ ಮಾಡಿದ ಭಯೋತ್ಪಾದಕ ಹಿಂದುಗಳ ಬಗ್ಗೆಯು ಅಲ್ಲ.
ಭಾರತದ ನಕ್ಷೆ ದಿನೆ ದಿನೆ ಕುಗ್ಗುತ್ತಿರುವುದು ಆಶ್ಚರ್ಯವಲ್ಲ,ಇವೆಲ್ಲದರ ಕಡೆ ನಮ್ಮ ಗಮನ ಹರಿಯದೆ ಕೇವಲ ಸೆಕ್ಯುಲರ್ ಆಲೋಚನೆಗಳನ್ನೆ ತಲೆಗೆ ತುರುಕಲು ಹವಣಿಸುತ್ತಿರುವ ಭಾರತದ ಇಟಲಿಯ ಸರ್ಕಾರ ಹಾಗು ಅದರ ನಿಯಂತ್ರಣದಲ್ಲಿರುವ ಮೀಡಿಯಾ. ನಮ್ಮ ಗಮನ ಬೇರೆಡೆ ಇದ್ದರೆ ಇಂಥವನ್ನೆಲ್ಲ ನಿರಾಂತಕವಾಗಿ ಮುಂದುವರಿಸಿ ವೋಟ್ ಬ್ಯಾಂಕ್ ಖಾತ್ರಿ ಮಾಡಿಕೊಳ್ಳಬಹುದಲ್ಲವೆ.

ಇಂದು ಜಗತ್ತಿನಲ್ಲಿ ಸುಮಾರು ೧೩೦ ಕೋಟಿ ಮುಸ್ಲಿಮ್‌ ಜನಸಂಖ್ಯೆಯಿದೆ ಅದಕ್ಕೆ ತಕ್ಕ ಹಾಗೆ ೫೭ ಇಸ್ಲಾಮಿಕ್ ರಾಷ್ಟ್ರಗಳು ಸಹ ಇವೆ.ಇರಲಿ ಒಳ್ಳೆಯದು ನಮಗೆ ಅಭ್ಯಂತರವಿಲ್ಲ.೨೦೦ ಕೋಟಿ ಕ್ರೈಸ್ತರ ಜನಸಂಖ್ಯೆಯಿದೆ ಅದಕ್ಕೆ ತಕ್ಕ ಹಾಗೆ ೧೫೦ ಕ್ರೈಸ್ತ ರಾಷ್ಟ್ರಗಳು ಸಹ ಇವೆ.ಇರಲಿ ಒಳ್ಳೆಯದು ನಮಗೆ ಅಭ್ಯಂತರವಿಲ್ಲ.೧೧೦ ಕೋಟಿ ಹಿಂದು ಜನಸಂಖ್ಯೆಯಿದೆ ಅದಕ್ಕೆ ತಕ್ಕ ಒಂದಾದರು ಹಿಂದು ದೇಶವಿದೆಯ?ಉಹು ದುರ್ಬೀನು ಹಾಕಿಕೊಂಡರು ನಿಮಗೆ ಸಿಗುವುದಿಲ್ಲ.ಹಾಳಾಗಿ ಹೋಗಲಿ ನಾವು ಪ್ರತ್ಯೇಕ ರಾಷ್ಟ್ರ ಕೇಳುತ್ತಿಲ್ಲ,ಕನಿಷ್ಟ ಹಿಂದು ರಾಷ್ತ್ರವಾಗಿದ್ದ ಭಾರತವನ್ನು ಸೆಕ್ಯುಲರ್ ಎಂಬ ಪೊಳ್ಳುವಾದದಲ್ಲಿ ಒಡೆದು ಹಾಕಿರುವ ಸರ್ಕಾರದ ನೀತಿಯನ್ನು ವಿರೋಧಿಸಬೇಕಿದೆ.damage contain ಮಾಡುವ ಅವಶ್ಯಕತೆಯಿದೆ.
ಭಾರತದ ಇತಿಹಾಸ ಕೆದಕಿ ನೋಡಿದರೆ ಕಾಣುವುದು ಮುನಿಗಳು,ಸಂತರು ಹಾಗು ಋಷಿಗಳು.ಇವರುಗಳು ಅಂದು ಮಾಡಿರುವ ಅನ್ವಷಣೆಗಳ ಅರ್ಥ ಇಂದಿನ ವಿಜ್ಞಾನಿಗಳಿಗೆ ಅರಿಯದ ವಿಷಯವಾಗಿದೆ.ಭಾರತೀಯರೆಲ್ಲರಿಗು ಭಾರತ ಖಂಡ ಮಾತೃಭೂಮಿಯಾಗಿದೆ, ಆದ್ರೆ ಕೆಲವರಿಗೆ ಭೂಮಿಯಂತಹ ನಿರ್ಜೀವ ವಸ್ತುವನ್ನು ಮಾತೆಗೆ ಹೋಲಿಸುವುದು ಅವರುಗಳ ಧಾರ್ಮಿಕ ಭಾವನೆಗಳಿಗೆ ನೊವ್ವುಂಟು ಮಾಡುವ ಕಾರಣ ವಿಷಯ ಹೀಗೆಯೆ ಇಲ್ಲ.ಮಾತೆಯನ್ನು ವಂದಿಸುವುದು ಅತ್ಯಂತ ನಿಂದಕರ ಅದಕ್ಕೆ ಅಲ್ವೆ ವಂದೆ ಮಾತರಂ ನಾವು ಹೇಳುವುದಿಲ್ಲ, ಏನು ಮಾಡ್ಕೊತ್ಯೊ ಮಾಡ್ಕೊ ಅಂತ ಎದೆ ತಟ್ಟಿಕೊಂಡು ಸವಾಲು ಹಾಕುವುದು. ಇಂತಹ ನಡುವಳಿಕೆಯನ್ನು ಪ್ರಶ್ನಿಸಿದರೆ ಅದು ಕೋಮು ಸೌಹಾರ್ದತೆಯನ್ನು ಕೆದುಕುವ ಕಾರ್ಯ!!! ಸೌಹಾರ್ದತೆಯೆಂದರೆ ಸವಾಲು ಹಾಕಿಸಿಕೊಂಡು ನರವಿಲ್ಲದವರ ತರಹಬದುಕುವುದಾ?

ವೇದ ಪುರಾಣ ಕಾಲದಿಂದಲು ಭಾರತವು ಹಿಂದು ರಾಷ್ಟ್ರವಾಗಿ ಉಳಿದಿತ್ತು ಬೆಳೆದಿತ್ತು ಇತ್ತೀಚಿನವರೆಗು.೧೦೦೦ವರ್ಷ ಯಾರು ಯಾರೋ ಆಳಿ ಹೋದರು ಸಹ ಇಂದು ಭಾರತ ಅಖಂಡ ರಾಷ್ಟ್ರವಾಗಿ ಉಳಿದಿರುವ ಗುಟ್ಟು ಹಿಂದುಗಳ ಸಂಸ್ಕೃತಿ,ಆಧ್ಯಾತ್ಮಿಕ ಮೌಲ್ಯಗಳು ಅಷ್ಟೆ.ಬೇರೆ ಯಾವುದಾದ್ರು ಇಸ್ಲಾಮಿಕ್ ಅಥವ ಕ್ರೈಸ್ತ ದೇಶಗಳಲ್ಲಿ ಈ ರೀತಿಯ ಬೆಳವಣಿಗೆಗಳು ಕಂಡು ಬಂದಿದ್ದರೆ ಇಷ್ಟು ಹೊತ್ತಿಗೆ ಆ ದೇಶವು ಇತಿಹಾಸದ ಪುಟ ಸೇರುತ್ತಿತ್ತು.ನಮ್ಮ ಪ್ರತಿ ಪೂಜಾ ಕಾರ್ಯದ "ಸಂಕಲ್ಪ"ದಲ್ಲಿ ಮೊದಲು ಉಚ್ಚರಿಸುವುದು "ಭರತ ವರ್ಷೆ,ಭರತ ಖಂಡೆ,ಜಂಬೂ ದ್ವೀಪೆ..." ತಾನೆ.ಈ ರೀತಿಯ ದೇಶ ಭಕ್ತಿ/ಪ್ರೇಮವನ್ನು (ಭಾರತಿಯತೆಯನ್ನು) ಜ್ಞಾಪಿಸುವ ಪೂಜಾ ವಿಧಿ ಬೇರೆಯಲ್ಲಿರಲು ಸಾಧ್ಯವೆ? ದೇವರೊಬ್ಬನೆ ನಾಮ ಹಲವು ಎನ್ನುವ ಹಿಂದುವಿನ ಸಾರಥ್ಯದಲ್ಲಿ ಮಾತ್ರ ಈ ರಾಷ್ಟ್ರದ ಭವಿಷ್ಯ ಉಜ್ವಲವಿದೆ ಅದು ಬಿಟ್ಟು, ನೀನು ಪರಮ ಪಾಪಿ,(ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡದಿರಿ ಹುಚ್ಚಪ್ಪಗಳಿರಾ ಎಂದು ದಾಸರು ಈಗ ಹಾಡಿದ್ದರೆ ಹುಚ್ಚಾಸ್ಪತ್ರೆಗೆ ಹಾಕ್ತಿದ್ರೇನೊ ಯಾಕಂದ್ರೆ "ಇವರ"ಪ್ರಕಾರ ಮಾನವ ಪಾಪಿ!!,

ಗೌರವಿಸು ಜೀವನವ,ಗೌರವಿಸು ಚೇತನವ|

ಆರದೊ ಜಗವೆಂದು ಭೇದವೆಣಿಸದಿರು||

ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ|

ದಾರಿಯಾತ್ಮೋನ್ನತಿಗೆ - ಮಂಕುತಿಮ್ಮ ||

ಈ ರೀತಿ ಜೀವನದ ಪ್ರಾಮುಖ್ಯತೆಯನ್ನು ಸೊಗಸಾಗಿ ಬಣ್ಣಿಸಿದ ಡಿ.ವಿ.ಜಿಯವರ ಕಗ್ಗವೆಲ್ಲಿ?) ನೀನು ಪಾಪಿಷ್ಟ, ನನ್ ಹತ್ರ ಬಾ ಎಲ್ಲ ಸರಿ ಮಾಡ್ತೀನಿ, ನಾನೆ ಕರ್ತೃ, ಎಲ್ಲಾ ವಿಷಯದಲ್ಲು "ನಾನೆ""ನಾನೆ" ಅಂತ ಪ್ರತಿಪಾದಿಸುವರ ಕೆಳಗಾಗಲಿ, ದಿನಕ್ಕೆ ಐದು ಬಾರಿ ಅಲ್ಲಾ ಒಬ್ಬನೆ ದೇವರು ಪೈಗಂಬರ್ ಒಬ್ಬನೆ ಪ್ರವಾದಿ(ಜೀಸಸ್‌ನು ಸಹ ಪ್ರವಾದಿ ಅಂತ ಒಪ್ಪಿಕೊಳ್ಳುತ್ತಾರೆ, ಆದರೆ ಜೀಸಸ್ ತಪ್ಪು ಹಾದಿಯಲ್ಲಿ ನಡೆದ(ಮುಸ್ಲಿಂ ರೀತಿಯ ಜೀವನ ನಡೆಸಲಿಲ್ಲ ಎನ್ನುವುದು ವಾದ) ಇದೆ ವಿಚಾರವಾಗಿ ಜೀಸಸ್ ಮರು ಹುಟ್ಟುತ್ತಾನೆ ಎಂಬುದನ್ನು ಎರಡು ಸಮುದಾಯದವರು ಒಪ್ಪುತ್ತಾರೆ. ಆದ್ರೆ ಹೇಗೆ ಜೀವನ ನಡೆಸುತ್ತಾನೆ ಎಂಬುದೆ ಇವರ ಆಂತರಿಕ ಘರ್ಷಣೆಗೆ ಕಾರಣ), ಅವನಿಗಿಂತ ಶ್ರೇಷ್ಠ ಮನುಷ್ಯ ಭೂಮಿಯಲ್ಲಿ ಹುಟ್ಟಿಲ್ಲ ಎಂದು ಲೌಡ್ ಸ್ಪೀಕರ್‌ನಲ್ಲಿ ಬೊಬ್ಬೆ ಹೊಡೆಯುವವರ ಸಾರಥ್ಯದಲ್ಲಿ ನಮ್ಮ ದೇಶ ಭವಿಷ್ಯ ಸುಭದ್ರ ಎನಿಸುತ್ತದೆಯೆ? ಇಷ್ಟೆಲ್ಲ ಕಣ್ಣಿಗೆ ರಾಚುತ್ತಿದ್ದರು ಕೈ ಕಟ್ಟಿಕುಳಿತಿರುವ ಪ್ರಮೇಯ ಕೇವಲ ಒಬ್ಬ ಹಿಂದುವಿಗೆ ಮಾತ್ರ ತನ್ನ ರಾಷ್ಟ್ರದಲ್ಲಿ ಅನುಭವಿಸಲು ಸಿಗುತ್ತದೆ. ಭೂಮಿಯ ಯಾವುದೆ ಭಾಗದಲ್ಲಿ ಈ ರೀತಿಯ "ಸೌಹಾರ್ದತೆ"ಕಾಣಲು ಸಾಧ್ಯವಿಲ್ಲ. ಯುಕೆ, ಯುಎಸ್ ನಲ್ಲಿ ಅವರವರ ಧರ್ಮಗಳನ್ನು ನಿರ್ಭಯವಾಗಿ ಯಾವುದೆ ಅಡೆ ತಡೆಯಿಲ್ಲದೆ ಆಚರಿಸುವ ಸ್ವಾತಂತ್ರ್ಯವಿದೆ, ಅಲ್ಲಿ ವಿದ್ಯಾರ್ಹತೆಗೆ ಬರವಿಲ್ಲ, ದುಡ್ಡಿಗೆ ಬರವಿಲ್ಲ, ಸಮಾಜದಲ್ಲಿ ಮೂಲೆಗುಂಪು ಮಾಡಲ್ಪಟ್ಟವರು ಅಂತ ಬೇಧಭಾವವಿಲ್ಲ, ಹೀಗಿದ್ದರು ಸಹ ಅಲ್ಲಿನವರೆ ಅಲ್ಲಿ ಬಾಂಬ್ ಹಾಕುತ್ತಾರೆ.ಇತರೆಡೆ ಅವರ ಸಹಯೋಗವನ್ನು ನೀಡುತ್ತಾರೆ ಇದರರ್ಥವೇನು?ನೀವು ಏನೇ ಸೌಲಭ್ಯ,ವಸತಿ ಸುಭದ್ರತೆ ಕಲ್ಪಿಸಿಕೊಟ್ಟರು ಇಸ್ಲಾಮಿಕ್ ಆಡಳಿತ ತರುವವರೆಗು ನಮ್ಮ ದಾಳಿ ಬಿಡುವುದಿಲ್ಲವೆಂದರ್ಥ ತಾನೆ. ಇಂತಹ ಮೃಗೀಯ ಭಾವನೆಗೆ ಎಲ್ಲರ ಸಹಕಾರವಿರಲು ಸಾಧ್ಯವಿಲ್ಲವೆ ಇಲ್ಲ ಯಾವ ಧರ್ಮದಲ್ಲಾದರು ಸಹ,ಆದ್ರೆ ಮೌನವಾಗಿ ವಿರೋಧಿಸುವವರೆ ಹೆಚ್ಚು ಆದರಿಂದ ಉಪಯೋಗವೇನು, ಈ ಭಯೋತ್ಪಾದಕರೆ ಮೊದಲಿನಿಂದ ಕೊನೆಯವರೆಗು ಮೇಲುಗೈ ಸಾಧಿಸುತ್ತಾರೆ. ಅವರದೆ ಧರ್ಮದವರು ಸಹ ಕೆಲವರು ಮಾಡುವ ನೀಚ ಕಾರ್ಯಗಳಿಗೆ ತಲೆತಗ್ಗಿಸಬೇಕಾಗುತ್ತದೆ.

ಇಂದು "ಮ"ಕಾರಗಳ ಮಧ್ಯೆ ಸಿಲುಕಿ ಮಿಕಿ ಮಿಕಿ ಅಂತ ದಿಟ್ಟಿಸುತ್ತಿರುವ ಮಧ್ಯಮ ವರ್ಗದ ಹಿಂದು/ಭಾರತೀಯನಿಗೆ ಮುಲ್ಲಾ,ಮಿಷಿನರಿ,ಮಾರ್ಕ್ಸಿಸ್ಟ್,ಮೆಕಾಲೆಯಿಸ್ಟ್,ಮೀಡಿಯಾ ಹಾಗು ಮೈನೊ ವಿಚಾರಗಳ ಅರಿವು ಇರಬೇಕಾದ್ದು ಅತ್ಯಾವಶ್ಯಕವಾಗಿದೆ.
ಹಿಂದೆ ೨೦೦,೧೦೦,೫೦ ವರ್ಷಗಳಲ್ಲಿ ಈ ರೀತಿಯೆಲ್ಲಾ ಆಗಿದೆ ಮುಂದಕ್ಕೆ ಏನು ಕಾದಿದೆಯೊ ಅನ್ನುವುದಕ್ಕಿಂತ ಇಷ್ಟು ವರ್ಷಗಳಲ್ಲಿ ಕೈ ಕಟ್ಟಿ ಕೂತ್ವಿ ಮುಂದೆಯು ಸಹ ಇಂತಹ ಅವಘಡ ಆಗುವುದನ್ನು ತಪ್ಪಿಸಲು ಏನಪ್ಪ ಮಾಡಬಹುದು ಅಂತ ಯೋಚಿಸಬೇಕಷ್ಟೆ. ಇವೆಲ್ಲ ಇಂದು ನಮ್ಮ ಸಮಾಜದ ಅವಿಚ್ಛಿನ್ನ ಭಾಗವಾಗಿ ಬೆಳೆದು ಬಿಟ್ಟಿದೆ,ಹೊಡಿ ಬಡಿ ಅನ್ನುವುದಕ್ಕಿಂತ ಇವೆಲ್ಲವುದನ್ನು ಜೊತೆ ಇಟ್ಟುಕೊಂಡು ಹೇಗೆ ಒಳ್ಳೆಯ ಸಮಾಜವನ್ನು ಕಟ್ಟಬಹುದು ಎನ್ನುವುದರ ಆಲೋಚನೆ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ಇಂದಿನ ಪ್ರಚಲಿತ ದಿನಗಳಲ್ಲಿ ಭಾರತವನ್ನು ಈ ಆರು "ಮ"ಕಾರಗಳು ಆಕ್ರಮಿಸಿವೆ.ಇವರುಗಳಿಗೆ ದೇಶದ ಮೇಲೆ ಎಳ್ಳಷ್ಟು ಪ್ರೀತಿಯಿಲ್ಲ,ಈ ದೇಶದ ಸಂಸ್ಕೃತಿಯೆಂದರೆ ತಿರಸ್ಕಾರ,ಹಿಂದು ಮೌಲ್ಯಗಳು ಕಾಲು ಕಸ,ಹಿಂದು ಎಂಬ ಪದ ಎಂದರೆ ಅಲರ್ಜಿ,ಇವರುಗಳಿಗೆ ತುರಿಕೆ ಶುರುವಾಗುತ್ತದೆ ಈ ಪದ ಕಿವಿಗೆ ಬಿದ್ದಾಕ್ಷಣ.ಇವುಗಳನ್ನು ನಿಯಂತ್ರಣದಲ್ಲಿಡಲಿಲ್ಲವೆಂದರೆ ಮುಂದೊಂದು ದಿನ ಹಿಂದುಗಳು ಬದುಕುವುದಕ್ಕಾಗಿ ಬೇರೆ ರಾಷ್ಟ್ರಗಳತ್ತ ಓಡಬೇಕಾಗುತ್ತದೆ ಇಲ್ಲವಾದರೆ ಇದ್ದೆ ಇದೆಯಲ್ಲ,ಮತಾಂತರ.ಯಾವನು ಶಕ್ತಿಶಾಲಿಯಾಗಿ ಜಾಲ ಹೊಂದಿರುತ್ತಾನೊ ಅವನ ಧರ್ಮಕ್ಕೆ ಮತಾಂತಗೊಳ್ಳಬೇಕಾಗುತ್ತದೆ. ಗೊವಾ ಇನ್ಕ್ವಝಿಷನ್ ಆಗ್ಲಿ ಮುಸ್ಲಿಮ್ ರಾಜರುಗಳು ಹಿಂದೆ ನಮ್ಮ ದೇಶವನ್ನು ಆಳಿದಾಗ ಇದೆ ಅಲ್ಲವೆ ನಡೆದಿದ್ದು ಈಗ ಮತ್ತೊಮ್ಮೆ ಅದೆ ಪುನರಾವರ್ತನೆಗೊಳ್ಳುತ್ತದೆಯೆ ಎಂಬ ಭಯ ಕಾಡಿದರೆ ಆಶ್ಚರ್ಯವಿಲ್ಲ. ಅರಬ್ ದೇಶಗಳಲ್ಲಿ ಕ್ರೈಸ್ತ ಮಿಷಿ-ನರಿಗಳು ಯಾಕೆ ಕೆಮ್ಮೊಕ್ಕೆ ಆಗೊಲ್ಲ ಅಂದ್ರೆ ಮತಾಂತರದಂತಹ ಚಿಲ್ಲರೆ ಕೆಲಸ ಮಾಡಿದರೆ ನಡು ರಸ್ತೆಯಲ್ಲಿ ಕಲ್ಲು ಹೊಡೆದು ಸಾಯಿಸುತ್ತಾರೆ. ಇಲ್ಲಿ ಹಾಗಿಲ್ಲವಲ್ಲ ಅದಕ್ಕೆ ರಾಜಾ ರೋಷವಾಗಿ ತಮ್ಮ ಕಾರ್ಯನಡೆಸುತ್ತಿದ್ದಾರೆ.

ಮುಸ್ಲಿಮ್ ಅಥವ ಕ್ರೈಸ್ತರು ಎಂದರೆ ಈ ಧರ್ಮಗಳ ಸಂಬಂಧಪಟ್ಟ ಎಲ್ಲರು ಅಲ್ಲ, ಕೇವಲ ಕಿತಾಪತಿಗಳಲ್ಲಿ ತೊಡಗಿರುವವರ ಮಾತ್ರ ಅನ್ವಯಿಸುತ್ತದೆ.ಏನ್ ಮಾಡ್ತೀರಾ? ಎಲ್ಲ ಭಯೊತ್ಪಾದಕರು ಮುಸ್ಲಿಂಗಳೆ ಆದ್ರೆ ಎಲ್ಲಾ ಮುಸ್ಲಿಂಗಳು ಭಯೊತ್ಪಾದಕರಲ್ವಲ್ಲ ಹಾಗೆ ಸಮಾಚಾರ.
ಮೊನ್ನೆ ತಾನೆ ಇಂಡಿಯಾ ಟುಡೆ ಕಾನ್‌ಕ್ಲೇವ್ ನಡೆಯಿತು,ಎಮ್.ಜೆ.ಅಕ್ಬರ್ ಹೆಸರಾಂತ ಜರ್ನಲಿಸ್ಟ್ (ಹಿಂದುಗಳನ್ನು ಜರೆಯೊ ಲಿಸ್ಟ್ ಅಲ್ಲಿ ಇವನು ಒಬ್ಬ) ಅವನ ವಾದದ ಪ್ರಕಾರ ಭಯೋತ್ಪಾದಕರು ಯಾವುದೆ ಧರ್ಮಕ್ಕೆ ಸೀಮಿತವಿಲ್ಲ, ಎಲ್ಲರೂ ಕೇವಲ ಮುಸ್ಲಿಂ ಭಯೋತ್ಪಾದಕರ ಬಗ್ಗೆ ಏಕೆ ಆಲೋಚಿಸುತ್ತೀರಾ?ಎಲ್.ಟಿ.ಟಿ.ಈ ನೋಡಿ ಅವರು ಹಿಂದುಗಳಲ್ಲವೆ ಹಾಗಾಗಿ ಹಿಂದು ಭಯೊತ್ಪಾದಕರಾಗಲಿಲ್ಲವೆ?ಅಸ್ಸಾಮ್,ನಾಗಾಲಾಂಡ್ ನಕ್ಸಲ್‌ಗಳನ್ನು ನೋಡಿ ಅವರೆಲ್ಲ ಕ್ರೈಸ್ತ ಸಮುದಾಯಕ್ಕೆ ಸೇರಿದ ಭಯೋತ್ಪಾದಕರಲ್ಲವೆ, ಅವರಲ್ಲಿ ಬೌದ್ಧರು ಇದ್ದಾರೆ ಹಾಗಾಗಿ ಬೌದ್ಧ ಭಯೊತ್ಪಾದಕರು ಇದ್ದಂತಾಗಲಿಲ್ಲವೆ ಹಾಗಾಗಿ ನಾವು ಭಯೊತ್ಪಾದಕರು ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಆಲೋಚನೆ ಬಿಡಬೇಕು ಅಂದಾಗ ಕರತಾಡನ ಸುರಿಮಳೆಯಾಯಿತು ನನಗೆ ಕೆರದಿಂದ ತಾಡನ ಮಾಡುವ ಹಾಗೆ ಅನಿಸಿತು. ಅವರುಗಳು ಇಂತಹ ಕೂಟ ಏರ್ಪಡಿಸುವುದು ತಮ್ಮ ಸೆಕ್ಯುಲರ್ ಆಲೋಚನೆಗಳನ್ನು ಸಮರ್ಥಿಸುವುದ್ದಕ್ಕೋಸಕರ ಅಷ್ಟೆ ವಿಚಾರ ವಿನಿಮಯಕ್ಕಾಗಲಿ ಅಥವ ವಸ್ತು ಸ್ಥಿತಿಯ ಬಗ್ಗೆ ಚಿಂತನೆ ನಡೆಸುವುದ್ದಕ್ಕಾಗಲಿ ಅಲ್ಲ.

ಎಲ್.ಟಿ.ಟಿ.ಈ ಹಿಂದು ಭಯೋತ್ಪಾದಕರು ಅಂದ್ರೆ ಅವರ ಉದ್ದೇಶ ಹಿಂದುತ್ವವನ್ನು ಶ್ರೀಲಂಕಾದಲ್ಲಿ ಸ್ಥಾಪಿಸುವುದೆ?ಅವರ ಕ್ಷುಲ್ಲಕ ಕಾರಣಗಳಿಗೆ ಬಂದೂಕು ಹಿಡಿದರೆ ಅವರು ಬೌದ್ಧ ಭಯೋತ್ಪಾದಕರಾಗುತ್ತಾರೆಯೆ? ಇಲ್ಲಿ ಮುಸ್ಲಿಂ ಭಯೋತ್ಪಾದಕ ವಿಚಾರವನ್ನು ವಿಷಯಾಂತರ ಮಾಡಿ ಅದನ್ನು ತಿಳಿಗೊಳಿಸಿ ಅದೇನು ದೊಡ್ಡ ವಿಚಾರವಲ್ಲ ಎನ್ನುವುದನ್ನು ಬಿಂಬಿಸುವುದಕ್ಕೆ ಇಷ್ಟೆಲ್ಲಾ ಹುನ್ನಾರ.ಮುಸ್ಲಿಂ ಭಯೋತ್ಪಾದಕನ ಏಕೈಕ ಉದ್ದೇಶ ಇಸ್ಲಾಮ್ ಧರ್ಮವನ್ನು ಸ್ಥಾಪಿಸುವುದು.ಕಾಫಿರರನ್ನು(ಅಲ್ಲಾನನ್ನು ನಂಬದೆ/ಪೂಜಿಸದೆಯಿರುವವರು ನಾವಾದ್ರು ಅಗಬಹುದು ಮುಸ್ಲಿಂ ಆದ್ರು ಆಗಬಹುದು)ಸಾಯಿಸುವುದು,ಶರಿಯತ್ ಕಾನೂನು ಜಾರಿಗೆ ತರುವುದು ನಂತರದ ವಿಚಾರವಾಗುತ್ತದೆ.
ಇಂತಹ ವಿಚಾರಗಳು ನಮ್ಮ ನಿಮ್ಮ ಸ್ನೇಹಿತ ವರ್ಗದಲ್ಲಿ ಇರುತ್ತಾರೆ ಅಂತ ಹೇಳುತ್ತಿಲ್ಲಾ ನೀವು ಹಾಗೆ ತಪ್ಪಾರ್ಥವನ್ನು ಸಹ ಕಲ್ಪಿಸಿಕೊಳ್ಳಬೇಡಿ ಆದ್ರೆ, ಬೆಂಗಳೂರಿನಲ್ಲಿ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದ ಭಯೋತ್ಪಾದಕರನ್ನು ಸಹ ನಾವು ಮರೆಯಬಾರದಲ್ಲವೆ?ಗ್ಲಾಸ್‌ಗೊ ಭಯೊತ್ಪಾದಕ ದಾಳಿಯಲ್ಲಿ ವೈದ್ಯನೊಬ್ಬ ಶಾಮೀಲಾಗಿದ್ದನಲ್ಲವೆ?LeT/Al-Qeda on a hiring spree,freshers welcome ಅನ್ನೊ ಜಾಹಿರಾತು ಕಾಣಿಸಿಕೊಳ್ಳುವುದು ಬಾಕಿಯಿದೆ.

’ಮ’ಕಾರದಲ್ಲಿ ಮೊದಲಿಗೆ ಮುಲ್ಲಾ/ಮೌಲ್ವಿಯ ಬಗ್ಗೆ ತಿಳಿಯಬೇಕೆಂದರೆ ಇವರುಗಳೆ ಸಮುದಾಯದ ನಿಯಂತ್ರಣಕಾರರು.ಫಾತ್ವ ಹೊರಡಿಸುವುದರ ಮೂಲಕ ಸಮುದಾಯ ಯಾರಿಗೆ ವೋಟ್ ಮಾಡ್ಬೇಕು,ಯಾರ ನಡತೆ ಹೇಗಿರಬೇಕು ಎನ್ನುವುದನ್ನು ರೂಪಿಸುವುದು ಸಹ ಇವರ ಒಂದು ಕಾರ್ಯ.ಆಶ್ಚರ್ಯಕರವೆಂದರೆ UPAಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರವನ್ನು ಸಹ ಕೊಟ್ಟಿದೆ ಮೌಲ್ವಿಗಳ ಫಾತ್ವ ಭಾರತದ ಕಾನೂನುಗಳ ಉಲ್ಲಂಘನೆ ಮಾಡುವುದಿಲ್ಲ ಎಂದು. ಇದನ್ನ ಕೋರ್ಟ್ ನಂಬಿರುವುದು ಸಹ ಅಷ್ಟೆ ಆಶ್ಚರ್ಯಕರ.
ಉದಾಹರಣೆಗೆ ಕೇರಳದಲ್ಲಿ ೧೨ MLAಗಳು ಅಲ್ಲಾನ ಹೆಸರನ್ನು ಹೇಳಿಕೊಂಡು ಪ್ರಮಾಣ ವಚನ ಸ್ವೀಕರಿಸಿದರು.ಯಾರೊ ಒಬ್ಬ ವ್ಯಕ್ತಿ ಇದು ಸಂವಿಧಾನದ ವಿರುದ್ಧವಾದ ನೀತಿ ಎಂದು PILಹಾಕಿದರೆ ಕೇರಳ ಹೈ ಕೋರ್ಟ್ ಅದನ್ನು ತಿರಸ್ಕರಿಸಿತು.ಅವನು ಛಲ ಬಿಡದೆ ಸುಪ್ರೀಂ ಕೋರ್ಟ್ ಬಾಗಿಲು ಬಡಿದ ಅಲ್ಲಿಯು ಸಹ ಇದೆ ವಾದ,ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು ಒಂದೆ ಅಲ್ಲಾನ ಹೆಸರಿನಲ್ಲಿ ಸ್ವೀಕರಿಸುವುದು ಒಂದೆ ಎಂದು ತೀರ್ಪಿಟ್ಟಿತು.ಆದ್ರೆ ಬಹುಪಾಲು ಮುಲ್ಲಾ ಹಾಗು ಮೌಲ್ವಿಗಳು "ದೇವರು" ಅನ್ನುವುದು ಏನಿಲ್ಲ "ಅಲ್ಲಾ"ನೆ ಎಲ್ಲಾ ಎಂಬ ಹೇಳಿಕೆ ನೀಡಿದಾರೆ.ಇದರ ಅರ್ಥ ಕೆಲವು ಮೌಲ್ವಿಗಳೆ ದೇವರು ಅಂದ್ರೆ ಅಲ್ಲಾ ಅಲ್ಲ ಎನ್ನುತ್ತಿರಬೇಕಾದರೆ ನಮ್ಮ ಸುಪ್ರೀಂ ಕೋರ್ಟ್ ಎರಡು ಒಂದೆ ಎಂದು ಯಾರಿಗೆ ಸಮರ್ಥನೆ ನೀಡುತ್ತಿದೆ ಎಂದು ಅರ್ಥವಾಗದ ವಿಚಾರ.
ಮುಲ್ಲಾ ಹಾಗು ಮೌಲ್ವಿಗಳ ಉದ್ದೇಶ ಸಮುದಾಯವನ್ನು ಆದಷ್ಟು ಹಿಂದೆಯಿಡುವುದು,ಮುಂದೆ ಬರಲಿಕ್ಕೆ ಬಿಟ್ಟರೆ ಎಲ್ಲಿ ಪ್ರಶ್ನೆಗಳೇಳುತ್ತವೆಯೊ ಎಂಬ ಭಯ.ಏಕೆಂದರೆ ಇವರ ಧರ್ಮದಲ್ಲಿ ಪ್ರಶ್ನೆ ಮಾಡುವ ಹಕ್ಕು ಯಾರಿಗು ಇಲ್ಲ, ಪ್ರಶ್ನೆ ಕೇಳಿದರೆ ಅವನು ಮುಸ್ಲಿಂ ಅಲ್ಲವೆ ಅಲ್ಲ. ಈ ರೀತಿಯಾದ ವಿಚಾರವನ್ನು ಪ್ರತಿಪಾದಿಸುತ್ತದೆ ಧರ್ಮ.ತಮ್ಮ ಧರ್ಮಕ್ಕೆ ಆಪತ್ತು ಬಂದಿದೆ ಎಲ್ಲರು ಒಗ್ಗೂಡಬೇಕು, ಒಬ್ಬೊಬರೆ ತೀರ್ಮಾನ ತೆಗೆದುಕೊಂಡು ಏನು ಕೆಲಸ ಮಾಡಬೇಡಿರಿ ಎಂದು ಭಯ ಹುಟ್ಟಿಸಿ ತಮ್ಮ ನಿಯಂತ್ರಣದಲ್ಲಿಸಿಕೊಳ್ಳುತ್ತಾರೆ.ಈ ಕುಹಕವನ್ನೆಲ್ಲಾ ಅರಿಯುವ ಮುಸ್ಲಿಂರ ಖಾಂಂಈ ಜನರ ಸಂಖ್ಯೆ ಗಣನೆಗೆ ತೆಗೆದು ಕೊಳ್ಳುವ ಹಾಗಿಲ್ಲ ಹಾಗಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದ್ದರು ಸಹ ಏನೂ ಮಾಡಲಾಗದೆ ಕೈ ಚೆಲ್ಲಿ ಕುಳಿತಿರುತ್ತಾರೆ.

’ಮ’ಕಾರದಲ್ಲಿ ಎರಡನೆಯದಾಗಿ ಮಿಷಿನರಿಗಳು,ಇವರುಗಳ ಕಾರ್ಯ ವೈಖರಿಯಲ್ಲೆ ಬೇಧವಿದೆ ಕೆಲವು ವರ್ಷಗಳ ಹಿಂದೆ ಮತಾಂತರಗೊಂಡ ಕುಟುಂಬಗಳು ಅತ್ಯಂತ ಹುರುಪಿನಿಂದ "ಸೇವೆ"ಸಲ್ಲಿಸಿದರೆ ತಮ್ಮ ಪಾಡಿಗೆ ತಾವಿದ್ದು ಧರ್ಮ ಪಾಲಿಸಿ ಸಮಾಜದಲ್ಲಿ ಹೊಂದಿಕೊಂಡು ಬದುಕುವ ಕ್ರೈಸ್ತ ಕುಟುಂಗಳೊಂದಿಗೆ ಹೋಲಿಸಿ ಅಪಾರ್ಥ ಮಾಡಿಕೊಳ್ಳಬೇಡಿ. ಜಗತ್ತಿನಲ್ಲಿ ಅತ್ಯಂತ ದೊಡ್ಡ ವ್ಯವಹಾರ ಮತ ಪ್ರಚಾರ ಮಾಡುವುದು,ಈ ಕೆಲಸಕ್ಕೆ ಜಗತ್ತಿನ ಎಲ್ಲಾ ಮೂಲಗಳಿಂದ ಹಣ ಬರುವುದು ಅಚ್ಚರಿಯಲ್ಲ.ಜಾಗತೀಕರಣದಿಂದ ಸಣ್ಣ ಪುಟ್ಟ ಕಾರ್ಖಾನೆಗಳೆಲ್ಲ ಮಣ್ಣು ತಿನ್ನಬೇಕಾಯಿತು ಏಕೆಂದರೆ ಎಲ್ಲರು ಅಲ್ಲೆ ಖರೀದಿಸತೊಡಗಿದರು, ವಾಲ್‌ಮಾರ್ಟ್ ಬಂದರೆ ತಳ್ಳುವ ಗಾಡಿಯಲ್ಲಿ ತರಕಾರಿ ಯಾರು ಕೊಳ್ಳುತ್ತಾರೆ? ಎಲ್ಲರು ವಾಲ್‌ಮಾರ್ಟ್‌ಗೆ ಓಡುತ್ತಾರೆ, ತಳ್ಳುಗಾಡಿಯವನು ಹೊಟ್ಟೆಗೆ ಬೇರೆ ಮಾರ್ಗ ನೋಡಿಕೊಳ್ಳಬೇಕು ಇಲ್ಲವಾದರೆ ನೇಣಿಗೆ ಶರಣಾಗಬೇಕು. ಹಾಗೆಯೆ ಹೊರಗಿನಿಂದ ಬೆಂಬಲಿತ "ನರಿ"ಗಳು ಬಂದು ಆಮಿಷವೊಡ್ಡಿ ಸ್ಥಳೀಯ ಆಚರಣೆಗೆ ಬೆಂಕಿಯಿಟ್ಟು "kingdom of christ"ಸ್ಥಾಪಿಸಿ ಜಾಗ ಖಾಲಿ ಮಾಡುವ ಹೊತ್ತಿಗೆ ಮೂಲ ಆಚರಣೆ/ಧರ್ಮಕ್ಕೆ ಕೊಳ್ಳಿಯಿಟ್ಟಾಗಿರುತ್ತದೆ.ಒರ್ರಿಸ್ಸಾದಲ್ಲಿ ೮೪-ವರ್ಷದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿಯವರನ್ನೆ ಹತ್ಯೆಗೈಸಿದರಲ್ಲ? ಇವರು ಮಾಡಿದ ತಪ್ಪು ಮತಾಂತರಗೊಂಡ ಹಿಂದುಗಳನ್ನು/ದಲಿತರನ್ನು ಮತ್ತೆ ಹಿಂದುತ್ವಕ್ಕೆ ತರುವ ಶುದ್ಧೀಕರಣ ಕಾರ್ಯ ಮಾಡಿ ಸಫಲರಾಗಿದ್ದರು.ಇವರು ಇದ್ದರೆ ತಮ್ಮ ಬೇಳೆ ಬೇಯುವುದಿಲ್ಲವೆಂದು ಅವರಿಗೆ ಕೊಲೆ ಮಾಡಿಸಿದರು.
"ಸತ್ಯದರ್ಶಿನಿ"ಯಂತಹ ಸತ್ಯ ಕಥೆಯನ್ನೆ ಬಿಂಬಿಸಿದ ಭೂಪರಲ್ಲವೆ "ನರಿ"ಗಳು,ಕೃಷ್ಣನನ್ನು ೧೬೦೦೦ ಸ್ತ್ರೀಯರೊಂದಿಗೆ "ಸಹವಾಸ"ಮಾಡಿದ ಮನುಷ್ಯನನ್ನು ದೇವರು ಅಂತ ಹೇಗೆ ಒಪ್ಪಿಕೊಳ್ಳುತ್ತೀರಿ ಎಂಬುದನ್ನು ಸಹ ವಾದ ಮಾಡಿದರು.ಪಾಪ ವಿಷಯ ಅರಿಯದ ಮುಗ್ಧರು, ಹೌದಲ್ವ ಈ ಪ್ರಶ್ನೆ ನ್ಯಾಯ ಸಮ್ಮತವಾಗಿದೆ ಎಂದು ತಲೆಯಾಡಿಸಬಹುದು ಆದ್ರೆ ಅದು ಹಾಗಲ್ಲವಲ್ಲ..೧೬೦೦೦ ಸ್ತ್ರೀಯರು ಅವನನ್ನು ಮನಸ್ಸಿನಲ್ಲೆ ಆರಾಧಿಸುತ್ತಿದ್ದರು, ಅವನನ್ನೆ ಸರ್ವಸ್ವ ಎಂದು ಪರಿಗಣಿಸಿದ್ದರು.ಹಾಗೆಂದ ಮಾತ್ರಕ್ಕೆ ಅವನಿಗೆ ಅವರ ಜೊತೆಗೆಲ್ಲ ಸಂಬಂಧವಿತ್ತೆಂದು ಹೇಳಲಿಕ್ಕಗುತ್ತದೆಯೆ?ಇವರುಗಳು ಯಾರ ಹತ್ತಿರವು ಪ್ರಮಾಣ ಮಾಡಿರಲಿಲ್ಲ ಕೃಷ್ಣನೆ ನನ್ನ ಗಂಡನೆಂದು.ಈಗ ಪ್ರತಿ ಹೆಣ್ಣು ಸಹ ಕ್ರೈಸ್ತ ಧರ್ಮದಲ್ಲಿ "ನನ್" ಆಗಬೇಕೆಂದರೆ "ಏಸುವೆ ತನ್ನ ಗಂಡ"ನೆಂದು ಪ್ರಮಾಣ ಮಾಡಬೇಕು ಇದರ ಅರ್ಥವೇನು?? :-0 ಈ ಪ್ರಮಾಣದ ಪ್ರಕಾರ ಜೆಸಸ್‌ಗೆ ಕೋಟಿ ಕೋಟಿ ಹೆಂಡಿರು!!! ಕೃಷ್ಣ ನ ಲೆಖ್ಖ ೧೬,೦೦೦ಕ್ಕೆ ಮುಗಿದರೆ ಏಸುವಿನದ್ದು ನಿತ್ಯ ಏರುವ ಖಾತೆ. - ಇದು ಕೆಸರೆರಚುವ ಪ್ರಯತ್ನವಲ್ಲ ಆರೋಪವನ್ನು ಕೇಳಿ ಉದ್ಭವಸಿದ ಪ್ರಶ್ನೆ.
ಮುಗ್ಧರನ್ನು ಬುಟ್ಟಿಗೆ ಹಾಕಿ ದುಡ್ಡಿನಿಂದಲೊ ದರ್ಪದಿಂದಲೊ ಮತಾಂತರ ಮಾಡಿ ಕೊನೆಗೆ ಹಿಂದುಗಳು ಅನ್ನೊರು ಒಂದು ಕಾಡು ಜನಾಂಗದವರು ಕರ್ತೃವನ್ನು ಪೂಜಿಸದೆ ಕಲ್ಲುಗಳಿಗೆ ಹೂವ ಹಾರ ಹಾಕಿ ಅದನ್ನೆ ಪೂಜೆ ಅಂತ ಕರಿತಿದ್ರು ಅಂತ ಇತಿಹಾಸ ಸೃಷ್ಟಿಸೊಕ್ಕೆ ಹೊರಟಿರೋರ ಬಗ್ಗೆ ಎಚ್ಚರದಿಂದಿರದೆ ಅವರು ಎನಾದ್ರು ಮಾಡಿಕೊಳ್ಲಿ ನಮ್ಗೇನು ಅಂತ ಸುಮ್ನೆ ಕೂತ್ರೆ ಸರಿನಾ?

ಮುಂದುವರೆಯುವುದು.....

ನಾನು ಮುಂದಿಟ್ಟಿರುವ ವಿಚಾರಗಳು ಯಾರಿಗಾದರು ನೋವ್ವುಂಟು ಮಾಡಿದಲ್ಲಿ ಕ್ಷಮೆಯಾಚಿಸುತ್ತೇನೆ, ಆದರೆ ಸತ್ಯ ಯಾವಾಗಲು ಕಹಿಯಲ್ಲವೆ!!! ನನ್ನ ಮಾತುಗಳು ಸುಳ್ಳು ಎನ್ನುವುದಾದರೆ , ದಯವಿಟ್ಟು ಅದು ಸುಳ್ಳು ಎಂಬುದನ್ನು ರುಜುಮಾಡಲು ಆಧಾರಗಳನ್ನು ಕೊಟ್ಟು ಹೇಳಿ. ಇಲ್ಲವಾದರೆ ನಿಮ್ಮ ನಂಬಿಕೆಯೆ ಯಾವಾಗಲು ಸತ್ಯವಾಗೆ ಇರುತ್ತದೆ ಹಾಗೆಯೆ ಇರಲಿ,ಒಳ್ಳೆಯದು ನನಗೆ ಅಭ್ಯಂತರವಿಲ್ಲ. ತಪ್ಪಾದ ಮಹಿತಿಯನ್ನು ನಾನು ಹೇಳಿದ್ದರೆ ಅದನ್ನು ತೆಗೆದು ಹಾಕಲು ನಾನು ತಯಾರಿದ್ದೇನೆ.